Updated News From Kaup

ಕಾಪು : ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹುಟ್ಟುಹಬ್ಬ ಆಚರಣೆ ; ಸಮ್ಮಾನ

Posted On: 06-01-2023 11:04AM

ಕಾಪು : ಇಲ್ಲಿನ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಾಪು ರಾಜೀವ ಭವನದಲ್ಲಿ ಗುರುವಾರ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆಯವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು.

ಸಮ್ಮಾನ : ಕಾಪು ತಾಲೂಕಿನ ಪತ್ರಕರ್ತರು, ಮಾಜಿ ಯೋಧರು, ಸಮಾಜ ಸೇವಕರು, ಕಾಪು ಪುರಸಭಾ ಪೌರಕಾರ್ಮಿಕರನ್ನು ಕಾಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಮ್ಮಾನಿಸಲಾಯಿತು.

ಈ ಸಂದರ್ಭ ಮಾತನಾಡಿದ ವಿನಯ ಕುಮಾರ್ ಸೊರಕೆ ನಾನು ನನ್ನ ರಾಜಕೀಯ ಜೀವನದಲ್ಲಿ ಬಿಳಿ ಬಟ್ಟೆ ಧರಿಸುವಂತೆ ಜೀವನದಲ್ಲಿಯೂ ಶುಭ್ರವಾಗಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ರಾಜಕೀಯದಲ್ಲಿದ್ದೇನೆ. ಎಂದಿಗೂ ಹಿಂಬಾಗಿಲ ಪ್ರವೇಶಕ್ಕಾಗಿ ಕಾಯಲಿಲ್ಲ. ಜನರೊಂದಿಗೆ ಮುಂದೆಯೂ ಇರುತ್ತೇನೆ ಎಂದರು.

ಈ ಸಂದರ್ಭ ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾಪು ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಮಾಜಿ ಅಧ್ಯಕ್ಷ ನವೀನ್ಚಂದ್ರ ಜೆ ಶೆಟ್ಟಿ, ದಿವಾಕರ್ ಶೆಟ್ಟಿ, ಶಿವಾಜಿ ಸುವರ್ಣ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶಾಂತಲತಾ ಶೆಟ್ಟಿ, ದೀಪಕ್ ಕುಮಾರ್ ಎರ್ಮಾಳು, ಗಣೇಶ್ ಕೋಟ್ಯಾನ್, ರಮೀಝ್ ಹುಸೇನ್, ವೈ ಸುಧೀರ್ ಕುಮಾರ್, ಶರ್ಫುದ್ದೀನ್ ಶೇಕ್, ಜ್ಯೋತಿ ಮೆನನ್, ಸಾಧಿಕ್, ಅಶ್ವಿನಿ ಕಾಪು, ಮೊಯ್ದಿನಬ್ಬ ಮತ್ತಿತರರು ಉಪಸ್ಥಿತರಿದ್ದರು.

ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮ ಮಂಡಳಿಗೆ ಮುಖ್ಯಮಂತ್ರಿಗಳಿಂದ ಹಸಿರು ನಿಶಾನೆ ; ಮುಂದಿನ ಬಜೆಟ್ ನಲ್ಲಿ ಘೋಷಣೆ

Posted On: 05-01-2023 08:17PM

ಕಾಪು : ಈಡಿಗ, ಬಿಲ್ಲವ, ನಾಮದಾರಿಗಳು ಸೇರಿದಂತೆ 26 ಉಪಪಂಗಡಗಳ ಬಹಳ ದಿನಗಳ ಬೇಡಿಕೆಯಾದ ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮ ಮಂಡಳಿಯನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಘೋಷಿಸಿದರು.

ಈ ಬಗ್ಗೆ ಮುಖ್ಯಮಂತ್ರಿಗಳು ಮುಂದಿನ ಆಯವ್ಯದಲ್ಲಿ ಸೂಕ್ತ ಅನುದಾನವನ್ನು ಘೋಷಣೆ ಮಾಡುವುದಾಗಿ ತಿಳಿಸಿದ್ದಾರೆ. ಈ ಹಿಂದೆ ಶ್ರೀ ನಾರಾಯಣ ಗುರು ಅಭಿವೃದ್ಧಿ ಕೋಶ ಸ್ಥಾಪಿಸಲಾಗಿದ್ದು, ಅದನ್ನು ಪರಿವರ್ತಿಸಿ ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮ ಮಂಡಳಿ ರಚಿಸುವುದಾಗಿ ಹೇಳಿದರು. ಈ ಬಗ್ಗೆ ಮುಂದಿನ ಬಜೆಟ್ ನಲ್ಲಿ ಘೋಷಿಸಲಾಗುವುದು ಎಂದು ತಿಳಿಸಿದ್ದಾರೆ.

ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ವಿ ಸುನಿಲ್ ಕುಮಾರ್ ಅವರ ನೇತೃತ್ವದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಕೆ ರಘುಪತಿ ಭಟ್, ಬಿಲ್ಲವ ಸಮಾಜದ ಸ್ವಾಮೀಜಿಗಳು, ಮುಖಂಡರುಗಳ ನಿಯೋಗ ಜನವರಿ 5, ಗುರುವಾರದಂದು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮನವರಿಕೆ ಮಾಡಿತ್ತು. ಈ ಬಗ್ಗೆ ನಿಯೋಗದಲ್ಲಿ ಇದ್ದ ಗೀತಾಂಜಲಿ ಸುವರ್ಣ ಮುಖ್ಯಮಂತ್ರಿಗಳ ನಿರ್ಧಾರವನ್ನು ಅಭಿನಂದಿಸಿದ್ದಾರೆ.

ಈ ಸಂದರ್ಭದಲ್ಲಿ ಆರ್ಯ ಈಡಿಗ ಮಹಾಸಂಸ್ಥಾನ ಸೋಲೂರು ಶ್ರೀ ರೇಣುಕಾಪೀಠದ ಗುರುಗಳಾದ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಸೋಲೂರು ಮಠದ ಆರ್ಯಶ್ರೀ ರೇಣುಕಾನಂದ ಸ್ವಾಮೀಜಿ, ಸಾಗರ ಶಾಸಕರು ಎಂ.ಎಸ್.ಐ.ಎಲ್.ನಿಗಮ ಮಂಡಳಿ ಅಧ್ಯಕ್ಷರಾದ ಹರತಾಲು ಹಾಲಪ್ಪ, ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್, ಮೂಡುಬಿದಿರೆ ಶಾಸಕರಾದ ಉಮಾನಾಥ್ ಕೋಟ್ಯಾನ್, ಭಟ್ಕಳ ಶಾಸಕರಾದ ಸುನೀಲ್ ನಾಯ್ಕ್, ಬಿಲ್ಲವ ಸಮಾಜದ ಮುಖಂಡರಾದ ಪ್ರವೀಣ್ ಪೂಜಾರಿ, ಬಿ ಎನ್ ಶಂಕರ ಪೂಜಾರಿ, ಗೀತಾಂಜಲಿ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

ಗ್ಲೋಬಲ್ ಅಚೀವ್ ಮೆಂಟ್ ಪುರಸ್ಕಾರಕ್ಕೆ ಆಯ್ಕೆಯಾದ ರಾಘವೇಂದ್ರ ಪ್ರಭು ಕವಾ೯ಲು

Posted On: 05-01-2023 07:25PM

ಉಡುಪಿ : ಶೀ ಲಕ್ಷಮ್ಮ ದೇವಿ ಕಲಾಪೋಷಕ ಸಂಘ ರಾಯಭಾಗ್ ಬೆಳಗಾವಿ ಇದರ ವತಿಯಿಂದ ಧಾರವಾಡ ರಂಗಾಯಣದಲ್ಲಿ ನಡೆಯಲಿರುವ ಕನಾ೯ಟಕ ಸಾಧಕರ ಸಮಾವೇಶದಲ್ಲಿ ನೀಡಲಾಗುವ ಗ್ಲೋಬಲ್ ಅಚೀವ್ ಮೆಂಟ್ ಪುರಸ್ಕಾರಕ್ಕೆ ಉಡುಪಿಯ ರಾಘವೇಂದ್ರ ಪ್ರಭು, ಕವಾ೯ಲು ಯುವ ಸಂಘಟನೆ/ ಸಮಾಜ ಸೇವೆ ವಿಭಾಗದಲ್ಲಿ ಆಯ್ಕೆಯಾಗಿದ್ದಾರೆ.

ಪ್ರಶಸ್ತಿ ಪ್ರಧಾನ ಸಮಾರಂಭ ಜನವರಿ 22ರಂದು ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಸಿದ್ರಾಮ ನಿಲಜಗಿ ತಿಳಿಸಿದ್ದಾರೆ.

ಜ. 7 : ಚಂದ್ರಹಾಸ ಗುರುಸ್ವಾಮಿ ಇನ್ನಂಜೆಯವರ ಶ್ರೀ ಅಯ್ಯಪ್ಪ ಭಕ್ತವೃಂದ ಶಂಕರಪುರದ 37ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ

Posted On: 04-01-2023 11:30PM

ಕಾಪು : ಮುಂಬೈ ಮಹಾನಗರದಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿಯ ಪರಮ ಭಕ್ತರಾಗಿ ಗುರುತಿಸಿಕೊಂಡು, ಧಾರ್ಮಿಕ ಶೈಕ್ಷಣಿಕ ಸೇವೆಗಳಿಗೆ ತನ್ನ ಬದುಕನ್ನು ಮುಡುಪಾಗಿಟ್ಟದ್ದು ಕಳೆದ 37 ವರ್ಷಗಳಿಂದ ಕಲಿಯುಗ ವರದ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಕಟ್ಟುನಿಟ್ಟಿನ ವೃತ್ತವನ್ನು ಮಾಡಿ ಶಬರಿಮಲೆ ಯಾತ್ರೆಯನ್ನು ಕೈಗೊಳ್ಳುತ್ತಾ ಬಂದಿರುವ ಶಂಕರಪುರ, ಇನ್ನಂಜೆ ಯಲ್ಲಿ 37 ಹಾಗೂ ಮುಂಬಯಿ, ಅಂಧೇರಿ ಪರಿಸರದಲ್ಲಿ 33 ವರ್ಷಗಳ ಹಿಂದೆ ಶ್ರೀ ಅಯ್ಯಪ್ಪ ಭಕ್ತವೃಂದ ಸೇವಾ ಸಮಿತಿ ಸ್ಥಾಪಿಸಿ ಅಯ್ಯಪ್ಪ ಮಹಾಪೂಜೆಯನ್ನು ನಡೆಸುತ್ತಾ ಸಾವಿರಾರು ಅಯ್ಯಪ್ಪ ಸ್ವಾಮಿಯ ಭಕ್ತರಿಗೆ ಅನುದಾನವನ್ನು ನೀಡುತ್ತಾ ಬಂದಿರುವ ಇನ್ನಂಜೆ ಚಂದ್ರ ಗುರುಸ್ವಾಮಿ ಅವರ ಈ ವರ್ಷದ 37 ನೇ ಶ್ರೀ ಅಯ್ಯಪ್ಪ ಮಹಾಪೂಜೆ ಜನವರಿ 7 ರಂದು ಶನಿವಾರ ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಇನ್ನಂಜೆಯಲ್ಲಿ ನಡೆಯಲಿದೆ

ಆ ಪ್ರಯುಕ್ತ ಜನವರಿ 6 ರ ಶುಕ್ರವಾರ ಸಂಜೆ 5 ಗಂಟೆಗೆ ಅಯ್ಯಪ್ಪ ಶಿಬಿರ ದಿಂದ ದೇವಸ್ಥಾನಕ್ಕೆ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ.ಜನವರಿ 7 ರ ಶನಿವಾರ ಬೆಳಿಗ್ಗೆ 5.00 ಕ್ಕೆ ಶರಣುಘೋಷ ಮತ್ತು ನಿತ್ಯ ಪೂಜೆ ಬೆಳಿಗ್ಗೆ 6 ರಿಂದ ಮಹಾಗಣಪತಿ ಹೋಮ ಬೆಳಿಗ್ಗೆ 11 ರಿಂದ ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಮಹಾಪೂಜೆ, ಆ ಬಳಿಕ ಮಹಾಪ್ರಸಾದ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6 ಗಂಟೆಗೆ ವಿಶೇಷ ಹೂವಿನ ಪೂಜೆಯ ನಂತರ ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಿಂದ ಅಯ್ಯಪ್ಪ ಶಿಬಿರದ ವರಗೆ ವಿಶೇಷ ಮೆರವಣಿಗೆ ನಡೆದು, ರಾತ್ರಿ 8 ಗಂಟೆಗೆ ಚಂದ್ರಹಾಸ ಗುರುಸ್ವಾಮಿಯವರ ನೇತೃತ್ವದಲ್ಲಿ ಪಡಿಪೂಜೆ ಹಾಗೂ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.

ರಾತ್ರಿ ಗಂಟೆ 9 ಕ್ಕೆ ಕಿನ್ನಿಗೋಳಿ ವಿಜಯಾ ಕಲಾವಿದರಿಂದ ಧಾರ್ಮಿಕ ಸ್ಪರ್ಶದ ಸಾಂಸ್ಕೃತಿಕ ನಾಟಕ "ಪಂಚ ಜೀಟಿಗೆ" ಪ್ರದರ್ಶನ ಗೊಳ್ಳಲಿದೆ. ಜನವರಿ 10 ರಂದು ಬೆಳಿಗ್ಗೆ 8 ಗಂಟೆಗೆ ಶಿಬಿರದಲ್ಲಿ ಇರುಮುಡಿ ಕಟ್ಟುವ ಕಾರ್ಯಕ್ರಮ ಇದೆ. ಭಕ್ತಾದಿಗಳೆಲ್ಲರೂ ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ಶ್ರೀ ಅಯ್ಯಪ್ಪ ಸ್ವಾಮಿಯ ಹಾಗೂ ಶ್ರೀ ವಿಷ್ಣುಮೂರ್ತಿ ದೇವರ ಮಹಾಪ್ರಸಾದ ಅನ್ನದಾನವನ್ನು ಸ್ವೀಕರಿಸಬೇಕೆಂದು ಸಂಸ್ಥಾಪಕರಾದ ಚಂದ್ರಹಾಸ ಗುರುಸ್ವಾಮಿ, ಉಪಾಧ್ಯಕ್ಷರುಗಳಾದ ಚಂದ್ರಹಾಸ ಜೆ. ಶೆಟ್ಟಿ, ಸೂರ್ಯಪ್ರಕಾಶ್ ಶಟ್ಟಿಗಾರ್, ಗೌರವ ಪ್ರಧಾನ ಕಾರ್ಯದರ್ಶಿ, ಬಾಬು ಎಂ ಶೆಟ್ಟಿ ಗೌರವ ಕೋಶಧಿಕಾರಿ ವಿಜಯ ಎಸ್. ಶೆಟ್ಟಿ , ಜೊತೆ ಕಾರ್ಯದರ್ಶಿಗಳಾದ ದಿಲೀಪ್ ಎಸ್. ಶೆಟ್ಟಿ ಪ್ರಭಾಶ್ಚಂದ್ರ ಎಸ್. ಶೆಟ್ಟಿ, ಜೊತೆ ಕೋಶಾಧಿಕಾರಿಗಳಾದ ಭರತ್ ಕೆ ಶೆಟ್ಟಿ, ಶಂಕರ್ ಎನ್ ಶೆಟ್ಟಿ ಮತ್ತು ಅಯ್ಯಪ್ಪ ಭಕ್ತ ವೃಂದ ಶಂಕರಪುರ ಹಾಗೂ ಮುಂಬಯಿಯ ಪದಾಧಿಕಾರಿಗಳು ವಿನಂತಿಸಿಕೊಂಡಿದ್ದಾರೆ.

ಕೊರೊನ ಮಹಾಮಾರಿ ತೊಲಗಲು ಪಾದಯಾತ್ರೆ ಕೈಗೊಂಡ ವಿಶ್ವ ಕಲ್ಲಟ್ಟೆ (ಈಚು ಸ್ವಾಮಿ)

Posted On: 04-01-2023 11:23PM

ಪಡುಬಿದ್ರಿ : ಹಲವು ವರ್ಷಗಳಿಂದ ಅಯ್ಯಪ್ಪ ಮಾಲಾಧಾರಿಯಾಗಿ ಪಾದಯಾತ್ರೆಯ ಮೂಲಕ ಕ್ಷೇತ್ರ ದರ್ಶನ ಮಾಡುತ್ತಿರುವ ಪಡುಬಿದ್ರಿಯ ವಿಶ್ವ ಕಲ್ಲಟ್ಟೆ (ಈಚು ಸ್ವಾಮಿ) ಈ ಬಾರಿಯು ಪಾದಯಾತ್ರೆ ಕೈಗೊಂಡಿದ್ದಾರೆ.

ಅದರಲ್ಲೇನು ವಿಶೇಷ ಅಂದುಕೊಳ್ಳಬಹುದು ಹೌದು ವಿಶೇಷವಿದೆ. ಕೊರೊನದ ಸಂದಿಗ್ಧ ಪರಿಸ್ಥಿತಿಯಲ್ಲಿ ಮಹಾಮಾರಿ ತೊಲಗಲು ಶಬರಿಮಲೆ ಕ್ಷೇತ್ರಕ್ಕೆ ತುಪ್ಪದ ಅಭಿಷೇಕವನ್ನು ಪಾದಯಾತ್ರೆಯ ಹರಕೆ ಹೊತ್ತಿದ್ದರು. ಆದರೆ ಶಬರಿಮಲೆಗೆ ಪಾದಯಾತ್ರೆ ಅಂದು ನಿಷಿದ್ಧವಿದ್ದರಿಂದ ಈ ಸೇವೆ ಮಾಡಲು ವಿಳಂಬವಾಯಿತು. ಈ ಬಾರಿ ಹರಕೆ ಪೂರೈಸುವ ನಿಟ್ಟಿನಲ್ಲಿ ಪಾದಯಾತ್ರೆ ಆರಂಭಿಸಿದ್ದಾರೆ.

ಇದಕ್ಕೂ ಮೊದಲು ವಿಶ್ವ ಕಲ್ಲಟ್ಟೆ ( ಈಚು ಸ್ವಾಮಿ) ನರೇಂದ್ರ ಮೋದಿ ದೇಶದ ಪ್ರಧಾನಿಯಾಗಲು ಪಾದಯಾತ್ರೆ ಹರಕೆ ಹೊತ್ತಿದ್ದರು.

ಸಾಮಾಜಿಕ ಸೇವಾ ಸಂಸ್ಥೆ ಪಡುಬಿದ್ರಿ ಭಗವತಿ ಗ್ರೂಪ್ ಇದರ ಸದಸ್ಯನಾಗಿದ್ದಾರೆ. ತನ್ನ ಒಳಿತಿಗಾಗಿ ದೇವರ ಮೊರೆ ಹೋಗುವ ಕಾಲಘಟ್ಟದಲ್ಲಿ ಸರ್ವರ ಒಳಿತಿಗಾಗಿ ವಿಶ್ವ ಕಲ್ಲಟ್ಟೆ (ಈಚು ಸ್ವಾಮಿ)ಯವರು ಕೈಗೊಂಡ ಪಾದಯಾತ್ರೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.

ಜನವರಿ 19 ರಿಂದ ಮಾಚ್೯ 11: ಪಡುಬಿದ್ರಿ ಢಕ್ಕೆಬಲಿ

Posted On: 04-01-2023 12:55PM

ಪಡುಬಿದ್ರಿ : ಇಲ್ಲಿನ ಖಡೇಶ್ವರೀ ಬ್ರಹ್ಮಸ್ಥಾನದಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಢಕ್ಕೆಬಲಿ ಸೇವೆಗಳು ಜನವರಿ 19ರಂದು ಮಂಡಲ ಹಾಕುವ ಢಕ್ಕೆಬಲಿ ಸೇವೆಯೊಂದಿಗೆ ಆರಂಭಗೊಳ್ಳಲಿದೆ.

ಮಾಚ್೯ 11ರಂದು ಮಂಡಲ ವಿಸರ್ಜನೆಯೊಂದಿಗೆ ಢಕ್ಕೆಬಲಿ ಸೇವೆಗಳು ಮುಕ್ತಾಯಗೊಳ್ಳಲಿವೆ.

ಈ ಬಾರಿ ಒಟ್ಟು 36 ಢಕ್ಕೆಬಲಿ ಸೇವೆಗಳು ಇರಲಿದೆ. ಹೆಚ್ಚಿನ ಮಾಹಿತಿಗೆ ಸೇವಾದಾರರು ಬ್ರಹ್ಮಸ್ಥಾನದ ಕಚೇರಿಯನ್ನು ಅಥವಾ ಖಡೇಶ್ವರೀ ವನದುರ್ಗಾ ಟ್ರಸ್ಟ್‌ನ ಕಾರ್ಯದರ್ಶಿ ವೈ.ಎನ್. ರಾಮಚಂದ್ರ ರಾವ್ ಅವರನ್ನು ಸಂಪರ್ಕಿಸುವಂತೆ ವಿನಂತಿಸಲಾಗಿದೆ.

ಜನವರಿ ತಿಂಗಳಲ್ಲಿ ಬ್ರಹ್ಮ ಬೈದರ್ಕಳ ಗರೋಡಿಗಳಲ್ಲಿ ಜರಗುವ ನೇಮೋತ್ಸವದ ವೇಳಾಪಟ್ಟಿ

Posted On: 04-01-2023 12:10PM

1/1- ಪಕ್ಕಿಬೆಟ್ಟು ಗರೋಡಿ 4/1- ಬೆರಂದೊಟ್ಟು ಗರೋಡಿ 5/1- ದೊಂಡೆರಂಗಡಿ ಗರೋಡಿ, ಮುಡಾಯೂರು ಅರಿಗೊ ಗರೋಡಿ 6/1- ಮಲ್ಲಾರು ಗರೋಡಿ, ಮರಿಪ್ಪಾದೆ ಬಾವಂತಬೆಟ್ಟು ಗರೋಡಿ, ಹಳೆನೇರಂಕಿ ಗರೋಡಿ 7/1- ಪಾಂದೆ ಗರೋಡಿ, ಪರ್ಪುಂಜ ರಾಮಜಾಲ್ ಗರೋಡಿ 8/1- ಕಂಕನಾಡಿ ಗರೋಡಿ, ಕೊಲಕೆ ಇರ್ವತ್ತೂರು ದೊಂಪದ ಬಲಿ 9/1- ಕಾಪು ಪೊಯ್ಯ ಪೊಡಿಕಲ್ಲ್ ಗರೋಡಿ 10/1- ನಿಟ್ಟೆ ಗರೋಡಿ ದೋಂಪದ ಬಲಿ 11/1- ಪಣಿಯೂರು ಮೇಲ್ ಗರೋಡಿ, ಪಣಿಯೂರು ಕೆಳ ಗರೋಡಿ 14/1- ಬಾಲ್ಕಟ್ಟ ಗರೋಡಿ 15/1- ಸೂಡ ಗರೋಡಿ 24/1 - ಗುಜ್ಜಾಡಿ ಗರೋಡಿ ಕಾಯಿದ ಪೂಜೆ 25/1 - ಬೊರಿವಲಿ ಗರೋಡಿ 27/1 - ಬೋಳೂರು ಮರ್ಣೆ ಗರೋಡಿ 28/1 - ಕೊಲಕೆ ಇರ್ವತ್ತೂರು ಗರೋಡಿ

ಕಾಪು : ಉಡುಪಿ ಜಿಲ್ಲಾ ರಜತ ಮಹೋತ್ಸವ - ಪೂರ್ವಭಾವಿ ಸಭೆ

Posted On: 04-01-2023 10:55AM

ಕಾಪು : ಉಡುಪಿ ಜಿಲ್ಲಾ ರಜತ ಮಹೋತ್ಸವ ಕಾರ್ಯಕ್ರಮವನ್ನು ಕಾಪು ತಾಲೂಕಿನಲ್ಲಿ ಜನವರಿ ತಿಂಗಳಲ್ಲಿ ಆಚರಿಸುವ ಬಗ್ಗೆ ಪೂರ್ವಭಾವಿ ಸಭೆಯನ್ನು ಮಂಗಳವಾರ ಕಾಪು ಪುರಸಭೆಯಲ್ಲಿ ಆಯೋಜಿಸಲಾಗಿತ್ತು.

ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಈಗಾಗಲೇ ಉಡುಪಿ ಜಿಲ್ಲೆಯ ವಿವಿಧ ತಾಲೂಕಿನಲ್ಲಿ ರಜತ ಮಹೋತ್ಸವದ ಅಂಗವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭ ಕಾಪು ತಾಲೂಕಿನಲ್ಲಿ ಜನವರಿ 21 ರಂದು ಕಾರ್ಯಕ್ರಮ ‌ಆಯೋಜಿಸಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಕಾಪು ತಹಶೀಲ್ದಾರ್ ಶ್ರೀನಿವಾಸ ಕುಲಕರ್ಣಿ, ಕಾಪು ಪೋಲಿಸ್ ವೃತ್ತ ನಿರೀಕ್ಷಕರಾದ ಪೂವಯ್ಯ, ಪುರಸಭಾ ಮುಖ್ಯಾಧಿಕಾರಿ ವೆಂಕಟೇಶ ನಾವಡ, ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಧರ್, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರೇಗೌಡ, ಸುದಾಮ ಶೆಟ್ಟಿ, ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು, ರಾಜಕೀಯ ಮುಖಂಡರು, ಮತ್ತಿತರರು ‌ಉಪಸ್ಥಿತರಿದ್ದರು.

ಶಾಲೆಗಳು ಕಾರ್ಖಾನೆಯಾಗಬಾರದು : ವಿಶ್ವವಲ್ಲಭ ತೀರ್ಥ ಸ್ವಾಮೀಜಿ

Posted On: 04-01-2023 10:27AM

ಕಾಪು : ಶಿಕ್ಷಣ ವ್ಯವಸ್ಥೆಯಲ್ಲಿ ನೈತಿಕ ಶಿಕ್ಷಣ ಅನಿವಾರ್ಯ. ರಿಯಾಲಿಟಿ ಷೊಗಳನ್ನು ತೋರಿಸುವ ಮೂಲಕ ಮಕ್ಕಳಿಗೆ ಒತ್ತಡ ಹಾಕಿ ಅವರಂತಾಗಬೇಕು ಇವರಂತಾಗ ಬೇಕೆನ್ನುವುದು ತಪ್ಪು. ಮಕ್ಕಳ ನೈಜ ಪ್ರತಿಭೆ ಗುರುತಿಸುವುದು ಶಿಕ್ಷಣ ಸಂಸ್ಥೆಗಳ ಕಾರ್ಯ. ಮಕ್ಕಳು ಒತ್ತಡದಲ್ಲಿಯೆ ಬದುಕುವವರೆಗೆ ತಲುಪಿದೆ ಇಂದಿನ ಶಿಕ್ಷಣ. ಶಾಲೆಗಳು ಕಾರ್ಖಾನೆಯಾಗಬಾರದು. ವಿಶ್ವೇಂದ್ರ ತೀರ್ಥರ ದೂರದೃಷ್ಟಿಯಲ್ಲಿ ಸ್ಥಾಪನೆಯಾದ ಇನ್ನಂಜೆ ಸಂಸ್ಥೆ ಸಮಾಜಕ್ಕೆ ನೀಡಿದ ದೊಡ್ಡ ಕೊಡುಗೆ. ಕರ್ನಾಟಕದಲ್ಲಿ ಮೊತ್ತ ಮೊದಲು ಬಿಸಿ ಊಟ ನೀಡಿದ ಶಾಲೆ ಇನ್ನಂಜೆ ಎಂದು ಸೋದೆ ವಾದಿರಾಜ ಮಠದ ಯತಿವರ್ಯ ಮತ್ತು ಎಸ್ ವಿ ಎಚ್ ಶಿಕ್ಷಣ ಸಂಸ್ಥೆಗಳ ವಿಶ್ವಸ್ತ ಮಂಡಳಿಯ ಅಧ್ಯಕ್ಷರಾದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಹೇಳಿದರು.

ಅವರು ಎಸ್ ವಿ ಎಚ್ ಆಂಗ್ಲ ಮಾಧ್ಯಮ ಶಾಲೆ, ಎಸ್ ವಿ ಎಚ್ ಆಂಗ್ಲ ಮಾಧ್ಯಮ ನರ್ಸರಿ ಮತ್ತು ಹೈಯರ್ ಪ್ರೈಮರಿ ಶಾಲೆ ಇನ್ನಂಜೆಯ ವಿಶ್ವೋತ್ತಮ ರಂಗಮಂಟಪದಲ್ಲಿ ಜರಗಿದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಕೆನಡಾದ ಸರ್ಜಿಕಲ್ ಸೈನ್ಸ್ ಇನ್ನೊವೆಷನ್ ಸಲಹೆಗಾರರಾದ ಡಾ. ಅಶ್ವತ್ ವಿನಾಯಕ್ ಕುಲಕರ್ಣಿ, ಉಡುಪಿಯ ಐಡಿಯಲ್ ಮೆಡಿಕಲ್ ಸಪ್ಲೈಸ್ ಆಡಳಿತ ನಿರ್ದೇಶಕ ವಿ.ಜಿ. ಶೆಟ್ಟಿ, ಎಸ್ ವಿ ಎಚ್ ಶಿಕ್ಷಣ ‌ಸಂಸ್ಥೆಗಳ ಕಾರ್ಯದರ್ಶಿ ರತ್ನಕುಮಾರ್ ,ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಉಮೇಶ್ ಆಚಾರ್ಯ, ಆಡಳಿತಾಧಿಕಾರಿ ಅನಂತ ಮೂಡಿತ್ತಾಯ, ಶಾಲಾ ಮುಖ್ಯಶಿಕ್ಷಕಿಯರಾದ ಮಮತ ಮತ್ತು ಸುಷ್ಮ ಉಪಸ್ಥಿತರಿದ್ದರು.

ಆಡಳಿತಾಧಿಕಾರಿ ಅನಂತ ಮೂಡಿತ್ತಾಯ ಸ್ವಾಗತಿಸಿದರು. ಶಾಲಾ ಮುಖ್ಯಶಿಕ್ಷಕಿಯರಾದ ಮಮತ ಮತ್ತು ಸುಷ್ಮ ವರದಿ ವಾಚಿಸಿದರು. ಶಿಕ್ಷಕಿ ಲವೀನ ಬಹುಮಾನಿತರ ಪಟ್ಟಿ ವಾಚಿಸಿದರು. ವಿದ್ಯಾರ್ಥಿಗಳಾದ ಶಮಿಕ ಮತ್ತು ಹರ್ಷಿತ್ ಕಾರ್ಯಕ್ರಮ ನಿರೂಪಿಸಿದರು.

ಜನವರಿ 7 : ಮಜೂರಿನಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ; ಅನ್ನಸಂತರ್ಪಣೆ

Posted On: 03-01-2023 11:18PM

ಕಾಪು : ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಮತ್ತು ಮಹಾ ಅನ್ನಸಂತರ್ಪಣೆಯ ಮಜೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜನವರಿ 7, ಶನಿವಾರ ಮಧ್ಯಾಹ 12:30ಕ್ಕೆ ಜರಗಲಿದ್ದು ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ಶ್ರೀ ಅಯ್ಯಪ್ಪ ಸ್ವಾಮಿಯ ಸಿರಿಮುಡಿ ಗಂಧ-ಪ್ರಸಾದವನ್ನು ಸ್ವೀಕರಿಸಿ, ಕೃತಾರ್ಥರಾಗಬೇಕೆಂದು ಪ್ರಕಟನೆಯ ಮೂಲಕ ತಿಳಿಸಿದ್ದಾರೆ.