Updated News From Kaup

ಪಡುಬಿದ್ರಿ : ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳ - ಮುಷ್ಟಿ ಕಾಣಿಕೆ ಸಮರ್ಪಣೆ ; ವಿವಿಧ ಧಾರ್ಮಿಕ ಪ್ರಕ್ರಿಯಾದಿಗಳು

Posted On: 29-01-2024 07:48PM

ಪಡುಬಿದ್ರಿ : ಇಲ್ಲಿನ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದ ಜೀರ್ಣೋದ್ಧಾರದ ಪೂರ್ವಭಾವಿಯಾಗಿ ತಂತ್ರಿಗಳಾದ ವೇ| ಮೂ| ಕಂಬ್ಳಕಟ್ಟ ಶ್ರೀ ರಾಧಾಕೃಷ್ಣ ಉಪಾಧ್ಯಾಯರ ನೇತೃತ್ವದಲ್ಲಿ ಸೋಮವಾರ ಬೆಳಿಗ್ಗೆ ಮುಷ್ಟಿ ಕಾಣಿಕೆ ಸಮರ್ಪಣಾ ವಿಧಿ ವಿಧಾನಗಳು ನೆರವೇರಿತು.     

ಬೆಳಿಗ್ಗೆ ರುದ್ರ ಪಾರಾಯಣ ಸಹಿತ ಏಕಾದಶ ರುದ್ರಾಭಿಷೇಕ, ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವರಿಗೆ ನವಕ ಕಲಶಾಭಿಷೇಕಗಳು, ವಿಶೇಷ ನೈವೇದ್ಯ ಸಮರ್ಪಣೆಯೂ ನಡೆಯಿತು.

ದೇವಳದ ಸನ್ನಿಧಿಯಲ್ಲಿ ಕರ್ಮಾಂಗ ಸಾಂಗತಾ ಸಿದ್ಧಿಗಾಗಿ ವೇ| ಮೂ| ಶಿವರಾಜ ಉಪಾಧ್ಯಾಯ ಅವರ ಪ್ರಾರ್ಥನೆಯ ಬಳಿಕ ನೆರೆದಿದ್ದ ಗ್ರಾಮ ಸೀಮೆಯವರಿಂದ ಮುಷ್ಟಿ ಕಾಣಿಕೆಗಳು ಅರ್ಪಣೆಯಾದವು.

ಈ ಸಂದರ್ಭ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಪಡುಬಿದ್ರಿ ಬೀಡು ರತ್ನಾಕರರಾಜ್ ಅರಸ್ ಕಿನ್ಯಕ್ಕ ಬಲ್ಲಾಳರು, ಪೇಟೆಮನೆ ಭವಾನಿಶಂಕರ ಹೆಗ್ಡೆ, ವೇ| ಮೂ| ಶ್ರೀನಿವಾಸ ಉಪಾಧ್ಯಾ̧ಯ ವೇ| ಮೂ| ಸುರೇಂದ್ರ ಉಪಾಧ್ಯಾಯ, ಅರ್ಚಕರಾದ ವೈ. ಗುರುರಾಜ ಭಟ್, ಪದ್ಮನಾಭ ಭಟ್ ಎಚ್., ಗಣಪತಿ ಭಟ್, ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾವಡ, ಕಾರ್ಯದರ್ಶಿ ಶ್ರೀನಾಥ್ ಹೆಗ್ಡೆ ಹಾಗೂ ಸದಸ್ಯರು, ವಿವಿಧ ಗುತ್ತು ಬರ್ಕೆಗಳ ಪ್ರಮುಖರು, ಶ್ರೀ ದೇವಸ್ಥಾನದ ಸಿಬಂದಿ ವರ್ಗ, ವೈ. ಎನ್. ರಾಮಚಂದ್ರ ರಾವ್, ವೈ. ಸುರೇಶ್ ರಾವ್, ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು, ಅಡ್ವೆ ಅರಂತಡೆ ಲಕ್ಷ್ಮಣ ಶೆಟ್ಟಿಬಾಲ್, ಎರ್ಮಾಳು ಉದಯ ಕೆ. ಶೆಟ್ಟಿ, ನವೀನ್‌ಚಂದ್ರ ಜೆ. ಶೆಟ್ಟಿ, ಸಾಂತೂರು ಭಾಸ್ಕರ ಶೆಟ್ಟಿ, ಅಶೋಕ್ ಸಾಲ್ಯಾನ್, ಸುಕುಮಾರ ಶ್ರೀಯಾನ್, ಸದಾಶಿವ ಪಡುಬಿದ್ರಿ, ಪ್ರಕಾಶ್ ದೇವಾಡಿಗ, ರಾಜ ದೇವಾಡಿಗ, ವೈ. ಸುಕುಮಾರ್, ಶೀನ ಪೂಜಾರಿ ಕನ್ನಂಗಾರ್ ಸಹಿತ ಭಕ್ತಾದಿಗಳು ಉಪಸ್ಥಿತರಿದ್ದರು.

ಕಾರ್ಕಳದ ಅಂಡಾರು ಗ್ರಾಮದ ಶಾಲಿನಿ ಕುಲಾಲರ ವೈದಕೀಯ ಚಿಕಿತ್ಸೆಗೆ ನೆರವಾಗುವಿರಾ...?

Posted On: 28-01-2024 06:44PM

ಕಾರ್ಕಳ : ತಾಲೂಕಿನ ಅಂಡಾರು ಗ್ರಾಮ ನಿವಾಸಿ ಕರುಣಾಕರ ಕುಲಾಲ್ ಪತ್ನಿ ಶಾಲಿನಿ ಕುಲಾಲ್ ರವರಿಗೆ ಹೊಟ್ಟೆಯೊಳಗೆ ಗಡ್ಡೆಯ ಸಮಸ್ಯೆಗೆ ಸುಮಾರು 3.7 ಲಕ್ಷದಷ್ಟು ಖರ್ಚು ಆಗಿದ್ದು, ಇದೀಗ ಕಿಮೋಥೆರಪಿ ವಾರಕೊಮ್ಮೆ ಮಾಡಬೇಕಿದೆ. ಒಂದೆಡೆ ಹಿರಿಯ ವೃದ್ಧ ತಾಯಿ, ಎರಡು ಸಣ್ಣ ಮಕ್ಕಳ ಜೊತೆಗೆ ಜೀವನ ನಡೆಸುತ್ತ ಇರುವ ಕರುಣಾಕರ ಕುಲಾಲ್ ತನ್ನ ಪತ್ನಿಯ ಚಿಕಿತ್ಸೆಗೆ ನೆರವಾಗಿ ಎನ್ನುವ ನಿರೀಕ್ಷೆಯಲ್ಲಿದ್ದಾರೆ.

ನೆರವು ನೀಡುವವರು ಶಾಲಿನಿ ಅವರ ಬ್ಯಾಂಕ್ ಈ ಕೆಳಗಿನ ಖಾತೆಗೆ ಹಣ ಜಮಾ ಮಾಡಬಹುದು. Contact :karunakara kulal .. 9880842136.. Name :Shalini. Canara Bank. Agumbe road.Muniyal Karkala. A/c Number :01702200031072. IFSC CODE:CNRB0010170.

ಕಾಪು : ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕಲ್ಲುಗುಡ್ಡೆಯ ಕಾಲಾವಧಿ ನೇಮೋತ್ಸವ

Posted On: 28-01-2024 06:31PM

ಕಾಪು : ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕಲ್ಲುಗುಡ್ಡೆಯ ಕಾಲಾವಧಿ ನೇಮೋತ್ಸವವು ಜನವರಿ 28ರಿಂದ 30ರವರೆಗೆ ನಡೆಯಲಿದೆ.

ಜನವರಿ‌‌ 28, ಆದಿತ್ಯವಾರದಂದು ಹಸಿರುವಾಣಿಯೊಂದಿಗೆ ಗರಡಿ ಪ್ರವೇಶ. 29, ಸೋಮವಾರ ರಾತ್ರಿ ನೈವೇದ್ಯದ ಅಗಲು ಸೇವೆ. 30, ಮಂಗಳವಾರ ಮಧ್ಯಾಹ್ನ 12:30ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಗಂಟೆ 7ರಿಂದ ಬೈದರ್ಕಳ ನೇಮೋತ್ಸವ, ರಾತ್ರಿ 8ರಿಂದ 10ರ ತನಕ ಅನ್ನಸಂತರ್ಪಣೆ, ಬೆಳಗ್ಗೆ 3 ಗಂಟೆಗೆ ಮಾಯಂದಾಲ ದೇವಿಯ ನೇಮ ನಡೆಯಲಿದೆ. 31, ಬುಧವಾರ ರಾತ್ರಿ ಶುದ್ಧದ ಅಗಲು ಸೇವೆ ನಡೆಯಲಿದೆ ಎಂದು ‌ಪ್ರಕಟನೆಯಲ್ಲಿ‌ ತಿಳಿಸಿದ್ದಾರೆ.

ಮುಲ್ಕಿ : ಧಮ್ಮ ದೀಪ ಕಾರ್ಯಕ್ರಮ

Posted On: 28-01-2024 06:07PM

ಮುಲ್ಕಿ : ಭಾಸ್ಕರ್ ಕವತ್ತಾರು ಧಮ್ಮ ದೀಪ ಗೌತಮ ಬುದ್ಧ ನಗರ ಕವತ್ತಾರು ಮುಲ್ಕಿ ಇಲ್ಲಿ ದ.ಕ ಜಿಲ್ಲೆ ಭೌದ್ಧ ಮಹಾಸಭಾ ಧಮ್ಮಚಾರಿ ಎಸ್ ಆರ್ ಲಕ್ಷ್ಮಣ್ ಇವರ ಉಪಸ್ಥಿತಿಯಲ್ಲಿ ಧಮ್ಮ ದೀಪ ಕಾರ್ಯಕ್ರಮ ಜರುಗಿತು.

ಭಾರತೀಯ ಭೌದ್ಧ ಮಹಾಸಭಾ ಉಡುಪಿಯ ಪುಷ್ಟಕರ್ ಮುರಳೀಧರ್ ಎಂ, ಆನಂದ್ ಬಿ, ಶಂಕರ್, ರವೀಂದ್ರ, ಕುಶಲ, ಸುರೇಶ್, ಸಂತೋಷ್ ಎರ್ಮಾಳು, ಸುಧಾಕರ್ ಕೆ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮೂರು ನವದಂಪತಿಗಳಿಗೆ ಶುಭ ಹಾರೈಸಿ ಧಮ್ಮ ದೀಪ ಕುಟುಂಬಸ್ಥರಿಂದ ಭೋಜನ ವ್ಯವಸ್ಥೆ ಮಾಡಲಾಯಿತು.

ನಂದಿಕೂರು : ರಾಲ್ಫಿ ಡಿʼಕೋಸ್ತರವರ ಆಪ್ತ ಬಳಗದ ಜೀವರಕ್ಷಕ ನೂತನ ಆ್ಯಂಬುಲೆನ್ಸ್‌ ಲೋಕಾರ್ಪಣೆ

Posted On: 28-01-2024 06:01PM

ನಂದಿಕೂರು : ಉದ್ಯಮಿ ರಾಲ್ಫಿ ಡಿʼಕೋಸ್ತರವರ ಆಪ್ತ ಬಳಗದ ಹೆಜಮಾಡಿ, ನಡ್ಸಾಲು ಗ್ರಾಮ ಕೇಂದ್ರಿತವಾಗಿ ಕಾರ್ಯ ನಿರ್ವಹಿಸಲಿರುವ ಜೀವರಕ್ಷಕ ನೂತನ ಆ್ಯಂಬುಲೆನ್ಸ್‌ ಲೋಕಾರ್ಪಣೆ ಹಾಗೂ ಕೀ ಹಸ್ತಾಂತರದ ಕಾರ್ಯಕ್ರಮ ನಂದಿಕೂರಿನ ಕೈಗಾರಿಕಾ ವಲಯದಲ್ಲಿ ಭಾನುವಾರ ಜರಗಿತು. ಮೂಲ್ಕಿ ಚರ್ಚ್ ನ ಧರ್ಮಗುರುಗಳಾದ ರೆ| ಫಾ| ಸಿಲ್ವೆಸ್ಟರ್ ಡಿ`ಕೋಸ್ತ ಪ್ರಾರ್ಥನೆ ಸಲ್ಲಿಸಿ ಶುಭಾಶೀರ್ವಾದದ ನುಡಿಗಳನ್ನಿತ್ತರು.

ಮಂಗಳೂರು ಕೆನರಾ ಬ್ಯಾಂಕಿನ ವಲಯ ಎಜಿಎಂ ಆ್ಯಂಟೊನಿ ಅವರು ಆ್ಯಂಬುಲೆನ್ಸ್ ಸೇವೆಯನ್ನು ಉದ್ಘಾಟಿಸಿದರು. ಪಡುಬಿದ್ರಿಯ ಅಪರಾದ ವಿಭಾಗದ ಎಸ್‌ಐ ಸುದರ್ಶನ್ ದೊಡ್ಡಮನಿ ಅವರು ವಾಹನಕ್ಕೆ ಚಾಲನೆ ನೀಡಿ, ರಾಲ್ಫಿ ಡಿʼಕೋಸ್ತರವರ ಆಪ್ತರ ಬಳಗಕ್ಕೆ ವಾಹನದ ಕೀಲಿಗೈ ಹಸ್ತಾಂತರಿಸಿದರು.

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುಂಶಿಕ ಅರ್ಚಕರಾದ ವೇ| ಮೂ| ಅನಂತಪದ್ಮನಾಭ ಅಸ್ರಣ್ಣ, ವೇ| ಮೂ| ಹರಿನಾರಾಯಣದಾಸ ಆಸ್ರಣ್ಣ, ಹೆಜಮಾಡಿಯ ಜುಮ್ಮಾ ಮಸೀದಿಯ ಧರ್ಮಗುರುಗಳಾದ ಹಾಜಿ ಅಶ್ರಫ್ ಸಖಾಫಿ, ಸೈಂಟ್ ಫಿಲೊಮಿನಾ ಕಾಲೇಜು ಪುತ್ತೂರಿನ ನಿವೃತ್ತ ಪ್ರಾಂಶುಪಾಲ ರೆ| ಫಾ| ಫ್ರಾನ್ಸಿಸ್ ಝ್ಸೇವಿಯರ್ ಗೋಮ್ಸ್, ಕಳವಾರು ಚರ್ಚ್ ಧರ್ಮಗುರುಗಳಾದ ರೆ| ಫಾ| ಮಾರ್ಸೆಲ್ ಸಲ್ದಾನ, ವಾಲ್ಟರ್ ಡಿ`ಸೋಜ, ಕೆನರಾ ಬ್ಯಾಂಕ್ ಮೂಲ್ಕಿಯ ವ್ಯವಸ್ಥಾಪಕ ಅತುಲ್, ಹಾಜಿ ಶೇಖಬ್ಬ ಕೋಟೆ, ನಾರಾಯಣ ಮೆಂಡನ್, ಪಡುಬಿದ್ರಿ ಗ್ರಾ ಪಂ. ಅಧ್ಯಕ್ಷೆ ಶಶಿಕಲಾ, ಹೆಜಮಾಡಿ ಗ್ರಾ ಪಂ. ಅಧ್ಯಕ್ಷೆ ರೇಶ್ಮಾ ಮೆಂಡನ್, ಸದಾಶಿವ ಕೋಟ್ಯಾನ್ ಮತ್ತು ಹೆಜಮಾಡಿಯ ರಾಲ್ಫಿ ಡಿʼಕೋಸ್ತ ದಂಪತಿ ಮತ್ತು ಆಪ್ತರ ಬಳಗದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ದಿವಾಕರ್ ಹೆಜ್ಮಾಡಿ, ನಿತಿನ್ ಕಾರ್ಯಕ್ರಮ ನಿರೂಪಿಸಿದರು.

ಪಲಿಮಾರು : ಹೊೖಗೆ ಫ್ರೆಂಡ್ಸ್ - 11ನೇ ವಾರ್ಷಿಕೋತ್ಸವ ಸಂಪನ್ನ

Posted On: 28-01-2024 07:06AM

ಪಲಿಮಾರು : ಹೊೖಗೆ ಫ್ರೆಂಡ್ಸ್ ಹೊೖಗೆ (ರಿ) ಪಲಿಮಾರು ಸಂಸ್ಥೆಯ 11ನೇ ವಾರ್ಷಿಕೋತ್ಸವವು ಶುಕ್ರವಾರದಂದು ಪಲಿಮಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಜರಗಿತು. ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀನಿವಾಸ ಉಡುಪರು ದೀಪ ಪ್ರಜ್ವಲಿಸಿ ಆಶೀರ್ವಚನ ನೀಡಿದರು.

ಗುರುಪುರ ವಜ್ರದೇಹಿ ಮಠದ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ಸರ್ವ ಜನ ಸುಖಿನೋ ಭವತು ಎಂಬ ತತ್ವದಲ್ಲಿ ಕಾರ್ಯ ನಿರ್ವಹಿಸುವ ಈ ಸಂಸ್ಥೆಯ ಕಾರ್ಯವೈಖರಿ ಆದರ್ಶ ಸಮಾಜ ನಿರ್ಮಾಣ ಮಾಡುವಂತ ಒಂದು ಮಾದರಿ ಸಂಸ್ಥೆ ಎಂದರು. ಸನ್ಮಾನ : ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತರಾದ ಈಶ್ವರ್ ಮಲ್ಪೆ, ನಿವೃತ್ತ ಶಿಕ್ಷಕರಾದ ಜೋನ್ ವಿ ಡಿಸೋಜ, ಶ್ರೇಷ್ಠ ಕೃಷಿಕ ಪ್ರಶಸ್ತಿ ಪುರಸ್ಕೃತ ರಾದ ಮ್ಯಾಕ್ಸಿಂ ಡಿಸೋಜಾರವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಸಮಾಜ ಸೇವಕರಾದ ದಿನೇಶ್ ಗುಜರನ್, ಬಿಲ್ಲವರ ಅಸೋಸಿಯೇಷನ್ ನ ಜೊತೆ ಕಾರ್ಯದರ್ಶಿ ರವಿ ಎಸ್ ಸನಿಲ್, ವಿಶ್ವನಾಥ ಶೆಟ್ಟಿ ಕರ್ನಿರೆ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ದಿನೇಶ್ ಕೋಟ್ಯಾನ್, ಸಂಸ್ಥೆಯ ಗೌರವಾಧ್ಯಕ್ಷರಾದ ಗೋಕುಲ್ ಪಲಿಮಾರು, ಅಧ್ಯಕ್ಷರಾದ ರಿತೇಶ್ ದೇವಾಡಿಗ, ಪಲಿಮಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಗಾಯತ್ರಿ ಡಿ ಪ್ರಭು ಉಪಸ್ಥಿತರಿದ್ದರು.

ಸಚಿನ್ ಪೂಜಾರಿ ಸ್ವಾಗತಿಸಿದರು. ರಾಘವೇಂದ್ರ ಜೆ ಸುವರ್ಣ ವರದಿ ವಾಚಿಸಿದರು. ಸಂತೋಷ್ ದೇವಾಡಿಗ , ಸಂಪತ್ ಕುಮಾರ್ ಸನ್ಮಾನ ಪತ್ರ ವಾಚಿಸಿದರು. ದೇವಿಪ್ರಸಾದ್ ಬೆಳ್ಳಿಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸತೀಶ್ ಕುಮಾರ್ ವಂದಿಸಿದರು.

ಪಲಿಮಾರು : ಸುವರ್ಣ ಪ್ರತಿಷ್ಠಾನ ಕರ್ನಿರೆ - ಶೈಕ್ಷಣಿಕ ನೆರವು ; ಯಕ್ಷ ಕಲಾರಾಧನೆ ; ಸನ್ಮಾನ

Posted On: 27-01-2024 06:53AM

ಪಲಿಮಾರು : ಸುವರ್ಣ ಪ್ರತಿಷ್ಠಾನ ಕರ್ನಿರೆ ಇವರಿಂದ 11ನೇ ವಾರ್ಷಿಕೋತ್ಸವದ ಅಂಗವಾಗಿ ಶೈಕ್ಷಣಿಕ ನೆರವು, ಯಕ್ಷ ಕಲಾರಾಧನೆ ಮತ್ತು ಹಿರಿಯ ಕಲಾವಿದರ ಸನ್ಮಾನ ಕಾರ್ಯಕ್ರಮ ಜರಗಿತು. ಕರ್ನಿರೆ ಜಾರಂದಾಯ ದೈವದ ಗಡುವಾಡು ಬಳಿ ಕೊಪ್ಪಳ ತೋಟದಲ್ಲಿ ದುಬೈ ನಿವಾಸಿ- ಹವ್ಯಾಸಿ ಯಕ್ಷಗಾನ ವೇಷಧಾರಿ ಪ್ರಭಾಕರ ಡಿ. ಸುವರ್ಣ ಮತ್ತು ಕುಟುಂಬಿಕರು ಈ ಕಾರ್ಯಕ್ರಮವನ್ನು ಏರ್ಪಡಿಸಿದ್ದರು.

ಸನ್ಮಾನ/ಶೈಕ್ಷಣಿಕ ನೆರವು : ಯಕ್ಷಗಾನ ವಿದ್ವಾಂಸರಾದ ಡಾ.ಎಂ. ಪ್ರಭಾಕರ ಜೋಶಿ, ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ, ಅರ್ಥಧಾರಿ, ಸಂಘಟಕರಾದ ಅಶೋಕ ಭಟ್‌, ಜಬ್ಬಾರ್ ಸಮೋ ಸಂಪಾಜೆ, ವೇಷಧಾರಿಗಳಾದ ಸರಪಾಡಿ ಅಶೋಕ ಶೆಟ್ಟಿ, ಡಿ.ಮನೋಹರ ಕುಮಾ‌ರ್, ಶಶಿಕಾಂತ ಶೆಟ್ಟಿ ಕಾರ್ಕಳ ಹಾಗೂ ಯಕ್ಷಗಾನ, ನೃತ್ಯ ಕಲಾವಿದೆ ಸುಮಂಗಲಾ ರತ್ನಾಕರ್ ರನ್ನು ಸನ್ಮಾನಿಸಲಾಯಿತು. ಪ್ರತಿಷ್ಠಾನದ ವತಿಯಿಂದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಕ್ಷಣ ಸಹಾಯ ನಿಧಿಯನ್ನು ವಿತರಿಸಲಾಯಿತು.

ಸಭಾ ಕಾರ್ಯಕ್ರಮದ ಬಳಿಕ ತೆಂಕುತಿಟ್ಟಿನ ವಿವಿಧ ಮೇಳಗಳ ಹೆಸರಾಂತ ಕಲಾವಿದರಿಂದ 'ಶ್ರೀಮತಿ ಪರಿಣಯ - ಸಮಗ್ರ ಭೀಷ್ಮ' ಯಕ್ಷಗಾನ ಬಯಲಾಟ ನಡೆಯಿತು.

ಈ ಸಂದರ್ಭ ಸುವರ್ಣ ಪ್ರತಿಷ್ಠಾನ ಕರ್ನಿರೆ ಅಧ್ಯಕ್ಷ ಪ್ರಭಾಕರ ಡಿ.ಸುವರ್ಣ ಮತ್ತು ಕುಟುಂಬ ವರ್ಗ, ಸಂಯೋಜಕರಾದ ಬಿ. ಜನಾರ್ದನ ಅಮ್ಮುಂಜೆ ಮತ್ತಿತರರು ಉಪಸ್ಥಿತರಿದ್ದರು.

ಬಂಟಕಲ್ಲು : ಸನ್ ಶೈನ್ ಸೀನಿಯರ್ ಚೇಂಬರ್ ಉದ್ಘಾಟನೆ

Posted On: 26-01-2024 10:30PM

ಬಂಟಕಲ್ಲು : ಸೀನಿಯರ್ ಚೇಂಬರ್ ಉಡುಪಿ ಟೆಂಪಲ್ ಸಿಟಿ ಲೀಜನ್ ನಿಂದ ಪ್ರವರ್ತಿಸಲ್ಪಟ್ಟ ಬಂಟಕಲ್ ಸನ್ ಶೈನ್ ಸೀನಿಯರ್ ಚೇಂಬರ್ ನ್ನು ಸೀನಿಯರ್ ಚೇಂಬರ್ ನ ರಾಷ್ಟ್ರೀಯ ಅಧ್ಯಕ್ಷರಾದ ಸೀನಿಯರ್ ವರ್ಗಿಸ್ ವೈದನ್ ರವರು ಉದ್ಘಾಟಿಸಿದರು.

ಸ್ಥಾಪಕ ಅಧ್ಯಕ್ಷರಾಗಿ ಸಂದೀಪ್ ಬಂಗೇರ, ಸ್ಥಾಪಕ ಕಾರ್ಯದರ್ಶಿಯಾಗಿ ರಮೇಶ್ ಬಂಟಕಲ್, ಸ್ಥಾಪಕ ಕೋಶಾಧಿಕಾರಿಯಾಗಿ ವಿಗ್ನೇಶ್ ಶೆಟ್ಟಿ ಮತ್ತು 20 ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು.

ಉಡುಪಿ ಟೆಂಪಲ್ ಸಿಟಿಯ ಅಧ್ಯಕ್ಷರಾದ ಸೀನಿಯರ್ ಆಲ್ವಿನ್ ಮೆನೆಜಸ್, ರಾಷ್ಟ್ರೀಯ ಉಪಾಧ್ಯಕ್ಷರಾದ ಸೀನಿಯರ್ ನವೀನ್ ಅಮೀನ್, ಬೆಳವಣಿಗೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕರಾದ ಸೀನಿಯರ್ ಚಿತ್ರಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಎರ್ಮಾಳು ಬಡಾ ಓಂ ಸಾಯಿ ಫ್ರೆಂಡ್ಸ್ : ಭಜನೆ, ಕರ ಸೇವಕರಿಗೆ ಸನ್ಮಾನ, ಅನ್ನಸಂತರ್ಪಣೆ

Posted On: 23-01-2024 06:40PM

ಎರ್ಮಾಳು : ಓಂ ಸಾಯಿ ಫ್ರೆಂಡ್ಸ್ ಎರ್ಮಾಳು ಬಡಾ ವತಿಯಿಂದ ಅಯೋಧ್ಯೆ ಶ್ರೀ ರಾಮ ಪ್ರತಿಷ್ಟಾ ಕಾಯ೯ದ ನಿಮಿತ್ತ ಭಜನೆ, ಕರ ಸೇವಕರಿಗೆ ಸನ್ಮಾನ, ಅನ್ನಸಂತರ್ಪಣೆ ಜರಗಿತು.

ಎರ್ಮಾಳು ಗರೋಡಿ ಅರ್ಚಕರಾದ ಸದಾನಂದ ನಾಯ್ಗರು ಪೂಜಾ ಕೈಂಕರ್ಯ ನೆರವೇರಿಸಿದರು.

ಸನ್ಮಾನ : ಕರ ಸೇವಕರಾದ ವಸಂತ್ ದೇವಾಡಿಗ, ಸದಾನಂದ ಶ್ರೀಗಾರ್, ದಿವಂಗತ ಸುರೇಶ್ ಪರವಾಗಿ ಅವರ ತಾಯಿ ಪುಟ್ಟಮ್ಮರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ಓಂ ಸಾಯಿ ಫ್ರೆಂಡ್ಸ್ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.

ಉಡುಪಿ : ಸುಂದರ್ ಪೂಜಾರಿ ಮೂಡುಕುಕ್ಕುಡೆಯವರಿಗೆ ವಲ್ಡ್೯ ಪ್ರೆಸಿಡೆಂಟ್ ಎಪ್ರಿಸಿಯೇಶನ್ ಪ್ರಶಸ್ತಿ

Posted On: 23-01-2024 06:35PM

ಉಡುಪಿ : ತಿರುವನಂತಪುರದ ಅಲ್ಸಾಜ್ ಕನ್ವೆನ್ಷನ್ ಹಾಲ್ ನಲ್ಲಿ ನಡೆದ 3 ದಿನದ ಅಂತರಾಷ್ಟ್ರೀಯ ಜಯಂಟ್ಸ್ ಸಮ್ಮೇಳನದಲ್ಲಿ ಕಳೆದ 2023ರ ಸಾಲಿನಲ್ಲಿ ನಡೆಸಿದ ಸಮಾಜಮುಖಿ ಕಾರ್ಯಕ್ರಮಗಳಿಗಾಗಿ ಬ್ರಹ್ಮಾವರ ಜಯಂಟ್ಸ್ ನ ಮಾಜಿ ಅಧ್ಯಕ್ಷರಾದ ಸುಂದರ್ ಪೂಜಾರಿ ಮೂಡುಕುಕ್ಕುಡೆ ಯವರಿಗೆ ರಾಷ್ಟ್ರಮತ್ತು ರಾಜ್ಯ ಮಟ್ಟದ ವಲ್ಡ್೯ ಪ್ರೆಸಿಡೆoಟ್ ಎಪ್ರಿಸಿಯೇಶನ್ ಪ್ರಶಸ್ತಿಯನ್ನು ನೀಡಲಾಯಿತು.

ಈ ಕಾಯ೯ಕ್ರಮದಲ್ಲಿ ಜಯಂಟ್ಸ್ ಅಂತರಾಷ್ಟ್ರೀಯ ಅಧ್ಯಕ್ಷೆ ಶೈನಾ, ಉಪಾಧ್ಯಕ್ಷ ನೂರುದ್ದೀನ್, ಕೇಂದ್ರ ಸಮಿತಿ ಸದಸ್ಯ ದಿನಕರ್ ಅಮೀನ್ ಮುಂತಾದವರಿದ್ದರು.