Updated News From Kaup
ಕಿನ್ನಿಗೋಳಿ : ಚಪ್ಪಲಿ ತೋರಿಸುವ ನೆಪದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಮಾಲಿಕ ; ಪೋಲಿಸ್ ವಶ
Posted On: 12 Dec 2021, 11:01 PM
ಮುಲ್ಕಿ : ಮುಲ್ಕಿ ಠಾಣಾ ವ್ಯಾಪ್ತಿಯ ತಾಳಿಪಾಡಿ ಗ್ರಾಮದ ಕಿನ್ನಿಗೋಳಿಯ ಚಪ್ಪಲಿ ಅಂಗಡಿಗೆ ಮಹಿಳಾ ಗ್ರಾಹಕಿಯೊಬ್ಬರು ಚಪ್ಪಲಿ ಖರೀದಿಗಾಗಿ ಹೋದ ಸಮಯ ಅಂಗಡಿಯಲ್ಲಿದ್ದ ಅಂಗಡಿ ಮಾಲಿಕರು ಮಹಿಳಾ ಗ್ರಾಹಕಿಗೆ ವಿವಿಧ ಚಪ್ಪಲಿಗಳನ್ನು ತೋರಿಸಿದ್ದು ಮಹಿಳಾ ಗ್ರಾಹಕಿಗೆ ಅವರು ತೋರಿಸಿದ ಚಪ್ಪಲಿ ಇಷ್ಟವಾಗದೇ ಇದ್ದಾಗ ಅಂಗಡಿ ಮಾಲಕರು ಬೇರೆ ಚಪ್ಪಲಿಗಳನ್ನು ತೋರಿಸುವುದಾಗಿ ತಿಳಿಸಿ ಮಹಿಳಾ ಗ್ರಾಹಕಿಯನ್ನು ಅಂಗಡಿಯ ಒಳಗಿದ್ದ ಇನ್ನೊಂದು ಕಂಪಾರ್ಟ್ ಮೆಂಟ್ ಗೆ ಕರೆಸಿಕೊಂಡು ಮಹಿಳಾ ಗ್ರಾಹಕಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಈ ಬಗ್ಗೆ ಮಹಿಳಾ ಗ್ರಾಹಕಿ ನೀಡಿದ ದೂರಿನಂತೆ ಅಂಗಡಿ ಮಾಲಿಕನಾದ ಸಂಶುದ್ದಿನ್ ಎಂಬಾತನ ವಿರುದ್ಧ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಅಂಗಡಿ ಮಾಲಕನನ್ನು ವಶಕ್ಕೆ ಪಡೆದು ದಸ್ತಗಿರಿ ಮಾಡಲಾಗಿದೆ.
ಅಜಾಗರೂಕತೆಯ ಚಾಲನೆ : ಮಾರುತಿ ಕಾರಿಗೆ ಇಂಟ್ರಾ ವಾಹನ ಢಿಕ್ಕಿ
Posted On: 12 Dec 2021, 10:49 PM
ಕಟಪಾಡಿ : ಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾಪು ಕಡೆಗೆ ಬರುತ್ತಿದ್ದ ಮಾರುತಿ ಕಾರಿಗೆ ಉಡುಪಿಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಟಾಟಾ ಇಂಟ್ರಾ ವಾಹನ ಹಿಂಬದಿಗೆ ಢಿಕ್ಕಿಯಾದ ಪರಿಣಾಮ ಓರ್ವನಿಗೆ ತೀವ್ರತರದ ಗಾಯವಾಗಿ, ಕಾರು ಸಂಪೂರ್ಣ ಜಖಂಗೊಂಡ ಪ್ರಕರಣ ಪಾಂಗಾಳ ಜನಾರ್ಧನ ದೇವಸ್ಥಾನದ ಸಮೀಪ ನಡೆದಿದೆ. ಮಾರುತಿ ಕಾರಿನ ಹಿಂಬದಿ ಸೀಟಿನಲ್ಲಿದ್ದ ಚರಣ್ ಹೆಚ್ ಪೂಜಾರಿಯ ತಲೆ, ಬೆನ್ನು, ಎದೆಭಾಗ, ಬಲ ಕೈಗೆ ತೀವ್ರ ತರದ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಟಾಟಾ ಇಂಟ್ರಾ ಚಾಲಕನ ಅತೀವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣ ಎಂದು ತಿಳಿದುಬಂದಿದೆ. ಈ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಳುಕೂಟ ಉಡುಪಿ ವತಿಯಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಫಾರೂಕ್ ಚಂದ್ರನಗರ ಇವರಿಗೆ ಸನ್ಮಾನ
Posted On: 12 Dec 2021, 05:23 PM
ಉಡುಪಿ : ತುಳುಕೂಟ (ರಿ.) ಉಡುಪಿ ವತಿಯಿಂದ ಕರ್ನಾಟಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕಾಪು ಸಮಾಜ ಸೇವಾ ವೇದಿಕೆ ಅಧ್ಯಕ್ಷರಾದ ಮೊಹಮ್ಮದ್ ಫಾರೂಕ್ ಚಂದ್ರನಗರರವನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಸನ್ಮಾನಿಸಿ ಮಾತನಾಡಿದ ತುಳುಕೂಟ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ ಫಾರೂಕ್ ರವರ ಸಮಾಜ ಸೇವೆ ಇನ್ನಷ್ಟು ಮುಂದುವರೆಯಲಿ. ಇನ್ನಷ್ಟು ಪ್ರಶಸ್ತಿಯ ಗರಿ ಸಿಗಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ವರ್ತಕರ ಸಂಘ ಉಡುಪಿ ಇದರ ಅಧ್ಯಕ್ಷ ದಿವಾಕರ ಸನಿಲ್, ಸಮಾಜ ಸೇವಾ ವೇದಿಕೆ ಸಂಚಾಲಕರಾದ ದಿವಾಕರ ಡಿ ಶೆಟ್ಟಿ ಕಳತ್ತೂರು, ತುಳುಕೂಟದ ಸದಸ್ಯರು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಚಿತ್ರ ಕಲಾವಿದ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಗಣೇಶ್ ಪಂಜಿಮಾರ್ ಅವರಿಗೆ ನಾನಿಲ್ತಾರ್ ಕುಲಾಲ ಸಂಘದಿಂದ ಸನ್ಮಾನ
Posted On: 12 Dec 2021, 04:50 PM
ಕಾಪು : ಚಿತ್ರಕಲೆಯಲ್ಲಿ ವಿಶಿಷ್ಟ ಸಾಧನೆಗೈದ ವಿಕಲ ಚೇತನ ಶಿರ್ವ ಭಾಗದ ಪ್ರತಿಭೆ ಗಣೇಶ್ ಪಂಜಿಮಾರ್ ಅವರನ್ನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದುದಕ್ಕಾಗಿ ಇಂದು ನಾನಿಲ್ತಾರ್ ಸಂಘದ ಸರ್ವ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು. ನಮ್ಮ ಕಾಪು ನ್ಯೂಸ್ ತಂಡ ಈ ಸನ್ಮಾನಕ್ಕೆ ಶುಭ ಹಾರೈಸುತ್ತದೆ.
ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಮಠ ನೂತನ ಉಡುಪಿ ಶಾಖಾ ಮಠದ ಉದ್ಘಾಟನೆ, ಪ್ರವೇಶ ಮತ್ತು ಸ್ವಾಮೀಜಿಯವರ ಮೊಕ್ಕಾಂ ಕಾರ್ಯಕ್ರಮ
Posted On: 12 Dec 2021, 01:37 PM
ಉಡುಪಿ : ಆತ್ರಾಡಿಯಲ್ಲಿ ಇಂದು ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಮಠ ಕೈವಲ್ಯಪುರ, ಪೋಂಡಾ, ಗೋವಾ ಇದರ ನೂತನ ಉಡುಪಿ ಶಾಖಾ ಮಠದ ಉದ್ಘಾಟನೆ ಹಾಗೂ ಸ್ವಾಮೀಜಿಯವರ ಮೊಕ್ಕಾಂ ಕಾರ್ಯಕ್ರಮ ಜರಗಿತು. ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಮಠ, ಕೈವಲ್ಯಪುರ, ಪೋಂಡಾ, ಗೋವಾದ ಪರಮಪೂಜ್ಯ ಶ್ರೀ ಶ್ರೀ ಶಿವಾನಂದ ಸರಸ್ವತೀ ಸ್ವಾಮಿ ಮಹಾರಾಜ್ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚಿಸಿದರು. ಈ ಸಂದರ್ಭದಲ್ಲಿ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ವಿ ಸುನಿಲ್ ಕುಮಾರ್, ಉಡುಪಿ ಶಾಸಕ ರಘುಪತಿ ಭಟ್, ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಲಾಲಾಜಿ ಆರ್ ಮೆಂಡನ್, ಉಡುಪಿ ನಗರ ಸಭೆಯ ಅಧ್ಯಕ್ಷರಾದ ಸುಮಿತ್ರಾ ಆರ್ ನಾಯಕ್, ಉಡುಪಿ ನಗರ ಬಿಜೆಪಿ ಅಧ್ಯಕ್ಷರಾದ ಮಹೇಶ್ ಠಾಕೂರ್, ಮಾಜಿ ಸಚಿವರುಗಳಾದ ವಿನಯಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಆತ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರೂಪಾ ಶೆಟ್ಟಿ, ಆತ್ರಾಡಿ ನೂತನ ಶಾಖಾ ಮಠದ ಅಧ್ಯಕ್ಷರಾದ ಸಂತೋಷ್ ವಾಗ್ಳೆ, ಉಜ್ವಲ್ ಡೆವಲಪರ್ಸ್ ಉಡುಪಿಯ ಪುರುಶೋತ್ತಮ ಶೆಟ್ಟಿ, ಎಣ್ಣೆಹೊಳೆ ಶ್ರೀ ಆದಿಶಕ್ತಿ ಮಹಾಲಕ್ಷ್ಮಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಅಶೋಕ್ ನಾಯಕ್, ನರಸಿಂಗೆ ಶ್ರೀ ನರಸಿಂಹ ದೇವಸ್ಥಾನದ ಆಡಳಿತ ಮೊಕ್ತೇಸರರಾದ ರಮೇಶ್ ಸಾಲ್ವಂಕಾರ್, ಮೊಗೇರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಅಲ್ಚಾರು ರಾಮಚಂದ್ರ ನಾಯಕ್, ಬೆಂಗಳೂರು, ಟೆಕ್ಸಾಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಮಾನಂದ ನಾಯಕ್, ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶಶಿಧರ ವಾಗ್ಳೆ, ಪಳ್ಳಿ, ಅಡಪಾಡಿ, ಶ್ರೀ ಉಮಾಮಹೇಶ್ವರಿ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿಗಳಾದ ಪುಂಡಲೀಕ ನಾಯಕ್, ಆತ್ರಾಡಿ, ಭೈರಂಜೆ ಶ್ರೀ ಭವಾನಿ ಶಂಕರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ದೇವೇಂದ್ರ ವಾಗ್ಳೆ ಮತ್ತಿತರರು ಉಪಸ್ಥಿತರಿದ್ದರು. ಆರ್.ಎಸ್.ಬಿ ಸಂಘ, ಮಣಿಪಾಲದ ಅಧ್ಯಕ್ಷರಾದ ಗೋಕುಲ್ ದಾಸ್ ನಾಯಕ್ ಸ್ವಾಗತಿಸಿದರು. ಪರ್ಕಳ ಶ್ರೀ ದುರ್ಗಾಪರಮೇಶ್ವರಿ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ನಿತ್ಯಾನಂದ ನಾಯಕ್ ನರಸಿಂಗೆ ಕಾರ್ಯಕ್ರಮವನ್ನು ನಿರೂಪಿಸಿದರು.
ಸೇನಾ ಹೆಲಿಕಾಪ್ಟರ್ ದುರಂತ : ಫೇಸ್ಬುಕ್ ನಲ್ಲಿ ಟೀಕೆಗೈದಿದ್ದ ಇಬ್ಬರ ವಿರುದ್ಧ ಪ್ರಕರಣ ದಾಖಲು
Posted On: 11 Dec 2021, 03:18 PM
ಮಂಗಳೂರು : ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಮೂರು ಸೇನೆಗಳ ಮುಖ್ಯಸ್ಥ ಬಿಪಿನ್ ರಾವತ್ ರ ಸಾವು ಮತ್ತು ಭದ್ರತಾ ಸಲಹೆಗಾರ ಅಜಿತ್ ದೋವಲ್ ರ ಬಗ್ಗೆ ನಿಂದನಾತ್ಮಕವಾಗಿ ಫೇಸ್ ಬುಕ್ ನಲ್ಲಿ ಟೀಕೆಗೈದಿದ್ದ ಶ್ರೀನಿವಾಸ ಕಾರ್ಕಳ ಮತ್ತು ವಸಂತ ಕುಮಾರ್ ಮೇಲೆ ಮಂಗಳೂರು ಪೋಲಿಸರು IPC sections 505(1a), 505(2) & 505(b) ಅನ್ವಯ ಪ್ರಕರಣ ದಾಖಲಿಸಿದ್ದಾರೆ.
ಜೀರ್ಣೋದ್ಧಾರಗೊಳ್ಳುತ್ತಿರುವ ಏಣಗುಡ್ಡೆ ಶ್ರೀ ಬ್ರಹ್ಮ ಬೈದೇರುಗಳ ಗರಡಿಯ ಪ್ರಧಾನ ಶಿಲಾ ದ್ವಾರದ ಸ್ಥಾಪನೆ
Posted On: 11 Dec 2021, 10:31 AM
ಕಟಪಾಡಿ, ಡಿ.11 : ಜೀರ್ಣೋದ್ಧಾರಗೊಳ್ಳುತ್ತಿರುವ ಏಣಗುಡ್ಡೆ ಶ್ರೀ ಬ್ರಹ್ಮ ಬೈದೇರುಗಳ ಗರಡಿಯ ಪ್ರಧಾನ ಶಿಲಾ ದ್ವಾರದ ಸ್ಥಾಪನೆಯು ಶುಕ್ರವಾರ ನೆರವೇರಿತು . ಧಾರ್ಮಿಕ ವಿಧಿ ವಿಧಾನಗಳು ತಂತ್ರಿಗಳಾದ ಮಹೇಶ್ ಶಾಂತಿ ಹೆಜ್ಮಾಡಿ ಇವರ ಪೌರೋಹಿತ್ಯದಲ್ಲಿ ಜರಗಿತು. ಗರಡಿಯ ಪೂಜಾ ಪೂಜಾರಿ ಇಂಪು ಪೂಜಾರಿ , ವಾಸ್ತುಶಿಲ್ಪಿ ಪ್ರಮಲ್ ಕುಮಾರ್ ಹಾಗೂ ಶಿಲಾ ಶಿಲ್ಪಿ ಸುಧೀರ್ ಆಚಾರ್ಯ ಇವರ ಮಾರ್ಗದರ್ಶನದಲ್ಲಿ ಶಿಲಾ ದ್ವಾರ ಸ್ಥಾಪನೆ ಮಾಡಲಾಯಿತು. ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಗಂಗಾಧರ್ ಸುವರ್ಣ , ಗೌರವ ಸಲಹೆಗಾರ ಬಗ್ಗ ಪೂಜಾರಿ ಯಾನೆ ಉಮೇಶ್ ಕೋಟ್ಯಾನ್ ,ಅಧ್ಯಕ್ಷ ಅಶೋಕ್ ಎನ್ ಪೂಜಾರಿ ,ಪ್ರಧಾನ ಕಾರ್ಯದರ್ಶಿ ಹರಿಶ್ಚಂದ್ರ ಅಮೀನ್, ಮುಂಬಯಿ ಸಮಿತಿಯ ಉಪಾಧ್ಯಕ್ಷ ವೀರಮಣಿ , ಗುರಿಕಾರರಾದ ದಾಮೋದರ್ ಪೂಜಾರಿ, ರಂಗ ಪೂಜಾರಿ , ಸೀನ ಪೂಜಾರಿ ,ಕೃಷ್ಣಪೂಜಾರಿ ರಮೇಶ್ ಜತ್ತನ್ನ , ಭೋಜ ಪೂಜಾರಿ, ಮುದ್ದು ಪೂಜಾರಿ, ಜಯ ಪೂಜಾರಿ , ಸೂರಪ್ಪ ಪೂಜಾರಿ, ನಾರಾಯಣ ಅಂಚನ್, ಗರಡಿ ಜವನೆರ್ ತಂಡದ ಸುಧೀರ್ ರಾಜ್ ಪೂಜಾರಿ ಹಾಗೂ ಪ್ರಮುಖರಾದ ಶಿಲ್ಪಾ ಜಿ ಸುವರ್ಣ ,ಆರ್ ಜಿ ಕೋಟ್ಯಾನ್ , ಮಹೇಶ್ ಪೂಜಾರಿ , ನಿರಂಜನ್ ಪೂಜಾರಿ ,ಚಂದ್ರಹಾಸ ಕೋಟ್ಯಾನ್ , ರಮೇಶ್ ಕೋಟ್ಯಾನ್ , ಶಿವ ಪ್ರಸಾದ್ ಮಹೇಶ್ ಅಂಚನ್, ಪ್ರಸಾದ್ ಬಂಗೇರ,ಆನಂದ ಪೂಜಾರಿ ,ವಿಠಲ್ ಪೂಜಾರಿ ಹಾಗೂ ಜೀರ್ಣೋದ್ಧಾರ ಸಮಿತಿಯ ಸದಸ್ಯರು ಹಾಗೂ ಆರು ಮಾಗಣೆಯ ಹತ್ತು ಸಮಸ್ತರು ಉಪಸ್ಥಿತರಿದ್ದರು.
ಮಂಗಳೂರು : ರಿಯಾಝ್ ಎಂಬಾತನ ಮೇಲೆ ಬಿಯರ್ ಬಾಟಲ್ನಿಂದ ಹಲ್ಲೆ
Posted On: 10 Dec 2021, 11:24 PM
ಮಂಗಳೂರು ನಗರದಿಂದ 15 ಕಿ.ಮೀ ದೂರದ ಅಡ್ಯಾರ್ ಪದವಿನ ನಿವಾಸಿಯಾದ 38 ವರ್ಷದ ರಿಯಾಝ್ ಅಹ್ಮದ್ ಎಂಬಾತನ ಮೇಲೆ ನೀರುಮಾರ್ಗ ಪಡು ಪ್ರದೇಶದಲ್ಲಿ ರಾತ್ರಿ ಸುಮಾರು 9 ಗಂಟೆ ವೇಳೆಗೆ 5 ರಿಂದ 6 ಮಂದಿ ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿದ್ದಾರೆ ಮತ್ತು ಅವರ ರಿಟ್ಸ್ ಕಾರಿನ ಮೇಲು ಹಾನಿಯುಂಟು ಮಾಡಿದ್ದಾರೆ. ತಲೆಗೆ ಸ್ವಲ್ಪ ಮಟ್ಟಿನಲ್ಲಿ ಪೆಟ್ಟಾಗಿದ್ದು ಆಸ್ಪತ್ರೆಗೆ ದಾಖಲಾದ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನಾ ಸ್ಥಳದಲ್ಲಿ ಸುಮಾರು 200 ಮಂದಿ ಜಮಾಯಿಸಿದ್ದು, ಆಸ್ಪತ್ರೆ ಬಳಿ ಸುಮಾರು 100ಕ್ಕೂ ಅಧಿಕ ಮಂದಿ ಜಮಯಿಸಿದ್ದಾರೆ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 307 ಐಪಿಸಿ ಪ್ರಕರಣ ದಾಖಲಾಗಿರುತ್ತದೆ.
ಕಾಪು : ಭಂಡಾರ ಮನೆಯ ಮಹೇಶ್ ರೈ ಯವರಿಗೆ ಗಡಿಪ್ರಧಾನ
Posted On: 10 Dec 2021, 09:53 PM
ಕಾಪು ಪಡುಗ್ರಾಮದ ಹಿರಿಯರ, ಗ್ರಾಮಸ್ಥರ ಹಾಗೂ ಕಾಪು ಪಡು ಭಂಡಾರಮನೆ ಕುಟುಂಬಸ್ಥರ ಉಪಸ್ಥಿತಿಯಲ್ಲಿ ಕಾಪು ಪಡು ಧೂಮಾವತಿ ದೈವಸ್ಥಾನದ ಭಂಡಾರಮನೆಯ ಗಡಿಪ್ರಧಾನ ಪಟ್ಟವನ್ನು ಪ್ರಾಮಾಣಿಕ ಸರಳ ಸಜ್ಜನ ಮಹೇಶ್ ರೈ ಕಾಪು ಇವರು ಇಂದು ಸ್ವೀಕರಿಸಿದರು.
ಮಡಿದ ಯೋಧರಿಗೆ ಶ್ರದ್ಧಾಂಜಲಿ ಅರ್ಪಣೆ
Posted On: 10 Dec 2021, 08:49 PM
ಕಾಪು : ತಮಿಳುನಾಡಿನಲ್ಲಿ ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಭಾರತೀಯ ಸೇನೆಯ ಅತ್ಯುನ್ನತ ಹುದ್ದೆಯನ್ನು ನಿರ್ವಹಿಸುತ್ತಿದ್ದ ಸೇನಾ ಪಡೆಗಳ ಮುಖ್ಯಸ್ಥರಾದ "ಜನರಲ್ ಬಿಪಿನ್ ರಾವತ್" ಹಾಗೂ ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೀರ ಯೋಧರಿಗೆ ಬಿಜೆಪಿ ಯುವಮೋರ್ಚಾ ಕಾಪು ಮಂಡಲದ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.
