Updated News From Kaup

ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರ : ದಿವ್ಯ ಗ್ರೂಪ್ ಬೆಂಗಳೂರು ವತಿಯಿಂದ ವಿಟಮಿನ್ ಸಿ ಮಾತ್ರೆ ವಿತರಣೆ

Thumbnail
Posted On: 15 May 2021, 02:32 PM

ಕಾಪು : ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅವಶ್ಯಕತೆಯಿದ್ದ ವಿಟಮಿನ್ ಸಿ ಮಾತ್ರೆಯನ್ನು ದಿವ್ಯ ಗ್ರೂಪ್ ಬೆಂಗಳೂರಿನ ಸುಂದರ್ ಕೋಟ್ಯಾನ್ ಸಹಕಾರದೊಂದಿಗೆ, ಕಾಪು ಪುರಸಭೆ ಅಧ್ಯಕ್ಷರಾದ ಅನಿಲ್ ಕುಮಾರ್ ನೇತೃತ್ವದಲ್ಲಿ ವಿತರಿಸಲಾಯಿತು. ಈ ಸಂದರ್ಭ ದಿವ್ಯ ಗ್ರೂಪ್ ನ ಸದಾನಂದ ಪೂಜಾರಿ, ಸುಧಾಕರ ಪೂಜಾರಿ, ಉಷಾ ಪೂಜಾರಿ, ಕಾಪು ಪುರಸಭೆ ಅಧ್ಯಕ್ಷ ಅನಿಲ್ ಕುಮಾರ್, ಅನಿಲ್ ಶೆಟ್ಟಿ ಬಲ್ಲಾಳ್, ಪ್ರವೀಣ್ ಪೂಜಾರಿ, ಕಿರಣ್ ಪೂಜಾರಿ, ಭಾಸ್ಕರ್, ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಸುಬ್ರಾಯ ಕಾಮತ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಹಿರಿಯರಿಗೆ ಆಸರೆಯಾದ ಭಗವತಿ ಗ್ರೂಪ್ ಪಡುಬಿದ್ರಿ

Thumbnail
Posted On: 12 May 2021, 09:04 PM

ಪಡುಬಿದ್ರಿ : ಕೋವಿಡ್ - 19 ಎರಡನೇ ಆವೃತ್ತಿ ದುಷ್ಪರಿಣಾಮವನ್ನು ತಡೆಗಟ್ಟುವ ನಿಟ್ಟಿನಲ್ಲಿ ವಿಧಿಸಲ್ಪಟ್ಟ ಲಾಕ್ ಡೌನ್ ನಿಂದಾಗಿ ಜನಸಮಾನ್ಯರ ಪರಿಸ್ಥಿತಿ ಕಂಗಲಾಗಿದ್ದು, ಈ ನಿಟ್ಟಿನಲ್ಲಿ ಒಂದಷ್ಟು ಸೇವಾಯೋಜನೆಗಳನ್ನು ಕೈಗೆತ್ತುವ ಜವಾಬ್ದಾರಿ ಹೊತ್ತ ಪಡುಬಿದ್ರಿ ಭಗವತಿ ಗ್ರೂಪ್ ನೇತೃತ್ವದಲ್ಲಿ ಸಹೃದಯಿ ದಾನಿಗಳಾದ ನಮ್ಮ ಶ್ರೀ ಅನುರಾಧ ಉಚ್ಚಿಲ ಮತ್ತು ಶ್ರೀ ಮಂಜುನಾಥ ಶೆಣೈ ಇವರ ಸಹಕಾರದಿಂದ ಎಲ್ಲೂರು ನಿವಾಸಿ ಹಿರಿಯರಾದ ಶ್ರೀ ನಾರಾಯಣ ದೇವಾಡಿಗ ಮತ್ತು ಶ್ರೀಮತಿ ಬೇಬಿ ದೇವಾಡಿಗ ದಂಪತಿಗಳಿಗೆ ಮನೆಗೆ 4 ತಿಂಗಳ ಅವಧಿಗೆ ಅವಶ್ಯಕವಾದ ಆಹಾರ ಸಮಾಗ್ರಿಗಳನ್ನು ನೀಡಿ ಅವರಿಗೆ ಧೈರ್ಯ ತುಂಬಲಾಯಿತು. ಈ ಸಂದರ್ಭದಲ್ಲಿ ಭಗವತಿ ಗ್ರೂಪ್ ಸದಸ್ಯರಾದ ಅನುರಾಧ ಉಚ್ಚಿಲ, ವಿಮಲ ದೇವಾಡಿಗ, ಸಂದೇಶ್ ಶೆಟ್ಟಿ ಪಾದೆಬೆಟ್ಟು, ದೀಕ್ಷಿತ್ ಶೆಟ್ಟಿ ಉಲ್ಲೂರ್, ದಿವೀತ್ ಶೆಟ್ಟಿ ಪಾದೆಬೆಟ್ಟು, ರವಿ ಆಚಾರ್ಯ ಪಾದೆಬೆಟ್ಟು, ಸುಕೇನ್ ಪೂಜಾರಿ ಪಾದೆಬೆಟ್ಟು, ಯುವರಾಜ್ ಕುಲಾಲ್ ಉಪಸ್ಥಿತರಿದ್ದರು.

ಮೂಳೂರಿನಲ್ಲಿ ಅಕ್ರಮ‌ ಕಸಾಯಿಖಾನೆಗೆ ದಾಳಿ, ಆರೋಪಿಗಳ ಸೆರೆ

Thumbnail
Posted On: 12 May 2021, 09:16 AM

ಕಾಪು : ಮೂಳೂರು ಸುನ್ನಿ ಸೆಂಟರ್ ಸಮೀಪದ ಅಕ್ರಮ‌‌ ಕಸಾಯಿಖಾನೆಗೆ ದಾಳಿ ನಡೆಸಿದ ಪೊಲೀಸರು ದನ ಕರುಗಳನ್ನು ಕದ್ದು ತಂದು ಮಾಂಸ ಮಾಡುತ್ತಿದ್ದ ಆರು ಮಂದಿ ಆರೋಪಿಗಳನ್ನು ಬಂಧಿಸಿ, ನಾಲ್ಕು ಕರುಗಳನ್ನು ರಕ್ಷಿಸಿದ್ದಾರೆ. ಮುಳೂರು ನಿವಾಸಿ ಮನ್ಸೂರ್ ಅಹಮ್ಮದ್ ಯಾನೆ ಅಹಮ್ಮದ್ ಮನ್ಸೂರ್ ( 32) , ಮಹಮ್ಮದ್ ಅಜರುದ್ಧೀನ್ ( 26), ಮಹಮ್ಮದ್ ಹನೀಫ್ ಯಾನೆ ಆಸ್ಪಕ್ (28 ), ಮಹಮ್ಮದ್ ಇಸ್ಮಾಯಿಲ್ ( 22), ಚಂದ್ರನಗರ ನಿವಾಸಿ ಉಮ್ಮರಬ್ಬ ( 60 ), ಚಿಕ್ಕಮಗಳೂರು ಕೊಪ್ಪ ನಿವಾಸಿ ನವಾಜ್ (25 ) ಎಂಬವರನ್ನು ಬಂಧಿಸಿದ್ದು, ಇವರ ಜೊತೆಗಿದ್ದ ಇಸ್ಮಾಯಿಲ್ , ರಫೀಕ್, ಅಬ್ಬು ಮಹಮ್ಮದ್ ಎಂಬವರು ಪರಾರಿಯಾಗಿದ್ದಾರೆ. ಬಂಧಿತರಿಂದ ನಾಲ್ಕು ಕರುಗಳು ಸೇರಿದಂತೆ 30 ಕೆ.ಜಿ. ಮಾಂಸ, ಕಸಾಯಿಖಾನೆಯಲ್ಲಿ ಉಪಯೋಗಿಸುತ್ತಿದ್ದ ಸಲಕರಣೆಗಳು ಹಾಗೂ ಪಿಕ್ ಅಪ್ ವಾಹನ ಮತ್ತು ನಾಲ್ಕು ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾಪು ಶಾಸಕರ ನೇತೃತ್ವದಲ್ಲಿ ಕ್ಷೇತ್ರದ ಪೊಲೀಸ್ ಅಧಿಕಾರಿಗಳ ಜೊತೆ ಸಭೆ

Thumbnail
Posted On: 11 May 2021, 08:17 PM

ಕಾಪು : ಶಾಸಕ ಲಾಲಾಜಿ ಆರ್ ಮೆಂಡನ್ ಇಂದು ಕಾಪು ಶಾಸಕರ ಕಚೇರಿಯಲ್ಲಿ ಕಾಪು ಕ್ಷೇತ್ರದ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ರಾಜ್ಯದಲ್ಲಿ ಕೋವಿಡ್ 19 ನಿಮ್ಮಿತ್ತ ಲಾಕ್ ಡೌನ್ ಜಾರಿಯಲಿದ್ದು ಈ ಕುರಿತು ಬೆಳಿಗ್ಗೆ 6 ರಿಂದ 10 ಗಂಟೆವರೆಗೆ ಅಗತ್ಯ ವಸ್ತು ಖರೀದಿಸುವವರಿಗೆ, ಹಾಲು ಹಾಕುವವರಿಗೆ, ಕೃಷಿ ಉತ್ಪನ್ನಗಳ ಮಾರಾಟಗಾರರಿಗೆ, ಮೀನು ಮಾರಾಟಕ್ಕೆ, ಮಲ್ಲಿಗೆ ಮಾರಾಟಕ್ಕೆ, ಪಡಿತರ ಸಾಮಾನುಗಳನ್ನು ತೆಗೆದುಕೊಂಡು ಹೋಗುವವರಿಗೆ 10 ಒಳಗೆ ಕಾರ್ಯನಿರ್ವಹಿಸುವಂತೆ ಸೂಚಿಸಬೇಕಾಗಿ ಹಾಗೂ ಅವರುಗಳಿಗೆ ಯಾವುದೇ ರೀತಿಯ ತೊಂದರೆ ಮಾಡದಂತೆ ಜನ ಗುಂಪುಗೂಡದಂತೆ ನೋಡಿಕೊಳ್ಳುವಂತೆ ಮಾನ್ಯ ಶಾಸಕರು ಸೂಚಿಸಿದರು. ಕಾಪು ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಕಿಂತರ ಸಂಖ್ಯೆ ಹೆಚ್ಚುತಿದ್ದು ಮರಣ ಪ್ರಮಾಣವು ಹೆಚ್ಚುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಮಾನ್ಯ ಶಾಸಕರು ಅನಗತ್ಯವಾಗಿ ಓಡಾಡುವರಿಗೆ ಹಾಗೂ 10 ಗಂಟೆನಂತರ ಅನಿವಾರ್ಯ ಕಾರಣಗಳನ್ನು ಬಿಟ್ಟು ರೋಡಿಗೆ ಬರುವವರಿಗೆ ಕ್ರಮ ಕೈಗೊಳ್ಳಬೇಕಾಗಿ ಸೂಚಿಸಿದರು. ಕಾಪು ಜನತೆಯೂ ಆಡಳಿತ ವರ್ಗದವರೊಂದಿಗೆ ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಸಹಕರಿಸಬೇಕೆಂದು ಮನವಿ ಮಾಡಿದರು. ಮದುವೆಗಳಿಗೆ 50 ಜನ ಮೀರದಂತೆ ರಾಜ್ಯ ಸರಕಾರದ ಸೂಚನೆಯಂತೆ ಷರತ್ತಿನ ಮೇಲೆ ಅನುಮತಿ ನೀಡುವಂತೆ ಮಾನ್ಯ ಶಾಸಕರು ಸೂಚಿಸಿದರು. ಈ ಸಂದರ್ಭದಲ್ಲಿ ಕಾಪು ವೃತ ನಿರೀಕ್ಷಕರು ಪ್ರಕಾಶ್, ಕಾಪು ಎಸ್ಐ ರಾಘವೇಂದ್ರ, ಶಿರ್ವ ಎಸ್ಐ ಶ್ರೀಶೈಲ ಮುರುಗೋಡ್, ಶಿರ್ವ ಕ್ರೈಂ ಎಸ್ಐ ವೇದಾವತಿ, ಪಡುಬಿದ್ರಿ ಎಸ್ ಐ ದಿಲೀಪ್ ಕುಮಾರ್, ಪಡುಬಿದ್ರಿ ಕ್ರೈಂ ಎಸ್. ಐ ಜಯ, ಹಿರಿಯಡ್ಕ ಎಸ್ಐ ಶ್ರೀಮತಿ ಪುಷ್ಪ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಬಡಾ ಎರ್ಮಾಳು ನಾತು ಪೂಜಾರಿ ನಿಧನ

Thumbnail
Posted On: 10 May 2021, 07:04 PM

ಕಾಪು : ಬಡಾ ಗ್ರಾಮ ಪಂಚಾಯತ್ ಮಾಜಿ ಸದಸ್ಯರು, ಕುದ್ರೊಟ್ಟು ಬ್ರಹ್ಮಬೈದರ್ಕಳ ಗರಡಿಯ ಮಾಜಿ ಅಧ್ಯಕ್ಷರು ಹಾಗೂ ಬಡಾ ಎರ್ಮಾಳು ನಡಿಕರೆಯ ಗುರಿಕಾರರಾಗಿ ಸಮಾಜಮುಖಿ ಕಾರ್ಯಗಳಲ್ಲಿ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿ ಇದ್ದುಕೊಂಡು ಜೀವನದ ಸುದೀರ್ಘ ಕಾಲ ಮೂರ್ತೆದಾರಿಕೆ ಮಾಡಿಕೊಂಡು ಜನಾನುರಾಗಿಯಾಗಿದ್ದ ಬಿಲ್ಲವ ಮುಖಂಡ ನಾತುಪೂಜಾರಿ ಸ್ವಗೃಹದಲ್ಲಿ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.

ಕೊರೊನಾ ಸಮಯದಲ್ಲಿ ಊಟವ ನೀಡುವ ವೇದಶ್ರೀ ಕೋಟ್ಯಾನ್

Thumbnail
Posted On: 09 May 2021, 10:29 AM

ಕಾಪು : ಕೊರೋನಾದಿಂದ ಇಡೀ ದೇಶವೇ ಮತ್ತೆ ತತ್ತರಿಸಿ ಹೋಗಿದೆ. ಪರಿಸ್ಥಿತಿ ಮೊದಲಿನಂತೆ ಬರಲು ಎಲ್ಲೆಡೆ ಲಾಕ್ ಡೌನ್ ನಿಯಮ ಜಾರಿಯಲ್ಲಿದೆ. ಎಲ್ಲರು ಮನೆಯಲ್ಲೇ ಇದ್ದು ತಮ್ಮ ತಮ್ಮ ಆರೋಗ್ಯ ಕಾಪಾಡಬೇಕಾಗಿದೆ. ಇಂತಹ ಸಮಯದಲ್ಲಿ ಮಾನವ ಹಕ್ಕು ರಕ್ಷಣಾ ವೇದಿಕೆ ಇದರ (Dist. incharge Environment development) ಆಗಿರುವ ವೇದಶ್ರೀ ಕೋಟ್ಯಾನ್ ಇವರು ಇಂತಹ ಪರಿಸ್ಥಿತಿಯಲ್ಲೂ ಮಾನವೀಯತೆ ಮೆರೆದಿದ್ದಾರೆ. ಕೊರೋನಾ ದಲ್ಲಿ ನಾವೆಲ್ಲ ಮನೆಯಲ್ಲೇ ಇದ್ದು ಸುರಕ್ಷಿತವಾಗಿ ನಮ್ಮ ಆರೋಗ್ಯ ಕಾಪಾಡಿಕೊಳ್ಳುತ್ತೇವೆ. ಆದರೆ ಪ್ರಾಮಾಣಿಕವಾಗಿ ನಮ್ಮನ್ನು ಕಾಯುತ್ತ ದಿನ ನಿತ್ಯ ಸುಡು ಬಿಸಿಲಿಗೆ ಕೊರೋನಾದ ಮದ್ಯೆ ನಮ್ಮ ಜೀವವನ್ನ ಕಾಪಾಡೋ ಆರಕ್ಷಕ ಸಿಬ್ಬಂದಿ ವರ್ಗಕ್ಕೆ ಅದೆಷ್ಟೇ ಧನ್ಯವಾದ ತಿಳಿಸಿದರು ಅದು ಕೋಟಿ ಪದಗಳಿಗೆ ಸಿಗುವ ಪುಣ್ಯ. ಇದನ್ನ ಮನದಲ್ಲಿಟ್ಟುಕೊಂಡು ಅವರ ತಂಡ ಪೊಲೀಸ್ ವರ್ಗಕ್ಕೆ ಊಟವನ್ನ ನೀಡೋ ಮುಖೇನ ಮಾನವೀಯತೆ ಮೆರೆದರು ಹಾಗೂ ಮೂಕ ಪ್ರಾಣಿಗಳಾದ ಬೀದಿ ನಾಯಿಗಳಿಗೆ ಆಹಾರವನ್ನ ಹಾಕುವ ಮುಖೇನ ಅವುಗಳ ಹಸಿವನ್ನ ನಿಗಿಸೋ ಮಹಾನ್ ಕಾರ್ಯ ಮಾಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಆಹಾರಕ್ಕಾಗಿ ಪರದಾಡುವ ಬದಲು ತನ್ನಿಂದ ಆ ಮೂಕ ಪ್ರಾಣಿಗಳ ಹಸಿವು ನೀಗಲಿ ಎಂಬ ಅವರ ಆಲೋಚನೆ ಅವರಿಗಿದೆ. ಇವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಕಾಪು : ವಲಸೆ ಬಂದಿದ್ದ 20 ಜನರನ್ನು ಊರಿಗೆ ಕಳುಹಿಸಿಕೊಡುವ ಸಲುವಾಗಿ ಆಸೀಫ್ ಆಪತ್ಭಾಂದವರ ಕೆಲಸ ಶ್ಲಾಘನೀಯ - ಕಾಪು ಠಾಣಾಧಿಕಾರಿ ರಾಘವೇಂದ್ರ. ಸಿ

Thumbnail
Posted On: 08 May 2021, 02:23 PM

ಕಾಪು : ಮಹಾರಾಷ್ಟ್ರದಿಂದ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ವಠಾರಕ್ಕೆ ಕಳೆದ ಜನತಾ ಕರ್ಫ್ಯೂ ಸಂದರ್ಭದಲ್ಲಿ ವಲಸೆ ಬಂದಿದ್ದವರನ್ನು ಅವರ ಊರಿಗೆ ತಲುಪಿಸಲು ಮೈಮುನಾ ಪೌಂಡೇಶನ್ ರಿ. ಕಾರ್ನಾಡ್ ಮೂಲ್ಕಿ ಇದರ ಸಂಸ್ಥಾಪಕರಾದ ಆಸೀಫ್ ಅಪತ್ಭಾಂದವ ಅವರು ಫೇಸ್ಬುಕ್ ಲೈವ್ ಮುಖಾಂತರ ದಾನಿಗಳ ಸಹಕಾರದಲ್ಲಿ ಕೇವಲ 5 ನಿಮಿಷದಲ್ಲಿ 10,000 ಸಾವಿರ ರೂಪಾಯಿಯನ್ನು ಸಂಗ್ರಹಿಸಿ. ತನ್ನ ಆಂಬುಲೆನ್ಸ್ ಮೂಲಕ ಅವರನ್ನು ಕಾಪುವಿನಿಂದ ಉಡುಪಿ ರೈಲ್ವೆ ನಿಲ್ದಾಣಕ್ಕೆ ತಲುಪಿಸಿ, ಟಿಕೆಟ್ ವ್ಯವಸ್ಥೆ ಮಾಡಿದರು. ಕಳೆದ ಕೆಲವು ದಿನಗಳಿಂದ ಇವರಿಗೆ ಮದ್ಯಾಹ್ನದ ಊಟದ ವ್ಯವಸ್ಥೆಯನ್ನು ಕಾಪುವಿನ ನೀತಾ ಪ್ರಭುರವರು ಮಾಡುತ್ತಿದ್ದು, ಇಂದು ಕೂಡ ಇವರ ತಂಡ ಅನ್ನ, ಸಾರು ವಿತರಿಸಿದರು, ನಂತರ ಆಸೀಫ್ ಆಪತ್ಭಾಂದವ, ನೀತಾ ಪ್ರಭು, ಯಾದವ್ ಪೂಜಾರಿ ಕಾಪು, ಪ್ರಶಾಂತ್ ಪೂಜಾರಿ ಕಾಪು, ಶಾಹಿಲ್ ಶೈನ್ ಮೂಲ್ಕಿ, ಶಾದ್ ಮಾನಲ್, ಜೀವನ್ ಮಲ್ಲಾರ್ ಮಾಸ್ಕ್ ಹಾಗೂ ಸ್ಯಾನಿಟೈಸರ್ ಗಳನ್ನು ಕೂಡಾ ವಿತರಿಸಿದರು. ವಲಸೆ ಬಂದಿದ್ದವರನ್ನು ಊರಿಗೆ ತಲುಪಿಸುವ ಈ ಮಹತ್ಕಾರ್ಯಕ್ಕೆ ಕಾಪು ಪುರಸಭೆಯ ಅಧ್ಯಕ್ಷರಾದ ಅನಿಲ್ ಕುಮಾರ್ ₹1000, ಕಾಪು ಪೊಲೀಸ್ ಠಾಣಾಧಿಕಾರಿ ಎಸ್. ಐ ರಾಘವೇಂದ್ರ. ಸಿ ₹2000 ಹಾಗೂ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ರಮೇಶ್ ಹೆಗ್ಡೆ ಕಲ್ಯಾ ₹1000, ಹರೀಶ್ ಕಿನ್ನಿಗೋಳಿ ₹5000, ಗೋವರ್ಧನ್ ಸೇರಿಗಾರ್, ಅನಿತ್ ಶೆಟ್ಟಿ ಸಹಕರಿಸಿದರು.

ಇನ್ನಂಜೆ : ರಕ್ತದಾನ ಶಿಬಿರ

Thumbnail
Posted On: 07 May 2021, 10:08 AM

ಕಾಪು : ವಿಶ್ವ ಹಿಂದು ಪರಿಷದ್, ಬಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿ ಕಾಪು ತಾಲೂಕು ಮತ್ತು ರೆಡ್ ಕ್ರಾಸ್ ರಕ್ತನಿಧಿ ಕೇಂದ್ರ ಸಹಭಾಗಿತ್ವದಲ್ಲಿ ರಕ್ತದಾನ ಶಿಬಿರವು ಮೇ 9, ಭಾನುವಾರ ಇನ್ನಂಜೆಯ ದಾಸ ಭವನದಲ್ಲಿ ನಡೆಯಲಿದೆ. ಆಸಕ್ತರು ಸ್ವಯಂಪ್ರೇರಿತರಾಗಿ ಬಂದು ರಕ್ತದಾನ ಮಾಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪುರಸಭೆಯ ಸಮಗ್ರ ಘನತ್ಯಾಜ್ಯ ನಿರ್ವಹಣೆಯ ಕನಸನ್ನು ಪೂರ್ಣಗೊಳಿಸುವ ಆಶಯಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ - ಅನಿಲ್ ಕುಮಾರ್ ಕಾಪು

Thumbnail
Posted On: 06 May 2021, 10:29 PM

ಕಾಪು : ಕಾಪು ಪುರಸಭೆಯ ನೂತನ ಎಲ್ಲೂರು ಘನತ್ಯಾಜ್ಯ ಘಟಕದ ಪ್ರಗತಿ ಪರಿಶೀಲನೆ ನಡೆಸಲು ಕಾಪು ಪುರಸಭೆಯ ಅಧ್ಯಕ್ಷರಾದ ಅನಿಲ್ ಕುಮಾರ್ ಇವರು ಕಾಪು ಪುರಸಭೆಯ ಮುಖ್ಯಾಧಿಕಾರಿ ವೆಂಕಟೇಶ ನಾವಡ ಬಿ. ಹಾಗೂ ಸಿಬ್ಬಂದಿಗಳೊಂದಿಗೆ ಮೇ, 4ರಂದು ಭೇಟಿ ನೀಡಿರುತ್ತಾರೆ. ಘಟಕದ ಕಾಮಗಾರಿಗಳ ಮಾಹಿತಿಯನ್ನು ಪಡೆದು, ಘಟಕವು ಶೀಘ್ರವಾಗಿ ಕಾರ್ಯಾರಂಭ ಮಾಡುವ ಎಲ್ಲಾ ಸಾಧ್ಯತೆಗಳನ್ನು ಪರಿಶೀಲಿಸಿ ಕಾಪು ಪುರಸಭೆಯ ಸಮಗ್ರ ಘನತ್ಯಾಜ್ಯ ನಿರ್ವಹಣೆಯ ಕನಸನ್ನು ಪೂರ್ಣಗೊಳಿಸುವ ಆಶಯವನ್ನು ವ್ಯಕ್ತಪಡಿಸಿದರು. ಪ್ರಸ್ತುತ ಕಾಪು ಪುರಸಭೆಯಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯವನ್ನು ವಿಲೇವಾರಿ ಮಾಡಲು ಸೂಕ್ತ ಜಾಗದ ಕೊರತೆಯಿದ್ದು ಎಲ್ಲೂರು ಘಟಕದ ನಿರ್ಮಾಣದಿಂದ ಪ್ರತಿದಿನ ಸುಮಾರು 10 ಟನ್ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಪರಿಸರಕ್ಕೆ ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ನಿರ್ವಹಿಸಬಹುದಾಗಿದೆ. ಇದರಲ್ಲಿ ಕಾಪು ಪುರಸಭಾ ವ್ಯಾಪ್ತಿಯ ಸಾರ್ವಜನಿಕರ ಸಹಕಾರವು ಅತೀ ಮುಖ್ಯವಾಗಿದ್ದು, ಘನತ್ಯಾಜ್ಯವನ್ನು ಹಸಿ ಕಸ (ಕೊಳೆಯುವ ತ್ಯಾಜ್ಯ), ಒಣ ಕಸ (ಪ್ಲಾಸ್ಟಿಕ್, ಪೇಪರ್, ಲೋಹ, ಗ್ಲಾಸ್ ಇತ್ಯಾದಿ) ಹಾಗೂ ಸ್ಯಾನಿಟರಿ ತ್ಯಾಜ್ಯ (ಸ್ಯಾನಿಟರಿ ಪ್ಯಾಡ್, ಡೈಪರ್) ಗಳಾಗಿ ವಿಂಗಡಿಸಿ ಪುರಸಭೆಯ ವಾಹನಕ್ಕೆ ನೀಡಬೇಕೆಂದು ಈ ಸಂದರ್ಭ ಸಾರ್ವಜನಿಕರಿಗೆ ಕರೆ ನೀಡಿದರು.