Updated News From Kaup

ಸಚಿವ ಕೋಟ ವಿರುದ್ಧ ಕಿಡಿಗೇಡಿಗಳ ಅಂತರ್ಜಾಲ ಅಪಪ್ರಚಾರಕ್ಕೆ ವ್ಯಾಪಕ ಖಂಡನೆ

Posted On: 20-01-2021 08:50PM

ಕೋಟ: ದ.ಕ ಜಿಲ್ಲಾಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿರುದ್ಧ ಅವಹೇಳನ ಬರಹವನ್ನು ಫೇಸ್‌ಬುಕ್‌ ಖಾತೆಯಲ್ಲಿ ಹರಿಬಿಟ್ಟ ಅನಿಲ್ ಕುಮಾರ್ ಶೆಟ್ಟಿ ಎನ್ನುವವನ ವಿರುದ್ಧ ವ್ಯಾಪಕ ಟೀಕೆ ಹಾಗೂ ಖಂಡನೆ ವ್ಯಕ್ತವಾಗಿದ್ದು ಅದರಂತೆ ಬುಧವಾರ ಕೋಟ ಶ್ರೀ ನಾರಾಯಣ ಗುರು ಸೇವಾ ಸಂಘ ಆಕ್ರೋಶ ವ್ಯಕ್ತಪಡಿಸಿ ಕೋಟ ಆರಕ್ಷಕ ಠಾಣೆಗೆ ತೆರಳಿ ಠಾಣಾಧಿಕಾರಿ ಸಂತೋಷ್ ಬಿ.ಪಿ ಇವರಿಗೆ ದೂರು ನೀಡಿದೆ.

ಮಂಗಳೂರು ಮಡಗಾಂವ್ ಪ್ಯಾಸೆಂಜರ್ ರೈಲು ಪುನರಾರಂಭಿಸುವಂತೆ ಮುಖ್ಯಮಂತ್ರಿಯವರಲ್ಲಿ ಮನವಿ

Posted On: 18-01-2021 09:58PM

ಮಂಗಳೂರು ಮಡಗಾಂವ್ ಪ್ಯಾಸೆಂಜರ್ ರೈಲು ಸ್ಥಗಿತಗೊಂಡು 9 ತಿಂಗಳು ಕಳೆದಿದ್ದು ಕರಾವಳಿ ಕರ್ನಾಟಕ ಭಾಗದ ರೈತರು, ಆರ್ಥಿಕವಾಗಿ ಹಿಂದುಳಿದವರು ಹಾಗೂ ಸಣ್ಣ ವ್ಯಾಪಾರಿಗಳ ವ್ಯಾಪಾರ ವಹಿವಾಟಿಗೆ ತೊಂದರೆಯಾಗಿದೆ.

ಸಹಸ್ರ ಪೂರ್ಣ ಚಂದ್ರ ದರ್ಶನ ಹಾಗೂ ಕನಕಾಭಿಷೇಕ ಧಾರ್ಮಿಕ ಕಾರ್ಯಕ್ರಮದಲ್ಲಿ ಗಿಡಗಳ ವಿತರಣೆ

Posted On: 18-01-2021 06:32PM

ಪಡುಬಿದ್ರಿ : ಇಲ್ಲಿಯ ಗಂಗೂ ಹೊಸಮನೆಯ ಪಿ.ಎಚ್.ಪಾರ್ಥಸಾರಥಿ - ಶ್ರೀಮತಿ ಶಾಂತಾ ಪಾರ್ಥಸಾರಥಿ ಅವರು ತಮ್ಮ 'ಸಹಸ್ರ ಪೂರ್ಣ ಚಂದ್ರ ದರ್ಶನ ಹಾಗೂ ಕನಕಾಭಿಷೇಕ' ಧಾರ್ಮಿಕ ಕಾರ್ಯಕ್ರಮದಲ್ಲಿ ಮುನ್ನೂರು ವಿವಿಧ ಜಾತಿಯ ಗಿಡಗಳನ್ನು ವಿತರಿಸಿ ತಮ್ಮ ಪರಿಸರ ಪ್ರೀತಿಯನ್ನು ಮೆರೆದರು.

ಮಟ್ಟು ಗುಳ್ಳ ಬೆಳೆಗಾರರ ಸಂಘದ ಅಧ್ಯಕ್ಷರಾಗಿ ಸುನೀಲ್ ಡಿ. ಬಂಗೇರ

Posted On: 18-01-2021 06:22PM

ಮಟ್ಟು ಗುಳ್ಳ ಬೆಳೆಗಾರರ ಸಂಘದ ಅಧ್ಯಕ್ಷರಾಗಿ ಸುನೀಲ್ ಡಿ. ಬಂಗೇರ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಮೋಹನ್ ರಾವ್, ಕಾರ್ಯದರ್ಶಿ ರೋಷನ್ ಮಟ್ಟು, ಜೊತೆ ಕಾರ್ಯದರ್ಶಿ ಜಗದೀಶ್ ಬಿ. ಪೂಜಾರಿ, ಖಜಾಂಚಿಯಾಗಿ ಎಮ್. ಲಕ್ಷ್ಮಣ ರಾವ್, ಸದಸ್ಯರಾಗಿ ಐಲಿನ್ ಪ್ರಭಾವತಿ, ಮಹೇಶ್ ಪೂಜಾರಿ, ಶಶಿಧರ್ ಡಿ. ಕೋಟ್ಯಾನ್, ಪ್ರಶಾಂತ್ ಕುಮಾರ್, ಸದಾನಂದ ಸಾಲಿಯಾನ್, ಅವಿನಾಶ್ ಮಟ್ಟು, ಅಶೋಕ್ ‌ಡಿ. ಕೋಟ್ಯಾನ್, ಸದಾನಂದ ಡಿ. ಸುವರ್ಣ, ಉಮೇಶ್, ವಿಠ್ಠಲ ಪೂಜಾರಿ ಆಯ್ಕೆಯಾಗಿರುತ್ತಾರೆ.

ಹೆಜಮಾಡಿ ಬಂದರಿಗೆ 19ರಂದು ಮುಖ್ಯಮಂತ್ರಿಯಿಂದ ಶಿಲಾನ್ಯಾಸ

Posted On: 17-01-2021 01:24PM

ಮೀನುಗಾರರ ಸುದೀರ್ಘ ಹೋರಾಟದ ಫಲವಾಗಿ ಕಾಪು ತಾಲೂಕಿನ ಹೆಜಮಾಡಿ ಕೋಡಿಯಲ್ಲಿ ₹ 180.8 ಕೋಟಿಯ ವಿವಿಧ ಸವಲತ್ತುಗಳ ಕಾರ್ಯಯೋಜನೆಯ ಮೀನುಗಾರಿಕಾ ಬಂದರು ಕಾಮಗಾರಿಗೆ ಇದೇ ಬರುವ 19ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶಿಲಾನ್ಯಾಸ ಮಾಡಲಿದ್ದಾರೆ.

ಪಡುಬಿದ್ರಿ : ಜನವರಿ 19ರಿಂದ ಖಡ್ಗೇಶ್ವರಿ ಬ್ರಹ್ಮಸ್ಥಾನದಲ್ಲಿ ಢಕ್ಕೆಬಲಿ ಸೇವೆ ಆರಂಭ

Posted On: 17-01-2021 01:15PM

ಇತಿಹಾಸ ಪ್ರಸಿದ್ಧ ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನದಲ್ಲಿ ದ್ವೈವಾರ್ಷಿಕವಾಗಿ ನಡೆಯುವ ಢಕ್ಕೆಬಲಿ ಸೇವೆಯು ಇದೇ ಬರುವ ಜನವರಿ 19 ಮಂಗಳವಾರದಿಂದ ಆರಂಭವಾಗಿ ಮಾರ್ಚ್ 6 ನೇ ತಾರೀಖಿಗೆ ಹಗಲು ತಂಬಿಲ ಸೇವೆ ನೀಡಿದ ಭಕ್ತಾದಿಗಳ ಸೇವೆಯೊಂದಿಗೆ ಮಂಡಲ ವಿಸರ್ಜನೆ ನಡೆಯಲಿದೆ.

ಅದಮಾರು ರೈಲ್ವೆ ಹಳಿಯಲ್ಲಿ ವ್ಯಕ್ತಿಯೋರ್ವನ ಶವ ಪತ್ತೆ

Posted On: 17-01-2021 12:24PM

ಪಡುಬಿದ್ರಿ ಠಾಣಾ ವ್ಯಾಪ್ತಿಯ ಅದಮಾರು ಕುಂಜೂರು ರೈಲ್ವೆ ಹಳಿಯ ಬಳಿ ವ್ಯಕ್ತಿಯೋರ್ವನ ಮೃತ ದೇಹ ಪತ್ತೆಯಾಗಿದೆ.

ಯಕ್ಷರಂಗದಲ್ಲಿ ಅರಳಬೇಕಾದ ಪ್ರತಿಭೆಗೆ ಕಾಡುತ್ತಿದೆ ಅನಾರೋಗ್ಯ ಸಮಸ್ಯೆ - ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿದೆ ಈ ಕುಟುಂಬ

Posted On: 16-01-2021 07:23PM

ಮಂಗಳೂರು : ಶೈಕ್ಷಣಿಕ ಮತ್ತು ಯಕ್ಷಗಾನ ರಂಗದಲ್ಲಿ ಬೆಳೆಯುತ್ತಾ ಬರುತ್ತಿರುವ ಪ್ರತಿಭಾವಂತ ಪಿಯುಸಿ ವಿದ್ಯಾರ್ಥಿ ಕೇರಳ ಮೂಲದ ಜಿತೇಶ್ ಕುಮಾರ್ ರೈ ಮೂತ್ರ ಪಿಂಡಗಳ ಸಮರ್ಪಕ ಬೆಳವಣಿಗೆಯಿಲ್ಲದೇ ಆಪತ್ತಿಗೆ ಸಿಲುಕಿದ್ದಾರೆ. ತನ್ನ ಗಾಂಭೀರ್ಯದ ವೇಷಗಳಿಂದ ರಂಗದಲ್ಲಿ ಇತರರನ್ನು ರಂಜಿಸುತ್ತಿದ್ದ ಬಾಲಕ ಈಗ ತನ್ನ ಜೀವಕ್ಕಾರು ಆಸರೆ ಎಂಬ ಆತಂಕಕ್ಕೆ ಸಿಲುಕಿ, ಆಸ್ಪತ್ರೆಯಲ್ಲಿ ಮಲಗಿದ್ದು, ಮಗನನ್ನು ಹಠಾತ್ ಆಗಿ ಕಾಡಿದ ಅನಾರೋಗ್ಯದ ಚಿಕಿತ್ಸೆಗಾಗಿ ಹಣ ಹೊಂದಿಸಿಕೊಳ್ಳಲು ಆತನ ಮನೆಯವರು ಪರದಾಡುವಂತಾಗಿದೆ.

ಅಮ್ಮ ಇರೆನ ಜೋಕುಲೆಂಕುಲು ಭಜನೆ ಮಲ್ಪುವ ತುಳು ಭಕ್ತಿ ಗೀತೆ ವಿಜಯ್ ಶೆಟ್ಟಿ ಮೂಡುಬೆಳ್ಳೆ ಕ್ರಿಯೇಷನ್ಸ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ

Posted On: 16-01-2021 05:22PM

ಭಾವಗೀತೆ, ಭಕ್ತಿಗೀತೆ, ಚಿತ್ರಗೀತೆಗೆ, ಭಾವತುಂಬಿ ಸಮರ್ಪಣಾ ಭಾವದಿಂದ ಹಾಡುವ ಹಾಡುಗಾರ ವಿಜಯ್ ಶೆಟ್ಟಿ ಮೂಡುಬೆಳ್ಳೆ. ಇವರ ಮಧುರ ಕಂಠಕ್ಕೆ ಮಾರು ಹೋಗದವರೇ ಇಲ್ಲ.

ಉಡುಪಿ : ಸ್ವಾಮಿ ವಿವೇಕಾನಂದ ಜಯಂತಿ ಮತ್ತು ಯುವ ದಿನ ಕಾರ್ಯಕ್ರಮ

Posted On: 16-01-2021 05:04PM

ಉಡುಪಿ : ಸ್ವಾಮಿ ವಿವೇಕಾನಂದರ ಪ್ರಪಂಚಕ್ಕೆ ನೀಡಿದ ಜೀವನ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಸಮಾಜದಲ್ಲಿ ಹೊಸ ಪರಿವತ೯ನೆ ಸಾಧ್ಯ ಎಂದು ಶಿವಾನಿ ಡಯಾಗ್ನಿಸ್ಟಿಕ್ ಮತ್ತು ರಿಸಚ್೯ ಸೆಂಟರ್ ಮುಖ್ಯಸ್ಥ ಅಭಾವಿಪ ಹಿರಿಯ ಕಾಯ೯ಕತ೯ ಡಾII ಶಿವಾನಂದ ನಾಯಕ್ ಹೇಳಿದರು.