Updated News From Kaup
ಸ್ವರ್ಣಾರಾಧನಾ ಅಭಿಯಾನ: ಸ್ವಣಾ೯ರತಿ ಚಾಲನೆ
Posted On: 18-12-2020 11:05PM
ಉಡುಪಿ : ಎಣ್ಣೆಹೊಳೆ ದೇವಾಲಯದ ಸ್ವಣಾ೯ ನದಿಯ ತಟದಲ್ಲಿ ವೈಭವದ ಸ್ವಣಾ೯ರತಿ ಕಾಯ೯ಕ್ರಮ ಡಿ.18 ಶುಕ್ರವಾರ ನಡೆಯಿತು. ಗೋವಾ ಕೈವಲ್ಯ ಮಠಾಧೀಶರಾದ ಶ್ರೀ ಶಿವಾನಂದ ಸರಸ್ವತಿ ಸ್ವಾಮಿ ಮಹಾರಾಜ್ ರವರು ದೇವಾಲಯದ ಎದುರು ಬಿಲ್ವ ಗಿಡಗಳನ್ನು ನೆಡುವುದರ ಮೂಲಕ ಚಾಲನೆ ನೀಡಿದರು.ನಂತರ ನದಿ ತೀರದಲ್ಲಿ ವೈಭವದ ಸ್ವಣಾ೯ರತಿ ಕಾಯ೯ ನಡೆಯಿತು. ಈ ಸಂದಭ೯ ಸ್ವಾಮೀಜಿಯವರು ಯೋಜನೆಯು ಅತ್ಯಂತ ಯಶಸ್ವಿಯಾಗಲೆಂದು ಆಶೀವ೯ಚನ ನೀಡಿದರು.
ಗೋಡೆಬರಹ ಪ್ರಕರಣವನ್ನು NIA ತನಿಖೆಗೆ ಆಗ್ರಹಿಸಿ ಮತ್ತು ಪೊಲೀಸ್ ಸಿಬ್ಬಂದಿ ಕೊಲೆ ಯತ್ನ ಖಂಡಿಸಿ ಡಿಸೆಂಬರ್ 23 ಕ್ಕೆ ಪ್ರತಿಭಟನೆಗೆ ಕರೆ - ವಿಶ್ವ ಹಿಂದು ಪರಿಷದ್
Posted On: 18-12-2020 08:05PM
ಕಳೆದ ಕೆಲವು ದಿನಗಳ ಹಿಂದೆ ಮಂಗಳೂರಿನಲ್ಲಿ ಉಗ್ರರ ಪರ ಗೋಡೆ ಬರಹದ ಮುಖಾಂತರ ಲಷ್ಕರ್ ತೋಯಿಬಾ ಉಗ್ರ ಸಂಘಟನೆಯನ್ನು ಬೆಂಬಲಿಸಿ ಮತ್ತು ಮತ್ತು ಮುಸ್ಲಿಂ ವಿರೋಧಿಗಳನ್ನು ಹತ್ಯೆ ಮಾಡುವುದಾಗಿ ಗೋಡೆ ಬರಹದ ಮುಖಾಂತರ ಇಲ್ಲಿ ಭಯೋತ್ಫಾದಕ ಚಟುವಟಿಕೆ ಪ್ರಾರಂಭ ಮಾಡಲು ಪ್ರಯತ್ನಿಸುತ್ತಿರುವುದು ಬಹಳ ಆತಂಕಕಾರಿ ವಿಷಯವಾಗಿದೆ. ಇದರ ಹಿಂದೆ ಭಯೋತ್ಫಾದಕರ ನಂಟು ಇರುವುದು ಸಾಧ್ಯತೆ ಇದ್ದು ಈಗಾಗಲೇ 3 ಜನರನ್ನು ಬಂಧಿಸಿದ್ದು ಅವರಿಂದ ಜಾಗತಿಕ ಭಯೋತ್ಫಾದಕ ಜಮೈಕಾ ಮೂಲದ ಶೇಕ್ ಅಬ್ದುಲ್ಲಾ ಫೈಝಲ್ ಪ್ರಚೋದನಕಾರಿ ಭಾಷಣ ಮತ್ತು ಉಗ್ರರ ಅಧ್ಯಯನಕ್ಕೆ ಸಂಬಂಧಿಸಿದಂತೆ ಪುಸ್ತಕಗಳು ಸಿಕ್ಕಿರುವುದು ಬಹಳಆಘಾತಕಾರಿಯಾಗಿದೆ, ಪೊಲೀಸರು ಶೀಘ್ರವಾಗಿ ಕ್ರಮ ಕೈಗೊಂಡು ಈ ಪ್ರಕರಣವನ್ನು ಬೇಧಿಸಿದನ್ನು ಪೊಲೀಸ್ ಕಮಿಷನರ್ ಮತ್ತು ಸಿಬ್ಬಂದಿಗಳಿಗೆ ವಿಶ್ವಹಿಂದೂ ಪರಿಷತ್ ಶ್ಲಾಘಿಸುತ್ತದೆ ಮತ್ತು ಅಭಿನಂದನೆ ಸಲ್ಲಿಸುತ್ತದೆ.
ನಾರಾಯಣಗುರುಗಳ ತತ್ವಕ್ಕೆ ಬದ್ಧನಾಗಿ, ನ್ಯಾಯಕ್ಕೆ ಸದಾ ಸಿದ್ಧನಾಗಿರುವ ಸಮಾಜಮುಖಿ ಚಿಂತನೆಯ ವ್ಯಕ್ತಿ - ಕಿರಣ್ ಪೂಜಾರಿ ಕುಂದಾಪುರ
Posted On: 18-12-2020 10:15AM
ಒಂದೇ ಜಾತಿ ಒಂದೇ ಮತ ಒಂದೇ ದೇವರು ಮಾನವನಿಗೆ" ಎಂಬ ನಾರಾಯಣ ಗುರುಗಳ ತತ್ವವನ್ನು ಜೀವನದಲ್ಲಿ ಅಳವಡಿಸಿ, ಅನ್ಯಾಯವನ್ನು ಸಹಿಸಿಕೊಳ್ಳದ, ನೇರ ನುಡಿಯ ಅನ್ಯಾಯದ ವಿರುದ್ಧ ಧ್ವನಿ ಎತ್ತುವ, ದುಷ್ಟರ ಪಾಲಿಗೆ ಬೆಂಕಿಯಾಗಿ, ನೊಂದವರ ಪಾಲಿಗೆ ಆಶಾಕಿರಣವಾಗಿ ಎಲ್ಲರ ಮನಗೆದ್ದ ಹೆಮ್ಮೆಯ ವ್ಯಕ್ತಿ ಕಿರಣ್ ಪೂಜಾರಿ. ಮದ್ದು ಗುಡ್ಡೆ ಕುಂದಾಪುರ ತಾಲೂಕಿನ ನರಸಿಂಹ ಪೂಜಾರಿ ಮತ್ತು ಗೀತಾ ಎನ್ ಪೂಜಾರಿಯರ ಮಗ ಕಿರಣ್ ಪೂಜಾರಿ. ಇವರು ತನ್ನ ವಿದ್ಯಾಬ್ಯಾಸವನ್ನು ಸಂತ ಮರಿಯಾ ಹೈ ಸ್ಕೂಲ್ ಕುಂದಾಪುರ ಮತ್ತು ಭಂಡಾರ್ಕಾರ್ಸ್ ಕಲಾ & ವಿಜ್ಞಾನ ಕಾಲೇಜು ಕುಂದಾಪುರ ಇಲ್ಲಿ ಮುಗಿಸಿ ನಂತರ ಕುಂದಾಪುರದಲ್ಲಿ "MICE" ಡಿಪ್ಲೋಮ ಇನ್ ಕಂಪ್ಯೂಟರ್ ಅಪ್ಲಿಕೇಶನ್ ಮತ್ತು ಡಿ. ಟಿ. ಪಿ ತರಬೇತಿ ಪಡೆದು ನಂತರ ಜೀವನಕ್ಕಾಗಿ "ಜನ ಈ ದಿನ " ಪತ್ರಿಕೆಯಲ್ಲಿ ಅಡ್ವೇಟೈಸಿಂಗ್ ಡಿಸೈನರ್ ಮತ್ತು ಕಂಪ್ಯೂಟರ್ ಕೋ ಅರ್ಡಿನೆಟರ್ ಆಗಿ ತನ್ನ ವೃತ್ತಿ ಜೀವನ ಆರಂಭಿಸಿದರು. ತನ್ನ ಕನಸುಗಳು ನನಸಾಗಬೇಕು ಜೀವನದಲ್ಲಿ ಏನಾದರೂ ಸಾಧಿಸಬೇಕು ಎನ್ನುವ ಛಲ ಇದ್ದ ಇವರು ಬೆಂಗಳೂರಿಗೆ ಬಂದು ಜೆಟ್ ಕಿಂಗ್ ನಲ್ಲಿ ಡಿಪ್ಲೋಮ ಇನ್ ಹಾರ್ಡ್ ವೇರ್ ಆ್ಯಂಡ್ ನೆಟ್ ವರ್ಕಿಂಗ್ ಮಾಡುತ್ತಿದ್ದು ಮತ್ತು ಅದರ ಜೊತೆಯಲ್ಲಿ ಪ್ರೆಸ್ ಡಿಸೈನರ್ ಆಗಿಯೂ ಕೆಲಸ ಮಾಡುತ್ತಿದ್ದರು. ಅನಂತರ ಕರ್ನಾಟಕ ಕಂಪ್ಯೂಟರ್ಸ್ ನಲ್ಲಿ ಕಂಪ್ಯೂಟರ್ ಇನ್ಸ್ಟ್ರಕ್ಟರ್ ಆಗಿ ಮತ್ತು ಪಾರ್ಟ್ ಟೈಮ್ ಪತ್ರಿಕೆಯ ವರದಿಗಾರನಾಗಿ ಸೇವೆಯನ್ನು ಸಲ್ಲಿಸಿದ್ದರು.
ಅಖಿಲ ಭಾರತ ತುಳುನಾಡ ದೈವರಾದಕರ ಒಕ್ಕೂಟ ಉಡುಪಿ ಜಿಲ್ಲೆ : ಸದಸ್ಯತ್ವ ಅರ್ಜಿ ಫಾರ್ಮ್ ಬಿಡುಗಡೆ
Posted On: 17-12-2020 10:30PM
ಉಡುಪಿ ಬಬ್ಬರ್ಯ ದೈವಸ್ಥಾನದ ವಟಾರದಲ್ಲಿ ಅಖಿಲ ಭಾರತ ತುಳುನಾಡ ದೈವರಾದಕರ ಒಕ್ಕೂಟ ಉಡುಪಿ ಜಿಲ್ಲೆ (ರಿ.)ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸದಸ್ಯತ್ವ ಅರ್ಜಿ ಫಾರ್ಮ್ ಅನ್ನು ಒಕ್ಕೂಟದ ಎಲ್ಲಾ ಸದಸ್ಯರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು.
ರಾಷ್ಟ್ರ-ರಾಜ್ಯಮಟ್ಟದಲ್ಲಿ ಮಿಂಚಿದ ಪ್ರತಿಭೆ ಸ್ಮಿತ ಭಂಡಾರಿಗೆ ಸನ್ಮಾನ
Posted On: 17-12-2020 09:27AM
ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಉಡುಪಿ ಮಹಾಸಭೆಯಲ್ಲಿ ಮಲ್ಪೆ ದಿ/ ಶ್ರೀನಿವಾಸ ಭಂಡಾರಿಯವರ ಮಗಳಾದ ಬಹುಮುಖ ಪ್ರತಿಭೆ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಭಾಗವಹಿಸಿ ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಮಿಂಚಿದ ಸ್ಮಿತ ಭಂಡಾರಿ ಇವರನ್ನು ಸನ್ಮಾನಿಸಲಾಯಿತು.
ಅಚ್ಚರಿ ಮೂಡಿಸಿದ ಪೇಜಾವರ ಶ್ರೀಗಳ 3D ಭಾವಚಿತ್ರ
Posted On: 15-12-2020 06:11PM
ಹೊನ್ನಾವರ : ಕಲಾವಿದ ವಿನಯ್ ಭಟ್ ಕಬ್ಬಿನಗದ್ದೆ ಕೈ ಚಳಕದಲ್ಲಿ ನಿರ್ಮಾಣಗೊಂಡ 3D ಆಕೃತಿಯ ಪೇಜಾವರ ಮಠದ ಪೂಜ್ಯ ಶ್ರೀಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರ ಭಾವಚಿತ್ರ ಅವರ ವೃಂದಾವನದಲ್ಲಿ ಭಕ್ತರನ್ನು ಸೆಳೆಯುತ್ತಿದೆ.
ಸಾಧನೆಯ ಹಾದಿಯಲ್ಲಿ ಜನಮೆಚ್ಚಿದ ಗಾಯಕಿ ಸೌಜನ್ಯ
Posted On: 15-12-2020 05:24PM
ಸಾಧನೆ ಎನ್ನುವುದು ಯಾರದ್ದು ಮತ್ತು ಯಾವುದೇ ಹಂಗಿಲ್ಲದೆ ಮಾಡುವುದು. ಸಾಧನೆಯ ಹಾದಿಯಲ್ಲಿ ನಡೆಯುವವನಿಗೆ ಯಾವುದೇ ಅಹಂ ಇರಬಾರದು. ಅಂತಹ ಒಬ್ಬ ಸಾಮಾನ್ಯನಿಗೆ ಮಾತ್ರ ಸಾಧಕನಾಗಿ ಹೊರ ಹೊಮ್ಮಲು ಸಾಧ್ಯ. ತನ್ನ ಮುಗುಳುನಗೆ ಮತ್ತು ಮುಗ್ದ ಮನಸ್ಸಿನಿಂದ ಎಲ್ಲರ ಮನಸು ಗೆದ್ದ ಅದ್ಭುತ ಕಂಠದ ಹಾಡುಗಾರ್ತಿ ಸೌಜನ್ಯ.
ಕೆಲಸಕ್ಕಾಗಿ ಮುಂಬಯಿ ತಲುಪಿದ ಹುಡುಗ ಇಂದು ಸುಮಾರು ಐದು ಸಾವಿರ ಜನರಿಗೆ ಕೆಲಸ ಕೊಡಿಸಿದ ಅನ್ನದಾತ - ಗೋವಿಂದ ಬಾಬು ಪೂಜಾರಿ
Posted On: 15-12-2020 04:21PM
ಸಾಮಾನ್ಯವಾಗಿ ಕೆಲವು ವರ್ಷಗಳ ಹಿಂದೆ ಕರಾವಳಿಯವರು ಜೀವನವನ್ನು ಹುಡುಕಿಕೊಂಡು ಹೋಗುತ್ತಿದ್ದುದು ಮಹಾನಗರಿ ಮುಂಬಯಿಗೆ. ಮುಖ್ಯವಾಗಿ ಹೋಟೇಲುಗಳಲ್ಲಿ ಕೆಲಸ ಮಾಡಲು. ಅಂದು ಏಳನೆಯ ತರಗತಿಯವರೆಗೆ ಓದಿದ್ದ ಆ ಹುಡುಗ ಕೂಡ ಜೀವನವನ್ನು ಹುಡುಕಿಕೊಂಡು ಮುಂಬಯಿ ಬಸ್ ಹತ್ತಿದ್ದ. ಕೈಯಲ್ಲಿ ದುಡ್ಡಿರಲಿಲ್ಲ. ಆದರೆ ಕಣ್ಣ ತುಂಬಾ ಕನಸುಗಳಿದ್ದವು. ಆ ಹುಡುಗನ ಹೆಸರು ಗೋವಿಂದ ಬಾಬು ಪೂಜಾರಿ
ಕಾಂತಾವರ ಕನ್ನಡ ಸಂಘ: ಕೆ.ಪಿ.ರಾವ್, ಕುಂಡಂತಾಯ, ಖಂಡಿಗೆ, ಮುರಲಿ ಅವರಿಗೆ ಪ್ರಶಸ್ತಿ ಪ್ರದಾನ
Posted On: 14-12-2020 10:14AM
ಕಾಂತಾವರ ಕನ್ನಡ ಸಂಘದ 2020 ನೇ ಸಾಲಿನ ದತ್ತಿನಿಧಿಗಳ ಪ್ರಶಸ್ತಿ ಪ್ರಧಾನ ಸಮಾರಂಭವು ಡಿ.13 ರಂದು ಕಾಂತಾವರದ ಕನ್ನಡ ಸಂಘದಲ್ಲಿ ನೆರವೇರಿತು . ಕ.ಸಾ.ಪ .ದ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಅಧ್ಯಕ್ಷತೆ ವಹಿಸಿದ್ದರು .ಕಾಂತಾವರ ಕನ್ನಡ ಸಂಘದ ಸ್ಥಾಪಕಾಧ್ಯಕ್ಷ ಡಾ. ನಾ.ಮೊಗಸಾಲೆ ಉಪಸ್ಥಿತರಿದ್ದರು.
ಕೊಡಪಾನದೊಳಗೆ ತಲೆ ಸಿಲುಕಿ ನಾಯಿಯ ಪೇಚಾಟ
Posted On: 13-12-2020 07:59PM
ಕಟಪಾಡಿ: ಅನಾವಶ್ಯಕ ವಿಷಯಕ್ಕೆ ಮೂಗು ತೂರಿಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ... ! ಅಪಾಯಕಾರಿ ಪರಿಸ್ಥಿತಿಯನ್ನು ಎದುರಿಸಬೇಕಾಗುವುದು ನಿಚ್ಚಳ. ಮರಳಿ ಸುರಕ್ಷತೆಯನ್ನು ಪಡೆಯಲು ಮತ್ತಷ್ಟು ಕರುಣಾಮಯಿ ಜನರನ್ನು ಅವಲಂಭಿಸಿದ ಘಟನೆಯು ಉದ್ಯಾವರದಲ್ಲಿ ನಡೆದಿದೆ. ಉದ್ಯಾವರ ಶ್ರೀ ಶಂಭುಶೈಲೇಶ್ವರ ದೇಗುಲದ ಅರ್ಚಕರ ಮನೆಯ ಬಳಿಯಲ್ಲಿ ಬೆಳ್ಳಂಬೆಳಗ್ಗೆಯೇ 6.30 ಗಂಟೆಯ ಸುಮಾರಿಗೆ ಇಂತಹ ಪರಿಸ್ಥಿತಿ ನಿರ್ಮಾಣಗೊಂಡಿತ್ತು.
