Updated News From Kaup
ರೋಟರಿ ಸೈಬ್ರಕಟ್ಟೆಯಿಂದ ಆಸರೆ ವಿಶೇಷ ಮಕ್ಕಳ ಶಾಲೆಗೆ ಸೈಕಲ್ ಹಸ್ತಾಂತರ
Posted On: 13-11-2021 09:07AM
ಉಡುಪಿ : ರೋಟರಿ ಕ್ಲಬ್ ಸೈಬ್ರಕಟ್ಟೆ ಸದಸ್ಯರು ಮಣಿಪಾಲದ 'ಆಸರೆ' ವಿಶೇಷ ಮಕ್ಕಳ ಶಾಲೆಗೆ ತೆರಳಿ, ಮಂಗಳೂರಿನಲ್ಲಿ ನಡೆಯುವ ವಿಶೇಷ ಮಕ್ಕಳ ಜಿಲ್ಲಾಮಟ್ಟದ ಸೈಕಲ್ ಸ್ಪರ್ಧೆಯಲ್ಲಿ ಆಸರೆಯ ಮಕ್ಕಳು ಭಾಗವಹಿಸುವುದರಿಂದ ಅವರ ಅನುಕೂಲಕ್ಕಾಗಿ ರೋಟರಿ ಸೈಬ್ರಕಟ್ಟೆಯಿಂದ ಅಧ್ಯಕ್ಷ ಯು. ಪ್ರಸಾದ್ ಭಟ್ ಆಸರೆ ಟ್ರಸ್ಟ್ ನ ಅಧ್ಯಕ್ಷ ಜೈವಿಠಲ್ ಅವರಿಗೆ ಸೈಕಲ್ ಹಸ್ತಾಂತರ ಮಾಡಿದರು.
ನವೆಂಬರ್ 14 : “ ಗ್ರಾಮ ಒನ್” ಸೇವಾ ಕೇಂದ್ರಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನ
Posted On: 13-11-2021 08:57AM
ಉಡುಪಿ : ನಗರ ಪ್ರದೇಶಗಳಲ್ಲಿ ಜನರಿಗೆ ಸೇವೆ ನೀಡುತ್ತಿರುವ ಕರ್ನಾಟಕ ಒನ್, ಬೆಂಗಳೂರು ಒನ್ ಮಾದರಿಯಲ್ಲಿ “ ಗ್ರಾಮ ಒನ್” ಆರಂಭಿಸಲಾಗಿದೆ. “ಗ್ರಾಮಒನ್” ಯೋಜನೆಯನ್ನು ರಾಜ್ಯದ 12 ಜಿಲ್ಲೆಗಳಲ್ಲಿ ಅನುಷ್ಟಾನ ಮಾಡುವ ಸಂಬಂಧ ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯ ತಯಾರಿ ನಡೆಸಿದೆ. ಅದರಂತೆ ಉಡುಪಿ ಜಿಲ್ಲೆಯ ನಗರ ಪ್ರದೇಶ ಹೊರತು ಪಡಿಸಿ ಉಳಿದ ಗ್ರಾಮಗಳಲ್ಲಿ ಪ್ರಾಂಚೈಂಸಿ ಆಧಾರದಲ್ಲಿ ಸೇವಾ ಕೇಂದ್ರ ಆರಂಭಿಸಲು ಉದ್ದೇಶಿಸಲಾಗಿದೆ.
ಕಾಪು : ನವೆಂಬರ್ 14ರಂದು ಆರೋಗ್ಯ ಸೇವಾ ಶಿಬಿರ
Posted On: 12-11-2021 04:53PM
ಕಾಪು : ಕಾಪು ಶ್ರೀ ವೆಂಕಟರಮಣ ದೇವಸ್ಥಾನ ಹಾಗೂ ಶ್ರೀ ಹಳೆ ಮಾರಿಯಮ್ಮ ದೇವಸ್ಥಾನದ ಆಶ್ರಯದಲ್ಲಿ ಶ್ರೀ ವೆಂಕಟರಮಣ ದೇವಸ್ಥಾನದ ವಾರ್ಷಿಕ ಮಹೋತ್ಸವದ ಪ್ರಯುಕ್ತ ನವೆಂಬರ್ 14 ಭಾನುವಾರ ಕಾಪು ಶ್ರೀ ಹಳೆ ಮಾರಿಯಮ್ಮ ದೇವಸ್ಥಾನದ ಸಭಾಗೃಹದಲ್ಲಿ 'ಆರೋಗ್ಯ ಸೇವಾ -2021", ಆರೋಗ್ಯ ಶಿಬಿರ ನಡೆಯಲಿದೆ.
ಯೂತ್ ಫಾರ್ ಸೇವಾ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾಣೂರು ಮಕ್ಕಳಿಗೆ ಉಚಿತ ಸ್ಕೂಲ್ ಬ್ಯಾಗ್ ಮತ್ತು ಲೇಖನ ಪರಿಕರ ವಿತರಣೆ
Posted On: 12-11-2021 04:33PM
ಕಾರ್ಕಳ : ಸಾಣೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಯೂತ್ ಫಾರ್ ಸೇವಾ ವತಿಯಿಂದ ಶಾಲೆಯ 6 ನೇ ಮತ್ತು 7ನೇ ತರಗತಿಯ ಮಕ್ಕಳಿಗೆ ಉಚಿತ ಸ್ಕೂಲ್ ಬ್ಯಾಗ್ ಮತ್ತು ಲೇಖನ ಪರಿಕರಗಳನ್ನು ವಿತರಿಸಲಾಯಿತು.
ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಗೆ ಕರ್ನಾಟಕ ಬ್ಯಾಂಕ್ ವತಿಯಿಂದ ಕಂಪ್ಯೂಟರ್ಗಳ ಹಸ್ತಾಂತರ
Posted On: 12-11-2021 03:03PM
ಉದ್ಯಾವರ : ಇಂದು ಗ್ರಾಮೀಣ ಪ್ರದೇಶದ ಕನ್ನಡ ಮಾಧ್ಯಮ ಶಾಲೆಗಳು ಆಂಗ್ಲ ಮಾಧ್ಯಮದ ಶಾಲೆಗಳ ಕಾರಣಗಳಿಂದಾಗಿ ಸವಾಲನ್ನು ಎದುರಿಸುತ್ತಿವೆ. ಇದನ್ನು ಸಶಕ್ತವಾಗಿ ಎದುರಿಸಲು ಕನ್ನಡ ಮಾಧ್ಯಮ ಶಾಲೆಗಳೂ ಆಧುನಿಕ ಶಿಕ್ಷಣದ ಆಯಾಮಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳಬೇಕು. ಕನ್ನಡ ಮಾಧ್ಯಮದಲ್ಲಿ ಕಲಿತವರು ಸಾಧನೆಗಳನ್ನು ಮಾಡಲು ಸಾಧ್ಯವಿಲ್ಲ ಎಂಬ ಹುಂಬತನವನ್ನು ಬಿಟ್ಟು ನಾವು ಸುತ್ತ ನೋಡಿದರೆ ನಮ್ಮ ಸುತ್ತಿರುವ ಸಾಧಕರು ಹೆಚ್ಚಿನವರು ಕನ್ನಡ ಮಾಧ್ಯಮದಲ್ಲಿ ಶಿಕ್ಷಣವನ್ನು ಪಡೆದುಕೊಂಡವರು. ಕನ್ನಡದ ವಿದ್ಯಾರ್ಥಿಗಳು ಹೆತ್ತವರು ಕೀಳರಿಮೆಯನ್ನು ತೊಡೆದು ಹಾಕಿ. ಆಧುನಿಕ ಶಿಕ್ಷಣ ವ್ಯವಸ್ಥೆಗಳನ್ನು ಈ ಶಾಲೆ ಅಳವಡಿಸಿಕೊಂಡದ್ದರಿಂದ ಆಂಗ್ಲ ಮಾಧ್ಯಮದ ಸವಾಲುಗಳ ಮತ್ತು ಸ್ಪರ್ಧೆಗಳ ನಡುವೆ ಕೂಡಾ ಆರೋಗ್ಯಕರವಾದ ವಿದ್ಯಾರ್ಥಿಗಳ ಸಂಖ್ಯೆಯನ್ನು ಈ ಶಾಲೆ ಹೊಂದಿದೆ. ಇದಕ್ಕೆ ಮುಖ್ಯ ಕಾರಣ ಹೆತ್ತವರಿಗೆ ಈ ಶಾಲೆಯ ಶಿಕ್ಷಕರ ಮತ್ತು ಆಡಳಿತ ವರ್ಗದ ಮೇಲಿರುವ ನಂಬಿಕೆ, ಈ ನಂಬಿಕೆಯನ್ನು ಉಳಿಸಿಕೊಳ್ಳಲು ಈ ಶಾಲೆ ಸದಾ ಪ್ರಯತ್ನಿಸ ಬೇಕಾಗಿದೆ ಎಂದು ಕರ್ನಾಟಕ ಬ್ಯಾಂಕ್ನ ಉಡುಪಿ ರೀಜನಲ್ ಆಫೀಸ್ನ ಎ.ಜಿ.ಎಂ. ರಾಜಗೋಪಾಲ ಬಿ. ಹೇಳಿದರು. ಅವರು ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಗೆ ಕರ್ನಾಟಕ ಬ್ಯಾಂಕ್ ಕೊಡಮಾಡಿದ ಕಂಪ್ಯೂಟರ್ಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ನುಡಿದರು.
ಇನ್ನಂಜೆ : ಕ್ಯಾನ್ಸರ್ ಅರಿವು ಕಾರ್ಯಕ್ರಮ ಮತ್ತು ತಪಾಸಣಾ ಶಿಬಿರ
Posted On: 12-11-2021 02:12PM
ಕಾಪು : ಜಿಲ್ಲಾ ಪಂಚಾಯತ್ ಉಡುಪಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಕಛೇರಿ ಎನ್.ಪಿ.ಡಿ.ಘಟಕ ಉಡುಪಿ, ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್, ಮಾಹೆ, ಮಣಿಪಾಲ, ಪ್ರಾಥಮಿಕ ಆರೋಗ್ಯ ಕೇಂದ್ರ, ಕಾಪು, ರೋಟರಿ ಕ್ಲಬ್ ಶಂಕರಪುರ ಮತ್ತು ರೋಟರಿ ಸಮುದಾಯ ದಳ ಇನ್ನಂಜೆ ಇವರ ಸಹಭಾಗಿತ್ವದಲ್ಲಿ ಕ್ಯಾನ್ಸರ್ ಅರಿವು ಕಾರ್ಯಕ್ರಮ ಮತ್ತು ತಪಾಸಣಾ ಶಿಬಿರ ಇಂದು ಇನ್ನಂಜೆ ಪಂಚಾಯತ್ ಬಳಿಯ ದಾಸಭವನದಲ್ಲಿ ಜರಗಿತು.
ತುಲಸಿ ಪರ್ಬ - ಮನೆ ಅಂಗಳದ ಪವಿತ್ರ ಸನ್ನಿಧಿ ತುಳಸಿಕಟ್ಟೆ
Posted On: 11-11-2021 03:06PM
ಮನೆಯ ಮುಂಭಾಗ ವಾಸ್ತವ್ಯಕ್ಕೆ ಶೋಭೆ - ಪಾವಿತ್ರ್ಯವನ್ನು ಒದಗಿಸುವ ತುಳಸಿಕಟ್ಟೆ ವಾಸಸ್ಥಾನದ ಕಲ್ಪನೆ - ವಿನ್ಯಾಸದಲ್ಲಿ ಮಹತ್ವದ ಸ್ಥಾನ ಪಡೆದಿದೆ .ಭೂಮಿ, ನೀರು,ಸಮುದ್ರ , ನದಿ ,ಸರೋವರ , ಗಿಡ ,ಮರ, ಬಳ್ಳಿ ,ಗುಡ್ಡ , ಬೆಟ್ಟಗಳನ್ನು ಆರಾಧಿಸುವ ನಮ್ಮ ಮನೋಧರ್ಮ ಅಥವಾ ಜಾಯಮಾನ ತುಳಸಿ ಗಿಡದ ಸ್ವೀಕಾರದಲ್ಲಿ , ಪೂಜೆಯಲ್ಲಿ ಸ್ಪಷ್ಟವಾಗುತ್ತದೆ .ದಿನಚರಿಯ ಅನಿವಾರ್ಯ ಭಾಗವಾಗಿ ಪೂಜೆಗೊಳ್ಳುವ ತುಳಸಿ ನಮ್ಮನ್ನು ಪೂರ್ಣವಾಗಿ ಆವರಿಸಿದೆ ,ಮನೆಯಂಗಳದ ಕಟ್ಟೆಯಲ್ಲಿ ಸ್ಥಾನಪಡೆದಿದೆ . ಮನೆಯ ಸುಖ - ದುಃಖಗಳಲ್ಲಿ ; ಸಂಭ್ರಮ - ಉಲ್ಲಾಸಗಳಲ್ಲಿ , ನಿರ್ದಿಷ್ಟ ಆಚರಣೆಗಳಲ್ಲಿ ,ವಿಧಿ ನಿರ್ವಹಣೆಗಳಲ್ಲಿ ತುಳಸಿಕಟ್ಟೆ ಪ್ರಧಾನ ಪಾತ್ರವಹಿಸುತ್ತದೆ .ಸಮೀಕರಣ ಸಂಸ್ಕೃತಿಯ ದ್ಯೋತಕವಾಗಿ ಇಂದು ತುಳಸಿ ಪೂಜೆ ವ್ಯಾಪಕವಾಗಿ ರೂಢಿಯಲ್ಲಿದೆ .ಕೃಷಿ ಪ್ರಧಾನ ಸಾಂಸ್ಕೃತಿಕ ಹಿನ್ನೆಲೆಯುಳ್ಳ ನಾವು ಗದ್ದೆ , ದನ - ಕರು , ಜಾನುವಾರು , ಧಾನ್ಯರಾಶಿ ,ಮನೆಗೆ ನೀಡುವ ಪ್ರಾಶಸ್ತ್ಯದೊಂದಿಗೆ ದೈವಸನ್ನಿಧಾನ,ನಾಗಬನಗಳಂತೆ 'ತುಳಸಿಕಟ್ಟೆ'ಯನ್ನು ಸ್ವೀಕರಿಸಿದ್ದೇವೆ . ಸೊಡರಹಬ್ಬ ( ದೀಪಾವಳಿ ) ಮುಗಿದು ಹನ್ನೆರಡು ದಿನ ತುಳಸಿ ಸನ್ನಿಧಾನದಲ್ಲಿ ಕಾರ್ತಿಕ ದಾಮೋದರ ರೂಪಿ ಪರಮಾತ್ಮನಿಗೆ ವೈದಿಕರು ಪೂಜೆಸಲ್ಲಿಸುತ್ತಾರೆ .ನಾಮ ಸಂಕೀರ್ತನೆಯೊಂದಿಗೆ ಹಾಡುತ್ತಾ ತುಳಸಿಗೆ ಸುತ್ತು ಬರುತ್ತಾರೆ. ಹನ್ನೆರಡನೇ ದಿನ ಉತ್ಥಾನದ್ವಾದಶಿ . ಅಂದು ಸೂರ್ಯಾಸ್ತದ ವೇಳೆ ತುಳಸಿ ವೃಂದಾವನಕ್ಕೆ ಹಾಲೆರೆದು ಗೋವಿಂದನನ್ನು ಎಬ್ಬಿಸುವ ಪೂಜೆ ನಡೆಯುತ್ತದೆ.
ಉಡುಪಿ : ರಸ್ತೆ ಸುರಕ್ಷತಾ ಸಮಿತಿ ಸಭೆ
Posted On: 10-11-2021 09:57PM
ಉಡುಪಿ : ಸಾರ್ವಜನಿಕರು ರಸ್ತೆಯಲ್ಲಿ ಸಂಚರಿಸುವಾಗ ಎಲ್ಲಾ ರಸ್ತೆ ಸುರಕ್ಷತಾ ನಿಯಮಗಳನ್ನು ತಪ್ಪದೇ ಪಾಲಿಸುವುದರಿಂದ ಅಪಘಾತಗಳಾಗುವುದನ್ನು ತಪ್ಪಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಸ್ತೆಯಲ್ಲಿ ವಾಹನ ಚಾಲನಾ ಸಂದರ್ಭದಲ್ಲಿ ಸೀಟ್ ಬೆಲ್ಟ್ ಧರಿಸುವುದು, ಹೆಲ್ಮೆಟ್ ಧರಿಸುವುದರಿಂದ ಅಪಘಾತಗಳಾದರೂ ಸುರಕ್ಷಿತವಾಗಿರಬಹುದು, ಸಂಚಾರಿ ನಿಯಮಗಳನ್ನು ಪಾಲಿಸುವುದರಿಂದ ಅಪಘಾತಗಳಿಂದ ಮುಕ್ತವಾಗಬಹುದು ಎಂದರು. ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಈಗಾಗಲೇ ಗುರುತಿಸಲಾಗಿರುವ 34 ಬ್ಲಾಕ್ ಸ್ಪಾಟ್ಗಳನ್ನು , 2 ತಿಂಗಳ ಅವಧಿಯಲ್ಲಿ ಸಂಪೂರ್ಣವಾಗಿ ಸಂಚಾರಕ್ಕೆ ಸುರಕ್ಷಿತ ಸ್ಥಳಗಳನ್ನಾಗಿ ಮಾಡುವಂತೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಸೂಚಿಸಿದ ಅವರು, ಪ್ರಾದೇಶಿಕ ಸಾರಿಗೆ ಅಧಿಕಾರಿ,ಪೊಲೀಸ್ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಮತ್ತೊಮ್ಮೆ ಈ ಎಲ್ಲಾ ಬ್ಲಾಕ್ ಸ್ಪಾಟ್ ಸ್ಥಳಗಳನ್ನು ಪರಿಶೀಲಿಸಿ, ಅಲ್ಲಿನ ಸ್ಥಿತಿಗತಿ ಮತ್ತು ಕೈಗೊಳ್ಳಬೇಕಾದ ಕಾಮಗಾರಿಗಳ ಕುರಿತು ವಿವರವಾದ ವರದಿಯನ್ನು ನೀಡಬೇಕು, ರಾಷ್ಟ್ರೀಯ ಹೆದ್ದಾರಿಯಲ್ಲಿ ಅಗತ್ಯ ಸೂಚನಾ ಫಲಕಗಳು , ಎಚ್ಚರಿಕೆ ಫಲಕಗಳು ಸೇರಿದಂತೆ ವಾಹನಗಳ ಸುಗಮ ಮತ್ತು ಸುರಕ್ಷಿತ ಪ್ರಯಾಣಕ್ಕೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.
ಸಾರಿಗೆ ಸಮಸ್ಯೆ ಕುರಿತ ಸಾರ್ವಜನಿಕ ದೂರುಗಳಿಗೆ ಶೀಘ್ರ ಪರಿಹಾರ : ಜಿಲ್ಲಾಧಿಕಾರಿ ಕೂರ್ಮಾರಾಮ್ ಎಂ.
Posted On: 10-11-2021 07:56PM
ಉಡುಪಿ : ಜಿಲ್ಲಾ ಸಾರಿಗೆ ಪ್ರಾಧಿಕಾರಕ್ಕೆ ಸಲ್ಲಿಸುವ ಸಾರ್ವಜನಿಕರ ದೂರುಗಳ ಕುರಿತಂತೆ ಶೀಘ್ರದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಇಂದು ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಸಾರಿಗೆ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿರ್ವ ಪಂಚಾಯತ್ ವತಿಯಿಂದ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಣೇಶ್ ಕುಲಾಲ್ ಪಂಜಿಮಾರ್ ಗೆ ಸನ್ಮಾನ
Posted On: 09-11-2021 09:41PM
ಶಿರ್ವ : ಇಲ್ಲಿನ ಗ್ರಾಮ ಪಂಚಾಯತ್ ವತಿಯಿಂದ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಗ್ರಾಮದ ವಿಕಲ ಚೇತನ ಪ್ರತಿಭೆ ಗಣೇಶ್ ಕುಲಾಲ್ ಪಂಜಿಮಾರ್ ಅವರನ್ನು ಸನ್ಮಾನಿಸಲಾಯಿತು.
