Updated News From Kaup

ಮಸ್ಕತ್ ನ ಪ್ರತಿಷ್ಠಿತ ಮಲ್ಟಿ ಟೇಕ್ ಮಾಲಕರಿಂದ ಕಾಪು ಹೊಸ ಮಾರಿಗುಡಿ ದೇವಳಕ್ಕೆ 500 ಶಿಲಾಸೇವೆ ಸಮರ್ಪಣೆ

Posted On: 08-12-2022 09:20PM

ಕಾಪು : ಮಸ್ಕತ್ ಮಲ್ಟಿ ಟೆಕ್ ಮಾಲಕರಾದ ದಿವಾಕರ್ ಶೆಟ್ಟಿ "ನರ್ಸಿ ಸದನ" ಮಲ್ಲಾರ್ ಇವರು ದಂಪತಿ ಸಮೇತರಾಗಿ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ 500 ಶಿಲಾಸೇವೆ ನೀಡಿ, ಶಿಲಾ ಪುಷ್ಪ ಸಮರ್ಪಣೆ ಮಾಡಿ ಮಾರಿಯಮ್ಮನ ಸಂಪೂರ್ಣ ಅನುಗ್ರಹಕ್ಕೆ ಪಾತ್ರರಾದರು.

ದೇವಳದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿಯವರು ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ, ಜೀರ್ಣೋದ್ಧಾರದ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಿದರು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರಮೇಶ್ ಹೆಗ್ಡೆ ಕಲ್ಯಾ, ಸುಧಾಕರ್ ಶೆಟ್ಟಿ ಮಕರ ಕನ್ಸ್ಟ್ರಕ್ಷನ್, ಆರ್ಥಿಕ ಸಮಿತಿಯ ಕಾತ್ಯಾಯಿನಿ ತಂಡದ ಸಂಚಾಲಕರಾದ ಜಯಲಕ್ಷ್ಮಿ ಶೆಟ್ಟಿ, ದೇವಳದ ಸಿಬ್ಬಂದಿಗಳಾದ ಗೋವರ್ಧನ್ ಸೇರಿಗಾರ್, ಲಕ್ಷ್ಮಣ್ ಶೆಟ್ಟಿ ಮಂಡೇಡಿ ಮತ್ತು ಸಂತೋಷ್ ಶೆಟ್ಟಿ ಕಳತ್ತೂರು ಉಪಸ್ಥಿತರಿದ್ದರು.

ರೋಟರಿ ಶಂಕರಪುರದ ವತಿಯಿಂದ ಕ್ರಿಸ್ಮಸ್ ಆಚರಣೆ ; ಕುಟುಂಬ ಸಹ ಮಿಲನ ಕಾರ್ಯಕ್ರಮ

Posted On: 07-12-2022 09:25PM

ಶಂಕರಪುರ : ರೋಟರಿ ಶಂಕರಪುರದ ವತಿಯಿಂದ ಕ್ರಿಸ್ಮಸ್ ಆಚರಣೆ ಹಾಗೂ ಕುಟುಂಬ ಸಹ ಮಿಲನ ಕಾರ್ಯಕ್ರಮವು ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಸಿಎಸ್ಐ ಇಮ್ಯಾನುವೆಲ್ ದೇವಾಲಯ ಪಾದೂರು ಇಲ್ಲಿನ ಧರ್ಮ ಗುರುಗಳಾದ ರೆ| ರೇಶ್ಮ ರವಿಕಲಾ ಅಮ್ಮನ್ನ ಮಾತನಾಡಿ ನಾವು ಇತರರ ಬಾಳಿಗೆ ಬೆಳಕಾಗಿ ಈ ಸಮಾಜದ ಒಳಿತಿಗಾಗಿ ಶ್ರಮಿಸುವಂತಾಗಬೇಕು ಮಾನವೀಯ ನೆಲೆಯಲ್ಲಿ ಜೀವಿಸಿ ನಾವು ಸಮಾಜಕ್ಕೆ ಶ್ರೇಷ್ಠ ಉಡುಗೊರೆಯಾಗಬೇಕು ಎಂಬ ಸಂದೇಶವನ್ನು ನೀಡಿ ನೂತನ ವರ್ಷಕ್ಕೆ ಶುಭ ಕೋರಿದರು.

ಕ್ಲಬ್ ಸರ್ವಿಸ್ ಡೈರೆಕ್ಟರ್ ಫ್ರಾನ್ಸಿಸ್ ಡೇಸಾ, ಸಂತ ಕ್ಲಾಸ್ ವೇಷಧಾರಿಯಾಗಿ ಚಂದ್ರ ಪೂಜಾರಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಗೀತ ಮಂಡಳಿ ಸದಸ್ಯರಾದ ರೂಬೆನ್ ಕೊಲಿನೋ ಅಮ್ಮನ್ನ,ಶರ್ಲಿ ಗ್ಲೆನೀಟ, ಸ್ಟಾನ್ಸನ್ ಗ್ಲೇನಿಶ್, ಕ್ರಿಸ್ಮಸ್ ಹಾಡುಗಳನ್ನು ಹಾಡುವುದರ ಮೂಲಕ ಮನರಂಜನೆಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಆಟೋಟ ಸ್ಪರ್ಧೆಗಳನ್ನು ಮಾಡಿ ಬಹುಮಾನ ನೀಡಲಾಯಿತು.

ಏಡ್ವಿನ್ ನೋಯೆಲ್ ಡಿಸಿಲ್ವ ಪ್ರಾರ್ಥಿಸಿದರು. ಅಧ್ಯಕ್ಷರಾದ ಗ್ಲಾಡ್ಸನ್ ಕುಂದರ್ ಸ್ವಾಗತಿಸಿದರು. ಮಾಲಿನಿ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಫ್ಲೇವಿಯಾ ಮೆನೆಜಸ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸಿಲ್ವಿಯ ಕಸ್ಟಲೀನೋ ವಂದಿಸಿದರು.

ಜೆಸಿಐ ಶಂಕರಪುರ ಜಾಸ್ಮಿನ್ - ಕ್ರಿಸ್ಮಸ್ ಸಂಭ್ರಮಾಚರಣೆ

Posted On: 06-12-2022 09:35PM

ಶಂಕರಪುರ : ಜೆಸಿಐ ಶಂಕರಪುರ ಜಾಸ್ಮಿನ್ ಇದರ ವತಿಯಿಂದ ಕ್ರಿಸ್ಮಸ್ ಸಂಭ್ರಮಾಚರಣೆಯನ್ನು ಜೆಸಿ ಭವನ ಶಂಕರಪುರದಲ್ಲಿ ಆಚರಣೆ ಮಾಡಲಾಯಿತು.

ಕಾರ್ಯಕ್ರಮವನ್ನು ವಲಯ 15 ರ ವಲಯಧ್ಯಕ್ಷರಾದ ರಾಯನ್ ಉದಯ್ ಕ್ರಾಸ್ತ ಉದ್ಘಾಟಿಸಿದರು.

ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷರಾದ ಮಾಲಿನಿ ಇನ್ನಂಜೆ ವಹಿಸಿದ್ದರು. ರಾಯನ್ ಮಥಾಯಸ್, ನಿಕಟಪೂರ್ವ ಅಧ್ಯಕ್ಷ ಜಗದೀಶ್ ಅಮೀನ್, ಕಾರ್ಯಕ್ರಮ ಸಂಯೋಜಕರಾದ ಪ್ರಸಿಲ್ಲ ಕ್ವಾಡ್ರಸ್, ಜೇಸಿರೆಟ್ ಅಧ್ಯಕ್ಷೆ ಜಯಶ್ರೀ ನವೀನ್ ಅಮೀನ್, ಪೂರ್ವ ವಲಯ ಉಪಾಧ್ಯಕ್ಷ ಸಂತೋಷ್ ಕುಮಾರ್, ಜೆಸಿ ಶಂಕರಪುರದ ಪೂರ್ವ ಅಧ್ಯಕ್ಷರುಗಳಾದ ನವೀನ್ ಅಮೀನ್, ಅಲ್ವಿನ್ ಮೆನೇಜಸ್, ಅನಿತಾ ಮಾಥಾಯಸ್, ಸೀಮಾ ಮಾರ್ಗರೆಟ್ ಡಿಸೋಜ, ಸಂತ ಕ್ಲಾಸ್ ಆಗಿ ಸಿಲ್ವಿಯಾ ಕಾಸ್ಟಲಿನೋ, ಹರೀಶ್ ಕುಲಾಲ್ ಉಪಸ್ಥಿತರಿದ್ದರು.

ಶ್ರೀ ದೂಮಾವತಿ ಯುವ ಸಮಿತಿ ಕಾಪು : ಅಧ್ಯಕ್ಷರಾಗಿ ಐತಪ್ಪ ಎಸ್ ಕೋಟಿಯನ್ ಆಯ್ಕೆ

Posted On: 06-12-2022 09:28PM

ಕಾಪು : ಶ್ರೀ ದೂಮಾವತಿ ಯುವ ಸಮಿತಿ ಕಾಪು ಇದರ ಮಹಾಸಭೆಯು ಶ್ರೀ ದೂಮಾವತಿ ದೈವಸ್ಥಾನದ ವಠಾರದಲ್ಲಿ ರಮಾನಾಥ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಐತಪ್ಪ ಎಸ್ ಕೋಟಿಯನ್, ಕಾರ್ಯದರ್ಶಿ ಅನಿಲ್ ಪಾಡಿಮನೆ, ಜೊತೆ ಕಾರ್ಯದರ್ಶಿ ಸಂಜೀವ ಅಂಚನ್, ಕೋಶಾಧಿಕಾರಿ ರಾಜೇಶ್ ಅಂಚನ್, ಉಪಾಧ್ಯಕ್ಷರಾಗಿ ರವಿಚಂದ್ರನ ಶೆಟ್ಟಿ, ಸಂಘಟನ ಕಾರ್ಯದರ್ಶಿ ಪ್ರಶಾಂತ್ ಮಡಿವಾಳ ಇವರನ್ನು ಆಯ್ಕೆ ಮಾಡಲಾಯಿತು.

ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಮಿತಿ ಶಿರ್ವ : ನೂತನ ಅಧ್ಯಕ್ಷರಾಗಿ ಗೋಪಾಲ ಪೂಜಾರಿ ಸೊರ್ಪು ಆಯ್ಕೆ

Posted On: 06-12-2022 09:21PM

ಶಿರ್ವ : ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಮಿತಿ (ರಿ.) ಶಿರ್ವ ಇದರ ವಿಶೇಷ ಮಹಾ ಸಭೆ ಅಧ್ಯಕ್ಷರಾದ ದೇವಿಪ್ರಸಾದ್ ಪೂಜಾರಿ ಮಾಣಿಬೆಟ್ಟು ಅಧ್ಯಕ್ಷತೆಯಲ್ಲಿ ಇಂದು ಜರಗಿತು. ಸಭೆಯಲ್ಲಿ 2023 ರಿಂದ 2025 ಮೂರು ವರ್ಷದ ನೂತನ ಆಡಳಿತ ಮಂಡಳಿ ರಚನೆ ಸರ್ವ ಸದಸ್ಯರ ಬಹುಮತದೊಂದಿಗೆ ನಿರ್ಣಯಿಸಲಾಯಿತು.

ನೂತನ ಅಧ್ಯಕ್ಷರಾಗಿ ಗೋಪಾಲ ಪೂಜಾರಿ ಸೊರ್ಪು, ಉಪಾಧ್ಯಕ್ಷರಾಗಿ ರಮೇಶ್ ಬಂಗೇರ, ಲಕ್ಷ್ಮಣ್ ಪೂಜಾರಿ ಮಾಣಿಬೆಟ್ಟು, ಪ್ರಧಾನ ಕಾರ್ಯದರ್ಶಿಯಾಗಿ ವೀರೇಂದ್ರ ಪೂಜಾರಿ, ಜೊತೆ ಕಾರ್ಯದರ್ಶಿಯಾಗಿ ರಮೇಶ್ ಪೂಜಾರಿ ಶಿರ್ವ, ಕೋಶಾಧಿಕಾರಿಯಾಗಿ ಸುಕೇಶ್ ಪೂಜಾರಿ ವಳದೂರು, ಭಜನಾ ಸಂಚಾಲಕರಾಗಿ ಭಾಸ್ಕರ್ ಪೂಜಾರಿ ಸೋರ್ಕಳ ಆಯ್ಕೆಯಾದರು.

ಕಾರ್ಕಳ : ನೆತ್ತೆರ್ ಉಂಬೊಲಿ - ರಕ್ತದಾನ ಶಿಬಿರ

Posted On: 06-12-2022 05:48PM

ಕಾರ್ಕಳ : ಜೈ ತುಳುನಾಡ್(ರಿ.) ಮುಂದಾಳತ್ವದಲ್ಲಿ ರಕ್ತನಿಧಿ, ಜಿಲ್ಲಾಸ್ಪತ್ರೆ, ಉಡುಪಿ ಮತ್ತು ಹಲವು ಸ್ಥಳೀಯ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕಾರ್ಕಳದ ರೋಟರಿ ಬಾಲಭವನದಲ್ಲಿ 'ನೆತ್ತೆರ್ ಉಂಬೊಲಿ' ರಕ್ತದಾನ ಶಿಬಿರ ಡಿಸೆಂಬರ್ 4 ರಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಯೋಗದೀಪಿಕ ವಿದ್ಯಾಪೀಠ, ಪಲಿಮಾರು ಇಲ್ಲಿನ ಪ್ರಾಂಶುಪಾಲರೂ, ಕಾರ್ಕಳದ ಶ್ರೀ ಅನಂತಪದ್ಮನಾಭ ದೇವಸ್ಥಾನದ ಪ್ರಧಾನ ಅರ್ಚಕರಾದ ಡಾ. ಕಾ. ವೇ. ಶಂಕರನಾರಾಯಣ ಭಟ್ ಮಾತನಾಡಿ ಭಾಷೆ ಮತ್ತು ಲಿಪಿ ಎರಡನ್ನೂ ಹೊಂದಿರುವ ಭಾಷೆಗಳಲ್ಲಿ ತುಳು ಒಂದಾಗಿದ್ದು, ಅದರ ಬಗ್ಗೆ ನಮಗೆ ಹೆಮ್ಮೆ ಇದೆ ಮತ್ತು ಎಲ್ಲಾ ತುಳುವರು ಈ ಬಗ್ಗೆ ಹೆಮ್ಮೆ ಪಡಬೇಕು. ಮುನ್ನೂರು ವರ್ಷಗಳ ಹಿಂದಕ್ಕೆ ಉಡುಪಿ, ಮಂಗಳೂರು, ಕಾಸರಗೋಡು ಮತ್ತು ಉತ್ತರ ಕನ್ನಡದ ಕೆಲ ಪ್ರದೇಶಗಳಲ್ಲಿ ಭಾಷೆ ಎಂದರೆ ತುಳು, ಲಿಪಿ ಎಂದರೆ ತುಳು ಲಿಪಿ ಎಂದಾಗಿತ್ತು. ತುಳುನಾಡಿನ ಎಲ್ಲಾ ದೇವಸ್ಥಾನಗಳಲ್ಲಿಯೂ ಪೂಜಾ ಕೈಂಕರ್ಯಗಳ ವಿದ್ಯಾಭ್ಯಾಸವನ್ನು ಪಡೆಯುವವರು ತುಳು ಲಿಪಿಯನ್ನು ಕಲಿಯಬೇಕಾಗಿತ್ತು ಮತ್ತು ಅದನ್ನು ಪ್ರತಿದಿನ ದೇವಸ್ಥಾನಗಳಲ್ಲಿ ಬಳಸಬೇಕಾಗಿತ್ತು, ಈಗಲೂ ಈ ಪದ್ಧತಿ ಬಹಳಷ್ಟು ಕಡೆ ಚಾಲ್ತಿಯಲ್ಲಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರು ಮತ್ತು ಆಳುಪ ವಂಶಸ್ಥರಾದ ಡಾ. ಆಕಾಶ್ ರಾಜ್ ಜೈನ್ ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಆದಾಯವನ್ನು ತಂದುಕೊಡುವಂತಹ ಜಿಲ್ಲೆಗಳಲ್ಲಿ ತುಳುನಾಡಿನ ಜಿಲ್ಲೆಗಳು ಅಗ್ರಸ್ಥಾನದಲ್ಲಿವೆ. ನಮ್ಮಲ್ಲಿ ಭೂಮಾರ್ಗ, ಜಲಮಾರ್ಗ ವಾಯುಮಾರ್ಗದಂತಹ ಎಲ್ಲಾ ಸೌಕರ್ಯಗಳು ಇವೆ. ಬ್ರಿಟಿಷರ ಕಾಲದಲ್ಲಿ ಅತ್ಯಂತ ಉದ್ದದ ಭಾರತದ ರೈಲ್ವೆ ಮಾರ್ಗವನ್ನು ತುಳುನಾಡು ಹೊಂದಿತ್ತು. ಇಷ್ಟೆಲ್ಲ ಇದ್ದರೂ ಇಲ್ಲಿನ ನೆಲದ ಭಾಷೆಯಾದ ತುಳುವಿಗೆ ಕರ್ನಾಟಕ ರಾಜ್ಯದಲ್ಲಿ ಇನ್ನೂ ಕೂಡ ಆಡಳಿತ ಭಾಷಾ ಸ್ಥಾನಮಾನ ಸಿಗದಿರುವುದು ಬೇಸರದ ಸಂಗತಿ ಎಂದರು. ಇದೇ ಸಂದರ್ಭದಲ್ಲಿ ಅವರು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆಯುವ 20 ವರ್ಷಗಳ ಹಿಂದೆಯೇ ತುಳುನಾಡಿನಲ್ಲಿ ನಡೆದಂತಹ ಅಮರ ಸುಳ್ಯ ಕ್ರಾಂತಿಯನ್ನು ಪ್ರಸ್ತಾಪಿಸಿ ತುಳುನಾಡಿನ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಸಭೆಗೆ ನೆನಪಿಸಿದರು. ಜೈ ತುಲುನಾಡ್(ರಿ.) ಸಂಘಟನೆಯ ಅಧ್ಯಕ್ಷರಾದಂತಹ ಅಶ್ವಥ್ ತುಳುವೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ರಕ್ತ ನಿಧಿ ಜಿಲ್ಲಾಸ್ಪತ್ರೆ, ಉಡುಪಿ ಇದರ ವೈದ್ಯಾಧಿಕಾರಿ ಆದಂತಹ ಡಾ. ವೀಣಾ ಕುಮಾರಿ ಮುಖ್ಯ ಅತಿಥಿಗಳಾಗಿ ಜೊತೆಯಲ್ಲಿದ್ದರು. ಕಾರ್ಯಕ್ರಮದ ಸಹಭಾಗಿತ್ವವನ್ನು ವಹಿಸಿಕೊಂಡ ಸಂಘ ಸಂಸ್ಥೆಗಳಾದ ಜಿ.ಎಸ್.ಬಿ ಹಿತರಕ್ಷಣಾ ವೇದಿಕೆ ಕಾರ್ಕಳ ಇದರ ಸಂಚಾಲಕರಾದ ಆರ್ ವಿವೇಕಾನಂದ ಶೆಣೈ, ಎಚ್.ಡಿ.ಎಫ್.ಸಿ ಬ್ಯಾಂಕ್ ಲಿ. ಮಂಗಳೂರು ಇದರ ಸಹ ವ್ಯವಸ್ಥಾಪಕ ನಿತೇಶ್ ಕುಮಾರ್, ಯುವ ವಾಹಿನಿ (ರಿ.) ಕಾರ್ಕಳ ಘಟಕದ ಅಧ್ಯಕ್ಷರು ತಾರಾನಾಥ ಕೋಟ್ಯಾನ್, ಸೌಹಾರ್ದ ಫ್ರೆಂಡ್ಸ್ ಕ್ಲಬ್ ಜಾರ್ಕಳ-ಮುಂಡ್ಲಿ ಇದರ ಅಧ್ಯಕ್ಷರಾದ ಪ್ರಜ್ವಲ್ ಜೈನ್, ಅಮ್ಮಾಸ್ ಸ್ಪೋರ್ಟ್ಸ್ & ಗಿಫ್ಟ್ಸ್ ಕಾರ್ಕಳ ಇದರ ಮಾಲಕ ಸುಧೀರ್ ಪೂಜಾರಿ, ಗೆಳೆಯರ ಬಳಗ ನೆಲ್ಲಿಗುಡ್ಡೆ ಬಜಗೋಳಿ ಅಧ್ಯಕ್ಷರು ಸುರೇಶ್ ಸಾಲಿಯಾನ್, ಛತ್ರಪತಿ ಶಿವಾಜಿ ಮಹಾರಾಜ್ ಬಳಗ ಕಾಂತರಗೋಳಿ ಇದರ ಅಧ್ಯಕ್ಷರಾದ ಸತೀಶ್ ಪೂಜಾರಿ ಕಾಂತರಗೋಳಿ ವೇದಿಕೆಯಲ್ಲಿದ್ದರು.

ಪ್ರಧಾನ ಕಾರ್ಯದರ್ಶಿಗಳಾದ ಅವಿನಾಶ್ ಮುಕ್ಕ, ಸಂಘಟನಾ ಕಾರ್ಯದರ್ಶಿ ಸದಾಶಿವ ಮುದ್ರಾಡಿ, ಸಹ ಸಂಘಟನಾ ಕಾರ್ಯದರ್ಶಿ ಪೃಥ್ವಿ ತುಲುವೆ, ಕೇಂದ್ರ ಸಮಿತಿಯ ಗೀತಾ ಲಕ್ಷ್ಮೀಶ್, ವಿನಯ್ ರೈ, ಸಂಘಟನೆಯ ಸದಸ್ಯರು ಮತ್ತು ರಕ್ತ ನಿಧಿ ಜಿಲ್ಲಾ ಆಸ್ಪತ್ರೆ, ಉಡುಪಿ ಇದರ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ವಿವಿಧ ಸಂಸ್ಥೆಗಳ 60ಕ್ಕೂ ಹೆಚ್ಚು ಸದಸ್ಯರು ರಕ್ತದಾನ ಮಾಡುವ ಮೂಲಕ ಶಿಬಿರದಲ್ಲಿ ಪಾಲ್ಗೊಂಡರು.

ಆತ್ಮ ಕೆ. ತುಳುನಾಡಗೀತೆ ಹಾಡುವ ಮೂಲಕ ಪ್ರಾರ್ಥಿಸಿದರು. ಜೈ ತುಲುನಾಡ್ (ರಿ.) ಸಂಘಟನೆಯ ಜೊತೆ ಕಾರ್ಯದರ್ಶಿ ರಾಜೇಶ್ ತುಲುವೆ ಉಪ್ಪೂರು ಸ್ವಾಗತಿಸಿದರು. ಸ್ವರಾಜ್ ಶೆಟ್ಟಿ ಕಾರ್ಕಳ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷರಾದ ವಿಶು ಶ್ರೀಕೇರ ವಂದಿಸಿದರು.

ಮುಂಡ್ಕೂರಿನ ಕುಲಾಲ ಸಂಘದಲ್ಲಿ ಕುಲಾಲ ಕ್ರೀಡಾಕೂಟ ಸಮಾಪನ

Posted On: 06-12-2022 05:37PM

ಮುಂಡ್ಕೂರು : ಕುಲಾಲ ಸಂಘ (ರಿ.) ನಾನಿಲ್ತಾರ್ ಮುಂಡ್ಕೂರು ಇದರ ಯುವ ವೇದಿಕೆ ಆಶ್ರಯದಲ್ಲಿ ಸಂಘದ ಸ್ಥಾಪಕ ಅಧ್ಯಕ್ಷರಾದ ದಿ. ಸುಂದರ ಮೂಲ್ಯ ಕ್ರೀಡಾಂಗಣದಲ್ಲಿ ಕುಲಾಲ ಬಾಂಧವರಿಗಾಗಿ ಕುಲಾಲ ಕ್ರೀಡಾಕೂಟ ಅಯೋಜಿಸಲಾಗಿತ್ತು.

ಸಂಘದ ಅಧ್ಯಕ್ಷ ಕುಶ ಆರ್ ಮೂಲ್ಯ ಅಧ್ಯಕ್ಷತೆಯಲ್ಲಿ ಕುತ್ಯಾರುವಿನ ಖ್ಯಾತ ನ್ಯಾಯವಾದಿ ಜಗದೀಶ್ ಮೂಲ್ಯ ಉದ್ಘಾಟಿಸಿದರು.

ಸಂಘದ ಅಧ್ಯಕ್ಷ ಕುಶ ಆರ್ ಮೂಲ್ಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಲವ ಆರ್ ಮೂಲ್ಯ ಇನ್ನ, ಸದಾನಂದ ಮೂಲ್ಯ ಕುವೈಟ್, ಸಂಘದ ಉಪಾಧ್ಯಕ್ಷರಾದ ಬೊಗ್ಗು ಮೂಲ್ಯ ಬೇಲಾಡಿ, ಜಯರಾಮ ಕುಲಾಲ್, ಸಂಘದ ಮಾಜಿ ಅಧ್ಯಕ್ಷರಾದ ಮಂಜಪ್ಪ ಮೂಲ್ಯ, ಗುತ್ತಿಗೆದಾರರಾದ ಬೊಗ್ಗು ಮೂಲ್ಯ ಬೆಳ್ಮಣ್, ಬಿ ವಾರಿಜ, ಮಹಿಳಾ ಘಟಕದ ಅಧ್ಯಕ್ಷೆ ಪ್ರತಿಮಾ, ಯುವ ವೇದಿಕೆ ಅಧ್ಯಕ್ಷರಾದ ದೀಪಕ್ ಕುಲಾಲ್ ಬೆಳ್ಮಣ್, ಕಾರ್ಯದರ್ಶಿ ಸಂತೋಷ್, ಉಪಾಧ್ಯಕ್ಷ ಗಿರೀಶ್ ಬೆಳ್ಮಣ್ ಉಪಸ್ಥಿತರಿದ್ದರು.

ಕಾರ್ಯದರ್ಶಿ ದಿನೇಶ್ ಕುಲಾಲ್ ಸ್ವಾಗತಿಸಿದರು. ಆಶಾ ವರದರಾಜ್ , ಕುಮಾರಿ ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಶ್ರೀಕಾಂತ್ ಕುಲಾಲ್ ವಂದಿಸಿದರು.

ಕಾರ್ಕಳ : ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನಲ್ಲಿ ಪಾಲಕರ-ಶಿಕ್ಷಕರ ಸಭೆ

Posted On: 05-12-2022 10:15PM

ಕಾರ್ಕಳ : ಇಲ್ಲಿನ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನಲ್ಲಿ 2022-23 ನೇ ಸಾಲಿನ ಪಾಲಕರ-ಶಿಕ್ಷಕರ ಸಭೆ ದಿನಾಂಕ ಡಿಸೆಂಬರ್ 4 ರಂದು ನಡೆಯಿತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಸ್ಥಾಪಕರಾದ ಅಶ್ವತ್ ಎಸ್‌ ಎಲ್‌, ಕ್ರಿಯೇಟಿವ್‌ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮತ್ತು ವಿವಿಧ ಚಟುವಟಿಕೆಗಳಿಗೆ ಪ್ರಾಧಾನ್ಯತೆ ನೀಡಿ ತರಬೇತಿ ನೀಡಲಾಗುತ್ತಿದೆ. ಆಯಾ ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿಯನ್ನು ಅತ್ಯಂತ ಪಾರದರ್ಶಕವಾಗಿ ಪರಿಶೀಲಿಸಿ, ಲೋಪದೋಷಗಳನ್ನು ಪರಿಹರಿಸಲಾಗುತ್ತಿದೆ. ಮುಂಬರುವ NEET,CET, KVPY, NATA, NDA, IIT ಪರೀಕ್ಷೆಗಳಿಗೆ ನುರಿತ ಅನುಭವಿ ಪ್ರಾಧ್ಯಾಪಕರು ತರಬೇತಿ ನೀಡುತ್ತಿದ್ದು ವಿಶೇಷ ತರಗತಿಗಳನ್ನೂ ನಡೆಸಲಾಗುತ್ತಿದೆ. ಪಾಲಕರೂ ನಮ್ಮೊಂದಿಗೆ ಸಹಕರಿಸಬೇಕು ಎಂದು ತಿಳಿಸಿದರು.

ಪ್ರಾಂಶುಪಾಲರಾದ ವಿದ್ವಾನ್ ಗಣಪತಿ ಭಟ್‌ ಮಾತಾನಾಡಿ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾವು ತೀವ್ರ ಪೈಪೋಟಿ ನೀಡಬೇಕಾಗಿದೆ. ಇರುವ ಅವಕಾಶ ಉಪಯೋಗಿಸಿಕೊಳ್ಳಲು ಕ್ರಿಯೇಟಿವ್‌ ವಿದ್ಯಾಸಂಸ್ಥೆಯಲ್ಲಿ ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. ಸಂಸ್ಥಾಪಕರಾದ ಡಾ. ಗಣನಾಥ ಶೆಟ್ಟಿಯವರು ಪಾಲಕರಿಗೆ ಪ್ರಥಮ ಪಿಯುಸಿಯಿಂದ ಇಂದಿನವರೆಗೂ ನಡೆದ ವಿವಿಧ ಪರೀಕ್ಷೆಗಳ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತಯಾರಿಯ ಬಗ್ಗೆ ಸವಿಸ್ತಾರ ಮಾಹಿತಿ ನೀಡಿದರು. ಸಂಸ್ಥಾಪಕರಾದ ಆದರ್ಶ ಎಂ ಕೆ, ಅಮೃತ್‌ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಹೆತ್ತವರನ್ನು ಉದ್ದೇಶಿಸಿ ಮಾತನಾಡಿದ ಸಂಸ್ಥಾಪಕರಾದ ಗಣಪತಿ ಭಟ್‌ ಕೆ ಎಸ್‌ ಇಂದು ವಾಣಿಜ್ಯ ವಿಭಾಗದ CA, CS ಕ್ಷೇತ್ರಗಳಲ್ಲಿ ಅಪರಿಮಿತ ಅವಕಾಶಗಳಿವೆ. ನಮ್ಮ ಸಂಸ್ಥೆಯಿಂದ ಅನೇಕ ವಿದ್ಯಾರ್ಥಿಗಳು ಈಗಾಗಲೇ ವಿವಿಧ ಪ್ರತಿಷ್ಠಿತ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದು, ವಿಶೇಷವಾಗಿ ತಜ್ಞ ಅಧ್ಯಾಪಕರನ್ನು ಕರೆಸಿ ಅವರಿಂದ ಪಾಠ, ಪ್ರವಚನ ಕೋಚಿಂಗ್‌ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವಿದ್ಯಾಸಂಸ್ಥೆಯ ಉಪನ್ಯಾಸಕರು ಸಭೆಯಲ್ಲಿ ಪಾಲ್ಗೊಂಡು ಪಾಲಕರೊಂದಿಗೆ ಸಮಾಲೋಚನೆ ನಡೆಸಿದರು. ಉಪನ್ಯಾಸಕರಾದ ಲೋಹಿತ್‌ ಎಸ್‌ ಕೆ, ವಿನಾಯಕ ಜೋಗ್‌, ಉಮೇಶ್‌ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಪಡುಬಿದ್ರಿ : ರೋಟರಿ ಕ್ಲಬ್ ವತಿಯಿಂದ ಪರೀಕ್ಷಾ ಪೂರ್ವ ತಯಾರಿ ಸಿದ್ಧತೆ ; ವಿದ್ಯಾರ್ಥಿ ನಾಯಕತ್ವ - ಮಾಹಿತಿ ಕಾರ್ಯಕ್ರಮ

Posted On: 05-12-2022 09:38PM

ಪಡುಬಿದ್ರಿ : ರೋಟರಿ ಕ್ಲಬ್ ಪಡುಬಿದ್ರಿ ಇದರ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತಯಾರಿ ಸಿದ್ಧತೆ ಮತ್ತು ವಿದ್ಯಾರ್ಥಿ ನಾಯಕತ್ವದ ಬಗ್ಗೆ ಮಾಹಿತಿ ಕಾರ್ಯಕ್ರಮ ಸೋಮವಾರ ಗಣಪತಿ ಪ್ರೌಢ ಶಾಲೆ ಪಡುಬಿದ್ರಿ ಇಲ್ಲಿ ಜರಗಿತು.

ಸಂಪನ್ಮೂಲ ವ್ಯಕ್ತಿಯಾಗಿ ಮಹಾಜನ ಪ್ರಥಮ ದರ್ಜೆ ಕಾಲೇಜು, ಮೈಸೂರಿನ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ| ಪುಷ್ಪರಾಣಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋ. ಗೀತಾ ಅರುಣ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರೋಟರಿ ವಲಯ 5 ರ ಪೂರ್ವ ಸಹಾಯಕ ಗವರ್ನರ್ ರೋ. ಪಿ.ಎಚ್.ಎಫ್ ಗಣೇಶ್ ಆಚಾರ್ಯ ಉಚ್ಚಿಲ ರೋಟರಿ ವಲಯ 5 ರ ಕಾರ್ಯದರ್ಶಿ ರೋ. ಸಂತೋಷ್, ಪಡುಬಿದ್ರಿ ಗಣಪತಿ ಶಾಲೆಯ ಮುಖ್ಯೋಪಾಧ್ಯಾಯ ಗಣಪತಿ ಭಟ್, ರೋ. ತಸ್ನೀನ್ ಅರಾ, ರೋ.ಪುಷ್ಪಲತಾ ಗಂಗಾಧರ್, ರೋ. ‌ಪವನ್ ಸಾಲ್ಯಾನ್, ಇಂಟರ್ಯಾಕ್ಟ್ ಕ್ಲಬ್ ಅಧ್ಯಕ್ಷ ರಂಜಿತ್ ದೇವಾಡಿಗ, ಚಯರ್ ಮ್ಯಾನ್ ಶ್ರೀಶ ಭಟ್, ರೋ. ಮಹಮ್ಮದ್ ನಿಯಾಝ್, ರೋ. ಸುಧಾಕರ್ ಕೆ ಪಡುಬಿದ್ರಿ ಕಾರ್ಯಕ್ರಮ ನಿರೂಪಿಸಿದರು ರೋ. ಸಂತೋಷ್ ಪಡುಬಿದ್ರಿ ವಂದಿಸಿದರು.

ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ವಿಶ್ವ ಕಂಪ್ಯೂಟರ್ ಸಾಕ್ಷರತೆ ದಿನಾಚರಣೆ

Posted On: 05-12-2022 06:41PM

ಶಿರ್ವ : ಪ್ರಸ್ತುತ ತಾಂತ್ರಿಕ ಮತ್ತು ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲಾ ಕಾರ್ಯಗಳು ಎಲ್ಲಾ ಕ್ಷೇತ್ರಗಳಲ್ಲಿ ಸುಲಭವಾಗಿ ನಡೆಯಲು ಮತ್ತು ಅತ್ಯಂತ ವೇಗವಾಗಿ ಪರಿಣಾಮಕಾರಿಯಾಗಿ ಮಾನವನ ಕೆಲಸವನ್ನು ಕಂಪ್ಯೂಟರ್ ಬಳಕೆಯಿಂದ ಸಾಗುತ್ತಿದೆ. ಇಂದಿನ ಯುವಕರಲ್ಲಿ ಕಲಿಕೆಯ ಜೊತೆಗೆ ಕಂಪ್ಯೂಟರ್ ಜ್ಞಾನ ಪಡೆದುಕೊಳ್ಳುವ ಮೂಲಕ ಮುಂದೆ ತಮ್ಮ ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ರೀತಿಯ ಬೆಳವಣಿಗೆ ಕಾಣಿಸಬಹುದು. ಕಲಿಕೆಗೆ ವಯಸ್ಸು ಮುಖ್ಯ ಅಲ್ಲ ಮನಸು ಮುಖ್ಯ ಎಂದು ಇಲ್ಲಿನ ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಗಣಕ ವಿಜ್ಞಾನ ವಿಭಾಗ ಹಾಗೂ ಕಂಪ್ಯೂಟರ್ ಸಾಕ್ಷರತ ಕೋಶ ಜಂಟಿಯಾಗಿ ಏರ್ಪಡಿಸಿದ ವಿಶ್ವ ಕಂಪ್ಯೂಟರ್ ಸಾಕ್ಷರತೆ ದಿನಾಚರಣೆ ದಲ್ಲಿ ಮುಖ್ಯ ಅತಿಥಿಗಳಾಗಿ ಕಾಲೇಜಿನ ಕಚೇರಿ ದ್ವಿತೀಯ ದರ್ಜೆಯ ಸಹಾಯಕಿ ಜಾಕ್ಲೈನ್ ​​ಮೆಂಡೋನ್ಸಾ ರವರು ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಿ ತಮ್ಮ ಅನುಭವವನ್ನು ವ್ಯಕ್ತಪಡಿಸಿದರು.

ಈ ದಿನದ ಪ್ರಯುಕ್ತ ಹಲವು ಸ್ಪರ್ಧೆಗಳನ್ನು ನಡೆಸಲಾಯಿತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ, ಮುಂದಿನ ಉದ್ಯೋಗ ಕ್ಷೇತ್ರಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ನಿರಂತರ ಕಂಪ್ಯೂಟರ್ ಕಲಿಕೆಯನ್ನು ವಿದ್ಯಾರ್ಥಿಗಳು ಕಾಲೇಜು ಹಂತಗಳಲ್ಲಿ ಅಭ್ಯಾಸನವನ್ನು ಮಾಡಬೇಕೆಂದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ಮಾತನಾಡಿದರು.

ಶೈಕ್ಷಣಿಕ ಶಿಕ್ಷಣದ ಜೊತೆಗೆ ಕಂಪ್ಯೂಟರ್ ಕಲಿಕೆ ಇಂದಿನ ದಿನ ಅತ್ಯಂತ ಪ್ರಮುಖವಾಗಿದೆ.ಇದರ ಪ್ರಯುಕ್ತ ಕಾಲೇಜಿನಲ್ಲಿ ವಿಭಾಗದ ವತಿಯಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ಬೇಸಿಕ್ ಮತ್ತು ಟ್ಯಾಲಿ ಕೋರ್ಸುಗಳ ತರಬೇತಿ ನೀಡಿ ಪ್ರಮಾಣಪತ್ರವನ್ನು ವಿತರಿಸಲಾಗುವುದು. ಇದರ ಪ್ರಯೋಜನವನ್ನು ಪಡೆದುಕೊಂಡ ಮುಂದಿನ ಉದ್ಯೋಗ ಕ್ಷೇತ್ರಗಳಲ್ಲಿ ಉದ್ಯೋಗ ಪಡೆಯಲು ಇಂಥ ಸರ್ಟಿಫಿಕೇಟ್ ಗಳು ವಿದ್ಯಾರ್ಥಿಗಳಿಗೆ ಸಹಾಯಕಾರಿ ಎಂದು ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಲೆಫ್ಟಿನೆಂಟ್ ಕೆ.ಪ್ರವೀಣ್ ಕುಮಾರ್ ಅವರು ಮಾತನಾಡಿದರು.

ದ್ವಿತೀಯ ಬಿಎ ವಿದ್ಯಾರ್ಥಿ ಪವನ್ ಕುಮಾರ್ ತಮ್ಮ ಕಂಪ್ಯೂಟರ್ ಕಲಿಕೆಯ ಜ್ಞಾನದ ಬಗ್ಗೆ ಅನಿಸಿಕೆಯನ್ನು ವ್ಯಕ್ತಪಡಿಸಿದರು . ಈ ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕಿ ಸಂಗೀತ ಪೂಜಾರಿ, ಪ್ರಿಯಾಂಕ, ಅಧ್ಯಾಪಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅನುಕ್ ನಾಯಕ್ ಮತ್ತು ಅಲ್ಲಿಸ್ಟರ್ ಸುಜಾ ಡಿಸೋಜ ಕಾರ್ಯಕ್ರಮಕ್ಕೆ ಸಹಕರಿಸಿದರು. ಕಂಪ್ಯೂಟರ್ ಸಾಕ್ಷರತೆ ಕೋಶದ ರಕ್ಷಾ ಮತ್ತು ಬಳಗ ಪ್ರಾರ್ಥಿಸಿದರು. ಕಂಪ್ಯೂಟರ್ ಸಾಕ್ಷರತೆ ಕೋಶದ ಸಂಯೋಜಕಿ ದಿವ್ಯಶ್ರೀ ಸ್ವಾಗತಿಸಿದರು. ಆದಿತ್ಯ ಶೆಟ್ಟಿಗಾರ ಪ್ರಾಸ್ತವಿಕವಾಗಿ ಮಾತನಾಡಿದರು. ಶ್ರೇಯ ಸಫಲಿಗ ಕಾರ್ಯಕ್ರಮ ನಿರೂಪಿಸಿದರು. ಸೆಲ್ಮಾ ಪಿಂಟು ವಂದಿಸಿದರು.