Updated News From Kaup

ಉಡುಪಿಯಲ್ಲಿ ಹಿಂದೂ ಜನ ಸಂಘ ಉದ್ಘಾಟನೆ - nammakaup.in

Posted On: 16-03-2020 04:48PM

ಉಡುಪಿ: ಮಾರ್ಚ್ 15. ಉಡುಪಿಯ ಕಿನ್ನಿಮೂಲ್ಕಿ ವೀರಭದ್ರ ಕಲಾಭವನದಲ್ಲಿ ಸ್ವಾಭಿಮಾನಿ, ಸ್ವಾವಲಂಭಿ ಹಿಂದೂ ಸಮಾಜ ನಿರ್ಮಾಣದ ಕನಸಿನೊಂದಿಗೆ ನಾಡಿನ ಹಿರಿಯ ಹಿಂದೂ ಮುಖಂಡರ ಸಮ್ಮುಖದಲ್ಲಿ ಹಿಂದೂ ಜನಸಂಘ ಕರ್ನಾಟಕ ಘಟನೆಯ ಸ್ಥಾಪನೆ ಯಾಗೂ ಅಧಿಕೃತ ಉದ್ಘಾಟನಾ ಸಮಾರಂಭ ನಡೆಯಿತು. ಹಿಂದೂ ಸಮಾಜವನ್ನು ಸಶಕ್ತಶಾಲಿ, ಸದೃಢ ಸಮಾಜವನ್ನಾಗಿ ಮಾಡುವಲ್ಲಿ ಹಿಂದೂ ಸಂಘಟನೆಗಳ ಅಗತ್ಯವಿದೆ, ಈ ದೇಶದ ರಕ್ಷಣೆಗೆ ಹಿಂದೂ ಸಂಘಟನೆಗಳು ಸದಾ ಸಿದ್ದವಿದೆ ಎಂದು ಶ್ರೀರಾಮ ಸೇನೆಯ ರಾಜ್ಯ ಕಾರ್ಯಾಧ್ಯಕ್ಷರಾದ ಗಂಗಾಧರ ಕುಲಕರ್ಣಿ ಅವರು ತಮ್ಮ ಉದ್ಘಾಟಕರ ಮಾತಿನಲ್ಲಿ ನುಡಿದರು. ಕಾರ್ಯಕ್ರಮದ ಅಧ್ಯಕ್ಷರಾಗಿದ್ದ ಹಿಂದೂ ಜನಸಂಘದ ಸಂಸ್ಥಾಪಕಿಯಾದ ಶ್ರೀಮತಿ ಅಂಬಿಕಾ ಪ್ರಭು ಸಂಘಟನೆಯ ಧ್ಯೇಯೋದ್ದೇಶಗಳನ್ನು ತಿಳಿಸಿದರು. ಹಿಂದೂ ಮುಖಂಡರಾದ ಶ್ರೀರಾಮ ಸೇನೆಯ ರಾಜ್ಯ ಕಾರ್ಯದರ್ಶಿ ಆನಂದ್ ಶೆಟ್ಟಿ ಅಡ್ಯಾರ್, ಶ್ರೀರಾಮ ಸೇನೆಯ ಜಿಲ್ಲಾದ್ಯಕ್ಷರಾದ ಜಯರಾಮ ಅಂಬೆಕಲ್ಲು, ಹಿಂದೂ ಜನಜಾಗೃತಿಯ ವಿಜಯಕುಮಾರ್ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾಧ್ಯಕ್ಷರಾಗಿ ಪ್ರದೀಪ್ ಬೇಲಾಡಿ ಅವರು ಆಯ್ಕೆಯಾದರು. ಬೆಳಗಾವಿ ಜಿಲ್ಲಾ ಪ್ರಮುಖರಾಗಿ ವೀರೇಶ್ ಹಡಪದ್ ಆಯ್ಕೆಯಾದರು. ಉಪಾಧ್ಯಕ್ಷರುಗಳಾಗಿ ನಿತಿನ್ ಬೆಳುವಾಯಿ, ವಿನೋದ್ ಕರ್ಕೇರ, ಜಿಲ್ಲಾ ಕಾರ್ಯದರ್ಶಿಯಾಗಿ ಶರತರಾಜ್ ಉಡುಪಿ, ಕೋಶಾಧಿಕಾರಿಯಾಗಿ ಸಂಪತ್ SJ, ಹಾಗೂ ಇತರ ಜಿಲ್ಲಾ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಡಿ. ರಾಧಾಕೃಷ್ಣ ಶೆಟ್ಟಿ, ಮಧುಕರ ಮುದ್ರಾಡಿ, ವಿಕ್ರಮ್ ಬಾಳಿಗ, ಸುಶಾಂತ್ ಅಮೀನ್ ಉಪಸ್ಥಿತರಿದ್ದರು. ಪ್ರದೀಪ್ ಬೇಲಾಡಿ ಪ್ರಸ್ತಾವನೆಗೈದು, ಶರತರಾಜ್ ಧನ್ಯವಾದ ಸಲ್ಲಿಸಿದರು. ರಾಮಾಂಜಿ ಕಾರ್ಯಕ್ರಮ ನಿರೂಪಿಸಿದರು.

ಸಕಲಕಲೆಗಳ ಅಂಬಾರಿ ಪೃಥ್ವಿ ಅಂಬಾರ್

Posted On: 14-03-2020 05:23PM

ಈ ಕಲಾವಿದನ ಬಗ್ಗೆ ನಾವೇನೂ ಹೇಳ್ಬೇಕಂತಾನೇ ಇಲ್ಲ, ಯಾಕಂದ್ರೆ ಈತ ತನ್ನಲ್ಲಿರುವ ಕಲೆಯಿಂದ ಈಗಾಗಲೇ ತನ್ನನ್ನು ತಾನು ಗುರುತಿಸಿಕೊಂಡಿದ್ದಾನೆ.. ಈ ಅದ್ಭುತ ಕಲಾವಿದ ನಮ್ಮ ಕಾಪುವಿನವರು ಅನ್ನೋದೆ ನಮ್ಮ ಹೆಮ್ಮೆ . ಹೌದು, ಕಾಪುವಿನ ಮಜೂರಿನವರು ಈ ಸಕಲಕಲಾವಲ್ಲಭ. ಇವರ ಫೋಟೋ / ವೀಡಿಯೋ ನೋಡಿದ ತಕ್ಷಣ ಹೆಚ್ಚಿನವರು ಗುರುತಿಸೋದು ಇದು ಪೃಥ್ವಿ ಅಂಭಾರ್ ಅಂತ. ಆದರೆ ನಾವು ಗುರುತಿಸೋದು ಉಂದು ನಮ್ಮ ಊರುದ ಜವನೆ ನಾಗರಾಜ್ ಅಂಬೇರ್ ಅಂತ. ಇವರು ಮೊದಲು ಗುರುತಿಸಿಕೊಂಡಿದ್ದು ಈ ಟೀವಿಯ ದಿ ಗ್ರೇಟ್ ಕರ್ನಾಟಕ ಡಾನ್ಸ್ ಲೀಗ್ ರಿಯಾಲಿಟಿ ಶೋನಲ್ಲಿ.. ನಂತರ ಸೈ ಅನ್ನೋ ಡಾನ್ಸ್ ಶೋನಲ್ಲಿ . ಕೇವಲ ಡಾನ್ಸ್'ಗೆ ಮಾತ್ರ ಸೀಮಿತವಾಗಿರದೆ ಕಲೆಯ ಇನ್ನಿತರ ಪ್ರಕಾರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಮಲ್ಟಿ ಟ್ಯಾಲೆಂಟೆಡ್ ಎಂದು ಗುರುತಿಸಿಕೊಂಡರು. ಮುಂದಿನ ದಿನಗಳಲ್ಲಿ ಮಂಗಳೂರಿನ ರೆಡ್ ಎಫ್.ಎಮ್'ನಲ್ಲಿ RJ / ರೇಡಿಯೋ ಜಾಕಿಯಾಗಿ ಗಮನ ಸೆಳೆದರು , ಆಲ್ಬಂ ಸಾಂಗ್ಸ್ , ಶಾರ್ಟ್ ಫಿಲ್ಮ್ಸ್ ,ಸೀರಿಯಲ್'ಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು, ಹಾಡುವ,ಕುಣಿಯುವ,ಬರೆಯುವ,ನಟಿಸುವ ಈ ಕಲಾವಿದನಿಗೆ ನಿರ್ದೇಶಕನಾಗೋದು ಕೂಡ ದೊಡ್ಡ ಕನಸು. ಕಲಾ ಪಯಣದಲ್ಲಿ ಏಳು ಬೀಳುಗಳನ್ನು ಕಂಡ ಪೃಥ್ವಿ, ತುಳು ಚಿತ್ರರಂಗದಲ್ಲಿ ಹೀರೋ ಎಂದರೆ ಪೃಥ್ವಿ ಎಂಬ ಮಟ್ಟಿಗೆ ಬೆಳೆದಿರುವುದು ನಿಮಗೆಲ್ಲಾ ಗೊತ್ತೇ ಇದೆ. ಕನ್ನಡ ಕಿರುತೆರೆಯಲ್ಲಿ ಜನಪ್ರಿಯ ದಾರಾವಾಹಿ ಜೊತೆ ಜೊತೆಯಲಿಯಲ್ಲಿ ನೀಲ್ ಪಾತ್ರದಲ್ಲಿ ಕಾಣಿಸಿಕೊಂಡು ಮನೆಮಾತಾಗಿದ್ದಾರೆ. ಇದೀಗ ಪೃಥ್ವಿಗೆ ಅತಿದೊಡ್ಡ ಬ್ರೇಕ್ ನೀಡಿದ ದಿಯಾ ಸಿನಿಮಾದ್ದೇ ಸುದ್ದಿ.. ದಿಯಾ ಚಿತ್ರದಲ್ಲಿ ಪೃಥ್ವಿಯದ್ದು ಆದಿ ಅನ್ನೋ ಪಾತ್ರ. ಈ ಪಾತ್ರದಲ್ಲಿ ಆದಿ ಒಬ್ಬ ಸದಾಲವಲವಿಕೆಯಲ್ಲಿರೋ ಯುವಕ ಹಾಗೂ ಅಮ್ಮನ ಮುದ್ದಿನ ಮಗ. ಈ ಚಿತ್ರದಲ್ಲಿ ಜಾಸ್ತಿ ಏನೂ ಸ್ಟಾರ್ ಕಾಸ್ಟ್ ಆಗ್ಲಿ - ಕಲಾವಿದರಾಗ್ಲಿ ಇಲ್ಲ. ಚಿತ್ರದುದ್ದಕ್ಕೂ ಪ್ರಮುಖವಾಗಿ ನಾಲ್ಕು ಪಾತ್ರಗಳು ಹೀರೋಯಿನ್ ದಿಯಾ, ನಾಗಿಣಿ ಸೀರಿಯಲ್ಲಿನಲ್ಲಿ ನಾಯಕ ನಟನಾಗಿದ್ದ ದಿಶಾಂತ್ / ಅರ್ಜುನ್ , ಆದಿ/ ಪೃಥ್ವಿ ಹಾಗೂ ಪೃಥ್ವಿ ತಾಯಿ. ಅದರಲ್ಲೂ ಹೈಲೈಟ್ ಆಗೋದು ನಮ್ಮ ಆದಿಯ ಪಾತ್ರ. ಈ ಪಾತ್ರ ನಗಿಸುತ್ತದೆ - ಅಳಿಸುತ್ತದೆ-ಪ್ರೀತಿಸುತ್ತದೆ. ಈ ಚಿತ್ರಕ್ಕೆ ಹಣ ಎಷ್ಟು ಖರ್ಚು ಮಾಡಿದ್ದಾರೋ ಗೊತ್ತಿಲ್ಲ.. ಆದ್ರೆ ಬುದ್ಧಿ ಮಾತ್ರ ಚೆನ್ನಾಗಿ ಖರ್ಚು ಮಾಡಿದ್ದಾರೆ. "ಕಾಸ್ ಏತ್ ಖರ್ಚಿ ಮಲ್ದೆರಾ ಗೊತ್ತುಜ್ಜಿ, ಆಂಡ ಮಂಡೆಖರ್ಚಿ ಎಡ್ಡೆ ಮಲ್ದೆರ್". ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿರೋದು ಈ ಹಿಂದೆ ಸಂಚಲನ ಮೂಡಿಸಿದ್ದ 6-5=2 ಚಿತ್ರದ ಡೈರೆಕ್ಟರ್ ಕೆ.ಎಸ್ ಅಶೋಕ್. ಥಿಯೇಟರ್'ಗಳಲ್ಲಿ ಕಾರಣಾಂತರಗಳಿಂದ ಸಿನೇಮಾ ಜಾಸ್ತಿ ದಿನ ಓಡಲಿಲ್ಲವಾದರೂನು, ಅಮೆಜಾನ್ ಪ್ರೈಮ್ ನಲ್ಲಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಏನೇ ಆಗಲಿ, ಪೃಥ್ವಿ ಪಾಲಿಗೆ ದಿಯಾ ಬೆಳಕಾಗಿದ್ದು ಮಾತ್ರ ಸುಳ್ಳಲ್ಲ.. ಮುಂದಿನ ದಿನಗಳಲ್ಲಿ ಇನ್ನಷ್ಟು ಕಲಾಸೇವೆ ಮಾಡುವಂತೆ ಕಾಪು ಮಾರಿಯಮ್ಮ ಹಾಗೂ ಕಾಪು ಸಾವಿರ ಸೀಮೆಯ ಒಡೆಯ ಲಕ್ಷ್ಮೀ ಜನಾರ್ಧನ ಸ್ವಾಮಿಯು ಅನುಗ್ರಹಿಸಲಿ ಎಂದು ಕಾಪು ಜನತೆಯ ಪರವಾಗಿ ಹಾರೈಸುತ್ತೇವೆ. ✍

ಪಡುಬೆಳ್ಳೆ ಜುಮಾದಿ ದೈವಸ್ಥಾನ ಗಡು ನೇಮೋತ್ಸವ - ತುಳು ಭಾಷೆಯಲ್ಲಿ ಕರೆಯೋಲೆ

Posted On: 14-03-2020 09:59AM

ಶ್ರೀ ಜುಮಾದಿ ದೈವಸ್ಥಾನ ಪಡುಬೆಳ್ಳೆ, ಕಾಪು ತಾಲೂಕು ಮುಲ್ಪದ ನಾಲ್ ವರ್ಸೊಗೋರ ನಡಪುನ ಗಡು ನೇಮೋಚ್ಛಯಗ್ ಮೋಕೆದ ಲೆಪ್ಪೋಲೆ ತುಳುನಾಡ್'ದ ನಾಗ ನಡೆತ ಪಂಚವರ್ಣದ ಪುಣ್ಯ ಮಣ್ಣ್'ಡ್ ಸಾರಮಾನ್ಯ ದೈವೊಲು ತನಕ್ಲೆನ ಕಲೆ ಕಾರ್ಣಿಕದ ಗೊಂತುಡು ಹಲವಾರು ಕ್ಷೇತ್ರಲೊನ್ ನಿರ್ಣಯ ಮಲ್ತೊಂದು ಮೆರೆಪಿನವು ನಮ್ಮ ತುಳುನಾಡ್'ದ ಮಹಿಮೆ.. ಈ ಪ್ರಕಾರದ ಕಲೆ ಕಾರ್ಣಿಕ ದಿಂಜಿನ ದೈವ ಜುಮಾದಿನ ರಾಪುದ ಮಣ್ಣ್ ಬೆಳ್ಳೆ ಶ್ರೀ ಜುಮಾದಿ ದೈವಸ್ಥಾನ... ಮುಲ್ಪ ಉಂದುವೇ ಸುಗ್ಗಿ ತಿಂಗೊಲ್ ದ ಪದಿನೆನ್ಮ ಪೋಪುನ ಬುದವಾರ ತೇದಿ 01/04/2020ದಾನಿ ನಡಪೆರೆ ಉಂಡು ಈ ಪುಣ್ಯ ಕಾರ್ಯಡ್ ಊರ ಪರವೂರ ಸಮಸ್ತ ಭಕ್ತರೆ ಪಾಲ್ ಪಡೆದ್ ಧರ್ಮದೈವ ಶ್ರೀಜುಮಾದಿ, ಜುಮಾದಿ ಬಂಟನ ಸಿರಿಮುಡಿ ಗಂಧ ಪ್ರಸಾದ ಪಡೆಯೊಡು ಪಂದ್ ಕೇನೊನುವ ನಮ್ಮ ಕಾಪು

ರಾಜ್ಯಾದ್ಯಂತ ನಾಳೆಯಿಂದ ಪ್ರಾಥಮಿಕ ಶಾಲೆಗಳಿಗೆ ಬೇಸಿಗೆ ರಜೆ ಆರಂಭ

Posted On: 14-03-2020 01:45AM

ಕೊರೊನಾ ವೈರಸ್ ಹರಡುವಿಕೆಯನ್ನು ತಡೆಯುವ ಮುಂಜಾಗೂರಕತಾ ಕ್ರಮವಾಗಿ ರಾಜ್ಯಾದ್ಯಂತ ಇರುವ ಎಲ್ಲಾ ಪ್ರಾಥಮಿಕ ಶಾಲೆಗಳಿಗೆ ಮಾರ್ಚ್ 14ರ ಶನಿವಾರದಿಂದಲೇ ಬೇಸಿಗೆ ರಜೆಯನ್ನು ನೀಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಇಂದು ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ. ಈ ಆದೇಶ ಮತ್ತು ಅದರಲ್ಲಿರುವ ಎಲ್ಲಾ ಸೂಚನೆಗಳು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಪಠ್ಯಕ್ರಮ/CBSC/ICSC/IGCSC/IB ಮುಂತಾದ ಪಠ್ಯಕ್ರಮದ ಎಲ್ಲಾ ಶಾಲೆಗಳಿಗೂ ಅನ್ವಯವಾಗುತ್ತದೆ. 1 ರಿಂದ 6ನೇ ತರಗತಿಯವರೆಗೆ ಎಲ್ಲಾ ಶಾಲೆಗಳಿಗೆ ದಿನಾಂಕ 14.03.2020ರಿಂದ ಜಾರಿಗೆ ಬರುವಂತೆ ತರಗತಿಗಳನ್ನು ಸ್ಥಗಿತಗೊಳಿಸುವುದು ಹಾಗೂ ಒಂದು ವೇಳೆ ಪರೀಕ್ಷೆಗಳು ನಡೆಯುತ್ತಿದ್ದಲ್ಲಿ ಅವುಗಳನ್ನು ಸಹ ಸ್ಥಗಿತಗೊಳಿಸಿ ಬೇಸಿಗೆ ರಜೆಯನ್ನು ಘೋಷಿಸಬೇಕು ಎಂದು ಶಿಕ್ಷಣ ಇಲಾಖೆ ಆಯುಕ್ತರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ಇನ್ನು 7 ರಿಂದ 9ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ 14.03.2020ರಿಂದ ಜಾರಿಗೆ ಬರುವಂತೆ ತರಗತಿಗಳನ್ನು ಪರೀಕ್ಷಾ ಪೂರ್ವ ಸಿದ್ಧತಾ ರಜೆಯ (ಸ್ಟಡೀ ಲೀವ್) ಮಾದರಿಯಲ್ಲಿ ಸ್ಥಗಿತಗೊಳಿಸಿ ಪರೀಕ್ಷಾ ದಿನಗಳಂದು ಮಾತ್ರ ಹಾಜರಾಗಲು ಸೂಚಿಸುವಂತೆ ಆದೇಶದಲ್ಲಿ ತಿಳಿಸಿಲಾಗಿದೆ. ಮತ್ತು ಈ ಪರೀಕ್ಷೆಗಳನ್ನು ಮಾರ್ಚ್ 23ರ ಒಳಗೆ ಕಡ್ಡಾಯವಾಗಿ ಮುಗಿಸಿ ಬಳಿಕ ಬೇಸಿಗೆ ರಜೆಯನ್ನು ನೀಡುವಂತೆ ಸೂಚಿಸಲಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಪೂರ್ವನಿರ್ಧಾರಿತ ವೇಳಾಪಟ್ಟಿಯಂತೆ ನಡೆಯಲಿವೆ. ದ್ವಿತೀಯ ಪಿ.ಯು. ಪರೀಕ್ಷೆಗಳು ಈಗಾಗಲೇ ಪ್ರಾರಂಭವಾಗಿದ್ದು ನಿಗದಿಯಾಗಿರುವ ವೇಳಾಪಟ್ಟಿಯಂತೆ ನಡೆಯಲಿದೆ. 1 ರಿಂದ 6ನೇ ತರಗತಿ ವಿದ್ಯಾರ್ಥಿಗಳು 2019-20ನೇ ಸಾಲಿನಲ್ಲಿ ತಾವು FA1, FA2, FA3, FA4, SA1 ಮತ್ತು SA2 (ದಿನಾಂಕ 13.032020ರವರೆಗೆ ನಡೆದ ಪರೀಕ್ಷೆಗಳ ಆಧಾರದಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ವಿದ್ಯಾರ್ಥಿಗಳ ಶ್ರೇಣೀಕೃತ ಫಲಿತಾಂಶವನ್ನು ಪ್ರಕಟಿಸಿ ಮುಂದಿನ ತರಗತಿಗಳಿಗೆ ಬಡ್ತಿ ನೀಡಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ. ಬೇಸಿಗೆ ರಜೆಯ ನಂತರ 2020-21ನೇ ಶೈಕ್ಷಣಿಕ ಸಾಲಿನ ವೇಳಾಪಟ್ಟಿಯಂತೆ ಶಾಲೆಗಳು ಪುನರಾರಂಭಗೊಳ್ಳಲಿವೆ. ಪರೀಕ್ಷಾ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮಾಸ್ಕ್ ಧರಿಸಿ ಪರೀಕ್ಷೆ ಬರೆಯಲು ಅಪೇಕ್ಷಿಸಿದಲ್ಲಿ ಅದಕ್ಕೆ ಅವಕಾಶ ನೀಡುವಂತೆ ಆಯುಕ್ತರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ಮತ್ತು ಪರೀಕ್ಷೆಗಳ ಸಂದರ್ಭದಲ್ಲಿ ಮಕ್ಕಳ ಸುರಕ್ಷತೆಗೆ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಶಾಲಾ ಮುಖ್ಯಸ್ಥರಿಗೆ ಸೂಚನೆಯನ್ನು ನೀಡಲಾಗಿದೆ. ಕೃಪೆ : ಉದಯವಾಣಿ ಇ ಪೇಪರ್

ರಾಜ್ಯಾದ್ಯಂತ ನಾಳೆಯಿಂದ ಪ್ರಾಥಮಿಕ ಶಾಲೆಗಳಿಗೆ ಬೇಸಿಗೆ ರಜೆ ಆರಂಭ

Posted On: 14-03-2020 01:44AM

ಕೊರೊನಾ ವೈರಸ್ ಹರಡುವಿಕೆಯನ್ನು ತಡೆಯುವ ಮುಂಜಾಗೂರಕತಾ ಕ್ರಮವಾಗಿ ರಾಜ್ಯಾದ್ಯಂತ ಇರುವ ಎಲ್ಲಾ ಪ್ರಾಥಮಿಕ ಶಾಲೆಗಳಿಗೆ ಮಾರ್ಚ್ 14ರ ಶನಿವಾರದಿಂದಲೇ ಬೇಸಿಗೆ ರಜೆಯನ್ನು ನೀಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಇಂದು ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ. ಈ ಆದೇಶ ಮತ್ತು ಅದರಲ್ಲಿರುವ ಎಲ್ಲಾ ಸೂಚನೆಗಳು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಪಠ್ಯಕ್ರಮ/CBSC/ICSC/IGCSC/IB ಮುಂತಾದ ಪಠ್ಯಕ್ರಮದ ಎಲ್ಲಾ ಶಾಲೆಗಳಿಗೂ ಅನ್ವಯವಾಗುತ್ತದೆ. 1 ರಿಂದ 6ನೇ ತರಗತಿಯವರೆಗೆ ಎಲ್ಲಾ ಶಾಲೆಗಳಿಗೆ ದಿನಾಂಕ 14.03.2020ರಿಂದ ಜಾರಿಗೆ ಬರುವಂತೆ ತರಗತಿಗಳನ್ನು ಸ್ಥಗಿತಗೊಳಿಸುವುದು ಹಾಗೂ ಒಂದು ವೇಳೆ ಪರೀಕ್ಷೆಗಳು ನಡೆಯುತ್ತಿದ್ದಲ್ಲಿ ಅವುಗಳನ್ನು ಸಹ ಸ್ಥಗಿತಗೊಳಿಸಿ ಬೇಸಿಗೆ ರಜೆಯನ್ನು ಘೋಷಿಸಬೇಕು ಎಂದು ಶಿಕ್ಷಣ ಇಲಾಖೆ ಆಯುಕ್ತರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ಇನ್ನು 7 ರಿಂದ 9ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ 14.03.2020ರಿಂದ ಜಾರಿಗೆ ಬರುವಂತೆ ತರಗತಿಗಳನ್ನು ಪರೀಕ್ಷಾ ಪೂರ್ವ ಸಿದ್ಧತಾ ರಜೆಯ (ಸ್ಟಡೀ ಲೀವ್) ಮಾದರಿಯಲ್ಲಿ ಸ್ಥಗಿತಗೊಳಿಸಿ ಪರೀಕ್ಷಾ ದಿನಗಳಂದು ಮಾತ್ರ ಹಾಜರಾಗಲು ಸೂಚಿಸುವಂತೆ ಆದೇಶದಲ್ಲಿ ತಿಳಿಸಿಲಾಗಿದೆ. ಮತ್ತು ಈ ಪರೀಕ್ಷೆಗಳನ್ನು ಮಾರ್ಚ್ 23ರ ಒಳಗೆ ಕಡ್ಡಾಯವಾಗಿ ಮುಗಿಸಿ ಬಳಿಕ ಬೇಸಿಗೆ ರಜೆಯನ್ನು ನೀಡುವಂತೆ ಸೂಚಿಸಲಾಗಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಪೂರ್ವನಿರ್ಧಾರಿತ ವೇಳಾಪಟ್ಟಿಯಂತೆ ನಡೆಯಲಿವೆ. ದ್ವಿತೀಯ ಪಿ.ಯು. ಪರೀಕ್ಷೆಗಳು ಈಗಾಗಲೇ ಪ್ರಾರಂಭವಾಗಿದ್ದು ನಿಗದಿಯಾಗಿರುವ ವೇಳಾಪಟ್ಟಿಯಂತೆ ನಡೆಯಲಿದೆ. 1 ರಿಂದ 6ನೇ ತರಗತಿ ವಿದ್ಯಾರ್ಥಿಗಳು 2019-20ನೇ ಸಾಲಿನಲ್ಲಿ ತಾವು FA1, FA2, FA3, FA4, SA1 ಮತ್ತು SA2 (ದಿನಾಂಕ 13.032020ರವರೆಗೆ ನಡೆದ ಪರೀಕ್ಷೆಗಳ ಆಧಾರದಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ವಿದ್ಯಾರ್ಥಿಗಳ ಶ್ರೇಣೀಕೃತ ಫಲಿತಾಂಶವನ್ನು ಪ್ರಕಟಿಸಿ ಮುಂದಿನ ತರಗತಿಗಳಿಗೆ ಬಡ್ತಿ ನೀಡಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ. ಬೇಸಿಗೆ ರಜೆಯ ನಂತರ 2020-21ನೇ ಶೈಕ್ಷಣಿಕ ಸಾಲಿನ ವೇಳಾಪಟ್ಟಿಯಂತೆ ಶಾಲೆಗಳು ಪುನರಾರಂಭಗೊಳ್ಳಲಿವೆ. ಪರೀಕ್ಷಾ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮಾಸ್ಕ್ ಧರಿಸಿ ಪರೀಕ್ಷೆ ಬರೆಯಲು ಅಪೇಕ್ಷಿಸಿದಲ್ಲಿ ಅದಕ್ಕೆ ಅವಕಾಶ ನೀಡುವಂತೆ ಆಯುಕ್ತರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ಮತ್ತು ಪರೀಕ್ಷೆಗಳ ಸಂದರ್ಭದಲ್ಲಿ ಮಕ್ಕಳ ಸುರಕ್ಷತೆಗೆ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಶಾಲಾ ಮುಖ್ಯಸ್ಥರಿಗೆ ಸೂಚನೆಯನ್ನು ನೀಡಲಾಗಿದೆ.

ಹಿಂದೂ ಜನ ಸಂಘ ಕರ್ನಾಟಕದ ಉಡುಪಿ ಘಟಕ ಸ್ಥಾಪನೆ

Posted On: 13-03-2020 09:24PM

ದಿನಾಂಕ 15 ಮಾರ್ಚ್ ಭಾನುವಾರದಂದು ಸ್ಥಾಪನೆಗೊಳ್ಳಲಿರುವ ಹಿಂದೂ ಜನಸಂಘ ಕರ್ನಾಟಕ ಸಂಘಟನೆಯ ಉದ್ಘಾಟನಾ ಸಮಾರಂಭ ಹಾಗೂ ಸಂಘಟನೆಯ ರೂಪುರೇಷೆಯ ಬಗ್ಗೆ ಸಂಘಟನೆಯ ಪ್ರಮುಖರಾದ ಅಂಬಿಕಾ ಪ್ರಭು ಅವರು ಪತ್ರಿಕಾ ಮಾದ್ಯಮ ಹಾಗೂ ದೃಶ್ಯ ಮಾದ್ಯಮಗಳಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಶರತರಾಜ್ ಉಡುಪಿ, ಪ್ರದೀಪ್ ಬೇಲಾಡಿ, ಸಂಪತ್ SJ, ವಿನೋದ್ ಕರ್ಕೇರ, ರಾಮಾಂಜಿ ಉಪಸ್ಥಿತರಿದ್ದರು.

ತುಳು ಚಿತ್ರ ರಂಗಕ್ಕೊಂದು ಭರವಸೆಯ ಪ್ರತಿಭೆ - ಶ್ರುತಿ ಆರ್ ಪೂಜಾರಿ

Posted On: 10-03-2020 08:12PM

ಕೋಸ್ಟಲ್ ವುಡ್ ನ ಹೊಸ ಪ್ರತಿಭೆ : ಶ್ರುತಿ ಆರ್. ಪೂಜಾರಿ ಯಾವುದೇ ಕಲೆಯ ಬಗ್ಗೆ ಆಸಕ್ತಿಯಿದ್ದಾಗ ಅದನ್ನು ತಿಳಿಯಬೇಕು, ನಾನೂ ಹಾಗೆ ಆಗಬೇಕು, ಎನ್ನುವುದು ಮಾನವ ಸಹಜ ಗುಣ. ಆದರೆ ನಾನೂ ಅದರಲ್ಲಿ ತೊಡಗಬೇಕೆಂದರೆ ಅನುಭವದ ಪ್ರಶ್ನೆ ಕಾಡದಿರದು. ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲು ಹಿಂದೇಟು ಹಾಕುವುದನ್ನು ಪ್ರತಿ ರಂಗದಲ್ಲೂ ಕಾಣಸಿಗುತ್ತದೆ. ಕಿರುತೆರೆ, ಸಿನಿಮಾ ರಂಗದಲ್ಲಿ ರಂಗಭೂಮಿ, ನಟನೆ, ಮಾಡೆಲಿಂಗ್ ಕ್ಷೇತ್ರದ ಪರಿಚಯವಿದೆಯೇ ಎಂಬ ಪ್ರಶ್ನೆ ಮಾಮೂಲು. ಅಂತೆಯೇ ಮನದ ಮೂಲೆಯಲ್ಲಿದ್ದ ನಟಿಯಾಗಬೇಕೆಂಬ ಸಣ್ಣ ಕನಸು ಕೋಸ್ಟಲ್ ವುಡ್ನ 'ಎನ್ನ' ಎಂಬ ತುಳು ಚಿತ್ರದ ನಾಯಕಿಯಾಗಿ ಆಯ್ಕೆಯಾಗುವುದರೊಂದಿಗೆ ನನಸಾಗಿ ಜನರಿಂದ ಪ್ರಶಂಸೆಗೆ ಪಾತ್ರರಾದವರೇ ಶ್ರುತಿ ಆರ್. ಪೂಜಾರಿ. ಉಡುಪಿ ಜಿಲ್ಲೆಯ ಪಡುಬಿದ್ರಿ ಸಮೀಪದ ಅವರಾಲು ಮಟ್ಟು ಎಂಬ ಸಣ್ಣ ಗ್ರಾಮದ ರಮೇಶ್ ಪೂಜಾರಿ ಮತ್ತು ರೇವತಿ ಪೂಜಾರಿ ದಂಪತಿಗಳ ಪುತ್ರಿಯಾದ ಶ್ರುತಿಯವರು ಹುಟ್ಟೂರಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪೂರೈಸಿ, ಪದವಿ ಶಿಕ್ಷಣವನ್ನು ಮುಲ್ಕಿಯ ವಿಜಯ ಕಾಲೇಜಿನಲ್ಲಿ ಮುಗಿಸಿದರು. ತದನಂತರ ಬೆಂಗಳೂರಿನಲ್ಲಿ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭ ಬಿಡುವಿನ ವೇಳೆಯಲ್ಲಿ ತನ್ನದೇ ಫೋಟೋ ಶೂಟ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಾಕಿ ಆ ಮೂಲಕ ಎಲ್ಲರ ಗಮನ ಸೆಳೆದರು. ಇದೇ ಸಂದರ್ಭದಲ್ಲಿ ತನ್ನ ಹೊಸ ತುಳು ಚಿತ್ರದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಎನ್ನುವ ಹಂಬಲದಲ್ಲಿದ್ದ ನಿರ್ದೇಶಕ ವಿಶ್ವನಾಥ ಕೋಡಿಕಲ್ ರ 'ಎನ್ನ' ಚಿತ್ರದ ಅಡಿಷನ್ ನಡೆಯುತ್ತಿತ್ತು. ಅದರಲ್ಲಿ ಶ್ರುತಿಯವರು ಭಾಗವಹಿಸಿ ಕೊಟ್ಟ ಸಂಭಾಷಣೆಯನ್ನು ನಟನೆಯೊಂದಿಗೆ ಒಪ್ಪಿಸಿ ಚಿತ್ರದ ನಾಯಕಿಯಾಗಿ ಆಯ್ಕೆಯಾಗುತ್ತಾರೆ. ಅಲ್ಲಿ ಒಂದಷ್ಟು ಧೈರ್ಯ ಬಂದರೂ ನಟನೆ, ಸಂಭಾಷಣೆ, ಕ್ಯಾಮರ ಇದರ ಬಗೆಗೆ ಸರಿಯಾದ ಅನುಭವ ಇರದೆ ಭಯವಿತ್ತು. ಮುಂದೆ ಚಿತ್ರದ ಪೂರ್ವ ತಯಾರಿಯ ಹಂತದಲ್ಲಿ ಸಾಕಷ್ಟು ತರಬೇತಿ ಪಡೆದೆ ಜೊತೆಗೆ ಹೆಚ್ಚಿನವರು ಹೊಸಬರೇ ಆಗಿದ್ದರಿಂದ ಯಾವುದೇ ರೀತಿಯ ತೊಂದರೆಯಾಗದೆ ಉತ್ತಮವಾಗಿ ಅಭಿನಯಿಸಿದೆ ಎನ್ನುತ್ತಾರೆ‌. ಹಿಂಜರಿಕೆಯಿಂದ ನಾನು ಹಿಂದೆ ಸರಿದಿದ್ದರೆ ಬಹುಷ: ನಟಿಯಾಗಬೇಕೆಂಬ ಆಸೆ ಆಸೆಯಾಗಿಯೇ ಉಳಿದಿತ್ತೇನೋ ಎನ್ನುವ ಅವರು ತನ್ನ ಬದುಕಿನಲ್ಲಿ ಬಂದ ಒಂದೊಳ್ಳೆ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿದ್ದೇನೆ ಎನ್ನುವ ತೃಪ್ತಿ ನನಗಿದೆ. ಮುಂದೆ ಉತ್ತಮ ಅವಕಾಶದ ನಿರೀಕ್ಷೆಯಲ್ಲಿದ್ದೇನೆ ಎನ್ನುತ್ತಾರೆ. ಇನ್ನಷ್ಟು ಅವಕಾಶಗಳು ಇವರಿಗೆ ಲಭಿಸಲಿ ಎಂದು ಹಾರೈಸುವ. ನಮ್ಮ ಕಾಪು

1989 ರ ಪತ್ರಿಕೆಯಲ್ಲಿ ಕೊರೊನ ವೈರಸ್ ಬಗ್ಗೆ

Posted On: 06-03-2020 08:18PM

ಕೊರೊನ ವೈರಸ್ ಬಗ್ಗೆ 1989 ತರಂಗ ಪತ್ರಿಕೆಯಲ್ಲಿ ಪ್ರಕಟವಾದ ವಿಶೇಷ ವರದಿ ಈ ರೀತಿ ಇದೆ.. ಕೊರೊನ ಎಂಬುದು ಹೊಸ ರೋಗ ಇದು ಒಬ್ಬರಿಂದ ಒಬ್ಬರಿಗೆ ಹರಡುವ ರೋಗವಾಗಿದೆ.. ದೇಶ ವಿದೇಶಗಳಲ್ಲಿ ಈ ರೋಗ ವ್ಯಾಪಕವಾಗಿ ಹರಡುತ್ತಿದೆ.. ಮತ್ತು ಇದಕ್ಕೆ ಬೇಕಾದ ಚಿಕಿತ್ಸೆಯನ್ನು ಇದುವರೆಗೂ ಕಂಡು ಹಿಡಿದಿಲ್ಲ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.. ಆದರೆ ಈ ಕೊರೊನ ವೈರಸ್ ಬಗ್ಗೆ ಈ ಹಿಂದೆ 1989 ರ ತರಂಗದಲ್ಲಿ ಅದಾಗಲೇ ಪ್ರಕಟವಾಗಿತ್ತು.. ನಮ್ಮ ಕಾಪು

ಪಾಂಗಳ ಆದಿ ಆಲಡೆಯ"ಆಲಡೆ ಮಹೋತ್ಸವದ" ಆಮಂತ್ರಣ ಪತ್ರಿಕೆ

Posted On: 06-03-2020 03:59PM

ಶ್ರೀ ಆದಿ ಆಲಡೆ ಬ್ರಹ್ಮಲಿಂಗೇಶ್ವರ ದೇವಸ್ಥಾನ, ಪಾಂಗಳ ಇಲ್ಲಿ ವರ್ಷಂಪ್ರತಿ ಜರಗುವ ಪಾಂಗಳ ಆದಿ ಆಲಡೆ ಶ್ರೀ ಬ್ರಹ್ಮಲಿಂಗೇಶ್ವರ ದೇವರು ಹಾಗೂ ಪರಿವಾರ ದೈವಗಳ "ಆಲಡೆ ಮಹೋತ್ಸವ"ವು ಇದೆ ಬರುವ ತಾರೀಕು 08-03-2020 ನೇ ರವಿವಾರದಂದು ಜರಗಲಿರುವುದು. ಭಕ್ತಾದಿಗಳು ಕುಟುಂಬ ಸಮೇತರಾಗಿ ಆಗಮಿಸಿ, ಮಹೋತ್ಸವದಲ್ಲಿ ಭಾಗಿಯಾಗಿ ಶ್ರೀ ಬ್ರಹ್ಮಲಿಂಗೇಶ್ವರ ದೇವರ ಹಾಗೂ ಶ್ರೀ ಧರ್ಮ ದೈವಗಳ ಕೃಪೆಗೆ ಪಾತ್ರರಾಗಿ ಸಿರಿಮುಡಿ ಗಂಧ ಪ್ರಸಾದ ಸ್ವೀಕರಿಸಿ ಕೃತಾರ್ತರಾಗಬೇಕಾಗಿ ವಿನಂತಿ ಕ್ಷೇತ್ರದ ಧಾರ್ಮಿಕ ಕಾರ್ಯಕ್ರಮಗಳು ಈ ಕೆಳಗಿನಂತಿವೆ. 08-03-2020 ರವಿವಾರದಂದು ಬೆಳಿಗ್ಗೆ 11:30 ಕ್ಕೆ ಧ್ವಜಾರೋಹಣ, 12:30 ಕ್ಕೆ ಮಹಾಪೂಜೆ, 12:45 ಕ್ಕೆ ಬ್ರಾಹ್ಮಣ ಸುವಾಸಿನಿ ಆರಾಧನೆ, ಗಂಟೆ 01:00 ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ 08:30 ಕ್ಕೆ ಭಂಡಾರ ಚಾವಡಿಯಿಂದ ಪರಿವಾರ ದೈವಗಳ ಭಂಡಾರ ಹೊರಡುವುದು, 09:30 ಕ್ಕೆ ಬೈಗಿನ ಬಲಿ, ರಾತ್ರಿ 11:00 ಕ್ಕೆ ಕುಮಾರ ದರ್ಶನ, ರಾತ್ರಿ 01:00 ಕ್ಕೆ ರಂಗಪೂಜೆ, ರಾತ್ರಿ 02:30 ಕ್ಕೆ ಬ್ರಹ್ಮಮಂಡಲ, ರಾತ್ರಿ 04:30 ರಿಂದ ತುಲಾಭಾರ ಸೇವೆ, ತಾರೀಕು 09-03-2020ನೇ ಸೋಮವಾರ ಬೆಳಿಗ್ಗೆ 11:00 ಕ್ಕೆ ಮಹಾಪೂಜೆ, ಸಂಜೆ 07:00 ಕ್ಕೆ ಬೈಗಿನ ಬಲಿ, ರಾತ್ರಿ 09:00 ಕ್ಕೆ ದೂಳು ಮಂಡಲ, ನಂತರ ಬೂತಬಲಿ, ಶಯನೋತ್ಸವ, ತಾರೀಕು 10-03-2020 ನೇ ಮಂಗಳವಾರ ಬೆಳಿಗ್ಗೆ 07:00 ಕ್ಕೆ ಕಾವೊಟೋದ್ಘಾಟನೆ ನಂತರ ಮಹಾಪೂಜೆ, ಸಾಯಂಕಾಲ 05:00 ಕ್ಕೆ ಬಲಿ ಹೊರಟು ಅವಭ್ರತ ಸ್ನಾನ, ಕಟ್ಟೆಪೂಜೆ, ರಾತ್ರಿ ದ್ವಜ ಅವರೋಹಣ. ಹೀಗೆ ಧಾರ್ಮಿಕ ಕಾರ್ಯಕ್ರಮಗಳು ಕ್ರಮವಾಗಿ ನಡೆಯಲಿವೆ.. ನಮ್ಮ ಕಾಪು

ತುಳುನಾಡಿನ ಸಪ್ತ ಜಾತ್ರೆಗಳಲ್ಲೊಂದಾದ ಕಾಪು ಸುಗ್ಗಿ ಮಾರಿಪೂಜೆ-2020 ಕ್ಷಣಗಣನೆ

Posted On: 06-03-2020 01:41PM

ಕಾಪು : ತುಳುನಾಡಿನ ಏಳು ಜಾತ್ರೆಗಳಲ್ಲಿ ಒಂದು ಎಂದು ಪ್ರಸಿದ್ಧಿ ಪಡೆದಿರುವ ಕಾಪುವಿನ ಸುಗ್ಗಿ ಮಾರಿಪೂಜಾ ಜಾತ್ರೆಗೆ ಕ್ಷಣಗಣನೆ ಕಾಪುವಿನ ಹಳೇ ಮಾರಿಯಮ್ಮ ದೇವಸ್ಥಾನ, ಹೊಸ ಮಾರಿಗುಡಿ ದೇವಸ್ಥಾನ ಮತ್ತು ಮೂರನೇ (ಕಲ್ಯ) ಮಾರಿಗುಡಿ ದೇವಸ್ಥಾನದಲ್ಲಿ ಏಕಕಾಲದಲ್ಲಿ ನಡೆಯುವ ಮಾರಿ ಪೂಜೆಯಲ್ಲಿ ಭಾಗವಹಿಸಲು ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರಕನ್ನಡ ಮತ್ತು ಕಾಸರಗೋಡು, ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ದೂರದ ಮುಂಬಯಿ ಮಹಾನಗರದಿಂದಲೂ ಸಾವಿರಾರು ಸಂಖ್ಯೆಯ ಭಕ್ತಾದಿಗಳು ಮಾರ್ಚ್ 24ರ ಮಂಗಳವಾರ ಮಧ್ಯಾಹ್ನದಿಂದಲೇ ಆಗಮಿಸುತ್ತಾರೆ. ಮಾ. 17 ರಂದು ಬೇಟೆ (ಕುರಿ) ಬಿಡುವ ಮೂಲಕ ಮಾರಿ ಜಾತ್ರೆಯ ಧಾರ್ಮಿಕ ವಿಧಿ ವಿಧಾನಗಳು ಆರಂಭವಾಗುತ್ತವೆ. ಮಾ. 25 ರಂದು ಬುಧವಾರ ಸಂಜೆಯ ವರೆಗೂ ಮಾರಿ ಪೂಜಾ ಮಹೋತ್ಸವ ಮುಂದುವರಿಯುತ್ತದೆ. ಮಂಗಳವಾರ ರಾತ್ರಿ ಮಾರಿಯಮ್ಮ ದೇವಿಯ ಗದ್ದುಗೆ ಪ್ರತಿಷ್ಠಾಪನೆಯ ಬಳಿಕ ಸಾವಿರಾರು ಸಂಖ್ಯೆಯ ಕುರಿ-ಆಡು ಮತ್ತು ಕೋಳಿಗಳನ್ನು ಭಕ್ತರು ಮಾರಿಪೂಜೆಯ ಪ್ರಯುಕ್ತ ಸಮರ್ಪಿಸುತ್ತಾರೆ. ನಮ್ಮ ಕಾಪು