Updated News From Kaup

ಅಮ್ಮೆಂಬಳ ಬಾಳಪ್ಪ ಜನ್ಮ ಶತಾಬ್ದಿ : ಪೂರ್ವಭಾವಿ ಸಭೆ

Posted On: 09-01-2023 08:40PM

ಮಂಗಳೂರು : ಸ್ವಾತಂತ್ರ್ಯಯೋಧ ಡಾ. ಅಮ್ಮೆಂಬಳ ಬಾಳಪ್ಪ ಜನ್ಮಶತಾಬ್ದಿ ಸಮಾರಂಭದ ಪೂರ್ವಭಾವಿ ಸಭೆ ಬಿ.ಸಿ.ರೋಡು ಸಂಚಯಗಿರಿಯ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿ ಜನವರಿ 8ರಂದು ಜರಗಿತು.

ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸ್ವಾತಂತ್ರ್ಯಯೋಧ ಡಾ. ಅಮ್ಮೆಂಬಳ ಬಾಳಪ್ಪ ಸ್ಮಾರಕ ಸೇವಾ ಪ್ರತಿಷ್ಠಾನ, ಬಂಟ್ವಾಳ ಇದರ ಅಧ್ಯಕ್ಷರೂ ಹಿರಿಯ ಪತ್ರಕರ್ತರೂ ಆದ ಅಮ್ಮೆಂಬಳ ಆನಂದ ಡಾ. ಅಮ್ಮೆಂಬಳ ಬಾಳಪ್ಪ ಜನ್ಮಶತಾಬ್ದಿ ಸಮಾರಂಭದ ರೂಪುರೇಷೆಗಳನ್ನು ವಿವರಿಸಿದರು.

ಸಭೆಯಲ್ಲಿ ಡಾ. ಅಮ್ಮೆಂಬಳ ಬಾಳಪ್ಪ ಜನ್ಮ ಶತಾಬ್ದಿ ಸಮಾರಂಭಕ್ಕೆ ಅತಿಥಿ ಗಣ್ಯರನ್ನು ಆಹ್ವಾನಿಸುವುದು, ದೇಶಭಕ್ತಿಗೀತೆ ಸ್ಪರ್ಧೆ ಆಯೋಜನೆ, ಅಮ್ಮೆಂಬಳ ಬಾಳಪ್ಪರ ಸಂಸ್ಮರಣಾರ್ಥ ಸಂಚಿಕೆ ಬಿಡುಗಡೆ, ಸಾಧಕರಿಗೆ ಸನ್ಮಾನ ಮುಂತಾದ ವಿಷಯಗಳ ಬಗ್ಗೆ ಸಮಾಲೋಚನೆ ನಡೆಯಿತು. ಶತಾಬ್ದಿ ಸಮಾರಂಭವನ್ನು ಸಂಪೂರ್ಣ ಯಶಸ್ವಿ ಗೊಳಿಸುವುದಕ್ಕಾಗಿ ವಿವಿಧ ಸಮಿತಿಗಳನ್ನು ರಚಿಸಲಾಯಿತು.

ಡಾ. ಅಮ್ಮೆಂಬಳ ಬಾಳಪ್ಪ ಜನ್ಮಶತಾಬ್ದಿ ಸಮಾರಂಭ ಸಮಿತಿಗೆ ಹಿರಿಯ ಪತ್ರಕರ್ತ ಅಮ್ಮೆಂಬಳ ಆನಂದ ಅವರನ್ನು ಗೌರವಾಧ್ಯಕ್ಷರನ್ನಾಗಿ, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಮುಖ್ಯಸ್ಥ ಪ್ರೊ. ತುಕಾರಾಮ ಪೂಜಾರಿ ಅವರನ್ನು ಅಧ್ಯಕ್ಷರನ್ನಾಗಿ, ಪುಂಡರೀಕಾಕ್ಷ ಯು. ಕೈರಂಗಳ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ, ಉಮೇಶ್ ಪಿ.ಕೆ. ನಾಗಲಚ್ಚಿಲು ಅವರನ್ನು ಕೋಶಾಧಿಕಾರಿಯನ್ನಾಗಿ, ಮಂಜು ವಿಟ್ಲ ಅವರನ್ನು ಪ್ರಧಾನ ಸಂಯೋಜಕರನ್ನಾಗಿ ಹಾಗೂ ಡಾ.ಆಶಾಲತಾ ಸುವರ್ಣ, ಡಾ.ರಶ್ಮಿ ಅಮ್ಮೆಂಬಳ, ರತ್ನಾವತಿ, ಪ್ರಸಾದ್ ಕುಮಾರ್ ಮಾರ್ನಬೈಲು, ಡಾ. ದುಗ್ಗಪ್ಪ ಕಜೆಕಾರು ಅವರನ್ನು ಸಂಪಾದಕ ಮಂಡಳಿಗೆ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ನಿವೃತ್ತ ಯೋಧ ಡಿ. ಚಂದಪ್ಪ ಮೂಲ್ಯ, ಭೋಜ ಅಡ್ಯಾರ್, ಮಯೂರ್ ಉಳ್ಳಾಲ್, ರವೀಂದ್ರನಾಥ, ತೇಜಸ್ವಿರಾಜ್, ಶ್ರೀರಾಮ ದಿವಾಣ, ಪಾಂಡುರಂಗ ನಾಯಕ್, ಸದಾನಂದ ಬಂಗೇರ ಮುಡಿಪು, ಸುರೇಶ್ ಬಂಗೇರ, ದಾಮೋದರ ಸಾಲ್ಯಾನ್ ಸಂಚಯಗಿರಿ, ಜನಾರ್ದನ ಕುಲಾಲ್, ಕಿರಣ್ ಅಟ್ಲೂರು, ಸದಾಶಿವ ಕುಲಾಲ್, ಸಿ. ಮುತ್ತಪ್ಪ ಪೂಜಾರಿ, ಕೇಶವ ಮಾಸ್ಟರ್ ಮಾರ್ನಬೈಲು, ಪ್ರದೀಪ್ ಅತ್ತಾವರ್, ಎ. ಶಿವಪ್ಪ ಬಿ.ಸಿ.ರೋಡು ಮೊದಲಾದವರು ಉಪಸ್ಥಿತರಿದ್ದರು. ಉಮೇಶ್ ಪಿ. ಕೆ. ಸ್ವಾಗತಿಸಿದರು ಮತ್ತು ದಾಮೋದರ್ ಬಿ. ಎಂ. ವಂದಿಸಿದರು.

ಕುಲಾಲ ಸಮಾಜ ಸೇವಾ ಸಂಘ, ಮಹಿಳಾ ಘಟಕ ಬೆಳಪು : ವಾರ್ಷಿಕ ಮಹಾಸಭೆ, ಸನ್ಮಾನ, ವಿದ್ಯಾರ್ಥಿ ವೇತನ ವಿತರಣೆ

Posted On: 09-01-2023 08:18PM

ಕಾಪು : ಕುಲಾಲ ಸಮಾಜ ಸೇವಾ ಸಂಘ (ರಿ ) ಬೆಳಪು ಇದರ ಸಂಘದ ವಾರ್ಷಿಕ ಮಹಾಸಭೆಯು ಜನವರಿ 08 ರಂದು ಬೆಳಪು ವ್ಯವಸಾಯ ಸೇವಾ ಸಹಕಾರಿ ಸಂಘ (ನಿ.) ಪಣಿಯೂರು ಇದರ ಸಭಾಂಗಣದಲ್ಲಿ ಜರಗಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೆಳಪು ವ್ಯವಸಾಯ ಸೇವಾ ಸಂಘದ ಅಧ್ಯಕ್ಷರಾದ ಡಾ|| ದೇವಿಪ್ರಸಾದ್ ಶೆಟ್ಟಿ ಮುಂದಿನ ದಿನಗಳಲ್ಲಿ ಬೆಳಪುವಿನಲ್ಲಿ ಆರಂಭ ಆಗುವ ಕಾರ್ಖಾನೆಗಳಲ್ಲಿ ಕುಲಾಲ ಸಮುದಾಯದವರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸಿಕೊಡುವುದಲ್ಲದೆ ಕುಲಾಲ ಸಮುದಾಯ ಭವನ ನಿರ್ಮಾಣಕ್ಕೆ ಸ್ಥಳದ ವ್ಯವಸ್ಥೆಯನ್ನು ಮಾಡಿಕೊಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭ ಉಡುಪಿ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರಾದ ಐತು ಕುಲಾಲ್ ಕನ್ಸಾನ, ಗಣೇಶ್ ಪಂಜಿಮಾರು ಮತ್ತು ಸಂಘದ ಹಿರಿಯರಾದ ಕುಟ್ಟಿ ಮೂಲ್ಯ ಇವರನ್ನು ಸನ್ಮಾನಿಸಲಾಯಿತು. ಕಲಿಕೆಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.

ಸುಧಾಕರ್ ಕುಲಾರ್ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಂದೀಪ್ ಮೂಲ್ಯ, ಗೀತಾ ವೈ,ಉಮೇಶ್ ಕುಲಾಲ್ ಉಪಸ್ಥಿತರಿದ್ದರು. ಕೋಶಾಧಿಕಾರಿ ಹರೀಶ್ ಕುಲಾಲ್ ವಾರ್ಷಿಕ ವರದಿ ಮಂಡಿಸಿದರು. ಮಲ್ಲಿಕಾ ಉಮೇಶ್ ಮಹಿಳಾ ಘಟಕದ ವರದಿಯನ್ನು ಮಂಡಿಸಿದರು. ಜನಾರ್ದನ್ ಕುಲಾಲ್ ಸ್ವಾಗತಿಸಿದರು. ಸತೀಶ್ ಕುಲಾಲ್ ಕುಂಜೂರು ಕಾರ್ಯಕ್ರಮ ನಿರೂಪಿಸಿದರು. ಸುಜಯ ಕುಲಾಲ್ ವಂದಿಸಿದರು.

ಬಂಟಕಲ್ಲು : ಗುರುಮೆಚ್ಚುವ ಶಿಷ್ಯರಾಗಿ ಬೆಳೆಯಬೇಕು - ಶಂಕರ್ ನಾಯಕ್

Posted On: 08-01-2023 06:14PM

ಬಂಟಕಲ್ಲು : ಶ್ರೀ ಅಯ್ಯಪ್ಪ ಭಕ್ತ ವೃಂದ ಇದರ ಆಶ್ರಯದಲ್ಲಿ ಶ್ರೀ ಸ್ವಾಮಿ ಚಂಡೆ ಬಳಗವನ್ನು ಬಂಟಕಲ್ಲು ಶ್ರೀ ಸಾರ್ವಜನಿಕ ಗಣೇಶೋತ್ಸವ ವೇದಿಕೆಯ ಗೌರವಾಧ್ಯಕ್ಷ ಶಂಕರ್ ನಾಯಕ್ ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಅವರು ಗುರು ಮೆಚ್ಚುವ ಶಿಷ್ಯರಾಗಿ ಬೆಳೆಯಬೇಕೆಂದು ಅಭಿಪ್ರಾಯಪಟ್ಟರು.

ಬಳಗದ ಅಧ್ಯಕ್ಷರಾದ ಮಾಧವ ಕಾಮತ್ ರವರು ಗುರುಗಳಾದ ನಿತಿನ್ ಕಟಪಾಡಿಯವರಿಗೆ ಶಿಷ್ಯ ವೃಂದದ ಪರವಾಗಿ ಗುರುಕಾಣಿಕೆ ಸಮರ್ಪಿಸಿದರು.

ಶಿಬಿರದ ಮಂಜುನಾಥ್ ಗುರುಸ್ವಾಮಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಚಂಡೆ ಬಳಗದ ಸದಸ್ಯರು ಪ್ರಾರ್ಥಿಸಿದರು. ಹೇರೂರು ಮಾಧವಾಚಾರ್ಯರವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಜನವರಿ 9 : CITU -ಮಂಗಳೂರಿನಲ್ಲಿ ರಾಜ್ಯ ಮಟ್ಟದ ವಿಚಾರ ಸಂಕಿರಣ

Posted On: 08-01-2023 04:03PM

ಮಂಗಳೂರು : ಅವಿಭಜಿತ ದ.ಕ. ಜಿಲ್ಲೆ ಸೇರಿದಂತೆ ಕರಾವಳಿ ಕರ್ನಾಟಕದ ಸಮಗ್ರ ಅಭಿವೃದ್ಧಿಯ ಕಣ್ಣೋಟವನ್ನು ಮುಂದಿಟ್ಟುಕೊಂಡು ಕೃಷಿರಂಗಕ್ಕೆ ಪ್ರೋತ್ಸಾಹ, ಪರಿಸರಸ್ನೇಹಿ ಕೈಗಾರಿಕೆಗಳ ಸ್ಥಾಪನೆ,ಸ್ಥಳೀಯ ಯುವಜನರಿಗೆ ಉದ್ಯೋಗ, ಭವಿಷ್ಯದ ಯೋಜನೆಗಾಗಿ ಜನವರಿ 9, ಸೋಮವಾರ ಬೆಳಿಗ್ಗೆ 10ಕ್ಕೆ ಮಂಗಳೂರು ಪುರಭವನದಲ್ಲಿ ಕರಾವಳಿ ಕರ್ನಾಟಕ ; ಕೃಷಿ ಕೈಗಾರಿಕೆ ಉದ್ಯೋಗ ಜನಪರ ಪರ್ಯಾಯ ನೀತಿಗಳು ಎಂಬ ವಿಷಯದಲ್ಲಿ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ.

CITU ರಾಷ್ಟ್ರ ಸಮ್ಮೇಳನದ ಅಂಗವಾಗಿ ಆಯೋಜಿಸಲಾಗಿರುವ ಇಂತಹ ಮಹತ್ವಪೂರ್ಣ ವಿಚಾರ ಸಂಕಿರಣವನ್ನು ಕರ್ನಾಟಕ ರಾಜ್ಯ ಯೋಜನಾ ಆಯೋಗದ ಮಾಜಿ ಸದಸ್ಯರು ಹಾಗೂ ನಾಡಿನ ಖ್ಯಾತ ಆರ್ಥಿಕ ತಜ್ಞರಾದ ಡಾ. ಟಿ. ಆರ್. ಚಂದ್ರಶೇಖರ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಹಂಪಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಡಾ. ಎಂ.ಚಂದ್ರ ಪೂಜಾರಿ, CITU ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಶೆಟ್ಟಿಯವರು ಭಾಗವಹಿಸಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾದ ಯಶವಂತ ಮರೋಳಿಯವರು ವಹಿಸಲಿದ್ದಾರೆ. ಕಾರ್ಯಕ್ರಮದ ಪ್ರಾರಂಭದಲ್ಲಿ ಜಿಲ್ಲೆಯ ಖ್ಯಾತ ಗಾಯಕರಾದ ಮೇಘನಾ ಕುಂದಾಪುರ, ಹುಸೈನ್ ಕಾಟಿಪಳ್ಳ, ಹೇಮಾ ಪಚ್ಚನಾಡಿ, ಇಸ್ಮಾಯಿಲ್ ಉಳ್ಳಾಲ ಇವರಿಂದ ಸೌಹಾರ್ದ ಗೀತಗಾಯನ ಕಾರ್ಯಕ್ರಮ ಜರುಗಲಿದೆ.

ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿ ನಡೆಯುವ ಈ ವಿಚಾರ ಸಂಕಿರಣದಲ್ಲಿ ಜಿಲ್ಲೆಯ ಪ್ರಜ್ಞಾವಂತರು,ವಿದ್ಯಾರ್ಥಿ ಯುವಜನರು ಮಹಿಳೆಯರು, ಮಧ್ಯಮ ವರ್ಗದ ಜನತೆ ಸೇರಿದಂತೆ ಸರ್ವ ವಿಭಾಗದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರಾದ ಜೆ. ಬಾಲಕೃಷ್ಣ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಉಡುಪಿ : ತುಳುಕೂಟ ಉಡುಪಿ - ತುಳು ಭಾವಗೀತೆ ಗಾಯನ

Posted On: 08-01-2023 12:11PM

ಉಡುಪಿ : ತುಳುಕೂಟ ಉಡುಪಿ (ರಿ.) ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಇವರ ಸಹಯೋಗದಲ್ಲಿ ದಿ.ನಿಟ್ಟೂರು ಸಂಜೀವ ಭಂಡಾರಿ ಸ್ಮರಣಾರ್ಥ ತುಳು ಭಾವಗೀತೆ ಗಾಯನ ಭಾನುವಾರ ಉಡುಪಿ ಎಂ.ಜಿ.ಎಂ. ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಜರಗಿದ ಕಾರ್ಯಕ್ರಮವನ್ನು ಉಡುಪಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ವೀಣಾ ಬಿ. ಎಸ್ ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಅವರು ಯಾವುದೇ ಕಾರ್ಯ ಮಾಡುವಾಗ ಹೃದಯವಂತಿಕೆಯಿಂದ ಮಾಡಿದಾಗ ಮಾತ್ರ ಜನರಿಗೆ ತಲುಪಲು ಸಾಧ್ಯ. ಬಂದು ಹೋದ ಅಧಿಕಾರಿಯಾಗದೆ ಜನರಿಗಾಗಿ ದುಡಿಯಬೇಕೆಂದಿದ್ದೇನೆ. ಉಡುಪಿ ಮಂಗಳೂರಿನಲ್ಲಿ ಪ್ರೀತಿ, ವಿಶ್ವಾಸ, ಶಿಸ್ತು ಕಾಣಬಹುದು. ಇಲ್ಲಿನ ತುಳು ಭಾಷೆ ನನಗೂ ಕಲಿಯಬೇಕು. ಮುಂದಿನ ದಿನದಲ್ಲಿ ಖಂಡಿತವಾಗಿಯೂ ಕಲಿಯುತ್ತೇನೆ. ತುಳು ಭಾವಗೀತೆ ಗಾಯನದಲ್ಲಿ ಭಾಗವಹಿಸುವ ಎಲ್ಲಾ ಸ್ಪರ್ಧಿಗಳಿಗೂ ಶುಭಾಶಯಗಳು ಎಂದರು.

ತುಳು ಕೂಟದ ವತಿಯಿಂದ ಅಪರ ಜಿಲ್ಲಾಧಿಕಾರಿಯವರನ್ನು ಸಮ್ಮಾನಿಸಲಾಯಿತು. ಅತಿಥಿಗಳಾಗಿ ಉಡುಪಿಯ ಚಾರ್ಟರ್ಡ್ ಅಕೌಂಟೆಂಟ್ ಸಿ ಎ ಜೀವನ್ ಕುಮಾರ್, ದುಬೈಯ ಕ್ರಿಯಾತ್ಮಕ ನಿರ್ದೇಶಕರಾದ ಬಿ. ಕೆ. ಗಣೇಶ್ ರೈ, ಮಲ್ಪೆಯ ಯುವ ಉದ್ಯಮಿ ಹರೀಶ್ ಶ್ರೀಯಾನ್, ಶ್ರೀರಸ್ತು ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ (ಲಿ.) ಉಡುಪಿಯ ಅಧ್ಯಕ್ಷರಾದ ರಾಮ್ ವಿ ಕುಂದರ್, ಮಾಡೆಲಿಂಗ್ ಕ್ಷೇತ್ರದಲ್ಲಿ ಗೌರವ ಡಾಕ್ಟರೇಟ್ ಪುರಸ್ಕೃತರಾದ ವಿದ್ಯಾ ಸರಸ್ವತಿ, ಪ್ರೈಮ್ ಟಿವಿ ನಿರ್ದೇಶಕರಾದ ರೂಪೇಶ್ ವಿ.ಕಲ್ಮಾಡಿ, ಗಂಗಾಧರ ಕಿದಿಯೂರು ಉಪಸ್ಥಿತರಿದ್ದರು.

ಜೂನಿಯರ್ ಮತ್ತು ಸೀನಿಯರ್ ವಿಭಾಗದಲ್ಲಿ ತುಳು ಭಾವಗೀತೆ ಗಾಯನ ಜರಗಿತು. ತೀರ್ಫುಗಾರರಾಗಿ ಜಯಶ್ರೀ ಕೋಟ್ಯಾನ್, ಭಾರತಿ, ರವಿಶಂಕರ್ ಸಹಕರಿಸಿದರು. ತುಳುಕೂಟ ಉಡುಪಿಯ ಅಧ್ಯಕರಾದ ಬಿ. ಜಯಕರ್ ಶೆಟ್ಟಿ ಇಂದ್ರಾಳಿ ಸ್ವಾಗತಿಸಿದರು. ಸಂಗೀತ ವಸಂತ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮ ಸಂಚಾಲಕ ಪ್ರಕಾಶ್ ಸುವರ್ಣ ವಂದಿಸಿದರು.

ಜನವರಿ 8 : ತುಳುಕೂಟ ಉಡುಪಿ ವತಿಯಿಂದ ತುಳು ಭಾವಗೀತೆ ಗಾಯನ

Posted On: 07-01-2023 04:14PM

ಉಡುಪಿ : ತುಳುಕೂಟ ಉಡುಪಿ (ರಿ.) ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಇವರ ಸಹಯೋಗದಲ್ಲಿ ದಿ.ನಿಟ್ಟೂರು ಸಂಜೀವ ಭಂಡಾರಿ ಸ್ಮರಣಾರ್ಥ ತುಳು ಭಾವಗೀತೆ ಗಾಯನ ಜನವರಿ 8, ಭಾನುವಾರ ಬೆಳಗ್ಗೆ 9 ಗಂಟೆಗೆ ಉಡುಪಿ ಎಂ.ಜಿ.ಎಂ. ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಜರಗಲಿದೆ.

ಕಾರ್ಯಕ್ರಮವನ್ನು ಉಡುಪಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿ, ವೀಣಾ ಬಿ. ಎಸ್ ಉದ್ಘಾಟಿಸಲಿದ್ದಾರೆ.

ಅತಿಥಿಗಳಾಗಿ ಉಡುಪಿಯ ಚಾರ್ಟರ್ಡ್ ಅಕೌಂಟೆಂಟ್ ಸಿ ಎ ಜೀವನ್ ಕುಮಾರ್, ದುಬೈಯ ಕ್ರಿಯಾತ್ಮಕ ನಿರ್ದೇಶಕರಾದ ಬಿ. ಕೆ. ಗಣೇಶ್ ರೈ, ಮಲ್ಪೆಯ ಯುವ ಉದ್ಯಮಿ ಹರೀಶ್ ಶ್ರೀಯಾನ್, ಶ್ರೀರಸ್ತು ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ (ಲಿ.) ಉಡುಪಿಯ ಅಧ್ಯಕ್ಷರಾದ ರಾಮ್ ವಿ ಕುಂದರ್, ಮಾಡೆಲಿಂಗ್ ಕ್ಷೇತ್ರದಲ್ಲಿ ಗೌರವ ಡಾಕ್ಟರೇಟ್ ಪುರಸ್ಕೃತರಾದ ವಿದ್ಯಾ ಸರಸ್ವತಿ, ಪ್ರೈಮ್ ಟಿವಿ ನಿರ್ದೇಶಕರಾದ ರೂಪೇಶ್ ವಿ.ಕಲ್ಮಾಡಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಳುಕೂಟ ಉಡುಪಿ (ರಿ.) ಇದರ ಅಧ್ಯಕ್ಷರಾದ ಬಿ. ಜಯಕರ್ ಶೆಟ್ಟಿ ಇಂದ್ರಾಳಿ ವಹಿಸಲಿದ್ದಾರೆ ಎಂದು ಕಾರ್ಯಕ್ರಮದ ಸಂಚಾಲಕರಾದ ಪ್ರಕಾಶ್ ಸುವರ್ಣ ಕಟಪಾಡಿ ತಿಳಿಸಿದ್ದಾರೆ.

ಜನವರಿ 8 : ಪಡುಬಿದ್ರಿ ಬ್ಯಾಡ್ಮಿಂಟನ್ ಕ್ಲಬ್ - ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಪಿಬಿಸಿ ಟ್ರೋಫಿ 2023

Posted On: 07-01-2023 03:52PM

ಪಡುಬಿದ್ರಿ : ಇಲ್ಲಿನ ಪಡುಬಿದ್ರಿ ಬ್ಯಾಡ್ಮಿಂಟನ್ ಕ್ಲಬ್ ಅರ್ಪಿಸುವ ದಿವಂಗತ ಲೋಹಿತಾಕ್ಷ ಸುವರ್ಣ ಸ್ಮರಣಾರ್ಥ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಪಿಬಿಸಿ ಟ್ರೋಫಿ 2023 ಇದರ ಉದ್ಘಾಟನೆ ಜನವರಿ 8, ಆದಿತ್ಯವಾರ ಬೆಳಿಗ್ಗೆ 8:30 ಕ್ಕೆ ಹಳೆಯಂಗಡಿಯ ಟೋರ್ಪೆಡೋಸ್ ಸ್ಫೋಟ್೯್ಸ ಕ್ಲಬ್ ನ ಒಳಾಂಗಣ ಶಟಲ್ ಕೋಟ್೯ ಇಲ್ಲಿ ಜರಗಲಿದೆ.

8 ತಂಡಗಳು, 64 ಆಟಗಾರರು ಭಾಗವಹಿಸಲಿದ್ದಾರೆ. ಪ್ರಥಮ ಬಹುಮಾನ ರೂ.7,777 ಮತ್ತು ದ್ವಿತೀಯ ಬಹುಮಾನ ರೂ.5,555 ಜೊತೆಗೆ ಪಿಬಿಸಿ ಟ್ರೋಫಿ ಇರಲಿದೆ. ಬೆಸ್ಟ್ ಎಮರ್ಜಿಂಗ್ ಪ್ಲೇಯರ್ ಮತ್ತು ಬೆಸ್ಟ್ ಆಲ್ರೌಂಡರ್ ಪ್ರಶಸ್ತಿ ಇರಲಿದೆ.

ಕಾರ್ಯಕ್ರಮವನ್ನು ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಉದ್ಘಾಟಿಸಲಿದ್ದು, ಅತಿಥಿಗಳಾಗಿ ಡಿ ಎಸ್ ಅಬ್ದುಲ್ ರೆಹಮಾನ್, ನವೀನ್ಚಂದ್ರ ಶೆಟ್ಟಿ, ವೈ ಸುಧೀರ್ ಕುಮಾರ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಜಿತೇಂದ್ರ ಜೆ ಶೆಟ್ಟಿ, ಸಂತೋಷ್ ಕುಮಾರ್ ಶೆಟ್ಟಿ, ಜಿತೇಂದ್ರ ಫುರ್ಟಾಡೊ, ಅಬ್ದುಲ್ ಅಝೀಝ್, ಗೀತಾ ಅರುಣ್ ಭಾಗವಹಿಸಲಿದ್ದಾರೆ. ಪಡುಬಿದ್ರಿ ಬ್ಯಾಡ್ಮಿಂಟನ್ ಕ್ಲಬ್ ನ ಅಧ್ಯಕ್ಷರಾದ ವೈ ಸುಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ.

ತಂಡಗಳು : ನವೀನ್ ಎನ್ ಶೆಟ್ಟಿ ಮಾಲೀಕತ್ವದ ಮೋಹಿತ್ ಸ್ಮಾಶರ್ಸ್, ಕಪೀಲ್ ಕುಮಾರ್ ರವರ ಮಾಹಿ ವಾರಿಯಸ್೯, ನಸ್ರುಲ್ಲರವರ ಟೀಮ್ ಸಿಗ್ನೇಚರ್, ದೀಕ್ಷಿತ್ ರವರ ವಿಹಾನ್ ಗ್ಲಾಡಿಯೇಟರ್, ಶಂಕರ್ ಕಂಚಿನಡ್ಕ ಇವರ ಯಶ್ ವಾರಿಯಸ್೯, ಕೃಷ್ಣ ಬಂಗೇರರ ಯನ್ಶ್ ರಿಯಲ್ ಫೈಟಸ್೯, ಅನ್ವರ್ ಅಹ್ಮದ್ ರ ಕ್ಲಬ್ ಎನ್ಫಿಗೊ, ಸಿರಾಜ್ ರವರ ಓಶಿಯನ್ ವಾರಿಯಸ್೯ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ನಲ್ಲಿ ಭಾಗವಹಿಸಲಿದೆ ಎಂದು ಪಡುಬಿದ್ರಿ ಬ್ಯಾಡ್ಮಿಂಟನ್ ಕ್ಲಬ್ ನ ಕಾರ್ಯದರ್ಶಿ ರಮೀಝ್ ಹುಸೈನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪಡುಬಿದ್ರಿ : ಕಾಂತಾರ ಸಿನೆಮಾದಂತೆ ಕಾರ್ಣಿಕ ತೋರಿದ ದೈವ

Posted On: 07-01-2023 12:06PM

ಪಡುಬಿದ್ರಿ : ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪಡುಬಿದ್ರಿಯ ಪಡುಹಿತ್ಲುವಿನಲ್ಲಿ ಸುಮಾರು 500 ವರ್ಷಗಳ ಇತಿಹಾಸವುಳ್ಳ ಊರ ದೈವವಾಗಿ ಕಾಲಕಾಲಕ್ಕೆ ತಂಬಿಲ, ನೇಮಾದಿ ಕಾರ್ಯಗಳು ನಡೆಯುತ್ತಿದ್ದ ಜಾರಂದಾಯ ಬಂಟ ದೈವಸ್ಥಾನದಲ್ಲಿ ಇದೀಗ ಅಧಿಕಾರದ ವ್ಯಾಮೋಹದಿಂದ ಒಂದು ವಾರ್ಷಿಕ ನೇಮೋತ್ಸವ ಆಗುವಲ್ಲಿ ಎರಡು ನೇಮವೇ ಎಂಬಂತಾಗಿದೆ.

ಈಗಾಗಲೇ ಊರಿನ ಹತ್ತು ಸಮಸ್ತರ ಸಮ್ಮುಖದಲ್ಲಿ ಸಮಿತಿಯಿದ್ದು ಅದರ ಅಧ್ಯಕ್ಷರಾಗಿದ್ದ ಪ್ರಕಾಶ್ ಶೆಟ್ಟಿ ಅಧಿಕಾರ ಅವಧಿ ಮುಗಿದಿತ್ತು. ಆದರೆ ಅಧಿಕಾರ ಅವಧಿ ಮುಗಿದ ಕೂಡಲೇ ಟ್ರಸ್ಟ್ ಮಾಡುವ ಇರಾದೆಯಿಂದ ಸಾನದ ಮನೆಯ ಗುರಿಕಾರ ಜಯ ಪೂಜಾರಿಯವರನ್ನು ಅಧ್ಯಕ್ಷರನ್ನಾಗಿಸಿಕೊಂಡು ಒಟ್ಟು 5 ಮಂದಿಯ ಟ್ರಸ್ಟ್ ರಚನೆಯಾಗುತ್ತದೆ. ಆ ಮೂಲಕ ದೈವಸ್ಥಾನದ ಆಡಳಿತ ಚುಕ್ಕಾಣಿ ಹಿಡಿಯಲು ಮುಂದಾಗುತ್ತದೆ. ಜನವರಿ 7ರಂದು ನೇಮದ ದಿನ ನಿಗದಿಯಾಗುತ್ತಿದ್ದಂತೆ ಟ್ರಸ್ಟ್ ತಂಡವು ಕೋಟ್೯ ಮೊರೆ ಹೋಗಿ ಡಿಸೆಂಬರ್ 23 ರಂದು ತಡೆಯಾಜ್ಞೆ ತರುತ್ತದೆ. ಮರುದಿನ ಡಿಸೆಂಬರ್ 24ರಂದು ಟ್ರಸ್ಟ್ ಸದಸ್ಯರೋರ್ವರ ಮನೆಯ ದೈವಸ್ಥಾನದಲ್ಲಿ ತಂಬಿಲದಂದು ಜಯಪೂಜಾರಿ ಎಲ್ಲರ ಎದುರು ಹಠತ್ತಾಗಿ ಕುಸಿದು ಸಾವನ್ನಪ್ಪುತ್ತಾರೆ. ಇದು ದೈವ ಕಾರ್ಣಿಕ ಎಂದು ಜನರು ಆಡುವಂತಾಗಿದೆ. ಇತ್ತ ಊರಿನ ಸಮಿತಿ ತಡೆಯಾಜ್ಞೆ ತೆರವುಗೊಳಿಸುವಲ್ಲಿ ಸಫಲರಾಗುತ್ತಾರೆ.

ಏತನ್ಮಧ್ಯೆ ಜಯ ಪೂಜಾರಿ ಮರಣದಿಂದ ಊರಿನವರ ತೀರ್ಮಾನದಂತೆ ನೇಮ ಮುಂದೂಡಲಾಗುತ್ತದೆ. ನೇಮ ಮುಂದೂಡಿಕೆಯ ಬಗ್ಗೆ ಪತ್ರಿಕಾ ಪ್ರಕಟಣೆಯನ್ನೂ ನೀಡಲಾಗುತ್ತದೆ. ಆದರೆ ಟ್ರಸ್ಟ್ ತಂಡ ಮಾತ್ರ ಸುಮ್ಮನಿರದೆ ಜಯ ಪೂಜಾರಿ ಉತ್ತರಕ್ರಿಯೆಯ ದಿನವಾದ ಜನವರಿ 7ರಂದು ನೇಮ ಮಾಡಿಯೇ ಸಿದ್ಧ ಎಂಬ ಹಟಕ್ಕೆ ಬಿದ್ದಂತಿದೆ. ಇತ್ತ ಊರಿನವರು ಜನವರಿ 13ರಂದು ನೇಮ ಮಾಡುವುದೆಂದು ತೀರ್ಮಾನಿಸಿದ್ದಾರೆ.

ಇನ್ನೊಂದೆಡೆ ದೈವ ನರ್ತಕರಾದ ಭಾಸ್ಕರ ‌ಎಂಬುವವರಿಗೆ ಟ್ರಸ್ಟ್ ತಂಡವು ಬೆದರಿಕೆಯನ್ನು ಹಾಕಿದೆ ಎಂದು ಸ್ವತಃ ಭಾಸ್ಕರ್ ‌ಮಾಧ್ಯಮದವರ ಮುಂದೆ ಹೇಳಿದ್ದಾರೆ. ಅಪಾರ ಕಾರ್ಣಿಕ ಕ್ಷೇತ್ರವಾದ ದೈವಸ್ಥಾನದಲ್ಲಿ ಇಂತಹ ಘಟನೆಗಳು ಭಕ್ತರಿಗೆ ನೋವುಂಟು ಮಾಡಿದರೂ ಭಕ್ತರು ದೈವದ ಕಾರ್ಣಿಕಕ್ಕಾಗಿ ಕಾದಿದ್ದಾರೆ.

ಕಾರ್ಕಳ : ನಿಧಿ ಯು ಆಚಾರ್‌ - ಅಂತರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

Posted On: 06-01-2023 11:28PM

ಕಾರ್ಕಳ : ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪದಲ್ಲಿ ಡಿಸೆಂಬರ್ 26ರಿಂದ 28ರವರೆಗೆ ನಡೆದ ಇಂಡಿಯಾ ಸ್ಕೂಲ್‌ ಗೇಮ್ಸ್‌ ಸ್ಪೋರ್ಟ್ಸ್‌ ಫೌಂಡೇಶನ್‌ ನ (S. G. S. D. F India) ವತಿಯಿಂದ ನಡೆಸಲಾದ ಮೂರನೇ ಅಂತರಾಷ್ಟ್ರೀಯ 19 ವರ್ಷದೊಳಗಿನ ಯೋಗ ಚಾಂಪಿಯನ್‌ ಶಿಪ್ ನಲ್ಲಿ ಕಾರ್ಕಳ ಕ್ರಿಯೇಟಿವ್‌ ಕಾಲೇಜಿನ ಪದವಿ ಪೂರ್ವ ವಿದ್ಯಾರ್ಥಿನಿ ನಿಧಿ ಯು ಆಚಾರ್‌ ಭಾರತವನ್ನು ಪ್ರತಿನಿಧಿಸಿ ಬಂಗಾರದ ಪದಕವನ್ನು ಗಳಿಸಿರುತ್ತಾರೆ.

ನಿಧಿ ಯು ಆಚಾರ್‌ ಬಾಲ್ಯದಿಂದಲೂ ಅನೇಕ ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದ ಪ್ರತಿಭೆಯಾಗಿದ್ದಾರೆ. ಕುಮಾರಿ ನಿಧಿ ಕಾರ್ಕಳದ ಉದಯ ಆಚಾರ್‌ ಮತ್ತು ಲತಾರವರ ಪುತ್ರಿ.

ವಿದ್ಯಾರ್ಥಿನಿಯ ಈ ಸಾಧನೆಗೆ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿದ್ವಾನ್‌ ಗಣಪತಿ ಭಟ್‌, ಕಾಲೇಜಿನ ಆಡಳಿತ ಮಂಡಳಿ ಹಾಗೂ ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಅಭಿನಂದಿಸಿದ್ದಾರೆ.

ಈಕೆ ಅಂತರಾಷ್ಟ್ರೀಯ ಯೋಗಗುರು ನರೇಂದ್ರ ಕಾವಿದ್ಯಾರ್ಥಿನಿಯ ಈ ಸಾಧನೆಗೆ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿದ್ವಾನ್‌ ಗಣಪತಿ ಭಟ್‌, ಕಾಲೇಜಿನ ಆಡಳಿತ ಮಂಡಳಿ ಹಾಗೂ ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಅಭಿನಂದಿಸಿದ್ದಾರೆ. ಮತ್‌ ರವರಲ್ಲಿ ಯೋಗಭ್ಯಾಸ ತರಬೇತಿಯನ್ನು ಪಡೆಯುತ್ತಿದ್ದಾರೆ.

ಶಂಕರಪುರ : ಜೆಸಿಐ ಜಾಸ್ಮಿನ್ ಬೆಳ್ಳಿ ಹಬ್ಬದ ಸಂಭ್ರಮ ; ಶಾಶ್ವತ ಕೊಡುಗೆಗಳ ಉದ್ಘಾಟನೆ ; ಸಾಲ್ಮರ ಫ್ರೆಂಡ್ಸ್ ವಾರ್ಷಿಕೋತ್ಸವ

Posted On: 06-01-2023 11:42AM

ಶಂಕರಪುರ : ಕಾಪು ತಾಲೂಕಿನ ಜೆಸಿಐ ಶಂಕರಪುರ ಜಾಸ್ಮಿನ್ ಘಟಕದ ಬೆಳ್ಳಿ ಹಬ್ಬದ ಸಂಭ್ರಮಾಚರಣೆ, ಶಾಶ್ವತ ಕೊಡುಗೆಗಳ ಉದ್ಘಾಟನೆ, ಸಾಲ್ಮರ ಫ್ರೆಂಡ್ಸ್ ಶಂಕರಪುರ ಇದರ ವಾರ್ಷಿಕೋತ್ಸವ ಸಮಾರಂಭವನ್ನು ವಲಯ 15ರ ಪೂರ್ವ ಮಲಯಾಧ್ಯಕ್ಷರು ಮತ್ತು ರಾಷ್ಟ್ರೀಯ ತರಬೇತುದಾರರಾದ ಜೆಸಿ ರಾಜೇಂದ್ರ ಭಟ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು 24 ವರುಷದಿಂದ ಈ ಘಟಕ ಉತ್ತಮ ಸಮಾಜ ಸೇವೆ ಮತ್ತು ಯುವಕರ ವ್ಯಕ್ತಿತ್ವ ವಿಕಸನವನ್ನು ಮಾಡುತ್ತಾ ಬಂದಿರುತ್ತದೆ ಎಂದು ಶ್ಲಾಘಿಸಿದರು.

ಸೈoಟ್ ಜೋನ್ಸ್ ಚರ್ಚ್ ನ ಧರ್ಮಗುರುಗಳಾದ ಫರ್ಡಿನಾಂಡ್ ಗೋನ್ಸಾಲಿಸ್ ಆಶೀರ್ವಚನವಿತ್ತರು.

ಕಾರ್ಯಕ್ರಮದ ವೇದಿಕೆಯಲ್ಲಿ ಶಶಿಧರ್ ಕೆ ಶೆಟ್ಟಿ ಇನ್ನಂಜೆ ಉದ್ಯಮಿ ಮುಂಬೈ, ಅಭಿನಂದನ್ ಎ ಶೆಟ್ಟಿ ಫಾಸ್ಟ್ ಗವರ್ನರ್ ರೋಟರಿ ಜಿಲ್ಲೆ 3182, ಗ್ರೇಗೋರಿ ಮಾತಾಯಸ್ ಮಾತಾಯಸ್ ಹೇರಿಟೇಜ್ ಇನ್ನಂಜೆ, ಎಲಿಯಾಸ್ ಮೋನಿಸ್ ಸಿವಿಲ್ ಇಂಜಿನಿಯರ್ ಸಲ್ಮಾರ, ಕಾರ್ಯಕ್ರಮ ಸಂಯೋಜಕರಾದ ಜೆಸಿ ಸಂತೋಷ್ ಕುಮಾರ್, ನಿಕಟ ಪೂರ್ವ ಅಧ್ಯಕ್ಷರಾದ ಜೆಸಿ ಜಗದೀಶ್ ಅಮಿನ್, ಜೆಸಿರೇಟ್ ಅಧ್ಯಕ್ಷರಾದ ಜಯಶ್ರೀ ನವೀನ್ ಅಮೀನ್, ಜೆಜೆಸಿ ಅಧ್ಯಕ್ಷರಾದ ಶಶಾಂಕ್ ಕುಲಾಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜೆಸಿಐ ಶಂಕರಪುರ ಜಾಸ್ಮಿನ್ ಘಟಕದ ಸ್ಥಾಪಕ ಕಾರ್ಯದರ್ಶಿ ಮತ್ತು ಸಾಲ್ಮರ ಫ್ರೆಂಡ್ಸ್ ಇದರ ಅಧ್ಯಕ್ಷರಾದ ಜೆಸಿ ನವೀನ್ ಅಮೀನ್ ಇವರು ಪ್ರಸ್ತಾವನೆಗೈದರು, ಜೆ ಸಿ ಐ ಶಂಕರಪುರ ಜಾಸ್ಮಿನ್ ಘಟಕದ ಮಾಲಿನಿ ಶೆಟ್ಟಿ ಇನ್ನಂಜೆ ಸ್ವಾಗತಿಸಿದರು. ಕಾರ್ಯದರ್ಶಿಯಾದ ಜೆ ಸಿ ಪ್ರವೀಣ್ ಪೂಜಾರಿ ವಂದಿಸಿದರು.