Updated News From Kaup
ಬೆಳಪು : ಈಜಲು ತೆರಳಿದ್ದ ಬಾಲಕ ಸಾವು ; ಮೂವರ ರಕ್ಷಣೆ
Posted On: 05-10-2023 08:28PM
ಬೆಳಪು : ಇಲ್ಲಿನ ಔದ್ಯೋಗಿಕ ನಗರದ ಗುಂಡಿಯೊಂದರಲ್ಲಿ ಈಜಲು ತೆರಳಿದ್ದ ನಾಲ್ವರು ಮಕ್ಕಳಲ್ಲಿ ಓರ್ವ ಮೃತಪಟ್ಟಿದ್ದು ಮೂವರನ್ನು ಸ್ಥಳೀಯರು ರಕ್ಷಣೆ ಮಾಡಿದ ಘಟನೆ ಗುರುವಾರ ಸಂಜೆ ಘಟಿಸಿದೆ. ಮೃತ ಬಾಲಕನನ್ನು ಬೆಳಪು ವಸತಿ ಬಡಾವಣೆಯ ನಿವಾಸಿ ವಿಶ್ವಾಸ್ (11) ಎಂದು ಗುರುತಿಸಲಾಗಿದೆ. ಈತ ಇನ್ನಂಜೆ ಶಾಲೆಯ ವಿದ್ಯಾರ್ಥಿ.
ಕಾಪು : ಕಳತ್ತೂರು ಫ್ರೆಂಡ್ಸ್ ವತಿಯಿಂದ ವೀಲ್ ಚೇರ್, ಔಷಧಿ ವೆಚ್ಚ ಹಸ್ತಾಂತರ
Posted On: 04-10-2023 07:54PM
ಕಾಪು : ಕಳತ್ತೂರು ಫ್ರೆಂಡ್ಸ್ ವತಿಯಿಂದ ಸಮಾಜ ಸೇವಾರ್ಥ ನಡೆದ ಪ್ರಥಮ ವರ್ಷದ ಪಿಲಿನಲಿಕೆ ಕಾರ್ಯಕ್ರಮದಲ್ಲಿ ಸಂಗ್ರಹವಾದ ಹಣದಲ್ಲಿ ಅನಾರೋಗ್ಯ ಪೀಡಿತರಾದ ಅದಮಾರಿನ ರಾಜೇಶ್ ಕುಲಾಲ್ ಅವರಿಗೆ ವೀಲ್ ಚೇರ್ ಮತ್ತು ಅವರ ಒಂದು ತಿಂಗಳ ಔಷಧಿಯ ವೆಚ್ಚವನ್ನು ಹಸ್ತಾಂತರಿಸಲಾಯಿತು.
ಕಾಪು : ಅಲೆವೂರು ಪ್ರಗತಿ ನಗರಕ್ಕೆ ಕಾಪು ಶಾಸಕರ ಭೇಟಿ ; ಅಹವಾಲು ಸ್ವೀಕಾರ
Posted On: 04-10-2023 07:46PM
ಕಾಪು : ಅಲೆವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರಗತಿ ನಗರಕ್ಕೆ ಬುಧವಾರ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಭೇಟಿ ನೀಡಿ ಜನರ ಕುಂದು ಕೊರತೆಯನ್ನು ಆಲಿಸಿ ಅಹವಾಲುಗಳನ್ನು ಸ್ವೀಕರಿಸಿದರು.
ಬೋಳ ಕುಲಾಲ ಸಂಘ ಹಾಗೂ ನಾನಿಲ್ತಾರು ಕುಲಾಲ ಸಂಘದಿಂದ ವೈದ್ಯಕೀಯ ನೆರವು
Posted On: 04-10-2023 07:39PM
ಕಾರ್ಕಳ : ಇಲ್ಲಿನ ಭಾರತಿ ಕುಲಾಲ್ ಇವರಿಗೆ ಬೋಳ ಕುಲಾಲ ಸಂಘದ ವತಿಯಿಂದ ಸಂಗ್ರಹಗೊಂಡ ರೂ. 27 ಸಾವಿರ ಹಾಗೂ ನಾನಿಲ್ತಾರ್ ಕುಲಾಲ ಸಂಘದ ವತಿಯಿಂದ ರೂ. 3 ಸಾವಿರದ ಚೆಕ್ ನ್ನು ಭಾರತಿ ಅವರ ವೈದ್ಯಕೀಯ ಚಿಕಿತ್ಸೆಗೆ ನೀಡಲಾಯಿತು.
ಉಡುಪಿ : ಗ್ರಾಮೀಣ ಅಂಚೆ ನೌಕರರ ಮುಷ್ಕರ
Posted On: 04-10-2023 07:36PM
ಉಡುಪಿ : ಗ್ರಾಮೀಣ ಅಂಚೆ ನೌಕರರ ಕೆಂದ್ರ ಜಂಟಿ ಕ್ರಿಯಾ ಸಮಿತಿ ಕರೆಯಂತೆ ನಡೆದ ರಾಷ್ಟ್ರವ್ಯಾಪಿ ಮುಷ್ಕರದ ಅಂಗವಾಗಿ ಉಡುಪಿಯಲ್ಲಿ ಇಂದು ರಾಷ್ಟ್ರೀಯ ಗ್ರಾಮೀಣ ಅಂಚೆ ನೌಕರರಿಂದ ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಒಂದು ದಿನದ ಸಾಂಕೇತಿಕ ಮುಷ್ಕರ ಉಡುಪಿ ಪ್ರದಾನ ಅಂಚೆ ಕಚೇರಿಯ ಎದುರು ನಡೆಯಿತು.ಈ ಮುಷ್ಕರದಲ್ಲಿ ಉಡುಪಿ ಅಂಚೆ ವಿಭಾಗದ ವಿವಿಧ ಅಂಚೆ ಕಚೇರಿಗಳಿಂದ ಆಗಮಿಸಿದ ಗ್ರಾಮೀಣ ಅಂಚೆ ನೌಕರರು ಮುಷ್ಕರದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.
ಕಾಪು : ರಸ್ತೆ ಬದಿ ಪೈಪ್ ಲೈನ್ ಅಳವಡಿಕೆ - ಬಸ್ಸು ಬಾರದೆ ಸಂಕಷ್ಟ
Posted On: 04-10-2023 07:29PM
ಕಾಪು : ಇಲ್ಲಿನ ಕುತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪುಂಚಲಕಾಡು ಕಳತ್ತೂರು ಭಾಗದಲ್ಲಿ ಬಸ್ಸಿನ ಮೂಲಕ ಕಾಪು, ಉಡುಪಿ ಇನ್ನಿತರ ಕಡೆಗೆ ಉದ್ಯೋಗ ನಿಮಿತ್ತ ತೆರಳುವವರು ಕಳೆದ 3 ದಿನದಿಂದ ಬಸ್ಸಿನಲ್ಲಿ ಹೋಗಲು ಬೆಳಪು ಕಡೆಗೆ ನಡೆದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪಲಿಮಾರು ಸರ್ಕಾರಿ ಪದವಿ ಪೂರ್ವ ಕಾಲೇಜು - ಮಾದಕ ದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮ
Posted On: 04-10-2023 06:50PM
ಪಲಿಮಾರು : ಮಾದಕ ದ್ರವ್ಯಗಳನ್ನು ಸೇವಿಸುವವರಿಗಲ್ಲ, ವ್ಯಾಪಾರಿಗಳಿಗೆ ಮಾತ್ರ ಲಾಭವಾಗಿದೆ ಎಂಬುದಾಗಿ ಪಡುಬಿದ್ರಿ ಆರಕ್ಷಕ ಠಾಣೆಯ ಉಪ ಠಾಣಾಧಿಕಾರಿ ಸುರೇಶ್ ಅವರು ಅಭಿಪ್ರಾಯಪಟ್ಟರು. ಸರ್ಕಾರಿ ಪದವಿ ಪೂರ್ವ ಕಾಲೇಜು ಪಲಿಮಾರು ಇಲ್ಲಿ ವಿಧ್ಯಾರ್ಥಿಗಳಿಗೋಸ್ಕರ ನಡೆದ ಮಾದಕ ದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ಮಾದಕ ದ್ರವ್ಯಗಳ ವಿವಿಧ ನಮೂನೆಗಳು, ಅವುಗಳ ಸೇವನೆಯಿಂದ ಆಗುವ ವೈಯಕ್ತಿಕ ಮತ್ತು ಸಾಮಾಜಿಕ ದುಷ್ಪರಿಣಾಮಗಳು,ಅವುಗಳ ಮಾರಾಟ ಮತ್ತು ಸೇವನೆಗೆ ಸಂಬಂಧಿಸಿದಂತೆ ಇರುವ ಕಾನೂನುಗಳ ಬಗ್ಗೆ ಅರಿವು ಮೂಡಿಸಿದರು.
ಕಾಪು : ಉದ್ದ ಜಿಗಿತದಲ್ಲಿ ರಾಷ್ಟಮಟ್ಟಕ್ಕೆ ಆಯ್ಕೆಯಾದ ಸುಶಾನ್ ಸುವರ್ಣರನ್ನು ಅಭಿನಂದಿಸಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ
Posted On: 02-10-2023 07:07PM
ಕಾಪು : ಕರ್ನಾಟಕ ರಾಜ್ಯ ಜೂನಿಯರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಉದ್ದ ಜಿಗಿತದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ರಾಷ್ಟ ಮಟ್ಟಕ್ಕೆ ಆಯ್ಕೆಯಾದ ಕಾಪು ವಿಧಾನಸಭಾ ಕ್ಷೇತ್ರದ ಬೆಳ್ಳಂಪಳ್ಳಿ ನಿವಾಸಿ ಸುಶಾನ್ ಸುವರ್ಣ ಅವರನ್ನು ಮಹಾಲಕ್ಷ್ಮಿ ಭಜನಾ ಮಂಡಳಿಯಲ್ಲಿ ಅಕ್ಟೋಬರ್ 2 ರಂದು ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅಭಿನಂದಿಸಿದರು.
ಬಂಟಕಲ್ಲು : ಬೃಹತ್ ರಕ್ತದಾನ ಶಿಬಿರ ಸಂಪನ್ನ - ಅಂಗಾಂಗದಾನದ ಬಗ್ಗೆ ಜಾಗೃತಿ
Posted On: 02-10-2023 06:22PM
ಬಂಟಕಲ್ಲು : ನಾಗರಿಕ ಸೇವಾ ಸಮಿತಿ(ರಿ) ಬಂಟಕಲ್ಲು ಇವರ ಆಶ್ರಯದಲ್ಲಿ ಇತರ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಇಂದು ಗಾಂಧೀ ಜಯಂತಿ ಪ್ರಯುಕ್ತ ಬಂಟಕಲ್ಲು ಶಿರ್ವ ರೋಟರಿ ಸಭಾಭವನದಲ್ಲಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ರಕ್ತನಿಧಿ ತಂಡದ ಸಹಕಾರದೊಂದಿಗೆ ಬೃಹತ್ ರಕ್ತದಾನ ಶಿಬಿರ ಜರುಗಿತು. ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷೆ ಸವಿತಾ ರಾಜೇಶ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ನೂರಕ್ಕೂ ಅಧಿಕ ದಾನಿಗಳು ಶಿಬಿರದಲ್ಲಿ ಭಾಗವಹಿಸಿದ್ದು, ರಕ್ತನಿಧಿ ವೈದ್ಯಾಧಿಕಾರಿ ಡಾ.ಮಾನ್ವಿ ಇವರ ಮಾರ್ಗದರ್ಶನದಲ್ಲಿ 86 ಆರೋಗ್ಯವಂತರು ರಕ್ತದಾನ ಮಾಡಿದರು. ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಗೌರವ ಸಲಹೆಗಾರರಾದ ದೇವದಾಸ ಪಾಟ್ಕರ್ ಮುದರಂಗಡಿ 78ನೇ ಬಾರಿಗೆ ರಕ್ತದಾನ ಮಾಡುವ ಮೂಲಕ ಗಮನ ಸೆಳೆದರು.
ಕಾಪು : ಮರ ಬಿದ್ದು ವ್ಯಕ್ತಿ ಮೃತ್ಯು ; ಇಬ್ಬರಿಗೆ ಗಾಯ
Posted On: 02-10-2023 04:57PM
ಕಾಪು : ತಾಲೂಕಿನ ಮಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕರಂದಾಡಿಯಲ್ಲಿ ಮರವೊಂದನ್ನು ತೆರವುಗೊಳಿಸುವಾಗ ಮರ ಕಡಿಯಲು ಬಂದಿದ್ದ ವ್ಯಕ್ತಿಯೊಬ್ಬನ ಮೇಲೆ ಮರ ಬಿದ್ದು ಸಾವನ್ನಪ್ಪಿದ ಘಟನೆ ಇಂದು ನಡೆದಿದೆ.
