Updated News From Kaup

ಕಾಪು : ಆದಿತ್ಯ ಬಿರ್ಲಾ ಸಮಗ್ರ ರಕ್ಷಣಾ ಯೋಜನೆ ಅಫಘಾತ ವಿಮಾ ಯೋಜನೆ ನೋಂದಣಿ ಶಿಬಿರ

Posted On: 20-06-2024 11:47AM

ಕಾಪು : ಇಲ್ಲಿನ ಮಜೂರು ಗ್ರಾಮ ಪಂಚಾಯತ್ ಹಾಗೂ ಭಾರತೀಯ ಅಂಚೆ ಇಲಾಖೆ ಉಡುಪಿ ವಿಭಾಗ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್‌ ಇವರ ಸಹಯೋಗದೊಂದಿಗೆ ಆದಿತ್ಯ ಬಿರ್ಲಾ ಸಮಗ್ರ ರಕ್ಷಣಾ ಯೋಜನೆ ಅಫಘಾತ ವಿಮಾ ಯೋಜನೆ ನೋಂದಣಿ ಮತ್ತು ಆಧಾ‌ರ್ ತಿದ್ದುಪಡಿ ಹಾಗೂ ಹೊಸ ನೋಂದಣಿ ಕಾರ್ಯಕ್ರಮ ಇಂದು ಮಜೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾಪು‌ : ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಯಿ ಪೀಠಾಧೀಶ್ವರ ಶ್ರೀ ಸಾಯಿ ಈಶ್ವರ್ ಗುರೂಜಿ ಹೊಸ ಮಾರಿಗುಡಿ ಭೇಟಿ

Posted On: 19-06-2024 11:12PM

ಕಾಪು : ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಯಿ ಪೀಠಾಧೀಶ್ವರ ಶ್ರೀ ಸಾಯಿ ಈಶ್ವರ್ ಗುರೂಜಿಯವರು ಕಾಪು ಮಾರಿಯಮ್ಮನ ದರುಶನಕ್ಕಾಗಿ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಆಗಮಿಸಿ ಶ್ರೀದೇವಿಯ ದರುಶನ ಪಡೆದರು.

ಐಎಂಎ ರಾಜ್ಯ ವೈದ್ಯ ಪ್ರಶಸ್ತಿಗೆ ಡಾ|| ಸುಧಾ ಡಿ.ಕಾಮತ್ ಆಯ್ಕೆ ; ಅಭಿನಂದನೆ

Posted On: 19-06-2024 04:52PM

ಉಡುಪಿ : ಭಾರತೀಯ ವೈದ್ಯಕೀಯ ಸಂಘ ಕನಾ೯ಟಕ ವತಿಯಿಂದ ನಡೆಯಲಿರುವ ವೈದ್ಯರ ದಿನದಂದು ರಾಜ್ಯ ಮಟ್ಟದ ವೈದ್ಯ ಪ್ರಶಸ್ತಿಗೆ ಆಯ್ಕೆಯಾಗಿರುವ ಹಿರಿಯಡಕದ ಹಿರಿಯ ವೈದ್ಯರಾಗಿರುವ ಡಾ|| ಸುಧಾ ಡಿ. ಕಾಮತ್ ರವರನ್ನು ಜೂನ್ 19 ರಂದು ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ವತಿಯಿಂದ ಗೌರವಿಸಲಾಯಿತು.

ಕಾಪು : ದಂಡತೀರ್ಥ ಶಾಲೆಯಲ್ಲಿ ಶಾಲಾ ಸಂಸತ್ತು ಉದ್ಘಾಟನೆ

Posted On: 18-06-2024 06:51PM

ಕಾಪು : ಇಲ್ಲಿನ ಉಳಿಯಾರಗೋಳಿ ದಂಡತೀರ್ಥ ವಿದ್ಯಾಸಂಸ್ಥೆಯಲ್ಲಿ ಶಾಲಾ ಸಂಸತ್ತನ್ನು ಪೊಲಿಪು ಪದವಿಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕರಾದ ಸುಧಾಕರ್ ಎಮ್. ಎ. ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಶಾಲಾ ಜೀವನದಿಂದಲೇ ವಿದ್ಯಾರ್ಥಿಗಳಿಗೆ ಸಂಸತ್ತಿನ ಅರಿವು ಮೂಡಿಸಿ, ಆಡಳಿತಾತ್ಮಕ ವಿಚಾರಗಳನ್ನು ತಿಳಿಸಿದರೆ ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಬಲಯುತರಾಗುತ್ತಾರೆ ಹಾಗೂ ಸಮಾಜಕ್ಕೆ ಒಳ್ಳೆಯ ಆಡಳಿತವನ್ನು ನೀಡಲು ಸಾಧ್ಯವಾಗುತ್ತದೆ ಎಂಬ ಸಂದೇಶವನ್ನು ನೀಡಿದರು.

ಪಡುಬಿದ್ರಿ : ಎಸ್ ಬಿ ವಿ ಪಿ ಹಿ.ಪ್ರಾ. ಶಾಲೆ, ಗಣಪತಿ ಪ್ರೌಢಶಾಲೆ - ವಿದ್ಯಾನಿಧಿ ಪ್ರದಾನ ಸಮಾರಂಭ

Posted On: 18-06-2024 06:13PM

ಪಡುಬಿದ್ರಿ : ಇಲ್ಲಿನ ಶ್ರೀ ಬ್ರಹ್ಮ ವಿದ್ಯಾ ಪ್ರಕಾಶಿನಿ ಹಿರಿಯ ಪ್ರಾಥಮಿಕ ಶಾಲೆ, ಗಣಪತಿ ಪ್ರೌಢಶಾಲೆ ಪಡುಬಿದ್ರಿ, ಪಡುಬಿದ್ರಿ ಗಣಪತಿ ಪ್ರೌಢಶಾಲಾ ಹಳೆವಿದ್ಯಾರ್ಥಿ ಸಂಘ ಇವರ ಸಹಯೋಗದಲ್ಲಿ ಕನ್ನಡ ಮಾಧ್ಯಮ ಶಾಲೆಯ ಪುನರುತ್ಥಾನದ ದೃಢ ಸಂಕಲ್ಪದೊಂದಿಗೆ ಜೂ.18 ರಂದು ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳಲಾದ ವಿದ್ಯಾನಿಧಿ - ಪ್ರದಾನ ಸಮಾರಂಭವನ್ನು ಕಾಪು ವಿಧಾನಸಭಾ ‌ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿ, ಶುಭ ಹಾರೈಸಿದರು.

ಜೂ. 29 - 30 : ಕಾಪುವಿನಲ್ಲಿ ಪ್ರಥಮ ರಾಷ್ಟ್ರ ಮಟ್ಟದ ಒಪನ್ ಫಿಡೇ ರೇಟೆಡ್ ರ್‍ಯಾಪಿಡ್ ಚೆಸ್ ಸ್ಪರ್ಧೆ

Posted On: 18-06-2024 05:53PM

ಕಾಪು : ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್ ಕಾಪು ಮತ್ತು ಉಡುಪಿ ಇವರ ವತಿಯಿಂದ ಜೂ. 29 ಮತ್ತು 30 ರಂದು ಕಾಪು ಶ್ರೀ ಹಳೆ ಮಾರಿಯಮ್ಮ ಸಭಾಭವನದಲ್ಲಿ ಕಾಪುವಿನಲ್ಲಿ ಪ್ರಥಮ ರಾಷ್ಟ್ರ ಮಟ್ಟದ ಒಪನ್ ಫಿಡೇ ರೇಟೆಡ್ ರ್‍ಯಾಪಿಡ್ ಚೆಸ್ ಸ್ಪರ್ಧೆ ನಡೆಯಲಿದೆ ಎಂದು ಸಂಸ್ಥೆಯ ಸ್ಥಾಪಕ ಸಾಕ್ಷಾತ್ ಯು.ಕೆ. ತಿಳಿಸಿದರು. ಅವರು ಮಂಗಳವಾರ ಕಾಪು ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.

ಕುಲಾಲ ಸಂಘ ಹೆಬ್ರಿ ತಾಲೂಕು ಇದರ ಮಹಿಳಾ ಘಟಕದ ಉದ್ಘಾಟನೆ

Posted On: 17-06-2024 11:41AM

ಹೆಬ್ರಿ : ಕುಲಾಲ ಸಂಘ ಹೆಬ್ರಿ ತಾಲೂಕು ಇದರ ಮಹಿಳಾ ಘಟಕದ ಉದ್ಘಾಟನಾ ಸಮಾರಂಭವು ಜೂ.16ರಂದು ತ್ರಿಷಾ ಸಭಾಭವನ ಹೆಬ್ರಿ ಇಲ್ಲಿ ಜರಗಿತು. ಮಹಿಳಾ ಘಟಕದ ಉದ್ಘಾಟನೆಯನ್ನು ಹೆಬ್ರಿ ಶ್ರೀ ರಾಮ್ ಜ್ಯುವೆಲರಿನ ಜಯಶ್ರೀ ನಾರಾಯಣ್ ಕೆ. ಕುಲಾಲ್ ಇವರು ನೆರವೇರಿಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಜನವಿರೋಧಿ ನೀತಿ ಪ್ರದರ್ಶಿಸಿದೆ : ಶಾಸಕ ಗುರ್ಮೆ ಸುರೇಶ್ ಶೆಟ್ಟಿ

Posted On: 17-06-2024 10:39AM

ಕಾಪು : ರಾಜ್ಯ ಕಾಂಗ್ರೆಸ್ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಏಕಾಏಕಿ ಶೇ.4ರಷ್ಟು ಹೆಚ್ಚಿಸಿದ ರಾಜ್ಯ ಸರಕಾರದ ನೀತಿ ಖಂಡನೀಯ. ಪೆಟ್ರೋಲ್ ಹಾಗೂ ಡೀಸೆಲ್‌ ಬೆಲೆಯನ್ನು ಏರಿಸುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಜನವಿರೋಧಿ ನೀತಿ ಪ್ರದರ್ಶಿಸಿದೆ.

ಪಡುಬಿದ್ರಿ : ಏಳು ಮಾಗಣೆ ಕೂಟ ಹೊಸ ಪದಾಧಿಕಾರಿಗಳ ಆಯ್ಕೆ

Posted On: 17-06-2024 10:10AM

ಪಡುಬಿದ್ರಿ : ಸಾವಿರ ಸೀಮೆಯ ಶ್ರೀ ಕೋಡ್ದಬ್ಬು ದೈವಸ್ಥಾನಗಳೊಂದಿಗೆ ಪರಂಪರಾಗತ ಮುಂಡಾಲ ಸಮುದಾಯದ ಈ ಹಿಂದಿನ ಧಾರ್ಮಿಕ ಪರಂಪರೆಯನ್ನು ಉಳಿಸುತ್ತ, ಭವಿಷ್ಯತ್ತಿನ ದಿನಗಳಿಗೆ ಸಮುದಾಯದ ಐಕ್ಯತೆಯ ಮತ್ತು ಸ್ವಾಭಿಮಾನವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಏಳು ಮಾಗಣೆಗೆ ಹೊಸ ಚೈತನ್ಯ ನೀಡುವ ಸಂಕಲ್ಪದೊಂದಿಗೆ ಏಳು ಮಾಗಣೆ ಕೂಟ 2024 - 27 ಸಾಲಿನ ಹೊಸ ಪದಾಧಿಕಾರಿಗಳ ಆಯ್ಕೆ ರವಿವಾರ ಪಡುಬಿದ್ರಿ ಸಂತೆಕಟ್ಟೆ ಕೋಡ್ದಬ್ಬು ದೈವಸ್ಥಾನದಲ್ಲಿ ಜರಗಿತು.

ಮುದರಂಗಡಿ : ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜರವರಿಗೆ ಅಭಿಮಾನಿ ಬಳಗದ ವತಿಯಿಂದ ಹುಟ್ಟೂರ ಸನ್ಮಾನ

Posted On: 16-06-2024 04:22PM

ಮುದರಂಗಡಿ :ವಿದ್ಯಾರ್ಥಿ ದಿಸೆಯಿಂದ ರಾಜಕೀಯದ ಬಗೆಗೆ ಒಲವು ಹೊಂದಿದ್ದ ಐವನ್ ಡಿಸೋಜರವರು ಎರಡು ಬಾರಿ ವಿಧಾನ ಪರಿಷತ್ತಿನ ಸದಸ್ಯರಾಗಿರುವುದು ಸ್ವಾಗತಾರ್ಹ. ಓರ್ವ ಜನಪರ ಕಾಳಜಿಯ ನಿಸ್ವಾರ್ಥ ಸೇವಕನಾಗಿ ಸಮಾಜಿಕ ಚಿಂತನೆ ಅವರಲ್ಲಿದೆ ಎಂದು ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಹೇಳಿದರು. ಅವರು ಮುಂದರಂಗಡಿ ಸಂತ ಫ್ರಾನ್ಸಿಸ್ ಚಚ್೯ ವಠಾರದಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಐವನ್ ಡಿಸೋಜರವರಿಗೆ ಅಭಿಮಾನಿ ಬಳಗದ ವತಿಯಿಂದ ಜರಗಿದ ಹುಟ್ಟೂರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.