Updated News From Kaup
ಕಟಪಾಡಿ : ಯುವಜನ ಸೇವಾ ಸಂಘ ಏಣಗುಡ್ಡೆ - ನೂತನ ಸಂಘದ ಉದ್ಘಾಟನೆ

Posted On: 06-02-2023 09:23PM
ಕಟಪಾಡಿ : ಯುವಜನ ಸೇವಾ ಸಂಘ ಏಣಗುಡ್ಡೆ ಕಟಪಾಡಿ ಇದರ ನೂತನ ಸಂಘದ ಉದ್ಘಾಟನಾ ಸಮಾರಂಭವು ಫೆಬ್ರವರಿ 5 ರಂದು ಕಟಪಾಡಿಯ ತ್ರಿಶಾ ವಿದ್ಯಾಕಾಲೇಜ್ ನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಡಾ ಉದಯ ಕುಮಾರ್ ಶೆಟ್ಟಿ ಹಾಗೂ ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜ್ ನ ಇಂದುರೀತಿ ಉದ್ಘಾಟಿಸಿದರು.
ಇದರ ಪ್ರಯುಕ್ತ ಯುವಜನ ಸೇವಾ ಸಂಘದ ನೇತೃತ್ವದಲ್ಲಿ, ರಾ.ಸೇ. ಯೋಜನಾ ಘಟಕ ತ್ರಿಶಾ ವಿದ್ಯಾ ಕಾಲೇಜು,ಕಟಪಾಡಿ ಉಡುಪಿ,ರಕ್ತನಿಧಿ, ಜಿಲ್ಲಾ ಆಸ್ಪತ್ರೆ ಉಡುಪಿ ಇದರ ಸಂಯುಕ್ತ ಆಶ್ರಯದಲ್ಲಿ ಹಾಗೂ ಹಲವಾರು ಸಂಘ ಸಂಸ್ಥೆಗಳ ಸಹಯೋಗದಿಂದ ರಕ್ತದಾನ ಶಿಬಿರ ಹಾಗೂ ಉಚಿತ ಆಯುಷ್ಮಾನ್ ಕಾರ್ಡ್ ನೋಂದಣಿ ಕಾರ್ಯಾಗಾರ ನಡೆಯಿತು.
ಸಂಘದ ಅಧಿಕೃತ ಲೋಗೋವನ್ನು ಅರ್ಚಿಟೆಕ್ಟ್ ಪ್ರಮುಖ್ ರೈ ಹಾಗೂ ಕಾಪು ಪೊಲೀಸ್ ಠಾಣೆಯ ಉಪನಿರೀಕ್ಷಕ ದಯಾನಂದ ಬಿಡುಗಡೆ ಗೊಳಿಸಿದರು. ಮುಖ್ಯ ಅತಿಥಿಗಳಾಗಿ ಉಡುಪಿ ರಕ್ತನಿಧಿ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿ ಡಾ ವೀಣಾ ಕುಮಾರಿ, ವಿಜಯ್ ಕುಮಾರ್ ಉದ್ಯಾವರ ಆಡಳಿತಾಧಿಕಾರಿ ತ್ರಿಶಾ ವಿದ್ಯಾ ಕಾಲೇಜ್,ಜೈ ತುಲುನಾಡ್(ರಿ) ನ ರಾಜೇಶ್, ಸತ್ಯದ ತುಳುವೆರ್(ರಿ) ಉಡುಪಿ-ಮಂಗಳೂರು ನ ಪ್ರವೀಣ್ ಕುರ್ಕಾಲ್, ತ್ರಿಶಾ ವಿದ್ಯಾ ಕಾಲೇಜ್ ರಾ, ಸೇ ಯೋಜನಾಧಿಕಾರಿ ಸಂತೋಷ್. ಎ, ಶೆಟ್ಟಿ , ಜೂನಿಯರ್ ಫ್ರೆಂಡ್ಸ್ ಕೋರಂಗ್ರಪಾಡಿಯ ಚೇತನ್, ಸಂಗಮ್ ಫ್ರೆಂಡ್ಸ್ ನ ಜಯಕರ್ ಕುಂದರ್, ಗ್ರಾಮ ಒನ್ ಕೇಂದ್ರ ಕೋಟೆ ಇದರ ಸಹನಾ ಕುಂದರ್, ರತ್ನಾಕರ್ ಉಡುಪಿ, ಮಹೇಶ್ ಎನ್ ಅಂಚನ್ ಭಾಗವಹಿಸಿದ್ದರು.
ಶಿಬಿರದಲ್ಲಿ ಒಟ್ಟು 82 ಯೂನಿಟ್ ಗಳಷ್ಟು ರಕ್ತವನ್ನು ಸಂಗ್ರಹಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಪ್ರಮೋದ್ ವಹಿಸಿದ್ದರು, ಸಂಘದ ಕಾರ್ಯದರ್ಶಿ ಸಂತೋಷ್ ಎನ್. ಎಸ್ ಸ್ವಾಗತಿಸಿದರು. ಕುಮಾರಿ ಶ್ರೀನಿಧಿ ಕಾರ್ಯಕ್ರಮ ನಿರೂಪಿಸಿ, ಕೋಶಾಧಿಕಾರಿ ಸನತ್ ಕೋಟ್ಯಾನ್ ವಂದಿಸಿದರು.
ಉಡುಪಿ ತುಳುಕೂಟ : 21ನೇ ಕೆಮ್ತೂರು ತುಳು ನಾಟಕ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ

Posted On: 06-02-2023 09:13PM
ಉಡುಪಿ : ಬದುಕಿನಲ್ಲಿ ಟಿ.ವಿ.ಯಂತಹ ಪರಿಕರಗಳ ಬಳಕೆ ಹೆಚ್ಚುತ್ತಿರುವುದರಿಂದ, ಜನರು ನಾಟಕದಂತಹ ಕಲೆಗಳಿಂದ ದೂರವಾಗುತ್ತಿದ್ದಾರೆ. ಇಂತಹ ಕಾಲಘಟ್ಟದಲ್ಲಿಯೂ ಉಡುಪಿ ತುಳುಕೂಟ ಎರಡು ದಶಕಗಳಿಂದ ನಾಟಕೋತ್ಸವವನ್ನು ನಡೆಸುತ್ತಾ ಜನರ ಉಡುಪಿಯ ಅಭಿರುಚಿಯನ್ನು ಜೀವಂತವಾಗಿಟ್ಟಿರುವುದು ಶ್ಲಾಘನೀಯ ಎಂದು ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಡೀನ್ ಡಾ.ಪದ್ಮರಾಜ್ ಹೆಗ್ಡೆ ಹೇಳಿದರು. ಅವರು ಭಾನುವಾರ ಉಡುಪಿ ತುಳುಕೂಟದ ವತಿಯಿಂದ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ನಡೆದ 21ನೇ ಕೆಮ್ತೂರು ತುಳು ನಾಟಕ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.

ವಿಶ್ವದಾದ್ಯಂತ ಇಂದು ಸುಮಾರು 18,50,000 ಮಂದಿ ಮಾತನಾಡುವ ತುಳು ಭಾಷೆಗೆ ಸರ್ಕಾರ ಈಗಲಾದರೂ ರಾಜ್ಯದ 2ನೇ ಭಾಷೆಯ ಮಾನ್ಯತೆ ನೀಡುವುದಕ್ಕೆ ಸಿದ್ದತೆಗಳನ್ನು ನಡೆಸಿದೆ. ಈ ಮೂಲಕ ತುಳುವರ ದಶಕದ ಕನಸು ಈಡೇರುತ್ತಿದೆ ಎಂದವರು ಸಂತಸ ವ್ಯಕ್ತಪಡಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ವಹಿಸಿದ್ದರು.

ಅತಿಥಿಗಳಾಗಿ ತುಳು ಜನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್, ದಾನಿ ವಿಶ್ವನಾಥ ಶೆಣೈ, ಉದ್ಯಮಿಗಳಾದ ಪಿ. ಪುರುಷೋತ್ತಮ ಶೆಟ್ಟಿ, ಮನೋಹರ ಶೆಟ್ಟಿ, ಕೆಮ್ತೂರು ಕುಟುಂಬದ ವಿಜಯಕುಮಾರ್ ಶೆಟ್ಟಿ ಆಗಮಿಸಿದ್ದರು. ಕೂಟದ ಪ್ರಧಾನ ಕಾರ್ಯದರ್ಶಿ ಗಂಗಾಧರ ಕಿದಿಯೂರು, ಕೋಶಾಧಿಕಾರಿ ಚೈತನ್ಯ ಎಂ.ಜಿ., ನಾಟಕ ಸ್ಪರ್ಧೆಯ ಸಂಚಾಲಕ ಬಿ. ಪ್ರಭಾಕರ ಭಂಡಾರಿ ವೇದಿಕೆಯಲ್ಲಿದ್ದರು.
ಕೂಟದ ಉಪಾಧ್ಯಕ್ಷ ದಿವಾಕರ ಸನೀಲ್ ಸ್ವಾಗತಿಸಿದರು. ತಾರಾ ಉಮೇಶ್ ಆಚಾರ್ಯ ಕಾರ್ಯಕ್ರಮ ಸಂಯೋಜಿಸಿದರು. ಇದೇ ಸಂದರ್ಭದಲ್ಲಿ ಪ.ಪೂ ತರಗತಿಯಲ್ಲಿ ತುಳು ಭಾಷಾ ವಿಷಯದಲ್ಲಿ ಶೇ. 100 ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು ಮತ್ತು ಉಡುಪಿ ತುಳುಕೂಟದ ನೂತನ ಯೂಟ್ಯೂಬ್ ಚಾನೆಲ್ ಗೆ ಚಾಲನೆ ನೀಡಲಾಯಿತು.
ಪಾಂಗಾಳ : ಹಾಡುಹಗಲೇ ಯುವಕನ ಕೊಲೆ

Posted On: 05-02-2023 07:34PM
ಕಾಪು : ಪಾಂಗಾಳದಲ್ಲಿ ಯುವಕನೋರ್ವನನ್ನು ಚೂರಿಯಿಂದ ಇರಿದು ಬರ್ಬರವಾಗಿ ಇರಿದು ಕೊಲೆಗೈದ ಘಟನೆ ರವಿವಾರ ಸಂಜೆ ನಡೆದಿದೆ. ಪಾಂಗಾಳ ಮಂಡೇಡಿ ನಿವಾಸಿ ಶರತ್ ಶೆಟ್ಟಿ (41) ಮೃತ ಯುವಕ.

ಪಾಂಗಾಳ ಶ್ರೀ ಜನಾರ್ದನ ದೇವಸ್ಥಾನದ ಬಳಿಯ ಅಂಗಡಿಯ ಬಳಿಯೊಂದರಲ್ಲಿ ಕೃತ್ಯ ನಡೆದಿದ್ದು ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವಕನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು.
ಕಾಪು ವೃತ್ತ ನಿರೀಕ್ಷಕ ಕೆ.ಸಿ. ಪೂವಯ್ಯ, ಕಾಪು ಎಸ್ಸೈ ಸುಮ ಬಿ., ಕ್ರೈಂ ಎಸ್ಸೈ ಭರತೇಶ್ ಕಂಕಣವಾಡಿ ಸಹಿತ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಪರಿಶೀಲನೆ ನಡೆಸಿದ್ದಾರೆ.
ಕಾಪು : ಬಜರಂಗದಳ ತಾಲೂಕು ಸಂಚಾಲಕರಾಗಿ ದಿನೇಶ್ ಪಾಂಗಾಳ ಆಯ್ಕೆ

Posted On: 05-02-2023 04:47PM
ಕಾಪು : ವಿಶ್ವಹಿಂದೂ ಪರಿಷದ್ ಬಜರಂಗದಳ ಕಾಪು ಪ್ರಖಂಡ ಇದರ ಬಜರಂಗದಳ ತಾಲೂಕು ಸಂಚಾಲಕರಾಗಿ ದಿನೇಶ್ ಪಾಂಗಾಳ ಆಯ್ಕೆಯಾಗಿರುತ್ತಾರೆ.
ಪಿ ಕೆ ಎಸ್ ಪ್ರೌಢಶಾಲೆ ಕಳತ್ತೂರು: ಗುರುವಂದನಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

Posted On: 05-02-2023 03:30PM
ಕಾಪು : ಇಲ್ಲಿನ ಪೈಯ್ಯಾರು ಕರಿಯಣ್ಣ ಶೆಟ್ಟಿ ಪ್ರೌಢಶಾಲೆ ಕಳತ್ತೂರು ಇಲ್ಲಿ ಮಾರ್ಚ್ 3 ರಂದು ಶಾಲೆಯ ನಿವೃತ್ತ ಶಿಕ್ಷಕ ಗೋಪಾಲ ಕೃಷ್ಣ ರಾವ್ ಇವರಿಗೆ ನಡೆಯುವ ಗುರುವಂದನಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಕಾರ್ಯಕ್ರಮದ ಪೂರ್ವಭಾವಿ ಸಭೆ ಆದಿತ್ಯವಾರ ಶಾಲೆಯ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಪೈಯ್ಯಾರು ಕರಿಯಣ್ಣ ಶೆಟ್ಟಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಗಂಗಾ ನಾಯ್ಕ್, ವೇಣುಗೋಪಾಲ್ ರಾವ್, ಪ್ರಮುಖರಾದ ನಿತ್ಯಾನಂದ ಶೆಟ್ಟಿ, ಶಿವರಾಮ್ ಶೆಟ್ಟಿ ಪೈಯ್ಯಾರು, ಗಣೇಶ್ ಶೆಟ್ಟಿ ಪೈಯ್ಯಾರು, ಅನಿಲ್ ಶೆಟ್ಟಿ, ಪ್ರಸಾದ್ ಭಂಡಾರಿ ಹಾಗೂ ಶಾಲಾ ಹಳೆವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾಪು : ಗದ್ದಿಗೆಬೆಟ್ಟು ಕೈಪುಂಜಾಲು ಉಳಿಯಾರಗೋಳಿ ಕಂಬೆರ್ಕಳ ಶ್ರೀ ಬಬ್ಬುಸ್ವಾಮಿ ದೈವಸ್ಥಾನ ಶಿಲಾನ್ಯಾಸ ; ವಿಜ್ಞಾಪನಾ ಪತ್ರ ಬಿಡುಗಡೆ

Posted On: 05-02-2023 03:21PM
ಕಾಪು : ಇಲ್ಲಿನ ಗದ್ದಿಗೆಬೆಟ್ಟು ಕೈಪುಂಜಾಲು ಉಳಿಯಾರಗೋಳಿಯ ಕಂಬೆರ್ಕಳ ಶ್ರೀ ಬಬ್ಬುಸ್ವಾಮಿ ದೈವಸ್ಥಾನ (ರಿ.)ದ ಜೀರ್ಣೋದ್ಧಾರ ಫೆಬ್ರವರಿ 3ರಂದು ಜರಗಿತು.

ಆ ಪ್ರಯುಕ್ತ ನೂತನ ಗುಡಿಗೆ ಶಿಲಾನ್ಯಾಸ ನೆರವೇರಿತು. ಇದೇ ಸಂದರ್ಭ ಅತಿಥಿಗಳಿಂದ ವಿಜ್ಞಾಪನಾ ಪತ್ರ ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಡಾ| ಬಿ ಆರ್ ಶೆಟ್ಟಿ, ಕಾಪು ಕ್ಷೇತ್ರದ ಶಾಸಕರು, ಸಮಿತಿಯ ಗೌರವಾಧ್ಯಕ್ಷರಾದ ಲಾಲಾಜಿ ಆರ್ ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ, ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಕಾಪು ಮಾರಿಗುಡಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ವಾಸುದೇವ ಶೆಟ್ಟಿ, ಸಾಯಿರಾಧ ಗ್ರೂಪ್ ನ ಮನೋಹರ ಶೆಟ್ಟಿ, ಕಾಪು ಮಾರಿಗುಡಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಮೇಶ್ ಹೆಗ್ಡೆ, ಗಂಗಾಧರ ಸುವರ್ಣ, ಶಿವಪ್ಪ ನಂತೂರು,ದಿನಕರ ಬಾಬು, ಶಶಿಧರ ಶೆಟ್ಟಿ ಎರ್ಮಾಳು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿರಣ್ ಆಳ್ವ, ಸಮಿತಿಯ ಹತ್ತು ಸಮಸ್ತರು ಗದ್ದಿಗೆಬೆಟ್ಟು ಅಧ್ಯಕ್ಷ ರಾಜ ಕೆ ಸುವರ್ಣ, ಬಾವು ಗುತ್ತು ಡಾ.ಶಿಶಿರ್ ಶೆಟ್ಟಿ, ಶಿರಿಶ್ ಶೆಟ್ಟಿ, ಮೊಗವೀರ ಮಹಾಸಭಾದ ಅಧ್ಯಕ್ಷ ಸತೀಶ್ ಕುಂದರ್ ಕೈಪುಂಜಾಲ್ ಮತ್ತಿತರರು ಉಪಸ್ಥಿತರಿದ್ದರು.
ಫೆಬ್ರವರಿ 10 : ಬನ್ನಂಜೆ ಶ್ರೀ ವರ್ತೆಕಾಳಿ ಕಲ್ಲುಡ ದೈವಸ್ಥಾನದಲ್ಲಿ ಕಾಲಾವಧಿ ಕೋಲ

Posted On: 02-02-2023 07:57AM
ಉಡುಪಿ : ಶ್ರೀ ವರ್ತೆಕಾಳಿ ಕಲ್ಲುಡ ದೈವಸ್ಥಾನ ಬನ್ನಂಜೆ, ಉಡುಪಿ ಇಲ್ಲಿ ಫೆಬ್ರವರಿ 10, ಶುಕ್ರವಾರ ರಾತ್ರಿ 9ಕ್ಕೆ ಕಾಲಾವಧಿ ಕೋಲ ಜರಗಲಿದೆ.

ಮಧ್ಯಾಹ್ನ ಗಂಟೆ ಗಂಟೆ 12 ರಿಂದ 3ರವರೆಗೆ ಅನ್ನಸಂತರ್ಪಣೆ, ರಾತ್ರಿ ಗಂಟೆ 7ಕ್ಕೆ ದರ್ಶನ ಮತ್ತು ಹೂವಿನ ಪೂಜೆಯ ಪ್ರಸಾದ ವಿತರಣೆ ರಾತ್ರಿ 9ಕ್ಕೆ ದೈವದ ಕೋಲ ಜರಗಲಿದೆ.
ಸರ್ವರು ಆಗಮಿಸಿ ದೈವದ ಗಂಧ ಪ್ರಸಾದವನ್ನು ಸ್ವೀಕರಿಸಿ, ದೈವಗಳ ಕೃಪೆಗೆ ಪಾತ್ರರಾಗಬೇಕೆಂದು ವಿಠಲ ಶೆಟ್ಟಿ ಮತ್ತು ಕುಟುಂಬಿಕರು, ಕಲ್ಕುಡ ಮನೆ, ಬನ್ನಂಜೆ, ಉಡುಪಿ ಇವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕಾಪು : ಟ್ರಾಫಿಕ್ ಪೋಲಿಸ್ ಉಪನಿರೀಕ್ಷಕ ಸತೀಶ್ ರನ್ನು ಸನ್ಮಾನಿಸಿದ ಜೆಸಿಐ ಶಂಕರಪುರ ಜಾಸ್ಮಿನ್

Posted On: 01-02-2023 11:51PM
ಕಾಪು : ಜೆಸಿಐ ಶಂಕರಪುರ ಜಾಸ್ಮಿನ್ ವತಿಯಿಂದ ದಕ್ಷ ಹಾಗೂ ಪ್ರಾಮಾಣಿಕ ಟ್ರಾಫಿಕ್ ಪೋಲಿಸ್ ಅಧಿಕಾರಿಯಾಗಿ ಸೆಲ್ಯೂಟ್ ದಿ ಸೈಲೆಂಟ್ ವರ್ಕರ್ ಆಗಿ ಆಯ್ಕೆಯಾದ ಉಪ ನಿರೀಕ್ಷಕರಾಗಿರುವ ಸತೀಶ್ ರವರನ್ನು ಅವರ ಮನೆಗೆ ಹೋಗಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಜೆಸಿ ಮಾಲಿನಿ ಶೆಟ್ಟಿ ಇನ್ನಂಜೆ, ಜೆಸಿಯ ಗೌರವ ಸದಸ್ಯರಾದ ಲಕ್ಷ್ಮಣ ಪೂಜಾರಿ, ಪೂರ್ವ ವಲಯ ಉಪಾಧ್ಯಕ್ಷರಾದ ಜೆಸಿ ಸಂತೋಷ್ ಕುಮಾರ್, ಪೂರ್ವಧ್ಯಕ್ಷರಾದ ಜೆಸಿ ನವೀನ್ ಅಮೀನ್, ನಿಕಟ ಪೂರ್ವ ಅಧ್ಯಕ್ಷರಾದ ಜೆಸಿ ಜಗದೀಶ್ ಅಮೀನ್ ಉಪಸ್ಥಿತರಿದ್ದರು.
ಫೆಬ್ರವರಿ 3 : ಕಾಪು ಗದ್ದಿಗೆ ಬೆಟ್ಟು ಕಂಬೆರ್ಕಳ ಶ್ರೀ ಬಬ್ಬುಸ್ವಾಮಿ ದೈವಸ್ಥಾನ : ನೂತನ ಗುಡಿಗೆ ಶಿಲಾನ್ಯಾಸ ಕಾರ್ಯಕ್ರಮ

Posted On: 01-02-2023 11:39PM
ಕಾಪು : ಇಲ್ಲಿನ ಗದ್ದಿಗೆಬೆಟ್ಟು ಕೈಪುಂಜಾಲು ಉಳಿಯಾರಗೋಳಿಯ ಕಂಬೆರ್ಕಳ ಶ್ರೀ ಬಬ್ಬುಸ್ವಾಮಿ ದೈವಸ್ಥಾನ (ರಿ.)ದ ಸಮಗ್ರ ಜೀರ್ಣೋದ್ಧಾರ ಪ್ರಕ್ರಿಯೆಗಳು ಪ್ರಾರಂಭಗೊಂಡಿರುತ್ತದೆ.

ಆ ಪ್ರಯುಕ್ತ ನೂತನ ಗುಡಿಗೆ ಶಿಲಾನ್ಯಾಸ ಕಾರ್ಯಕ್ರಮ ಫೆಬ್ರವರಿ 03, ಶುಕ್ರವಾರ ಬೆಳಿಗ್ಗೆ 8.30ಕ್ಕೆ ನೆರವೇರಲಿರುವುದು. ಈ ಕಾರ್ಯಕ್ರಮದಲ್ಲಿ ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್ , ಪದ್ಮಶ್ರೀ ಡಾ| ಬಿ. ಆರ್. ಶೆಟ್ಟಿ ಭಾಗವಹಿಸಲಿರುವರು.
ಭಕ್ತಾಭಿಮಾನಿಗಳು ಪಾಲ್ಗೊಂಡು ಶ್ರೀ ದೈವಗಳ ಕೃಪೆಗೆ ಪಾತ್ರರಾಗಬೇಕೆಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಪಡುಬಿದ್ರಿ : ಓಂ ಫ್ರೆಂಡ್ಸ್ ಅದಮಾರು - ಓಂ ಟ್ರೋಫಿ ಕ್ರಿಕೆಟ್ ಪಂದ್ಯಾಟ ; ಒಸಿಯನ್ ಫ್ರೆಂಡ್ಸ್ ಕಟಪಾಡಿ ಪ್ರಥಮ, ವೀರಮಾರುತಿ ಗರಡಿಮಜಲ್ ದ್ವಿತೀಯ

Posted On: 01-02-2023 08:55PM
ಪಡುಬಿದ್ರಿ : ಓಂ ಫ್ರೆಂಡ್ಸ್ ಅದಮಾರು ಇವರ ಆಶ್ರಯದಲ್ಲಿ ಜನವರಿ 28 ಮತ್ತು 29 ರಂದು ನಡೆದ ಓಂ ಟ್ರೋಫಿ ಕ್ರಿಕೆಟ್ ಪಂದ್ಯಾಟದಲ್ಲಿ ಒಟ್ಟು 30 ತಂಡಗಳು ಭಾಗವಹಿಸಿ ಮೊದಲ ಬಹುಮಾನ 25,000 ಒಸಿಯನ್ ಫ್ರೆಂಡ್ಸ್ ಕಟಪಾಡಿ ಹಾಗೂ ಎರಡನೇ ಬಹುಮಾನ 15,000 ವೀರಮಾರುತಿ ಗರಡಿಮಜಲ್ ಈ ಎರಡು ತಂಡಗಳು ಪಡೆದುಕೊಂಡಿದೆ.
ಈ ಪಂದ್ಯಕೂಟಕ್ಕೆ ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮಾಜಿ ಪಂಚಾಯತ್ ಅಧ್ಯಕ್ಷ ಶಶಿಧರ್ ಶೆಟ್ಟಿ ನಡಿಗುತ್ತು, ಪಂಚಾಯತ್ ಸದಸ್ಯ ಸಂತೋಷ್ ಶೆಟ್ಟಿ, ಅದಮಾರು ಅಂಬೇಡ್ಕರ್ ಸಮಿತಿಯ ಅಧ್ಯಕ್ಷ ಜಯರಾಮ್ ಮಾಸ್ಟರ್, ಮಾಜಿ ಪಂಚಾಯತ್ ಸದಸ್ಯ ರಾಘವೇಂದ್ರ ಉಲ್ಲೂರು, ಉದ್ಯಮಿ ಸತೀಶ್ ಭಟ್ ಕುಂಡತಾಯ ಅದಮಾರು, ಉದ್ಯಮಿ ನವೀನ್ ಶೆಟ್ಟಿ ಕುಂಜೂರು, ಉದ್ಯಮಿ ವಿಜಯ ಶೆಟ್ಟಿ ಮಹಾಬಲಗುತ್ತು ಭಾಗವಹಿಸಿದ್ದರು.