Updated News From Kaup

ಉಡುಪಿ : ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನಜಾಗೃತಿ ಜಾಥಾ ಮತ್ತು ಸಮಾವೇಶ

Posted On: 02-10-2023 01:53PM

ಉಡುಪಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ.) ಉಡುಪಿ ತಾಲೂಕು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ (ರಿ.), ಬೆಳ್ತಂಗಡಿ ಜಿಲ್ಲಾ ಜನಜಾಗೃತಿ ವೇದಿಕೆ ಉಡುಪಿ ಮತ್ತು ತಾಲೂಕು ಜನಜಾಗೃತಿ ವೇದಿಕೆ ಉಡುಪಿ, ಕಾಪು, ಬ್ರಹ್ಮಾವರ ಹಾಗೂ ಶ್ರೀ ಕೃಷ್ಣ ಮಠ ಪರ್ಯಾಯ ಶ್ರೀ ಕೃಷ್ಣಾಪುರ ಮಠ, ಉಡುಪಿ ಇವರ ಜಂಟಿ ಆಶ್ರಯದಲ್ಲಿ ಇಂದು‌ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಗಾಂಧಿ ಜಯಂತಿ ಸಂಭ್ರಮಾಚರಣೆಯ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನಜಾಗೃತಿ ಜಾಥಾ ಮತ್ತು ಸಮಾವೇಶ - 2023 ಕಾರ್ಯಕ್ರಮ ಜರಗಿತು.

ಪಡುಬಿದ್ರಿ : ದಲಿತ ಸಂಘರ್ಷ ಸಮಿತಿ - ನೂತನ ಸಂಚಾಲಕರಾಗಿ ಕೀರ್ತಿಕುಮಾರ್ ಆಯ್ಕೆ

Posted On: 02-10-2023 07:10AM

ಪಡುಬಿದ್ರಿ : ಇಲ್ಲಿನ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ)ಯ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಪದಪ್ರಧಾನ ಕಾರ್ಯಕ್ರಮ ರವಿವಾರ ನಡೆಯಿತು.

ನಂದಿಕೂರು : ಶೇನರಾ ಕಾಡು ಕ್ರಿಕೆಟ್ ಟ್ರೋಫಿ - 2023

Posted On: 01-10-2023 09:19PM

ನಂದಿಕೂರು : ಯುವಕರಲ್ಲಿ ಕ್ರಿಕೆಟ್ ಆಟದ ಬಗ್ಗೆ ಒಲವು ಮೂಡಿಸುವ ನಿಟ್ಟಿನಲ್ಲಿ ಆಯ್ದ ತಂಡಗಳ ಕೂಡುವಿಕೆಯಲ್ಲಿ ಪ್ರತೀಕ್ ಕೋಟ್ಯಾನ್, ರಿತೇಶ್ ದೇವಾಡಿಗ, ರೋಹಿತ್ ಪೂಜಾರಿ ಪ್ರಾಯೋಜಕತ್ವದಲ್ಲಿ ಅಕ್ಟೋಬರ್ 1ರಂದು ನಂದಿಕೂರಿನಲ್ಲಿ ಶೇನರಾ ಕಾಡು ಕ್ರಿಕೆಟ್ ಟ್ರೋಫಿ 2023 ಜರಗಿತು.

ಉಡುಪಿ ಹೆಲ್ಪ್ ಲೈನ್ : ಹೊನ್ನಪರ ಕುದ್ರು ನಿವಾಸಿಗಳೊಂದಿಗೆ 6ನೇಯ ವಷ೯ದ ಪಾದಾಪ೯ಣೆಯ ಸಂಭ್ರಮ

Posted On: 01-10-2023 08:55PM

ಉಡುಪಿ : ಉಡುಪಿ ಹೆಲ್ಪ್ ಲೈನ್ (ರಿ) (ಹಸಿದವರ ಬಾಳಿನ ಆಶಾಕಿರಣ) ಸಂಸ್ಥೆಯ 6ನೇಯ ವಷ೯ದ ಪಾದಾಪ೯ಣೆಯ ಸಂಭ್ರಮವನ್ನು ಅಕ್ಟೋಬರ್ 1 ರಂದು ಕಲ್ಯಾಣಪುರ ಗ್ರಾಮದ ಹೊನ್ನಪರ ಕುದ್ರುವಿನಲ್ಲಿ ವಾಸಿಸುವ ಬೊಗ್ಗು ಬೆಳ್ಚಡ ಹಾಗೂ ಅವರ ಅಕ್ಕ ಕಲ್ಯಾಣಿ ಬೆಳ್ಚಡ್ತಿ ಹಾಗೂ ಅವರ ಮಗಳೊಂದಿಗೆ ವಾಸಿಸುವ ಒಕ್ಕಲು ಮನೆಯ ಮುಂಭಾಗದಲ್ಲಿ ಆಚರಿಸಲಾಯಿತು.

ಕುತ್ಯಾರು : ಹುಚ್ಚು ನಾಯಿ ಹಾವಳಿ, ಮುಂಜಾಗ್ರತೆಗೆ ಸೂಚನೆ

Posted On: 01-10-2023 08:46PM

ಕಾಪು : ತಾಲೂಕಿನ ಕುತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹುಚ್ಚುನಾಯಿ ಸಂಚರಿಸುತ್ತಿದ್ದು, ಕೆಲವು ನಾಯಿಗಳಿಗೆ ಕಚ್ಚಿದ್ದು ಗ್ರಾಮದಲ್ಲಿ ತುಂಬಾ ಆತಂಕವನ್ನು ಮೂಡಿಸಿದೆ.

ಪಡುಬಿದ್ರಿ : ಬಂಟರ ಸಂಘದಿಂದ ಸಾಮಾಜಿಕ ಕಲ್ಯಾಣ ಕಾರ್ಯಕ್ರಮ ; ವಿದ್ಯಾರ್ಥಿ ವೇತನ ವಿತರಣೆ

Posted On: 01-10-2023 08:41PM

ಪಡುಬಿದ್ರಿ : ಇಲ್ಲಿನ ಬಂಟರ ಸಂಘ, ಬಂಟ್ಸ್ ವೆಲ್ಫೇರ್ ಟ್ರಸ್ಟ್ ಪಡುಬಿದ್ರಿ ಇವರ ಸಹಭಾಗಿತ್ವದಲ್ಲಿ "ಸಿರಿಮುಡಿ ದತ್ತಿನಿಧಿ" ಬಂಟರ ಸಂಘ ಪಡುಬಿದ್ರಿ ಇದರ ಪ್ರಾಯೋಜಕತ್ವದಲ್ಲಿ ರವಿವಾರ ಪಡುಬಿದ್ರಿ ಬಂಟರ ಭವನದ ಆಶಾ ಪ್ರಕಾಶ ಶೆಟ್ಟಿ ಸಭಾಭವನದಲ್ಲಿ ಸಾಮಾಜಿಕ ಕಲ್ಯಾಣ ಕಾರ್ಯಕ್ರಮ ಮತ್ತು ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವು ಜರಗಿತು. ಕಾರ್ಯಕ್ರಮವನ್ನು ಅದಾನಿ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಕಿಶೋರ ಆಳ್ವ ಉದ್ಘಾಟಿಸಿದರು.

ಪಡುಬಿದ್ರಿ : ಪಡುಬಿದ್ರಿ ಬ್ಲೂ ಫ್ಲಾಗ್ ಬೀಚಿನಲ್ಲಿ ಸ್ವಚ್ಛತಾ ಪಕ್ವಾಡ ಕಾರ್ಯಕ್ರಮ

Posted On: 30-09-2023 08:57PM

ಪಡುಬಿದ್ರಿ : ನಮ್ಮ ನಮ್ಮ ಮನೆಯಿಂದಲೇ ಸ್ವಚ್ಛ ತೆ ಬಗ್ಗೆ ಅರಿವು ಮೂಡಿಸುವ ಮೂಲಕ ಪ್ರತಿ ಮನೆಯೂ ,ಪರಿಸರವೂ ಸ್ವಚ್ಛ ಇಡುವುದು ನಮ್ಮ ಆದ್ಯ ಕರ್ತವ್ಯ ಎಂದು ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಹೇಳಿದರು.

ಶಿರ್ವ : ನಾಪತ್ತೆ ಪ್ರಕರಣ - ಶಂಕರಪುರ ಬಿಳಿಯಾರು ನಿವಾಸಿ ಇಂದು ಪತ್ತೆ

Posted On: 29-09-2023 08:45PM

ಕಾಪು : ತಾಲೂಕಿನ ಶಂಕರಪುರ ಬಿಳಿಯಾರು ನಿವಾಸಿ ಸುಮತಿ ಮೂಲ್ಯ ಗುರುವಾರ ನಾಪತ್ತೆಯಾಗಿರುವರು ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಪ್ರಸಾರವಾಗಿದ್ದು, ಈ ಬಗ್ಗೆ ಅವರ ಪರಿಚಿತರು, ಕುಟುಂಬ ವರ್ಗ ಹುಡುಕಾಡಿದಾಗ ಸುಮತಿಯವರು ಅವರ ಮನೆಯ ಬಳಿ ಆರೋಗ್ಯವಾಗಿ ಸಿಕ್ಕಿರುತ್ತಾರೆ.

ಉಡುಪಿ : ರಾಜ್ಯದ ಕರಾವಳಿ ಭಾಗದಲ್ಲಿ ಮುಂದಿನ 3 ದಿನಗಳ ಕಾಲ ಹೆಚ್ಚಿನ ಮಳೆ ಸಾಧ್ಯತೆ

Posted On: 29-09-2023 08:31PM

ಉಡುಪಿ : ರಾಜ್ಯದ ಕರಾವಳಿ ಭಾಗದಲ್ಲಿ ಮುಂದಿನ 3 ದಿನಗಳ ಕಾಲ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆಯೆಂದು ಹವಾಮಾನ ಇಲಾಖೆ ತಿಳಿಸಿದೆ.

ಅಕ್ಟೋಬರ್ 1 : ಪಡುಬಿದ್ರಿ ಬಂಟರ ಸಂಘದಿಂದ ಸಾಮಾಜಿಕ ಕಲ್ಯಾಣ ಕಾರ್ಯಕ್ರಮ ; ವಿದ್ಯಾರ್ಥಿವೇತನ ವಿತರಣಾ ಸಮಾರಂಭ

Posted On: 28-09-2023 12:41PM

ಪಡುಬಿದ್ರಿ : ಹಲವಾರು ಸಮಾಜಮುಖಿ ಸೇವೆಗಳನ್ನು ಮಾಡಿರುವ ಪಡುಬಿದ್ರಿ ಬಂಟರ ಸಂಘದಿಂದ ಬಂಟ ಸಮಾಜದ ಆರ್ಥಿಕ ದುರ್ಬಲರಿಗೆ, ಅಶಕ್ತರಿಗೆ, ಅನಾರೋಗ್ಯ ಪೀಡಿತರಿಗೆ, ಆರ್ಥಿಕ ಹಿಂದುಳಿದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸಿರಿಮುಡಿ ದತ್ತಿ ನಿಧಿ ಯೋಜನೆಯಡಿ ಸುಮಾರು ರೂ. 20 ಲಕ್ಷ ಸಹಾಯಧನ ವಿತರಣಾ ಕಾರ್ಯಕ್ರಮ ಅಕ್ಟೋಬರ್ 1, ಆದಿತ್ಯವಾರ ಬೆಳಗ್ಗೆ 10 ಗಂಟೆಗೆ ಪಡುಬಿದ್ರಿ ಬಂಟರ ಭವನದ ಆಶಾ ಪ್ರಕಾಶ್ ಶೆಟ್ಟಿ ಸಭಾಭವನದಲ್ಲಿ ನಡೆಯಲಿದೆ ಎಂದು ಪಡುಬಿದ್ರಿ ಬಂಟರ ಸಂಘದ ಅಧ್ಯಕ್ಷರಾದ ಡಾ| ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು ತಿಳಿಸಿದರು. ಅವರು ಪಡುಬಿದ್ರಿ ಬಂಟರ ಸಂಘದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.