Updated News From Kaup
ಕಾಪು : ರೋಟರಿ ಸಮುದಾಯದಳ ಇನ್ನಂಜೆ ಪದಪ್ರದಾನ
Posted On: 13 Aug 2024, 10:07 PM
ಕಾಪು : ರೋಟರಿ ಸಮುದಾಯದಳ ಇನ್ನಂಜೆ ಇದರ ಪದಪ್ರದಾನ ಸಮಾರಂಭವು ರೋಟರಿ ಭವನ ಶಂಕರಪುರದಲ್ಲಿ ಜರುಗಿತು. ನೂತನ ಅಧ್ಯಕ್ಷರಾದ ಪ್ರಶಾಂತ್ ಆಚಾರ್ಯ ಮತ್ತು ನೂತನ ಕಾರ್ಯದರ್ಶಿಯಾದ ವಜ್ರೇಶ್ ಆಚಾರ್ಯ ಇವರಿಗೆ ಪದಪ್ರಧಾನವನ್ನು ರೋಟರಿ ಶಂಕರಪುರದ ಅಧ್ಯಕ್ಷರಾದ ಮಾಲಿನಿ ಶೆಟ್ಟಿ ಇವರು ನೆರವೇರಿಸಿದರು. ರೋಟರಿ ಸಮುದಾಯದಳ 3182 ರ ಜಿಲ್ಲಾ ಸಭಾಪತಿಯಾದ ಪುಂಡಲೀಕ ಮರಾಠೆ ಇವರು ಆರ್ ಸಿ ಸಿ ಬಗ್ಗೆ ಮಾಹಿತಿ ನೀಡಿದರು. ವಲಯ 5 ರ ಸಹಾಯಕ ಗವರ್ನರ್ ಅನಿಲ್ ಡೆಸಾ, ಆರ್ ಸಿ ಸಿ ಜಿಲ್ಲಾ ಪ್ರತಿನಿಧಿಯಾದ ಪ್ರಸಾದ್ ಪಾದೂರು ಉಪಸ್ಥಿತರಿದ್ದರು. ರವಿ ಪ್ರಸಾದ್ ಸ್ವಾಗತಿಸಿದರು. ಜೇಸುದಾಸ್ ಸೋನ್ಸ್ ವರದಿ ವಾಚಿಸಿದರು. ಕಾರ್ಯಕ್ರಮವನ್ನು ಚಂದ್ರ ಪೂಜಾರಿ ನಿರೂಪಿಸಿದರು.
ಆಗಸ್ಟ್ 15 : ಗ್ರಾಮೀಣ ಕಾಂಗ್ರೆಸ್ ಸಮಿತಿ ಪಡುಬಿದ್ರಿ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆ
Posted On: 13 Aug 2024, 10:02 PM
ಪಡುಬಿದ್ರಿ : ಗ್ರಾಮೀಣ ಕಾಂಗ್ರೆಸ್ ಸಮಿತಿ ಪಡುಬಿದ್ರಿ ವತಿಯಿಂದ ಆಗಸ್ಟ್ 15, ಗುರುವಾರ ಪೂರ್ವಾಹ್ನ 8 ಗಂಟೆಗೆ ಸರಿಯಾಗಿ 78ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮ ಪಂಡಿತ್ ತೋಮ ಪೂಜಾರಿ ಆಯುರ್ವೇದ ಸ್ಟೋರ್ ನ ಮುಂಭಾಗ ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಧ್ವಜಸ್ತಂಭದಲ್ಲಿ ಮಾಜಿ ಸಚಿವ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ವಿನಯ ಕುಮಾರ್ ಸೊರಕೆರವರ ಉಪಸ್ಥಿತಿಯಲ್ಲಿ ಜರುಗಲಿದೆ ಎಂದು ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಕರುಣಾಕರ್ ಎಮ್. ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಡುಬಿದ್ರಿ : ಕಂಚಿನಡ್ಕ ಬಳಿ ಟೋಲ್ ನಿರ್ಮಾಣ - ಅಧಿಕಾರಿಗಳು ಮತ್ತು ಹೋರಾಟಗಾರರ ನಡುವೆ ಮಾತಿನ ಚಕಮಕಿ
Posted On: 13 Aug 2024, 05:16 PM
ಪಡುಬಿದ್ರಿ : ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿಯ ಕಂಚಿನಡ್ಕ ಬಳಿ ಟೋಲ್ ಬೂತ್ ನಿರ್ಮಾಣದ ಬಗ್ಗೆ ಪರಿಶೀಲನೆಗೆ ಬಂದಿದ್ದ ಅಧಿಕಾರಿಗಳನ್ನು ಟೋಲ್ ವಿರೋಧಿ ಹೋರಾಟ ಸಮಿತಿಯವರು ತರಾಟೆಗೆ ತೆಗೆದುಕೊಂಡ ಘಟನೆ ಮಂಗಳವಾರ ನಡೆದಿದೆ. ಸ್ಥಳ ಪರಿಶೀಲನೆಗಾಗಿ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ಎಕ್ಸಿಕ್ಯೂಟಿವ್ ಎಂಜಿನಿಯರ್ ರಘು ಎಲ್ ಹಾಗೂ ಸಹಾಯಕ ಎಂಜಿನಿಯರ್ ಹೇಮಂತ್ ಕುಮಾರ್ ಆಗಮಿಸಿದ್ದರು. ಅಧಿಕಾರಗಳು ಸ್ಥಳಕ್ಕೆ ಬರುವ ಸುದ್ದಿ ತಿಳಿದು ಸ್ಥಳದಲ್ಲಿ ಟೋಲ್ ವಿರೋಧಿ ಹೋರಾಟಗಾರರು ಸ್ಥಳದಲ್ಲಿ ಜಮಾಯಿಸಿದ್ದರು. ಸ್ಥಳಕ್ಕೆ ಬಂದ ಅಧಿಕಾರಿಗಳು ಹಾಗೂ ಟೋಲ್ವಿರೋಧಿ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು. ಕೆಲ ಹೊತ್ತು ಪರಿಸ್ಥಿತಿ ಬಿಗಡಾಯಿಸಿದಾಗ ಪೋಲಿಸರ ಮಧ್ಯ ಪ್ರವೇಶದಿಂದ ತಿಳಿಯಾಗಿ ಬಳಿಕ ಮಾಹಿತಿ ನೀಡಲು ಮುಂದಾದಾಗ ಟೋಲ್ ವಿರೋಧಿ ಹೋರಾಟಗಾರರು ಯಾವುದೇ ಕಾರಣಕ್ಕೂ ಇಲ್ಲಿ ಟೋಲ್ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಟ್ಟುಹಿಡಿದರು. ಟೋಲ್ ವಿರೋಧ ಹೋರಾಟ ಸಮಿತಿಯ ಸುಹಾಸ್ ಹೆಗ್ಡೆ ಮಾತನಾಡಿ ಟೋಲ್ನಿರ್ಮಾಣ ಪ್ರಸ್ತಾವನೆ ಇಲ್ಲಿಗೆ ಕೈಬಿಡಬೇಕು ಎಂದು ಒತ್ತಾಯಿಸಿ ಐದು ದಿನಗಳ ಒಳಗಾಗಿ ಬೃಹತ್ ಮಟ್ಟದ ಪ್ರತಿಭಟನೆಯನ್ನು ಆಯೋಜಿಸಲಾಗುವುದು ಎಂದರು.
ಪಡುಬಿದ್ರಿ : ಕಾರ್ಕಳ -ಪಡುಬಿದ್ರಿ ರಸ್ತೆ ಟೋಲ್ ಬೂತ್ ನಿರ್ಮಾಣದ ವಿರುದ್ಧ ಜನಾಗ್ರಹ ಸಭೆ
Posted On: 12 Aug 2024, 08:41 PM
ಪಡುಬಿದ್ರಿ : ಹೋರಾಟದ ಸಂಕಲ್ಪದೊಂದಿಗೆ ಶಾಸಕನಾಗಿ ನಿಮ್ಮ ಜೊತೆ ಇರುತ್ತೇನೆ. ನಾವು ಕೈಗೆ ಬಳೆ ತೊಟ್ಟಿಲ್ಲ. ನಾವೆಲ್ಲರೂ ಪಕ್ಷಾತೀತ, ಜಾತ್ಯಾತೀತ, ಧರ್ಮಾತೀತವಾಗಿ ಒಟ್ಟಾಗಬೇಕು. ನಮ್ಮಲ್ಲಿ ವಿಶ್ವಾಸವಿರಬೇಕು. ಕಂಚಿನಡ್ಕ ಟೋಲ್ ಹಿಂಪಡೆಯದ ಹೊರತು ಹೋರಾಟ ನಿಲ್ಲದು. ಕಾಪು ಕ್ಷೇತ್ರದಲ್ಲಿ ರಾಜ್ಯ ಸರಕಾರ ಮಾಡಲು ಉದ್ದೇಶಿಸಿರುವ ಟೋಲ್ ಎಂದಿಗೂ ಆಗಲು ಬಿಡುವುದಿಲ್ಲ ಎಂದು ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು. ಅವರು ಕಾರ್ಕಳ -ಪಡುಬಿದ್ರಿ ರಸ್ತೆಯ ಟೋಲ್ ಬೂತ್ ನಿರ್ಮಾಣದ ವಿರುದ್ಧ ಪಡುಬಿದ್ರಿ ಉದಯಾದ್ರಿ ದೇವಸ್ಥಾನದಲ್ಲಿ ಜರಗಿದ ಜನಾಗ್ರಹ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಬೆಳ್ಮಣ್ ಟೋಲ್ ಹೋರಾಟ ಸಮಿತಿಯ ಪ್ರಮುಖ, ನ್ಯಾಯವಾದಿ ಸರ್ವಜ್ಞ ತಂತ್ರಿ ಮಾತನಾಡಿ ಜನ ಸೇರಿದಾಗ ಮಾತ್ರ ಹೋರಾಟ ಯಶಸ್ಸು ಸಾಧ್ಯ. ಎಲ್ಲಾ ನಾಯಕರು ಬೆಂಬಲ ನೀಡಬೇಕು. ಜನಾಂದೋಲನ ಉಗ್ರ ಹೋರಾಟವಾಗಬೇಕು. ಸರಕಾರ ಈ ರೀತಿ ಜನರಿಂದ ಟೋಲ್ ಸಂಗ್ರಹಿಸುವ ಬದಲು ನಮ್ಮಲ್ಲಿಯ ಕಾರ್ಯಕ್ರಮಗಳ ಸಂದರ್ಭ ಭಿಕ್ಷಾ ಪಾತ್ರೆ ಇಡಲಿ. ಕಂಚಿನಡ್ಕ ಟೋಲ್ ಹಿಂಪಡೆಯದ ಹೊರತು ಹೋರಾಟ ನಿಲ್ಲದು. ಆರ್ ಟಿ ಐ ಕಾರ್ಯಕರ್ತರಾದ ರಮಾನಾಥ ಮಾತನಾಡಿ ಪ್ರಸ್ತುತ ಇಲ್ಲಿ 5 -6 ಬ್ಲಾಕ್ ಸ್ಪಾಟ್, ಎರಡು ಅಪಾಯಕಾರಿ ಸೇತುವೆ, ಎರಡು ಪೊಲೀಸ್ ಸ್ಟೇಷನ್ಗಳಲ್ಲಿ ನೂರಾರು ಅಪಘಾತಗಳ ದೂರುಗಳಿವೆ. ನಮ್ಮ ರಾಜ್ಯದಲ್ಲಿ ಇಂತಹ ಮೂರು ಹೈವೇಗಳಿದ್ದು ಅಲ್ಲಿ ರಾಷ್ಟ್ರೀಯ ಹೆದ್ದಾರಿ ಇಲ್ಲದಾಗಿದೆ. ಈ ಭಾಗದ ವ್ಯಾಪಾರ, ಉದ್ದಿಮೆಗಳು ಅತಿ ಹೆಚ್ಚಿನ ಸುಂಕವನ್ನು ಸರಕಾರಕ್ಕೆ ಸಲ್ಲಿಸುತ್ತಿದ್ದಾರೆ. ಈ ಅಂಶಗಳನ್ನು ಕಾನೂನು ತಜ್ಞರೊಂದಿಗೆ ಚರ್ಚಿಸಿ ನ್ಯಾಯಾಲಕ್ಕೆ ತಿಳಿಸಬೇಕಾಗಿದೆ ಎಂದರು. ಕರ್ನಾಟಕ ರಕ್ಷಣಾ ವೇದಿಕೆ ಪ್ರಮುಖ ಅನ್ಸಾರ್ ಅಹಮದ್, ಗುತ್ತಿಗೆದಾರ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಕೆಪಿಸಿಸಿ ಕೋ ಆರ್ಡಿನೇಟರ್ ನವೀನ್ ಚಂದ್ರ ಶೆಟ್ಟಿ, ಕಾಪು ಕ್ಷೇತ್ರದ ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಸಾಮಾಜಿಕ ಕಾರ್ಯಕರ್ತೆ ಅನಿತಾ ಡಿಸೋಜ, ಕೆನರಾ ಬಸ್ ಮಾಲಕರ ಸಂಘದ ಪ್ರತಿನಿಧಿ ಜ್ಯೋತಿ ಪ್ರಸಾದ್, ಬಿಜೆಪಿ ಉಡುಪಿ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಟ್ಯಾಕ್ಸಿ ಮತ್ತು ಮ್ಯಾಕ್ಸಿ ಅಸೋಸಿಯೇಷನ್ ಸದಸ್ಯ ರಮೇಶ್ ಕೋಟ್ಯಾನ್ ಅಭಿಪ್ರಾಯ ಮಂಡಿಸಿದರು ಜನಾಂದೋಲನದಲ್ಲಿ ಜನಾಗ್ರಹ : ಕಾರ್ಕಳ ಪಡುಬಿದ್ರಿ ರಾಜ್ಯ ಹೆದ್ದಾರಿಯಲ್ಲಿ ಕಂಚಿನಡ್ಕ ಪ್ರದೇಶದಲ್ಲಿ ಉದ್ದೇಶಿಸಿರುವ ಸುಂಕ ವಸೂಲಾತಿ ಕೇಂದ್ರಕ್ಕೆ ಸಮಸ್ತ ಕಾರ್ಕಳ ಪಡುಬಿದ್ರಿ ಹೆದ್ದಾರಿಯನ್ನು ಅವಲಂಬಿಸಿರುವ ಸುಮಾರು 40 ಹಳ್ಳಿಗಳ ಜನತೆಯ ಸಂಪೂರ್ಣ ವಿರೋಧ ವ್ಯಕ್ತಪಡಿಸುತ್ತಿದ್ದೇವೆ. ಯಾವುದೇ ಕಾರಣಕ್ಕೂ ಈ ರಾಜ್ಯ ಹೆದ್ದಾರಿಯಲ್ಲಿ ಸುಂಕ ವಸೂಲಾತಿ ಕೇಂದ್ರ ಸ್ಥಾಪಿಸಲು ಅವಕಾಶ ಕೊಡುವುದಿಲ್ಲ. ಈ ಜನಾಗ್ರಹ ಸಭೆಯ ಮೂಲಕ ರಾಜ್ಯ ಸರಕಾರವನ್ನು ಒತ್ತಾಯಿಸುವುದೇನೆಂದರೆ ಜನ ವಿರೋಧಿಯಾಗಿರುವ ಈ ಸುಂಕ ವಸೂಲಾತಿ ಕೇಂದ್ರದ ಪ್ರಸ್ತಾವನೆಯನ್ನು ಈ ಕೂಡಲೇ ಪಡೆಯಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ 40 ಹಳ್ಳಿಯ ಜನರು ಸೇರಿ ಜನಾಂದೋಲನದ ಮೂಲಕ ಉಗ್ರ ಹೋರಾಟ ಮಾಡಲು ಸಿದ್ಧರಿದ್ದೇವೆ ಹಾಗೂ ಜನರ ವಿರೋಧದ ನಡುವೆಯೂ ಸುಂಕ ವಸೂಲಾತಿ ಕೇಂದ್ರ ಸರಕಾರ ರಚಿಸಲು ಮುಂದಾದರೆ ಮುಂದೆ ಆಗುವ ಎಲ್ಲಾ ಅನಾಹುತಗಳಿಗೆ ಸರಕಾರ ಸಂಪೂರ್ಣ ಹೊಣೆಯಾಗಲಿದೆ ಎಂದು ಎಚ್ಚರಿಕೆಯ ಸಂದೇಶ ನೀಡುತ್ತಿದ್ದೇವೆ ಎಂದು ಅಭಿಪ್ರಾಯ ಮಂಡಿಸಲಾಯಿತು. ಜನಾಗ್ರಹ ಸಭೆಯಲ್ಲಿ ಉದ್ಯಮಿ ಸುಹಾಸ್ ಹೆಗ್ಡೆ ನಂದಳಿಕೆಯವರನ್ನು ಸರ್ವಾನುಮತದಿಂದ ಕಾರ್ಕಳ -ಪಡುಬಿದ್ರಿ ಟೋಲ್ ವಿರೋಧಿ ಹೋರಾಟದ ಅಧ್ಯಕ್ಷರನ್ನಾಗಿ ಮತ್ತು ಸಮಿತಿಯ ಪದಾಧಿಕಾರಿಗಳನ್ನು ಆರಿಸಲಾಯಿತು. ವಿವಿಧ ರಾಜಕೀಯ ಪಕ್ಷದ ಮುಖಂಡರುಗಳು, ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು. ದೀಪಕ್ ಕಾಮತ್ ಕಾಂಜರಕಟ್ಟೆ ನಿರೂಪಿಸಿದರು.
ಕಾಪು : ವಲಯ ಕುಲಾಲ ಸಂಘದ ಅಧ್ಯಕ್ಷರಾಗಿ ಹರೀಶ್ ಕುಲಾಲ್ ಬೆಳ್ಳಿಬೆಟ್ಟು ಆಯ್ಕೆ
Posted On: 12 Aug 2024, 09:02 AM
ಕಾಪು : ಕಾಪು ವಲಯ ಕುಲಾಲ ಸಂಘದ ಅಧ್ಯಕ್ಷರಾಗಿ ಹರೀಶ್ ಕುಲಾಲ್ ಬೆಳ್ಳಿಬೆಟ್ಟು, ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್ ಕುಲಾಲ್ ಬಿಳಿಯಾರು, ಉಪಾಧ್ಯಕ್ಷರಾಗಿ ಉದಯ ಕುಲಾಲ್ ಕಳತ್ತೂರು ಆಯ್ಕೆಯಾಗಿದ್ದಾರೆ. ಸಲಹಾ ಸಮಿತಿ ಪ್ರಮುಖರಾಗಿ ಕುಟ್ಟಿ ಮೂಲ್ಯ ಬಡಿಕೇರಿ, ಸಮಿತಿ ನಿರ್ದೇಶಕರಾಗಿ ರಾಜೇಶ್ ಕುಲಾಲ್ ಬೊಬ್ಬೆಟ್ಟು, ಸಂದೀಪ್ ಬಂಗೇರ ಶಂಕರಪುರ, ಜೊತೆ ಕಾರ್ಯದರ್ಶಿಯಾಗಿ ಸುನಿಲ್ ಎಸ್ ಮೂಲ್ಯ, ಕೋಶಾಧಿಕಾರಿಯಾಗಿ ಸುರೇಶ್ ಕುಲಾಲ್ ಕೆಮುಂಡೆಲು, ಲೆಕ್ಕ ಪರಿಶೋಧಕರಾಗಿ ಧೀರಜ್ ಕುಲಾಲ್ ಕುತ್ಯಾರು, ಕ್ರೀಡಾ ಕಾರ್ಯದರ್ಶಿಯಾಗಿ ಯೋಗೀಶ್ ಕುಲಾಲ್ ಪಡುಕುತ್ಯಾರು, ಜೊತೆ ಕ್ರೀಡಾ ಕಾರ್ಯದರ್ಶಿಯಾಗಿ ಮಾಧವ ಮೂಲ್ಯ ಕುಕ್ಕುಂಜ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸತೀಶ್ ಕುಲಾಲ್ ಕಳತ್ತೂರು, ಅರುಣ್ ಕುಲಾಲ್ ಮುಳೂರು, ಪ್ರಧಾನ ಸಂಘಟನಾ ಕಾರ್ಯದರ್ಶಿಯಾಗಿ ಸುಮಂತ್ ಕುಲಾಲ್ ಪಾದೂರು, ಯೋಗೀಶ್ ಕುಲಾಲ್ ಉಳ್ಳೂರು, ಸುರೇಶ್ ಸಾಲಿಯಾನ್ ಕಬಡಿ ಪಡುಬೆಳ್ಳೆ, ಹರಿಶ್ಚಂದ್ರ ಮೂಲ್ಯ ಇರಂದಾಡಿ, ಜನಾರ್ದನ್ ಕುಲಾಲ್ ಪಣಿಯೂರು, ಗಣೇಶ್ ಕುಲಾಲ್ ಎಲ್ಲೂರು, ಭರತ್ ಕುಲಾಲ್ ಶಂಕರಪುರ, ಮನೋಜ್ ಕುಲಾಲ್ ಕುತ್ಯಾರು, ಕಾರ್ತಿಕ್ ಕುಲಾಲ್ ಎರ್ಮಾಳ್ ಆಯ್ಕೆ ಆಗಿರುವರು. ಗೌರವ ಅಧ್ಯಕ್ಷರಾಗಿ ರಾಘು ಮೂಲ್ಯ ಮುಂಬೈ, ಯೋಗೀಶ್ ಕುಲಾಲ್ ಶಿರ್ವ, ಅಶೋಕ್ ಕುಲಾಲ್ ಮುಂಬೈ, ಜಯ ಅಂಚನ್ ಮುಂಬೈ, ದಿನೇಶ್ ಕುಲಾಲ್ ಮುಂಬೈ, ರಮೇಶ್ ಕುಲಾಲ್ ಮುಂಬೈ, ಜಯ ಮೂಲ್ಯ ಮುಂಬೈ ಇವರನ್ನು ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ.
ಪಡುಬಿದ್ರಿ : ಕಾಂಗ್ರೆಸ್ ವತಿಯಿಂದ ಆಟಿದ ತಮ್ಮನ ; ಸಾಧಕರಿಗೆ ಸನ್ಮಾನ ; ನೃತ್ಯೋತ್ಸವ ವೈಭವ
Posted On: 11 Aug 2024, 05:54 PM
ಪಡುಬಿದ್ರಿ : ಕೃಷಿಯು ಮಹತ್ವದ ವೃತ್ತಿಯಾಗಿದ್ದು, ಕಾಂಗ್ರೆಸ್ ಸರಕಾರ ಕೃಷಿಗೆ ಒತ್ತು ನೀಡಿ ಕೃಷಿಕರಿಗೆ ಮಹತ್ವ ನೀಡಿದೆ. ಉಳುವವನೇ ಹೊಲೆದೊಡೆಯ ಕಾನೂನು ಕಾಂಗ್ರೆಸ್ ನ ಮಹತ್ವದ ನಡೆಯಾಗಿತ್ತು. ನನ್ನದೆಂಬುದು ಏನಿಲ್ಲ ಎಂದಾಗ ಜನರಿಗೆ ನೆರವಾದದ್ದು ಕಾಂಗ್ರೆಸ್. ಇಂದು ಸರಕಾರ ತೆರಿಗೆಯ ಮೂಲಕ ಬಡವರ ರಕ್ತ ಹೀರುತ್ತಿದೆ. ಮಹಿಳೆಯರಿಗೆ ಆರ್ಥಿಕ ಸಹಾಯ ನೀಡಿದಾಗ ಮನೆ ಬೆಳಗಲು ಸಾಧ್ಯ ಅದನ್ನು ಪ್ರಸ್ತುತ ರಾಜ್ಯ ಸರಕಾರ ಮಾಡಿದೆ ಎಂದು ರಾಜ್ಯ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು. ಅವರು ಗ್ರಾಮೀಣ ಕಾಂಗ್ರೆಸ್ ಸಮಿತಿ, ಮಹಿಳಾ ಮತ್ತು ಯುವ ಕಾಂಗ್ರೆಸ್ ಪಡುಬಿದ್ರಿ ಇವರ ಆಶ್ರಯದಲ್ಲಿ ಪಡುಬಿದ್ರಿ ಸುಜಾತ ಆಡಿಟೋರಿಯಂ ಸಭಾಂಗಣದಲ್ಲಿ ಕಾಂಗ್ರೆಸ್ ಹಿರಿಯ ಮುತ್ಸದ್ಧಿ ದಿ| ವೈ.ಹಿರಿಯಣ್ಣ ಪಡುಬಿದ್ರಿ ಸಭಾ ವೇದಿಕೆಯಲ್ಲಿ ಜರಗಿದ ಆಟಿದ ತಮ್ಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜನಪದ ಚಿಂತಕ ವಾಮನ ಕೋಟ್ಯಾನ್ ನಡಿಕುದ್ರು ಮಾತನಾಡಿ ಹಿರಿಯರ ನೆನಪು ನಮ್ಮಲ್ಲಿರಬೇಕು. ಬಡತನದಲ್ಲೂ ಆಟಿಯ ಕಾಲದಲ್ಲಿ ಧಣಿಗಳನ್ನು ತೃಪ್ತಿಗೊಳಿಸಿ ಕೂಡು ಕುಟುಂಬದ ಹಸಿವನ್ನು ನುಂಗಿ ಬದುಕಿದ ಸಾರ್ಥಕತೆಯ ಸಮಯವಿದು. ರಾಸಾಯನಿಕಯುಕ್ತ ಆಹಾರದಿಂದ ನಮ್ಮ ಜೀವನ ಮಟ್ಟ ಕುಸಿಯುತ್ತಿದೆ. ಆಟಿಯ ಖಾದ್ಯಗಳ ಸೇವನೆಯಿಂದ ನಮ್ಮ ರೋಗ ರುಜಿನ ನಿರ್ಮೂಲನೆ ಸಾಧ್ಯ ಎಂದರು. ಸಾಧಕರಿಗೆ ಸನ್ಮಾನ : ಭಾರತೀಯ ಸೇನೆಯ ಗಡಿಭದ್ರತಾ ಪಡೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಮೊಯುದ್ದೀನ್ ಪಡುಬಿದ್ರಿ, ಕಾಪು ಪ್ರೆಸ್ ಕ್ಲಬ್ ಅಧ್ಯಕ್ಷರಾದ ಪತ್ರಕರ್ತ ಹರೀಶ್ ಹೆಜಮಾಡಿ, ಚಲನಚಿತ್ರ, ರಂಗಭೂಮಿ ಕಲಾವಿದ ಶಶಿಧರ್ ಗುಜರನ್, ಸಾಮಾಜಿಕ ಕ್ಷೇತ್ರದಲ್ಲಿ ದಿನೇಶ್ ಕಂಚಿನಡ್ಕ, ಪೌರಕಾರ್ಮಿಕರಾದ ಪ್ರಸಾದ್ ಕಂಚಿನಡ್ಕ, ಶಶಿಕುಮಾರ್ ಬೆಳಪು ಇವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭ ಕಾಂಗ್ರೆಸ್ ಹಿರಿಯ ಮುತ್ಸದ್ಧಿ ದಿ| ವೈ.ಹಿರಿಯಣ್ಣರವರ ಪುತ್ರರಾದ ವೈ ಸುಧೀರ್, ವೈ ಸುಕುಮಾರ್ ರನ್ನು ಗೌರವಿಸಲಾಯಿತು. ಭಾರತ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣ, ಪಡುಬಿದ್ರಿ ಸಿಎ ಸೊಸೈಟಿ ಅಧ್ಯಕ್ಷ ವೈ ಸುಧೀರ್ ಕುಮಾರ್, ಕೆಪಿಸಿಸಿ ಸಂಯೋಜಕ ನವೀನ್ ಚಂದ್ರ ಜೆ ಶೆಟ್ಟಿ ಮಾತನಾಡಿದರು. ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಕರುಣಾಕರ ಎಂ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಕಾಪು ಬ್ಲಾಕ್ ಕಾಂಗ್ರೆಸ್ (ಉತ್ತರ) ಸಂತೋಷ್ ಕುಮಾರ್ ಪಕ್ಕಾಲು, ಪಡುಬಿದ್ರಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಕರುಣಾಕರ ಎಂ ಪೂಜಾರಿ, ಕೆಪಿಸಿಸಿ ಸಂಯೋಜಕ ನವೀನ್ ಚಂದ್ರ ಜೆ ಶೆಟ್ಟಿ, ಕೆಎಂಎಫ್ ಮಂಗಳೂರು ನಿರ್ದೇಶಕ ದಿವಾಕರ ಶೆಟ್ಟಿ, ಪಡುಬಿದ್ರಿ ಸಿಎ ಸೊಸೈಟಿ ಅಧ್ಯಕ್ಷ ವೈ ಸುಧೀರ್ ಕುಮಾರ್, ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈ ಸುಕುಮಾರ್, ಕಾಪು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಂತಲತ ಶೆಟ್ಟಿ, ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ (ದಕ್ಷಿಣ) ಪ್ರಧಾನ ಕಾರ್ಯದರ್ಶಿ ನವೀನ್ ಎನ್ ಶೆಟ್ಟಿ, ನಿವೃತ್ತ ವಿಜಯ ಬ್ಯಾಂಕ್ ಮ್ಯಾನೇಜರ್ ಶೀನ ಪೂಜಾರಿ, ಸಮಾಜ ಸೇವಕಿ ಆಶಾ ಸಂದೀಪ್, ಮೀನುಗಾರರ ಜಿಲ್ಲಾಧ್ಯಕ್ಷ ವಿಶ್ವಾಸ್ ವಿ ಅಮೀನ್, ಕಾಪು ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವಿಭಾಗ ಅಧ್ಯಕ್ಷ ದೀಪಕ್ ಕುಮಾರ್ ಎರ್ಮಾಳು, ಕಾಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ರಮೀಝ್ ಹುಸೇನ್, ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಇಂಟೆಕ್ ಅಧ್ಯಕ್ಷ ಗಣೇಶ್ ಕೋಟ್ಯಾನ್, ದಲಿತ ಮುಖಂಡ ಶೇಖರ ಹೆಜಮಾಡಿ, ಪಡುಬಿದ್ರಿ ರೋಟರಿ ಕ್ಲಬ್ ಅಧ್ಯಕ್ಷೆ ತಸ್ರೀನ್ ಅರ, ಪಡುಬಿದ್ರಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಚರಿತ ಲಕ್ಷ್ಮಣ್, ಯುವ ಕಾಂಗ್ರೆಸ್ ಅಧ್ಯಕ್ಷ ಅಶ್ವಥ್ ಎಸ್ ಆಚಾರ್ಯ, ಅಶೋಕ್ ಸಾಲ್ಯಾನ್, ಜ್ಯೋತಿ ಮೆನನ್, ನಿಯಾಝ್, ಸುಧಾಕರ್, ಕೀರ್ತಿ ಪಡುಬಿದ್ರಿ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರಾಜೇಶ್ ಶೇರಿಗಾರ್ ನಿರೂಪಿಸಿ, ವಂದಿಸಿದರು. ಪ್ರತಿಷ್ಠಿತ ಡ್ಯಾಝ್ಲ್ ಸ್ಟುಡಿಯೋ ನೃತ್ಯ ತಂಡದಿಂದ ನೃತ್ಯೋತ್ಸವ ವೈಭವ ಜೊತೆಗೆ ಆಟಿದ ತಮ್ಮನ ಸಾಮೂಹಿಕ ಭೋಜನ ನಡೆಯಿತು.
ಉಡುಪಿ : ಯಶಸ್ವಿ - ಬೆಂಗಳೂರು ದೂರದರ್ಶನ ಕೇಂದ್ರದ 'ಬಿ' ಗ್ರೇಡ್ ಕಲಾವಿದೆಯಾಗಿ ಆಯ್ಕೆ
Posted On: 10 Aug 2024, 05:42 PM
ಉಡುಪಿ : ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿರುವ ಯಶಸ್ವಿ ಇವರು ಬೆಂಗಳೂರು ದೂರದರ್ಶನ ಕೇಂದ್ರದ 'ಬಿ' ಗ್ರೇಡ್ ಕಲಾವಿದೆಯಾಗಿ ಆಯ್ಕೆಯಾಗಿರುತ್ತಾರೆ. ಇವರು ಉಡುಪಿಯ ಪ್ರತಿಷ್ಠಿತ ನೃತ್ಯ ಸಂಸ್ಥೆ ಶ್ರೀ ಭ್ರಾಮರೀ ನಾಟ್ಯಾಲಯ (ರಿ.) ಅಮ್ಮುಂಜೆ ಇಲ್ಲಿನ ಗುರು ವಿದ್ವಾನ್ ಕೆ. ಭವಾನಿಶಂಕರ್ ಇವರ ಶಿಷ್ಯೆಯಾಗಿದ್ದು, ಪುತ್ತೂರು ಸುಬ್ರಹ್ಮಣ್ಯ ನಗರದ ವಿಜಯ್ ಸನಿಲ್ ಹಾಗೂ ಸುಮ ಸನಿಲ್ ಇವರ ಸುಪುತ್ರಿ. ಪ್ರಸ್ತುತ ಇವರು ಡಾ. ಜಿ ಶಂಕರ್ ಕಾಲೇಜು ಸ್ನಾತಕೋತ್ತರ ಹಾಗೂ ಸಂಶೋಧನ ಕೇಂದ್ರ, ಉಡುಪಿ ಇಲ್ಲಿ ಪ್ರಥಮ ವರ್ಷದ ಎಂಕಾಂ ವ್ಯಾಸಂಗ ಮಾಡುತ್ತಿದ್ದಾರೆ.
ಕಿಂಗ್ ಟೈಗರ್ಸ್ ಕಾಪು : 3ನೇ ವರ್ಷದ ಹುಲಿ ವೇಷದ ಆಮಂತ್ರಣ ಪತ್ರಿಕೆ ಬಿಡುಗಡೆ
Posted On: 10 Aug 2024, 05:04 PM
ಕಾಪು : ಕಿಂಗ್ ಟೈಗರ್ಸ್ ಕಾಪು ಇವರ ವತಿಯಿಂದ ಶ್ರೀ ಕೃಷ್ಣಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ಉತ್ಸವದ ಪ್ರಯುಕ್ತ 3ನೇ ವರ್ಷದ ಹುಲಿ ವೇಷದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಆಗಸ್ಟ್ 26 ಮತ್ತು 27 ರಂದು ಎರಡು ದಿನಗಳ ಕಾಲ ಹುಲಿ ವೇಷದ ಸೇವೆ ನಡೆಯಲಿದೆ. ಆಗಸ್ಟ್ 26 ರಂದು ಸೋಮವಾರ ಬೆಳಿಗ್ಗೆ 7 ಗಂಟೆಗೆ ಕಾಂಚನ್ ಮೂಲಸ್ಥಾನ, ಪೊಲಿಪು, ಕಾಪು ಇಲ್ಲಿ ಲೋಬನ ಸೇವೆಯು ಜರಗಲಿದೆ. ಈ ಸಂದರ್ಭ ಕಿಂಗ್ ಟೈಗರ್ಸ್ ಕಾಪು ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.
ಹಿರಿಯಡ್ಕ : ಪ್ರಕೃತಿಯ ಸೊಬಗಿನ ನಡುವೆ ನಾಗಾರಾಧನೆ
Posted On: 09 Aug 2024, 04:17 PM
ಹಿರಿಯಡ್ಕ : ಪ್ರಕೃತಿ ನಡುವೆ ನಡುವೆ ನಡೆಯುತ್ತಿದ್ದ ನಾಗಾರಾಧನೆಯು ಆಧುನಿಕತೆಯ ಭರಾಟೆಯಲ್ಲಿ ಕಾಂಕ್ರೀಟೀಕರಣವಾಗುತ್ತಿರುವ ಸನ್ನಿವೇಶದಲ್ಲಿ ಕೆಲವು ನಾಗಬನಗಳು ಇನ್ನೂ ಹಿಂದಿನ ಸಾಂಪ್ರದಾಯಿಕತೆಯನ್ನು ಉಳಿಸಿಕೊಂಡಿದೆ. ಹಿರಿಯಡಕ ಹಳೆ ಕೋಲ್ಯಾರು ನಾಗಬನ ಇಂದಿಗೂ ಪ್ರಕೃತಿಯ ನಡುವೆ ಭಕ್ತಾದಿಗಳು ನಾಗರ ಪಂಚಮಿಯನ್ನು ನೂರಾರು ಭಕ್ತರು ಭಕ್ತಿ ಶ್ರದ್ಧೆಯಿಂದ ನಾಗನಿಗೆ ತನು ಸಮರ್ಪಿಸಿದರು.
ಸನಾತನ ಹಿಂದೂ ಧರ್ಮರಕ್ಷಣಾ ವೇದಿಕೆಯಿಂದ ಬಾಂಗ್ಲಾದಲ್ಲಿ ಹಿಂದುಗಳ ಮೇಲಿನ ಹಿಂಸಾಚಾರ ಖಂಡಿಸಿ ಜಿಲ್ಲಾಧಿಕಾರಿಗೆ ಮನವಿ
Posted On: 09 Aug 2024, 04:07 PM
ಉಡುಪಿ : ಬಾಂಗ್ಲಾದೇಶದಲ್ಲಿ ಕೆಲವು ದಿನಗಳಿಂದ ಹಿಂದೂ ಶ್ರದ್ಧಾ ಕೇಂದ್ರಗಳ ಧ್ವಂಸ, ಹಿಂದೂಗಳ ಮೇಲೆ ನಡೆಯುತ್ರಿರುವ ಹಿಂಸಾಚಾರ, ಕೊಲೆ ಹಾಗೂ ಮಹಿಳೆಯರ ಅತ್ಯಾಚಾರ ದೌರ್ಜನ್ಯಗಳ ವಿರುದ್ಧ ತಕ್ಷಣ ಮಧ್ಯ ಪ್ರವೇಶ ಮಾಡುವಂತೆ ಸನಾತನ ಹಿಂದೂ ಧರ್ಮರಕ್ಷಣಾ ವೇದಿಕೆಯು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಉಡುಪಿ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿದರು. ಬಾಂಗ್ಲಾದೇಶದಲ್ಲಿ ಕೆಲವು ದಿನಗಳಿಂದ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಿರಂತರವಾಗಿ ಆಗುತ್ತಿರುವ ದೌರ್ಜನ್ಯ ಮತ್ತು ಅತ್ಯಾಚಾರ ಮಾತ್ರವಲ್ಲದೆ ಹಿಂದೂ ದೇವಾಲಯಗಳ ಮೇಲೆ ನಡೆಯುತ್ತಿರುವ ದಾಳಿಯನ್ನು ತಡೆಗಟ್ಟುವ ಸಲುವಾಗಿ ಕೇಂದ್ರ ಸರ್ಕಾರವು ಆದಷ್ಟು ಬೇಗ ಮಧ್ಯಪ್ರವೇಶಿಸಿ ಸೂಕ್ತ ಕ್ರಮವನ್ನು ಕೈಗೊಳ್ಳಬೇಕು. ಹಾಗೆಯೇ ಪೌರತ್ವ ಕಾಯ್ದೆಯಲ್ಲಿ ಮಾಡಿದ ತಿದ್ದುಪಡಿಯಂತೆ ಅಲ್ಪ ಸಂಖ್ಯಾತ ಹಾಗೂ ಅಸಹಾಯಕ ಬಾಂಗ್ಲಾದೇಶದ ಹಿಂದೂಗಳನ್ನು ಆದಷ್ಟು ಶೀಘ್ರವಾಗಿ ಭಾರತಕ್ಕೆ ಕರೆತಂದು ಅವರಿಗೆ ಪುನರ್ವಸತಿಯನ್ನು ಕಲ್ಪಿಸಿ, ಈ ದೇಶದ ಪೌರತ್ವವನ್ನು ನೀಡಲು ತಕ್ಷಣ ಕ್ರಮ ಕೈಗೊಳ್ಳಬೇಕು. ಇದಕ್ಕೆ ಸಂಬಂಧಿಸಿದಂತೆ ಭಾರತ ದೇಶಕ್ಕೆ ನಿರಂತರ ಅಕ್ರಮವಾಗಿ ನುಸುಳುತ್ತಿರುವ ರೋಹಿಂಗ್ಯ ಮುಸ್ಲಿಮರು ಪ್ರಸಕ್ತ ಈಗಿನ ಪರಿಸ್ಥಿತಿಯಲ್ಲಿ ಭಾರತಕ್ಕೆ ಬಹಳ ಅಪಾಯಕಾರಿಯಾಗಬಹುದು. ವಿಶ್ವದಲ್ಲಿ ಭಾರತವು ಒಂದೇ ಹಿಂದೂ ರಾಷ್ಟ್ರವಾಗಿದ್ದು ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಯೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮತ್ತು ಮತಾಂಧ ಅನ್ಯಧರ್ಮೀಯರ ಅಟ್ಟಹಾಸಕ್ಕೆ ನಮ್ಮ ನಿರ್ದೋಷಿ ತಾಯಂದಿರು, ಅಕ್ಕ, ತಂಗಿಯರು ಹಿಂದೂ ಸಮಾಜ ಬಾಂಧವರು ಬಲಿಯಾಗದಂತೆ ತಡೆಯುವ ಜವಾಬ್ದಾರಿಯು ಬಹುಸಂಖ್ಯಾತ ಹಿಂದೂಗಳು ಮತದಾನ ಮಾಡಿ ಚುನಾಯಿಸಿದಂತಹ ನಮ್ಮ ಕೇಂದ್ರ ಸರಕಾರದ ಪ್ರಥಮ ಆದ್ಯತೆ ಆಗಿರಬೇಕು. ಉಡುಪಿ ಜಿಲ್ಲೆಯ ಪ್ರತಿಯೊಬ್ಬ ಹಿಂದೂ ನಾಗರಿಕರಿಗೂ ಭಾರತ ದೇಶದ ಗೌರವಾನ್ವಿತ ಪ್ರಧಾನಮಂತ್ರಿಯವರ ಮೇಲೆ ಸಂಪೂರ್ಣ ವಿಶ್ವಾಸವಿದ್ದು ಕಾಲ ವಿಳಂಬ ಮಾಡದೆ ಬಾಂಗ್ಲಾದೇಶದಲಿ ಇನ್ನಷ್ಟು ಹಿಂದೂಗಳ ಸಾವು ನೋವುಗಳಿಗೆ, ನಮ್ಮ ಶ್ರದ್ಧೆಯ ಮಾತಾ ಭಗಿನಿಯರ ಅತ್ಯಾಚಾರಕ್ಕೆ ಕಾರಣವಾಗದೆ ಅಗತ್ಯವೆನಿಸಿದರೆ ಮಿಲಿಟರಿ ಕಾರ್ಯಾಚರಣೆಯ ಮೂಲಕವಾದರೂ ಅಸಹಾಯಕ ಹಿಂದೂಗಳನ್ನು ರಕ್ಷಿಸಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಈ ಸಂದರ್ಭ ಸಂಘಟನೆಯ ಪ್ರಮುಖರಾದ ಜಿತೇಶ್, ಕುಮಾರಸ್ವಾಮಿ, ಸುಧೀರ್ ಪೂಜಾರಿ, ಶ್ರೀಧರ್, ರವೀಂದ್ರ ಕಾಮತ್, ಮೋಹನ್ ಭಟ್, ಚಿತ್ತನ್ ಮೂಳೂರು, ರಾಜಗೋಪಾಲ್, ಸಂದೀಪ್ ಮತ್ತಿತರರು ಉಪಸ್ಥಿತರಿದ್ದರು.
