Updated News From Kaup
ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ ಉಡುಪಿ ತಂಡದಿಂದ ಚೌಕುಳಮಕ್ಕಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗೆ ಉಚಿತ ಶುದ್ಧ ನೀರಿನ ಘಟಕ ಕೊಡುಗೆ
Posted On: 05-12-2021 10:26PM
ಉಡುಪಿ : ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ (ರಿ.) ಉಡುಪಿ ತಂಡವು ಬೈಂದೂರು ವಲಯದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಚೌಕುಳಮಕ್ಕಿಗೆ ಭೇಟಿ ನೀಡಿ ಉಚಿತ ಶುದ್ಧ ನೀರಿನ ಘಟಕವನ್ನು ತಂಡದ ಸ್ಥಾಪಕಧ್ಯಕ್ಷರಾದ ಡಾ. ಕೀರ್ತಿ ಪಾಲನ್ ಅವರ ಹುಟ್ಟುಹಬ್ಬದ ಸವಿನೆನಪಿಗಾಗಿ ನೀಡಲಾಯಿತು.
ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಶ್ರೀಕೃಷ್ಣ ಮಠದಿಂದ ಉತ್ತಮ ಬೆಂಬಲ : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ
Posted On: 05-12-2021 08:39PM
ಉಡುಪಿ : ಜಿಲ್ಲೆಯಲ್ಲಿ ಕೋವಿಡ್ ಸೋಂಕು ನಿಯಂತ್ರಣ ಕಾರ್ಯಕ್ರಮಗಳಿಗೆ ಶ್ರೀಕೃಷ್ಣ ಮಠ ಜಿಲ್ಲಾಡಳಿತಕ್ಕೆ ನೀಡುತ್ತಿರುವ ಬೆಂಬಲ ಹಾಗೂ ಸಹಕಾರದಿಂದ , ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಹಾಯವಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಇಂದು ಶ್ರೀಕೃಷ್ಣ ಮಠದ ಮಧ್ವ ಮಂಟಪದಲ್ಲಿ, ಜಿಲ್ಲೆಯ ವಸಿಗರು ಮತ್ತು ವಲಸಿಗರಿಗೆ ರಾಜಾಂಗಣದಲ್ಲಿ ಅಯೋಜಿಸಿದ್ದ ವಿಶೇಷ ಕೋವಿಡ್ 19 ಲಸಿಕಾ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಬಿವಿಪಿ ಬಜಗೋಳಿ ಘಟಕದ ಉದ್ಘಾಟನೆ
Posted On: 05-12-2021 08:30PM
ಕಾರ್ಕಳ : ಬಜಗೋಳಿ ಸರಕಾರಿ ಪದವಿಪೂರ್ವ ಕಾಲೇಜಿನ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಘಟಕದ ಉದ್ಘಾಟನೆಯು ಡಿಸೆಂಬರ್ 4ರಂದು ನೆರವೇರಿತು.
ಡಿಸೆಂಬರ್ 6 : ಕುತ್ಯಾರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ನೂತನ ಕಟ್ಟಡದ ಶಿಲಾನ್ಯಾಸ
Posted On: 05-12-2021 08:21PM
ಕಾಪು : ಕುತ್ಯಾರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮವು ಡಿಸೆಂಬರ್ 6, ಸೋಮವಾರ ಬೆಳಿಗ್ಗೆ 10 ಗಂಟೆಗೆ ಕುತ್ಯಾರು ಯುವಕ ಮಂಡಲದ ವಠಾರದಲ್ಲಿ ಜರಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯಾಶ್ರಯ-2021 : ಇನ್ನಾ ಬಂಟರ ಸಂಘದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಪುರಸ್ಕಾರ
Posted On: 05-12-2021 08:08PM
ಕಾರ್ಕಳ : ಇಲ್ಲಿನ ಇನ್ನಾ ಬಂಟರ ಸಂಘ (ರಿ.) ಇನ್ನಾದಿಂದ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಸಂಘದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗೌರವ ಪುರಸ್ಕಾರ ಕಾರ್ಯಕ್ರಮ ವಿದ್ಯಾಶ್ರಯ-2021 ಇಂದು ಇನ್ನಾದ ಕಾಚೂರು ಪರಾರಿ ಸಭಾಂಗಣದಲ್ಲಿ ಜರಗಿತು.
ಶುದ್ಧ ಮತದಾರರ ಪಟ್ಟಿ ಸಿದ್ಧಪಡಿಸಿ: ಜಿಲ್ಲಾಧಿಕಾರಿ ಕೂರ್ಮಾರಾವ್
Posted On: 04-12-2021 09:31PM
ಉಡುಪಿ : ಜಿಲ್ಲೆಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಅವಧಿಯಲ್ಲಿ, ಯಾವುದೇ ಗೊಂದಲ ಹಾಗೂ ದೋಷಗಳಿಲ್ಲದ ಶುದ್ಧ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವಂತೆ ಜಿಲ್ಲೆಯ ಎಲ್ಲಾ ಮತಗಟ್ಟೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಸೂಚನೆ ನೀಡಿದರು. ಅವರು ಶನಿವಾರ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ, ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯಲ್ಲಿ ತೊಡಗಿರುವ ಉಡುಪಿ ಮತ್ತು ಕಾಪು ತಾಲೂಕಿನ ಎಲ್ಲಾ ಮತಗಟ್ಟೆ ಅಧಿಕಾರಿಗಳಿಗೆ ನಡೆದ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ-ಬೀಳ್ಕೊಡುಗೆ ಸಮಾರಂಭ
Posted On: 04-12-2021 09:25PM
ಶಿರ್ವ: ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದಲ್ಲಿ 36ವರ್ಷ ಅಧಿಕ ಕಾಲ ಕಾಲೇಜಿನ ಕಚೇರಿ ಸಹಾಯಕ ಸಿಬ್ಬಂದಿರಾದ ಶ್ರೀರಂಗರವರ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮ ಇಂದು ನೆರವೇರಿತು. ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರ ಜೊತೆಗೆ ಕಚೇರಿ ಸಿಬ್ಬಂದಿ ವರ್ಗದವರು ಪ್ರಮುಖ ಪಾತ್ರವನ್ನು ವಹಿಸಲಿದ್ದಾರೆ. ಕಾಲೇಜಿನ ಸ್ವಚ್ಛತೆ ಮತ್ತು ಶುಚಿತ್ವವನ್ನು ಕಾಪಾಡುವುದರಲ್ಲಿ ಸಹಾಯಕ ಸಿಬ್ಬಂದಿ ಪಾತ್ರ ಮಹತ್ವದ್ದು. ಶ್ರೀರಂಗರವರು ನಮ್ಮ ಸಂಸ್ಥೆಯಲ್ಲಿ ಅಚ್ಚುಕಟ್ಟಾಗಿ ಅವರ ಕಾರ್ಯದಕ್ಷತೆಯನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದರು ಹಾಗೂ ಅವರ ಕಾರ್ಯವೈಖರಿಯಿಂದ ಎಲ್ಲರ ಮನದಾಳವನ್ನು ಹೊಂದಿದ್ದರು. ಮೃದು ಸ್ವಭಾವಿ ಆಗಿದ್ದ ಶ್ರೀರಂಗರವರ ಎಲ್ಲರ ಜೊತೆಗೆ ಬಾಳಿ ತಮ್ಮ ಎಲ್ಲಾ ಸಹಕಾರವನ್ನು ನೀಡುತ್ತಿದ್ದರು ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂತ ಮೇರಿ ಸಮೂಹ ಸಂಸ್ಥೆಗಳ ಸಂಚಾಲಕರಾದ ಅತಿ ವಂದನೀಯ ಧರ್ಮಗುರುಗಳಾದ ಡೇನ್ನಿಸ್ ಅಲೆಕ್ಸಾಂಡರ್ ಡೇಸ ರವರು ಮಾತನಾಡಿ ಶುಭ ಹಾರೈಸಿದರು.
ಕಾರ್ತಿಕದ 'ದೀಪಾರಾಧನೆ' ಮುಗಿತಾಯ - ಎಲ್ಲೂರಿನ ಲಕ್ಷದೀಪೋತ್ಸವ
Posted On: 04-12-2021 09:07AM
" ದೀಪಜ್ಯೋತಿಃ ಪರಂ ಬ್ರಹ್ಮ ದೀಪಜ್ಯೋತೀ ತಮೋಪಹಃ ದೀಪೇನ ಸಾಧ್ಯತೇ ಸರ್ವಂ ಸಂಧ್ಯಾದೀಪ ನಮೋಸ್ತುತೆ" ಹೀಗೆಂದು ದೀಪವನ್ನು ಸ್ತುತಿಸುತ್ತಾ , ಬೆಳಕಿನ ತಿಂಗಳು ಕಾರ್ತಿಕಮಾಸದ ಅಂತ್ಯದ ಅಮಾವಾಸ್ಯೆಯಂದು ತಿಂಗಳು ಪೂರ್ತಿ ನೆರವೇರಿದ ದೀಪಾರಾಧನೆಯ ಸರ್ವ ಯಶಸ್ಸು ಮನುಕುಲಕ್ಕೆ ಪ್ರಾಪ್ತಿಯಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸೋಣ. ಶರತ್ಕಾಲದಲ್ಲಿ( ಶರದೃತು) ವಿಶ್ವಕ್ಕೆ ಮಂಗಳವಾದುದರ ಬಗ್ಗೆ ಪುರಾಣಗಳು ಉಲ್ಲೇಖಿಸುತ್ತವೆ.ಮಹಿಷಾಸುರ ,ನರಕ ದೈತ್ಯರೇ ಮುಂತಾದವರ ವಧೆಯಾಗಿ ಶಾಂತಿ ಸ್ಥಾಪನೆಯಾಗಿದೆ.ಕತ್ತಲಲ್ಲಿದ್ದವರು ಬೆಳಕಿಗೆ ಬಂದಕಾಲ.ಸ್ತ್ರೀಯರ ಬಂಧಮುಕ್ತಿ - ರಕ್ಷಣೆಯಾದ ಕಾಲ.ಈ ಸಂದರ್ಭವನ್ನು ಬೆಳಕು ಹಚ್ಚಿ ಸಂಭ್ರಮಿಸಿದಕಾಲ.ಇದೇ ವೇಳೆ 'ಉತ್ಥಾನ ದ್ವಾದಶಿ'ಯಂತಹ ಶ್ರೀಮನ್ನಾರಾಯಣನು ನಿದ್ದೆ ಮುಗಿಸಿ ಎದ್ದ ಪುಣ್ಯಕಾಲವೂ ಒದಗಿಬರುತ್ತದೆ. ಶರನ್ನವರಾತ್ರಿ ,ದೀಪಾವಳಿ, ಉತ್ಥಾನ ದ್ವಾದಶಿ ,ಕಾರ್ತಿಕ ಸೋಮವಾರಗಳೇ ಮುಂತಾದ ಪರ್ವಗಳು ಸನ್ನಿಹಿತವಾಗುವುದು ಆಶ್ವಯುಜ ಮತ್ತು ಕಾರ್ತಿಕಮಾಸಗಳನ್ನು ಒಳಗೊಂಡ 'ಶರದೃತು'ವಿನಲ್ಲಿ.ಮುಂದೆ ಹೇಮಂತ ಋತು.
ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
Posted On: 03-12-2021 09:02PM
ಉಡುಪಿ : ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದ ಗೌರವಾನ್ವಿತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು.
ಉಡುಪಿ ಶ್ರೀ ಕೃಷ್ಣ ಮಠ ಭೇಟಿ ; ಅದಮಾರು ಮಠಾಧೀಶರಿಂದ ಪರ್ಯಾಯ ಮಂಗಲೋತ್ಸವದ ಆಮಂತ್ರಣ ಪತ್ರಿಕೆ ಸ್ವೀಕರಿಸಿದ ರಾಜ್ಯಪಾಲರು
Posted On: 03-12-2021 08:57PM
ಉಡುಪಿ : ಕರ್ನಾಟಕ ಸರ್ಕಾರದ ರಾಜ್ಯಪಾಲರಾದ ತಾವರ್ ಚಂದ್ ಗೆಹ್ಲೋಟ್ ಇವರು ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಆಗಮಿಸಿ ದೇವರ ದರ್ಶನ ಪಡೆದರು.
