Updated News From Kaup
ನವೆಂಬರ್ 12 : ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಕುತ್ಯಾರು ಮತ್ತು ರೋಟರಿ ಕ್ಲಬ್ ಶಿರ್ವ ಸಹಯೋಗದೊಂದಿಗೆ ಹದಿಹರೆಯದ ತಲ್ಲಣಗಳು: ಒಂದು ಶೈಕ್ಷಣಿಕ ಸಂವಾದ
Posted On: 06-11-2021 11:00PM
ಕಾಪು : ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಕುತ್ಯಾರು, ಉಡುಪಿ ಮತ್ತು ರೋಟರಿ ಕ್ಲಬ್ ಶಿರ್ವ ಇವರ ಸಹಯೋಗದೊಂದಿಗೆ ನವೆಂಬರ್ 12, ಶುಕ್ರವಾರ ಅಪರಾಹ್ನ 2:15ಕ್ಕೆ ಸೂರ್ಯ ಚೈತನ್ಯ ಸಭಾಭವನದಲ್ಲಿ ಹದಿಹರೆಯದ ತಲ್ಲಣಗಳು: ಒಂದು ಶೈಕ್ಷಣಿಕ ಸಂವಾದ ಕಾರ್ಯಕ್ರಮ ಜರಗಲಿದೆ.
ಎಲ್ಲೂರು ಕಾಶೀ ಸಂತಾನ ಟ್ರಸ್ಟ್ ನೂತನ ಕಚೇರಿ ಆರಂಭ
Posted On: 06-11-2021 09:31PM
ಅದಮಾರು : ನಲುವತ್ತು ವರ್ಷಗಳ ಸುದೀರ್ಘ ಅವಧಿಯಲ್ಲಿ ನಿರಂತರ ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ ವಿದ್ಯಾರ್ಥಿ ವೇತನ ವಿತರಿಸುತ್ತಾ ಪ್ರಚಾರ ಬಯಸದೇ ಸಮಾಜ ಮುಖಿ ಶಿಕ್ಷಣ ಪ್ರೀತಿಯ ಕಾರ್ಯನಿರ್ವಹಿಸುತ್ತಿದ್ದ ಎಲ್ಲೂರು ಕಾಶೀ ಸಂತಾನ ಟ್ರಸ್ಟ್ ನ ನೂತನ ಕಾರ್ಯಾಲಯದ ಆರಂಭ ಹಾಗೂ ವಿದ್ಯಾರ್ಥಿ ವೇತನ - ಸಹಾಯಧನ ವಿತರಣಾ ಕಾರ್ಯಕ್ರಮವು 7-11-2021 ರಂದು ಸಂಜೆ ನಾಲ್ಕು ಗಂಟೆಗೆ ಅದಮಾರಿನ ಆದರ್ಶ ಯುವಕ ಸಂಘದ ಸರ್ವೋದಯ ಸಮುದಾಯ ಭವನದಲ್ಲಿ ನೆರವೇರಲಿದೆ.
ನೀತಾ ಪ್ರಭು ತಂಡದಿಂದ ಅಪ್ಪ ಅಮ್ಮ ಅನಾಥಾಲಯದ ಆಶ್ರಮವಾಸಿಗಳೊಂದಿಗೆ ದೀಪಾವಳಿ ಆಚರಣೆ
Posted On: 06-11-2021 07:09PM
ಉಡುಪಿ : ನೀತಾ ಪ್ರಭು ಮತ್ತು ತಂಡದಿಂದ ದೀಪಾವಳಿಯ ಪ್ರಯುಕ್ತ ಬ್ರಹ್ಮಾವರದ ಗಿರಿಜಾ ಕೃಷ್ಣ ಪೂಜಾರಿ ಚಾರಿಟೇಬಲ್ ಟ್ರಸ್ಟ್ (ರಿ.) ಕೂರಾಡಿ ಇವರ ಅಪ್ಪ ಅಮ್ಮಅನಾಥಾಲಯ(ಉಚಿತ ಸೇವೆ)ಕ್ಕೆ ಭೇಟಿ ನೀಡಿದರು.
ಐಡಿಯಲ್ ಐಸ್ ಕ್ರೀಮ್ ಮಾಲಕ ಪ್ರಭಾಕರ್ ಕಾಮತ್ ವಿಧಿವಶ
Posted On: 06-11-2021 01:15PM
ಮಂಗಳೂರು : ಐಸ್ ಕ್ರೀಮ್ ಕಂಪನಿಗಳಲ್ಲಿ ಅತಿ ಹೆಚ್ಚು ಪ್ರಸಿದ್ಧ ಆದ ಕಂಪನಿ ಆಂದ್ರೆ ಐಡಿಯಲ್. ಇದರ ಸ್ಥಾಪಕರಾದ ಪ್ರಭಾಕರ್ ಕಾಮತ್ ಇವರು ವಿಧಿವಶರಾಗಿದ್ದಾರೆ.
ಕಡಂಬುವಿನಲ್ಲಿ ರಾರಾಜಿಸಿದ ಕೇಸರಿ ಗೂಡುದೀಪ
Posted On: 06-11-2021 10:33AM
ಕಾಪು : ಶಿರ್ವದ ಕಡಂಬುವಿನಲ್ಲಿ ಬೃಹತ್ ಗಾತ್ರದ ಗೂಡುದೀಪವೊಂದು ಸಾರ್ವಜನಿಕರ ಗಮನಸೆಳೆದಿದೆ.
ಪುಳಿಂದ ಮಹರ್ಷಿಗಳು ತಪಸ್ಸುಗೈದ ಮೋಕ್ಷಗಿರಿಯಲ್ಲಿ ನೂತನ ಘಟಕ ಉದ್ಘಾಟನೆ ಮತ್ತು ಸಾರ್ವಜನಿಕ ಗೋ ಪೂಜೆ ಕಾರ್ಯಕ್ರಮ
Posted On: 05-11-2021 09:17PM
ಕಾಪು : ವಿಶ್ವ ಹಿಂದೂ ಪರಿಷತ್ ಭಜರಂಗದಳ ಉಡುಪಿ ಜಿಲ್ಲೆ ಉಡುಪಿ ಗ್ರಾಮಾಂತರ ಪ್ರಖಂಡ ವತಿಯಿಂದ ಶ್ರೀ ಶ್ರೀ ಶ್ರೀ ಪುಳಿಂದ ಮಹರ್ಷಿಗಳು ತಪಸ್ಸುಗೈದ ಪುಣ್ಯ ಮಣ್ಣು ಕುಂತಳ ನಗರದ ಮೋಕ್ಷಗಿರಿ ಕ್ಷೇತ್ರದಲ್ಲಿ ನೂತನ ಘಟಕ ಉದ್ಘಾಟನೆ ಮತ್ತು ಸಾರ್ವಜನಿಕ ಗೋ ಪೂಜೆ ಕಾರ್ಯಕ್ರಮ ನಡೆಯಿತು.
ಮಟ್ಟಾರು : ಸಾರ್ವಜನಿಕ ಗೋಪೂಜಾ ಉತ್ಸವ
Posted On: 05-11-2021 08:29PM
ಕಾಪು : ವಿಶ್ವ ಹಿಂದೂ ಪರಿಷತ್, ಬಜರಂಗದಳ ಮಾತೃ ಶಕ್ತಿ, ದುರ್ಗಾವಾಹಿನಿ ವತಿಯಿಂದ ನವಮ ವರ್ಷದ ಸಾರ್ವಜನಿಕ ಗೋಪೂಜಾ ಉತ್ಸವವು ಮಟ್ಟಾರು ಇಲ್ಲಿ ಜರಗಿತು.
ಶ್ರೀ ಭಗವತಿ ಗ್ರೂಪ್ ಪಡುಬಿದ್ರಿಯಿಂದ ದೀಪಾವಳಿಯ ಉಡುಗೊರೆಯಾಗಿ ನೂತನ ಮನೆ ಹಸ್ತಾಂತರ
Posted On: 05-11-2021 06:12PM
ಪಡುಬಿದ್ರಿ : ಕಾಪು ತಾಲೂಕಿನ ಅದಮಾರಿನ ಲತಾ ಮತ್ತು ಶಂಕರ್ ಪೂಜಾರಿ ದಂಪತಿಗಳ ಗೃಹ ನಿರ್ಮಾಣ ಕಾರ್ಯ ಕಳೆದ ಸುಮಾರು 8 ವರ್ಷಗಳಿಂದ ಅಪೂರ್ಣಗೊಂಡಿದ್ದು, ಈ ಬಗ್ಗೆ ಪಡುಬಿದ್ರಿ ಸಮಾಜಸೇವೆ ಯುವಕರ ತಂಡ ಶ್ರೀ ಭಗವತಿ ಗ್ರೂಫ್ ತನ್ನ ವಿಶೇಷ ಸೇವಾ ಯೋಜನೆಯ ಮುಖಾಂತರವಾಗಿ ವಿವಿಧ ಸಹೃದಯಿ ದಾನಿಗಳು ತುಂಬು ಹೃದಯದ ಸಹಕಾರದಿಂದ ಈ ಗೃಹನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿ ನೂತನ ಗೃಹವನ್ನು ಕಳಸ ಹಸ್ತಾಂತರಿಸುವ ಮೂಲಕ ಶಂಕರ್ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ಗೋಪೂಜೆಯ ಮಹತ್ವ ತಿಳಿಯೋಣ ಬನ್ನಿ - ಕೆ. ಎಲ್. ಕುಂಡಂತ್ತಾಯ
Posted On: 05-11-2021 12:09PM
ಇಂದ ಕಬೆತಿಯೇ....ಕಿದೆ ದಿಂಜ ಕೂಡುಲ "ಇಂದ ಕಬೆತಿಯೆ...ದೇವೆರೆನ್ ತೂಲ. ಅಂಗಾರ್ಡ್ ಲಾಂಬು ಬನ್ನೆಟ್ಟ ,ಕೊಂಬುಡು ನರೆ ಬನ್ನೆಟ್ಟ ಪದ್ರಾಡ್ ಪೊಣ್ಣುಕಂಜಿ - ಪದ್ರಾಡ್ ಆಣ್ ಕಂಜಿ ಪಾಡ್ದ್ ನಿನ ಉಲ್ಲಾಯಗ್ ಪೇರನುಪ್ಪು ಕೊರೊಂದು ,ಈ ಪೇರನುಪ್ಪು ತಿನೊಂದು ಬಹುಕಾಲ ಬಾಲ್ಲ.." ಅಥವಾ "ತುಡಾರ್ ಮಗ ತುಡಾರ್ ,ಕಲ್ಲಡಿತ ನೀರ್ಪರ್ಲ,ಮುಲ್ಲಡಿತ ಪಂತಿ ಮೇಲ ,ಬಂಜಿ ದಿಂಜ ಮೇಲ, ಕಿದೆ ದಿಂಜ ಕೂಡುಲ, ತುಡಾರ್ ಮಗ ತುಡಾರ್ ". ಹೀಗನ್ನುತ್ತಾ ( ಹಲವು ಪಾಠಾಂತರಗಳಿವೆ) ಗೋಮಾತೆಗೆ ಗೆರಸೆಯಲ್ಲಿ ಸಿದ್ಧಪಡಿಸಿದ ಸೊಡರನ್ನು ಅಥವಾ ತುಡಾರನ್ನು ತೋರಿಸುವ ,ಕೃತಜ್ಞತಾರ್ಪಣೆ ಸಲ್ಲಿಸುವ ನಮ್ಮ ಮಣ್ಣಿನ ಸಂಪ್ರದಾಯ ದೀಪಾವಳಿ ಹಬ್ಬದ ಒಂದು ಮುಖ್ಯ ಸಂದರ್ಭ . ಗೋಮಾತೆಗೆ ಮಾತ್ರವಲ್ಲ ವಿಶೇಷವಾಗಿ ಕೋಣ - ಎತ್ತುಗಳಿಗೂ ದೀಪ ತೋರಿಸಿ ಹೇಳುವ ಕ್ರಮವಿದೆ, ಇವುಗಳೆ ಪ್ರಧಾನವೂ ಹೌದು . ಪ್ರಾಣಿ - ಮಾನವ ಸಂಬಂಧ ಪುರಾತನವಾದುದು .ಕೃಷಿ - ಜೀವನಾಧಾರ ಪಶು ಸಂದೋಹಕ್ಕೆ ಪೂಜೆ ಸಲ್ಲಿಸುತ್ತಾ ಹೊಟ್ಟೆ ತುಂಬ "ಪರ್ಬದ ಅಡ್ಡೆ" ( ದೀಪಾವಳಿಯ ವಿಶೇಷ ತಿಂಡಿ - ಪೊಟ್ಟು ಗಟ್ಟಿ) ಮುಂತಾದುವುಗಳನ್ನು ತಿನ್ನಿಸಿ ಧನ್ಯರಾಗುವ ನಾವು ಪ್ರತಿವರ್ಷ ಈ ಪ್ರಾಚೀನ ಸಂಬಂಧವನ್ನು ನೆನಪಿಸಿಕೊಳ್ಳುತ್ತೇವೆ .ಇದೇ ಮೂಲವಾಗಿ ,ಈ ಪರಿಕಲ್ಪನೆಯೇ ಆಧಾರವಾಗಿ "ತುಡಾರ್" ( ಸೊಡರು) ಆರಾಧನೆಯ ಮರುದಿನ "ಗೋಪೂಜೆ" ಎಂಬ ವೈದಿಕ ವಿಧಾನದ ಪೂಜಾ ಶೈಲಿ ನಮ್ಮಲ್ಲಿ ರೂಢಗೊಂಡಿರಬೇಕು . ನಮ್ಮಲ್ಲಿ ಮೂಲತಃ ದೀಪಾವಳಿಯ ಮರುದಿನದ ಪ್ರತ್ಯೇಕ ಗೋಪೂಜೆ ಎಂದಿಲ್ಲ . ದೀಪಾವಳಿಯ ರಾತ್ರಿ ಹಟ್ಟಿಕೊಟ್ಟಿಗೆಗೆ ತೋರಿಸುವ "ತುಡಾರ್", ಅದೇ ಸಮಷ್ಟಿಯ ಕೃಷಿ ಸಹಾಯಿ ಪಶುಗಳಪೂಜೆ . ಹೆತ್ತ ತಾಯಿಯ ಬಳಿಕ ಜೀವನ ಪೂರ್ತಿ ಹಾಲಿಗೆ ನಾವು ದನಗಳನ್ನೆ ಆಶ್ರಯಿಸ ಬೇಕು ತಾನೆ? ಆದುದರಿಂದ ದನವು ಮಾತೃ ಸಮಾನವಾದುದು ಎಂಬ ಭಾವದೊಂದಿಗೆ ಗೋಪೂಜೆ .ಜಾನಪದ - ಶಿಷ್ಟ ವಿಧಾನಗಳು ಈ ಆರಾಧನಾ ವಿಧಾನದಲ್ಲಿ ಸಮ್ಮಿಳಿತಗೊಂಡಿವೆ .ಆರಾಧನೆ ನಿರಂತರ ನಡೆದು ಬಂದಿದೆ ,ಇದರಲ್ಲಿ ವಿಮರ್ಶೆಗಳಿಲ್ಲ . ಇದೇ ನಮ್ಮ ಸಾಂಸ್ಕೃತಿಕ ಸೊಬಗು . ಗೋವುಗಳಲ್ಲಿ ಸಾಕ್ಷಾತ್ ಜನಪದ ಮನಸ್ಸಿನ ಜಗನ್ನಾಥನಾದ ಗೋಪಾಲಕೃಷ್ಣನೇ ಸನ್ನಿಹಿತನಿದ್ದು ಪೂಜೆಗೊಳ್ಳುತ್ತಾನೆ ಎಂಬುದು ಅನುಸಂಧಾನ .'ಸರ್ವೇ ದೇವಾಃ ಸ್ಥಿತಾ ದೇಹೇ' ಇದು ಗೋಮಾತೆಯನ್ನು ವೈದಿಕವು ಕೊಂಡಾಡಿದೆ.
ಕುರ್ಕಾಲು : ದಿ! ಸಿಸಿಲಿಯ ಆಳ್ವ ಸ್ಮಾರಕ ಬಸ್ ನಿಲ್ದಾಣ ಲೋಕಾರ್ಪಣೆ
Posted On: 05-11-2021 11:40AM
ದಿವಂಗತ ಸಿಸಿಲಿಯಾ ಆಳ್ವ ಸ್ಮಾರಕ ಬಸ್ ನಿಲ್ದಾಣ ದಿನಾಂಕ 04/11/21ರಂದು ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಸುಭಾಸ್ ನಗರದಲ್ಲಿ ಲೋಕಾರ್ಪಣೆಗೊಂಡಿತು.
