Updated News From Kaup

ಕ್ರಿಯೇಟಿವ್‌ ಪಿ ಯು ಕಾಲೇಜಿನಲ್ಲಿ ಜಿ ಎಸ್ ಟಿ ಕುರಿತು ಮಾಹಿತಿ ಕಾರ್ಯಗಾರ

Posted On: 17-09-2022 09:50PM

ಕಾರ್ಕಳ : ಕ್ರಿಯೇಟಿವ್‌ ಪಿ ಯು ಕಾಲೇಜು ಕಾರ್ಕಳದ ವಾಣಿಜ್ಯ ವಿದ್ಯಾರ್ಥಿಗಳಿಗಾಗಿ ಜಿ ಎಸ್ ಟಿ (ಸರಕು ಮತ್ತು ಸೇವಾ ತೆರಿಗೆ) ಕುರಿತಾಗಿ ಮಾಹಿತಿ ಕಾರ್ಯಗಾರವನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು.

ಕಾಪು : ಇಬ್ಬರು ರಿಕ್ಷಾ ಚಾಲಕರಿಂದ ಪ್ರಧಾನಿ ಮೋದಿ ಜನ್ಮದಿನದ ಪ್ರಯುಕ್ತ ಉಚಿತ ಸೇವೆ

Posted On: 17-09-2022 09:03PM

ಕಾಪು : ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ ಕಾಪುವಿನ ಇಬ್ಬರು ರಿಕ್ಷಾ ಚಾಲಕರು ಇಂದು ಉಚಿತ ಸೇವೆ ನೀಡಿದರು.

ಕಟಪಾಡಿ : ವಿದ್ಯಾರ್ಥಿಗೆ ಬಸ್ ಡಿಕ್ಕಿ ; ಆಸ್ಪತ್ರೆಗೆ ದಾಖಲು

Posted On: 16-09-2022 07:05PM

ಕಟಪಾಡಿ : ಶಾಲೆ ಬಿಟ್ಟು ಸೈಕಲ್ ನಲ್ಲಿ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬಸ್ಸು ಡಿಕ್ಕಿಯಾದ ಘಟನೆ ಶುಕ್ರವಾರ ಸಂಜೆ ಘಟಿಸಿದೆ.

ಉಚ್ಚಿಲ ಅಪಘಾತ : ಅಪ್ಪ, ಮಗನ ಬಲಿ ಪಡೆದ ಲಾರಿಯ ಚಾಲಕ 16 ವರ್ಷದ ಬಾಲಕ !

Posted On: 16-09-2022 05:11PM

ಉಚ್ಚಿಲ : ಅಪ್ಪ ಮತ್ತು ಮಗನ ಸಾವಿಗೆ ಕಾರಣವಾಗಿ ಅಪಘಾತ ಎಸಗಿ ಪರಾರಿಯಾದ 14 ಚಕ್ರದ ಲಾರಿಯನ್ನು 16 ವರ್ಷದ ಬಾಲಕ ಚಲಾಯಿಸುತ್ತಿದ್ದ ಬಗ್ಗೆ ಆಘಾತಕಾರಿ ಸುದ್ದಿ ಪೋಲಿಸರಿಂದ ತಿಳಿದು ಬಂದಿದೆ.

ಬಿಜೆಪಿಯಿಂದ ಪ್ರಧಾನಿ ಮೋದಿ ಜನ್ಮದಿನದ ಪ್ರಯುಕ್ತ ಸೇವಾ ಪಾಕ್ಷಿಕ ಅಭಿಯಾನ ಆಯೋಜನೆ

Posted On: 16-09-2022 04:48PM

ಕಾಪು : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ಜಿಲ್ಲಾ ಬಿಜೆಪಿ ವತಿಯಿಂದ ಸೆಪ್ಟೆಂಬರ್ 17ರಿಂದ ಅಕ್ಟೋಬರ್ 2ರವರೆಗೆ ಸೇವಾ ಪಾಕ್ಷಿಕ ಅಭಿಯಾನ ಆಯೋಜಿಸಲಾಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾ ವಕ್ತಾರ ಕೆ ರಾಘವೇಂದ್ರ ಕಿಣಿಯವರು ಕಾಪು ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಕಾಪು : ಜೆಡಿಎಸ್ ಪಕ್ಷದ ಸಾಮಾನ್ಯ ಸಭೆ, ಪಕ್ಷ ಸೇರ್ಪಡೆ ಕಾರ್ಯಕ್ರಮ

Posted On: 16-09-2022 04:37PM

ಕಾಪು : ಇಲ್ಲಿನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜೆಡಿಎಸ್ ಪಕ್ಷದ ಸಾಮಾನ್ಯ ಸಭೆ ಮತ್ತು ಪಕ್ಷ ಸೇರ್ಪಡೆ ಕಾರ್ಯಕ್ರಮವು ಬುಧವಾರ ಬೆಳಿಗ್ಗೆ ಉಡುಪಿ ಜಿಲ್ಲಾಧ್ಯಕ್ಷರಾದ ಯೋಗೇಶ್ ವಿ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಕಾಪು ಮಹಾಬಲ ಮಾಲ್ ನ ಪಕ್ಷ ಕಚೇರಿಯಲ್ಲಿ ಜರಗಿತು.

ಆಲಸಿಗಳಿಗೆ ಸಲ್ಲದ ಒಲ್ಲದ ಒಲಿಯದ ವಲಸೆ ನಗರಿ ಮುಂಬಯಿ

Posted On: 14-09-2022 09:30PM

ಮುಂಬಯಿಯಲ್ಲಿ ಸಲ್ಲದವ ಎಲ್ಲೂ ಸಲ್ಲನು ಎಂಬ ಮಾತೊಂದು ಜನಜನಿತವಾಗಿದೆ. ಮುಂಬಯಿಯಲ್ಲಿ ಬದುಕನ್ನು ಒಗ್ಗಿಸಿಕೊಳ್ಳದವರು ಪ್ರಪಂಚದ ಯಾವ ಮೂಲೆಯಲ್ಲೂ ಒಗ್ಗಿಸಿಕೊಳ್ಳುವುದು ಕಷ್ಟ ಸಾಧ್ಯ. ಎಂದೂ ಮಲಗದ ನಗರಿ ಮುಂಬೈ ಎಂಥವರಿಗೂ ಬದುಕು ಕಟ್ಟಿಕೊಳ್ಳಲು ಅನುವು ಮಾಡಿಕೊಡುತ್ತದೆ. ತನ್ನಿಂದ ತಾನಾಗಿ ಶಿಸ್ತಿನ, ಕ್ರಮಬದ್ಧವಾದ ದಿನಚರಿಗೆ ಒಗ್ಗಿಸಿ, ಬಗ್ಗಿಸಿ, ದಂಡಿಸಿ, ದುಡಿಸಿಕೊಳ್ಳುವ ಅಗೋಚರ ಶಕ್ತಿ ಸಪ್ತ ದ್ವೀಪಗಳ ನಗರದಲ್ಲಿ ಸುಪ್ತವಾಗಿದೆ. ಪ್ರಥಮ ಸಲ ಮುಂಬೈ ನಗರಿಗೆ ಬಂದವರಿಗೆ ಕಣ್ಣು ಕಟ್ಟಿ ಮೂರು ಸುತ್ತು ತಿರುಗಿಸಿ ಬಿಟ್ಟ ಅನುಭವವಾಗುತ್ತದೆ. ಊರಲ್ಲಿ ಸೂರ್ಯಕಿರಣ ಬೀಳುವ ಬಾವಿಯ ಶುದ್ಧೋದಕ ಕುಡಿದವರಿಗೆ ಮಹಾನಗರದ ಕ್ಲೋರಿನ್ ಮಿಶ್ರಿತ ಕುಡಿಯುವ ನೀರು ಒಂದು ತರ ಘಮಿಸುತ್ತದೆ. ಕುಚ್ಚಲಕ್ಕಿಯ ಅನ್ನ ಉಂಡವರಿಗೆ ಬೆಳ್ತಿಗೆ ಅಕ್ಕಿಯ ಊಟ ರುಚಿಸುವುದಿಲ್ಲ. ಚಾಳ್ ವ್ಯವಸ್ಥೆ ಅಥವಾ ಮ್ಹಾಡದ ವಸತಿ ಸಂಕುಲಗಳಲ್ಲಿ ಅನೇಕ ರಾಜ್ಯದ ವಲಸಿಗರಿರುತ್ತಾರೆ. ನೆರೆಹೊರೆಯಲ್ಲಿ ಉತ್ತರ ಭಾರತೀಯರಿದ್ದರೆ; ಸಾಸಿವೆ ಎಣ್ಣೆಯನ್ನು ನಖಶಿಖಾಂತ ಪೋಸಿಕೊಳ್ಳುವುದು ಮಾತ್ರವಲ್ಲ ಎಲ್ಲ ವ್ಯಂಜನ, ಮೇಲೋಗರಕ್ಕೂ ಉಪಯೋಗಿಸುತ್ತಾರೆ. ಊರಿನಲ್ಲಿ ಶುದ್ಧ ತೆಂಗಿನ ಎಣ್ಣೆ, ಎಳ್ಳಿನ ಎಣ್ಣೆ ಉಪಯೋಗಿಸುತ್ತಿದ್ದವರಿಗೆ ಸಾಸಿವೆ ಎಣ್ಣೆಯ ವಿಪರೀತ ಘಮ ನಾಸಿಕವನ್ನು ಹೊಕ್ಕಿ ತಲೆ ಸಿಡಿಯತೊಡಗುತ್ತದೆ. ಘಟ್ಟ ಪ್ರದೇಶದ ಮರಾಠಿಗರು ಇದ್ದರೆ; ಸತಾರಿ, ಪಂಡಾರಪುರಿ ತಂಬಾಕನ್ನು ಸುಟ್ಟು ಹಲ್ಲುಜ್ಜುವ ಮಿಶ್ರಿಯನ್ನು ತಯಾರಿಸುವಾಗ ಬರುವ ಕಟುವಾಸನೆ ಸಹಿಸಲು ಅಸಾಧ್ಯವಾಗುತ್ತದೆ. ಬುಧವಾರ, ಶುಕ್ರವಾರ ಹಾಗೂ ರವಿವಾರಗಳಲ್ಲಿ ಸುಕ್ಕ (ಒಣ) ಬೊಂಬಿಲ್ ಮೀನನ್ನು ಪದಾರ್ಥಕ್ಕಾಗಿ ತವದಲ್ಲಿ ಕರಿಯುವಾಗ ಮೂಗಿನ ಹೊಳ್ಳೆಗಳು ನಲುಗಲಾರಂಭಿಸುತ್ತವೆ.

ಕಟಪಾಡಿ : ಬಿಜೆಪಿ - ಮಹಾಶಕ್ತಿಕೇಂದ್ರ ಸಭೆ

Posted On: 14-09-2022 09:26PM

ಕಟಪಾಡಿ : ಇಲ್ಲಿಯ ಬಿಜೆಪಿ ಪಕ್ಷದ ಮಹಾಶಕ್ತಿಕೇಂದ್ರ ಸಭೆ ಇಂದು ಕಟಪಾಡಿಯಲ್ಲಿ ನಡೆಯಿತು. ಪ್ರಧಾನಿ ಮೋದಿ ಜನ್ಮದಿನದಿಂದ ಗಾಂಧಿಜಯಂತಿ ತನಕ ಪಕ್ಷ ಕೊಟ್ಟ ಕಾರ್ಯಕ್ರಮಗಳು ಹಾಗೂ ಸೇವಾ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಲಾಯಿತು. ಸಂಘಟನಾತ್ಮಕ ವಿಚಾರಗಳ ಬಗ್ಗೆ ಚರ್ಚೆ ನಡೆದು ಮಾಹಿತಿ ವಿನಿಮಯ ಮಾಡಿಕೊಂಡು ಮುಂಬರುವಂತಹ ಯಾವುದೇ ಚುನಾವಣೆಗಳಿಗೆ ಪಕ್ಷ ಸಂಪೂರ್ಣ ಸನ್ನಧ್ಧವಾಗುವಲ್ಲಿ ಮಾಡಬೇಕಾದ ಚಟುವಟಿಕಗಳ ಬಗ್ಗೆ ಚರ್ಚಿಸಲಾಯಿತು.

ಶಿರ್ವ ಗ್ರಾಮ ಪಂಚಾಯತ್’ನ ನೂತನ ಅಧ್ಯಕ್ಷರಾಗಿ ರತನ್ ಶೆಟ್ಟಿ ಆಯ್ಕೆ

Posted On: 14-09-2022 09:21PM

ಶಿರ್ವ : ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನ ತೆರವುಗೊಂಡ ಹಿನ್ನೆಲೆಯಲ್ಲಿ ಬುಧವಾರ ಬೆಳಿಗ್ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರತನ್ ಕುಮಾರ್ ಶೆಟ್ಟಿ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಕಾಪು : ಅಕ್ಷಯಧಾರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ - ವಾರ್ಷಿಕ ಮಹಾಸಭೆ

Posted On: 14-09-2022 08:42PM

ಕಾಪು : ಪರಿಸರದ ಜನಪ್ರಿಯ ಆರ್ಥಿಕ ಸಂಸ್ಥೆ ಅಕ್ಷಯಧಾರ ಕ್ರೆಡಿಟ್ ಸೊಸೈಟಿ ,ಇದರ 2021-22 ರ ಸಾಲಿನ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ 13 ರಂದು ಬೆಳ್ಳಿಗ್ಗೆ, ಕಾಪು ಭಾಸ್ಕರ ಸೌಧದಲ್ಲಿ ಅಧ್ಯಕ್ಷರಾದ ಲವ.ಎನ್.ಕರ್ಕೇರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. 2022-23 ನೇ ಸಾಲಿನ ಅಂದಾಜು ಆಯವ್ಯಯ ಪಟ್ಟಿಯನ್ನು ಸಭೆಯಲ್ಲಿ ಮಂಜೂರು ಮಾಡಲಾಯಿತು. ಈ ಸಂಧರ್ಭದಲ್ಲಿ ವಾಣಿಜ್ಯ ವಿಭಾಗದ ಸ್ನಾತಕೋತ್ತರ ಪದವಿಯಲ್ಲಿ ಉತ್ತಮ ಅಂಕದೊಂದಿಗೆ ಉತೀರ್ಣಳಾದ ಕೀರ್ತನ ಯು.ಕುಂದರ್, ಬಿ.ಎಸ್.ಸಿ.ಯಲ್ಲಿ ಪ್ರಥಮ ರಾಂಕ್ ಪಡೆದ ಶ್ರಾವಿಕ ಶೆಟ್ಟಿ, ಎಸ್.ಎಸ್.ಎಲ್ ಸಿ.ಯಲ್ಲಿ ಪ್ರಥಮ ಶೇಣಿಯಲ್ಲಿ ತೇರ್ಗಡೆಯಾದ ಕೃತಿ.ಎಸ್.ಆಚಾರ್ಯ ಹಾಗೂ ಹೈದರಾಬಾದ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಕರಾಟೆಯಲ್ಲಿ ಪ್ರಥಮ ಸ್ಥಾನ ಪಡೆದ ಜಿಯಾ ಪೂಜಾರಿಯನ್ನು ಸನ್ಮಾನಿಸಲಾಯಿತು. ಸಂಸ್ಥೆಯೊಂದಿಗೆ ಆರಂಭದ ದಿನದಿಂದಲೂ ಆರ್ಥಿಕ ವ್ಯವಹಾರ ಮಾಡುತ್ತಿರುವ, ಕೊಡುಗೈ ದಾನಿ ಚಂದ್ರ ಜಯ ಬಂಗೇರ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.