Updated News From Kaup
ಶಿರ್ವ : ಮಕ್ಕಳಿಗೆ ಹೆತ್ತವರು ದ್ವಿ ಚಕ್ರ ವಾಹನ ನೀಡಬೇಡಿ - ರಾಘವೇಂದ್ರ ಸಿ
Posted On: 16-12-2022 04:52PM
ಶಿರ್ವ : ಹದಿನೆಂಟು ವಯಸ್ಸಾಗದ ಕೆಳ ವಯಸ್ಸಿನ ಮಕ್ಕಳಿಗೆ ದ್ವಿ ಚಕ್ರ ವಾಹನ ಹಾಗೂ ಇತರ ವಾಹನ ನೀಡದೆ ಸಂಪೂರ್ಣ ವಾಹನ ಚಾಲನೆ ಪರವಾನಿಗೆ ಪಡೆದ ಮೇಲೆ ವಾಹನವನ್ನು ರಸ್ತೆಗೆ ಇಳಿಸಬೇಕು ಹೆತ್ತವರು ಜಾಗ್ರತೆ ವಹಿಸಿ ಮಕ್ಕಳನ್ನು ಅಪಾಯದಿಂದ ರಕ್ಷಿಸಿಕೊಳ್ಳಿ. ಅದಲ್ಲದೆ ಮಾದಕ ದ್ರವ್ಯಗಳ ಕುರಿತು ಎಚ್ಚರಿಕೆಯಿಂದಿದ್ದು ಎಲ್ಲಾ ವಾಹನ ಮಾಲಕರು ತನ್ನ ವಾಹನದ ನಾಲ್ಕು ಬಗೆಯ ದಾಖಲೆಯನ್ನು ವಾಹನದಲ್ಲಿರಿಸಿ ತಪಾಸಣೆ ಸಮಯದಲ್ಲಿ ಸಾರ್ವಜನಿಕರು ಸಹಕರಿಸಬೇಕು ಮನೆಯಿಂದ ಹೊರಗೆ ಹೋಗುವಾಗ ಮನೆಯ ಸುರಕ್ಷತೆಯಿಂದ ಕಾಪಾಡಬೇಕು ಅಪರಾಧ ಆದಾಗ ಪೊಲೀಸರನ್ನು ಕೂಡಲೇ ಸಂಪರ್ಕಿಸಬೇಕು ನಾವೂ ಸದಾ ನಿಮ್ಮ ಸೇವೆಯಲ್ಲಿ ಇರುತ್ತೇವೆ ಎಂದು ಕಳತ್ತೂರು ಚಂದ್ರನಗರದ ಬಟರ್ ಫ್ಲೈ ಗೆಸ್ಟ್ ಹೌಸ್ ಸಭಾಂಗಣದಲ್ಲಿ ಶಿರ್ವ ಪೊಲೀಸ್ ಠಾಣಾ ವತಿಯಿಂದ ನಡೆದ ಅಪರಾಧ ಮಾಸ ತಡೆ ಮಾಸಚರಣೆ ಸಭೆಯಲ್ಲಿ ಶಿರ್ವ ಠಾಣಾಧಿಕಾರಿ ರಾಘವೇಂದ್ರ ಮಾತನಾಡಿ ಸಾರ್ವಜನಿಕರಿಗೆ ಸಲಹೆ ನೀಡಿದರು.
ಕಾಪು ಬೀಚ್ನಲ್ಲಿ ಸಮುದ್ರ ಪಾಲಾಗುತ್ತಿದ್ದ ಪ್ರವಾಸಿಗರ ರಕ್ಷಣೆ
Posted On: 16-12-2022 12:25PM
ಕಾಪು : ಕಾಪು ಲೈಟ್ ಹೌಸ್ ಬೀಚ್ ಬಳಿ ಸಮುದ್ರದಲ್ಲಿ ನೀರು ಪಾಲಾಗುತ್ತಿದ್ದ ಹೈದರಾಬಾದ್ ಮೂಲದ ಇಬ್ಬರು ಪ್ರವಾಸಿಗರನ್ನು ಕಾಪು ಬೀಚ್ನ ಲೈಫ್ ಗಾರ್ಡ್ಗಳು ರಕ್ಷಿಸಿದ್ದಾರೆ.
ಸಂತ ಮೇರಿ ಮಹಾವಿದ್ಯಾಲಯ ಶಿರ್ವದಲ್ಲಿ ‘ರಾಷ್ಟ್ರೀಯ ಭೂ-ಯುವಸೇನಾ ತರಬೇತಿ ಶಿಬಿರ'
Posted On: 16-12-2022 11:09AM
ಶಿರ್ವ : ಸಂತ ಮೇರಿ ಮಹಾವಿದ್ಯಾಲಯ, ಶಿರ್ವ ಇದರ ರಾಷ್ಟ್ರೀಯ ಭೂ-ಯುವಸೇನಾದಳದ ಎನ್.ಸಿ.ಸಿ. ಘಟಕ ಮತ್ತು 21 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಉಡುಪಿ ಕಮಾಂಡಿಂಗ್ ಆಫೀಸರ್ ಕರ್ನಲ್ ಆರ್ ಕೆ ಸಿಂಗ್ ಮಾರ್ಗದರ್ಶನದಲ್ಲಿ ಒಂದು ದಿನದ ಶಸ್ತ್ರ ತರಬೇತಿ ಶಿಬಿರವು ಏರ್ಪಡಿಸಲಾಯಿತು. ಶಸ್ತ್ರಾಸ್ತ್ರ ಕಲಿಕೆ ಒಂದು ಸುವರ್ಣ ಅವಕಾಶ , ಇದು ಎಲ್ಲಾ ವಿದ್ಯಾರ್ಥಿಗಳಿಗೆ ಸಿಗುವುದಿಲ್ಲ ಕೆಡೆಟ್ಗಳು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಕಾಲೇಜಿನ ಪ್ರಾಂಶುಪಾಲ ಡಾ!ಹೆರಾಲ್ಡ್ ಐವನ್ ಮೋನಿಸ್ ರವರು ಮಾತನಾಡಿದರು.
ಪಡುಬಿದ್ರಿ : ಹೆಜ್ಜೇನು ದಾಳಿ - ಓರ್ವ ಮೃತ ; ಇನ್ನೋರ್ವ ಗಂಭೀರ
Posted On: 15-12-2022 08:06PM
ಪಡುಬಿದ್ರಿ : ಇಲ್ಲಿನ ಬೀಚ್ ಬಳಿ ಹೆಜ್ಜೇನು ದಾಳಿಯಿಂದ ಒರ್ವ ವ್ಯಕ್ತಿ ಮೃತಪಟ್ಟರು ಇನ್ನೋರ್ವ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ್ದು ಹಲವರು ಗಾಯಗೊಂಡಿರುವ ಘಟನೆ ಇಂದು ನಡೆದಿದೆ.
ಪಾಂಗಾಳದಲ್ಲಿ ಮಹಾಲಕ್ಷ್ಮೀ ರೆಡಿಮೇಡ್ ಗಾರ್ಮೆಂಟ್ಸ್ ಉದ್ಘಾಟನೆ
Posted On: 15-12-2022 02:45PM
ಪಾಂಗಾಳ : ಇಲ್ಲಿನ ಬರೋಡಾ ಬ್ಯಾಂಕ್ ನ ಎದುರುಗಡೆ ಇರುವ ಕೆ.ಕೆ. ಆರ್ಕೆಡ್, ಒಂದನೇ ಮಹಡಿಯಲ್ಲಿ ಮಹಾಲಕ್ಷ್ಮೀ ರೆಡಿಮೇಡ್ ಗಾರ್ಮೆಂಟ್ಸ್ ನ್ನು ಬುಧವಾರ ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್ ಉದ್ಘಾಟಿಸಿದರು.
ಉಡುಪಿ : ಟೋಲ್ ಗೇಟ್ - ಸಮಾನ ಮನಸ್ಕರ ಸಭೆ ; ಅಧ್ಯಾದೇಶದ ವಾಪಾಸಿಗೆ ಧರಣಿಯ ತೀರ್ಮಾನ
Posted On: 14-12-2022 10:01PM
ಉಡುಪಿ : ಸುರತ್ಕಲ್ ನಿಂದ ತೆರವುಗೊಳಿಸಿರುವ ಅಕ್ರಮ ಟೋಲ್ ಗೇಟ್ ಅನ್ನು ಹೆಜಮಾಡಿ ಟೋಲ್ ಗೇಟ್ ನಲ್ಲಿ ವಿಲೀನಗೊಳಿಸಿ ಸುರತ್ಕಲ್ ಟೋಲ್ ಸುಂಕವನ್ನು ಹೆಜಮಾಡಿ ಟೋಲ್ ಗೇಟ್ ನಲ್ಲಿ ಸಂಗ್ರಹಿಸುವ ಹೆದ್ದಾರಿ ಪ್ರಾಧಿಕಾರದ ಆದ್ಯಾದೇಶ ಜಾರಿಗೊಳಿಸಲು ತೆರೆಮರೆಯಲ್ಲಿ ಪ್ರಯತ್ನಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ನಡೆಸಬೇಕಾದ ಹೋರಾಟದ ಕುರಿತು ಚರ್ಚಿಸಲು ಉಡುಪಿ ಅಜ್ಜರಕಾಡಿನಲ್ಲಿ ಇಂದು ಸಮಾನ ಮನಸ್ಕ ಸಂಘಟನೆಗಳ ಸಭೆ ನಡೆಯಿತು.
34 ನೇ ವರ್ಷದ ಮುಂಡ್ಕೂರು ನಾನಿಲ್ತಾರ್ ಕುಲಾಲ ಸಂಘದ ವಾರ್ಷಿಕ ಮಹಾಸಭೆಯ ಆಮಂತ್ರಣ ಪತ್ರಿಕೆ ಬಿಡುಗಡೆ
Posted On: 14-12-2022 09:43PM
ಕಾರ್ಕಳ :ಮುಂಡ್ಕೂರು ನಾನಿಲ್ತಾರ್ ಕುಲಾಲ ಸಂಘದ 34ನೇ ವರ್ಷದ ವಾರ್ಷಿಕ ಮಹಾಸಭೆ, ಶ್ರೀ ಸತ್ಯನಾರಾಯಣ ಪೂಜೆ, ಅಭಿನಂದನ ಕಾರ್ಯಕ್ರಮ, ವೈದಕೀಯ ನೆರವು, ಸಾಂಸ್ಕೃತಿಕ ಕಾರ್ಯಕ್ರಮದ ಆಮಂತ್ರಣ ಬಿಡುಗಡೆ ಬುಧವಾರ ಕುಲಾಲ ಸಭಾಭವನದಲ್ಲಿ ಸಂಘದ ಅಧ್ಯಕ್ಷರಾದ ಕುಶ ಆರ್ ಮೂಲ್ಯ ಅಧ್ಯಕ್ಷತೆಯಲ್ಲಿ ಜರಗಿತು.
ಉಡುಪಿ : ಹಾವಂಜೆ ಕೊಳಲುಗಿರಿ ದೊಡ್ಡಮನೆ ಮರ್ಲ್ ಜುಮಾದಿ ದೈವದ ದರ್ಶನ ಸೇವೆ
Posted On: 14-12-2022 09:37PM
ಉಡುಪಿ : ಜಿಲ್ಲೆಯಲ್ಲಿ 500 ವರ್ಷಗಳ ಇತಿಹಾಸವಿರುವ ಉಡುಪಿ ಜಿಲ್ಲೆಯ ಹಾವಂಜೆ ಕೊಳಲುಗಿರಿ ದೊಡ್ಡಮನೆ ಮರ್ಲ್ ಜುಮಾದಿ ಹಾಗೂ ಬಂಟ ದೈವಗಳ ದೈವಸ್ಥಾನ ಜೀರ್ಣೋದ್ಧಾರದ ಪ್ರಯುಕ್ತ ಬುಧವಾರ ಜುಮಾದಿ ದೈವದ ದರ್ಶನ ಸೇವೆ ಜರಗಿತು.
ಡಿಸೆಂಬರ್ 31 : ಮೂಳೂರು ಮೂಲ್ಯ ಮನೆಯಲ್ಲಿ ಸಿರಿ ಸಿಂಗಾರದ ನೇಮೋತ್ಸವ
Posted On: 14-12-2022 02:33PM
ಕಾಪು : ತಾಲೂಕಿನ ಮೂಳೂರು ಮೂಲ್ಯ ಮನೆ ಕುಟುಂಬಸ್ಥರು ಆರಾಧಿಸಿಕೊಂಡು ಬಂದಿರುವ ದೈವಗಳ ಹರಕೆಯ ಸಿರಿ ಸಿಂಗಾರದ ನೇಮೋತ್ಸವ ಡಿಸೆಂಬರ್ 31, ಶನಿವಾರದಂದು ಜರಗಲಿದೆ.
ಪಲಿಮಾರು : ಕೈ ತೋಟ ಕ್ರಾಂತಿಯಾಗಲಿ ಕಾರ್ಯಕ್ರಮ
Posted On: 11-12-2022 07:08PM
ಪಲಿಮಾರು : ಹೊೖಗೆ ಫ್ರೆಂಡ್ಸ್ ಹೊೖಗೆ (ರಿ.) ಪಲಿಮಾರು ಹಾಗೂ ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರು ಇವರ ಸಹಯೋಗದಲ್ಲಿ ಪಲಿಮಾರು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವಠಾರದಲ್ಲಿ ಕೈ ತೋಟ ಕ್ರಾಂತಿಯಾಗಲಿ ಕಾರ್ಯಕ್ರಮದಡಿ ವಿಷಮುಕ್ತ ಆಹಾರ ನಮ್ಮದಾಗಲಿ ಎಂಬ ಕಾರ್ಯಕ್ರಮವನ್ನು ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀನಿವಾಸ ಉಡುಪರು ಉದ್ಘಾಟಿಸಿದರು.
