Updated News From Kaup
ನಾಳೆ (ಜುಲೈ 24) : ಭಾರೀ ಮಳೆ - ಉಡುಪಿ ಜಿಲ್ಲೆಯ ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ
Posted On: 23-07-2023 10:01PM
ಉಡುಪಿ : ಕರಾವಳಿಯಲ್ಲಿ ಭಾರೀ ಮಳೆಯಾಗುತ್ತಿದ್ದು, ನಾಳೆಯೂ ಮಳೆ ಮುಂದುವರೆಯುವ ಸಾಧ್ಯತೆ ಇರುವುದರಿಂದ ಉಡುಪಿ ಜಿಲ್ಲೆಯ ಎಲ್ಲ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪಿಯುಸಿ ತರಗತಿಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಉಡುಪಿ : ಸಾಲುಮರದ ತಿಮ್ಮಕ್ಕನಿಗೆ ಗೌರವಾರ್ಪಣೆ
Posted On: 23-07-2023 04:40PM
ಉಡುಪಿ : ನಮ್ಮ ಮನೆ ನಮ್ಮ ಮರ ತಂಡದಿಂದ ಉಡುಪಿಯ ಬುಡ್ನಾರಿನ ಛಾಯಾನಟ್ ಮನೆಯಲ್ಲಿ ಪದ್ಮಶ್ರೀ ಪುರಸ್ಕತೆ ನಾಡೋಜ ಸಾಲುಮರದ ತಿಮ್ಮಕ್ಕ ಅವರನ್ನು ಜಯಕರ್ ಶೆಟ್ಟಿ ಇಂದ್ರಾಳಿ ಅವರು ಗೌರವಿಸಿದರು.
ಪಡುಬಿದ್ರಿ : ಕಡಲ್ಕೊರೆತದ ಭೀತಿಯಲ್ಲಿ ಎಂಡ್ ಪಾಯಿಂಟ್ ನಲ್ಲಿರುವ ಬ್ಲೂ ಫ್ಲ್ಯಾಗ್ ಬೀಚ್
Posted On: 23-07-2023 04:24PM
ಪಡುಬಿದ್ರಿ : ಅಂತರಾಷ್ಟ್ರೀಯ ಮಾನ್ಯತೆ ಪಡೆದ ಪಡುಬಿದ್ರಿಯ ಎಂಡ್ ಪಾಯಿಂಟ್ ನಲ್ಲಿರುವ ಬ್ಲೂ ಫ್ಲ್ಯಾಗ್ ಬೀಚ್ ಕಡಲ್ಕೊರೆತದ ಭೀತಿಯಲ್ಲಿದೆ. ಈ ನಿಟ್ಟಿನಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.
ಎರ್ಮಾಳು : ಕೆಸರ್ಡ್ ಗೊಬ್ಬು ಕ್ರೀಡಾಕೂಟ
Posted On: 23-07-2023 01:46PM
ಎರ್ಮಾಳು : ಬಂಟರ ಸಂಘ ಪಡುಬಿದ್ರಿ, ಬಂಟ್ಸ್ ವೆಲ್ ಫೇರ್ ಟ್ರಸ್ಟ್, ಬಂಟರ ಮಹಿಳಾ ವಿಭಾಗ, ಯುವ ಬಂಟರ ವಿಭಾಗ ಹಾಗೂ ಬಂಟರ ಕ್ರೀಡಾ ವಿಭಾಗಧ ಆಶ್ರಯದಲ್ಲಿ ಆದಿತ್ಯವಾರ ಎರ್ಮಾಳು ಬರ್ಪಾಣಿ ಜಗನ್ನಾಥ ಶೆಟ್ಟಿಯವರ ಗದ್ದೆಯಲ್ಲಿ ಕೆಸರ್ಡ್ ಗೊಬ್ಬು ಕ್ರೀಡಾ ಕೂಟ ಜರಗಿತು.
ಪಡುಬಿದ್ರಿ : ಅಪಾಯಕ್ಕೆ ಸಿಲುಕಿದ್ದ ಅಪರೂಪದ ಹಾಕ್ಸ್ ಬಿಲ್ ಸೇರಿದಂತೆ ಒಟ್ಟು 6 ಕಡಲಾಮೆಗಳ ರಕ್ಷಣೆ
Posted On: 22-07-2023 06:22PM
ಪಡುಬಿದ್ರಿ : ಬಲೆಗೆ ಸಿಲುಕಿ ಒದ್ದಾಡುತ್ತಾ ಸಮುದ್ರ ತೀರಕ್ಕೆ ಬಂದಿದ್ದ ಹಾಕ್ಸ್ ಬಿಲ್ ಸೇರಿದಂತೆ ಒಟ್ಟು 6 ಕಡಲಾಮೆಗಳನ್ನು ಪಡುಬಿದ್ರಿ ಬ್ಲೂ ಫ್ಲ್ಯಾಗ್ ಸಿಬ್ಬಂದಿ ರಕ್ಷಿಸಿ ಮರಳಿ ಸಮುದ್ರಕ್ಕೆ ಬಿಟ್ಟಿದ್ದಾರೆ.
ಎರ್ಮಾಳು ಬರ್ಪಾಣಿ ಮೂಡಬೆಟ್ಟುವಿನಲ್ಲಿ ಪಿಪಿಸಿ ವಿದ್ಯಾರ್ಥಿಗಳಿಗೆ ಕಂಡಡೊಂಜಿ ದಿನ ಕಾರ್ಯಕ್ರಮ
Posted On: 22-07-2023 06:02PM
ಎರ್ಮಾಳು : ಆದರ್ಶ ಸಂಘಗಳ ಒಕ್ಕೂಟ ಅದಮಾರು, ರಾಷ್ಟ್ರೀಯ ಸೇವಾ ಯೋಜನೆ, ಪೂರ್ಣ ಪ್ರಜ್ಞಾ ಪದವಿಪೂರ್ವ ಕಾಲೇಜು ಅದಮಾರು ಇವರ ಸಂಯುಕ್ತ ಆಶ್ರಯದಲ್ಲಿ ಎರ್ಮಾಳು ಬರ್ಪಾಣಿ ಮೂಡಬೆಟ್ಟುವಿನ ಜಗನ್ನಾಥ ಶೆಟ್ಟಿಯವರ ಗದ್ದೆಯಲ್ಲಿ ಕಂಡಡೊಂಜಿ ದಿನ ಕಾರ್ಯ ಕ್ರಮ ಶನಿವಾರ ಜರಗಿತು. ಕಾರ್ಯಕ್ರಮವನ್ನು ರಾಷ್ಟ್ರೀಯ ಸೇವಾಯೋಜನೆಯ ವಿಭಾಗಾಧಿಕಾರಿ ಸವಿತಾ ಎರ್ಮಾಳು ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡಿ, ಇಂದಿನ ಕಂಡಡೊಂಜಿ ದಿನ ಕಾರ್ಯಕ್ರಮ ಇಂದಿಗೆ ಮಾತ್ರವೇ ಸೀಮಿತ ಆಗದೆ, ಎಂದಿಗೂ ಇದೊಂದು ಪ್ರೇರಣೆಯಾಗಲಿ. ತೆನೆ ಎಷ್ಟು ತುಂಬಿದ್ದರೂ, ಅದು ಬಾಗುತ್ತದೆ. ನಾವು ಕೂಡಾ ಪ್ರಕೃತಿಗೆ, ಭೂಮಿಗೆ ತಲೆ ಬಾಗಲೇಬೇಕೆಂದರು.
ಎರ್ಮಾಳು : 1694ನೇ ಮದ್ಯವರ್ಜನ ಶಿಬಿರಕ್ಕೆ ಚಾಲನೆ
Posted On: 21-07-2023 06:46PM
ಎರ್ಮಾಳು : ಇಲ್ಲಿನ ಜನಾರ್ದನ ಜನ ಕಲ್ಯಾಣ ಸೇವಾ ಸಮಿತಿ ಸಭಾಂಗಣದಲ್ಲಿ ಮುಂದಿನ ಶುಕ್ರವಾರದವರೆಗೆ ನಡೆಯಲಿರುವ 1694ನೇ ಮದ್ಯವರ್ಜನ ಶಿಬಿರವನ್ನು ಎರ್ಮಾಳು ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಅಶೋಕ್ ರಾಜ್ ಎರ್ಮಾಳು ಬೀಡು ಉದ್ಘಾಟಿಸಿದರು. ಅವರು ಈ ಸಂದರ್ಭ ಮಾತನಾಡಿ, ಧರ್ಮಸ್ಥಳದ ಧರ್ಮಾಧಿಕಾರಿಗಳಾದ ರಾಜರ್ಷಿ ಡಾ|ಡಿ. ವೀರೇಂದ್ರ ಹೆಗ್ಗಡೆ ಅವರು ಮದ್ಯವರ್ಜನ ಶಿಬಿರ ಆಯೋಜಿಸುವಲ್ಲಿ ಹೆಚ್ಚು ಶ್ರಮ ತೆಗೆದುಕೊಂಡಿದ್ದ ಯೋಜನೆಯಾಗಿದೆ. ಮದ್ಯ ವ್ಯಸನಿಗಳಿಂದ ಕುಟುಂಬವು ವಿನಾಶದಂಚಿಗೆ ವಾಲುತ್ತದೆ. ಮದ್ಯದ ಚಟವನ್ನು ಬಿಡುವ ಉತ್ಕಟ ಇಚ್ಛಾ ಶಕ್ತಿಯನ್ನು ವ್ಯಸನಿಯು ತಳೆದಲ್ಲಿ ತನ್ನ ಹಾಗೂ ಮನೆ ಮಂದಿಯಿಂದ ಪ್ರೀತ್ಯಾದರದ ಜೊತೆಗೆ ಸಮಾಜದಲ್ಲಿ ಗೌರವಯುತ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಪುತ್ತಿಗೆ ಮಠಾಧೀಶರನ್ನು ಭೇಟಿಯಾದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ
Posted On: 21-07-2023 04:56PM
ಕಾಪು : ಪುತ್ತಿಗೆ ಮಠದ ಶ್ರೀಗಳಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರನ್ನು ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಕೆಂಗೇರಿ ಉಪನಗರ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಶುಕ್ರವಾರ ಭೇಟಿಯಾಗಿ ಆಶೀರ್ವಾದ ಪಡೆದರು.
ಉಡುಪಿ : ಫಲಿಸಿದ ಹೋರಾಟ ; ನಿಖಿತಾ ಕುಟುಂಬಕ್ಕೆ ಸಾಂತ್ವಾನ ಧನ
Posted On: 20-07-2023 07:35PM
ಉಡುಪಿ : ನಿಖಿತಾ ಪರ ಜರುಗಿದ ನ್ಯಾಯಯುತ ಹೋರಾಟಕ್ಕೆ ಜಯ ಲಭಿಸಿದಂತಾಗಿದೆ. ಜೋರು ಮಳೆಯನ್ನು ಲೆಕ್ಕಿಸಿದೆ ನ್ಯಾಯದ ಕೂಗನ್ನು ಎಬ್ಬಿಸಿದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್, ಉಡುಪಿ ಜಿಲ್ಲೆಯ ಸರ್ವ ಕುಲಾಲ ಸಮುದಾಯ ಸಂಘಟನೆಗಳು, ಪ್ರಜ್ಞಾವಂತ ಹೋರಾಟದ ಮನಸ್ಸುಗಳ ನಿರಂತರ ಹೋರಾಟದ ಫಲಶ್ರುತಿಯಾಗಿ ಉಡುಪಿಯ ಖಾಸಗಿ ಅಸ್ಪತ್ರೆ ನಿಖಿತಾ ಕುಟುಂಬಕ್ಕೆ ಪರಿಹಾರ ಧನವನ್ನು ನೀಡಿದೆ.
ಕಾರ್ಕಳ : ಕರಾಟೆಯಲ್ಲಿ ನಿಟ್ಟೆಯ ಅನುಷ್ ಮತ್ತು ಆಯುಷ್ ಸಾಧನೆ
Posted On: 20-07-2023 05:25PM
ಕಾರ್ಕಳ : ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಪಂದ್ಯಾಟದಲ್ಲಿ ನಿಟ್ಟೆಯ ಅನುಷ್ ಅರುಣ್ ಕುಮಾರ್, ಆಯುಷ್ ಅರುಣ್ ಕುಮಾರ್ ಸಾಧನೆಗೈದಿದ್ದಾರೆ.
