Updated News From Kaup
ಗ್ಲೋಬಲ್ ಅಚೀವ್ ಮೆಂಟ್ ಪುರಸ್ಕಾರಕ್ಕೆ ಆಯ್ಕೆಯಾದ ರಾಘವೇಂದ್ರ ಪ್ರಭು ಕವಾ೯ಲು
Posted On: 05-01-2023 07:25PM
ಉಡುಪಿ : ಶೀ ಲಕ್ಷಮ್ಮ ದೇವಿ ಕಲಾಪೋಷಕ ಸಂಘ ರಾಯಭಾಗ್ ಬೆಳಗಾವಿ ಇದರ ವತಿಯಿಂದ ಧಾರವಾಡ ರಂಗಾಯಣದಲ್ಲಿ ನಡೆಯಲಿರುವ ಕನಾ೯ಟಕ ಸಾಧಕರ ಸಮಾವೇಶದಲ್ಲಿ ನೀಡಲಾಗುವ ಗ್ಲೋಬಲ್ ಅಚೀವ್ ಮೆಂಟ್ ಪುರಸ್ಕಾರಕ್ಕೆ ಉಡುಪಿಯ ರಾಘವೇಂದ್ರ ಪ್ರಭು, ಕವಾ೯ಲು ಯುವ ಸಂಘಟನೆ/ ಸಮಾಜ ಸೇವೆ ವಿಭಾಗದಲ್ಲಿ ಆಯ್ಕೆಯಾಗಿದ್ದಾರೆ.
ಜ. 7 : ಚಂದ್ರಹಾಸ ಗುರುಸ್ವಾಮಿ ಇನ್ನಂಜೆಯವರ ಶ್ರೀ ಅಯ್ಯಪ್ಪ ಭಕ್ತವೃಂದ ಶಂಕರಪುರದ 37ನೇ ವಾರ್ಷಿಕ ಅಯ್ಯಪ್ಪ ಮಹಾಪೂಜೆ
Posted On: 04-01-2023 11:30PM
ಕಾಪು : ಮುಂಬೈ ಮಹಾನಗರದಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿಯ ಪರಮ ಭಕ್ತರಾಗಿ ಗುರುತಿಸಿಕೊಂಡು, ಧಾರ್ಮಿಕ ಶೈಕ್ಷಣಿಕ ಸೇವೆಗಳಿಗೆ ತನ್ನ ಬದುಕನ್ನು ಮುಡುಪಾಗಿಟ್ಟದ್ದು ಕಳೆದ 37 ವರ್ಷಗಳಿಂದ ಕಲಿಯುಗ ವರದ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಕಟ್ಟುನಿಟ್ಟಿನ ವೃತ್ತವನ್ನು ಮಾಡಿ ಶಬರಿಮಲೆ ಯಾತ್ರೆಯನ್ನು ಕೈಗೊಳ್ಳುತ್ತಾ ಬಂದಿರುವ ಶಂಕರಪುರ, ಇನ್ನಂಜೆ ಯಲ್ಲಿ 37 ಹಾಗೂ ಮುಂಬಯಿ, ಅಂಧೇರಿ ಪರಿಸರದಲ್ಲಿ 33 ವರ್ಷಗಳ ಹಿಂದೆ ಶ್ರೀ ಅಯ್ಯಪ್ಪ ಭಕ್ತವೃಂದ ಸೇವಾ ಸಮಿತಿ ಸ್ಥಾಪಿಸಿ ಅಯ್ಯಪ್ಪ ಮಹಾಪೂಜೆಯನ್ನು ನಡೆಸುತ್ತಾ ಸಾವಿರಾರು ಅಯ್ಯಪ್ಪ ಸ್ವಾಮಿಯ ಭಕ್ತರಿಗೆ ಅನುದಾನವನ್ನು ನೀಡುತ್ತಾ ಬಂದಿರುವ ಇನ್ನಂಜೆ ಚಂದ್ರ ಗುರುಸ್ವಾಮಿ ಅವರ ಈ ವರ್ಷದ 37 ನೇ ಶ್ರೀ ಅಯ್ಯಪ್ಪ ಮಹಾಪೂಜೆ ಜನವರಿ 7 ರಂದು ಶನಿವಾರ ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಇನ್ನಂಜೆಯಲ್ಲಿ ನಡೆಯಲಿದೆ
ಕೊರೊನ ಮಹಾಮಾರಿ ತೊಲಗಲು ಪಾದಯಾತ್ರೆ ಕೈಗೊಂಡ ವಿಶ್ವ ಕಲ್ಲಟ್ಟೆ (ಈಚು ಸ್ವಾಮಿ)
Posted On: 04-01-2023 11:23PM
ಪಡುಬಿದ್ರಿ : ಹಲವು ವರ್ಷಗಳಿಂದ ಅಯ್ಯಪ್ಪ ಮಾಲಾಧಾರಿಯಾಗಿ ಪಾದಯಾತ್ರೆಯ ಮೂಲಕ ಕ್ಷೇತ್ರ ದರ್ಶನ ಮಾಡುತ್ತಿರುವ ಪಡುಬಿದ್ರಿಯ ವಿಶ್ವ ಕಲ್ಲಟ್ಟೆ (ಈಚು ಸ್ವಾಮಿ) ಈ ಬಾರಿಯು ಪಾದಯಾತ್ರೆ ಕೈಗೊಂಡಿದ್ದಾರೆ.
ಜನವರಿ 19 ರಿಂದ ಮಾಚ್೯ 11: ಪಡುಬಿದ್ರಿ ಢಕ್ಕೆಬಲಿ
Posted On: 04-01-2023 12:55PM
ಪಡುಬಿದ್ರಿ : ಇಲ್ಲಿನ ಖಡೇಶ್ವರೀ ಬ್ರಹ್ಮಸ್ಥಾನದಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಢಕ್ಕೆಬಲಿ ಸೇವೆಗಳು ಜನವರಿ 19ರಂದು ಮಂಡಲ ಹಾಕುವ ಢಕ್ಕೆಬಲಿ ಸೇವೆಯೊಂದಿಗೆ ಆರಂಭಗೊಳ್ಳಲಿದೆ.
ಜನವರಿ ತಿಂಗಳಲ್ಲಿ ಬ್ರಹ್ಮ ಬೈದರ್ಕಳ ಗರೋಡಿಗಳಲ್ಲಿ ಜರಗುವ ನೇಮೋತ್ಸವದ ವೇಳಾಪಟ್ಟಿ
Posted On: 04-01-2023 12:10PM
1/1- ಪಕ್ಕಿಬೆಟ್ಟು ಗರೋಡಿ 4/1- ಬೆರಂದೊಟ್ಟು ಗರೋಡಿ 5/1- ದೊಂಡೆರಂಗಡಿ ಗರೋಡಿ, ಮುಡಾಯೂರು ಅರಿಗೊ ಗರೋಡಿ 6/1- ಮಲ್ಲಾರು ಗರೋಡಿ, ಮರಿಪ್ಪಾದೆ ಬಾವಂತಬೆಟ್ಟು ಗರೋಡಿ, ಹಳೆನೇರಂಕಿ ಗರೋಡಿ 7/1- ಪಾಂದೆ ಗರೋಡಿ, ಪರ್ಪುಂಜ ರಾಮಜಾಲ್ ಗರೋಡಿ 8/1- ಕಂಕನಾಡಿ ಗರೋಡಿ, ಕೊಲಕೆ ಇರ್ವತ್ತೂರು ದೊಂಪದ ಬಲಿ 9/1- ಕಾಪು ಪೊಯ್ಯ ಪೊಡಿಕಲ್ಲ್ ಗರೋಡಿ 10/1- ನಿಟ್ಟೆ ಗರೋಡಿ ದೋಂಪದ ಬಲಿ 11/1- ಪಣಿಯೂರು ಮೇಲ್ ಗರೋಡಿ, ಪಣಿಯೂರು ಕೆಳ ಗರೋಡಿ 14/1- ಬಾಲ್ಕಟ್ಟ ಗರೋಡಿ 15/1- ಸೂಡ ಗರೋಡಿ 24/1 - ಗುಜ್ಜಾಡಿ ಗರೋಡಿ ಕಾಯಿದ ಪೂಜೆ 25/1 - ಬೊರಿವಲಿ ಗರೋಡಿ 27/1 - ಬೋಳೂರು ಮರ್ಣೆ ಗರೋಡಿ 28/1 - ಕೊಲಕೆ ಇರ್ವತ್ತೂರು ಗರೋಡಿ
ಕಾಪು : ಉಡುಪಿ ಜಿಲ್ಲಾ ರಜತ ಮಹೋತ್ಸವ - ಪೂರ್ವಭಾವಿ ಸಭೆ
Posted On: 04-01-2023 10:55AM
ಕಾಪು : ಉಡುಪಿ ಜಿಲ್ಲಾ ರಜತ ಮಹೋತ್ಸವ ಕಾರ್ಯಕ್ರಮವನ್ನು ಕಾಪು ತಾಲೂಕಿನಲ್ಲಿ ಜನವರಿ ತಿಂಗಳಲ್ಲಿ ಆಚರಿಸುವ ಬಗ್ಗೆ ಪೂರ್ವಭಾವಿ ಸಭೆಯನ್ನು ಮಂಗಳವಾರ ಕಾಪು ಪುರಸಭೆಯಲ್ಲಿ ಆಯೋಜಿಸಲಾಗಿತ್ತು.
ಶಾಲೆಗಳು ಕಾರ್ಖಾನೆಯಾಗಬಾರದು : ವಿಶ್ವವಲ್ಲಭ ತೀರ್ಥ ಸ್ವಾಮೀಜಿ
Posted On: 04-01-2023 10:27AM
ಕಾಪು : ಶಿಕ್ಷಣ ವ್ಯವಸ್ಥೆಯಲ್ಲಿ ನೈತಿಕ ಶಿಕ್ಷಣ ಅನಿವಾರ್ಯ. ರಿಯಾಲಿಟಿ ಷೊಗಳನ್ನು ತೋರಿಸುವ ಮೂಲಕ ಮಕ್ಕಳಿಗೆ ಒತ್ತಡ ಹಾಕಿ ಅವರಂತಾಗಬೇಕು ಇವರಂತಾಗ ಬೇಕೆನ್ನುವುದು ತಪ್ಪು. ಮಕ್ಕಳ ನೈಜ ಪ್ರತಿಭೆ ಗುರುತಿಸುವುದು ಶಿಕ್ಷಣ ಸಂಸ್ಥೆಗಳ ಕಾರ್ಯ. ಮಕ್ಕಳು ಒತ್ತಡದಲ್ಲಿಯೆ ಬದುಕುವವರೆಗೆ ತಲುಪಿದೆ ಇಂದಿನ ಶಿಕ್ಷಣ. ಶಾಲೆಗಳು ಕಾರ್ಖಾನೆಯಾಗಬಾರದು. ವಿಶ್ವೇಂದ್ರ ತೀರ್ಥರ ದೂರದೃಷ್ಟಿಯಲ್ಲಿ ಸ್ಥಾಪನೆಯಾದ ಇನ್ನಂಜೆ ಸಂಸ್ಥೆ ಸಮಾಜಕ್ಕೆ ನೀಡಿದ ದೊಡ್ಡ ಕೊಡುಗೆ. ಕರ್ನಾಟಕದಲ್ಲಿ ಮೊತ್ತ ಮೊದಲು ಬಿಸಿ ಊಟ ನೀಡಿದ ಶಾಲೆ ಇನ್ನಂಜೆ ಎಂದು ಸೋದೆ ವಾದಿರಾಜ ಮಠದ ಯತಿವರ್ಯ ಮತ್ತು ಎಸ್ ವಿ ಎಚ್ ಶಿಕ್ಷಣ ಸಂಸ್ಥೆಗಳ ವಿಶ್ವಸ್ತ ಮಂಡಳಿಯ ಅಧ್ಯಕ್ಷರಾದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಹೇಳಿದರು.
ಜನವರಿ 7 : ಮಜೂರಿನಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ; ಅನ್ನಸಂತರ್ಪಣೆ
Posted On: 03-01-2023 11:18PM
ಕಾಪು : ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಮತ್ತು ಮಹಾ ಅನ್ನಸಂತರ್ಪಣೆಯ ಮಜೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಜನವರಿ 7, ಶನಿವಾರ ಮಧ್ಯಾಹ 12:30ಕ್ಕೆ ಜರಗಲಿದ್ದು ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ಶ್ರೀ ಅಯ್ಯಪ್ಪ ಸ್ವಾಮಿಯ ಸಿರಿಮುಡಿ ಗಂಧ-ಪ್ರಸಾದವನ್ನು ಸ್ವೀಕರಿಸಿ, ಕೃತಾರ್ಥರಾಗಬೇಕೆಂದು ಪ್ರಕಟನೆಯ ಮೂಲಕ ತಿಳಿಸಿದ್ದಾರೆ.
ಹೆಜಮಾಡಿ : ಬ್ರಹ್ಮಸ್ಥಾನದ ಬಳಿ ಬೆಂಕಿ ಅವಘಡ
Posted On: 03-01-2023 06:27PM
ಹೆಜಮಾಡಿ : ಗ್ರಾಮ ಪಂಚಾಯತ್ ವ್ಯಾಪ್ತಿಯ 5ನೇ ವಾರ್ಡ್ ಬ್ರಹ್ಮಸ್ಥಾನದ ದ್ವಾರದ ಬಳಿ ಸುಮಾರು ೫ ಎಕರೆ ಬಯಲು ಪ್ರದೇಶಕ್ಕೆ ಆಕಸ್ಮಿಕ ಬೆಂಕಿ ತಗಲಿ ಸ್ಥಳೀಯರು , ಯುಪಿಸಿಎಲ್ ಅಗ್ನಿಶಾಮಕ ದಳದಿಂದ ಸಕಾಲಿಕ ಕಾರ್ಯಾಚರಣೆ ಮೂಲಕ ಬೆಂಕಿ ನಂದಿಸಲಾಯಿತು.
ಮಜೂರು : ಶ್ರೀ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಕಲಶಾಭಿಷೇಕ, ನೇಮೋತ್ಸವ ಸಂಪನ್ನ
Posted On: 03-01-2023 02:06PM
ಕಾಪು : ಮಜೂರು ನಲ್ಲಿ ನೂತನವಾಗಿ ಜೀರ್ಣೋದ್ಧಾರಗೊಂಡಿರುವ ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರಗಳ ದೈವಸ್ಥಾನದಲ್ಲಿ ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರಗಳ ದೈವಗಳ ಪುನಃ ಪ್ರತಿಷ್ಠೆಯು ಶ್ರೀನಿವಾಸ ಭಟ್ ಮಜೂರು ಅವರ ನೇತೃತ್ವದಲ್ಲಿ ಸಂಪನ್ನಗೊಂಡಿತು.
