Updated News From Kaup

ಉಚ್ಚಿಲ : ಚಿತ್ರ ಬಿಡಿಸುವ ಸ್ಪರ್ಧೆ ಉದ್ಘಾಟನೆ ; 700ಕ್ಕೂ ಅಧಿಕ ಸ್ಪರ್ಧಿಗಳು ಭಾಗಿ

Posted On: 01-10-2022 05:13PM

ಉಚ್ಚಿಲ : ಶ್ರೀ ಮಹಾಲಕ್ಷ್ಮಿ ದೇವಳದ ಮೊಗವೀರ ಭವನ ಸಭಾಂಗಣದಲ್ಲಿ ಶನಿವಾರ ಮಹಾಲಕ್ಷ್ಮಿ ಕೋ ಅಪರೇಟಿವ್ ಬ್ಯಾಂಕ್ ಮತ್ತು ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಳದ ವತಿಯಿಂದ ಉಚ್ಚಿಲ ದಸರಾ ಅಂಗವಾಗಿ ಹಮ್ಮಿಕೊಂಡ ಅವಿಭಜಿತ ದಕ ಜಿಲ್ಲಾ ಮಟ್ಟದ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಕೇಂದ್ರ ಸಚಿವೆ ಶೋಭ ಕರಂದ್ಲಾಜೆ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಹೆದ್ದಾರಿ ಪಕ್ಕದಲ್ಲಿದ್ದುಕೊಂಡು ಉಚ್ಚಿಲ ಶ್ರೀ ಮಹಾಲಕ್ಷ್ಮಿ ಕ್ಷೇತ್ರವು ದೇಶ ವಿದೇಶಗಳ ಭಕ್ತರನ್ನು ಅಕರ್ಷಿಸುವ ತಾಣವಾಗಿ ಮೂಡಿಬಂದಿರುವುದು ನಮ್ಮ ಜಿಲ್ಲೆಗೆ ಹೆಮ್ಮೆ. ಈ ಬಾರಿಯ ದಸರಾ ಮಹೋತ್ಸವ ಅದರ ಹಿರಿಮೆಗೆ ಗರಿ ಮೂಡಿಸಿದೆ. ಮುಂದಿನ ನಾಲ್ಕೈದು ವರ್ಷಗಳಲ್ಲಿ ಎಲ್ಲಾ ದಸರಾ ಮಹೊತ್ಸವಗಳನ್ನು ಉಚ್ಚಿಲ ದಸರಾ ಮೀರಿಸಲಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಸನ್ಮಾನ : ದ್ವಿತೀಯ ಬಾರಿಗೆ ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ಅಧ್ಯಕ್ಷರಾಗಿ ಆಯ್ಕೆಯಾದ ಸಹಕಾರ ರತ್ನ ಡಾ.ಎಮ್.ಎನ್.ರಾಜೇಂದ್ರಕುಮಾರ್‌, ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ನಿರ್ದೇಶಕರಾಗಿ ಆಯ್ಕೆಯಾದ ದೇವಿಪ್ರಸಾದ್ ಶೆಟ್ಟಿ ಮತ್ತು ಝೀ ಕನ್ನಡದ ಡ್ರಾಮಾ ಜ್ಯೂನಿಯರ್ ವಿಭಾಗದ 4ನೇ ಅವೃತ್ತಿಯಲ್ಲಿ ವಿಜೇತರಾದ ಸಮೃದ್ಧಿ ಕುಂದಾಪುರರವರನ್ನು ಮಹಾಲಕ್ಷ್ಮಿ ಕೊ ಅಪರೇಟಿವ್ ಬ್ಯಾಂಕ್ ಮತ್ತು ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಳದ ವತಿಯಿಂದ ಅದ್ದೂರಿಯಾಗಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭ ಸಹಕಾರ ರತ್ನ ಡಾ.ಎಮ್.ಎನ್.ರಾಜೇಂದ್ರ ಕುಮಾರ್, ನಾಡೋಜ ಡಾ.ಜಿ.ಶಂಕರ್, ಬ್ಯಾಂಕ್ ಅಧ್ಯಕ್ಷ ಯಶಪಾಲ್ ಎ.ಸುವರ್ಣ, ಜಯ ಸಿ.ಕೋಟ್ಯಾನ್ ಬೆಳ್ಳಂಪಳ್ಳಿ, ಮಟ್ಟಾರು ರತ್ನಾಕರ ಹೆಗ್ಡೆ, ಜಯಕರ ಶೆಟ್ಟಿ ಇಂದ್ರಾಳಿ, ದೇವಿಪ್ರಸಾದ್ ಶೆಟ್ಟಿ ಬೆಳಪು ಮತ್ತು ಅಪ್ಪಿ ಎಸ್.ಸಾಲ್ಯಾನ್ ಉಪಸ್ಥಿತರಿದ್ದರು.

ಯಶಪಾಲ್ ಎ.ಸುವರ್ಣ ಸ್ವಾಗತಿಸಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ಮತ್ತು ವಿಜೇತಾ ಶೆಟ್ಟಿ ನಿರೂಪಿಸಿದರು. ಬ್ಯಾಂಕ್‌ನ ಎಮ್‌ಡಿ ಜಗದೀಶ ಮೊಗವೀರ ವಂದಿಸಿದರು. ಚಿತ್ರಕಲಾ ಸ್ಪರ್ಧೆಯ 5 ವಿಭಾಗಗಳಲ್ಲಿ 7೦೦ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದರು.

ಕುಂಜೂರು : ಐತಿಹಾಸಿಕ ಪರಂಪರೆ ಉಳಿಸಿ ಜಾಗೃತಿ ಕಾರ್ಯಕ್ರಮ

Posted On: 01-10-2022 08:19AM

ಕುಂಜೂರು :‌ ಹೀಗೆ ಇದ್ದಿತೆಂದು‌ ನಿರೂಪಿಸುವ ಸತ್ಯ ಕಥೆಯೇ ಇತಿಹಾಸ. ಇಂತಹ ಅಮೂಲ್ಯ ಪಾರಂಪರಿಕ ಮೌಲ್ಯಗಳಿರುವ ದಾಖಲೆಗಳನ್ನು ಮನನ ಮಾಡಿಕೊಳ್ಳುವ ,ಕಾಪಿಡುವ ಪ್ರಯತ್ನವಾಗಿ "ಐತಿಹಾಸಿಕ ಪರಂಪರೆ ಉಳಿಸಿ" ಎಂಬ ಕಾರ್ಯಕ್ರಮ ರಾಜ್ಯದಾದ್ಯಂತ ನಡೆಯುತ್ತಿದೆ. ಪ್ರಾಚ್ಯ ವಸ್ತುಗಳ ಅಧ್ಯಯನದಿಂದ,ಲಿಖಿತ ದಾಖಲೆಗಳ‌ ಆಧಾರದಲ್ಲಿ‌ ಇತಿಹಾಸವನ್ನು ಕಟ್ಟಬಹುದು ಎಂದು ಅದಮಾರಿನ‌ ಪೂರ್ಣಪ್ರಜ್ಞ ಪ.ಪೂ.ಕಾಲೇಜಿನ ಉಪನ್ಯಾಸಕ‌ ವೈ. ಜ್ಯೋತೀಂದ್ರನಾಥ ರಾವ್ ಅಭಿಪ್ರಾಯಪಟ್ಟರು. ‌‌ ಅವರು ಕುಂಜೂರು ಶ್ರೀ ದುರ್ಗಾ ದೇವಸ್ಥಾನದ ಆಶ್ರಯದಲ್ಲಿ ಸ್ಥಳೀಯ ದುರ್ಗಾ ಮಿತ್ರವೃಂದ, ದುರ್ಗಾ ಸೇವಾ ಸಮಿತಿಗಳ ಸಹಯೋಗದಲ್ಲಿ‌ ನೆರವೇರಿದ ಬೆಂಗಳೂರಿನ ಇತಿಹಾಸ ಅಕಾಡೆಮಿಯ "ಐತಿಹಾಸಿಕ ಪರಂಪರೆ ಉಳಿಸಿ" ಕಾರ್ಯಕ್ರಮದಲ್ಲಿ‌ ಪ್ರಧಾನ ಭಾಷಣ ಮಾಡಿದರು.

ನಮ್ಮಲ್ಲಿ ಲಭ್ಯವಿರುವ ಪುರಾವಸ್ತುಗಳು, ಶಿಲಾಶಾಸನಗಳು,ತಾಮ್ರ ಪಟಗಳು ,ಧಾರ್ಮಿಕ ನಿರ್ಮಿತಿಗಳು,ಕಟ್ಟಡಗಳು, ಪುರಾತನ ಕಡತಗಳು‌‌,ನಾಣ್ಯಗಳು ಒಂದು ಕಾಲದ ಇತಿಹಾಸವನ್ನು ಹೇಳುತ್ತವೆ ಇಂತಹ ಅಮೂಲ್ಯ ಪುರಾತನ ಉಳಿಕೆಗಳು ಕಾಲಕಾರಣವಾಗಿ ಅಥವಾ ಮಾನವ ನಿರ್ಲಕ್ಷ್ಯದಿಂದ ನಾಶವಾಗದಂತೆ ರಕ್ಷಿಸುವ ಜಾಗೃತಿ ಮೂಡಿಸುವ ಕಾರ್ಯಕ್ರಮವೇ "ಐತಿಹಾಸಿಕ ಪರಂಪರೆ ಉಳಿಸಿ" ಆಭಿಯಾನ ಎಂದು ಜ್ಯೋತೀಂದ್ರನಾಥ ರಾವ್ ವಿವರಿಸಿದರು.

ಶ್ರೀ ದುರ್ಗಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ದೇವರಾಜ ರಾವ್ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ನಿವೃತ್ತ ಪ್ರಾಂಶುಪಾಲ ಸುದರ್ಶನ ವೈ.ಎಸ್. ಅಧ್ಯಕ್ಷತೆ ವಹಿಸಿದ್ದರು. ಎಲ್ಲೂರು ಗುತ್ತು ಪ್ರಫುಲ್ಲ ಶೆಟ್ಟಿ, ಎಲ್ಲೂರು ಪಂಚಾಯತ್ ಮಾಜಿ ಅಧ್ಯಕ್ಷ ಯಶವಂತ ಶೆಟ್ಟಿ, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸಂಜೀವ ಶೆಟ್ಯಿ,ಸಂತೋಷ ಶೆಟ್ಟಿ, ಗಿರಿಜಾ ಪೂಜಾರ್ತಿ,ದೇವಳದ ಮ್ಯಾನೇಜರ್ ರಾಘವೇಂದ್ರ ಶೆಟ್ಟಿ,ದುರ್ಗಾಮಿತ್ರ ವೃಂದದ ಅಧ್ಯಕ್ಷ ಚಂದ್ರಹಾಸ ಆಚಾರ್ಯ ಉಪಸ್ಥಿತರಿದ್ದರು.

ರಾಕೇಶ್ ಕುಂಜೂರು ಸ್ವಾಗತಿಸಿದರು. ಕೆ.ಎಲ್ ಕುಂಡಂತಾಯ ಪ್ರಸ್ತಾವಿಸಿದರು. ಸತೀಶ ಶೆಟ್ಟಿ‌ ಗುಡ್ಡೆಚ್ಚಿ ಕಾರ್ಯಕ್ರಮ ನಿರೂಪಿಸಿದರು.

ಬೈಂದೂರು: ಗುಜ್ಜಾಡಿ ಗ್ರಾಮ ಪಂಚಾಯಿತಿಗೆ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ದಿಡೀರ್ ಭೇಟಿ

Posted On: 30-09-2022 10:37PM

ಬೈಂದೂರು : ಬೈಂದೂರು ವಿಧಾನಸಭಾ ಕ್ಷೇತ್ರದ ಗುಜ್ಜಾಡಿ ಗ್ರಾಮ ಪಂಚಾಯಿತಿಗೆ ತಾಲೂಕು ಕಾರ್ಯನಿರ್ವಹಣಾಧಿಕಾರಿ ಮಹೇಶ್ ಹೊಳ್ಳ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಗ್ರಾಮಸ್ಥರ ಕುಂದುಕೊರತೆಗಳ ಅಹವಾ ಲುಗಳನ್ನು ಸ್ವೀಕರಿಸಲು ಬಂದಿರುವುದಾಗಿ ಹೇಳಿದರು.

ಮಾಧ್ಯಮದ ಜೊತೆ ಮಾತನಾಡಿ ಎನ್ ಆರ್ ಎಲ್ ಎಮ್ ಘಟಕ ಇವಾಗಲೇ ಸರಕಾರ ಆದೇಶದಂತೆ ಘಟಕಕ್ಕೆ 17.50 ಲಕ್ಷ ಮಂಜೂರಾಗಿದ್ದು ತಕ್ಷಣ ಕಾಮಗಾರಿಯ ಸ್ಥಳ ಪರಿಶೀಲಿಸಿ ಮುಂದಿನ ಕಾರ್ಯಯೋಜನೆ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಜು ಪೂಜಾರಿ, ಗ್ರಾಮ ಪಂಚಾಯತ್ ಹಿರಿಯ ಸದಸ್ಯ ಹರೀಶ್ ಮೇಸ್ತ, ಗ್ರಾಮ ಪಂಚಾಯತ್ ಕಾರ್ಯದರ್ಶಿ ಶಕುಂತಲಾ ಮಾಧವ, ಸಿಬಂದಿಗಳು ಹಾಜರಿದ್ದರು.

ಮುನಿಯಾಲ್ ಆಯುರ್ವೇದ ಮೆಡಿಕಲ್ ಸೈನ್ಸ್ ಮಣಿಪಾಲ : ಪ್ಲಾನೆಟ್ ಮಾರ್ಸ್ ಫೌಂಡೇಶನ್ ಸಂತೆಕಟ್ಟೆ ಸಂಸ್ಥೆಗೆ ಅಗತ್ಯ ವಸ್ತುಗಳ ಹಸ್ತಾಂತರ

Posted On: 30-09-2022 08:57PM

ಉಡುಪಿ : ಮುನಿಯಾಲ್ ಆಯುರ್ವೇದ ಮೆಡಿಕಲ್ ಸೈನ್ಸ್ ಮಣಿಪಾಲ ಇದರ ವತಿಯಿಂದ ನವರಾತ್ರಿ ಹಬ್ಬದ ಅಂಗವಾಗಿ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ವೃಂದದಿಂದ ಆಹಾರ ಸಾಮಗ್ರಿ, ದೈನಂದಿನ ಅಗತ್ಯವಿರುವ ವಸ್ತುಗಳು, ಬಿಸ್ಕೆಟ್ ಹಾಗೂ ತಿಂಡಿ ತಿನಿಸುಗಳನ್ನು ಪ್ಲಾನೆಟ್ ಮಾರ್ಸ್ ಫೌಂಡೇಶನ್ (ರಿ.) ಸಂತೆಕಟ್ಟೆ ಈ ಸಂಸ್ಥೆಗೆ ನೀಡಲಾಯಿತು.

ಹಾಗೆಯೇ ಮಕ್ಕಳಿಗೆ ರೋಗನಿರೋದಕ ಶಕ್ತಿಯನ್ನು ಹೆಚ್ಚಿಸುವ ಮಾತ್ರೆಯಾದ ಸಂಶಮನೀಯ ವಟಿಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಮುನಿಯಾಲ್ ಕಾಲೇಜಿನ ಡಾ. ರಾಜಕಿರಣ್ , ಕಾಲೇಜಿನ ಕೌನ್ಸಿಲ್ ಅಧ್ಯಕ್ಷರಾದ ಶ್ರೀಪ್ರದ ಉಪಾಧ್ಯಾಯ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾಪು : ಬೃಹತ್ ಖಾದಿ ಮೇಳ ಉದ್ಘಾಟಿಸಿದ ಸಂಸದೆ ಶೋಭಾ ಕರಂದ್ಲಾಜೆ

Posted On: 30-09-2022 08:51PM

ಕಾಪು : ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಹಾಗೂ‌ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯವರು ಸೇವಾ ಪಾಕ್ಷಿಕ ಅಭಿಯಾನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನಾಚರಣೆ, ಗಾಂಧಿ ಜಯಂತಿ ಆಚರಣೆ ಪ್ರಯುಕ್ತ ಕಾಪು ಬಿಜೆಪಿ ವತಿಯಿಂದ ಆಯೋಜಿಸಿದ 'ಬೃಹತ್ ಖಾದಿ ಮೇಳ' ವನ್ನು ಕಾಪು ನಗರದಲ್ಲಿ ಇಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಹಾಗೂ‌ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯವರು ಸೇವಾ ಪಾಕ್ಷಿಕ ಅಭಿಯಾನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರ ಜನ್ಮ ದಿನಾಚರಣೆ, ಗಾಂಧಿ ಜಯಂತಿ ಆಚರಣೆ ಪ್ರಯುಕ್ತ ಕಾಪು ಬಿಜೆಪಿ ವತಿಯಿಂದ ಆಯೋಜಿಸಿದ 'ಬೃಹತ್ ಖಾದಿ ಮೇಳ' ವನ್ನು ಕಾಪು ನಗರದಲ್ಲಿ ಇಂದು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕಾಪು ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್, ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ನಯನ ಗಣೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ, ಸದಾನಂದ ಉಪ್ಪಿನಕುದ್ರು, ಜಿಲ್ಲಾ ಉಪಾಧ್ಯಕ್ಷರುಗಳಾದ ಶ್ರೀಶ ನಾಯಕ್, ಪ್ರಕಾಶ್ ಶೆಟ್ಟಿ, ಗೀತಾಂಜಲಿ ಸುವರ್ಣ, ಕಾಪು ಮಂಡಲ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ರಾವ್, ಹಿರಿಯರಾದ ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ, ಗಂಗಾಧರ್ ಸುವರ್ಣ, ರಾಜ್ಯ ಮಹಿಳಾಮೋರ್ಚ ಪ್ರಧಾನ‌ಕಾರ್ಯದರ್ಶಿ ಶಿಲ್ಪಾ ಜಿ ಸುವರ್ಣ, ಜಿಲ್ಲಾ ಮಹಿಳಾಮೋರ್ಚ ಅಧ್ಯಕ್ಷರಾದ ವೀಣಾ ಶೆಟ್ಟಿ, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚದ ಅಧ್ಯಕ್ಷರಾದ ದಾವುದ್, ಕಾಪು ಯುವಮೋರ್ಚ ಅಧ್ಯಕ್ಷರಾದ ಸಚಿನ್ ಸುವರ್ಣ, ಕಾಪು ಮಹಿಳಾಮೋರ್ಚ ಅಧ್ಯಕ್ಷರಾದ ಸುಮಾ ಶೆಟ್ಟಿ, ಕಾಪು ಮಂಡಲ ಪದಾಧಿಕಾರಿಗಳಾದ ಸುಧಾಮ ಶೆಟ್ಟಿ, ಪವಿತ್ರ ಶೆಟ್ಟಿ ಮಾಲಿನಿ ಶೆಟ್ಟಿ, ಚಂದ್ರ ಮಲ್ಲಾರ್ ರಾಜೇಶ್ ಕುಂದರ್ ಕಾರ್ಯಕ್ರಮದ ಸಂಚಾಲಕರಾದ ಅನಿಲ್ ಕುಮಾರ್ ಸಹಸಂಚಾಲಕರಾದ ರತ್ನಾಕರ್ ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಕಾಪು : ಕಾಂಗ್ರೆಸ್ ಹೇಳಿಕೆಗೆ ಸೆಡ್ಡು ಹೊಡೆದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯೊಂದಿಗೆ ಸೆಲ್ಫಿಗೆ ಮುಗಿಬಿದ್ದ ಬಿಜೆಪಿ ಕಾರ್ಯಕರ್ತರು

Posted On: 30-09-2022 07:26PM

ಕಾಪು : ಕೇಂದ್ರ ಸಚಿವೆ ಹಾಗೂ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ಕಾಪುವಿಗೆ ಶುಕ್ರವಾರ ಆಗಮಿಸಿದ ಸಂದರ್ಭ ಬಿಜೆಪಿ ಕಾರ್ಯಕರ್ತರು ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.

ಎರಡು ದಿನದ ಹಿಂದೆ ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡ ಮಿಥುನ್ ರೈ ಅವರು ಶೋಭಾ ಕರಂದ್ಲಾಜೆ ಉಡುಪಿಗೆ ಬರುತ್ತಿಲ್ಲ ಅವರು ಎರಡು ದಿನಗಳೊಳಗೆ ಬಂದರೆ ಅವರೊಂದಿಗೆ ಸೆಲ್ಫಿ ಕಳುಹಿಸಿದವರಿಗೆ ಬಹುಮಾನ ನೀಡುವ ಹೇಳಿಕೆ ನೀಡಿದ್ದರು.

ಆ ಪ್ರಯುಕ್ತ ಬಿಜೆಪಿ ಕಾರ್ಯಕರ್ತರು ಮಿಥುನ್ ಹೇಳಿಕೆಗೆ ಸೆಡ್ಡು ಹೊಡೆಯಲು ಸೆಲ್ಫಿ ತೆಗೆದುಕೊಂಡರು.

ಉಚ್ಚಿಲ : ಸಂಗೀತ ಪ್ರಿಯರ ಹೃಣ್ಮನ ಸೆಳೆದ ಶತವೀಣಾವಲ್ಲರಿ

Posted On: 30-09-2022 07:14PM

ಉಚ್ಚಿಲ : ನವರಾತ್ರಿಯ ಪುಣ್ಯಕಾಲ, ಲಲತಾ ಪಂಚಮಿಯ ಶುಭಕಾಲದಲ್ಲಿ ಶಾರದಾ ಮಾತ್ರೆಗೆ ಪ್ರಿಯವಾದ ವೀಣಾವಾದನ ಶತವೀಣಾವಲ್ಲರಿ ವಿದ್ವಾನ್ ಪವನ ಬಿ. ಆರ್.ಆಚಾರ್ ಮಣಿಪಾಲ ಇವರ ನಿರ್ದೇಶನ ಮತ್ತು ನಿರ್ವಹಣೆಯಲ್ಲಿ ಶತವೀಣಾವಲ್ಲರಿ ಶುಕ್ರವಾರ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಜರಗಿತು.

ಮಣಿಪಾಲ ಕಲಾ ಸ್ಪಂದನ ತಂಡದ ಜೊತೆಗೆ ಉಡುಪಿ, ಕಾರ್ಕಳ ಭಾಗದ ವೀಣಾ ವಾದಕರು ಜೊತೆಯಾದರು. ಸುಮಾರು 101 ವೀಣಾವಾದಕರು, ಜೊತೆಗೆ 14 ಸಹವಾದಕರು, 6 ಹಿನ್ನೆಲೆ ವಾದಕರು ಭಾಗಿಯಾಗಿದ್ದರು.

ಸನ್ಮಾನ : ವಿದ್ವಾನ್ ಪವನ ಬಿ. ಆರ್.ಆಚಾರ್ ಮಣಿಪಾಲ ಇವರನ್ನು ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು. ವೀಣಾವಾದನವು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು.

ಕಾಪು : ಸಮಾಜ ಸೇವಾ ವೇದಿಕೆ ವತಿಯಿಂದ ಕಾಪು ಪೊಲೀಸ್ ಠಾಣಾ ಕಟ್ಟಡದ ನವೀಕರಣಕ್ಕೆ ಸಿಮೆಂಟ್ ನೆರವು

Posted On: 30-09-2022 03:22PM

ಕಾಪು : ಸಮಾಜ ಸೇವಾ ವೇದಿಕೆ ಕಾಪು ವತಿಯಿಂದ ಕಾಪು ಪೊಲೀಸ್ ಠಾಣಾ ಕಟ್ಟಡದ ನವೀಕರಣಕ್ಕೆ ಸಂಬಂಧಿಸಿದಂತೆ ಸ್ಲಾಪ್ ಮಾಡಲು ಸುಮಾರು 70 ಚೀಲ ಸಿಮೆಂಟ್ ಅಗತ್ಯತೆಯನ್ನು ಮನಗಂಡು ತಕ್ಷಣ ಸ್ಪಂದಿಸಿ ಠಾಣೆಗೆ ಸಿಮೆಂಟ್ ಕಳುಹಿಸಿದ ಸಮಾಜ ಸೇವಾ ವೇದಿಕೆ ಅಧ್ಯಕ್ಷರಾದ ಮೊಹಮ್ಮದ್ ಫಾರೂಕ್ ಚಂದ್ರನಗರ ನೇತೃತ್ವದಲ್ಲಿ ಕಾಪು ಠಾಣಾಧಿಕಾರಿ ಪಿ.ಎಸ್.ಐ ಶ್ರೀ ಶೈಲ ಡಿ.ಎಂ ರವರಿಗೆ ಹಸ್ತಾಂತರಿಸಲಾಯಿತು

ಈ ಸಂದರ್ಭದಲ್ಲಿ ಮಾತನಾಡಿದ ಠಾಣಾಧಿಕಾರಿಯವರು ಸಮಾಜ ಸೇವಾ ವೇದಿಕೆಯ ಫಾರೂಕ್ ಚಂದ್ರನಗರ ನೇತ್ರತ್ವದಲ್ಲಿ ಕೋವಿಡ್ ಸಂದರ್ಭ ಕಷ್ಟದಲ್ಲಿದ್ದ ಕುಟುಂಬಕ್ಕೆ ಅಕ್ಕಿ ಮತ್ತು ದಿನಸಿ ,ಆಹಾರ, ಮೆಡಿಕಲ್ ಕಿಟ್, ಮಾಸ್ಕ್, ಗ್ಲೌಸ್, ಸಾನಿಟೈಜರ್ ನೀಡಿದನ್ನು ಹಾಗೂ ಇನ್ನಿತರ ಕಾರ್ಯಕ್ರಮವನ್ನು ಸ್ಮರಿಸಿದರು ಹಾಗೂ ವೇದಿಕೆಯ ಹತ್ತಾರು ಸಾಮಾಜಿಕ ಕಳಕಳಿಯ ಕಾರ್ಯಕ್ರಮ ಜನರಿಗೆ ಸಹಾಯ ಆಗುವಂತೆ ಮಾಡಿದೆ ಎಂದರು.

ನಮ್ಮ ಪೊಲೀಸ್ ಠಾಣೆಯ ನವೀಕರಣಕ್ಕೆ 70 ಚೀಲ ಸಿಮೆಂಟ್ ನೀಡಿದ್ದು ಅವರ ಸಾಮಾಜಿಕ ಬಗ್ಗೆ ಇರುವ ಕಾಳಜಿ ಎತ್ತಿ ತೋರಿಸುತ್ತದೆ ಎಂದರು ಮುಂದೆಯೂ ಸಮಾಜಕ್ಕೆ ಇವರಿಂದ ಉತ್ತಮ ಕಾರ್ಯಕ್ರಮ ಸಿಗುವಂತಾಗಲಿ ಎಂದು ಹಾರೈಸಿದರು

ಈ ಸಂದರ್ಭದಲ್ಲಿ ತನಿಖೆ ವಿಭಾಗದ ಕ್ರೈಂ ಪಿ.ಎಸ್.ಐ ಎಂ. ಭರತೇಶ್ ಕಂಕಣವಾಡಿ ಸಮಾಜ ಸೇವಾ ವೇದಿಕೆ ಗೌರವಧ್ಯಕ್ಷರಾದ ದಿವಾಕರ ಬಿ ಶೆಟ್ಟಿ ಕಳತ್ತೂರು, ಸಂಚಾಲಕರಾದ ದಿವಾಕರ ಡಿ ಶೆಟ್ಟಿ ಕಳತ್ತೂರು,ಕಾರ್ಯದರ್ಶಿ ಲೋಕೇಶ್ ಭಟ್ ಪಾದೂರು, ಸದಸ್ಯರುಗಳಾದ ಅಶೋಕ್ ಶೇರಿಗಾರ್ ಅಲೆವೂರು, ಹಸನ್ ಇಬ್ರಾಹಿಂ ಹೆಚ್. ಆರ್. ರೆಸಿಡೆನ್ಸಿ ಶಿರ್ವ, ಸಿ.ಆರ್.ಪ್ರಾಪರ್ಟಿಸ್ ಸಂತೋಷ್ ಆಚಾರ್ಯ ಶಿರ್ವ, ಸಾದಿಕ್ ಸಾಹಿಲ್ ಫೇಬ್ರಿಕೇಟರ್ಸ್ ಕಾಪು, ಸರ್ಫ್ರಾಜ್ ಏರ್ಮಲ್, ಗಣೇಶ್ ನಾಯ್ಕ್ ಪಯ್ಯಾರು ಕಾಪು ಪೊಲೀಸ್ ಠಾಣಾ ಸಿಬಂದಿಯವರು ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಮಾಜ ಸೇವಾ ವೇದಿಕೆ ಗೌರವ ಸಲಹೆಗಾರರದ ದಯಾನಂದ ಕೆ ಶೆಟ್ಟಿ ದೆಂದೂರು ನಿರೂಪಿಸಿದರು.

ಕಾರ್ಕಳ : ಕ್ರಿಯೇಟಿವ್ ಕಾಲೇಜಿನಲ್ಲಿ ವಿಶ್ವ ಹೃದಯ ದಿನಾಚರಣೆ

Posted On: 30-09-2022 02:08PM

ಕಾರ್ಕಳ : ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ಆರೋಗ್ಯಕ್ಕಾಗಿ ವಿಶ್ವ ಹೃದಯ ದಿನಾಚರಣೆಯನ್ನು ಆಚರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾನಾಡಿದ ಪ್ರಾಂಶುಪಾಲರಾದ ವಿದ್ವಾನ್‌ ಗಣಪತಿ ಭಟ್‌ ಇಂದು ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿವೆ. ಆರೋಗ್ಯವಂತ ಹೃದಯವಿರಬೇಕಾದರೆ ನಿಯಮಿತವಾದ ವ್ಯಾಯಾಮ, ಸರಿಯಾದ ಆಹಾರ ಕ್ರಮವನ್ನು ಪಾಲಿಸಬೇಕು. ಜಗತ್ತಿನ ಎಲ್ಲರೂ ವಿಶ್ವ ಹೃದಯ ದಿನವನ್ನು ಹೃದ್ರೋಗಿಗಳೇ ಇಲ್ಲವಾಗಿಸುವ ಮೂಲಕ ಆಚರಿಸುವಂತೆ ಆಗಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಕ್ರಿಯೇಟಿವ್‌ ಸೈನ್ಸ್‌ ಕ್ಲಬ್‌ನ ಮುಖ್ಯಸ್ಥ ಲೋಹಿತ್‌ ಎಸ್‌ ಕೆ ಸುಂದರ ಮತ್ತು ಸ್ವಸ್ಥಮನಸ್ಸುಗಳ ಮೂಲಕ ಎಲ್ಲರೂ ಹೃದಯವಂತರಾಗಿ, ಆರೋಗ್ಯವಂತರಾಗಲಿ ಎಂದು ಹಾರೈಸಿದರು. ನಂತರ ವಿದ್ಯಾರ್ಥಿಗಳಿಂದ ಹೃದಯ ಸಂಬಂಧಿ ಘೋಷಣೆಗಳು ನೆರವೇರಿತು.

ಈ ಸಂದರ್ಭದಲ್ಲಿ ಕ್ರಿಯೇಟಿವ್‌ ಕಾಲೇಜಿನ ಸಹ ಸಂಸ್ಥಾಪಕರಾದ ಗಣಪತಿ ಭಟ್‌ ಕೆ ಎಸ್‌, ಆದರ್ಶ ಎಂ ಕೆ ಅಮೃತ್‌ ರೈ ಉಪನ್ಯಾಸಕರಾದ ಉಮೇಶ್‌, ರಾಘವೇಂದ್ರ ರಾವ್‌, ರಾಜೇಶ್‌ ಶೆಟ್ಟಿ, ಡಾ. ಆದಂ ಶೇಕ್, ಅಕ್ಷತಾ ಜೈನ್‌, ಸುನಿಲ್‌, ಹರೀಶ್‌ ಉಪಸ್ಥಿತರಿದ್ದರು. ಉಪನ್ಯಾಸಕರಾದ ರಾಮಕೃಷ್ಣ ಹೆಗಡೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಅಕ್ಟೋಬರ್ 1 : ಸಹಬಾಳ್ವೆ ಕಾಪು ತಾಲೂಕು ಘಟಕದಿಂದ ಸಾಮರಸ್ಯ ನಡಿಗೆ

Posted On: 30-09-2022 01:57PM

ಕಾಪು : ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಜನ್ಮದಿನದ ಅಂಗವಾಗಿ ಸಾಮರಸ್ಯದ ಬದುಕಿನ ಉಳಿವಿಗಾಗಿ ಸಹಬಾಳ್ವೆ ಕರ್ನಾಟಕ ರಾಜ್ಯಾದ್ಯಂತ ಸಾಮರಸ್ಯ ನಡಿಗೆ ಕಾರ್ಯಕ್ರಮ ಆಯೋಜಿಸಿದ್ದು ಆ ಪ್ರಯುಕ್ತ ಸಹಬಾಳ್ವೆ ಕಾಪು ತಾಲೂಕು ಘಟಕ ಸಾಮರಸ್ಯ ನಡಿಗೆಯನ್ನು ಅಕ್ಟೋಬರ್ 1, ಶನಿವಾರ ಸಂಜೆ 4:30 ಕ್ಕೆ ಹಮ್ಮಿಕೊಂಡಿದ್ದು, ಕಾಪು ಜನಾರ್ದನ ದೇವಸ್ಥಾನದಿಂದ ಪ್ರಾರಂಭಗೊಂಡು ಕಾಪು ಪೇಟೆಯಲ್ಲಿ ಸಮಾಪನಗೊಳ್ಳಲಿದೆ. ಸಮಾಪನ ಸಭೆಯಲ್ಲಿ ವಿವಿಧ ಧರ್ಮಗಳ ಮುಖಂಡರು ಭಾಗವಹಿಸಲಿದ್ದಾರೆ ಎಂದು ಸಹಬಾಳ್ವೆ ಕಾಪು ಅಧ್ಯಕ್ಷರಾದ ನಿರ್ಮಲ ಕುಮಾರ್ ಹೇಳಿದರು. ಅವರು ಕಾಪು ಪ್ರೆಸ್ ಕ್ಲಬ್ ನಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿಯನ್ನು ನೀಡಿದರು.

ಇನ್ನೇನು ಚುನಾವಣೆಗಳು ಹತ್ತಿರವಾಗುತ್ತಿದೆ. ಈ ಸಂದರ್ಭದಲ್ಲಿ ಧರ್ಮ ಮತ್ತು ಇನ್ನಿತರ ವಿಷಯಗಳ ಮೂಲಕ ಅಹಿತಕರ ಘಟನೆಗಳನ್ನು ಸೃಷ್ಟಿಸಿ ಶಾಂತಿ ಕದಡುವ ಸಮಯದಲ್ಲಿ ಸಾಮರಸ್ಯದ ನಡಿಗೆ ಅನಿವಾರ್ಯ. ಮುಂದಿನ ದಿನಗಳಲ್ಲಿ ಸರ್ವ ಧರ್ಮ, ಸಾಮರಸ್ಯದ ಚಿಂತನೆಯ ಹಲವಾರು ಕಾರ್ಯಕ್ರಮಗಳನ್ನು ಸಹಬಾಳ್ವೆ ಕಾಪು ತಾಲೂಕು ಘಟಕ ಹಮ್ಮಿಕೊಳ್ಳಲಿದೆ ಎಂದರು.

ಈ ಸಂದರ್ಭದಲ್ಲಿ ತಸ್ನೀಮ್ ಅರಾ, ನವೀನ್ ಚಂದ್ರ ಸುವರ್ಣ, ಅಖಿಲೇಶ್, ರಾಲ್ಫಿ ಡಿ ಕೋಸ್ಟ ಮತ್ತಿತರರು ಉಪಸ್ಥಿತರಿದ್ದರು.