Updated News From Kaup
ಹೆಜಮಾಡಿ : ವಿಶ್ವ ಹಿಂದೂ ಪರಿಷತ್ - 48ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ; ಸಭಾ ಕಾರ್ಯಕ್ರಮ
Posted On: 19-09-2023 09:43PM
ಹೆಜಮಾಡಿ : ವಿಶ್ವ ಹಿಂದೂ ಪರಿಷತ್, ಹೆಜಮಾಡಿ ಇದರ 48ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಸಲುವಾಗಿ ಸೆಪ್ಟೆಂಬರ್ 19ರಂದು ಸಭಾ ಕಾರ್ಯಕ್ರಮ ಜರಗಿತು.
ಉಡುಪಿ : ಮಹಿಳಾ ಮೀಸಲಾತಿ ಮಾಜಿ ಪ್ರಧಾನಿ ದೇವೇಗೌಡರ ಕನಸಿನ ಕೂಸು - ಯೋಗೀಶ್ ವಿ ಶೆಟ್ಟಿ
Posted On: 19-09-2023 09:40PM
ಉಡುಪಿ : ಲೋಕಸಭೆ ಮತ್ತು ರಾಜ್ಯವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡ 33% ಮೀಸಲಾತಿ ನೀಡುವ ವಿಚಾರವನ್ನು 1996ರಲ್ಲಿ ದೇವೇಗೌಡರು ಪ್ರಧಾನ ಮಂತ್ರಿಗಳಾಗಿದ್ದಾಗ ಪ್ರಸ್ತಾವನೆ ಮಾಡಿದ್ದರು. ಇದು ದೇವೇಗೌಡರ ಕನಸಿನ ಕೂಸು. ನಮ್ಮ ನಾಯಕರಾದ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರೂ ಆ ಸಂದರ್ಭ ಲೋಕಸಭೆ ಸದಸ್ಯರಾಗಿದ್ದರು. ನಮ್ಮ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಇದರ ಬಗ್ಗೆ ಪ್ರಸ್ತಾವನೆ ಮಾಡಿದ್ದು ಸಂತೋಷ ತಂದಿರುತ್ತದೆ. ಇದು ಆದಷ್ಟು ಶೀಘ್ರದಲ್ಲಿ ಜಾರಿಗೆ ಬರಲಿ. ಇದು ಅಭಿವೃದ್ಧಿ ಸಮಾಜ ಸುಧಾರಣೆಯ ಹೊಸ ಹೆಜ್ಜೆ ಮಹಿಳಾ ಮೀಸಲಾತಿಗೆ ಮರು ಜೀವ ತಂದದ್ದು ಸಂತಸದ ವಿಚಾರ ಎಂದು ಉಡುಪಿ ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಯೋಗೀಶ್ ವಿ ಶೆಟ್ಟಿಯವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಕಾಪು : ತಾಲೂಕಿನಾದ್ಯಂತ ಸಂಭ್ರಮದ ಗಣೇಶೋತ್ಸವ ಆಚರಣೆ
Posted On: 19-09-2023 12:27PM
ಕಾಪು : ಮೊದಲ ಪೂಜಿತ ದೇವ ಗಣಪತಿಯ ಆರಾಧನಾ ಮಹೋತ್ಸವ ಗಣೇಶ ಚತುರ್ಥಿಯ ಸಂಭ್ರಮವನ್ನು ಕಾಪು ತಾಲೂಕಿನಾದ್ಯಂತ ಗಣೇಶ ಮೂರ್ತಿ ಪ್ರತಿಷ್ಠಾಪನೆಯ ಮೂಲಕ 14 ಕಡೆಗಳಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
ಕಾಪು : ಕಾಲು ಕಳೆದುಕೊಂಡು ಸಹಾಯದ ನಿರೀಕ್ಷೆಯಲ್ಲಿದ್ದ ವ್ಯಕ್ತಿಗೆ ಸಹಾಯಗೈದ ಕುಲಾಲ್ಸ್ ದೋಹಾ ಸದಸ್ಯರು
Posted On: 18-09-2023 11:23PM
ಕಾಪು : ಕಾಲು ಕಳೆದುಕೊಂಡು ಸಹಾಯದ ನಿರೀಕ್ಷೆಯಲ್ಲಿದ್ದ ಕಾಪು ತಾಲೂಕಿನ ಅದಮಾರುವಿನ ರಾಜೇಶ್ ಕುಲಾಲ್ ಅವರ ಮನವಿಗೆ ದೋಹಾ ಕತಾರ್ ಕುಲಾಲ ಮಿತ್ರರು ಸ್ಪಂದಿಸಿ ಅವರಿಗೆ 25 ಸಾವಿರ ರೂಪಾಯಿ ಸಹಾಯ ನೀಡಿದ್ದಾರೆ.
ನಮ್ಮ ನಾಡ ಒಕ್ಕೂಟ - ಕಾಪು ತಾಲೂಕು ಘಟಕದಿಂದ ಸಮಾಜ ಸೇವಕ ಫಾರೂಕ್ ಚಂದ್ರನಗರರಿಗೆ ಸನ್ಮಾನ
Posted On: 18-09-2023 10:35PM
ಕಾಪು : ಮನುಕುಲದ ಸೇವೆಯೆ ಭಗವಂತನ ಸೇವೆ ಎಂಬ ಧ್ಯೇಯ ವಾಕ್ಯವನ್ನು ನಂಬಿಕೊಂಡು ಜಾತಿ ಮತ ಬೇದವಿಲ್ಲದೆ ಸಮಾಜ ಸೇವೆಯಲ್ಲಿ ಜನರಿಗೆ ತನ್ನ ಕೈಯಲ್ಲಿ ಆಗುವ ಸಹಾಯ ಮಾಡುತ್ತ ಉತ್ತಮ ಸಮಾಜ ಸೇವಕರಾಗಿ ಗುರುತಿಸಿ ಅನೇಕ ಸಂಘ ಸಂಸ್ಥೆಗಳಿಂದ ಜಿಲ್ಲಾ ರಾಜ್ಯ ಹಾಗೂ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಪಡೆದ ಫಾರೂಕ್ ಚಂದ್ರನಗರರನ್ನು ನಮ್ಮ ನಾಡ ಒಕ್ಕೂಟ (ರಿ.) ಕಾಪು ತಾಲೂಕು ಘಟಕದಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಪಣಿಯೂರು : ಶೈನಿಂಗ್ ಫ್ರೆಂಡ್ಸ್ ಖಾನ - 4ನೇ ವರ್ಷದ ಹುಲಿವೇಷ
Posted On: 18-09-2023 07:05PM
ಪಣಿಯೂರು : ಇಲ್ಲಿನ ಖಾನ ಶೈನಿಂಗ್ ಫ್ರೆಂಡ್ಸ್ ವತಿಯಿಂದ ಗಣೇಶ ಚತುರ್ಥಿಯ ಸಂದರ್ಭದಲ್ಲಿ 4 ನೇ ವರ್ಷದ ಹುಲಿ ವೇಷ, ಊದು ಸೇವೆ ನಡೆಯಲಿದೆ.
ಕಾಪು : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ದಂಡತೀರ್ಥ ಉಳಿಯಾರಗೋಳಿ : 12ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ
Posted On: 18-09-2023 06:59PM
ಕಾಪು : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ದಂಡತೀರ್ಥ ಉಳಿಯಾರಗೋಳಿ ಇಲ್ಲಿಯ 12ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸೆಪ್ಟೆಂಬರ್ 19, ಮಂಗಳವಾರ ಶ್ರೀ ಬಾವು ಬಬ್ಬರ್ಯ ದೈವಸ್ಥಾನದ ಬಳಿ, ಕೈಪುಂಜಾಲು ಇಲ್ಲಿ ಜರಗಲಿದೆ.
ಪಡುಬಿದ್ರಿ : ಯುವವಾಹಿನಿ ಪಡುಬಿದ್ರಿ ಘಟಕದ ಪದಗ್ರಹಣ ಸಮಾರಂಭ
Posted On: 18-09-2023 05:08PM
ಪಡುಬಿದ್ರಿ : ವ್ಯಕ್ತಿಯೊಬ್ಬ ತನ್ನ ದುರ್ಗುಣಗಳನ್ನು ಬದಲಾಯಿಸಿಕೊಂಡು ಸತ್ಪ್ರಜೆಯಾಗಿ ಬಾಳಿದರೆ ಸಮಾಜದ ಪರಿವರ್ತನೆ ಸಾಧ್ಯ. ಆ ಪರಿವರ್ತನೆಯ ಪಥವನ್ನು ಯುವವಾಹಿನಿಯ ಪ್ರತಿಜ್ಞಾ ವಿಧಿಯಲ್ಲಿ ಸ್ಪಷ್ಟವಾಗಿ ಕಾಣಬಹುದು ಎಂದು ಬೈಂದೂರು ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಹರೀಶ್ ಕೋಟ್ಯಾನ್ ಹೇಳಿದರು. ಅವರು ಯುವವಾಹಿನಿ ಪಡುಬಿದ್ರಿ ಘಟಕದ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಸಮಾರಂಭವನ್ನು ಉದ್ಘಾಟಿಸಿದ ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್ ಅವರು ಅವಿಭಜಿತ ಜಿಲ್ಲೆಯಲ್ಲಿ ವಿನೂತನ ಕಾರ್ಯಕ್ರಮಗಳ ಮೂಲಕ ಜನಮನ ಗೆದ್ದಿರುವ ಯುವವಾಹಿನಿಯ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ಕಾಪು : 33 ನೇ ವರ್ಷದ ಸಂಭ್ರಮದಲ್ಲಿ ಕಳತ್ತೂರು ಗಣೇಶೋತ್ಸವ
Posted On: 18-09-2023 04:50PM
ಕಾಪು : ಇಲ್ಲಿಯ ಕುತ್ಯಾರು ಭಾಗದ ಕಳತ್ತೂರು ಪುಂಚಲಕಾಡು ಇಲ್ಲಿ 33 ನೇ ಗಣೇಶೋತ್ಸವದ ನಿಮಿತ್ತ ಧಾರ್ಮಿಕ ಕಾರ್ಯಕ್ರಮ, 8 ಗಂಟೆಗೆ ಮೆರವಣಿಗೆ ಮುಖೇನ ಮಂಗಳ ಮೂರ್ತಿಯ ಜಲಾದಿವಾಸ ಕಳತ್ತೂರು ಅರಬಿಕಟ್ಟೆ ಬಳಿ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಕಳ : ನಾನಿಲ್ತಾರು ಕುಲಾಲ ಸಂಘದ 35ನೇ ವರ್ಷದ ಮಹಾಸಭೆ, ಆಮಂತ್ರಣ ಪತ್ರಿಕೆ ಬಿಡುಗಡೆ
Posted On: 18-09-2023 04:45PM
ಕಾರ್ಕಳ : ಇಲ್ಲಿಯ ಕುಲಾಲ ಸಂಘ ನಾನಿಲ್ತಾರು ಮುಲ್ಲಡ್ಕ ಮುಂಡ್ಕೂರು ಇದರ ಅಕ್ಟೋಬರ್ 1, ಆದಿತ್ಯವಾರದಂದು ನಡೆಯುವ 35ನೇ ವರ್ಷದ ವಾರ್ಷಿಕ ಮಹಾಸಭೆ, ಶ್ರೀ ಸತ್ಯನಾರಾಯಣ ಪೂಜೆ, ಧ್ವನಿವರ್ಧಕ ಕೊಡುಗೆ, ಅಭಿನಂದನಾ ಕಾರ್ಯಕ್ರಮ, ವೈದ್ಯಕೀಯ ನೆರವು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಸಂಘದ ಅಧ್ಯಕ್ಷರಾದ ಕುಶ ಆರ್ ಮೂಲ್ಯ ಬಿಡುಗಡೆ ಗೊಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
