Updated News From Kaup
ಬಾಸ್ಕೆಟ್ ಬಾಲ್ ಪಂದ್ಯಾಟ : ಶಂಕರಪುರ ಸೈಂಟ್ ಜೋನ್ಸ್ ಅಕಾಡೆಮಿ ಆಂಗ್ಲ ಮಾದ್ಯಮ ಪ್ರಾಥಮಿಕ ಶಾಲೆಯ ಬಾಲಕಿಯರು ವಿಭಾಗಮಟ್ಟಕ್ಕೆ ಆಯ್ಕೆ
Posted On: 14-09-2022 08:36PM
ಕಾಪು : ಉಡುಪಿ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರ ಕಛೇರಿ, ಇವರ ಸಹಯೋಗದಲ್ಲಿ ಆಯೋಜಿಸಿದ ಬಾಸ್ಕೆಟ್ ಬಾಲ್ ಪಂದ್ಯಾಟದಲ್ಲಿ ಶಂಕರಪುರ ಸೈಂಟ್ ಜೋನ್ಸ್ ಅಕಾಡೆಮಿ ಆಂಗ್ಲ ಮಾದ್ಯಮ ಪ್ರಾಥಮಿಕ ಶಾಲೆಯ ಬಾಲಕಿಯರು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಲಯನ್ಸ್ ಕ್ಲಬ್ ಬಂಟಕಲ್ಲು ಬಿಸಿರೋಡ್ : ಶಿಕ್ಷಕರ ದಿನಾಚರಣೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
Posted On: 14-09-2022 09:15AM
ಬಂಟಕಲ್ಲು : ಲಯನ್ಸ್ ಕ್ಲಬ್ ಬಂಟಕಲ್ಲು ಬಿಸಿರೋಡ್ ಇದರ ವತಿಯಿಂದ ಶಿಕ್ಷಕರ ದಿನಾಚರಣೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಪಾಂಬೂರು ಚರ್ಚ್ ಸಭಾ ಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ ವಿಲ್ಫ್ರೆಡ್ ಪಿಂಟೋ ವಹಿಸಿದ್ದರು . ಮುಖ್ಯ ಅತಿಥಿಗಳಾಗಿ ಫಸ್ಟ್ ವೈಸ್ ಡಿಸ್ಟ್ರಿಕ್ಟ್ ಗವರ್ನರ್ ಎಮ್ ಜೆ ಎಫ್ ಲ.ಡಾ. ನೇರಿ ಕರ್ನೇಲಿಯೊ ಹಾಗೂ ಜಿಇಟಿ ಎಮ್ ಜೆ ಎಫ್ ಲ. ರಾಜೀವ್ ಕೋಟ್ಯಾನ್ ರವರು ಉಪಸ್ಥಿತರಿದ್ದರು.
ಶಿರ್ವ : ಶ್ರೀ ವಿಶ್ವಬ್ರಾಹ್ಮಣ ಯುವಸಂಗಮ ಮತ್ತು ಮಹಿಳಾ ಬಳಗದ ಮಹಾಸಭೆ
Posted On: 13-09-2022 10:35PM
ಶಿರ್ವ : ತಮ್ಮ ಹೆಸರು ಶಾಶ್ವತವಾಗಿ ನಿಲ್ಲಬೇಕಾದರೆ ಇಂತಹ ಸಂಸ್ಥೆಯ ಪ್ರತಿನಿಧಿ ಆಗಬೇಕು ಮತ್ತು ನಮ್ಮ ಮಕ್ಕಳಿಗೆ ಸಂಸ್ಕಾರ ಕಲಿಸಬೇಕಿದ್ದರೆ ಅವರನ್ನು ಸಂಸ್ಥೆಗಳಿಗೆ ಸೇರಿಸಬೇಕು ಎಂದು ಬಂಟಕಲ್ಲು ಶ್ರೀ ವಿಶ್ವಕರ್ಮ ಯುವಕ ಸೇವಾದಳದ ಅಧ್ಯಕ್ಷರಾದ ರಾಜೇಶ್ ಆಚಾರ್ಯ ಹೇಳಿದರು. ಅವರು ಶ್ರೀ ವಿಶ್ವಬ್ರಾಹ್ಮಣ ಯುವಸಂಗಮ (ರಿ.) ಮತ್ತು ಮಹಿಳಾ ಬಳಗ ಶಿರ್ವ ಇದರ ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ರೋಟರಿ ಶಂಕರಪುರ : ಶಿಕ್ಷಕರ ದಿನಾಚರಣೆ
Posted On: 13-09-2022 10:18PM
ಕಾಪು : ರೋಟರಿ ಶಂಕರಪುರ ವತಿಯಿಂದ ಸೆಪ್ಟೆಂಬರ್ 12ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರುಗಳಾದ ರಘುರಾಮ್ ಕೋಟ್ಯಾನ್ ಸುಭಾಸ್ ನಗರ, (ಮುಖ್ಯೋಪಾಧ್ಯಾಯರು ಆದಿಉಡುಪಿ ಪ್ರೌಢಶಾಲೆ ಆದಿ ಉಡುಪಿ )ಹಾಗೂ ರಾಚೆಲ್ ಐಡಾ ಮರಿಯಾ ಡಿಮೆಲ್ಲೊ ( ನಿವೃತ್ತ ಶಿಕ್ಷಕಿ ಪ್ರಾಥಮಿಕ ಶಾಲೆ ಮುಳೂರು) ಇವರುಗಳನ್ನು ಸನ್ಮಾನಿಸಲಾಯಿತು.
ಬಂಟಕಲ್ಲು : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ - ಸಾಮೂಹಿಕ ಗಣ ಹೋಮ ಪೂಜೆ ಸಂಪನ್ನ
Posted On: 13-09-2022 09:55PM
ಬಂಟಕಲ್ಲು : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬಂಟಕಲ್ಲು ಇವರ ಆಶ್ರಯದಲ್ಲಿ ಸಂಕಷ್ಟ ಹರ ಚತುರ್ಥಿಯ ಪ್ರಯುಕ್ತ ಪ್ರಥಮ ಬಾರಿಗೆ ಬಂಟಕಲ್ಲು ಸಾರ್ವಜನಿಕ ಶ್ರೀ ಗಣೇಶೋತ್ಸವ ವೇದಿಕೆಯಲ್ಲಿ ಸಾಮೂಹಿಕ ಗಣ ಹೋಮ ಪೂಜೆ ಸಂಪನ್ನಗೊಂಡಿತು.
ರೋಟರಿ ಸಮುದಾಯ ದಳ ಇನ್ನಂಜೆ - ಪದಪ್ರದಾನ
Posted On: 12-09-2022 11:16PM
ಇನ್ನಂಜೆ : ರೋಟರಿ ಸಮುದಾಯ ದಳ ಇನ್ನಂಜೆ ಮಾತೃಸಂಸ್ಥೆ ರೋಟರಿ ಕ್ಲಬ್ ಶಂಕರಪುರ (ವಲಯ - 5 ರೋಟರಿ ಜಿಲ್ಲೆ 3182) ಇದರ 2022-23ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭ ಸೆಪ್ಟೆಂಬರ್ 11ರಂದು ಇನ್ನಂಜೆಯ ದಾಸ ಭವನದಲ್ಲಿ ಜರಗಿತು.
ಬಿಲ್ಲವ ಸಮಾಜ ಸೇವಾ ಸಂಘ ಮಲ್ಪೆ - ಬ್ರಹ್ಮಶ್ರೀ ನಾರಾಯಣಗುರು ಜಯಂತಿ ; ಪ್ರತಿಭಾ ಪುರಸ್ಕಾರ ; ಸನ್ಮಾನ
Posted On: 12-09-2022 09:19PM
ಉಡುಪಿ : ಬ್ರಹ್ಮಶ್ರೀ ನಾರಾಯಣಗುರುಗಳ 168ನೇ ಜಯಂತಿಯ ಅಂಗವಾಗಿ ಸೆಪ್ಟೆಂಬರ್ 10ರಂದು ಮಲ್ಪೆ ಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ಬೆಳಗ್ಗೆ ಧಾರ್ಮಿಕ ಪೂಜಾ ವಿಧಿ - ವಿಧಾನಗಳು, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ಹಾಗೂ ರಾತ್ರಿ ಸಭಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ವಿದ್ಯಾರ್ಥಿವೇತನ ಪಡೆದ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ತಾವೂ ಕೂಡ ಇಂತಹ ವೇದಿಕೆಯಲ್ಲಿ ಸನ್ಮಾನಗೊಂಡು ಹತ್ತಾರು ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಸಹಾಯ ಮಾಡುವಂತಹ ದಿನಗಳು ತಮಗೆ ಒದಗಿಬರಲಿ ಎಂದು ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಘದ ಅಧ್ಯಕ್ಷರಾದ ಕೃಷ್ಣಪ್ಪ ಜತ್ತನ್ ರವರು ಶುಭ ಹಾರೈಸಿದರು.
ಸೆ. 13 : ದಿ. ಆಸ್ಕರ್ ಫೆರ್ನಾಂಡಿಸ್ ಪ್ರಥಮ ಪುಣ್ಯತಿಥಿ ಪ್ರಯುಕ್ತ ಹಣ್ಣುಹಂಪಲು ವಿತರಣೆ
Posted On: 12-09-2022 08:41PM
ಉಡುಪಿ : ಕೇಂದ್ರದ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ದಿ. ಆಸ್ಕರ್ ಫೆರ್ನಾಂಡಿಸ್ ಅವರ ಪ್ರಥಮ ಪುಣ್ಯ ತಿಥಿಯ ಪ್ರಯುಕ್ತವಾಗಿ ಸೆ. 13ರಂದು ಆಸ್ಕರ್ ಫೆರ್ನಾಂಡಿಸ್ ಅಭಿಮಾನಿ ಬಳಗ ಉಡುಪಿ ಜಿಲ್ಲೆ ಇವರ ನೇತೃತ್ವದಲ್ಲಿ ಉಡುಪಿಯ ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ಬೆಳಿಗ್ಗೆ 10 ಗಂಟೆಗೆ ಮತ್ತು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಬೆಳಿಗ್ಗೆ 11 ಗಂಟೆಗೆ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ನಡೆಯಲಿದೆ ಎಂದು ಗೌರವಾಧ್ಯಕ್ಷ ರೊನಾಲ್ಡ್ ಮನೋಹರ್ ಕರ್ಕಡ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಉಚ್ಚಿಲ : ದ.ಕ. ಮೊಗವೀರ ಮಹಾಜನ ಸಂಘದಿಂದ ವಿದ್ಯಾರ್ಥಿ ವೇತನ ಹಾಗೂ ಗುರಿಕಾರರಿಗೆ ಗೌರವ ಧನ ವಿತರಣಾ ಕಾರ್ಯಕ್ರಮ
Posted On: 11-09-2022 10:56PM
ಉಚ್ಚಿಲ : ಮಹಾಲಕ್ಷ್ಮಿ ದೇವಸ್ಥಾನ ಜೀರ್ಣೋದ್ಧಾರ ಸಮಯದಲ್ಲಿ ಆಸೆ ಇಟ್ಟುಕೊಂಡು ಪ್ರಾರ್ಥನೆ ಮಾಡಿದ್ದು ಇಂದು ಆ ಮಹಾಲಕ್ಷ್ಮಿ ನಿಜ ಮಾಡಿ ತೋರಿಸುವ ಮೂಲಕ ಪವಾಡ ಮೆರೆದಿದ್ದಾಳೆ ಎಂದು ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಗೌರವಾಧ್ಯಕ್ಷ ನಾಡೋಜ ಡಾ.ಜಿ.ಶಂಕರ್ ಹೇಳಿದರು. ಅವರು ದ.ಕ.ಮೊಗವೀರ ಮಹಾಜನ ಸಂಘ(ರಿ.)ಇದರ ವತಿಯಿಂದ ದಕ್ಷಿಣದ ಉಪ್ಪಳ ದಿಂದ ಉತ್ತರದ ಶೀರೂರುವರೆಗಿನ ಮೊಗವೀರ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಗುರಿಕಾರರಿಗೆ ಗೌರವ ಧನ ವಿತರಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ರವಿವಾರ ಮಾತನಾಡಿದರು.
ಕಾಪು : ಮಾನವನ ಜ್ಞಾನವೇ ಯಶಸ್ಸಿನ ಕೀಲಿ ಕೈ - ಮೌಲಾನಾ ಸಲೀಮ್ ಉಮ್ರಿ
Posted On: 11-09-2022 10:42PM
ಕಾಪು : ಶ್ರೀಮಂತರು ಜ್ಞಾನ ಗಳಿಸಲು ಲಕ್ಷಗಟ್ಟಲೆ ಹಣ ವಿನಿಯೋಗಿಸುತ್ತಾನರೆ. ಜ್ಞಾನ ಗಳಿಸುವುದರಲ್ಲಿ ಎರಡು ವಿಧವಿದ್ದು, ಒಂದರಲ್ಲಿ ಸ್ವತಃ ಆತನಿಗೂ ಸಮಾಜಕ್ಕೂ ಯಾವುದೇ ಪ್ರಯೋಜನ ಇರುವುದಿಲ್ಲ. ಆತನು , ತಾನು ಗಳಿಸಿದ ಜ್ಞಾನವನ್ನು ತನ್ನ ಸ್ವಾರ್ಥಕ್ಕಾಗಿ ಬಳಸುತ್ತಾ ಸಮಾಜದಲ್ಲಿ ಕೆಡುಕುಗಳನ್ನು ಹಬ್ಬಿಸಲು ಕಾರಣನಾಗುತ್ತಾನೆ. ಇನ್ನೊಂದು ವಿಧದ ಗುರಿಯನ್ನು ಇಟ್ಟು ಜ್ಞಾನ ಗಳಿಸಿದವನಿಗೆ ಆತನಿಗೂ, ಸಮಾಜಕ್ಕೂ ಉಪಯೋಗವಾಗುತ್ತದೆ. ಈ ಜ್ಞಾನವನ್ನು ಆತ ಬಳಸುತ್ತಾ, ತನ್ನ ಶಕ್ತಿ, ಸಾಮರ್ಥ್ಯಕ್ಕನುಸಾರವಾಗಿ ಒಳಿತಿನ ಕಾರ್ಯಗಳನ್ನು ಮಾಡುತ್ತಾ,ಅಭಿವೃದ್ಧಿಯನ್ನು ಬಯಸಿ, ದೇವನಿಗೆ ಶರಣಾಗಿ ಸಮಾಜದಲ್ಲಿ ಬದುಕುತ್ತಾನೆ. ಸಮಾಜದಲ್ಲಿ ಇರುವ ಪ್ರತಿಯೊಬ್ಬ ವ್ಯಕ್ತಿಗೂ ತಾನು ಈ ಭೂಮಿಗೆ ಬಂದ ಉದ್ದೇಶವೇನು ? ನನಗೆ ಇಲ್ಲಿ ಏನು ಮಾಡಬೇಕಾಗಿದೆ ಎಂಬ ಸಾಮಾನ್ಯ ಜ್ಞಾನ ಇರಬೇಕಾಗಿದೆ. ಈ ಬಗ್ಗೆ ಆತ ಗಾಢವಾಗಿ ಅಧ್ಯಯನ ಮಾಡಬೇಕು. ಯಾವ ರೀತಿ ನಾವು ಲೌಕಿಕ ವಿದ್ಯಾಭ್ಯಾಸ ಗಳಿಸಲು ಬಯಸುತ್ತೇವೆಯೋ ಅದೇ ರೀತಿ ಆದ್ಯಾತ್ಮಿಕ ವಿದ್ಯಾಭ್ಯಾಸ ಗಳಿಸಲು ಮುಂದೆ ಬರಬೇಕು. ಇದರಿಂದ ಅವರ ಇಹ ಮತ್ತು ಪರಲೋಕ ಬೆಳಗುತ್ತದೆ. ಇದೇ ಜ್ಞಾನದ ಯಶಸ್ಸಿನ ಕೀಲಿ ಕೈ ಎಂದು ಶಿವಮೊಗ್ಗ , ಉತ್ತರ ಕನ್ನಡ ವಲಯ ಸಂಚಾಲಕರಾದ ಮೌಲಾನಾ ಮುಹಮ್ಮದ್ ಸಲೀಮ್ ಉಮ್ರಿ ಯವರು ಹೇಳಿದರು. ಅವರು ಆದಿತ್ಯವಾರ ಕಾಪು ಹೋಟೆಲ್ ಮಂದಾರದಲ್ಲಿ ಎಸ್. ಐ. ಓ ಮತ್ತು ಜಮಾಅತೆ ಇಸ್ಲಾಮಿ ಹಿಂದ್ ಕಾಪು ವರ್ತುಲವು ಹಮ್ಮಿಕೊಂಡ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತಾಡಿದರು.
