Updated News From Kaup

ಸೈಬ್ರಕಟ್ಟೆ ರೋಟರಿ ಕ್ಲಬ್ : ಜಾನುವಾರು ಕಟ್ಟೆ ಶಾಲೆಯಲ್ಲಿ ನೂತನ ಇಂಟ್ರಾಕ್ಟ್ ಕ್ಲಬ್ ಉದ್ಘಾಟನೆ, ಧನಸಹಾಯ, ಸ್ಟೇಷನರಿ ವಿತರಣೆ

Posted On: 02-10-2021 09:34PM

ಉಡುಪಿ : ಸೈಬ್ರಕಟ್ಟೆ ರೋಟರಿಯಿಂದ ಹೊಸ ಇಂಟ್ರಾಕ್ಟ್ ಕ್ಲಬ್ ಜಾನುವಾರು ಕಟ್ಟೆ ಹೈಸ್ಕೂಲ್ ನಲ್ಲಿ ಸ್ಥಾಪಿಸಿ ಅದರ ಉದ್ಘಾಟನೆಯನ್ನು ಸಹಾಯಕ ಗವರ್ನರ್ ಪದ್ಮನಾಭ್ ಕಾಂಚನ್ ನೆರವೇರಿಸಿದರು.

ಉಡುಪಿ ಓಡಿಎಫ್+ 1 ಜಿಲ್ಲೆಯಾಗಿ ಘೋಷಣೆ : ಡಾ.ನವೀನ್ ಭಟ್

Posted On: 02-10-2021 09:23PM

ಉಡುಪಿ : ಉಡುಪಿ ಜಿಲ್ಲೆಯ ಎಲ್ಲಾ 155 ಗ್ರಾಮ ಪಂಚಾಯತ್ ಗಳು ಕಸ ಸಂಗ್ರಹಣೆ ಮತ್ತು ವಿಲೇವಾರಿ ಹಾಗೂ ಕಸ ಸಂಗ್ರಹಣೆಗೆ ಪ್ರತ್ಯೇಕ ವಾಹನ ವ್ಯವಸ್ಥೆ ಹೊಂದುವ ಮೂಲಕ ಉಡುಪಿ ಜಿಲ್ಲೆಯನ್ನು ಓಡಿಎಫ್+1 ಜಿಲ್ಲೆಯನ್ನಾಗಿ ಘೋಷಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ಹೇಳಿದರು. ಅವರು ಇಂದು , ಆಜಾದಿ ಕಾ ಅಮೃತ ಮಹೋತ್ಸವ ಆಚರಣೆಯ ಅಂಗವಾಗಿ ,ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗಾಂಧೀಜಿ ಆಶಯದ ಸ್ವಚ್ಛ ಭಾರತ ಕಲ್ಪನೆ ಸಾಕಾರಗೊಂಡಿದೆ : ರಘುಪತಿ ಭಟ್

Posted On: 02-10-2021 09:19PM

ಉಡುಪಿ : ಮಹಾತ್ಮಗಾಂಧೀಜಿ ಅವರ ತತ್ವ ಮತ್ತು ಚಿಂತನೆಗಳಲ್ಲಿ ಸ್ವಚ್ಛತೆಯೂ ಒಂದಾಗಿದ್ದು, ಅವರ ಆಶಯದಂತೆ ದೇಶದಾದ್ಯಂತ ಪ್ರತಿಯೊಬ್ಬ ಭಾರತೀಯನ ಚಿಂತನೆ ಸ್ವಚ್ಛ ಭಾರತ ಕಡೆಗೆ ತಿರುಗಿದೆ ಎಂದು ಶಾಸಕ ರಘುಪತಿ ಭಟ್ ಹೇಳಿದರು. ಅವರು ಇಂದು ಅಜ್ಜರಕಾಡು ಭುಜಂಗಪಾರ್ಕ್ನಲ್ಲಿ ನಗರಸಭೆ ವತಿಯಿಂದ ಆಯೋಜಿಸಿದ್ದ ಮಹಾತ್ಮ ಗಾಂಧೀ ಜಯಂತಿ ಕಾರ್ಯಕ್ರಮದಲ್ಲಿ , ಗಾಂಧೀ ಪ್ರತಿಮೆಗೆ ಮಾಲಾರ್ಪಣೆ ಹಾಗೂ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಸುರೇಶ್ ಶೆಟ್ಟಿ ಗುರ್ಮೆಯಿಂದ ಗಾಂಧೀ ಜಯಂತಿಯ ಪ್ರಯುಕ್ತ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

Posted On: 02-10-2021 09:03PM

ಉಡುಪಿ‌ : 40ನೇ ಬೊಮ್ಮರಬೆಟ್ಟು ಗ್ರಾಮ ಪಂಚಾಯತ್, ಕರ್ನಾಟಕ ಪಬ್ಲಿಕ್ ಸ್ಕೂಲ್ ಹಿರಿಯಡ್ಕ, ಲಯನ್ಸ್ ಕ್ಲಬ್ ಹಿರಿಯಡ್ಕ, ರೋಟರಿ ಹಿಲ್ಸ್ ಮಣಿಪಾಲ, ಮತ್ತು ಸಾಹಸ ಎನ್.ಜಿ. ಓ ಸಂಸ್ಥೆ, ಸಂಜೀವಿನಿ ಒಕ್ಕೂಟ ಹಾಗೂ ವಿವಿಧ ಸಂಘ ಸಂಸ್ಥೆಗಳ ಜಂಟಿ ಸಹಯೋಗದೊಂದಿಗೆ ಶಾಸಕರಾದ ಲಾಲಾಜಿ ಆರ್ ಮೆಂಡನ್ ಅವರ ನೇತೃತ್ವದಲ್ಲಿ ಗಾಂಧೀ ಜಯಂತಿಯ ಪ್ರಯುಕ್ತ ಸ್ವಚ್ಛತಾ ಅಭಿಯಾನ ಕಾರ್ಯಕ್ರಮಕ್ಕೆ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರು ಸುರೇಶ್ ಶೆಟ್ಟಿ ಗುರ್ಮೆ ಚಾಲನೆ ನೀಡಿದರು.

ಇನ್ನಂಜೆ : ಹಾಲು ಉತ್ಪಾದಕರ ಸಹಕಾರ ಸಂಘದ ಮಹಾಸಭೆ , ಸನ್ಮಾನ

Posted On: 02-10-2021 08:54PM

ಕಾಪು : ಇನ್ನಂಜೆ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಲಕ್ಷಣ ಕೆ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಇನ್ನಂಜೆ ದಾಸಭವನದಲ್ಲಿ ನಡೆಯಿತು. ಈ ಸಂದರ್ಭ ಮಾತನಾಡಿದ ಅವರು ಸದಸ್ಯರು ಉತ್ತಮ ಗುಣಮಟ್ಟದ ಮತ್ತು ಹೆಚ್ಚು ಉತ್ತಮ ಗುಣಮಟ್ಟದ ಹಾಲು ಪೂರೈಸುವ ಮೂಲಕ ಸಂಘದ ಅಭಿವೃದ್ಧಿಗೆ ನಿರಂತರವಾಗಿ ಸಹಕರಿಸುತ್ತಾ ಬರುತ್ತಿದ್ದಾರೆ. ಈ ಕಾರಣದಿಂದಾಗಿ ನಮ್ಮ ಸಂಘವು ಅತ್ಯುತ್ತಮ ಸಂಘವಾಗಿ ಮೂಡಿ ಬರಲು ಸಾಧ್ಯವಾಗಿದೆ. ಮುಂದೆಯೂ ಇದೇ ರೀತಿಯ ಬೆಂಬಲದ ನಿರೀಕ್ಷೆಯಲ್ಲಿ ನಾವಿದ್ದೇವೆ ಎಂದರು. ಒಕ್ಕೂಟದ ವಿಸ್ತರಣಾಧಿಕಾರಿ ಯಶವಂತರವರು ಲಾಭದಾಯಕ ಹೈನುಗಾರಿಕೆ, ಉತ್ತಮ ಗುಣಮಟ್ಟದ ಹಾಲಿನ ಉತ್ಪಾದನೆ, ರಾಸುವಿನ ಆರೋಗ್ಯದ ದೃಷ್ಟಿಯಲ್ಲಿ ಪ್ರತಿದಿನ ಖನಿಜ ಲವಣ ಮಿಶ್ರಣದ ಬಳಕೆ ಕುರಿತಾಗಿ ಸದಸ್ಯರಿಗೆ ತಿಳಿಸಿದರು. ಅಲ್ಲದೆ ರಾಸುಗಳ ಸಾಮೂಹಿಕ ವಿಮೆಯ ಮಹತ್ವವನ್ನೂ ವಿವರಿಸಿದರು.

ಕಾಪು ತಾಲೂಕಿಗೆ ನೂತನ ತಹಶೀಲ್ದಾರ್

Posted On: 02-10-2021 08:47PM

ಕಾಪು : ಇಲ್ಲಿನ ತಾಲೂಕು ತಹಶೀಲ್ದಾರ್ ಆಗಿ ಶ್ರೀನಿವಾಸ ಮೂರ್ತಿ ಕುಲಕರ್ಣಿ ಅಧಿಕಾರ ಸ್ವೀಕರಿಸಿದ್ದಾರೆ. ಇವರು ಕೊಪ್ಪಳ, ಗದಗದಲ್ಲಿ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರದೀಪ್ ಎಸ್. ಕುರುಡೇಕರ್ ಅಧಿಕಾರ ಹಸ್ತಾಂತರ ಮಾಡಿದರು.

ಉಡುಪಿ ಜಿಲ್ಲಾ ಜೆಡಿಎಸ್ ಪಕ್ಷ ಕಚೇರಿಯಲ್ಲಿ ಗಾಂಧಿ ಜಯಂತಿ ಆಚರಣೆ

Posted On: 02-10-2021 08:35PM

ಉಡುಪಿ : ಮಹಾತ್ಮಾಗಾಂಧೀಜಿಯವರ 153ನೇ ಜಯಂತಿಯನ್ನು ಉಡುಪಿ ಜಿಲ್ಲಾ ಜೆಡಿಎಸ್ ಪಕ್ಷ ಕಚೇರಿಯಲ್ಲಿ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಲಾಯಿತು. ಗಾಂಧೀಜಿ ಯವರು ಏನು ಹೇಳಿದ್ದಾರೆ ಅದನ್ನು ಜೀವನದಲ್ಲಿ ಮಾಡಿ ತೋರಿಸಿ ಕೊಟ್ಟಂತಹ ಮಹಾನ್ ವ್ಯಕ್ತಿ, ಅಹಿಂಸೆಯಿಂದ ದೇಶಕ್ಕೆ ಸ್ವಾತಂತ್ರ್ಯವನ್ನು ದೊರಕಿಸಿಕೊಟ್ಟ ಮಹಾತ್ಮ. ಇಂದಿಗೂ ದೇಶ ವಿದೇಶಗಳಲ್ಲಿ ಅವರ ಗುಣಗಾನ ನಡೆಯುತ್ತಿದೆ.

ಪಡುಕರೆ : ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛ ಭಾರತ ಅಭಿಯಾನ

Posted On: 02-10-2021 08:25PM

ಉಡುಪಿ : ಮಹಾಲಕ್ಷ್ಮಿ ಕೋ-ಆಪರೇಟಿವ್ ಬ್ಯಾಂಕ್ ಲಿ. ಉಡುಪಿ ಹಾಗೂ ಟೀಮ್ ನೇಶನ್ ಫಸ್ಟ್ ತಂಡದ ಸಹಭಾಗಿತ್ವದಲ್ಲಿ ಉಡುಪಿ ಪಡುಕರೆ ಬೀಚ್ ನಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛ ಭಾರತ ಅಭಿಯಾನ ನಡೆಯಿತು.

ಕಾರ್ಯ - ಮಾಲಕಾರ್ಯ

Posted On: 02-10-2021 02:53PM

'ಕಾರ್ಯ' ಪಂಡ ದಾದಪಂಡ್ ದ್‌ ತೆರಿಯಂದೆ 'ಮಾಲಕಾರ್ಯ ' ಎಂಚಿನಾಂದ್ ವಿವರಿಪರೆ ಆಪುಜಿ. ಅಯಿಕಾದ್ ಕಾರ್ಯ ಪಂಡ : ಅಮ್ಮೆರ್ ,ಅಜ್ಜೆರ್, ಪಿಜ್ಜೆರ್ ಅಂಚೆನೆ ಅಪ್ಪೆ ,ಅಮ್ಮರ್ನ ಅಪ್ಪೆ (ಕಾರ್ಯ ಪಾಡುನಾಯಗ್ ಅಜ್ಜಿ) , ಅಮ್ಮೆರ್ನ ಅಜ್ಜಿ (ಕಾರ್ಯ ಪಾಡುನಾಯಗ್ ಪಿಜ್ಜಿ) ಇಂಚ ಮೂಜಿ ತರೆತ ಕರಿದ್ ಪೋತಿನ ಹಿರಿಯೆರೆ್ಗ್ ಅಮ್ಮೆರ್ನ ಅತ್ತಡ ಅಪ್ಪೆನ ಸಯಿತಿನ ತಿಥಿದಾನಿ ವರ್ಸೊಗೊರ ಸಂದಾವುನ ಪಿಂಡ ಬುಡ್ಪಿನ ಕರ್ಮನೇ ಪಿತೃಕಾರ್ಯ, ಉಂದುವೇ 'ಕಾರ್ಯ '. ಅಮ್ಮೆರ್ನ ಕಾರ್ಯದಾನಿ ಅಮ್ಮೆರ್, ಅಜ್ಜೆರ್,ಪಿಜ್ಜೆರೆಗ್ ಪಿಂಡ ಪಾಡುನು.ಅಪ್ಪೆನ ಕಾರ್ಯದಾನಿ‌ ಅಪ್ಪೆಡ್ದ್ ಸುರು ಪತ್ ದ್ ಅಜ್ಜಿ , ಪಿಜ್ಜಿ ಇಂಚ ಕಾರ್ಯ ಕರಿಪೊಡು. ಅಮ್ಮೆರ್ನ ಪಂಡ 'ಪಿತೃ ಪೈತೃಕ' - ಅಮ್ಮೆರ್ನ ಸಂಸಾರ.ಅಪ್ಪೆನ ಪಂಡ 'ಮಾತೃ ಪೈತೃಕ' - ಅಪ್ಪೆ ಸಂಸಾರ. ಕರಿದ್ ಪೋಯಿನಾಕುಲು ದೇವತೆರ್ ಪನ್ಪಿನ ಗೇನೊಡು ಕಾರ್ಯ ಮನ್ಪುನವು ವೈದಿಕ ಕ್ರಮ. ಸೈತಿನಾಕುಲೆಗ್ ಪತ್ತ್ ದಿನಮುಟ್ಟ ಪದಿನಾಜಿ ಕಾರ್ಯ ಪಾಡ್ದ್ ಪತ್ತೊಂಜೆನಾನಿ ಕುಡ ಪದಿನಾಜಿ ಕಾರ್ಯ ಕರಿತ್ ದ್ ಪದ್ ರಾಡ್ನೆ ದಿನತಾನಿ ಪೆರಿಯ ಹಿರಿಯೆರೊಟ್ಟುಡು ಸೇರಾದ್ ಕಾರ್ಯ (ಸಪಿಂಡೀಕರಣ) ಕರಿತ್ಂಡ ಆನಿಡ್ದ್ ಬೊಕ್ಕ ಹಿರಿಯೆರ್ ವಸು ,ರುದ್ರ ,ಆದಿತ್ಯ ರೂಪದ ಪಿತೃ ದೇವತೆರ್ ಪನ್ಪಿನ ಅಭಿಪ್ರಾಯ. ಅವು ಪಿತೃ ಕಾರ್ಯ ಉಪ್ಪು ಮಾತೃ ಕಾರ್ಯ ಉಪ್ಪು ಪಿತೃ ದೇವತೆರ್ ವಸು,ರುದ್ರ,ಆದಿತ್ಯ ರೂಪದಾಕುಲು ಪಂಡ್ ದೇ ಒಪ್ಪಿತೊ. [ಒರಿ ಕಾರ್ಯ ಪಾಡ್ರೆ ಅಧಿಕಾರ( ಅಮ್ಮೆರ್ , ಅಪ್ಪೆ ತೀರಿ ಬೊಕ್ಕ) ಪಡೆಯೆಡ ಆನಿಡ್ದ್ ಬೊಕ್ಕ ಆಯೆ ಈತ್ ಕರಿದ್ ಪೋತಿನ ಹಿರಿಯೆರೆಗ್ ಪಿಂಡ ಪಾಡ್ರೆ ,ಎಡ್ಮೆ ನೀರ್ ಬುಡ್ರೆ ಅಧಿಕಾರಿ ಆಪೆ.ಒಂಜಿ ವರ್ಸೊಗು ಒರ ಅಮ್ಮೆರ್ನ - ಅಪ್ಪೆನ ಕಾರ್ಯ ,ಜೋಕುಲು ಇಜ್ಜಾಂದಿನ ಅಮ್ನೆರ್ನ ಮೆಗ್ಯೆ ,ಪಲಾಯಾಲ್ಲೆನ ಕಾರ್ಯ , ಕುಟುಮೊಡು ಒರಿ ಪಾಡುನ 'ಮಾಲಕಾರ್ಯ'. ಇಂಚಿನ ದಿನತಾನಿ‌ ಪಿಂಡ ಪಾಡೊಡು ,ಎಡ್ಮೆ ನೀರ್ ಬುಡೊಡು.ಅವು ಅತ್ತಾಂದೆ ವರ್ಸೊಗು ಸೊನ್ಪತ್ತಾಜಿ ದಿನ (ಷಣ್ಣವತೀ) ಎಡ್ಮೆ ನೀರ್ ಬುಡೊಡು.]

ಹೆಜಮಾಡಿ : ಗಾಂಧಿ ಜಯಂತಿ ಆಚರಣೆ ಮತ್ತು ಸ್ವಚ್ಛತಾ ಕಾರ್ಯಕ್ರಮ

Posted On: 02-10-2021 02:43PM

ಹೆಜಮಾಡಿ : ಕಾಪು ತಾಲೂಕಿನ ಹೆಜಮಾಡಿ ಗ್ರಾಮ ಪಂಚಾಯತ್ ನಲ್ಲಿ ಗಾಂಧಿ ಜಯಂತಿ ಆಚರಣೆ ಮತ್ತು ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.