Updated News From Kaup

ಬಂಟಕಲ್ಲು : ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದಿಂದ ಸಿಸಿ ಟಿವಿ ಕೊಡುಗೆ ಹಾಗೂ ಪೊಲೀಸ್ ಜನ ಸಂಪರ್ಕ ಸಭೆ

Posted On: 06-01-2021 09:14PM

ಬಂಟಕಲ್ಲು ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದವರು ಬಂಟಕಲ್ಲು ಆಸುಪಾಸು ನಡೆಯಬಹುದಾದ ಅಪರಾಧ ಕೃತ್ಯ, ಕಳ್ಳತನ , ದರೋಡೆಯಂತಹ ಅಪರಾಧಗಳ ಹಿನ್ನೆಲೆಯಲ್ಲಿ ಅದನ್ನು ತಡೆಗಟ್ಟುವ ಸಲುವಾಗಿ ಬಂಟಕಲ್ಲು ಪೇಟೆಯಲ್ಲಿ ಅಳವಡಿಸಿದ ಸಿ.ಸಿ ಕೆಮಾರ ವ್ಯವಸ್ಥೆಯನ್ನು ಶಿರ್ವ ಪೊಲೀಸ್ ಠಾಣಾಧಿಕಾರಿ ಶ್ರೀ ಶ್ರೀಶೈಲರವರು ಉದ್ಘಾಟಿಸಿದರು.

ದೇರಳಕಟ್ಟೆ ಸೇವಾಶ್ರಮದಲ್ಲಿ ವೃದ್ಧರೊಂದಿಗೆ ನಗು ನಲಿವು, ಆರೋಗ್ಯ ಮಾಹಿತಿ ಶಿಬಿರ

Posted On: 05-01-2021 07:20PM

ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋದನಾ ಸಂಸ್ಥೆ (ರಿ) ಬಾಳ್ತಿಲ ಮತ್ತು ಸೇವಾಶ್ರಮ ದೇರಳಕಟ್ಟೆ ಇದರ ಸಹಯೋಗದೊಂದಿಗೆ ಸೇವಾಶ್ರಮ ದೇರಳಕಟ್ಟೆ ಇಲ್ಲಿ ಉಚಿತ ರಕ್ತಪರೀಕ್ಷೆ , ಮಧುಮೇಹ ಪರೀಕ್ಷೆ ಹಾಗೂ ಆರೋಗ್ಯ ಮಾಹಿತಿ ಶಿಬಿರ ಹಾಗೂ ವೃದ್ಧರೊಂದಿಗೆ ನಗು ನಲಿವು ಕಾರ್ಯಕ್ರಮ ನಡೆಯಿತು.

ಶ್ರೀ ಕ್ಷೇತ್ರ ಮಾರಣಕಟ್ಟೆ : ಸರಳ ಮಕರ ಸಂಕ್ರಾಂತಿ ಉತ್ಸವ

Posted On: 05-01-2021 04:49PM

ಕುಂದಾಪುರ ತಾಲೂಕಿನ ಚಿತ್ತೂರು ಶ್ರೀ ಕ್ಷೇತ್ರ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಉತ್ಸವವು ಜನವರಿ 14ರಿಂದ 16ರವರೆಗೆ ಕೋವಿಡ್ ಹಿನ್ನೆಲೆಯಲ್ಲಿ ಸರಕಾರದ ಮಾರ್ಗಸೂಚಿಯಂತೆ ಸರಳವಾಗಿ ಆಚರಿಸಲಾಗುವುದು. ಸಾರ್ವಜನಿಕರಿಗೆ ಗೆಂಡ ಸೇವೆಗೆ ಅವಕಾಶವಿಲ್ಲ. ಉಳಿದಂತೆ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ಜರಗಲಿರುವುದು. ಮಹಾಮಂಗಳಾರತಿ ಜನವರಿ 14ರಂದು ಪೂರ್ವಾಹ್ನ 8:30 ಕ್ಕೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಪು : ಸಹಸ್ರ ಚಂಡಿಕಾಯಾಗ ಮಹೋತ್ಸವದ ಇಪ್ಪತ್ತನೇ ವರ್ಧಂತಿ ಉತ್ಸವ ಸಂಪನ್ನ

Posted On: 05-01-2021 04:27PM

ಕಾಪು ಶ್ರೀ ಹಳೇ ಮಾರಿಗುಡಿ ದೇವಳದಲ್ಲಿ ಇಂದು ದೇವಿಯ ಸನ್ನಿಧಾನದಲ್ಲಿ ಕಾಪುವಿನ ಇತಿಹಾಸದಲ್ಲೇ ಮೊದಲೆಂಬಂತೆ ಲಕ್ಷಾಂತರ ಭಕ್ತಾದಿಗಳ ಕೂಡುವಿಕೆಯಿಂದ ಒಂಬತ್ತು ದಿನಗಳ ಕಾಲ ಬಹು ವಿಜೃಂಭಣೆಯಿಂದ ಜರುಗಿದ ಸಹಸ್ರ ಚಂಡಿಕಾಯಾಗ ಮಹೋತ್ಸವದ ಇಪ್ಪತ್ತನೆಯ ವರ್ಧಂತಿ ಉತ್ಸವ ಜರಗಿತು.

ಇತಿಹಾಸ ಪ್ರಸಿದ್ಧ ಕಾಪು ಪಿಲಿಕೋಲಕ್ಕೆ ದಿನ ನಿಗದಿ

Posted On: 05-01-2021 02:36PM

ಬೈರುಗುತ್ತು, ದೊರೆಗಳ ಗುತ್ತು, ಪಿಲಿಚಂಡಿ ಮನೆ, ಸಾನದ ಮನೆ, ಗರಡಿ ಮನೆ ಇತ್ಯಾದಿ ಒಟ್ಟು 16 ಕಾಣಿಕೆಯ ಮನೆಗಳ ಸೇರುವಿಕೆಯಲ್ಲಿ ಇಂದು ಕಾಪು ಮಾರಿಗುಡಿಯಲ್ಲಿ ದೇವಿಯ ನುಡಿಯಂತೆ ಸರಕಾರದ ನಿಯಮಾವಳಿಗಳ ಪ್ರಕಾರ ಮೇ 18ರಿಂದ ಪ್ರಾರಂಭವಾಗಿ 22 ರಂದು ಇತಿಹಾಸ ಪ್ರಸಿದ್ಧ ಪಿಲಿ ಕೋಲ ನಡೆಸುವುದೆಂದು ದಿನ ನಿಗದಿಪಡಿಸಲಾಯಿತು. ಈ ಬಗ್ಗೆ ನಮ್ಮ ಕಾಪು ವೆಬ್ ಪೋರ್ಟಲ್ ಗೆ ತಿಳಿಸಿದ್ದಾರೆ.

ಬಂಟಕಲ್ : ಝಿಝೋ ಎಜುಕೇಷನ್ ಸೆಂಟರ್ ಉದ್ಘಾಟನೆ

Posted On: 04-01-2021 07:00PM

ಕಾಪು ತಾಲೂಕಿನ ಬಂಟಕಲ್ ಮುಖ್ಯರಸ್ತೆಯ ಮೈತ್ರಿ 3 ಕಾಂಪ್ಲೆಕ್ಸಿನ ಝಿಝೋ ಎಜುಕೇಷನ್ ಸಂಸ್ಥೆಯನ್ನು ಝಿಝೋ ಸಿಸ್ಟರ್ಸ್ ಝಿಯಾ ಮತ್ತು ಝೋ ಉದ್ಘಾಟಿಸಿದರು.

ಗರಡಿ ಗೈಸ್ ವಾಟ್ಸ್ಯಾಪ್ ಗ್ರೂಪ್ : ವಾರ್ಷಿಕ ಸಮ್ಮಿಲನ ಮಿನದನ

Posted On: 04-01-2021 06:30PM

ಗರಡಿಯ ಧಾರ್ಮಿಕತೆಯಲ್ಲಿ ಹಿರಿಯರು ಕಿರಿಯರನ್ನು ಜೊತೆಗೂಡಿಸಿಕೊಂಡು ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವುದು ಅತ್ಯಗತ್ಯ ಎಂದು ಓಟ್ಲ ಶ್ರೀ ಬ್ರಹ್ಮಬೈದರ್ಕಳ ಗರಡಿಯ ಧರ್ಮದರ್ಶಿ ಜನಾರ್ದನ ಬಂಗೇರ ಹೇಳಿದರು. ಪಾಂಗಾಳ ಗುಡ್ಡೆ ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಗರಡಿ ಗೈಸ್ ವಾಟ್ಸ್ಯಾಪ್ ಗ್ರೂಪ್ ಇದರ ನಾಲ್ಕನೇ ವರ್ಷದ ವಾರ್ಷಿಕ ಸಮ್ಮಿಲನ ಮಿನದನ 2020- 21 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಶಂಕರಪುರದಲ್ಲಿ ಆರಂಭವಾಗಲಿದೆ ಫಿಸಿಕ್ಸ್ ಕೋಚಿಂಗ್ ಕ್ಲಾಸಸ್

Posted On: 03-01-2021 03:32PM

2010ರಿಂದ ಉತ್ತಮ ಫಲಿತಾಂಶ ನೀಡಿರುವ ಅನುಭವದೊಂದಿಗೆ ಇದೀಗ ಉಡುಪಿ ಜಿಲ್ಲೆಯ ಶಂಕರಪುರದಲ್ಲಿ ಫಿಸಿಕ್ಸ್ ಕೋಚಿಂಗ್ ಕ್ಲಾಸಸ್ ಕರ್ನಾಟಕ ಬೋರ್ಡ್ ಮತ್ತು ಸಿಬಿಎಸ್ಇಯ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಡಿಜಿಟಲ್ ಕ್ಲಾಸಸ್ ಮೂಲಕ ಆನ್ಲೈನ್ ಮತ್ತು ನೇರ ತರಗತಿಗಳ ಮೂಲಕ ಕೋಚಿಂಗ್ ನೀಡಲಿದ್ದಾರೆ.

ಪುತ್ತಿಗೆ ಮೂಲ ಮಠದ ಸ್ವರ್ಣ ನದಿ ತೀರದಲ್ಲಿ ಸ್ವಣಾ೯ರತಿ

Posted On: 03-01-2021 02:28PM

ಸ್ವಣಾ೯ರಾಧನಾ ವತಿಯಿಂದ ಪುತ್ತಿಗೆ ಮೂಲ ಮಠದ ಸ್ವಣ೯ ನದಿಯ ತೀರದಲ್ಲಿ ಸ್ವಣಾ೯ರತಿ ಕಾಯ೯ಕ್ರಮ ಜ.1 ರಂದು ಶುಕ್ರವಾರ ನಡೆಯಿತು.

ಕೋಟಿಚೆನ್ನಯರ ಜೀವನಗಾಥೆಯ ಪ್ರಬಂಧ ಸ್ಪರ್ಧೆ

Posted On: 03-01-2021 02:22PM

ಶ್ರೀ ಬ್ರಹ್ಮಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ (ರಿ.) ಬೈದಶ್ರೀ ಆದಿಉಡುಪಿ, ಉಡುಪಿ ಸಂಸ್ಥೆಯಿಂದ 10 ವರ್ಷ ಮೇಲ್ಪಟ್ಟು 20 ವರ್ಷದೊಳಗಿನ ವಿದ್ಯಾರ್ಥಿಗಳಿಗಾಗಿ ಕೋಟಿಚೆನ್ನಯರ ಜೀವನಗಾಥೆಯ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿರುತ್ತಾರೆ.