Updated News From Kaup

ನಿವೃತ್ತ ಉಪ ತಹಶೀಲ್ದಾರ್ ವೈ. ಭುಜಂಗ ಆಚಾರ್ಯ ನಿಧನ

Posted On: 06-11-2020 05:21PM

ಎಲ್ಲೂರು:ನಿವೃತ್ತ ಉಪತಹಶೀಲ್ದಾರ್ ವೈ. ಭುಜಂಗ ಆಚಾರ್ಯ (83) ಆವರು ಅಲ್ಪಕಾಲದ ಅಸೌಖ್ಯದಿಂದ ಎಲ್ಲೂರು ಕಂಚುಗರಕೇರಿಯ ಸ್ವಗೃಹ ಶ್ರೀ ದುರ್ಗಾಕೃಪಾದಲ್ಲಿ ಗುರುವಾರ ರಾತ್ರಿ ನಿಧನ ಹೊಂದಿದರು.

ಬೆಳಪು ವ್ಯವಸಾಯ ಸಹಕಾರಿ ಸಂಘದ ಪಣಿಯೂರು ಇದರ ಮಾಜಿ ಅಧ್ಯಕ್ಷರಾಗಿ, ಎಲ್ಲೂರು ವಿಶ್ವಕರ್ಮ ಸೇವಾ ಸಂಘದ ಮಾಜಿ ಅಧ್ಯಕ್ಷರಾಗಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಮೃತರು ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ, ಸೊಸೆಯಂದಿರು, ಆಳಿಯ, ಅಪಾರ ಬಂಧುಮಿತ್ರರನ್ನು ಅಗಲಿರುತ್ತಾರೆ. ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲಾಜಿ ಯೋಗೀಶ್ ಶೆಟ್ಟಿ, ಬೆಳಪು ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಸಹಿತ ಅನೇಕ ಗಣ್ಯರು ಸಂತಾಪವನ್ನು ವ್ಯಕ್ತಪಡಿಸಿರುತ್ತಾರೆ.

ಉಡುಪಿಯಲ್ಲಿ ಕೋವಿಡ್ ಲಸಿಕೆ ಸಂಗ್ರಹಕ್ಕೆ ಸಿದ್ಧಗೊಂಡಿದೆ ಕೊಠಡಿ

Posted On: 05-11-2020 06:07PM

ಇಡೀ ವಿಶ್ವವನ್ನೇ ಭೀಕರವಾಗಿ ಕಾಡುತ್ತಿರುವ, ಇದುವರೆಗೆ ಕೋಟ್ಯಾಂತರ ಮಂದಿಯನ್ನು ಆವರಿಸಿ, ಲಕ್ಷಾಂತರ ಮಂದಿಯನ್ನು ಬಲಿ ಪಡೆದಿರುವ, ಕೋವಿಡ್-೧೯ ಮಹಾಮಾರಿಗೆ ಕಡಿವಾಣ ಹಾಕಲು ಕೊರೊನಾ ಆರಂಭವಾದ ಕಾಲದಿಂದಲೂ, ವಿಶ್ವದ ಅನೇಕ ದೇಶಗಳಲ್ಲಿ ಲಸಿಕೆ ಪ್ರಯೋಗಗಳು ನಡೆಯುತ್ತಲೇ ಇವೆ. ವಿಶ್ವ ಆರೋಗ್ಯ ಸಂಸ್ಥೆ ಸಹ ಕೊರೋನಾ ಲಸಿಕೆ ಪ್ರಯೋಗದಲ್ಲಿ ತನ್ನನ್ನು ತಾನು ತೊಡಗಿಸಿ ಕೊಂಡಿದೆ. ಪ್ರಸ್ತುತ ಲಸಿಕೆಯ ಅಂತಿಮ ಸಿದ್ದತೆಯಲ್ಲಿದ್ದು, ಶೀಘ್ರದಲ್ಲಿ ವಿಶ್ವದಾದ್ಯಂತ ಆರಂಭಿಕ ಲಸಿಕೆ ನೀಡುವ ಕಾರ್ಯಕ್ರಮ ಆರಂಭಗೊಳ್ಳಲಿದೆ. ಈ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಸಂಗ್ರಹ ಮಾಡಲು ಅಗತ್ಯವಿರುವ ಲಸಿಕಾ ಕೊಠಡಿ (ವಾಕ್ ಇನ್ ಕೂಲರ್)ಯನ್ನು ಸಂಪೂರ್ಣ ಸಿದ್ಧಗೊಳಿಸಲಾಗಿದೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಸಿದ್ಧಗೊಂಡಿರುವ ಈ ಲಸಿಕಾ ಸಂಗ್ರಹ ಕೊಠಡಿ (ವಾಕ್ ಇನ್ ಕೂಲರ್) ಯಲ್ಲಿ ಸುಮಾರು ೨.೨೮ ಕೋಟಿ ಡೋಸ್ ಲಸಿಕೆಯನ್ನು ಸಂಗ್ರಹಿಸಿಡುವ ಸಾಮರ್ಥ್ಯವಿದ್ದು, ಸಂಪೂರ್ಣ ಹವಾ ನಿಯಂತ್ರಣ ವ್ಯವಸ್ಥೆ ಹೊಂದಿದೆ. ವಿಶ್ವದಾದ್ಯಂತ ೨೪೮ ಕ್ಕೂ ಅಧಿಕ ಲಸಿಕೆ ತಯಾರಿಕಾ ಕಂಪೆನಿಗಳು ಕೋವಿಡ್ ಲಸಿಕೆ ಕಂಡು ಹಿಡಿಯುವ ಪ್ರಯತ್ನ ಮಾಡುತ್ತಿದ್ದು, ಅದರಲ್ಲಿ ೧೯೭ ಲಸಿಕೆಗಳು ಪ್ರೀ ಕ್ಲಿನಿಕಲ್, ೨೩ ಲಸಿಕೆಗಳು ಪೇಸ್ ೧, ೧೬ ಲಸಿಕೆಗಳು ಫೇಸ್ ೧/೨, ೨ ಲಸಿಕೆಗಳು ಫೇಸ್ ೨, ೧೦ ಲಸಿಕೆಗಳು ಫೇಸ್ ೩ ರಲ್ಲಿ ಪರೀಕ್ಷೆಗೆ ಒಳಪಟ್ಟಿದ್ದು, ಇದುವರೆಗೆ ಯಾವುದೇ ಲಸಿಕೆಗಳಿಗೆ ಅನುಮತಿ ದೊರೆತಿಲ್ಲ. ಶೀಘ್ರದಲ್ಲಿ ಅನುಮತಿ ದೊರೆಯುವ ನಿರೀಕ್ಷೆಯಿದೆ.

ಕೇಂದ್ರ ಸರ್ಕಾರದ ನಿರ್ದೇಶನದಂತೆ, ಲಸಿಕೆಯನ್ನು ಪ್ರಾಥಮಿಕ ಹಂತದಲ್ಲಿ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿಗಳು ಮತ್ತು ಸಹಾಯಕ ಸಿಬ್ಬಂದಿಗಳಿಗೆ ನೀಡಬೇಕಿದ್ದು, ಇದಕ್ಕಾಗಿ ಜಿಲ್ಲೆಯಲ್ಲಿ ಕೆಪಿಎಂಇ ಕಾಯ್ದೆಯಡಿ ನೊಂದಣಿಯಾಗಿ ವೈದ್ಯಕೀಯ ಸೇವೆ ಒದಗಿಸುತ್ತಿರುವ ೯೮೨ ಖಾಸಗಿ ಸಂಸ್ಥೆಗಳು ಹಾಗೂ ೯೨ ಸರಕಾರಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ, ವೈದ್ಯರು, ಶುಶ್ರೂಶಕರು, ಲ್ಯಾಬ್ ಟೆಕ್ನೀಷಿಯನ್‌ಗಳು, ಸಹಾಯಕ ಸಿಬ್ಬಂದಿ ಸೇರಿದಂತೆ ಪ್ರತಿಯೊಬ್ಬರ ಡೇಟಾಬೇಸ್‌ನ್ನು ಶೀಘ್ರದಲ್ಲಿ ಸಿದ್ಧಪಡಿಸುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಈಗಾಗಲೇ ಸೂಚನೆ ನೀಡಿದ್ದಾರೆ.

ಕೋವಿಡ್ ಲಸಿಕೆ ತಯಾರಿಕಾ ಘಟಕದಿಂದ ಆರಂಭಗೊಂಡು, ಸಂಚಾರ ವ್ಯವಸ್ಥೆ, ಲಸಿಕಾ ಸಂಗ್ರಹ ಕೊಠಡಿಯಲ್ಲಿ ಶೇಖರಣೆ ಮತ್ತು ಲಸಿಕೆ ವಿತರಣಾ ಸ್ಥಳಕ್ಕೆ ತಲುಪುವವರೆಗೆ ಲಸಿಕೆಗೆ ಅಗತ್ಯವಿರುವ ೨ ರಿಂದ ೮ ಡಿಗ್ರಿ ವರೆಗಿನ ತಾಪಮಾನ ಕಾಪಾಡುವ ಅಗತ್ಯವಿದ್ದು, ಯಾವುದೇ ಸಂದರ್ಭದಲ್ಲಿ ಲಸಿಕೆಯ ತಾಪಮಾನ ವ್ಯತ್ಯಯವಾಗದಂತೆ ನಿಗಾ ವಹಿಸಲು ಜಿಲ್ಲೆಯಲ್ಲಿ ಈಗಾಗಲೇ ಒಟ್ಟು ೭೭ ಕೋಲ್ಡ್ ಚೈನ್ ಸಿಸ್ಟಂ ಸ್ಥಳಗಳನ್ನು ಗುರುತಿಸಿದ್ದು, ಈ ಎಲ್ಲಾ ಸ್ಥಳಗಳಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಲಸಿಕೆ ಸಾಗಾಟಕ್ಕೆ ೧೩೨೪ ವಾಹನಗಳು, ೯೩೭೦ ಐಸ್ ಪ್ಯಾಕ್‌ಗಳ ವ್ಯವಸ್ಥೆ ಮಾಡಲಾಗಿದ್ದು. ಲಸಿಕೆ ನೀಡಲು ನುರಿತ ಸಿಬ್ಬಂದಿಯನ್ನೂ ಸಹ ಗುರುತಿಸಲಾಗಿದೆ ಎನ್ನುತ್ತಾರೆ ಡಿ.ಹೆಚ್.ಓ. ಡಾ. ಸುಧೀರ್ ಚಂದ್ರ ಸೂಡಾ.

782 ವರ್ಷ ಹಿಂದೆಯೇ ತುಳು ಲಿಪಿ ಮತ್ತು ಭಾಷೆ ಬಳಸಲು ಪ್ರೇರೇಪಿಸಿದ ಮಧ್ವಾಚಾರ್ಯರು

Posted On: 04-11-2020 02:23PM

ಈಗ ತುಳು ಕಲಿಯುವ, ತುಳುಲಿಪಿಯಲ್ಲಿ ಬರೆಯುವ ಶ್ರದ್ಧೆ ಒಂದು ಅಭಿಯಾನದಂತೆ ಪ್ರಾರಂಭವಾಗಿದೆ .ಎಲ್ಲಡೆ ತುಳು ಬರೆಯುವ ತರಗತಿಗಳು ನಡೆಯುತ್ತಿವೆ . ಇಂದಿಗೆ 782 ವರ್ಷ ಹಿಂದೆಯೇ ತುಳುನಾಡಿನಲ್ಲಿ ಹುಟ್ಟಿದ ಆಚಾರ್ಯ ಮಧ್ವರು ತುಳುಲಿಪಿಯನ್ನು ಸ್ವೀಕರಿಸಿದ , ಮಾತೃಭಾಷೆಯಾಗಿ ಗೌರವಿಸಿ ಬರೆದವರು - ಬರೆಸಿದವರು ಎಂಬುದು ಬಹುಮಂದಿಗೆ ಗೊತ್ತಿಲ್ಲ. ಅದಕ್ಕಾಗಿ ತುಳುಭಾಷೆ - ಕನ್ನಡ ಲಿಪಿಯಲ್ಲಿ ಬರೆದ ಲೇಖನ . ತುಳು ಮಣ್ಣ್ ದ "ಕೊಡಿಪು": 'ಮದ್ವಾಚಾರ್ರ್' , 'ತತ್ತ್ವ ವಾದ' ತುಳು ಮಣ್ಣ್ , ತುಳು ಅಪ್ಪೆ , ತುಳು ಬಾಸೆ , ತುಳು ಸಂಸ್ಕೃತಿ ಒಟ್ಟುಡು ತುಳುವ ಕಂಡನಿ - ಬುಡೆದಿಗ್ ಮಗೆಯಾದ್ ಪುಟಿನಾರ್ ಮದ್ವೆರ್ . ಆಂಡ ಆರ್ನ ಸಾದನೆ "ಅಧ್ಯಾತ್ಮ" ಕ್ಷೇತ್ರೊಡು . ಈ ದೇಶದ ಅಧ್ಯಾತ್ಮೊಗು ಪೊಸತ್ತೊಂಜಿ ಮರ್ಗಿಲ್ , ಪೊಸ ಪೊಲಿಕೆ - ಪೊಸ ಆಲೋಚನೆ ಕೊರಿನಾರ್ . ಈ ದೇಶೊಡು ಮೂಜೆ ಮೂಜಿ ಜನ ಆಚಾರ್ರ್ ಈ ಕಜ್ಜೊಡು ಪುದರ್ ಪೊಯಿನಾಕುಲು , ಅಯಿಟ್ ಒರಿ ನಮ್ಮ ತುಳುತಾರ್ , ತುಳುವಪ್ಪೆನ ಮಗೆ , ಮಧ್ವಾಚಾರ್ಯೆರ್ . ತುಳು ಲಿಪಿನ್ ಏಲ್ನೂದು ವರ್ಸೊರ್ದಿಂಚಿ ಗಳಸೊಂದು ಬತ್ತಿನಾಕುಲು ಮದ್ವೆರ್ ಬೊಕ್ಕ ಅರೆನ ಎಡ್ಮ ಜನ ಶಿಷ್ಯೆರ್ .ಇನಿಕ್ಲ ಅಕುಲು ರುಜು ಮಲ್ಪುನಿ ತುಳುಟು .ಅಂಚಾದ್ ಮದ್ವೆರ್ ತುಳುವೆರ್, ಮದಪರೆ ಆವಂದಿನ ತುಳು ಅಪ್ಪೆನ ಮಗೆ . ಆಂಡ ಇನಿ ತುಳುಟು ಏರ್ ಬರೆಪೆ ,ಏರ್ ಓದುವೆ ಆಯೆ ತುಳುವೆ ಪಂಡ್ ದ್ ಏರ್ಲ ಪನೊಂದಿಜ್ಜ . ಕನ್ನಡ ಲಿಪಿಟ್ ತುಳುನಿ ಬರೆದ್ ತುಳುವೆರ್ ಪಂಡ್ದ್ ಪೆರ್ಮೆಡ್ ತಿರ್ಗುನ ಕಾಲವುಂದು .ಆಂಡ ತುಳುಟು ಬರೆಪಿನ , ತುಳುಟು ಬರೆಯಿನ ಗ್ರಂಥೊಲೆನ್ ಓದುನಕುಲು ಇತ್ತೆಲಾ ಉಲ್ಲೆರ್ . ಲೆಕ್ಕೊಗು ಕಡಮೆ ಇಪ್ಪರೆಯಾವು . ನಡುತ ಇಲ್ಲದಾರ್ ಒಡಿಪುಡ್ದು ತೆನ್ಕಾಯಿ ಐನ್ ಮೈಲ್ ದೂರೊಡು ಒಂಜಿ ಊರು, ಅವು 'ಬೊಳ್ಳೆ' - ಬೊಲ್ಲೆ (ಬೆಳ್ಳೆ) . ಪಾದೆಕಲ್ಲ್ ಪಜೆತಲೆಕ್ಕ ದಿಂಜಿದಿತ್ತಿನೆಡ್ದ್ ಈ ಊರು "ಪಾಜೆ" . ಆಚಾರ್ರ್ ಪುಟಿ ಬೊಕ್ಕ ಈ ಊರು 'ಪಾಜಕ' ಆಂಡ್ . ಎಚ್ಚಿಕಡಮೆ ಏಲ್ ನೂತ್ತ ಐವ ವರ್ಸೊಡ್ದು ಪಿರಾವು , ಕಲ್ಜಿಗ ಸುರುವಾದ್ ನಾಲ್ ಸಾರತ್ತ ಮುನ್ನೂತ್ತ ಮುಪ್ಪತ್ತೆನ್ಮ ವರ್ಸ ಕರಿದ್ ಮುಪ್ಪತ್ತ ಒಂರ್ಬನೇ ವರ್ಸ (ವಿಲಂಬಿ ಸಂವತ್ಸರ ,ಆಶ್ವಯುಜ ಮಾಸ ,ಶುಕ್ಲಪಕ್ಷ ,ನವರಾತ್ರಿ ಕಳೆದು ವಿಜಯದಶಮಿಯಂದು) ಮಾರ್ನೆಮಿ ಕರಿದ್ ಮನತ್ತಾನಿ( ಕ್ರಿ . ಶ .೧೨೩೮ ನೇ ಇಸವಿ) ಮದ್ವೆರ್ ಪುಟಿಯೆರ್ .ಬನ್ನಂಜೆದ ಗೋವಿಂದಾಚಾರ್ರ್ ಪಣ್ಪಿಲೆಕ್ಕ 'ನಡಿಲ್ಲಾಯ' ನಾರಾಯಣ ಬಟ್ರ್ - ವೇದವತಿ , ಮದ್ವೆರ್ನ ಅಪ್ಪೆ್ - ಅಮ್ಮೆರ್ . ನಡಿಲ್ಲಾಯ ತುಳು ಬಾಸೆದ ಸಬ್ದ .'ನಡುತ ಇಲ್ಲದಾಯೆ' ಪಂಡ್ ದ್ ಪಣೊಲಿ . ಆಚಾರ್ರೆನ ಪುಟ್ಟ ಪುದಾರ್ ವಾಸುದೇವೆ . ಪತ್ತೋಂಜಿನೇ ವರ್ಸೊಡು ಸನ್ಯಾಸಿಯಾಪೆರ್ ( ಕ್ರಿ . ಶ .೧೨೪೯). ಅರೆಗ್ ಸನ್ಯಾಸಿ ದೀಕ್ಷೆ ಕೊರಿನ ಅಚ್ಚ್ಯುತ ಪ್ರಜ್ಞೆರ್ . 'ಪೂರ್ಣಪ್ರಜ್ಞ' ಪಂಡ್ ದ್ ಪುದರ್ ದೀಪೆರ್ .ಸನ್ಯಾಸಿಯಾದ್ ನಲ್ಪ ದಿನೊಟ್ಟೆ ಒಡಿಪುಗು ಬತ್ತಿನ ವಿದ್ವಾಂಸೆರ್ಡ ಚರ್ಚೆ ಮಲ್ತ್ ದ್ ಗೆಂದುವೆರ್ ಆಚಾರ್ರ್ . ಸಂತೊಸೊಡು ಗುರುಕುಲು 'ಆನಂದತೀರ್ಥ' ಪನ್ಪಿ ಪುದಾರ್ ದೀದ್ ವೇದಾಂತದ ಮಾಮಲ್ಲ ಸಾಮ್ರಾಜ್ಯೊದ ಪಟ್ಟಕಟ್ಟುವೆರ್ . ಆಚಾರ್ರ್ ಸ್ವತ ತಾನೆ ದೀವೊಂಡಿನ ಪುದಾರ್ 'ಮದ್ವೆ' . ಈ ಪುದರೆ ದುಂಬುಗು ಬಳಕೆ ಆಪುಂಡು .ಮದ್ವಾಚಾರ್ರ್ ಪಂಡ್ ದೆ ಪುದರಾಪುಂಡು . ಕಡಲ್ ಡ್ ಕೃಷ್ಣ ದೇವೆರ್ನ ಮೂರ್ತಿ ತಿಕ್ಂಡ್ , ಒಡಿಪುಡು ನಿಲೆ ಮಲ್ತೆರ್ .ಎಡ್ಮ ಜನನ್ ಶಿಶುಪತ್ಯೆರ್ , ಈ ಎಡ್ಮ ಶಿಶ್ಯೆರೆನ್ ಕೃಷ್ಣ ಪೂ ಪೂಜನೆಗ್ ನೇಮಿತೆರ್ . ಇಂಚ ಮದ್ವೆರೆನ ಕತೆ ಮಸ್ತ್ ಮಲ್ಲೆ ಉಂಡು .ತುಳುನಾಡ್ ಡ್ ಪುಟಿನ ತುಳುವಪ್ಪೆನ ಮಗೇಂದ್ ತೆರಿದ್ಂಡಲಾ ತುಳು ಬಾಸೆ - ಸಂಸ್ಕೃತಿ ಅಬಿಮಾನಿಲು ಮದ್ವೆರ್ನ ಕತೆ ಮದತ್ತೆರ್ . ದಾಯೆಗ್ ಗೊತ್ತಿಜ್ಜಿ .

| ಆಚಾರ - ವಿಚಾರ | ನಮುನೆವಾರ್ ಆಚಾರ - ವಿಚಾರೊಲು . ನಂಬಿಕೆ - ನಡವಲಿಕೆಲು‌ , ನಾಗೆ - ಬೂತ ಆರಾದನೆಲು , ಸರಳ - ಮುಗ್ದ ನಡವಳಿಕೆದ ಕ್ರಮೊಕುಲು , ಬೆನ್ನಿ - ಮೂರ್ತೆ - ರಂಪೊಣಿ ಆದರಿತಿದ್ ಬದ್ ಕ್ ಕಟ್ಟಿನ ಜನಮಂದೆದ ನಡುಟು ಆಚಾರ್ರ್ ಪುಟಿಯೆರ್, ಇಂದ್ ಸತ್ಯನೇಅತ್ತ . ತುಳುವೆರೆ ಬದ್ ಕ್ ದ ಎಚ್ಚಿಗಾರಿಕೆ , ಮನಸ್ಸ್ ದ ಮಲ್ಲಾದಿಗೆ್ , ಬಾಸೆದ ಪೊರ್ಲು , ಮಣ್ಣ್ ದ ಪೊಲ್ಸು ಇಂದೆನ್ ಮಾತ ಒಡಿಪುಡು , ಒಡಿಪುದ ಎನ್ಮ ಮಠೊಕುಲೆಡ್ , ನಾಲ್ ಬೀದಿಡ್ , ಕೃಷ್ಣ ದೇವೆರೆ ಉಚ್ಚಯೊದ ಕ್ರಮ ಬೊಕ್ಕ ಗೌಜಿಡ್ ತುವೊಲಿ ( ತೂಪಿನ ದಿಟ್ಟಿ ಬೋಡು) . ನೆಕ್ಕ್ ಕಾರಣ ಆಚಾರ್ರ್ ತೂತಿನ , ಅನುಬವಿತ್ ನ , ಸಂತೋಸುಡು ಪಾಲ್ ಪಡೆಯಿನ ತುಳು ಸೀಮೆದ ಆಚಾರ ,ವಿಚಾರೊಲು - ನಂಬೊಲಿಗೆ - ನಡವಲಿಕೆಲು .ಅವ್ವೆನ್ ಪೂರಾ ಅಂಚೆನೆ ಒಡಿಪುಡು ರೂಡಿಗ್ ಕನತೆರ್ .ಉಂದೆನ್ ತುಳುವೆರ್ ತೂಯಿನೇ ಇಜ್ಜಿ . ತೂತೆರ್ಡಲಾ ಪಂಡಿನೇ ಇಜ್ಜಿ . ಆರ್ ಪಂಡಿನ ತತ್ತ್ವವಾದ(ದ್ವೈತ) ಕೊಡಿತಿನಿ , ಒರ್ತಿ ತುಳು ಅಪ್ಪೆನ ಮಗನ ಮನಸ್ಸ್ ಡ್ , ಆರ್ನ ಅಧ್ಯಾತ್ಮದ ಸಾದನೆಡ್ದ್ .ಒವ್ವೊಂಜಿ ಪೊಸ ಆಲೋಚನೆ ಪುಟ್ಟುನುಲಾ ಆ ನೆರೆಕರೆ - ಮಣ್ಣ್ ದ ಸಂಸ್ಕೃತಿದ ಬುಲೆಚ್ಚಿಲೆ ಆದ್ ಉಪ್ಪುಂಡು .ಅಂಚಾದ್ ಆಚಾರ್ರ್ ತುಳುತಾರ್ , ತುಳು ಅಪ್ಪೆನ ಮಗೆ .ತುಳು ಬಾಸೆ , ಆಚಾರ - ವಿಚಾರ , ತುಳು ಜನಮಾನಿನ ಬದ್ ಕ್ ದ ಕ್ರಮ ,ನಂಬುಗೆ - ನಡಕೆ ಇಂದೆನ್ ನಮ ಇತ್ತೆ ಮದತೊಂದು ಉಲ್ಲ , ಒರಿಪುನ ಮಾಮಲ್ಲ ಕಜ್ಜೊಲು ನಡತೊಂದು ಉಂಡು ‌. ಆಂಡ ಸುದ್ದ ತುಳುತವು ಪಂಡ್ ದ್ ನಿಕ್ಕಿ ಮಲ್ಪುನಾತ್ ಏರೆಗ್ಲಾ ಗೊತ್ತುಜ್ಜಿ . ನಂಕ್ ತೆರಿನವೆ ಮಾಮಲ್ಲ ಸಂಗತಿ ಪಂಡ್ದ್ ಪ್ರಚಾರಾವೊಂದುಪ್ಪುಂಡು. ಅಂಚಾದ್ ಸತ್ಯೊ ಮದೆಕ್ ಪೋಪುಂಡು . ಪೋಯಿಜಡ ಪೋಪಾವುನವುಲಾ ನಡಪುಂಡು . ಅಂಚ ತುಳು ಲಿಪಿನ್ ಗೌರವೊಡು ಗಳಸ್ ದ್ , ಸಂಸ್ಕೃತೊಡು ಇತ್ತಿನ ಧರ್ಮಶಾಸ್ತ್ರೊಲೆನ್ ತುಳುಲಿಪಿಡ್ ಒರಿತಿನ ಕಜ್ಜಬೆಂದಿನವು ಸತ್ಯೊನೇ ಅತ್ತ . ಏಲ್ನೂದು ವರ್ಸ ಪಿರಾವುಡು , ತುಳು ಬಾಸೆ - ಲಿಪಿ ಏತ್ ಚಾಲ್ತಿಡ್ ಇತ್ತ್ಂಡ್ ಪನ್ಪಿನೆಕ್ಕ್ ಆಚಾರ್ರೆನ " ಸರ್ವಮೂಲ " ಗ್ರಂಥ ತುಳುಲಿಪಿಟೇ ಉಪ್ಪುನವೇ ಸಾಕ್ಷಿ .ಸಂಸ್ಕೃತ ಬಾಸೆದ ವಿವರೊಲೆನ್ ತುಳುಟು ಬರೆವೊಡ್ಡ ತುಳು ಲಿಪಿತ ಮಿತ್ತ್ ಇತ್ತಿ ಗೌರವ ತೆರಿವುಂಡು . ಸಂಸ್ಕೃತ ಬಾಸೆದ ಸಾಹಿತ್ಯೊನು ತುಳು ಲಿಪಿಟ್ ಸರಾಗೊಡು ಬರೆವರೆ ಈ ಲಿಪಿಟ್ ಸಾಧ್ಯ ಪಣ್ಪಿನವು ಸತ್ಯ . ಇಂದೆತ್ತ ಉದ್ದೇಶ ಲಿಪಿನ್ ಮುಚಿದ್ ದೀಪಿನವು ಖಂಡಿತಾ ಅತ್ತ್ .

ತುಳುವಗ್ ಮಗೆ ಒರ ಆಚಾರ್ರೆನ್ ಪರೀಕ್ಷೀಪರೆ ಬತ್ತಿನಾಯೆ ಕನ್ನಡೊಡು ಪಾತೆರ್ರೆ ಸುರುಪತ್ತುವೆ . ಅದಗ ಆಚಾರ್ರ್ ತುಳುಟು ಉತ್ತರ ಕೊರ್ಪೆರ್. "ತುಳುಟು ಪಾತೆರಿಯರ್ಡ ಇರೆಗ್ ಅಸುದ್ದ ಆಪುಜಾ" ಪಂಡ್ ದ್ ಆಯೆ ಕೇನುವೆ . ಅದಗ ಆಚಾರ್ರ್ " ತುಳುವಗ್ ಮಗೆ ಆದ್ ಪುಟಿನೆಡ್ದ್ ತುಳುಬಾಸೆಡ್ ಪಾತೆರುವೆ..." ಪಂಡ್ ದ್ ಉತ್ತರಿಪುವೆರ್ . ವೇದವಿದ್ಯೆ , ಸಂಸ್ಕೃತ ಬಾಸೆ ತೆರಿದಿತ್ತಿನ ಮದ್ವೆರ್ ಅಪ್ಪೆಬಾಸೆ ತುಳುನಿ ಮಾನಿತೊಂದಿತ್ತೆರ್ , ಅಯಿಟೆ ಪಾತೆರೊಂದಿತ್ತೆರ್ ಪಂಡ್ ದ್ ಪಣೊಲಿ . ಈ ವಿಷಯ ಬಾಸೆಲ್ ಮಿಶನ್ ತುಳು ಟಿಪ್ಪಣಿ ಸಂಗ್ರಹೊಡು ತಿಕ್ಂಡ್ . ‌ ಆಚಾರ್ರೆನ ನೂಲಮದ್ಮೆದ ವಿವರಣೆ , ಒಡಿಪುದ ಪರ್ಯಾಯದ ಗೌಜಿ - ಗದ್ದಲ ಇಂಚ ಮಸ್ತ್ ಮಾಹಿತಿಲು ಬಾಸೆಲ್ ಮಿಶನ್ ತುಳು ಟಿಪ್ಪಣಿ ಸಂಗ್ರಹೊಡು ಉಂಡು . ಒಡಿಪುದ ಎನ್ಮ ಮಠತ ಗ್ರಂಥ ಭಂಡಾರೊಡು ತುಳು ಲಿಪಿಟ್ ಬರೆತಿನ ಮಸ್ತ್ ಗ್ರಂಥೊಳು ಉಂಡೂಂದ್ ಬಾಸೆಲ್ ಮಿಶನ್ ಟಿಪ್ಪಣಿಲು ಇತ್ತಿನ ಗ್ರಂಥ ಪನ್ಪುಡು (Elements of south India Palaeography from the fourth to the seventeenth century A.D. being An introduction to the study of south India inscriptions and MSS. By A.C. Burnel ,Published by Trubner & co , London , printed at Basel Mission Press,Mangalore, 1874) ಪೊರ್ಲುದ ಅಚ್ಚರ ಪಲ್ಮಾರ್ ಮಠೊಟು ಉಪ್ಪುನ ಮದ್ವೆರ್ನ " ಸರ್ವಮೂಲ ಗ್ರಂಥ" ತಾರಿದ ಒಲಿಟ್ ಬರೆತಿನವು . ಇಂದ್ ತುಳುಲಿಪಿಟ್ ಉಂಡು . ಈ ಗ್ರಂಥೊನು ಈಡೀಕ್ ಲಾ ಓದುದು ಸಂಪೊಲಿತಿನ ಬನ್ನಂಜೆ ಗೋವಿಂದಾಚಾರ್ರ್ ಪನ್ಪೆರ್ ; ಈತ್ ಪೊರ್ಲುಕಂಟ್ ದ ತುಳುತ ಅಚ್ಚರೊಲೆನ್ ಯಾನ್ ತೂತುಜಿ , ಯಾನ್ ಸಾವಿರ ಮಿತ್ತ್ ತುಳು ಲಿಪಿಟ್ ಬರೆಯಿನ ಪ್ರಾಕ್ ದ ಗ್ರಂಥೊಲೆನ್ ಸಂಪೊಲಿತ್ ದೆ . ಎಲ್ನೂದು ವರ್ಸ ಪಿರಾಕ್ ಡ್ ಈತ್ ಪೊರ್ಲುದ ಅಚ್ಚರೊಡು ಬರೆತಿನಾರ್ ಮದ್ವೆರ್ನ ಸುರುತ ಶಿಷ್ಯೆ ಹೃಷೀಕೇಶ ತೀರ್ಥೆರ್ . ಅಂಚಾಂಡ ತುಳುಲಿಪಿ ಚಾಲ್ತಿಡ್ ಇತ್ತಿನವು ಸತ್ಯ , ಆಂಡ ನಮ ದಾಯೆಗ್ ಕಲ್ತ್ ಜ ಪನ್ಪಿನೆಕ್ಕ್ ಅಕುಲು ಪಿದಾಯಿ ಕೊರುಜೆರ್ ಪನ್ಪಿನ ಉತ್ತರ ಏತ್ ಸರಿ .ನಮ್ಮ ಲಿಪಿ ನಮದೇಗ್ ಕಲ್ತಿಜ , ನಮ ಅತ್ತ್ , ಕರಿನ ಶತಮಾನೊಡು ತುಳುಕಾದ್ ಬೆಂದಿನಾಕುಲು ಏರ್ಲ ತುಳುಟು ಬರೆಯಿನೆ ಇಜ್ಜಿ . ತುಳು ಬಾಸೆ ಅಸುದ್ದ ಪಂಡ್ ದ್ ತೆರಿದೆರ್ಡ , ಸರ್ವಮೂಲ ಗ್ರಂಥೊನು ತುಳು ಲಿಪಿಟ್ ಬರೆದುಪ್ಪಯೆರ್ . ಆ ಒಲಿತ ಕಟ್ಟ್ ನ್ ನಿತ್ಯ ಪೂಜೆ ಮಲ್ದಯೆರ್. ಮಠತ ಪಟ್ಟದ ದೇವೆರ್ನ ಒಟ್ಟಗೆ ದೀದ್ ಭಕ್ತಿಡ್ ಕಾತೊಂದುಲ್ಲೆರ್ ಪಲಿಮಾರ್ ಮಠತ ಸ್ವಾಮಿಲು . ಕರಿನ ಶತಮಾನೊಡು ತುಳು ಕಾವ್ಯೊಲೆನ್ , ಬರವುಲೆನ್ ಓದುದು ಪಂಡಿನಾರ್ ವೆಂಕಟ್ರಾಜ ಪುಣಿಚಿತ್ತಾಯೆರ್. ಆರ್ ನಮ್ಮ ಲಿಪಿತ ಗೇನ ಒದಗಾಯೆರ್ .

ಮದ್ವೆರ್ನ ಆಲೋಚನೆಲು: ತುಳು ಮಣ್ಣ್ ದ ಕೊಡಿಪು. • ಒಡಿಪುಡೇ ಕುದ್ದುದು ಮನಸ್ಸ್ ನ್ ಬೊಕ್ಕ ಜ್ಞಾನೊನು ಎಲ್ಲಿ ಮಲ್ತೊನಂದೆ ದೇಶ ತಿರ್ಗೊಡೂಂದು ಬಯಕಿನ ಆಚಾರ್ರ್ ದೇಶ ಸಂಚಾರೊಗು ಪಿದಾಡ್ ವೆರ್ . ಮೂಡನಂಬಿಕೆಲೆನ್ ಆಚಾರ್ರ್ ಒಪ್ಪಿಯುಜೆರ್ .ಅಧ್ಯಾತ್ಮದೊಟ್ಟುಡು ಮೂಡನಂಬಿಕೆಲೆನ್ ಬೆರಕಾಯರೆ ಬಲ್ಲಿ ಪಣ್ಪೆರ್ . • ಗಟ್ಟಿಮುಟ್ಟುದ ಜೀವೊದ ಉಲಾಯಿ ಮಾತ್ರ ಸಾಮಾರ್ಥ್ಯ ಇತ್ತಿನ ವಿಚಾರೊಲು ಉದಿಪರೆ - ನೆಲೆ ಆವರೆ ಸಾಧ್ಯ . • ಪೊಣ್ಣ ಸಂಸಾರದ ಮಿತ್ತ್ ಗೌರವ ತೋಜಾಯಿನ ಒರಿಯೇ ಒರಿ ಆಚಾರ್ರ್ ಮದ್ವೆರ್ .ಈಮಣ್ಣ್ ದ ಅಪ್ಪೆ ಮೂಲ ಕುಟುಮಕ್ರಮೊನು ತೂಯಿನಾರ್ ,ಇಂದ್ ಆರ್ನಮಿತ್ತ್ ಆದಿತ್ತಿನ ಪರಿಣಾಮ ಆದಿಪ್ಪು . • ಕೂಡುಕಟ್ಟ್ ದ ಏರ್ನ ಮಿತ್ತ್ ಲಾ ತಿರಸ್ಕಾರ ಇಜ್ಜಿ . ಎಂಕ್ , ಯಾನ್ ಪನ್ಪಿನ ಎಲ್ಯ ಮನಸ್ಸ್ ಇಜ್ಜಾಂದಿನ ಮಾತರೆಗ್ಲಾ ದೇವೆರೆ ಎಡ್ಡೆಪ್ಪು ಒದಗ್ದ್ ಬರ್ಪುಂಡು . • 'ನಮ ಮಾತೆರ್ಲ ಒರಿಯೇ ದೇವೆರ್ನ ಜೋಕುಲು' : ಇಸ್ಲಾಂ ಅರಸು ಒರಿ ಸಂಚಾರೊಡು ಉಪ್ಪುನ ಆಚಾರ್ರೆನ್ ತಡೆಪುನಗ ಈ ಪಾತೆರ ಪನ್ಪೆರ್ . • ಮೋ ಜಾತಿದ ಸೇವೆ ದೇವೆರ್ ಮೆಚ್ಚುನ ಕೆಲಸ . • "ಸರ್ವಸಮ ಭಾವ , ಉದಾತ್ತ ಧೋರಣೆ" ,ಜನಮಂದೆಗ್ ಕಯಿತಲ್ ಬರ್ಪಿನ ಗೇನೊಲು ಮದ್ವೆರ್ನ ಕೊಡುಗೆ . • ದ್ವೈತ - ತತ್ತ್ವವಾದ ಪನ್ಪಿನ ,ಲೋಕ ಒಪ್ಪಿನ 'ಗೇನ' ಕೊಡಿದಿನಿ ತುಳುಮಣ್ಣ್ ಡ್ , ತುಳು ಆಚಾರ ವಿಚಾರದ ನಡುಟು . ಲೇಖನ : ಕೆ. ಎಲ್ . ಕುಂಡಂತಾಯ

ವೈ.ಯು. ಯಶಸ್ವಿ ಆಚಾರ್ಯಗೆ “ಸರಸ್ವತಿ ಪುರಸ್ಕಾರ” -ರಾಜ್ಯ ಪ್ರಶಸ್ತಿ ಪ್ರಧಾನ

Posted On: 03-11-2020 09:15AM

ಕಾಪು : ಉಡುಪಿ ಜಿಲ್ಲೆ ಕಾಪು ತಾಲೂಕು ಕಲ್ಯಾದ ಉಮೇಶ ಆಚಾರ್ಯ, ಶೀಲಾವತಿ ಆಚಾರ್ಯ ದಂಪತಿ ಪುತ್ರಿಯಾದ ವೈ.ಯು. ಯಶಸ್ವಿ ಆಚಾರ್ಯ ಅವರಿಗೆ 2019-20ನೇ ಸಾಲಿನ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ 614(ಶೇ.98.24) ಆಂಕ ಪಡೆದಿರುವ ಇವರ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ ದಾವಣಗೆರೆ-ಸಾಲಿಗ್ರಾಮ ಅವರು ನೀಡಲ್ಪಡುವ ಸರಸ್ವತಿ ಪುರಸ್ಕಾರ ರಾಜ್ಯ ಪ್ರಶಸ್ತಿಯನ್ನು ನ.1ರಂದು ದಾವಣಗೆರೆಯ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಆವರಣದಲ್ಲಿ ಪ್ರಧಾನಿಸಲಾಯಿತು ಕಾಪು ಉಳಿಯಾರಗೋಳಿ ದಂಡತೀರ್ಥ ಇಂಗ್ಲೀಷ್ ಮೀಡಿಯಂ ಸ್ಕೂಲ್ ವಿದ್ಯಾರ್ಥಿನಿಯಾಗಿರುವ ವೈ.ಯು. ಯಶಸ್ವಿ ಭರತನಾಟ್ಯ ಪ್ರವೀಣೆಯಾಗಿದ್ದು, ಸಾಂಸ್ಕøತಿಕ, ಕ್ರೀಡಾ, ಶೈಕ್ಷಣಿಕ ರಂಗದ ಸಾಧಕಿಯಾಗಿದ್ದು, ಯಾವುದೇ ಕೋಚಿಂಗ್ ಪಡೆದುಕೊಳ್ಳದೆ ಸ್ವತಃ ಅಭ್ಯಸಿಸಿ ಎಸೆಸ್ಸೆಲ್ಸಿಯಲ್ಲಿ ಸಾಧಕಿಯಗಿದ್ದಾಳೆ. ರಿಯಾದ್ ಇಂಟರ್ ನ್ಯಾಷನಲ್ ಇಂಡಿಯನ್ ಸ್ಕೂಲ್‍ನಲ್ಲಿ ಕ್ಲೇ ಮಾಡೆಲಿಂಗ್, ಇಂಟರ್‍ನ್ಯಾಷನಲ್ ಚಿಂತನಾ ಡ್ರಾಯಿಂಗ್‍ನಲ್ಲಿ ಪ್ರಥಮ ಪ್ರಶಸ್ತಿಗಳನ್ನು ಗಳಿಸಿಕೊಂಡಿದ್ದ ಈಕೆ ಬಹುಮುಖ ಪ್ರತಿಭಾನ್ವಿತೆಯಾಗಿದ್ದಾಳೆ ಕನ್ನಡ ರಾಜ್ಯೋತ್ಸವದಂದು ದಾವಣಗೆರೆಯ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಆವರಣದಲ್ಲಿ ವೈ.ಯು. ಯಶಸ್ವಿ ಅವರಿಗೆ ಗಣ್ಯರ ಉಪಸ್ಥಿತಿಯಲ್ಲಿ ಕಿರೀಟವಿಟ್ಟು, ಪುಷ್ಪವೃಷ್ಟಿಯೊಂದಿಗೆ, ಮೆಡಲ್, ಸ್ಮರಣಿಕೆ, ಪ್ರಶಸ್ತಿ ಪತ್ರದೊಂದಿಗೆ ಈ ಪ್ರಶಸ್ತಿ ಪ್ರಧಾನ ನಡೆಯಿತು

ಉಡುಪಿ : ಅಕ್ರಮವಾಗಿ ದಾಸ್ತಾನು ಮಾಡಿದ್ದ 600 ಕ್ವಿಂಟಲ್ ಅನ್ನಭಾಗ್ಯ ಅಕ್ಕಿ ವಶ

Posted On: 02-11-2020 10:24PM

ಉಡುಪಿ, ನವೆಂಬರ್ : ಬ್ರಹ್ಮಾವರ ತಾಲೂಕು ಶಿರಿಯಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಮರ್ಗಿ ಎಂಬಲ್ಲಿನ ರೈಸ್ ಮಿಲ್ ಮೇಲೆ , ಸೋಮವಾರ ಮಧ್ಯಾಹ್ನ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಜಿಲ್ಲಾಧಿಕಾರಿ ಜಿ.ಜಗದೀಶ್ ನೇತೃತ್ವದ ಅಧಿಕಾರಗಳ ತಂಡ ಅನ್ನಬಾಗ್ಯ ಯೋಜನೆಯ ಸುಮಾರು 600 ಕ್ವಿಂಟಾಲ್ ಗೂ ಅಧಿಕ ತೂಕದ ಅಕ್ಕಿಯನ್ನು ವಶಪಡಿಸಿಕೊಂಡಿದೆ.

ಜಿಲ್ಲೆಯಲ್ಲಿ ಅನ್ನಬಾಗ್ಯದ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮತ್ತು ದಾಸ್ತಾನು ಮಾಡುತ್ತಿರುವ ಸುಮಾರು ಒಂದು ತಿಂಗಳಿದ ಸತತವಾಗಿ ಮಾಹಿತಿಯನ್ನು ಸಂಗ್ರಹಿಸಿ, ಈ ದಾಳಿಯನ್ನು ನಡೆಸಲಾಗಿದ್ದು, ಅಂದಾಜು 16.5 ಲಕ್ಷ ಮೌಲ್ಯದ ಅಕ್ಕಿಯನ್ನು ವಶಪಡಿಸಿಕೊಂಡಿದ್ದು, ಈ ಸಂಬಂದ 3 ಲಾರಿ ಚಾಲಕರು ಮತ್ತು ಕ್ಲೀನರ್ ಸೇರಿದಂತೆ, 6 ಲಾರಿ, ಎರಡು 407, ಒಂದು ಟಾಟಾ 909 ಹಾಗೂ ಮಾರುತಿ ಇಕೋ ವಾಹನಗಳನ್ನು ವಶಕ್ಕೆ ಪಡೆದಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ಜಿಲ್ಲೆಯಲ್ಲಿ ಪಡಿತರವನ್ನು ಅಕ್ರಮವಾಗಿ ದಾಸ್ತಾನು ಮಾರಾಟ ಮಾಡುವ ಜಾಲ ಸಕ್ರಿಯವಾಗಿದ್ದು, ಕಳೆದ ತಿಂಗಳು ಕುಂದಾಪುರ ತಾಲೂಕಿನಲ್ಲಿ ಈ ರೀತಿಯ ಜಾಲವನ್ನು ಪತ್ತೆ ಮಾಡಲಾಗಿದೆ, ಜಿಲ್ಲೆಯಲ್ಲಿರುವ ಇಂತಹ ಜಾಲಗಳನ್ನು ಪತ್ತೆ ಹಚ್ಚಲು ಜಿಲ್ಲಾಡಳಿತ ಸಕಲ ಪ್ರಯತ್ನ ಮಾಡುತ್ತಿದ್ದು, ಸಾರ್ವಜನಿಕರು ಪಡಿತರ ಅಕ್ಕಿಯ ಅಕ್ರಮ ದಾಸ್ತಾನು, ಸಾಗಾಟ ಕುರಿತು ಮಾಹಿತಿ ಇದ್ದಲ್ಲಿ ಜಿಲ್ಲಾಡಳಿತಕ್ಕೆ ತಿಳಿಸಿದಲ್ಲಿ ಕೂಡಲೇ ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ ಹಾಗೂ ಸಾರ್ವಜನಿಕರೂ ಸಹ ತಮಗೆ ನೀಡಲಾಗುವ ಅಕ್ಕಿಯನ್ನು ಮಾರಾಟ ಮಾಡದೆ, ಸದುಪಯೋಗ ಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ದಾಳಿಯಲ್ಲಿ ಆಹಾರ ಇಲಾಖೆಯ ಉಪ ನಿರ್ದೇಶಕ ಗಜೇಂದ್ರ, ಆಹಾರ ನಿರೀಕ್ಷಕರಾದ ಪಾರ್ವತಿ, ಸುರೇಶ್ ಮತ್ತಿತರರು ಭಾಗವಹಿಸಿದ್ದರು.

ವೈರಲ್ ಆಗಿದ್ದ ದೈವದ ಹಾಡಿಗೆ ಹುಡುಕಿ ಸಮ್ಮಾನಿಸಿದ ಕಾರ್ಕಳ ದೈವಾರಾಧಕರ ಒಕ್ಕೂಟ

Posted On: 02-11-2020 11:04AM

ತುಳುನಾಡಿನ ಕಾರ್ಕಳ ತಾಲೂಕಿನ ಹಿರ್ಗಾನದ ಮಾಸ್ಟರ್ ಕಾರ್ತಿಕ್ ಹಾಡಿರುವ ದೈವ ದೇವರ ಹಾಡೊಂದು ಬಾರಿ ಜನ ಮನ್ನಣೆಗೆ ಪಾತ್ರ ವಾಗಿತ್ತು.

ಈತನ ತಂದೆ ತಾಯಿ ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ. ಹುಟ್ಟಿನಲ್ಲಿ ಅಂಗವಿಕಲನಾಗಿದ್ದ ಮಾಸ್ಟರ್ ಕಾರ್ತಿಕ್ ದೈವ ದೇವರ ಹರಿಕೆಯಿಂದ ನಡೆಯುವಂತಾಗಿದ್ದು ಪೋಷಕರಿಗೆ ಅಚ್ಚರಿಯನ್ನುಂಟು ಮಾಡಿತ್ತು.

ಕಾರ್ತಿಕ್ ಕೊರಗಜ್ಜ ದೈವದ ಹಾಗೂ ಇನ್ನಿತರ ದೈವದ ಹಾಡುಗಳನ್ನು ಬಾಯಿಪಾಠ ಮಾಡಿಕೊಳ್ಳುತ್ತಿದ್ದ. ಇದೀಗ ಈತ ಹಾಡಿರುವ ಹಾಡುಗಳು ಬಾರಿ ವೈರಲ್ ಆಗಿದ್ದು..

ಕಾರ್ತಿಕ್ ಕಷ್ಟವನ್ನರಿತ ಕಾರ್ಕಳ ತಾಲೂಕು ದೈವಾರಾಧಕರ ಸಂಘದ ಪದಾಧಿಕಾರಿಗಳು ನಿನ್ನೆ ಕಾರ್ಕಳದಲ್ಲಿರುವ ಆತನ ಮನೆಗೆ ಭೇಟಿ ನೀಡಿ ಸಮ್ಮಾನಿಸುವ ಮೂಲಕ ಆತನನ್ನು ಗುರುತಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ಅಶೋಕ್ ಶೆಟ್ಟಿ ಮಾಳ, ಪ್ರಧಾನ ಕಾರ್ಯದರ್ಶಿ ಸದಾನಂದ ಸಾಲಿಯಾನ್ ಕೆರ್ವಾಸೆ, ಉಪಾಧ್ಯಕ್ಷರು ಸಚಿನ್ ಸಾಲಿಯಾನ್, ಗೌರವ ಸಲಹೆಗಾರರಾದ ಸೂರ್ಯಕಾಂತ್ ದೇವಾಡಿಗ ಕಾರ್ಕಳ, ಸಾಣೂರು ವಲಯದ ಉಪಾಧ್ಯಕ್ಷರಾದ ಬಾರಾಡಿ ಬೊಗ್ಗು ಪಾಣಾರ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಬಾರಾಡಿ ಮೊಂಟು ಪಾಣಾರ, ಸೇಸಪ್ಪ ಪಾಣಾರ ಮೂರೂರು ಹಾಗೂ ಇನ್ನಿತರರು ಉಪಸ್ಥಿತರಿದ್ದು. ಮಾಸ್ಟರ್ ಕಾರ್ತಿಕ್ ಗೆ ಶುಭ ಹಾರೈಸಿದರು.
ಈ ಬಡ ಸಂಸಾರಕ್ಕೆ ಸಹಾಯ ನೀಡಲಿಚ್ಚಿಸುವವರು ಸಂಪರ್ಕಿಸಿ : 7022145910

ಉಡುಪಿ ಜಿಲ್ಲಾಡಳಿತದಿಂದ ಕನ್ನಡ ರಾಜ್ಯೋತ್ಸವ ಆಚರಣೆ

Posted On: 01-11-2020 09:13PM

ಉಡುಪಿ : ಜಿಲ್ಲಾಡಳಿತ ಉಡುಪಿ ಜಿಲ್ಲೆ ವತಿಯಿಂದ , 65 ನೇ ಕನ್ನಡ ರಾಜ್ಯೋತ್ಸವ ದಿನಾಚರಣೆಯನ್ನು ನವೆಂಬರ್ 1 ರಂದು ಅಜ್ಜರಕಾಡು ಮಹಾತ್ಮಗಾಂಧೀ ಕ್ರೀಡಾಂಗಣದಲ್ಲಿ ಆಚರಿಸಲಾಯಿತು. ಜಿಲ್ಲಾಧಿಕಾರಿ ಜಿ.ಜಗದೀಶ್ ,ತಾಯಿ ಭುವನೇಶ್ವರಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಂತರ ಧ್ವಜಾರೋಹಣ ನೆರವೇರಿಸಿ, ಕನ್ನಡ ರಾಜ್ಯೋತ್ಸವದ ಸಂದೇಶ ನೀಡಿದರು.

ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಕರಾವಳಿ ಕಾವಲು ಪೊಲೀಸ್, ಗೃಹ ರಕ್ಷಕ ದಳ, ಅರಣ್ಯ ಇಲಾಖೆ ಮತ್ತಿತರ ತಂಡಗಳಿAದ ಆಕರ್ಷಕ ಪಥ ಸಂಚಲನ ನಡೆಯಿತು. ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 36 ಮಂದಿ ಸಾಧಕರಿಗೆ ಮತ್ತು 4 ಸಂಘ ಸಂಸ್ಥೆಗಳಿಗೆ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸರಕಾರಿ ಪ್ರೌಢಶಾಲೆಯಲ್ಲಿ ಗರಿಷ್ಠ ಅಂಕ ಪಡೆದ 9 ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಗಳನ್ನು ವಿತರಿಸಲಾಯಿತು.

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಉಚ್ಚಿಲ ಮಹಾಲಕ್ಷ್ಮಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಪ.ಜಾತಿಯ ವಿದ್ಯಾರ್ಥಿನಿ ಕು.ಸ್ಪೂರ್ತಿ ಅಶೋಕ ರಾಥೋಡ ಮತ್ತು ಕೊಲ್ಲೂರಿನ ಶ್ರೀ ಮೂಕಾಂಬಿಕಾ ಪ್ರೌಢಶಾಲೆಯ ಪ.ಪಂಗಡದ ವಿದ್ಯಾರ್ಥಿನಿ ಕು.ರಶ್ಮಿತಾ ಇವರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ, ಸ್ವಾತಂತ್ರ್ಯ ಹೋರಾಟದ ಭಾಗವಾದ ಹಲಗಲಿ ಬೇಡರ ಬಂಡಾಯದಲ್ಲಿ ಹುತಾತ್ಮರಾದ ಜಡಗ ಮತ್ತು ಬಲ ಇವರ ಸ್ಮರಣಾರ್ಥ 1 ಲಕ್ಷ ರೂಪಾಯಿಗಳ ಬಹುಮಾನ ನೀಡಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಸಕ ರಘುಪತಿಭಟ್, ಕರಾವಳಿ ಅಭಿವೃದ್ದಿ ಪ್ರಾದಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಉಡುಪಿ ನಗರಾಬಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಜಿಲ್ಲಾ ಪಂಚಾಯತ್ ಸಿಇಓ ಡಾ. ನವೀನ್ ಭಟ್, ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು , ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಉಪಸ್ಥಿತರಿದ್ದರು. ಕೋವಿಡ್ ಹಿನ್ನಲೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ನೇರಪ್ರಸಾರವನ್ನು ಸಾರ್ವಜನಿಕರು ಮನೆಯಲ್ಲಿಯೇ ಕುಳಿತು, ವೆಬ್‌ಕಾಸ್ಟ್ ಮತ್ತು ಫೇಸ್‌ಬುಕ್ ಲೈವ್ ಮೂಲಕ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು.

ಯುವವಾಹಿನಿ (ರಿ) ಕಾಪು ಘಟಕದ ಪದಪ್ರಧಾನ ಸಮಾರಂಭ, ಸಾಧಕರಿಗೆ ಸಮ್ಮಾನ

Posted On: 01-11-2020 08:52PM

ಕಾಪು, ನ. ೧: ಬ್ರಹ್ಮಶ್ರೀ ನಾರಾಯಣಗುರುಗಳ ಸಂದೇಶದ ಪ್ರತಿಪಾಲನೆ, ಮೂಲತತ್ವಗಳನ್ನು ಅನುಸರಿಸುತ್ತಾ ವಿದ್ಯೆ, ಉದ್ಯೋಗ ಮತ್ತು ಸಂಪರ್ಕದ ಉದ್ದೇಶವನ್ನು ಇಟ್ಟುಕೊಂಡು ಮುನ್ನಡೆಯುತ್ತಿರುವ ಯುವವಾಹಿನಿ ಸಂಘಟನೆಯು ಸಮಾಜದ ಜನರಲ್ಲಿ ವ್ಯಕ್ತಿತ್ವ ವಿಸನಕ್ಕೆ ಪೂರಕವಾದ ಅವಕಾಶಗಳನ್ನು ಒದಗಿಸಿಕೊಡುತ್ತಾ ಬರುತ್ತಿದೆ ಎಂದು ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಕೇಂದ್ರ ಸಮಿತಿಯ ನಿಯೋಜಿತ ಅಧ್ಯಕ್ಷ ಡಾ| ರಾಜಾರಾಮ್ ಉಪ್ಪಿನಂಗಡಿ ಹೇಳಿದರು. ಕಾಪು ಬಿಲ್ಲವರ ಸಹಾಯಕ ಸಂಘದ ಸಭಾಭನದಲ್ಲಿ ನ.೧ರಂದು ಆಯೋಜಿಸಲಾಗಿದ್ದ ಯುವವಾಹಿನಿ ಕಾಪು ಘಟಕದ ೨೦೨೦-೨೧ನೇ ಸಾಲಿನ ನೂತನ ಪದಾಽಕಾರಿಗಳ ಪದಪ್ರಧಾನ ಸಮಾರಂಭದಲ್ಲಿ ಪ್ರತಿಜ್ಞಾ ವಿಧಿ ಬೋದಿಸಿ ಅವರು ಮಾತನಾಡಿದರು. ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತಾ ಹೋಗುವಾಗ ನಮ್ಮ ಅಗತ್ಯತೆಗಳನ್ನು ಅರಿತುಕೊಂಡು ನಾವು ಮುನ್ನಡೆಯಬೇಕಿದೆ. ಕುಟುಂಬ, ಉದ್ಯೋಗ ಮತ್ತು ಸಂಘಟನೆ ಎಂಬ ಮೂರು ವಿಧದ ಜೀವನ ಶೈಲಿಯೊಂದಿಗೆ ಮುನ್ನಡೆದಾಗ ಮಾತ್ರಾ ಸಂಘಟನೆ ಯಶಸ್ವಿಯಾಗಿ ಬೆಳೆಯಲು ಸಾಧ್ಯವಿದೆ. ಯುವವಾಹಿನಿ ಕೇಂದ್ರ ಸಮಿತಿಯ ಕಾರ್ಯಕ್ರಮಗಳೊಂದಿಗೆ, ಘಟಕ ಮಟ್ಟದಲ್ಲೂ ವಿವಿಧ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಕಾಪು ಯುವವಾಹಿನಿ ಘಟಕವನ್ನು ಮಾದರಿ ಘಟಕವನ್ನಾಗಿ ಮೂಡಿ ಬರುವಂತೆ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ಯುವವಾಹಿನಿ ಕಾಪು ಘಟಕದ ೨೦೨೦-೨೧ನೇ ಸಾಲಿನ ಅಧ್ಯಕ್ಷರಾಗಿ / ಪ್ರಥಮ ಮಹಿಳಾ ಅಧ್ಯಕ್ಷರಾಗಿ ನಿಯೋಜನೆಗೊಂಡ ಸೌಮ್ಯ ರಾಕೇಶ್ ಅವರಿಗೆ ನಿರ್ಗಮನ ಅಧ್ಯಕ್ಷ ನಾಗೇಶ್ ಸುವರ್ಣ ಅವರು ಅಧಿಕಾರ ಹಸ್ತಾಂತರಿಸಿದರು. ಕಾಪು ಬಿಲ್ಲವರ ಸಹಾಯಕ ಸಂಘದ ಗೌರವಾಧ್ಯಕ್ಷ ಪ್ರಭಾಕರ್ ಪೂಜಾರಿ ಕಾಪು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭ ಹಾರೈಸಿದರು. ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ  ಲಕ್ಷ್ಮಣ್ ಸಾಲ್ಯಾನ್, ಉಪಾಧ್ಯಕ್ಷ ಉದಯ ಅಮೀನ್ ಮೂಲ್ಕಿ, ಸಂಘಟನಾ ಕಾರ್ಯದರ್ಶಿ ರಮೇಶ್ ಕೋಟ್ಯಾನ್, ಯುವವಾಹಿನಿ ಕಾಪು ಘಟಕದ ಮಾಜಿ ಅಧ್ಯಕ್ಷ ದೀಪಕ್ ಕುಮಾರ್ ಎರ್ಮಾಳ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾಪು ಪುರಸಭೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅನಿಲ್ ಕುಮಾರ್, ಯುವವಾಹಿನಿ ಕೇಂದ್ರ ಸಮಿತಿಯ ನಿಯೋಜಿತ ಅಧ್ಯಕ್ಷ ಡಾ| ರಾಜಾರಾಮ್, ಯುವವಾಹಿನಿ ಕಾಪು ಘಟಕದ ನಿರ್ಗಮನ ಅಧ್ಯಕ್ಷ ನಾಗೇಶ್ ಸುವರ್ಣ ಅವರನ್ನು ಸಮ್ಮಾನಿಸಿ, ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯುವವಾಹಿನಿ ಅಧ್ಯಕ್ಷ ನಾಗೇಶ್ ಸುವರ್ಣ ಪ್ರಸ್ತಾವನೆಗೈದು ಸ್ವಾಗತಿಸಿದರು. ಕಾರ್ಯದರ್ಶಿ ಸುಧಾಕರ್ ಸಾಲ್ಯಾನ್ ವರದಿ ವಾಚಿಸಿ, ವಂದಿಸಿದರು.

ರಾಜ್ಯೋತ್ಸವದ ಪ್ರಯುಕ್ತ ರಾಜ್ಯ ಮಟ್ಟದ ಕಾನನ ಕವಿ ಕಾವ್ಯ ಸಂಭ್ರಮ

Posted On: 01-11-2020 08:27PM

ಅಜೆಕಾರು : ರಾಜ್ಯೋತ್ಸವದ ಪ್ರಯುಕ್ತ ರಾಜ್ಯ ಮಟ್ಟದ ಕಾನನ ಕವಿ ಕಾವ್ಯ ಸಂಭ್ರಮ ನ.1ರಂದು ಕುಪಾ೯ಡಿ ಕಾನನ ಮಂಟಪದಲ್ಲಿ ನಡೆಯಿತು. ಪಡಿಮಂಚಕ್ಕೆ ಭತ್ತದ ತೆನೆ ಬಡಿಯುವ ಮೂಲಕ ಉದ್ಘಾಟನೆ ನೆರವೇರಿಸಿ ಮಾತನಾಡಿದ, ಸಾಹಿತಿ ಕಾಂತಾವರ ಶಿವಾನಂದ ಶೆಣೈ ಈ ರಾಜ್ಯೋತ್ಸವ ಕಾಯ೯ಕ್ರಮ ವಷ೯ ಪೂತಿ೯ ನಡೆಯಬೇಕು. ಕಾಡಿನಲ್ಲಿ ಕವಿಗೋಷ್ಠಿ ವಿನೂತನ ಪ್ರಯೋಗವಾಗಿದೆ. ಕವಿಗಳು ತಮ್ಮ ಭಾಷಾ ಪ್ರಾಮುಖ್ಯದಿಂದ ಉತ್ತಮ ಕವನಗಳು ಮೂಡಿಬರಲಿ ಎಂದರು.

ಅಧ್ಯಕ್ಷತೆ ವಹಿಸಿದ ನಿವೃತ್ತ ಶಿಕ್ಷಕ,ಸಾಹಿತಿ ಮೌರಿಸ್ ತಾವ್ರೋ ಮಾತನಾಡಿ ಈ ರೀತಿಯ ಕಾಯ೯ಕ್ರಮ ರಾಜ್ಯಮಟ್ಟದಲ್ಲಿ ಬೆಳೆಯಲಿ ಎಂದು ಶುಭ ಹಾರೈಸಿದರು.ವೇದಿಕೆಯಲ್ಲಿ ಬಾಲಕೃಷ್ಣ ಹೆಗ್ಡೆ, ಸುರೇಂದ್ರ ಮೋಹನ್, ಸಂಘಟಕ ಶೇಖರ ಅಜೆಕಾರು ಉಪಸ್ಥಿತರಿದ್ದರು. ಈ ಸಂದಭ೯ದಲ್ಲಿ ಗಿನ್ನೆಸ್ ಸಾಧನೆ ಮಾಡಿದ ಪ್ರಮೀಳಾ ಶೆಟ್ಟಿ, ಸೋಮೆಶ್ವರರವರನ್ನು ಗೌರವಿಸಲಾಯಿತು.ಶ್ರಜನ್ಯ ರವರಿಂದ ಭರತನಾಟ್ಯ ನಡೆಯಿತು. ನಂತರ ವಿವಿಧ ಕವಿಗಳ ಮೂಲಕ ಕವಿಗೋಷ್ಠಿ ನಡೆಯಿತು. ಅಖಿಲ ಕನಾ೯ಟಕ ಬೆಳದಿಂಗಳ ಸಾಹಿತ್ಯ ಸಮಿತಿ, ಆದಿ ಗ್ರಾಮೋತ್ಸವ ಮತ್ತು ಕ .ಸಾ.ಪ ಅಜೆಕಾರು ಹೋಬಳಿಯಿಂದ ಈ ಕಾಯ೯ಕ್ರಮ ನಡೆಯಿತು. ಸುನಿಧಿ, ಸುನಿಜಾ ಪ್ರಾರ್ಥಿಸಿ, ರಾಘವೇಂದ್ರ ಪ್ರಭು ಕರ್ವಾಲು ಕಾರ್ಯಕ್ರಮ ನಿರೂಪಿಸಿದರು.

ಸ್ವಚ್ಛ ಭಾರತ್ ಫ್ರೆಂಡ್ಸ್ ಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

Posted On: 01-11-2020 08:19PM

೬ ವರ್ಷಗಳಿಂದ ಸ್ವಚ್ಛ ಭಾರತ, ಸ್ವಸ್ಥ ಭಾರತ, ಗ್ರಾಮ ಭಾರತ ಮತ್ತು ಡಿಜಿಟಲ್ ಭಾರತ ಅಡಿಯಲ್ಲಿ ಹಲವಾರು ಸಮಾಜಮುಖಿ ಯೋಜನೆಗಳೊಂದಿಗೆ ಉಡುಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಚ್ಛ ಭಾರತ್ ಫ್ರೆಂಡ್ಸ್ ಸಂಘಕ್ಕೆ ೨೦೨೦ ನೇ ಸಾಲಿನ ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಇಂದು ಅಜ್ಜರಕಾಡು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್, ಉಡುಪಿ ಶಾಸಕ ಕೆ. ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಪಂಚಾಯತ್ ಸಿಇಓ ಡಾ. ನವೀನ್ ಭಟ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಎಸ್ಪಿ ವಿಷ್ಣುವರ್ಧನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ, ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಕನ್ನಡ ಸಾಹಿತ ಪರಿಷತ್ ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಸ್ವಚ್ಛ ಭಾರತ್ ಫ್ರೆಂಡ್ಸ್ ಸಂಚಾಲಕ ಗಣೇಶ್ ಪ್ರಸಾದ್ ಜಿ. ನಾಯಕ್, ಜಿಲ್ಲಾ ಸಂಯೋಜಕ ರಾಘವೇಂದ್ರ ಪ್ರಭು ಕರ್ವಾಲು, ಜಗದೀಶ್ ಶೆಟ್ಟಿ, ಉದಯ ನಾಯ್ಕ್, ಶಕೀರ್ ಹಾವಂಜೆ, ವೀಕ್ಷಿತ್, ರಫೀಕ್ ಖಾನ್ ಉಪಸ್ಥಿತರಿದ್ದರು.