Updated News From Kaup

ಶಿರ್ವ : ಉಡುಪಿ -ಚಿಕ್ಕಮಗಳೂರು ಕಾಂಗ್ರೆಸ್‌ ಲೋಕಸಭಾ ಅಭ್ಯರ್ಥಿ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ದೂರು ದಾಖಲು

Posted On: 29-03-2024 10:43PM

ಶಿರ್ವ: ಗ್ರಾಮದ ದೈವಸ್ಥಾನಕ್ಕೆ ತಡರಾತ್ರಿ ಆಗಮಿಸಿ ಸಭೆ ನಡೆಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷದ ಉಡುಪಿ - ಚಿಕ್ಕಮಗಳೂರು ಲೋಕಸಭಾ ಅಭ್ಯರ್ಥಿ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ದೂರು ದಾಖಲಾಗಿದೆ.

ಉಡುಪಿ ಜಿ.ಪಂ. ಮಾಜಿ ಅಧ್ಯಕ್ಷೆ ಗ್ಲ್ಯಾಡಿಸ್ ಆಲ್ಮೇಡಾ ಮತ್ತು ಜೆಡಿಎಸ್ ಪಕ್ಷದ ಸನಾ ಕಾಂಗ್ರೆಸ್ ಸೇರ್ಪಡೆ

Posted On: 29-03-2024 09:57PM

ಕಾಪು : ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಗ್ಲ್ಯಾಡಿಸ್ ಅಲ್ಮೇಡಾ ಬಿಜೆಪಿ ಪಕ್ಷವನ್ನು ಮತ್ತು ಸನಾ ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಶುಕ್ರವಾರ ಕಾಪು ರಾಜೀವ ಭವನದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಸೇರ್ಪಡೆಗೊಂಡರು.

ಕಾಪು : ಕ್ಷೇತ್ರ ಬಿಜೆಪಿ ಹಿಂದುಳಿದ ಮೋರ್ಚಾ ಕಾರ್ಯದರ್ಶಿಯಾಗಿ ಹರೀಶ್ ಕುಲಾಲ್ ಬಿಳಿಯಾರು ಆಯ್ಕೆ

Posted On: 29-03-2024 09:08PM

ಕಾಪು : ಬಿಜೆಪಿ ಹಿಂದುಳಿದ ಮೋರ್ಚಾ ಕಾಪು ವಿಧಾನಸಭಾ ಕ್ಷೇತ್ರದ ಕಾರ್ಯದರ್ಶಿಯಾಗಿ ಬಿಜೆಪಿ ಪಕ್ಷದ ಕಾರ್ಯಕರ್ತ, ಕಾಪು ಕುಲಾಲ ಯುವ ವೇದಿಕೆ ಸಕ್ರಿಯ ಸದಸ್ಯ ಹರೀಶ್ ಕುಲಾಲ್ ಬಿಳಿಯಾರು ಶಂಕರಪುರ ಆಯ್ಕೆಯಾಗಿದ್ದಾರೆ.

ನರೇಂದ್ರ ಮೋದಿ ಅವರು ಮಗದೊಮ್ಮೆ ಪ್ರಧಾನಿಯಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ : ಗುರ್ಮೆ ಸುರೇಶ್ ಶೆಟ್ಟಿ

Posted On: 29-03-2024 07:54PM

ಕಾಪು : ಬಿಜೆಪಿ ಪಕ್ಷದ ಭೈರಂಪಳ್ಳಿ ಶಕ್ತಿ ಕೇಂದ್ರದ ಸಭೆ ಶುಕ್ರವಾರ ಪದ್ಮರಾಜ್ ರಾವ್ ಅವರ ಮನೆಯಲ್ಲಿ ನಡೆಯಿತು.

ಹೆಜಮಾಡಿ : ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನ ಗಳಿಸುವುದು ಖಚಿತ - ವಿನಯಕುಮಾರ್ ಸೊರಕೆ

Posted On: 29-03-2024 07:42PM

ಹೆಜಮಾಡಿ : ಕರ್ನಾಟಕದಲ್ಲಿ ಮತದಾರರು ಕಾಂಗ್ರೆಸ್ ಪಕ್ಷದ ಮೇಲೆ ಅಚಲ ವಿಶ್ವಾಸ ಇಟ್ಟುಕೊಂಡಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನ ಗಳಿಸುವುದು ಖಚಿತ ಎಂದು ಕೆ.ಪಿ.ಸಿ.ಸಿ. ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷ, ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು. ಅವರು ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಪ್ರಥಮ ಬಾರಿಗೆ ಸ್ವಕ್ಷೇತ್ರಕ್ಕೆ ಅಗಮಿಸಿದ ಸಂದರ್ಭ ಗುರುವಾರ ರಾತ್ರಿ ಹೆಜಮಾಡಿ ಗಡಿಭಾಗದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದ ಸಂದರ್ಭ ಮಾಧ್ಯಮದ ಜತೆ ಮಾತನಾಡಿದರು.

ಬಂಟಕಲ್ಲು : ಆಟೊ ರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘ - ಸತತ 4ನೇ ಬಾರಿಗೆ ಅಧ್ಯಕ್ಷರಾಗಿ ಮಂಜುನಾಥ ಪೂಜಾರಿ ಆಯ್ಕೆ

Posted On: 28-03-2024 06:54PM

ಬಂಟಕಲ್ಲು : ಆಟೊ ರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘ ಬಂಟಕಲ್ಲು ಇದರ ಅಧ್ಯಕ್ಷರಾಗಿ ಸತತ 4ನೇ ಬಾರಿಗೆ ಮಂಜುನಾಥ ಪೂಜಾರಿಯವರು ಆಯ್ಕೆಯಾಗಿದ್ದಾರೆ.

ಮಣಿಪಾಲ : ಮತದಾರ ಜಾಗೃತಿ ಕಾರ್ಯಕ್ರಮ

Posted On: 26-03-2024 10:01AM

ಮಣಿಪಾಲ : ಇಲ್ಲಿನ ಡಾ| ಟಿ.ಎಂ.ಎ ಪೈ ಪಾಲಿಟೆಕ್ನಿಕ್ ಕಾಲೇಜು, ಮಣಿಪಾಲ ಜೆಸಿಐ ಉಡುಪಿ ಸಿಟಿ ಇದರ ಜಂಟಿ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಮತದಾರ ಜಾಗೃತಿ ಕಾರ್ಯಕ್ರಮ ನಡೆಯಿತು.

ಕಾಪು ಮಂಡಲ ಬಿಜೆಪಿ ಯುವ ಮೋರ್ಚಾ ಪದಗ್ರಹಣ ಸಮಾರಂಭ

Posted On: 24-03-2024 07:57PM

ಕಾಪು : ಮಂಡಲ ಬಿಜೆಪಿ ಇದರ ಯುವ ಮೋರ್ಚಾದ ಪದಗ್ರಹಣ ಸಮಾರಂಭ ರವಿವಾರ ಕಾಪು ಮಂಡಲ ಬಿಜೆಪಿ ಕಚೇರಿಯಲ್ಲಿ ನಡೆಯಿತು.

ಕಾಪು : ಎಚ್ ಡಿ ಕುಮಾರಸ್ವಾಮಿ ಅವರ ಆರೋಗ್ಯ ವೃದ್ಧಿ, ಉತ್ತಮ ಆಯುಷ್ಯಕ್ಕಾಗಿ ವಿಶೇಷ ಪೂಜೆ

Posted On: 24-03-2024 07:46PM

ಕಾಪು : ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರಿಗೆ ಚೆನ್ನೈ ಆಸ್ಪತ್ರೆಯಲ್ಲಿ ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆ ನಡೆಯುತ್ತಿದ್ದು ಅವರ ಆರೋಗ್ಯ ವೃದ್ಧಿ ಹಾಗೂ ಉತ್ತಮ ಆಯುಷ್ಯಕ್ಕಾಗಿ ಕಾಪು ಮಹತೋಭಾರ ಶ್ರೀ ಲಕ್ಷ್ಮಿ ಜನಾರ್ಧನ ದೇವರ ಸನ್ನಿದಾನದಲ್ಲಿ ದೇವರಿಗೆ ವಿಶೇಷ ಪೂಜೆಯು ಉಡುಪಿ ಜಿಲ್ಲಾ ಜೆಡಿಎಸ್ ಪಕ್ಷದ ವತಿಯಿಂದ ಜರಗಿತು. ಈ ಸಂದರ್ಭ ಬಿಜೆಪಿ ಮುಖಂಡರೂ ಭಾಗಿಯಾಗಿದ್ದರು.

ಕಾರ್ಕಳ : ಅರುಣ್ ಕುಮಾರ್ ನಿಟ್ಟೆ, ಅನುಷ್ ಅರುಣ್ ಕೆ., ಆಯುಷ್ ಅರುಣ್ ಕೆ. ಯವರಿಗೆ ಕರಾಟೆಯಲ್ಲಿ ಬ್ಲಾಕ್ ಬೆಲ್ಟ್

Posted On: 24-03-2024 07:42PM

ಕಾರ್ಕಳ : ಶೊರೀನ್ ರಿಯೋ ಕರಾಟೆ ಅಸೋಷಿಯೇಷನ್ (ರಿ.) ಸ್ವಾಮಿ ಸ್ಟ್ರೆಂಥ್ ಟ್ರೈನಿಂಗ್ ಸೆಂಟರ್ ಮೂಡುಬಿದ್ರಿ SHORIN-RYU KARATE ASSOCIATION (R.) ಇದರ ಆಶ್ರಯದಲ್ಲಿ ಶೊರೀನ್ ರಿಯೂ ಕರಾಟೆಯಲ್ಲಿ ನಿಟ್ಟೆಯ ಅರುಣ್ ಕುಮಾರ್ ರವರು 'ಸದನ್' ಥರ್ಡ್ ಡಿಗ್ರಿ ಬ್ಲಾಕ್ ಬೆಲ್ಟ್ ('SADAN' THIRD DIGREE BLACK BELT) ಹಾಗೂ ಅವರ ಅವಳಿ ಪುತ್ರರಾದ ಅನುಷ್ ಅರುಣ್ ಕೆ. ಹಾಗೂ ಆಯುಷ್ ಅರುಣ್ ಕೆ. 'ಶೋಧನ್' ಫರ್ಸ್ಟ್ ಡಿಗ್ರಿ ಬ್ಲಾಕ್ ಬೆಲ್ಟ್ (SHODHAN FIRST DEGREE BLACK BELT) ಪಡೆದುಕೊಂಡಿದ್ದಾರೆ.