Updated News From Kaup
ಕಾಪು ಆಟಿ ಮಾರಿಪೂಜೆ ಸಾರ್ವಜನಿಕರಿಗೆ ದೇವಳ ಪ್ರವೇಶ ಸಂಪೂರ್ಣ ನಿಷೇದಿಸಲಾಗಿದೆ
Posted On: 28 Jul 2020, 07:53 PM
ಕಾಪು ಶ್ರೀ ದೇವಿಯ ಸನ್ನಿಧಿಯಲ್ಲಿ ವಾಡಿಕೆಯಂತೆ ನಡೆಯುವ ಕಾಲಾವಧಿ ಆಟಿ ಮಾರಿಪೂಜಾ ಜಾತ್ರೆಯನ್ನು . ಕೋರೋನ ನಿಯಂತ್ರಣ ಸರಕಾರದ ಆದೇಶದ ಮೇರೆಗೆ , ಸಾರ್ವಜನಿಕ ಸಭೆ ಸಮಾರಂಭ,ಜಾತ್ರದಿಗಳನ್ನು ಆಚರಿಸಲು ನಿರ್ಭಂಧ, ನಿತ್ಯ ರಾತ್ರಿ ಕರ್ಫ್ಯೂ ಜಾರಿ ಇರುವ ಕಾರಣ..... ತಾ.28/07/20 ಹಾಗೂ 29/07/20 ಜರಗಬೇಕಾಗಿದ್ದ ಆಟಿ ಮಾರೀಪೂಜಾ ಜಾತ್ರೆಯನ್ನು ಸುರಕ್ಷತೆಯ ದೃಷ್ಟಿಯಿಂದ ರದ್ದುಗೊಳಿಸಲಾಗಿದೆ ... ಈ ಕಾರಣ ನಾಳೆ ಹಾಗೂ ನಾಡಿದ್ದು ಶ್ರಿ ದೇವಿಯ ಸನ್ನಿಧಿಯಲ್ಲಿ ಆಟಿ ಪೂಜಾ ಕೈಂಕರ್ಯಗಳು ಸಾಂಕೇತಿಕವಾಗಿ ಸರಳ ರೀತಿಯಲ್ಲಿ ಕೇವಲ ದೇವಳದ ಅರ್ಚಕರು ಹಾಗೂ ಆಡಳಿತ ಮಂಡಳಿ ಸದಸ್ಯರ ಉಪಸ್ಥಿತಿಯಲ್ಲಿ ನೆರವೇರಿಸಲಾಗುವುದು..... ಈ ಸಂದರ್ಭ, ಭಕ್ತಾದಿಗಳಿಗೆ ಹಾಗೂ ಸಾರ್ವಜನಿಕರಿಗೆ ದೇವಳ ಪ್ರವೇಶ, ದೇವರ ಭೇಟಿ ಇತ್ಯಾದಿಗಳಿಗೆ ಸಂಪೂರ್ಣ ನಿಷೇಧ ನಿಯಮಾವಳಿ ರೂಪಿಸಲಾಗಿದೆ... ಈ ಪ್ರಯುಕ್ತ ಸರ್ವ ಭಕ್ತ ಭಾಂಧವರ ಸಹಕಾರವನ್ನು ಕೋರಲಾಗಿದೆ. ಸರ್ವ ಭಕ್ತರು ನಾಳೆ, ನಾಡಿದ್ದು ತಾವು ತಮ್ಮ ತಮ್ಮ ಮನೆಯಲ್ಲೇ ಶ್ರೀ ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿ, ತಮ್ಮ ಹರಕೆ, ಕಾಣಿಕೆ , ಸೇವೆ ಇತ್ಯಾದಿಗಳನ್ನು ಮುಂದಿನ ದಿನಗಳಲ್ಲಿ ಅಥವಾ ಮುಂಬರುವ ಜಾರ್ಧೆ ಮಾರಿಪೂಜಾ ಜಾತ್ರೆ ಸಂದರ್ಭದಲ್ಲಿ ಸಮರ್ಪಿಸಲು ವಿನಂತಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9886620944 9844559928 ಆಡಳಿತ ಮಂಡಳಿ ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ,ಕಾಪು
ಪೆರ್ಣಂಕಿಲ ರಾಜೀವಿಯವರನ್ನು ಸಮ್ಮಾನಿಸಿದ ಮಲಬಾರ್ ಗೋಲ್ಡ್ & ಡೈಮಂಡ್ಸ್
Posted On: 28 Jul 2020, 04:37 PM
ಉಡುಪಿ :- ಆಶಾ ಕಾಯ೯ಕತೆ೯ ರಿಕ್ಷಾ ಚಾಲಕಿಯಾಗಿ ನೂರಾರು ಗಭಿ೯ಣಿ ಮಹಿಳೆಯರನ್ನು ರಾತ್ರಿ ಹಗಲೆನ್ನದೆ ಆಸ್ಪತ್ರೆಗೆ ಸಾಗಿಸಲು ನೆರವಾಗುತ್ತಿರುವ ಪೆಣ೯೦ಕಿಲ ರಾಜೀವಿಯವರನ್ನು ಅವರ ಸ್ವಗ್ರಹದಲ್ಲಿ ಮಲಬಾರ್ ಗೋಲ್ಡ್ ಡೈಮಂಡ್ಸ್ ವತಿಯಿಂದ ಇಂದು ವಿಶೇಷ ರೀತಿಯಲ್ಲಿ ಗೌರವಿಸಲಾಯಿತು. ಇವರ ಸೇವಾ ಸಾಧನೆಗೆ ಉಪ ರಾಷ್ಟ್ರಪತಿಯವರು ಅಭಿನಂದನೆ ಸಲ್ಲಿಸಿರುತ್ತಾರೆ. ಈ ಸಂದಭ೯ದಲ್ಲಿ ಮಲಬಾರ್ ಗೋಲ್ಡ್ ಸ್ಟೋರ್ ಹೆಡ್ ಹಫೀಜ್ ರೆಹಮಾನ್, ಸಾವ೯ಜನಿಕ ಸಂಪಕಾ೯ಧಿಕಾರಿ ರಾಘವೇಂದ್ರ ನಾಯಕ್, ಸ್ವಚ್ಚ ಭಾರತ್ ಫ್ರೆಂಡ್ಸ್ ಸಂಯೋಜಕ ರಾಘವೇಂದ್ರ ಪ್ರಭು,ಕವಾ೯ಲು ಮುಂತಾದವರಿದ್ದರು.
ಹೆಜಮಾಡಿ : ಸುಳ್ಳು ಸುದ್ದಿಯ ವಿಡಿಯೋ ವೈರಲ್
Posted On: 28 Jul 2020, 12:49 PM
ಸೋಮವಾರದಿಂದ ಉಡುಪಿ ಜಿಲ್ಲೆಯ ಹೆಜಮಾಡಿ ಕಡಲ ಕಿನಾರೆಯಲ್ಲಿ ಸಮುದ್ರದ ಅಲೆಗಳು ಉಕ್ಕೇರಿ ಜನವಸತಿಯತ್ತ ಹರಿಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಎಲ್ಲೆಡೆ ಚರ್ಚೆಗೂ ಕಾರಣವಾಗಿತ್ತು. ಇದರಿಂದ ದೂರದ ಊರಿನಲ್ಲಿದ್ದ ಅಲ್ಲಿನ ನಿವಾಸಿಗಳು ಭಯಭೀತರಾಗಿದ್ದರು. ಆದರೆ ಇದು ಎಲ್ಲಿಯೋ ನಡೆದ ಘಟನೆಯನ್ನು ಹೆಜಮಾಡಿಯಲ್ಲಿ ಎಂದು ಬಿಂಬಿಸಲಾಗಿದ್ದು. ಇಂತಹ ಘಟನೆ ನಡೆದೇ ಇಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಇಂತಹ ವಿಡಿಯೋ ಹರಿಬಿಡುವ ದುಷ್ಕರ್ಮಿಗಳ ವಿರುದ್ಧ ಕ್ರಮಕೈಗೊಳ್ಳಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ರೋಟರಿ ಕಲ್ಯಾಣಪುರ ಹಾಗೂ ಸ್ವಚ್ಛಮ್ ಸರ್ವಿಸಸ್ ವತಿಯಿಂದ ಮಲ್ಪೆ ಪೊಲೀಸ್ ಠಾಣೆ ಸ್ಯಾನಿಟೈಜ್
Posted On: 28 Jul 2020, 12:44 PM
ರೋಟರಿ ಕಲ್ಯಾಣಪುರ ಹಾಗೂ ಸ್ವಚ್ಛಮ್ ಸರ್ವಿಸಸ್ ಉಡುಪಿ ವತಿಯಿಂದ ಜಂಟಿ ಯಾಗಿ ಮಲ್ಪೆ ಆರಕ್ಷಕರ ಠಾಣೆ ಯನ್ನು ಸಂಪೂರ್ಣ ಸ್ಯಾನಿಟೈಜ್ ಮಾಡಲಾಯಿತು. ಉದ್ಘಾಟನೆ ಯನ್ನು ಠಾಣಾಧಿಕಾರಿ ತಿಮ್ಮೇಶ್ ಮಾಡಿದರು. ರೋಟರಿ ಅಧ್ಯಕ್ಷ ರಾದ ರೋ. ಡೆಸ್ಮಂಡ್ ವಾಜ್ ಮಾಜಿ ಅಧ್ಯಕ್ಷ ರಾದ ರೋ. ರಾಮ ಪೂಜಾರಿ ಸ್ವಚಮ್ ಸರ್ವಿಸಸ್ ನ ಮಾಲಕರಾದ ರೋ ತಾರಾನಾಥ್ ಪೂಜಾರಿ ಮಾಜಿ ಸಹಾಯಕ ಗವರ್ನರ್ ರೋ.ಎಮ್ ಮಹೇಶ್ ಕುಮಾರ್. ಸುನಿಲ್ ಪೂಜಾರಿ ಹಾಗೂ ಪೊಲೀಸ್ ಸಿಬ್ಬಂದಿ ಗಳು ಉಪಸ್ಥಿತರಿದ್ದರು..
ಜೇಸಿಐ ಉಡುಪಿ ಸಿಟಿ ಘಟಕಕ್ಕೆ ಎಕ್ಸಲೆನ್ಸಿ ಪ್ರಶಸ್ತಿ
Posted On: 28 Jul 2020, 09:03 AM
ಕಟಪಾಡಿ: (ಶಂಕರಪುರ) ಜೇಸಿಐ ಉಡುಪಿ ಸಿಟಿ ಘಟಕವು ಎಕ್ಸಲೆನ್ಸಿ ಪ್ರಶಸ್ತಿ ಸಹಿತ ವಿವಿಧ ಪುರಸ್ಕಾರವನ್ನು ಪಡೆದುಕೊಂಡಿತ್ತು. ಜುಲೈ.27ರಂದು ಶಂಕರಪುರ ಜೇಸಿ ಭವನದಲ್ಲಿ ನಡೆದ ವಲಯ 15 ರ ಮಧ್ಯಂತರ ಸಮ್ಮೇಳನ "ಬದಲಾವಣೆ -2020 " ದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ವಲಯಾಧ್ಯಕ್ಷ ಕಾತಿ೯ಕೇಯ ಮಧ್ಯಸ್ಥ ರವರಿಂದ ಪ್ರಶಸ್ತಿಯನ್ನು ಘಟಕಾಧ್ಯಕ್ಷೆ ತನುಜಾ ಮಾಬೆನ್ ರವರು ಪಡೆದುಕೊಂಡರು. ಘಟಕವು ಅತ್ಯುತ್ತಮ ಕಾಯ೯ಕ್ರಮ, ತರಬೇತಿ ವಿಭಾಗ ಸೇರಿದಂತೆ ವಿವಿಧ ಮನ್ನಣೆಯನ್ನು ಪಡೆದುಕೊಂಡಿತ್ತು. ಈ ಸಂದಭ೯ದಲ್ಲಿ ವಲಯ ಉಪಾಧ್ಯಕ್ಷ ಲೋಕೇಶ್ ರೈ, ಅಶೋಕ್ ಚುಂತಾರ್, ಅಶ್ವಿನಿ ಐತಾಳ, ಜಬ್ಬಾರ್ ಸಾಹೇಬ್, ಉದಯ ನಾಯ್ಕ್, ಜಗದೀಶ್ ಶೆಟ್ಟಿ, ಪೂವ೯ ವಲಯ ಉಪಾಧ್ಯಕ್ಷ ರಾಘವೇಂದ್ರ ಪ್ರಭು,ಕವಾ೯ಲ್ ಮುಂತಾದವರಿದ್ದರು.
ಸಂಚಾರಿ ನಿಯಮದ ಬಗ್ಗೆ ಬೆಳಕು ಚೆಲ್ಲಿದ ಕಿರುಚಿತ್ರ ಮುಗುರು ಮೋಕೆ
Posted On: 27 Jul 2020, 07:52 AM
ಪ್ರತಿಯೊಬ್ಬ ವ್ಯಕ್ತಿ ಕುಟುಂಬದ ಆಧಾರವಾಗಿದ್ದು , ಜೀವದ ಬೆಲೆಗೆ ನಮ್ಮವರನ್ನೆ ಕಾಯುವ ನಮ್ಮ ಮನೆ ,ಒಂದು ಕ್ಷಣದ ಮುಜುಗರಕ್ಕೆ ಹೆಲ್ಮೆಟ್ ಬಳಸದಿದ್ದರೆ ಆಗುವ ಅನಾಹುತದ ಬಗ್ಗೆ ಸಂದೇಶ ಸಾರುವ ಸ್ನೇಹಿತನ ಬದುಕಿನಲ್ಲಿ ನಡೆದ ಘಟನೆಯನ್ನ ಕಿರುಚಿತ್ರವಾಗಿ ಚಿತ್ರಿಸಿರುವ ಮುಗುರು ಮೋಕೆ ಕಿರುಚಿತ್ರದ ಬಿಡುಗಡೆ ಸಮಾರಂಭವು ಕಾರ್ಕಳದ ಇನ್ನದ ಮರದ ಮನೆ ಆವರಣದಲ್ಲಿ ದಿನಾಂಕ 25/07/2020 ರ ಶನಿವಾರ ನಮ್ಮ ನೆಚ್ಚಿನ ಜಿಲ್ಲಾ ಪಂಚಾಯತ್ ಸದಸ್ಯೆ ರೇಶ್ಮಾ ಉದಯ ಕುಮಾರ್ ಶೆಟ್ಟಿ ಶುಭಹಾರೈಸಿ ಬಿಡುಗಡೆಗೊಳಿಸಿದರು.. ಅದರ್ಶ ಯುವಕ ಮಂಡಲ ಬೆಳ್ಮಣ್ ಇವರ ಮುಂದಾಳತ್ವ,ನಿತ್ಯಾನಂದ ಶೆಟ್ಟಿ ಬೆಳ್ಮಣ್ ಇವರ ನಿರ್ಮಾಣದ ಈ ಕಿರುಚಿತ್ರಕ್ಕೆ ಕಥೆ ನಿರ್ದೇಶನ ದೀಪಕ್ ಬೆಳ್ಮಣ್,ಸಾಹಿತ್ಯ ರಚನೆ ದಿಲೀಪ್ ಡಿ.ಕೆ,ಸುಮಧುರ ಕಂಠದ ಕೆ.ಪಿ ಮಿಲನ್ ಆಚಾರ್ಯ ಸಚ್ಚರಿಪೇಟೆ ಇವರ ಸಂಗೀತ,ಚಿತ್ರದ ದೃಶ್ಯಕ್ಕೆ ಜೀವ ತುಂಬಿದ ರಾಜೇಶ್ ಬೆಳುವಾಯಿ,ಎಡಿಟಿಂಗ್ ಮಾಡಿದ ಶ್ರೀಜಿತ್ ಬೆಳುವಾಯಿ ಇವರೆಲ್ಲರ ಸಹಕಾರದೊಂದಿಗೆ ಮೂಡಿ ಬಂದ ಈ ಕಿರುಚಿತ್ರವು ಕಾರ್ಕಳ ಬಿ.ಜೆ.ಪಿ ಯುವಮೋರ್ಚಾ ಇದರ ಅಧ್ಯಕ್ಷರು ಸುಹಾಸ್ ಶೆಟ್ಟಿ ಮುಟ್ಲುಪಾಡಿ, ಉದ್ಯಮಿ ಇನ್ನ ಉದಯ ಕುಮಾರ್ ಶೆಟ್ಟಿ, ದೀಪಕ್ ಬೆಳ್ಮಣ್, ಸುಖೇಶ್ ಶೆಟ್ಟಿ ಇನ್ನ, ಸುರೇಶ್ ಡಿ ಕುಲಾಲ್,ಸಂದೀಪ್ ಅಂಚನ್ ಹಾಗೂ ಇನ್ನಿತರ ಉಪಸ್ಥಿತಿಯ ಶುಭಾಶಯದೊಂದಿಗೆ ನಡೆಯಿತು.. ಸಣ್ಣ ಪ್ರಯತ್ನದೊಂದಿಗೆ ಮೂಡಿ ಬಂದ ನಮ್ಮ ಕಿರುಚಿತ್ರವನ್ನ ಪೋತ್ಸಾಹಿಸಿ..
ಶಿರ್ವದ ಸದಾಶಿವ ಕುಲಾಲ್ ದಂಪತಿಗಳ ಸ್ವದೇಶಿ ಉದ್ಯಮವನ್ನು ಪ್ರೋತ್ಸಾಹಿಸೋಣ
Posted On: 26 Jul 2020, 07:24 PM
ಕಾಪು:(ನಮ್ಮ ಕಾಪು ನ್ಯೂಸ್ 25/07/2020) ಕಾಪು ಶಿರ್ವದ ಸದಾಶಿವ ಕುಲಾಲ್ ದಂಪತಿಗಳು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಅತ್ಮ ನಿರ್ಭರ ಭಾರತ ಸಂಕಲ್ಪದಿಂದ ಪ್ರೇರಣೆಗೊಂಡು ಮನೆಯಲ್ಲಿಯೇ ದೀಪದ ಬತ್ತಿ ತಯಾರಿಸಿ ಸ್ವದೇಶಿ ಉದ್ಯಮದತ್ತ ಸಾಗುತ್ತಿದ್ದಾರೆ.. ಬದುಕಿನ ಬವಣೆಯ ಜೊತೆ ಜೊತೆ ಸಾಗುವ ಇವರ ಕಾಯಕಕ್ಕೆ ನಿಮ್ಮಲ್ಲೆರ ಸಹಕಾರ ಸದಾ ಇರಲಿ... ನಿಮ್ಮ ಸೇವೆಯಲ್ಲಿ... ಸದಾಶಿವ ಕುಲಾಲ್ Contact: 9945329904 ಲೇಖನ : U.k kalathur.
ಇನ್ನಂಜೆಯಲ್ಲಿ ಲಾಕ್ಡೌನ್ ಸದುಪಯೋಗಪಡಿಸಿಕೊಂಡ ಯುವಸೇನೆ ಮಡುಂಬು ತಂಡ
Posted On: 26 Jul 2020, 06:55 PM
ಲಾಕ್ ಡೌನ್ ಎಂದರೆ ಬಹುಷಃ ಕೆಲವರು ಮನೆಯಲ್ಲಿ ಕುಳಿತಿರಬಹುದು, ಇನ್ನೊಂದಷ್ಟು ಜನ ಅಲ್ಲಲ್ಲಿ ತಿರುಗಾಡ್ತಾ ಇರಬಹುದು.. ಆದರೇ ಇನ್ನಂಜೆ ಗ್ರಾಮದ ಮಡುಂಬುವಿನ "ಯುವಸೇನೆ ಮಡುಂಬು" ಎಂಬ ಯುವಕರ ತಂಡವೊಂದು ಲಾಕ್ ಡೌನ್ ಸಮಯವನ್ನು ವ್ಯರ್ಥ ಮಾಡದೇ ಇಪ್ಪತ್ತರಿಂದ, ಇಪ್ಪತ್ತೈದು ಮನೆಗಳಿಗೆ ಸಂಪರ್ಕ ಕಲ್ಪಿಸುವ ಮಡುಂಬು ಕೆ.ಪಿ ಶ್ರೀನಿವಾಸ ತಂತ್ರಿಗಳ ಮನೆಯ ವ್ಯಾಪ್ತಿಯಲ್ಲಿ ಬರುವ ರಸ್ತೆಯ ಬದಿಯಲ್ಲಿ ಬೆಳೆದಿದ್ದ ಪೊದೆಗಳನ್ನು ಮತ್ತು ಮರದ ಗೆಲ್ಲುಗಳನ್ನು ಕಡಿದು, ಜನಸಂಚಾರಕ್ಕೆ ಮತ್ತು ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿ ಯುವಕರಿಗೆ ಮಾದರಿಯಾಗಿದ್ದಾರೆ.. ಈ ಸಂದರ್ಭದಲ್ಲಿ ಯುವಸೇನೆ ತಂಡದ ಅಧ್ಯಕ್ಷರಾದ ವರುಣ್ ಶೆಟ್ಟಿ ಮಡುಂಬು, ಮಾಜಿ ಅಧ್ಯಕ್ಷರಾದ ಸುಕೇಶ್ ಪೂಜಾರಿ ಹಾಗೂ ಗೌರವ ಸಲಹೆಗಾರರಾದ ನಿತೇಶ್ ಸಾಲ್ಯಾನ್ ಮಡುಂಬು ಉಪಸ್ಥಿತರಿದ್ದರು
ಕಟಪಾಡಿ ಕಾರುಣ್ಯ ಆಶ್ರಮದಲ್ಲಿ ಬಿರುವೆರ್ ಕಾಪು ಸಂಸ್ಥೆಯ 4ನೇ ವರ್ಷದ ಸಂಭ್ರಮಾಚರಣೆ
Posted On: 26 Jul 2020, 09:51 AM
ಸದಾ ಒಂದಿಲ್ಲೊಂದು ಕೆಲಸ ಕಾರ್ಯಗಳೊಂದಿಗೆ ಕಾಪು ತಾಲೂಕಿನಲ್ಲಿ ಗುರುತಿಸಿಕೊಂಡಿರುವ ಸಂಸ್ಥೆ "ಬಿರುವೆರ್ ಕಾಪು ಸೇವಾ ಟ್ರಸ್ಟ್" ತನ್ನ ನಾಲ್ಕನೇ ವರ್ಷದ ಪದಾರ್ಪಣೆಯ ಶುಭ ಸಂದರ್ಭವನ್ನು ಕಟಪಾಡಿಯ ಕಾರುಣ್ಯ ಆಶ್ರಯಧಾಮದಲ್ಲಿ ಕಳೆಯಿತು, ಆಶ್ರಮಕ್ಕೆ ನಿನ್ನೆಯ ದಿನದ ಊಟದ ವ್ಯವಸ್ಥೆ, ಒಂದು ವಾರಕ್ಕೆ ಬೇಕಾಗುವಷ್ಟು ತರಕಾರಿ, ಧವಸ ದಾನ್ಯ ಹಾಗೂ ಕೇಕ್ ಕಟಿಂಗ್ ಮತ್ತು ಸಿಹಿ ಹಂಚುವುದರ ಮೂಲಕ ನಡೆಸಲಾಯಿತು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ, ಫ್ರೆಂಡ್ಸ್ ಕೇಟರರ್ಸ್ ನ ಮಾಲಿಕರಾದ Rtn. ನವೀನ್ ಅಮೀನ್ ಶಂಕರಪುರ, ದೀಪಕ್ ಕುಮಾರ್ ಎರ್ಮಾಳ್, ಅಶ್ವಿನಿ ಬಂಗೇರ, ರಾಕೇಶ್ ಕುಂಜೂರು, ನೀತಾ ಪ್ರಭು, ಅಶೋಕ್ ಪೂಜಾರಿ ಕಟಪಾಡಿ, ಪ್ರಮೋದ್ ಸುವರ್ಣ ಕಟಪಾಡಿ, ಪುರುಷೋತ್ತಮ್ ಸಾಲಿಯಾನ್ ಮೂಳೂರು, ಬಿರುವೆರ್ ಕಾಪು ಸೇವಾ ಟ್ರಸ್ಟ್ ನ ಮುಖ್ಯಸ್ಥರು ಮತ್ತು ಆಶ್ರಮದ ಸಂಚಾಲಕರಾದ ಕುಮಾರ್ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಗೀತಾಂಜಲಿ ಸುವರ್ಣ ಕಟಪಾಡಿ ಇವರು ಕೊರೋನ lockdown ಸಂದರ್ಭದಲ್ಲಿ "ಬಿರುವೆರ್ ಕಾಪು ಸೇವಾ ಟ್ರಸ್ಟ್" ಮಾಡಿದ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದರು ಯಾವುದೇ ಸ್ವಾರ್ಥವಿಲ್ಲದೆ ಯುವಕರ ತಂಡ ಬಡವರ ಸೇವೆ ಮಾಡುತ್ತಿರುವುದು ಪ್ರಶಂಸಾರ್ಹ ಎಂದರು. ಕಾರ್ಯಕ್ರಮದ ಕೊನೆಗೆ ಸುಧಾಕರ್ ಸಾಲ್ಯಾನ್ ಕಾಪು ಇವರು ಧನ್ಯವಾದ ತಿಳಿಸುವುದರ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.
ಕಾಪು : ಕುಡಿದ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನ ಕೊಲೆ
Posted On: 25 Jul 2020, 10:08 PM
ಕಾಪು : ಶುಕ್ರವಾರ ಕುಡಿದ ಮತ್ತಿನಲ್ಲಿ ಸ್ನೇಹಿತನನ್ನು ಬರ್ಬರವಾಗಿ ಕೊಲೆಗೈದು, ಮನೆಯಂಗಳದಲ್ಲೇ ಸುಟ್ಟು ಹಾಕಲು ಯತ್ನಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೂಳೂರು ಐದು ಸೆಂಟ್ಸ್ ಕಾಲೊನಿ ನಿವಾಸಿ ಹೇಮಂತ್ ಪೂಜಾರಿ (45) ಕೊಲೆಯಾಗಿರುವ ವ್ಯಕ್ತಿಯಾಗಿದ್ದು, ಆತನನ್ನು ಪುಂಚಲಕಾಡು ನಿವಾಸಿ ಅಲ್ಬನ್ ಡಿ. ಸೋಜ (50) ಕೊಲೆ ನಡೆಸಿದ್ದನು. ಇಬ್ಬರೂ ಕೂಡಾ ಸ್ನೇಹಿತರಾಗಿದ್ದು, ಜೊತೆಗೂಡಿ ಕುಡಿಯುವ ಛಟ ಹೊಂದಿದ್ದರು. ಶುಕ್ರವಾರ ಸಂಜೆ ಕ್ಷುಲ್ಲಕ ಕಾರಣವೊಂದಕ್ಕೆ ಇಬ್ಬರ ನಡುವೆ ಜಗಳವುಂಟಾಗಿದ್ದು, ಬಳಿಕ ಅದು ಕೊಲೆಯಲ್ಲಿ ಅಂತ್ಯ ಕಂಡಿತ್ತು. ಕೊಲೆ ಗಡುಕ ಆರೋಪಿಯು ಪ್ರಕರಣವನ್ನು ಮುಚ್ಚಿ ಹಾಕುವ ಉದ್ದೇಶದಿಂದ ಮನೆಯ ಅಂಗಳದಲ್ಲೇ ಮರದ ತುಂಡುಗಳು ಮತ್ತು ಸೋಗೆ ಮಡಲುಗಳನ್ನು ಹಾಕಿ ಶವವನ್ನು ಸುಟ್ಟು ಹಾಕಲು ಯತ್ನಿಸಿದ್ದನು. ಸ್ಥಳೀಯರು ಸಕಾಲಿಕವಾಗಿ ಶಿರ್ವ ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಆಗಮಿಸಿ ಹೆಣವನ್ನು ಸುಟ್ಟು ಹಾಕಿ, ಸಾಕ್ಷ್ಯ ನಾಶ ಮಾಡುವ ದುಷ್ಕೃತ್ಯವನ್ನು ತಡೆಹಿಡಿದಿದ್ದರು. ಸೂರಿ ಶೆಟ್ಟಿ ಕಾಪು ಸುಟ್ಟ ಹೆಣವನ್ನು ತೆಗೆಯಲು ಸಹಕರಿಸಿದರು, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವಿಷ್ಣುವರ್ಧನ್, ಕಾಪು ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್, ಶಿರ್ವ ಎಸ್ಸೈ ಶ್ರೀಶೈಲ ಮುರಗೋಡ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
