Updated News From Kaup

ಕನ್ನಡ ಸಾಹಿತ್ಯಕ್ಕೆ ಅಂತಾರಾಷ್ಟ್ರೀಯ ವೇದಿಕೆ ಕೊಟ್ಟ 'ಶಾಂತಿ ಪ್ರಕಾಶನ' ಕನ್ನಡಿಗರ ಹೆಮ್ಮೆ: ಸುನೀಲ್ ಅಂಬಲವೆಲೀಲ್

Posted On: 04-11-2021 02:03PM

ವಿಶ್ವದ ಅತಿ ದೊಡ್ಡ ಪುಸ್ತಕ ಮೇಳಗಳಲ್ಲಿ ಒಂದಾದ 'ಶಾರ್ಜಾ ಬುಕ್ ಫೇರ್' ನ ಶಾಂತಿ ಪ್ರಕಾಶನದ ಮಳಿಗೆ ಉದ್ಘಾಟನೆ ಸಂದರ್ಭದಲ್ಲಿ ಮಾತನಾಡಿದ ದುಬೈನ ಖ್ಯಾತ ವಕೀಲರು, ದುಬೈನ 'ದಿ ಲಾ ರಿಪೋರ್ಟರ್ಸ್' ಕಾನೂನು ಸಂಸ್ಥೆಯ ಸ್ಥಾಪಕರಾದ ಸುನೀಲ್ ಅಂಬಲವೆಲೀಲ್, ಶಾಂತಿ ಪ್ರಕಾಶನ ಸಂಸ್ಥೆ ಶಾರ್ಜಾ ಪುಸ್ತಕ ಮೇಳದಲ್ಲಿ ಸತತವಾಗಿ ಭಾಗವಹಿಸುತ್ತಾ ಕನ್ನಡ ಸಾಹಿತ್ಯಕ್ಕೆ ಅಂತರಾಷ್ಟ್ರೀಯ ವೇದಿಕೆ ಕೊಡುತ್ತಿದೆ, ಇದು ಅತ್ಯಂತ ಹೆಮ್ಮೆಯ ವಿಷಯವಾಗಿದೆ.' ಎಂದರು.

ಮಜೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ, ಸದಸ್ಯರ ಆಯ್ಕೆ

Posted On: 04-11-2021 12:01AM

ಕಾಪು : ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿರುವ ಮಜೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಎಂ.ಬಿ.ಪುರಾಣಿಕ್ ಮಜೂರು ಅವಿರೋಧವಾಗಿ ಮುಂದಿನ 2021-23ರ ಅವಧಿಗೆ ಆಯ್ಕೆಯಾಗಿದ್ದಾರೆ.

ಬಿರುವೆರ್ ಕುಡ್ಲ ಮೂಲ್ಕಿ ಘಟಕದ 49ನೇ ಸೇವಾ ಯೋಜನೆಯಾಗಿ ದೀಪಾವಳಿ ಸಂಭ್ರಮ-2021

Posted On: 03-11-2021 11:45PM

ಮೂಲ್ಕಿ : ಬಿರುವೆರ್ ಕುಡ್ಲ ಮೂಲ್ಕಿ ಘಟಕದ ಆಶ್ರಯದಲ್ಲಿ ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ಆರ್ಥಿಕವಾಗಿ ಅಶಕ್ತ ಎರಡು ಕುಟುಂಬದೊಂದಿಗೆ ದೀಪಾವಳಿ ಸಂಭ್ರಮ ಆಚರಿಸಲಾಯಿತು.

ತುಡರ ಪರ್ಬ ; ಬಲಿಯೇಂದ್ರೆ ಬರ್ಪೆ ; "ಪೊಲಿ" ಕೊರ್ಪೆ

Posted On: 03-11-2021 06:30PM

ಹ್ಹೋ || ಭೂಮಿಪುತ್ರೆ ಬಲಿಯೇಂದ್ರೆ ರಾಜ್ಯ ಮಾಡೊಡು ವರ್ಸೊಗು ಮೂಜಿ ಉಚ್ಚಯ , ಕಾಲೊಗು ಆಜಿ ಪರ್ವ , ಕಾಲಾದಿಗೊಂಜಿ ಓಮ , ಓಮೊಗೊಂಜಿ ನೇಮ, ನೇಮೊಡು ದಾನ ,ದಾನೊಡ್ದೆಚ್ಚ ಧರ್ಮ , ಕತ್ತಲೆಗಯ್ಯಸಾರ ,ಬಯ್ಯಗಯ್ಯಸಾರ ಬಂಗಾರ್ದಿರೆಟ್ ಬೆರಣ ಭೋಜನ ಮಲ್ಪಾವೊಂದು ,ಅರತ್ತಾನ ಆಲಿಯೊಂದು ಇತ್ತೆನಾ ಭೂಮಿ ಪುತ್ರೆ ಬಲಿಯೇಂದ್ರೆ || ಇಂಚ ಬಲಿಯೇಂದ್ರನ ಅರಸಾದಿಗೆನ್ ಪುಗರ್ ವೆರ್ ನಂದೊಳ್ಗೆ ಅಮುಣಂಜೆ ಗುತ್ತು ಶೀನಪ್ಪ ಹೆಗ್ಡೆ , ತಾನ್ ಸಂಪೊಲ್ತಿನ ತುಳುವಾಲ ಬಲಿಯೇಂದ್ರೆ ಸಂದಿಡ್ . ವಾ ಅರಸು ಸತ್ಯ ಧರ್ಮೊಡು ರಾಜ್ಯ ಆಲಿಯೊಂದುಪ್ಪುವೆನಾ ಆ ರಾಜ್ಯೊಡು ಕಾಲೊಗು ಸರಿಯಾದ್ ಬರ್ಸ ,ಬರ್ಸೋಡ್ದು ಬುಲೆಭಾಗ್ಯ ,ಬುಲೆಭಾಗ್ಯ ಉರ್ಕರ್ದ್ ಪೊಲಿಎಚ್ಚಿಯಾದ್ , ಸಂತಾನ ಸಂತೇಸಿ ನಿಲೆಯಾದ್ ಜನಮಾನಿ ಸಂತೋಸುಡು ಉಪ್ಪೆವೆರ್ . ಅಂಚಾದೇ ಹಿರಿಯೆರ್ ಪಂಡೆರ್ ಅರಸು 'ಕಾಲದ' ಎಡ್ಡೆ ನಡಕೆಗ್ ಕಾರಣ ಆಪೆ .'ಕಾಲ' ನಡತೊಂದು ಬರ್ಪಿ ಸಾದಿಗ್ ಸತ್ಯಧರ್ಮದ ಪೂ ಬಿರ್ಕ್ ದ್ ಎದುಕೊನ್ನ ಅರಸುಗು ಕಾಲೊನು ನಿರ್ದರಿಪುನ ಎಡ್ಡೆ್ದಿಗೆ ಉಂಡೂಂದು ನಂಬೊಂದು ಬತ್ತಿನ ಸತ್ಯದ ಸಂಸಾರ ನಮ. ಅಂಚಿನ ಒರಿ ಅರಸು ನಮ ಭೂಮಿನ್ ಆಲ್ಯೊಂದು ಇತ್ತೆ .ಆಯೆನೆ 'ಬಲಿಯೇಂದ್ರೆ' . "ಪೊಲಿ ಪೊಲ್ಸಾವೊಡು". ಕಟಿ ಇಲ್ಲ್ ಬುಡಂದೆ ಪೊಲ್ಸು ದಿಂಜೊಡು .ಇಂಚಿನ ಬಯಕೆಡ್ 'ಭೂಮಿಪುತ್ರೆ ಬಲಿಯೇಂದ್ರೆ' ಪಂಡ್ ದೆ ಪುದಾರಾಯಿನ ಅರಸು ಬಲಿಯೇಂದ್ರೆ ಮಣ್ಣ್ ದ ಮಗೆನೇ ಆಯೆ. " ಮಣ್ಣ್ ಡ್ ಪೊಂರ್ಬಿನಾಯೆ ನುಪ್ಪು ತಿನುವೆ , ನರಮಾನಿಡ ಪೊಂರ್ಬಿನಾಯೆ ಮಣ್ಣ್ ತಿನುವೆ " . 'ಮಣ್ಣ್ ದ ಸತ್ಯ' . ಮಣ್ಣ್ ಪತ್ ದ್ ಸತ್ಯ ಮಲ್ತೆರ್ . 'ನೆಲಕಾಯಿ ದರ್ತೆರ್' , 'ಭೂಮಿದ ಆಜೆ' ಇಂಚಿನ ಹಿರಿಯೆರ್ನ ಅನುಭವದ ಪಾತೆರೊಗು ತರೆತಗ್ಗಾದ್ ಮಣ್ಣ್ ನ್ ನಂಬಿಯೇ ಅಂಚಾದ್ "ಬುಲೆ ಭಾಗ್ಯ" ದಿಂಜ್ಂಡ್ .ಒರ್ಮೆಲಾ "ಪೊಲಿ" ತಮೆಲೊಂದು ಬತ್ತ್ಂಡ್.

ಕಾಪು ಬ್ಲಾಕ್ ಕಾಂಗ್ರೆಸ್ , ಹಿಂದುಳಿದ ವರ್ಗಗಳ ಘಟಕ, ಯುವ ಕಾಂಗ್ರೆಸ್ ವತಿಯಿಂದ ದೀಪಾವಳಿ ಅಚರಣೆ ಹಾಗು ಉಭಯ ಜಿಲ್ಲಾ ಮಟ್ಟದ ಗೂಡುದೀಪ ಸ್ಪರ್ಧೆ

Posted On: 03-11-2021 02:43PM

ಕಾಪು : ಹಿಂದಿನ ಕಾಲದಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಗೂಡುದೀಪಗಳನ್ನು ಸಹಕಾರ ಪದ್ದತಿಯಲ್ಲಿ ಎಲ್ಲರೂ ಸೇರಿ ರಚಿಸುತ್ತಿದ್ದರು. ಇದೀಗ ಗೂಡುದೀಪಗಳನ್ನು ನವನವೀನ ರೀತಿಯಲ್ಲಿ ಅಧುನಿಕ ಶ್ಯೆಲಿಯಲ್ಲಿ ರಚಿಸಲಾಗುತ್ತಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮೆರುಗು ತರುವ ದೀಪವೇ ಗೂಡುದೀಪಗಳು. ನಮ್ಮ ಸಾಂಪ್ರದಾಯಿಕ ಸಂಸ್ಕೃತಿಗಳನ್ನು ಉಳಿಸಲು ಇಂತಹ ಕಾರ್ಯಕ್ರಮಗಳನ್ನ ಹಮ್ಮಿಕೂಳ್ಳುವ ಮೂಲಕ ಯುವಜನತೆ ಒಲವು ತೋರಿಸುವ ಅಗತ್ಯವಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಕದ್ರಿ ನವನೀತ ಶೆಟ್ಟಿ ಹೇಳಿದರು. ಅವರು ಕಾಪು ಬ್ಲಾಕ್ ಕಾಂಗ್ರೆಸ್, ಕಾಪು ಬ್ಲಾಕ್ ಯುವ ಕಾಂಗ್ರೆಸ್ ಹಾಗು ಕಾಪು ಬ್ಲಾಕ್ ಹಿಂದುಳಿದ ವರ್ಗ ಘಟಕದ‌ ವತಿಯಿಂದ ಕಾಪು ರಾಜೀವ ಭವನದ ಮುಂಭಾಗದಲ್ಲಿ ನಡೆದ ದೀಪಾವಳಿ ಆಚರಣೆ ಹಾಗು ಗೂಡುದೀಪ ಸ್ಪರ್ಧೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನೀಡಿ ಮಾತನಾಡಿದರು.

ಮಂಗಳೂರು ಪೊಲೀಸರಿಂದ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದ 7 ಜನ ಆರೋಪಿಗಳ ಬಂಧನ, ಸುಮಾರು 15 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳ ವಶ.

Posted On: 03-11-2021 02:22PM

ಮಂಗಳೂರು : ಇಲ್ಲಿನ ನಗರದ ವ್ಯಾಪ್ತಿಯಲ್ಲಿ ಸರಗಳ್ಳತನ, ದರೋಡ, ದ್ವಿಚಕ್ರ ವಾಹನಗಳನ್ನು ಕಳವು ಮತ್ತು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಕ್ವಾಡಿ ಪ್ರವೀಣ್ ಶೆಟ್ಟಿಗೆ ಬೆಂಗಳೂರು ಮಾಜಿ ಕಮಿಷನರ್ ಅಭಿನಂದನೆ

Posted On: 03-11-2021 01:52PM

ಬೆಂಗಳೂರು ಮಾಜಿ ಕಮಿಷನರ್ ಭಾಸ್ಕರ್ ರಾವ್ ಅವರು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದುಬೈ ಫಾರ್ಚ್ಯುನ್ ಗ್ರೂಪ್ ಆಫ್ ಹೋಟೆಲ್ ಆಡಳಿತ ನಿರ್ದೇಶಕರಾದ ವಕ್ವಾಡಿ ಪ್ರವೀಣ್ ಶೆಟ್ಟಿಯವರನ್ನು ಸನ್ಮಾನಿಸಿ ಅಭಿನಂದಿಸಿದರು.

'ಪುನೀತ ನೆನಪು' ಕನ್ನಡಿಗಾಸ್ ಫೆಡರೇಷನ್ ವತಿಯಿಂದ ಅಪ್ಪು 'ನುಡಿನಮನ'

Posted On: 03-11-2021 01:43PM

ಅಕ್ಟೋಬರ್29 ಶುಕ್ರವಾರ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ವಿಧಿವಶರಾದ ಕನ್ನಡ ಚಿತ್ರರಂಗದ ಯುವರತ್ನ ಸೂಪರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುವ 'ಪುನೀತ ನೆನಪು' ಎಂಬ ನುಡಿನಮನ ಕಾರ್ಯಕ್ರಮವನ್ನು ಅಂತಾರಾಷ್ಟ್ರೀಯ ಕನ್ನಡಿಗಾಸ್ ಫೆಡರೇಷನ್ ಆಯೋಜಿಸಿತ್ತು.

ಇನ್ನಂಜೆ : ನವೆಂಬರ್ 4ರ ಬೆಳಿಗ್ಗೆ ಗೊಳಿಕಟ್ಟೆಯಲ್ಲಿ ಮುಳ್ಳಮುಟ್ಟೆ ಕಾರ್ಯಕ್ರಮ

Posted On: 03-11-2021 12:41PM

ಇನ್ನಂಜೆ : ದೀಪಾವಳಿ ಹಬ್ಬಕ್ಕೆ ಮುಂಚಿತವಾಗಿ ನರಕ ಚತುರ್ದಶಿಯ ಪ್ರಯುಕ್ತ ವರ್ಷಂಪ್ರತೀ ನಡೆಯುವ ಮುಳ್ಳಮುಟ್ಟೆ ಕಾರ್ಯಕ್ರಮದಲ್ಲಿ ಜೋಡುಬಂಟ ನರ್ತನ ಸೇವೆಯು ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಿಂದ ಹೊರಟು ವಿಠೋಬಾ ಭಜನಾ ಮಂದಿರ ಗೊಳಿಕಟ್ಟೆ ಇಲ್ಲಿಗೆ ಮೆರವಣಿಗೆಯ ಮೂಲಕ ಸಾಗಿ ಊರಿಗೆ ಬಂದಿರುವ ದುರಿತಗಳು ತೊಲಗಲಿ/ಹಾಗೂ ನರಕಾಸುರನ ವಧೆ ಎಂಬ ಉದ್ದೇಶದಿಂದ ಮುಳ್ಳಿನ ರಾಶಿಗೆ ಬೆಂಕಿ ಕೊಡುವುದು ವಾಡಿಕೆಯಾಗಿದೆ.

141 ಸೇವಾಯೋಜನೆಗಳನ್ನು ಯಶಸ್ವಿಯಾಗಿಸಿದ ವೀರಕೇಸರಿ ಬೆಳ್ತಂಗಡಿ ಸಂಘಟನೆ

Posted On: 02-11-2021 09:11AM

ಮಂಗಳೂರು : ಸಮಾಜ ಸೇವೆಯೇ ನಮ್ಮ ಉಸಿರು ಎಂಬ ಧ್ಯೇಯ ವಾಕ್ಯವನ್ನು ಇಟ್ಟುಕೊಂಡು ಸೇವೆಗಾಗಿ‌ ಸಂಭಾಷಣೆ ಎಂಬ ಕಲ್ಪನೆಯ ಮೂಲಕ ಆರಂಭಗೊಂಡ ವೀರಕೇಸರಿ ಬೆಳ್ತಂಗಡಿ ಸಂಘಟನೆ ಕಳೆದ 5 ವರ್ಷ 6 ತಿಂಗಳುಗಳಲ್ಲಿ 141 ಸೇವಾಯೋಜನೆಗಳನ್ನು ಯಶಸ್ವಿಯಾಗಿ ಪೂರೈಸಿತು. ನೊಂದ ಕುಟುಂಬಗಳಿಗೆ ಸಹಾಯ ಹಸ್ತ ಚಾಚುವ ಮೂಲಕ ಯಶಸ್ವಿ 6ನೇ ವರ್ಷದ ಪಯಣದಲ್ಲಿ 4 ಕುಟುಂಬಗಳಿಗೆ ನೆರವಾಗುವ ಮೂಲಕ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಿದೆ. ಉತ್ಸಾಹವಿದ್ದರೆ, ಏನನ್ನಾದರೂ ಸಮಾಜಕ್ಕೆ ಮಾಡಬೇಕು ಎಂಬುವ ಹಂಬಲವಿದ್ದರೆ ಒಂದು ವೇದಿಕೆ ಬೇಕು ಹಾಗೆ ಅದು ಹಲವಾರು ತರುಣರ ಮನಸೆಳೆಯಬೇಕು ವೇದಿಕೆ ಬಳಿಸೇರಿದ ತರುಣರ ಹೃದಯ ಪರಿಪೂರ್ಣವಾಗಿರಬೇಕು ಆಗಮಾತ್ರ ಗೊಂದಲ,ಅಡೆತಡೆಗಳಿಲ್ಲದೆ ಅದರ ಯಶಸ್ಸು ಸಾಧ್ಯ.