Updated News From Kaup

9 ಗಂಟೆಯಲ್ಲಿ ಸಂಪೂರ್ಣ ಕುರಾನ್ ಓದಿದ ಮುಹಮ್ಮದ್ ಮುಝಮ್ಮಿಲ್

Posted On: 29-12-2020 12:10PM

ಕಾಪು : ಕುರಾನ್ ಕಂಠಪಾಠ ಮಾಡಿದ 15ವರ್ಷದ ಬಾಲಕ ಮುಹಮ್ಮದ್ ಮುಝಮ್ಮಿಲ್ ಪವಿತ್ರ ಕುರಾನಿನ ಮೂವತ್ತು ಕಾಂಡವನ್ನು ಕೇವಲ 9 ಗಂಟೆಯಲ್ಲಿ ತನ್ನ ಉಸ್ತಾದರ ಮುಂದೆ ಓದಿ ಪೂರ್ತಿಗೊಳಿಸಿದ್ದಾರೆ. ಮೂಳೂರಿನ ಅಲ್ಇಹ್ಸಾನ್ ಹಿಫ್ಲ್ ವಿಭಾಗದ ವಿದ್ಯಾರ್ಥಿಯಾಗಿರುವ ಮುಝಮ್ಮಿಲ್, ಕೇವಲ ಒಂಬತೇ ತಿಂಗಳಲ್ಲಿ ಕುರಾನ್ (ಮೂವತ್ತು ಕಾಂಡವನ್ನು) ಸಂಪೂರ್ಣ ಕಂಠಪಾಠ ಮಾಡಿದ್ದನು. ಇತ್ತೀಚೆಗೆ ಮೂಳೂರು ಸುನ್ನೀ ಸೆಂಟರ್ನಲ್ಲಿ ನಡೆದ ವಿಶೇಷ ಮಜ್ಲಿಸ್ನಲ್ಲಿ ತನ್ನ ಗುರುಗಳಾದ ಹಾಫಿಲ್ ಹಾರಿಸ್ ಸಅದಿಯವರ ಮುಂದೆ 600 ಪುಟ, 114 ಅಧ್ಯಾಯಗಳ, 6666 ಶ್ಲೋಕಗಳಿರುವ ಕುರಾನ್ ತಪ್ಪು ಬಾರದಂತೆ ಓದಿ ಮುಗಿಸುವ ಮೂಲಕ ಗಮನಸೆಳೆದಿದ್ದಾನೆ.

ಹೋಂ ಡಾಕ್ಟರ್ ಫೌಂಡೇಶನ್ : ಸೇವಾ ಕಾರ್ಯದೊಂದಿಗೆ ಕ್ರಿಸ್ಮಸ್ ಆಚರಣೆ.

Posted On: 29-12-2020 11:01AM

ಉಡುಪಿ : ಹೋಂ ಡಾಕ್ಟರ್ ಫೌಂಡೇಶನ್ ವತಿಯಿಂದ ಸೇವಾ ಕಾಯ೯ಗಳ ಮೂಲಕ ಮಾದರಿ ಕ್ರಿಸ್ಮಸ್ ಆಚರಣೆ ಮಣಿಪಾಲದ ವಿಜಯನಗರ ಸ್ಲಂ ಬಡಾವಣೆಯಲ್ಲಿ ಡಿ.27ರಂದು ಆದಿತ್ಯವಾರ ನಡೆಯಿತು.

ಇನ್ನಂಜೆ : ಕುಟುಂಬವೊಂದಕ್ಕೆ ರೋಟರಿ, ಯುವಕ ಮಂಡಲ, ದಾನಿಗಳ ನೆರವಿನಿಂದ ಸ್ನಾನಗೃಹ, ಶೌಚಾಲಯ ನಿರ್ಮಾಣ

Posted On: 28-12-2020 12:31PM

ಇನ್ನಂಜೆ ಗ್ರಾಮದ ಕಲ್ಯಾಲುವಿನಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬವೊಂದಕ್ಕೆ ಸ್ನಾನಗೃಹ ಮತ್ತು ಶೌಚಾಲಯ ಅವಶ್ಯಕತೆಯಿದ್ದು ರೋಟರಿ ಸಮುದಾಯ ದಳ ಇನ್ನಂಜೆ ಇದರ ವತಿಯಿಂದ ದಾನಿಗಳ ಸಹಕಾರದಿಂದ ಶೌಚಾಲಯ ನಿರ್ಮಾಣವಾಗಿದ್ದು, ಅದನ್ನು ರೋಟರಿ ಸಮುದಾಯ ದಳ (Rcc) ಇನ್ನಂಜೆ ಮತ್ತು ಯುವಕ ಮಂಡಲ (ರಿ.) ಇನ್ನಂಜೆ ಹಾಗೂ ದಾನಿಗಳ ಸಹಕಾರದಿಂದ ಇಂದು ಬೆಳಿಗ್ಗೆ 8 ಗಂಟೆಗೆ ಉದ್ಘಾಟನೆ ಮಾಡುವುದರ ಮೂಲಕ ಮನೆಯವರಿಗೆ ಹಸ್ತಾಂತರಿಸಲಾಯಿತು.

ಎರ್ಮಾಳ್ : ಕಾರು ಡಿಕ್ಕಿಯಾಗಿ ಬಸ್ ಗಾಗಿ ಕಾಯುತ್ತಿದ್ದ ಇಬ್ಬರು ಮೃತ್ಯು

Posted On: 25-12-2020 08:40PM

ಕಾಪು: ರಸ್ತೆ ಪಕ್ಕದಲ್ಲಿ ನಿಂತಿದ್ದ ಇಬ್ಬರಿಗೆ ಕಾರು ಡಿಕ್ಕಿಯಾಗಿ ಇಬ್ಬರೂ ಸಾವನ್ನಪ್ಪಿದ ಘಟನೆ ಪಡುಬಿದ್ರಿ ಸಮೀಪದ ಎರ್ಮಾಳಿನಲ್ಲಿ ನಡೆದಿದೆ.

ಪಾಂಗಾಳ : ಮೂರು ಹೆಬ್ಬಾವುಗಳ ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ ಯುವಕರ ತಂಡ

Posted On: 25-12-2020 01:46PM

ಕಾಪು : ಪಾಂಗಾಳದ ಮನೆಯ ಕೊಟ್ಟಿಗೆಯಲ್ಲಿ ಅವಿತುಕೊಂಡಿದ್ದ ಮೂರು ಹೆಬ್ಬಾವುಗಳನ್ನು ಶಿವಾನಂದ ಪೂಜಾರಿ ಯಾನೆ ಮುನ್ನ‌ ಕಾಪು ನೇತೃತ್ವದ ತಂಡ ಗುರುವಾರ ಸಂಜೆ ಸೆರೆ ಹಿಡಿದು, ರಕ್ಷಿಸಿದೆ.

ಕಟಪಾಡಿಯ ಬಾಲಕನಿಂದ ಪೇಪರ್ ಕಪ್ ಕ್ರಿಸ್ಮಸ್ ನಕ್ಷತ್ರ

Posted On: 23-12-2020 10:26PM

ವಿಶೇಷ ಸಂದರ್ಭಗಳಲ್ಲಿ ಜಾದೂ, ಕ್ರಾಫ್ಟ್, ಚಿತ್ರಕಲೆಯ ಮೂಲಕ ಏನಾದರೊಂದು ರಚಿಸುವ ಹೊಯ್ಸಳ ಪ್ರಶಸ್ತಿ ವಿಜೇತ ಬಾಲ ಜಾದೂಗಾರ ಕಟಪಾಡಿಯ ಪ್ರಥಮ್ ಕಾಮತ್ ಈ ಬಾರಿಯ ಕ್ರಿಸ್ಮಸ್ ಗೆ 3 ಅಡಿ ಎತ್ತರದ ಸುಮಾರು 400 ಪೇಪರ್ ಕಪ್ ಬಳಸಿ ವಿಶೇಷವಾದ ಕ್ರಿಸ್ಮಸ್ ನಕ್ಷತ್ರವೊಂದನ್ನು ತಯಾರಿಸಿದ್ದಾರೆ.

ಸಮಾಜಕ್ಕೆ ಮಾದರಿಯಾಗಿರುವ ಮಾಧವರಿಗೆ ಗೌರವ

Posted On: 23-12-2020 10:20PM

ಉಡುಪಿ : ಪೋಲಿಯೋ ಪಿಡಿತರಾಗಿ ಎರಡೂ ಕಾಲಿನ ಸ್ವಾಧೀನ ಕಳೆದುಕೊಂಡರೂ ಎದೆಗುಂದದೆ ಕಳೆದ 34 ವಷ೯ಗಳಿಂದ ಕೊರಂಗ್ರಪಾಡಿಯಲ್ಲಿ ಸೈಕಲ್ ರಿಪೇರಿ ಅಂಗಡಿ ನಡೆಸಿಕೊಂಡು ಮಾದರಿಯಾಗಿ ಜೀವನ ಸಾಗಿಸುತ್ತಿರುವ ಮಾಧವ ಕಾಂಚನ್ ರವರಿಗೆ ಸಕ್ಷಮ ಉಡುಪಿ ವತಿಯಿಂದ ವಿಶ್ವ ವಿಶೇಷ ಚೇತನರ ದಿನದ ಗೌರವ ಸಲ್ಲಿಸಲಾಯಿತು.

ಕಂದನ ಸಹಾಯಕ್ಕಾಗಿ ವೇಷಧರಿಸಿದ ಮಹಾಗಣಪತಿ ಸೇವಾ ಟ್ರಸ್ಟ್ ಸದಸ್ಯರು

Posted On: 22-12-2020 02:43PM

ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿರುವ ಅಡ್ಯಾರ್ ಪದವಿನ ಸುರೇಶ್ ಹಾಗೂ ಅಂಬಿಕಾ ದಂಪತಿಯ 4 ವರ್ಷದ ಪುಟ್ಟ ಕಂದ ದರ್ಶನ್ ನ ಚಿಕಿತ್ಸೆಗೆ ಸರಿಸುಮಾರು ಹದಿನೈದು ಲಕ್ಷ ರೂಪಾಯಿಯ ಅಗತ್ಯವಿದ್ದು ದಂಪತಿಯ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿರುವುದು.

ಕೆ.ಎಲ್.ಕುಂಡಂತಾಯರ ಯಕ್ಷಗಾನದ ಅಂತರಂಗ - ಬಹಿರಂಗ ಪುಸ್ತಕ ಬಿಡುಗಡೆ

Posted On: 21-12-2020 12:11PM

ಉಚ್ಚಿಲ : ಯಕ್ಷಗಾನ ಗುರು ,ನಿವೃತ್ತ ಶಿಕ್ಷಕ ಎರ್ಮಾಳು ವಾಸುದೇವ ರಾಯರು ಉಚ್ಚಿಲದ ಹೋಟೆಲ್ ರಾಧಾದ ರಾಧಾ ಸಭಾಭವನದಲ್ಲಿ ಕೆ.ಎಲ್. ಕುಂಡಂತಾಯರ ಯಕ್ಷಗಾನದ ಅಂತರಂಗ - ಬಹಿರಂಗ ಪುಸ್ತಕವನ್ನು ಬಿಡುಗಡೆ ಗೊಳಿಸಿ ಶುಭಹಾರೈಸಿದರು .ನಿರಂತರ ಅಭ್ಯಾಸ , ಅಧ್ಯಯನ , ಓದು,ಸಾಧನೆ ಇವು ಯಕ್ಷಗಾನ ಕಲಾವಿದನಾಗ ಬೇಕಾದವರಿಗೆ ಅಗತ್ಯ ಎಂದು ವಾಸುದೇವರಾಯರು ಅಭಿಪ್ರಾಯಪಟ್ಟರು.

ಕರಾವಳಿ ಮಿತ್ರ ವೃಂದ : ಸಾಮೂಹಿಕ ಸತ್ಯನಾರಾಯಣ, ಶನೀಶ್ವರ ಪೂಜೆ

Posted On: 20-12-2020 07:27PM

ಕಾಪು ಪಡು ಗ್ರಾಮದ ಕರಾವಳಿ ಮಿತ್ರ ವೃಂದದ ಆಶ್ರಯದಲ್ಲಿ 28ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಶ್ರೀ ಶನೀಶ್ವರ ಪೂಜೆಯು ಕಾಪು ಪಡು ಬೈರುಗುತ್ತು ತೋಟದ ವೇದಿಕೆಯಲ್ಲಿ ಡಿಸೆಂಬರ್ 26 ನೇ ತಾರೀಖು ಶನಿವಾರ ಬೆಳಿಗ್ಗೆ 8 ಕ್ಕೆ ಗಣಹೋಮದೊಂದಿಗೆ ಪ್ರಾರಂಭಗೊಂಡು ಸಾಮೂಹಿಕ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ, 2:30 ರಿಂದ ಶ್ರೀ ಶನೀಶ್ವರ ಪೂಜೆ ಸಂಜೆ 6 ಕ್ಕೆ ಮಂಗಲದೊಂದಿಗೆ ಪ್ರಸಾದ ವಿತರಣೆ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.