Updated News From Kaup

ನಾರಾಯಣಗುರು ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿ. ಉಡುಪಿ : ವಾರ್ಷಿಕ ಮಹಾಸಭೆ

Posted On: 11-09-2022 05:17PM

ಉಡುಪಿ : ನಾರಾಯಣಗುರು ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿ. ಉಡುಪಿ ಇದರ 2021 - 2022 ನೇ ಸಾಲಿನ 20ನೇ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯು ಸೆಪ್ಟೆಂಬರ್‌ 11ರಂದು ಬಿಲ್ಲವರ ಸೇವಾ ಸಂಘ (ರಿ.), ಬನ್ನಂಜೆ ಉಡುಪಿ ಇದರ ಶಿವಗಿರಿ ಸಭಾಂಗಣದಲ್ಲಿ ಅಧ್ಯಕ್ಷರಾದ ಹರಿಶ್ಚಂದ್ರ ಅಮೀನ್ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ವಾರ್ಷಿಕ ಸಾಮಾನ್ಯ ಸಭೆಯನ್ನು ಬ್ಯಾಂಕಿನ ಮಾರ್ಗದರ್ಶಕರಾದ ಎಸ್‌ ಕೆ ಸಾಲ್ಯಾನ್ ,ರಾಮಚಂದ್ರ ಕಿದಿಯೂರು ಮತ್ತು ಸೂರ್ಯ ಪ್ರಕಾಶ್ ಜಂಟಿಯಾಗಿ ಉದ್ಘಾಟಿಸಿ ಶುಭ ಹಾರೈಸಿದರು.

ಕಾಪು : ಲಕ್ಷ್ಮಿಜನಾರ್ಧನ ದೇವಳಕ್ಕೆ ಚಲನಚಿತ್ರ ನಟ ಗಣೇಶ್ ಭೇಟಿ

Posted On: 11-09-2022 05:10PM

ಕಾಪು : ಇಲ್ಲಿನ ಲಕ್ಷ್ಮಿಜನಾರ್ಧನ ದೇವಳಕ್ಕೆ ಕನ್ನಡ ಚಲನಚಿತ್ರ ನಟ ಗೋಲ್ಡನ್ ಸ್ಟಾರ್ ಗಣೇಶ್ ಭೇಟಿ ನಿಡಿದರು.

ಮುದರಂಗಡಿ : ಮಟ್ಕಾ ಜುಗಾರಿ ; ಪೋಲಿಸ್ ದಾಳಿ ; ಓರ್ವನ ದಸ್ತಗಿರಿ

Posted On: 11-09-2022 04:58PM

ಮುದರಂಗಡಿ : ಕಾಪು ತಾಲೂಕು ಸಾಂತೂರು ಗ್ರಾಮದ ಮುದರಂಗಡಿ ಮೀನು ಮಾರ್ಕೆಟ್‌ ಬಳಿ ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿಯು ಮಟ್ಕಾ ಆಟದ ಬಗ್ಗೆ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದಾನೆಂದು ಬಂದ ಮಾಹಿತಿಯಂತೆ ಪಡುಬಿದ್ರಿ ಪೋಲಿಸರು ದಾಳಿ ನಡೆಸಿದ್ದಾರೆ.

ಪಡುಬಿದ್ರಿ : 1 ಕೋಟಿ 10 ಲಕ್ಷ ರೂ.ಗಳ ಕಾಮಗಾರಿ ; 3 ರಸ್ತೆಗಳ ಲೋಕಾರ್ಪಣೆ

Posted On: 11-09-2022 03:09PM

ಪಡುಬಿದ್ರಿ : ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್ ರವರು ಪಡುಬಿದ್ರೆ ಪಂಚಾಯತ್ ವ್ಯಾಪ್ತಿಯ 5 ನೇ ವಾರ್ಡಿನ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿ ಸುಮಾರು 1 ಕೋಟಿ 10 ಲಕ್ಷ ರೂಪಾಯಿಗಳ ಅಭಿವೃದ್ಧಿಗೊಂಡ 3 ರಸ್ತೆಗಳನ್ನು ಲೋಕಾರ್ಪಣೆಗೊಳಿಸಿದರು.

ಘರ್ ಘರ್ ತಿರಂಗಾ - ತಿರಂಗಾ ಸೆಲ್ಫಿ : ರಾಘವೇಂದ್ರ ಪ್ರಭು ಕವಾ೯ಲುಗೆ ಪ್ರಥಮ ಬಹುಮಾನ

Posted On: 11-09-2022 02:22PM

ಉಡುಪಿ : ಇಂಡಿಯಾ ಬುಕ್ ಆಫ್ ವಲ್ಡ್೯ ರೆಕಾಡ್೯ ಸಂಸ್ಥೆ ಮತ್ತು ಆಯುಷ್ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ಘರ್ ಘರ್ ತಿರಂಗಾ ಕುರಿತು ನಡೆದ ತಿರಂಗಾ ಸೆಲ್ಫಿ ಸ್ಪಧೆ೯ಯಲ್ಲಿ ಕ.ಸಾ.ಪ ತಾಲೂಕು ಸಂ.ಕಾಯ೯ದಶಿ೯ ರಾಘವೇಂದ್ರ ಪ್ರಭು,ಕವಾ೯ಲು ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ.

ನಂದಿಕೂರಿನ ಮಹಿಳೆಗೆ ವೀಲ್ ಚೇರ್ ಹಸ್ತಾಂತರ

Posted On: 11-09-2022 01:52PM

ಪಲಿಮಾರು : ಶ್ರೀದೇವಿ ಫ್ರೆಂಡ್ಸ್ ಕ್ಲಬ್ ಅವರಾಲು ಮಟ್ಟು, ಪಲಿಮಾರು ಇದರ ನೇತೃತ್ವದಲ್ಲಿ ನಂದಿಕೂರಿನ ಕಲ್ಯಾಣಿ ಪೂಜಾರ್ತಿಯವರಿಗೆ ವೀಲ್ ಚೇರ್ ಹಸ್ತಾಂತರಿಸಲಾಯಿತು.

ಪಂಚ ಪವಿತ್ರ ಗಿಡ ವಿತರಣಾ ಅಭಿಯಾನ

Posted On: 11-09-2022 09:29AM

ಉಡುಪಿ : ನಮ್ಮ ಹಿರಿಯರು ಗಿಡಗಳ ಮೂಲಕ ಧಾಮಿ೯ಕ ಭಾವನೆಗಳನ್ನು ಮೂಡಿಸಿದರ ಫಲವಾಗಿ ಇಂದು ಹಲವಾರು ಗಿಡ ಮರಗಳು ಉಳಿಯಲು ಕಾರಣವಾಗಿದೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು. ಅವರು ಸೆಪ್ಟೆಂಬರ್ 10 ರಂದು ಭಾರತೀಯ ಜನೌಷಧಿ ಕೇಂದ್ರ ಅಜ್ಜರಕಾಡು ಮತ್ತು ಜಯಂಟ್ಸ್ ಗ್ರೂಫ್ ಆಫ್ ಬ್ರಹ್ಮಾವರ ಇದರ ಆಶ್ರಯದಲ್ಲಿ ನಡೆದ ಧಾಮಿ೯ಕ ಕೇಂದ್ರಗಳು, ದೇವಾಲಯಗಳಿಗೆ ವಿತರಿಸುವ ಪಂಚ ಪವಿತ್ರ ಗಿಡ ವಿತರಣಾ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು.

ಮಣಿಪಾಲ : ಜೇಸಿ ಸಪ್ತಾಹ - ರಕ್ತದಾನ ಶಿಬಿರ

Posted On: 11-09-2022 09:24AM

ಮಣಿಪಾಲ : ಕೆ.ಎಂ.ಸಿ ಮಣಿಪಾಲ ರಕ್ತನಿಧಿ ಕೇಂದ್ರ ಮತ್ತು ಜೇಸಿಐ ಕಲ್ಯಾಣಪುರ ಇದರ ವತಿಯಿಂದ ಜೇಸಿ ಸಪ್ತಾಹ ವತಿಯಿಂದ ಸೆಪ್ಟಂಬರ್ 10 ರಂದು ರಕ್ತದಾನ ಶಿಬಿರ ನಡೆಯಿತು.

ಪಡುಬಿದ್ರಿ : ಬ್ರಹ್ಮಶ್ರೀ ನಾರಾಯಣಗುರುವರ್ಯರ ಜನ್ಮದಿನೋತ್ಸವ ಆಚರಣೆ ; ಶೋಭಾಯಾತ್ರೆ ; ವಿದ್ಯಾರ್ಥಿವೇತನ ವಿತರಣೆ

Posted On: 10-09-2022 10:48PM

ಪಡುಬಿದ್ರಿ : ವಿದ್ಯೆಗೆ ಮಹತ್ವ ನೀಡುವುದರ ಜೊತೆಗೆ ಪ್ರತಿಭೆಗಳನ್ನು ಬೆಳೆಸಬೇಕಾಗಿದೆ. ಹೆತ್ತವರು ಮಕ್ಕಳಿಗೆ ಸಂಸ್ಕೃತಿಯನ್ನು ತಿಳಿಸಬೇಕಿದೆ. ನಾವು ಉತ್ತಮ ಸಂಸ್ಕೃತಿವಂತರಾಗಿ ನಮ್ಮ ಮಕ್ಕಳಿಗೆ ಉತ್ತಮ ಸಂಸ್ಕೃತಿಯನ್ನು ತಿಳಿಸುವ ಎಂದು ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರವಿ ಶೆಟ್ಟಿ ಹೇಳಿದರು. ಅವರು ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ (ರಿ.) ಇಲ್ಲಿ ಜರಗಿದ ಬ್ರಹ್ಮಶ್ರೀ ನಾರಾಯಣಗುರುಗಳ 168ನೇ ಜನ್ಮ ದಿನೋತ್ಸವದ ಶೋಭಾಯಾತ್ರೆಯ ನಂತರ ಜರಗಿದ ವಿದ್ಯಾರ್ಥಿವೇತನ ವಿತರಣಾ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಬಿಲ್ಲವ ಸಮಾಜ ಇಂದು ಎಲ್ಲಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದೆ. ಮುಂದೆಯು ನಿಮ್ಮ ಪ್ರಗತಿ ಹೀಗೆಯೇ ಇರಲಿ. ಬ್ರಹ್ಮಶ್ರೀ ನಾರಾಯಣಗುರುಗಳು ಸರ್ವರಿಗೂ ಒಳ್ಳೆಯದು ಮಾಡಲಿ ಎಂದು ಶುಭ ಹಾರೈಸಿದರು.

ಕಾಪು : ತಾಲೂಕು ಕಚೇರಿಯಲ್ಲಿ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆ

Posted On: 10-09-2022 11:46AM

ಕಾಪು : ಇಲ್ಲಿನ ತಾಲೂಕು ಕಚೇರಿಯಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ 168 ನೇ ಜಯಂತಿಯನ್ನು ಆಚರಿಸಲಾಯಿತು.