Updated News From Kaup
ಅದಮಾರಿನ ಆದರ್ಶ ಯುವಕ ಸಂಘದ ಗೌರವ ಸ್ವೀಕಾರಕ್ಕಾಗಿ ಯೋಧ ಬಾಲಕೃಷ್ಣ ಟಿ. ಭಂಡಾರಿಗೆ ಆಮಂತ್ರಣ
Posted On: 26-07-2022 10:24PM
ಅದಮಾರು : ದೇಶದ ಗಡಿ ಪ್ರದೇಶವಾದ ಕಾರ್ಗಿಲ್ ನಲ್ಲಿ ಭೂಸೇನೆಯಲ್ಲಿ ಸೇವೆಗೈದ ಕಾಪು ತಾಲೂಕಿನ ಅದಮಾರಿನ ಹೆಮ್ಮೆಯ ಯೋಧ ಬಾಲಕೃಷ್ಣ ಟಿ.ಭಂಡಾರಿ ಅವರಿಗೆ ಕಾರ್ಗಿಲ್ ವಿಜಯ ದಿವಸ್ ಆಚರಣೆಯ ಸಂದರ್ಭದಲ್ಲಿ ಶುಭಹಾರೈಸಿ, ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ಗೌರವಿಸಲು ಅದಮಾರಿನ ಆದರ್ಶ ಯುವಕ ಸಂಘದ ವತಿಯಿಂದ ಜುಲೈ 26ರಂದು ಆಮಂತ್ರಿಸಲಾಯಿತು.
ಕಟಪಾಡಿ : ಕಸದ ರಾಶಿ - ಸಾರ್ವಜನಿಕರಿಗೆ ತೊಂದರೆ ; ಸಮಸ್ಯೆ ಬಗೆಹರಿಸಲು ಸ್ಥಳೀಯ ನಿವಾಸಿಗಳ ಆಗ್ರಹ
Posted On: 26-07-2022 05:12PM
ಕಟಪಾಡಿ : ಇಲ್ಲಿನ ಏಣಗುಡ್ಡೆ ಪಂಚಾಯತ್ ವ್ಯಾಪ್ತಿಯ ಹಳೆ ರಸ್ತೆ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನ ಹಾಗೂ ನಾಗಬನ ಸಮೀಪ ಇರುವ ಸ್ಥಳದಲ್ಲಿ ಪ್ಲಾಸ್ಟಿಕ್, ಮಧ್ಯದ ಬಾಟಲು,ಮಲ ಮೂತ್ರದ ಪ್ಯಾಡ್,ಮಾಂಸದ ಮೂಳೆ ಮುಂತಾದವುಗಳಿಂದ ಕಸದ ರಾಶಿ ಆಗಿ ಮಾರ್ಪಾಡು ಆಗಿದೆ.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ : ಒಂದು ಜಿಜ್ಞಾಸೆ
Posted On: 26-07-2022 04:45PM
ಕರ್ನಾಟಕದಲ್ಲಿ ಪ್ರಸ್ತುತ ಅಧಿಕಾರ ನಡೆಸುತ್ತಿರುವ ಬಿಜೆಪಿಯವರು ಈ ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಸಚಿವರಾದ ಶ್ರೀಯುತ ನಾಗೇಶ್ ಬಿ ಸಿ ರವರು ಮತ್ತು ಉನ್ನತ ಶಿಕ್ಷಣ ಸಚಿವರಾದ ಶ್ರೀಯುತ ಡಾ. ಅಶ್ವಥ್ ನಾರಾಯಣ್ ಎಂಬ ಇಬ್ಬರು ಶಿಕ್ಷಣ ಸಚಿವರನ್ನು ಎಲ್ಲಿಂದ ಕರೆದುಕೊಂಡು ಬಂದರು ಎಂಬುದು ಕರ್ನಾಟಕದ ಜನತೆಗೆ ತಲೆನೋವಿನ ವಿಷಯವಾಗಿದೆ. ಈ ಇಬ್ಬರು ಶಿಕ್ಷಣ ಸಚಿವರು ಕೈಗೊಂಡಂತಹ ನಿರ್ಧಾರಗಳಿಂದಾಗಿ ಇಂದು ಕರ್ನಾಟಕ ರಾಜ್ಯದ ಶೈಕ್ಷಣಿಕ ವಲಯದಲ್ಲಿ ಒಂದು ರೀತಿಯ ಅಶಾಂತಿಯ ವಾತವರಣವೇ ನಿರ್ಮಾಣವಾಗಿದೆ. ಕರ್ನಾಟಕದ ಹಿಂದಿನ ಬಿಜೆಪಿ ಸರ್ಕಾರದ ಶಿಕ್ಷಣ ಸಚಿವರಾಗಿದ್ದ ಶ್ರೀಯುತ ಸುರೇಶ್ ಕುಮಾರ್ರವರು ತಮ್ಮದೇ ಬಿಜೆಪಿ ಪಕ್ಷದ ಐಟಿ ಸೆಲ್ನ ಸದಸ್ಯರು ಹಾಗು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿದ್ದ ಶ್ರೀಯುತ ರೋಹಿತ್ ಚಕ್ರತೀರ್ಥ ಅವರನ್ನು ಪ್ರಾಥಮಿಕ ಹಾಗು ಪ್ರೌಢ ಶಾಲಾ ಶಿಕ್ಷಣದ ಪಠ್ಯಪುಸ್ತಕಗಳಲ್ಲಿದ್ದ ಸರಿ ತಪ್ಪುಗಳ ವಿಶ್ಲೇಷಣೆಗಾಗಿ ಅವರೇ ಹೇಳಿದಂತೆ ಮೌಖಿಕವಾಗಿ ಸೂಚಿಸಿದ್ದರಂತೆ. ಈ ಕಾರ್ಯದಲ್ಲಿ ಮಗ್ನರಾದ ಶ್ರೀಯುತ ರೋಹಿತ್ ಚಕ್ರತೀರ್ಥರವರು ಪಠ್ಯಪುಸ್ತಕಗಳಲ್ಲಿದ್ದ ಸರಿ ತಪ್ಪುಗಳ ವಿಶ್ಲೇಷಣೆಯ ಸಂಪೂರ್ಣ ಮಾಹಿತಿಯನ್ನು ಶಿಕ್ಷಣ ಸಚಿವರಿಗೆ ತಿಳಿಸಬೇಕಾದ ಸಮಯಕ್ಕೆ ಸರಿಯಾಗಿ ಸರ್ಕಾರದ ಆಡಳಿತ ಚಕ್ರದಲ್ಲಿ ಉಂಟಾದ ಏರುಪೇರುಗಳ ಹಠಾತ್ ಬದಲಾವಣೆಯಿಂದಾಗಿ ಹಾಗು ಸರ್ಕಾರದ ಅನಿಶ್ಚಿತತೆಯಿಂದಾಗಿ ಶ್ರೀಯುತ ನಾಗೇಶ್ ಬಿ ಸಿ ಯವರು ಶಿಕ್ಷಣ ಸಚಿವರಾಗಿ ಅಧಿಕಾರವನ್ನು ವಹಿಸಿಕೊಂಡರು. ಈ ಶ್ರೀಯುತ ನಾಗೇಶ್ ಬಿ ಸಿ ಯವರು ಶಿಕ್ಷಣ ಸಚಿವರಾಗಿ ಅಧಿಕಾರವನ್ನು ವಹಿಸಿಕೊಂಡ ನಂತರವೇ ಈ ಪಠ್ಯಪುಸ್ತಕಗಳು ಪರಿಶೀಲನೆಗೆ ರೆಕ್ಕೆ ಪುಕ್ಕ ಬಂದಿತ್ತೆನ್ನಬಹುದು. ಈ ಶಿಕ್ಷಣ ಸಚಿವರಾದ ಶ್ರೀಯುತ ನಾಗೇಶ್ ಬಿ ಸಿ ಯವರು, ಮಾಜಿ ಶಿಕ್ಷಣ ಸಚಿವರಾದ ಶ್ರೀಯುತ ಸುರೇಶ್ ಕುಮಾರ್ರವರು ನೇಮಿಸಿದ್ದ ಈ ಶ್ರೀಯುತ ರೋಹಿತ್ ಚಕ್ರತೀರ್ಥ ಅವರನ್ನು ಒಳಗೊಂಡಂತೆ ಒಂದು ಸಮಿತಿಯನ್ನು ರಚಿಸಿ ಪಠ್ಯಪುಸ್ತಕಗಳ ಪರಿಷ್ಕರಣೆ ಮಾಡಲು ಅವಕಾಶವನ್ನು ನೀಡಿದರು, ಜೊತೆಗೆ ಶಿಕ್ಷಣ ಸಚಿವರು ಹಾಗು ಈ ಪಠ್ಯಪುಸ್ತಕಗಳ ಪರಿಷ್ಕರಣೆಯ ಅಧ್ಯಕ್ಷರು ಮತ್ತು ಬಹುಪಾಲು ಸದಸ್ಯರಾಗಿ ನೇಮಕಗೊಂಡ ವ್ಯಕ್ತಿಗಳು ಒಂದೇ ರಾಜಕೀಯ ಪಡಶಾಲೆಯಿಂದ ಬಂದವರಾದರಿಂದ ಈ ಪಠ್ಯಪುಸ್ತಕಗಳ ಪರಿಷ್ಕರಣೆ ಕಾರ್ಯವು ಎಗ್ಗಿಲ್ಲದೆ ಅವ್ಯಾಹತವಾಗಿ ತಮ್ಮಿಷ್ಟಕ್ಕೆ ಬಂದಂತೆ ತಮ್ಮ ಪಕ್ಷದ ಹಾಗು ತಮ್ಮ ವೈಯಕ್ತಿಕ ನಿಲುವು, ಮೌಲ್ಯ ಮತ್ತು ಸಿದ್ಢಾಂತಗಳನ್ನು ಪ್ರತಿಪಾದಿಸುವಂತಹ ಅಂಶಗಳನ್ನು ಸೇರಿಸುವುದರೊಂದಿಗೆ ಸಂಪೂರ್ಣ ಪಠ್ಯಪುಸ್ತಕಗಳ ರೂಪವನ್ನೇ ಬದಲಾಯಿಸಿದರು.
ಭಾರತ ಸೇನೆಯಲ್ಲಿ ಯುವಕರಿಗೆ ವಿಪುಲ ಅವಕಾಶ -ಡಾ| ಹೆರಾಲ್ಡ್ ಐವನ್ ಮೋನಿಸ್
Posted On: 26-07-2022 01:14PM
ಶಿರ್ವ: ಸಂತ ಮೇರಿ ಮಹಾವಿದ್ಯಾಲಯ, ಶಿರ್ವ ಇದರ ರಾಷ್ಟ್ರೀಯ ಭೂ-ಯುವಸೇನಾದಳದ ಎನ್.ಸಿ.ಸಿ. ಘಟಕ ಮತ್ತು 21 ಕರ್ನಾಟಕ ಬೆಟಾಲಿಯನ್ ಎನ್.ಸಿ.ಸಿ. ಉಡುಪಿ ಜಂಟಿಯಾಗಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಪ್ರಯುಕ್ತ 23ನೇ ಕಾರ್ಗಿಲ್ ವಿಜಯ ದಿನಾಚರಣೆಯನ್ನು ಕಾಲೇಜಿನಲ್ಲಿ ಆಚರಿಸಲಾಯಿತು.
ಕಾಪು : ಶೀನ ದೇವಾಡಿಗ ನಿಧನ
Posted On: 25-07-2022 11:27PM
ಕಾಪು : ಪರಿಸರದಲ್ಲಿ ಉತ್ತಮ ಕಾರ್ಯವೈಖರಿಯ ವ್ಯಕ್ತಿತ್ವದ ಶೀನ ದೇವಾಡಿಗ ಜುಲೈ 25ರಂದು ಹೃದಯಾಘಾತದಿಂದ ನಿಧನರಾದರು.
ಹೆದ್ದಾರಿ ಹೊಂಡ ಮುಚ್ಚದಿದ್ದಲ್ಲಿ ವಿನೂತನ ರೀತಿಯ ಪ್ರತಿಭಟನೆ - ೧೦ ದಿನಗಳ ಗಡುವು : ಕಾಪು ಬ್ಲಾಕ್ ಯುವ ಕಾಂಗ್ರೆಸ್
Posted On: 25-07-2022 10:31PM
ಪಡುಬಿದ್ರಿ: ಉಡುಪಿ -ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಪ್ರಮಾಣದ ಹೊಂಡಗಳು ಉಂಟಾಗಿರುವುದರಿಂದ ಪ್ರತಿನಿತ್ಯ ಅಪಘಾತಗಳು ನಡೆಯುತ್ತಿದೆ. ಹೆದ್ದಾರಿಯಲ್ಲಿ ಉಂಟಾಗಿರುವ ಈ ಹೊಂಡಗಳನ್ನು ಮುಚ್ಚಲು ೧೦ ದಿನಗಳ ಗಡುವು ನೀಡಲಾಗುವುದು. ಇಲ್ಲದಿದ್ದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ರಾಷ್ಟ್ರೀಯ ಹೆದ್ದಾರಿ ೬೬ ಹೆಜಮಾಡಿಯಿಂದ ಉದ್ಯಾವರದವರೆಗೆ ವಿನೂತನ ರೀತಿಯಲ್ಲಿ ಯುವ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ ಕಾಪು ಬ್ಲಾಕ್ ಯುವ ಕಾಂಗ್ರೆಸ್ ಎಚ್ಚರಿಸಿದೆ.
ಪಡುಬಿದ್ರಿ : ಅನಧಿಕೃತ ಅಪಾಯಕಾರಿ ಗ್ಯಾಸ್ ಗೋಡೌನ್ ತೆರವಿಗೆ ಪ್ರತಿಭಟನೆ ; ತಹಶಿಲ್ದಾರರಿಂದ ತೆರವಿನ ಭರವಸೆ
Posted On: 25-07-2022 09:55PM
ಪಡುಬಿದ್ರಿ : ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) ಅಂಬೇಡ್ಕರ್ ವಾದ ಗ್ರಾಮ ಶಾಖೆ ಪಡುಬಿದ್ರಿ ಇದರ ವತಿಯಿಂದ ಪಡುಬಿದ್ರಿಯಲ್ಲಿ ಅನಧಿಕೃತವಾಗಿ ನಡೆಸುತ್ತಿರುವ ಅಪಾಯಕಾರಿ ಗ್ಯಾಸ್ ಗೋಡೌನನ್ನು ತೆರವುಗೊಳಿಸಲು ಬ್ರಹತ್ ಪ್ರತಿಭಟನೆ ಹಾಗೂ ಧರಣಿ ಜುಲೈ 25ರಂದು ಜರುಗಿತು.
ಉಡುಪಿ ಜೆಡಿಎಸ್ ಸಾಂಸ್ಥಿಕ ಚುನಾವಣೆಯ ಪಟ್ಟಿ ಹಸ್ತಾಂತರ
Posted On: 25-07-2022 09:45PM
ಉಡುಪಿ : ಜಿಲ್ಲೆಯ ಜೆಡಿಎಸ್ ಪಕ್ಷದ ಸಾಂಸ್ಥಿಕ ಚುನಾವಣೆಯ ಪಟ್ಟಿಯನ್ನು ರಾಜ್ಯ ಚುನಾವಣಾಧಿಕಾರಿಯಾದ ಎಂ.ಸಿ.ನೀರಾವರಿಯವರಿಗೆ ಇತ್ತೀಚೆಗೆ ಬೆಂಗಳೂರು, ರಾಜ್ಯ ಪಕ್ಷ ಕಚೇರಿಯಲ್ಲಿ ಉಡುಪಿ ಜಿಲ್ಲಾ ಜೆಡಿಎಸ್ ಚುನಾವಣಾಧಿಕಾರಿಯಾದ ಜಯರಾಮ ಆಚಾರ್ಯ ರವರಿಂದ ಹಸ್ತಾಂತರಿಸಿದರು.
ಕಾಪು ಹರೀಶ್ ನಾಯಕ್ ಅವರಿಗೆ ಜಿ ಎಸ್ ಬಿ ಸಮಾಜ ಹಿತರಕ್ಷಣಾ ವೇದಿಕೆಯಿಂದ ಸನ್ಮಾನ
Posted On: 25-07-2022 09:31PM
ಉಚ್ಚಿಲ : ಜಿ ಎಸ್ ಬಿ ಸಮಾಜ ಹಿತರಕ್ಷಣಾ ವೇದಿಕೆ, ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಮುದರಂಗಡಿ ಆಶ್ರಯದಲ್ಲಿ ಶೈಕ್ಷಣಿಕ ಪ್ರೇರಣಾ ಕಾರ್ಯಾಗಾರ, ವಿದ್ಯಾರ್ಥಿವೇತನ ವಿತರಣೆ ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭ ಉದ್ಘಾಟನಾ ಕಾರ್ಯಕ್ರಮ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸಂಕೀರ್ಣದ ಮಾಧವಮಂಗಳ ಸಭಾಂಗಣದಲ್ಲಿ ನಡೆಯಿತು.
ಪಲಿಮಾರು : ಬಿಜೆಪಿ ವತಿಯಿಂದ ಆಟಿಡೊಂಜಿ ಕಮಲ ಕೂಟ
Posted On: 25-07-2022 12:18AM
ಪಲಿಮಾರು : ಇಲ್ಲಿನ ಬಿಜೆಪಿ ಹಿಂದುಳಿದ ವರ್ಗ ಮೋರ್ಚ, ಪಲಿಮಾರು ಮತ್ತು ನಂದಿಕೂರು ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಆಟಿಡೊಂಜಿ ಕಮಲ ಕೂಟ ಕಾರ್ಯಕ್ರಮ ಪಲಿಮಾರಿನಲ್ಲಿ ನಡೆಯಿತು.
