Updated News From Kaup
ಮಚ್ಚಿನದಲ್ಲಿ ಜಲಜೀವನ್ ಮಿಷನ್ ಗ್ರಾಮೀಣ ಸಹಭಾಗಿತ್ವ ಕಾರ್ಯಕ್ರಮ
Posted On: 16-01-2021 04:58PM
ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾ.ಪಂಚಾಯತಿಯಲ್ಲಿ ಜಲಜೀವನ್ ಮಿಷನ್ ಕಾರ್ಯಚಟುವಟಿಕೆಯಡಿ ಸಮುದಾಯ ಸಂಸ್ಥೆ ವತಿಯಿಂದ ಗ್ರಾಮೀಣ ಸಹಭಾಗಿತ್ವ ಕಾರ್ಯಕ್ರಮ ನಡೆಸಲಾಯಿತು.
ಸ್ವಚ್ಛ ಭಾರತ ಸ್ವಚ್ಛ ಮಂಗಳೂರು ಅಭಿಯಾನದಲ್ಲಿ ಬಾಸ್ಕಿ ಅರ್ಬ್ ಗ್ರೂಪ್ ನೇತೃತ್ವದ 90ನೇ ದಿನದತ್ತ ಸ್ವಚ್ಛತಾ ಕಾರ್ಯ
Posted On: 16-01-2021 04:53PM
ಸ್ವಚ್ಛ ಭಾರತ ಸ್ವಚ್ಛ ಮಂಗಳೂರು ಅಭಿಯಾನದ ಪರಿಕಲ್ಪನೆಯಲ್ಲಿ ಇಷ್ಟರವರೆಗೇ 89 ದಿನಗಳ ಸ್ವಯಂ ಪ್ರೇರಿತ ಸ್ವಚ್ಛತೆ ಮಾಡಿ ಇದೇ ಬರುವ ತಾರೀಕು 17/01/2021ನೇ ದಿನದಂದು 90ನೇ ದಿನದತ್ತ ದಿಟ್ಟ ಹೆಜ್ಜೆ ಇಡುತ್ತಿರುವ ಸಂಸ್ಥೆ ಬಾಸ್ಕಿ ಅರ್ಬ್ ಗ್ರೂಪ್.
ಸುಳ್ಯ ತಾಲೂಕು ಪಂಚಾಯತಿಯಲ್ಲಿ ಜಲಜೀವನ್ ಮಿಷನ್ ಕಾರ್ಯಾಗಾರ
Posted On: 14-01-2021 08:44PM
ದ.ಕ ಜಿಲ್ಲಾ ಪಂಚಾಯತ್ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ,ಸ್ವಚ್ಛ ಭಾರತ್ ಮಿಷನ್ ಮತ್ತು ತಾಲೂಕು ಪಂಚಾಯತ್ ಸುಳ್ಯ ಇದರ ಸಹಭಾಗಿತ್ವದಲ್ಲಿ ಜಲಜೀವನ್ ಮಿಷನ್ ಯೋಜನೆಯ ಅನುಷ್ಠಾನ ಬೆಂಬಲಿತ ಸಂಸ್ಥೆ ಸಮುದಾಯ ತುಮಕೂರು (ರಿ.) ಇದರ ವತಿಯಿಂದ ಸುಳ್ಯ ತಾಲೂಕು ಪಂಚಾಯತಿಯ ಪಯಸ್ವಿನಿ ಸಭಾಂಗಣದಲ್ಲಿ ತಾಲೂಕಿನ ವಿವಿಧ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಜಲಜೀವನ್ ಮಿಷನ್ ಕಾರ್ಯಾನುಷ್ಠಾನದ ಕುರಿತು ಕಾರ್ಯಾಗಾರವನ್ನು ಬುಧವಾರ ಹಮ್ಮಿಕೊಳ್ಳಲಾಗಿತ್ತು.
ಕಾಪು ವೆಂಕಟರಮಣ ದೇವಸ್ಥಾನಕ್ಕೆ ಇನ್ವರ್ಟರ್ ಕೊಡುಗೆ
Posted On: 14-01-2021 08:38PM
ಕಾಪು ವೆಂಕಟರಮಣ ದೇವಸ್ಥಾನಕ್ಕೆ ನೂತನ ಇನ್ವರ್ಟರನ್ನು ಶ್ರೀ ಗೋಕುಲದಾಸ್ ಕಾಮತ್ ಮತ್ತು ಕುಟುಂಬ , ಕಲ್ಯ, ಕಾಪು ಇವರು ಸೇವಾರ್ಥವಾಗಿ ಸಮರ್ಪಿಸಿದರು.
ಬಂಟಕಲ್ಲು : ಚಿನ್ನದ ಪದಕ ಪಡೆದ ಕುಮಾರಿ ರಶ್ಮಿತರವರಿಗೆ ನಾಗರಿಕ ಸಮಿತಿಯಿಂದ ಅಭಿನಂದನೆ
Posted On: 14-01-2021 08:32PM
ಬೆಂಗಳೂರಿನ ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ನಡೆಸಿದ ಬಿ.ಎಸ್ಸಿ ಪದವಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕವನ್ನು ಪಡೆದ ಬಂಟಕಲ್ಲು ಮಾಣಿಪಾಡಿ ಶ್ರೀ ರಮೇಶ ಮೂಲ್ಯ ಮತ್ತು ಶ್ರೀಮತಿ ಗೀತಾ ಮೂಲ್ಯರವರ ಪುತ್ರಿ ಕುಮಾರಿ ರಶ್ಮಿತರವರಿಗೆ ಬಂಟಕಲ್ಲು ನಾಗರಿಕ ಸೇವಾ ಸಮಿತಿ (ರಿ.)ರವರು ಅವರ ಮನೆಗೆ ತೆರಳಿ ಅಭಿನಂದನೆ ತಿಳಿಸಿದರು. ನಾಗರಿಕ ಸೇವಾ ಸಮಿತಿ ಅಧ್ಯಕ್ಷ ಕೆ. ಆರ್ ಪಾಟ್ಕರ್ ರವರು ರಶ್ಮಿತಾರನ್ನು ಸಮಿತಿ ಪರವಾಗಿ ಅಭಿನಂದಿಸಿದರು. ಇವರ ಸಾಧನೆ ನಮ್ಮ ಊರಿಗೆ ಹೆಮ್ಮೆಯ ವಿಚಾರವಾಗಿದೆ ಎಂದು ತಿಳಿಸಿ ಅವರ ಭವಿಷ್ಯದ ಜೀವನಕ್ಕೆ ಶುಭ ಹಾರೈಸಿದರು.
ಬಂಟಕಲ್ಲು : ರಾತ್ರಿ ಮಲಗಿದ್ದ ವ್ಯಕ್ತಿ ಬೆಳಿಗ್ಗೆ ಬಾವಿಯಲ್ಲಿ ಶವವಾಗಿ ಪತ್ತೆ
Posted On: 13-01-2021 07:42PM
ಶಿರ್ವ ಠಾಣಾ ವ್ಯಾಪ್ತಿಯ ಬಂಟಕಲ್ಲು ಹೇರೂರು ಬಾವಿಯಲ್ಲಿ ಶವ ಪತ್ತೆ ಸುಮಾರು 69 ವರ್ಷ ಪ್ರಾಯದ ಜಾನ್ ಡಿಸೋಜ ರಾತ್ರಿ ಮನೆಯಲ್ಲಿ ಊಟ ಮಾಡಿ ಮಲಗಿದ ಜಾನ್ ಡಿಸೋಜ ಬೆಳಿಗ್ಗೆ ನಾಪತ್ತೆಯಾಗಿದ್ದರು ಹುಡುಕಾಡಿದಾಗ ಮನೆಯ ಬಾವಿಯಲ್ಲಿ ಶವ ಇರುವುದು ಪತ್ತೆಯಾಗಿದೆ.
ಕಾಪು : ಮಹಾದೇವಿ ಪ್ರೌಢಶಾಲೆಯ ನಿವೃತ ದೈಹಿಕ ಶಿಕ್ಷಕ ರಾಘವೇಂದ್ರ ಬಾಯರಿ ಇನ್ನಿಲ್ಲ
Posted On: 13-01-2021 02:43PM
ಕಾಪು : ಮಹಾದೇವಿ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಸಾರ್ಥಕ ಸೇವೆಯನ್ನು ಮಾಡಿ ನಿವೃತ್ತಿಯನ್ನು ಹೊಂದಿದ ಶ್ರೀ ರಾಘವೇಂದ್ರ ಬಾಯರಿಯವರು ಅಲ್ಪಕಾಲದ ಅಸೌಖ್ಯದಿಂದ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಮಂಗಳೂರಿನ ಈ ಅಜಾನುಬಾಹು ಪೊಲೀಸ್ ನ ಕೆಲಸ ನೋಡಿದ್ರೆ ನೀವು ದಂಗಾಗೋದು ಗ್ಯಾರಂಟಿ..ಅವರೇ ವಿಜಯ ಕಾಂಚನ್ ಬೈಕಂಪಾಡಿ
Posted On: 13-01-2021 12:07PM
ತುಂಬಾ ಸಮಯದಿಂದ ಇವರ ಬಗ್ಗೆ ಬರೆಯಬೇಕು ಎಂದುಕೊಂಡಿದ್ದೆ, ಆದರೆ ಕಾಲವೇ ಕೂಡಿಬಂದಿರಲಿಲ್ಲ.. ಪೊಲೀಸ್ ಇಲಾಖೆಯಲ್ಲಿ ಇದ್ದುಕೊಂಡು ಇಷ್ಟೊಂದು ಸಾಧನೆ ಮಾಡಲು ಸಾಧ್ಯವೇ..? ಅದು ಕೂಡ ಯುವಕರನ್ನು ನಾಚಿಸುವಂತ ಸಾಧನೆ. ನಾನು ಇವರನ್ನು ತುಂಬಾ ಹತ್ತಿರದಿಂದ ಬಲ್ಲೆ. ಮಂಗಳೂರಿನಲ್ಲಿದ್ದಾಗ ವಾರಕ್ಕೆ ಮೂರು ನಾಲ್ಕು ಸಲ ಭೇಟಿಯಾಗುತ್ತಿದ್ದೆವು, ಆದರೆ ಇತ್ತೀಚೆಗೆ ಕೊರೊನದಿಂದಾಗಿ ಇವರ ಭೇಟಿ ಬಹಳ ಕಡಿಮೆಯಾಗಿತ್ತು. ಮೊನ್ನೆ ಕುದ್ರೋಳಿಯಲ್ಲಿ ನಡೆದ ರಾಜ್ಯಮಟ್ಟದ ಸೀನಿಯರ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಇವರು ಬೆಳ್ಳಿ ಪದಕ ಪಡೆದ ತುಣುಕೊಂದು ನಮ್ಮ ವಾಟ್ಸಪ್ ಗ್ರೂಪ್ ಗೆ ಬಂದಿತ್ತು. ಯುವಕರು ಭಾಗವಹಿಸುವ ಸ್ಪರ್ಧೆಯಲ್ಲಿ 52 ವರ್ಷದವರು ಪೈಪೋಟಿ ಕೊಡಲು ಸಾಧ್ಯವೇ..?
ಬಂಟಕಲ್ಲು : ಗುರು ರಾಘವೇಂದ್ರ ಸ್ವಾಮಿಗಳ ಪೀಠಕ್ಕೆ ಪಂಚಲೋಹದ ವೃಂದಾವನ ಪ್ರಭಾವಳಿ ಸಮರ್ಪಣೆ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಭಜನಾ ಮಂಗಲೋತ್ಸವ
Posted On: 13-01-2021 11:46AM
ಶ್ರೀ ಗುರು ರಾಘವೇಂದ್ರ ಸಮಾಜ ಸೇವಾ ಮಂಡಳಿ ವತಿಯಿಂದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಪ್ರತಿಷ್ಠಾ ಮಹೋತ್ಸವದ ಪ್ರಯುಕ್ತ ವೇದಮೂರ್ತಿ ಶ್ರೀ ನಾಗರಾಜ ಭಟ್ ಕಲ್ಯಾಲು ಇವರ ನೇತೃತ್ವದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಭಜನಾ ಮಂಗಲೋತ್ಸವ ಇಂದು (ಬುಧವಾರ) 92 ಹೇರೂರು, ಬಂಟಕಲ್ಲು ಇಲ್ಲಿ ನಡೆಯಲಿದೆ.
ಉಡುಪಿ ಜಿಲ್ಲೆಯಲ್ಲಿ ಜನವರಿ 19ಕ್ಕೆ ಹೋಟೆಲ್ ಕಾರ್ಮಿಕರ ಸಮಾವೇಶ
Posted On: 12-01-2021 05:32PM
ಸರಕಾರದ ಸವಲತ್ತುಗಳನ್ನು ಪಡೆಯುವ ಉದ್ದೇಶವನ್ನು ಹೊತ್ತು ಕರ್ನಾಟಕ ರಾಜ್ಯ ಕಾರ್ಮಿಕರ ಸಂಘ ಉಡುಪಿ ಜಿಲ್ಲಾ ಘಟಕದ ಆಶ್ರಯದಲ್ಲಿ ಹೋಟೆಲ್ ಕಾರ್ಮಿಕರ ಸಮಾವೇಶ ಇದೇ ಬರುವ 19ರಂದು ಬೆಳಿಗ್ಗೆ 11ಕ್ಕೆ ಅಮೃತ್ ಕನ್ವೆನ್ಷನ್ ಸೆಂಟರ್ ಮಾರಣಕಟ್ಟೆ, ಚಿತ್ತೂರು ಇಲ್ಲಿ ನಡೆಯಲಿದೆ.
