Updated News From Kaup
ಶಿರ್ವ ಸಂತ ಮೇರಿ ಮಹಾವಿದ್ಯಾಲಯ ಸ್ವಚ್ಛತಾ ಜನಾಂದೋಲನ - ಪುನೀತ ಸಾಗರ ಅಭಿಯಾನ
Posted On: 28-12-2021 08:15PM
ಶಿರ್ವ: ನಮ್ಮ ಪರಿಸರ ಸ್ವಚ್ಛವಾಗಿದ್ದರೆ ಎಷ್ಟೋ ರೋಗಗಳನ್ನು ಮದ್ದಿಲ್ಲದೇ ದೂರವಾಗಿಸಲು ಸಾಧ್ಯ. ನಮಗೆ ಶಿಕ್ಷಣ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಪರಿಸರ ಕಾಳಜಿ ಕೂಡ. ಇಂದು ನಮ್ಮ ಎನ್ ಸಿ ಸಿ ಘಟಕದ ವಿದ್ಯಾರ್ಥಿಗಳು ಕಾಪು ಬೀಚ್ ಸ್ವಚ್ಛಗೊಳಿಸುವ ಮೂಲಕ ಸರಕಾರದ ಕೆಲಸ ಮಾತ್ರವಲ್ಲ ಪ್ರಜ್ಞಾವಂತ ನಾಗರಿಕರೆಲ್ಲರ ಕತ೯ವ್ಯವೆಂದು ಸಾಬೀತು ಪಡಿಸಿದರು ಹಾಗೂ ಕಡಲ ಕಿನಾರೆಯ ವ್ಯಾಪಾರಸ್ಥರು ಸ್ವಚ್ಛತೆಯ ಬಗ್ಗೆ ತಾವೇ ಮುತುವಜಿ೯ವಹಿಸಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಮತ್ತು ಪ್ರವಾಸಿಗರಿಗೆ ಸ್ವಚ್ಛತೆಯ ಬಗ್ಗೆ ತಿಳುವಳಿಕೆ ಮೂಡಿಸಿದಾಗ ಸ್ವಚ್ಛ ಭಾರತದ ಕನಸು ಸಾಕಾರಗೊಳ್ಳಲು ಸಾಧ್ಯ ಎಂದು ಶಿವ೯ ಸಂತಮೇರಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಹೆರಾಲ್ಡ್ ಐವನ್ ಮೊನೀಸ್ ರವರು ಬೀಚ್ ಕ್ಲೀನಿಂಗ್ ಕಾರ್ಯಕ್ರಮ ಕ್ಕೆ ಚಾಲನೆ ನೀಡಿ ಮಾತನಾಡಿದರು.
ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅನಿವಾಸಿ ಕನ್ನಡಿಗರಿಂದ ಟ್ವಿಟರ್, ಇಮೇಲ್ ಅಭಿಯಾನ
Posted On: 27-12-2021 11:16PM
ಉಡುಪಿ : ತಮಗಿರುವ ಸಮಸ್ಯೆಗಳ ಬಗ್ಗೆ, ಬಹುಕಾಲದಿಂದ ಈಡೇರದ ಬೇಡಿಕೆಗಳ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆಯಲು 30ಕ್ಕೂ ಹೆಚ್ಚಿನ ದೇಶದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ಪ್ರತಿನಿಧಿಸುವ ನೂರಕ್ಕೂ ಹೆಚ್ಚಿನ ಕನ್ನಡ ಪರ ಸಂಘಟನೆಗಳ ಸಹಯೋಗದಲ್ಲಿ ಒಗ್ಗಟ್ಟಾಗಿ ಟ್ವಿಟರ್ ಮತ್ತು ಈಮೇಲ್ ಅಭಿಯಾನ ನಡೆಸಲು ಮುಂದಾಗಿದ್ದು, ಜನವರಿ 2ರಂದು ಮಧ್ಯಾಹ್ನ ಭಾರತೀಯ ಕಾಲಮಾನ ಸಂಜೆ 4ಗಂಟೆಗೆ ಟ್ವಿಟರ್ ಅಭಿಯಾನಕ್ಕೆ ಏಕಕಾಲದಲ್ಲಿ ಚಾಲನೆ ನೀಡಿ ಸರಣಿ ಮನವಿಗಳನ್ನು, ಬೇಡಿಕೆಗಳನ್ನು ಇಡಲಿದ್ದಾರೆ.
ಕಾಪು ಪುರಸಭಾ ಚುನಾವಣೆ : ಶೇ.73.95 ಮತದಾನ
Posted On: 27-12-2021 11:12PM
ಕಾಪು : ಇಂದು ನಡೆದ ಪುರಸಭೆಯ 23 ವಾರ್ಡ್ ಗಳ 23 ಮತಗಟ್ಟೆಗಳಲ್ಲಿ ಸಾರ್ವತ್ರಿಕ ಚುನಾವಣೆಯು ಶಾಂತಿಯುತವಾಗಿ ಹಾಗೂ ನ್ಯಾಯಯುತವಾಗಿ ಜರಗಿದೆ. ಒಟ್ಟು 17366 ಮತದಾರರಿದ್ದು, ಈ ಪೈಕಿ 8196 ಪುರುಷ ಮತದಾರರಲ್ಲಿ 5772 ಮತದಾರರು, 9170 ಮಹಿಳಾ ಮತದಾರರಲ್ಲಿ 7070 ಮತದಾರರು ಮತ ಚಲಾವಣೆ ಮಾಡಿದ್ದು ಶೇ. 73.95% ಮತದಾನ ಆಗಿರುತ್ತದೆ.
ನಟನೆಗೂ ಸೈ...ಸಮಾಜ ಸೇವೆಯಲ್ಲೂ ಎತ್ತಿದ ಕೈ...ಲವಿನಾ ಫೆರ್ನಾಂಡೀಸ್
Posted On: 27-12-2021 07:39PM
ಅನೇಕರು ಕನಸುಗಳನ್ನು ಕಂಡು ಅದನ್ನು ನನಸು ಮಾಡಲು ಕಷ್ಟಪಟ್ಟು ಅದನ್ನು ಸಾಧಿಸಿ ಅನೇಕರಿಗೆ ದಾರಿ ದೀಪವಾಗುತ್ತಾರೆ. ಕೆಲವರ ಯಶಸ್ಸಿನ ಕಥೆ ಹಲವರಿಗೆ ಗೊತ್ತಿರುತ್ತದೆ. ಇನ್ನು ಕೆಲವರ ಯಶಸ್ಸು ಮಾತ್ರ ಕಾಣುತ್ತೆ. ಆದರೆ, ಅದರ ಹಿಂದೆ ಪಟ್ಟ ಪರಿಶ್ರಮ ಯಾರಿಗೂ ಕಾಣುವುದಿಲ್ಲ. ಕೆಲವರು ತಮ್ಮ ಸಂತೋಷವನ್ನು ಮಾತ್ರ ಹೇಳಿಕೊಳ್ಳುತ್ತಾರೆ. ಆದರೆ, ಅವರ ಸಾಧನೆಯ ಹಿಂದಿನ ಕಥೆಯನ್ನು ಅವರು ಎಲ್ಲಿಯೂ ಹೇಳಿಕೊಳ್ಳುವುದಿಲ್ಲ. ಇಂತಹ ವ್ಯಕ್ತಿಗಳಲ್ಲಿ ಒಬ್ಬರು ಲವಿನಾ ಫರ್ನಾಂಡೀಸ್. ಕೂಡು ಕುಟುಂಬದಲ್ಲಿ ಜನಿಸಿದವರು ಲವಿನಾ. ಹತ್ತಿರದ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ, ಅಮ್ಮನ ಕೈ ಅಡುಗೆ, ಅಪ್ಪನ ಬೈಗುಳ, ಒಡಹುಟ್ಟಿದವರ ಜೊತೆಗಿನ ತುಂಟತನಗಳು ಹೀಗೆ ಬಾಲ್ಯದಲ್ಲಿಯೇ ಚುರುಕಾಗಿದ್ದವರು. ಬೇರೆಯವರ ಕಷ್ಟಕ್ಕೆ ಬೇಗನೆ ಸ್ಪಂದಿಸಿ, ಅವರಿಗೆ ಸಹಾಯ ಮಾಡುವ ಗುಣ ಅವರಿಗೆ ಎಳವೆಯಲ್ಲಿಯೇ ಬಂದಿದೆ.
ಜಿಲ್ಲೆಯಲ್ಲಿ ನೈಟ್ಕರ್ಫ್ಯೂ ಮತ್ತು ಹೊಸ ವರ್ಷಾಚರಣೆ ಕುರಿತ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಪಾಲನೆ : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ
Posted On: 27-12-2021 07:31PM
ಉಡುಪಿ : ಓಮಿಕ್ರಾನ್ ನಿಯಂತ್ರಣ ಕುರಿತಂತೆ ರಾಜ್ಯ ಸರ್ಕಾರ ಜಾರಿಗೊಳಿಸಿರುವ ನೈಟ್ಕರ್ಫ್ಯೂ ಮತ್ತು ಹೊಸ ವರ್ಷಾಚರಣೆ ಕುರಿತ ಮಾರ್ಗಸೂಚಿಗಳನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಆನುಷ್ಠಾನಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಇಂದು ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ಹಾಲ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಓಂತಿಬೆಟ್ಟು : ವೃದ್ಧೆಯೋರ್ವರ ಮನೆಗೆ ಬೇಕಾದ ಸವಲತ್ತುಗಳನ್ನು ನೀಡಿ ಮಾನವೀಯತೆ ಮೆರೆದ ತಂಡ
Posted On: 27-12-2021 12:18PM
ಉಡುಪಿ : ಹಿರಿಯಡ್ಕ ಸಮೀಪ ಓಂತಿಬೆಟ್ಟು ಎಂಬ ಊರಿನಲ್ಲಿ ವೃದ್ಧೆಯೋರ್ವರ ಮನೆಯಿದ್ದು ಸರಿಯಾದ ವ್ಯವಸ್ಥೆಯನ್ನು ಹೊಂದಿರದ ಈ ಮನೆಗೆ ಬೇಕಾದ ಸವಲತ್ತುಗಳನ್ನು ಸಮಾಜ ಸೇವಕರಾದ ನೀತಾ ಪ್ರಭು ಮತ್ತು ತಂಡದಿಂದ ನೀಡಲ್ಪಟ್ಟಿತು.
ಡ್ರಗ್ಸ್ ಮತ್ತು ಸೆಕ್ಸ್ ಜಿಹಾದಿಗೆ ಕ್ರೈಸ್ತ ಯುವತಿ ಬಲಿ - ರಕ್ಷಣೆ ಕೋರಿ ಯುವತಿ ತಾಯಿ ವಿಶ್ವ ಹಿಂದೂ ಪರಿಷತ್ ಗೆ ಮನವಿ
Posted On: 26-12-2021 10:33PM
ಮಂಗಳೂರು : ಜಿಲ್ಲೆಯಲ್ಲಿ ಸದ್ದು ಮಾಡುತ್ತಿರುವ ಡ್ರಗ್ಸ್ ಮತ್ತು ಲವ್ ಜಿಹಾದ್ ಗೆ ಇದೀಗ ಕ್ರೈಸ್ತ ಸಮುದಾಯದ ಯುವತಿಯೋರ್ವಳು ಬಲಿಯಾಗಿ ಆಕೆಯ ತಾಯಿ ವಿಶ್ವ ಹಿಂದೂ ಪರಿಷತ್ ಗೆ ಲಿಖಿತ ದೂರು ನೀಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಸಿ.ಎಸ್.ಸಿ ಡಿಜಿಟಲ್ ಸೇವಾ ಕೇಂದ್ರ : ಜನವರಿ 4 ಶುಭಾರಂಭ ; ಕಾರ್ಯನಿರ್ವಹಿಸಲು ಜನ ಬೇಕಾಗಿದ್ದಾರೆ
Posted On: 26-12-2021 07:10PM
ಕಾಪು : ಸಿ.ಎಸ್.ಸಿ ಡಿಜಿಟಲ್ ಸೇವಾ ಕೇಂದ್ರವು ಜನವರಿ 4ರಂದು ಶುಭಾರಂಭಗೊಳ್ಳಲಿದೆ. ಸರಕಾರದ ಯೋಜನೆಗಳು ತ್ವರಿತವಾಗಿ ಜನರಿಗೆ ತಲುಪಲು ಸಿ.ಎಸ್.ಸಿ ಕೇಂದ್ರವು ಸಹಕಾರಿಯಾಗಿದೆ.
ಮುಂಬೈ ಶಿವಸೇನಾ ಮುಖಂಡ ಚಂದ್ರಕೃಷ್ಣ ಶೆಟ್ಟಿಯವರಿಂದ ಕಾಪು ಹೊಸ ಮಾರಿಗುಡಿ ಜೀರ್ಣೋದ್ದಾರಕ್ಕೆ 51 ಶಿಲಾ ಸೇವೆ ಸಮರ್ಪಣೆ
Posted On: 26-12-2021 05:14PM
ಕಾಪು : ಮುಂಬೈ ಶಿವಸೇನಾ ಮುಖಂಡರಾದ ಉದ್ಯಮಿ ಚಂದ್ರಕೃಷ್ಣ ಶೆಟ್ಟಿ "ಬೆರ್ಮೋಟ್ಟು" ಮಡುಂಬು, ಇನ್ನಂಜೆ ಇವರು ಇಂದು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ದಾರಕ್ಕೆ 51 ಶಿಲಾ ಸೇವೆ ನೀಡಿ, ಶಿಲಾ ಪುಷ್ಪ ಸಮರ್ಪಣೆ ಮಾಡಿ ಕಾಪು ಮಾರಿಯಮ್ಮನ ಅನುಗ್ರಹ ಪ್ರಸಾದವನ್ನು ಸ್ವೀಕರಿಸಿದರು.
ಜನವರಿ 2ರಂದು ಪಾಂಜಗುಡ್ಡೆಯಲ್ಲಿ ಉಚಿತ ನೇತ್ರ ತಪಾಸಣೆ
Posted On: 26-12-2021 04:39PM
ಶಿರ್ವ : ಧರ್ಮ ಫೌಂಡೇಶನ್ (ರಿ.), ದೇಶೀ ಗೋ ಅಭಿವೃದ್ಧಿ ಕೇಂದ್ರ ಪಾಂಜಗುಡ್ಡೆ, ಶಿರ್ವ ಇವರ ನೇತೃತ್ವದಲ್ಲಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಉಡುಪಿ ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಅಂಧತ್ವ ನಿವಾರಣಾ ವಿಭಾಗ) ಉಡುಪಿ ಇವರ ಸಹಭಾಗಿತ್ವದಲ್ಲಿ ಜನವರಿ 02, ರವಿವಾರದಂದು ಬೆಳಿಗ್ಗೆ ಘಂಟೆ 9ರಿಂದ ಮಧ್ಯಾಹ್ನ 12.30ರ ತನಕ ಧರ್ಮ ಫೌಂಡೇಶನ್(ರಿ.), ದೇಶೀ ಗೋ ಅಭಿವೃದ್ಧಿ ಕೇಂದ್ರ ಪಾಂಜಗುಡ್ಡೆ, ಕಡಂಬು, ಶಿರ್ವ ಇಲ್ಲಿ ಉಚಿತ ನೇತ್ರ ತಪಾಸಣೆ ನಡೆಯಲಿದೆ.
