Updated News From Kaup
ಕಟಪಾಡಿಯ ಜಾದುಗಾರ ಬಾಲಪ್ರತಿಭೆ ಪ್ರಥಮ್ ಕಾಮತ್ ಗೆ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಗೌರವ - 2021
Posted On: 07 Nov 2021, 05:48 PM
ಕಟಪಾಡಿ : ಕಾರ್ಕಳ ತಾಲೂಕು ಅಜೆಕಾರು ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯು ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಕೊಡಮಾಡುವ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಗೌರವ 2021 ಪ್ರಶಸ್ತಿಗೆ ಕಟಪಾಡಿಯ ಜಾದುಗಾರ ಬಾಲಪ್ರತಿಭೆ ಕಾಮತ್ ಆಯ್ಕೆಯಾಗಿರುತ್ತಾರೆ. ಕಟಪಾಡಿ ಎಸ್ ವಿ ಎಸ್ ಶಾಲೆಯ ಒಂಭತ್ತನೇ ತರಗತಿಯಲ್ಲಿ ಕಲಿಯುತ್ತಿರುವ ಪ್ರಥಮ್ ಕಾಮತ್ ಕಟಪಾಡಿಯ ರಂಗಕರ್ಮಿ ನಾಗೇಶ್ ಕಾಮತ್ ಮತ್ತು ಸುಜಾತ ಕಾಮತ್ ಇವರ ಪುತ್ರ. ಈ ಬಾರಿ 30 ಮಕ್ಕಳು ಮಕ್ಕಳ ಕರ್ನಾಟಕ ರಾಜ್ಯೋತ್ಸವ ಗೌರವ 2021 ಕ್ಕೆ ಪಾತ್ರರಾಗಿದ್ದಾರೆ. ನವೆಂಬರ್ 14, ಮಧ್ಯಾಹ್ನ 2 ಗಂಟೆಯಿಂದ ಅಜೆಕಾರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನರೂರು ಗೌರವ ಪ್ರದಾನಿಸಲಿದ್ದಾರೆ ಎಂದು ರಾಜ್ಯಾಧ್ಯಕ್ಷರಾದ ಡಾ.ಶೇಖರ ಅಜೆಕಾರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸಾಧನಾಶ್ರೀ ಪ್ರಶಸ್ತಿ ಪುರಸ್ಕೃತರಾದ ರಾಘವೇಂದ್ರ ಪ್ರಭು ಕವಾ೯ಲು
Posted On: 07 Nov 2021, 02:12 PM
ಉಡುಪಿ, ನ.7 : ಜೇಸಿಐ ಭಾರತ ವಲಯ 15 ರ ವ್ಯವಹಾರ ಸಮ್ಮೇಳನ 'ಉನ್ನತಿ' ಕುಂದಾಪುರ ಸಹನಾ ಕನ್ವೆಕ್ಷನ್ ನಲ್ಲಿ ಜರಗಿತು. ಈ ಕಾಯ೯ಕ್ರಮದಲ್ಲಿ ಪೂವ೯ ವಲಯ ಉಪಾಧ್ಯಕ್ಷ , ಸಾಮಾಜಿಕ ಕಾಯ೯ಕತ೯ ರಾಘವೇಂದ್ರ ಪ್ರಭು ಕವಾ೯ಲುರವರಿಗೆ ಸಾಧನಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದಭ೯ದಲ್ಲಿ ವಲಯಾಧ್ಯಕ್ಷೆ ಸೌಜನ್ಯ ಹೆಗ್ಡೆ, ರಾಷ್ಟ್ರೀಯ ನಿದೇ೯ಶಕ ಕಾತಿ೯ಕೇಯ ಮಧ್ಯಸ್ಥ, ಸಮದ್ ಖಾನ್, ದೇವರಾಯ ದೇವಾಡಿಗ, ಡಾIIವಿಜಯ್ ನೆಗಳೂರು, ಉದಯ ನಾಯ್ಕ್, ರಕ್ಷಿತ್ ವಂಡ್ಸೆ ಮತ್ತಿತರರು ಉಪಸ್ಥಿತರಿದ್ದರು.
ರಾಜ್ಯದಲ್ಲಿ ಇನ್ನೂ ಎರಡು ದಿನ ಭಾರೀ ಮಳೆ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಮಳೆ ಸಾಧ್ಯತೆ
Posted On: 07 Nov 2021, 12:58 PM
ಬೆಂಗಳೂರು : ಬಂಗಾಳಕೊಲ್ಲಿ ವಾಯುಭಾರ ಕುಸಿತದಿಂದ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇನ್ನೂ ಎರಡು ದಿನ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮೂರ್ನಾಲ್ಕು ದಿನ ವ್ಯಾಪಕವಾಗಿ ಮಳೆಯಾಗುವ ಸಾಧ್ಯತೆ ಇದ್ದು, ಬೆಳಗಾವಿ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿಯೂ ಮಳೆಯಾಗಲಿದೆ. ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದ್ದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ರಾಜ್ಯದ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಹಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.
ರಾಜ್ಯದಲ್ಲಿ ಇನ್ನೂ ಎರಡು ದಿನ ಭಾರೀ ಮಳೆ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಮಳೆ ಸಾಧ್ಯತೆ
Posted On: 07 Nov 2021, 12:55 PM
ನವೆಂಬರ್ 12 : ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಕುತ್ಯಾರು ಮತ್ತು ರೋಟರಿ ಕ್ಲಬ್ ಶಿರ್ವ ಸಹಯೋಗದೊಂದಿಗೆ ಹದಿಹರೆಯದ ತಲ್ಲಣಗಳು: ಒಂದು ಶೈಕ್ಷಣಿಕ ಸಂವಾದ
Posted On: 06 Nov 2021, 11:00 PM
ಕಾಪು : ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ ಕುತ್ಯಾರು, ಉಡುಪಿ ಮತ್ತು ರೋಟರಿ ಕ್ಲಬ್ ಶಿರ್ವ ಇವರ ಸಹಯೋಗದೊಂದಿಗೆ ನವೆಂಬರ್ 12, ಶುಕ್ರವಾರ ಅಪರಾಹ್ನ 2:15ಕ್ಕೆ ಸೂರ್ಯ ಚೈತನ್ಯ ಸಭಾಭವನದಲ್ಲಿ ಹದಿಹರೆಯದ ತಲ್ಲಣಗಳು: ಒಂದು ಶೈಕ್ಷಣಿಕ ಸಂವಾದ ಕಾರ್ಯಕ್ರಮ ಜರಗಲಿದೆ. ಸಂಪನ್ಮೂಲ ವ್ಯಕ್ತಿಯಾಗಿ ಸ್ನಾತಕೋತ್ತರ ಅಧ್ಯಯನ ವಿಭಾಗದ ಡೀನ್ , ಸಹಪ್ರಾಧ್ಯಾಪಕರು-ಸೈಕಾಲಜಿ ಹಾಗೂ ಸೈಕಿಯಾಟ್ರಿ ವಿಭಾಗ, ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ ಮೂಡುಬಿದಿರೆಯ ಡಾ. ರವಿಪ್ರಸಾದ್ ಹೆಗ್ಡೆ, ಮುಖ್ಯ ಅತಿಥಿಯಾಗಿ ಉಡುಪಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳಾದ ನಾಗೇಂದ್ರಪ್ಪ ಎ. ಕೆ, ರೋಟರಿ ಕ್ಲಬ್ ಶಿರ್ವದ ಅಧ್ಯಕ್ಷರಾದ ಜಯಕೃಷ್ಣ ಆಳ್ವ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೂರ್ಯ ಚೈತನ್ಯ ಗ್ಲೋಬಲ್ ಅಕಾಡೆಮಿ-ಕುತ್ಯಾರು ಇಲ್ಲಿನ ಆಡಳಿತ ಮಂಡಳಿ ಅಧ್ಯಕ್ಷರಾದ ವಿದ್ವಾನ್ ಶಂಭುದಾಸ ಗುರೂಜಿ ವಹಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಎಲ್ಲೂರು ಕಾಶೀ ಸಂತಾನ ಟ್ರಸ್ಟ್ ನೂತನ ಕಚೇರಿ ಆರಂಭ
Posted On: 06 Nov 2021, 09:31 PM
ಅದಮಾರು : ನಲುವತ್ತು ವರ್ಷಗಳ ಸುದೀರ್ಘ ಅವಧಿಯಲ್ಲಿ ನಿರಂತರ ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ ವಿದ್ಯಾರ್ಥಿ ವೇತನ ವಿತರಿಸುತ್ತಾ ಪ್ರಚಾರ ಬಯಸದೇ ಸಮಾಜ ಮುಖಿ ಶಿಕ್ಷಣ ಪ್ರೀತಿಯ ಕಾರ್ಯನಿರ್ವಹಿಸುತ್ತಿದ್ದ ಎಲ್ಲೂರು ಕಾಶೀ ಸಂತಾನ ಟ್ರಸ್ಟ್ ನ ನೂತನ ಕಾರ್ಯಾಲಯದ ಆರಂಭ ಹಾಗೂ ವಿದ್ಯಾರ್ಥಿ ವೇತನ - ಸಹಾಯಧನ ವಿತರಣಾ ಕಾರ್ಯಕ್ರಮವು 7-11-2021 ರಂದು ಸಂಜೆ ನಾಲ್ಕು ಗಂಟೆಗೆ ಅದಮಾರಿನ ಆದರ್ಶ ಯುವಕ ಸಂಘದ ಸರ್ವೋದಯ ಸಮುದಾಯ ಭವನದಲ್ಲಿ ನೆರವೇರಲಿದೆ. ಪ್ರಸ್ತುತ ಅವಧಿಯಲ್ಲಿ ಒಂದು ಲಕ್ಷದ ಐವತ್ತು ಸಾವಿರ ರೂಪಾಯಿ ಮೊತ್ತವನ್ನು ವಿತರಿಸಲಾಗುವುದು. ಕಾಶೀ ಸಂತಾನ ಟ್ರಸ್ಟ್ ನಲ್ವತ್ತು ವರ್ಷಗಳಲ್ಲಿ ಪ್ರಾಥಮಿಕ,ಪ್ರೌಢ,ಪದವಿಪೂರ್ವ,ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಅರ್ಹತಾನುಸಾರ ವಿದ್ಯಾರ್ಥಿ ವೇತನ ವಿತರಿಸುತ್ತಿದೆ. ಸಹಾಯಧನವನ್ನು ಆರೋಗ್ಯ ಹಾಗೂ ಅಗತ್ಯವಿರುವ ಬಡವರಿಗೆ ಕೊಡುತ್ತಿದೆ. ಮುಂದಿನ ವರ್ಷದಿಂದ ಎರಡು ಲಕ್ಷ ರೂಪಾಯಿ ಮೊತ್ತವನ್ಮು ವಿತರಿಸಲಾಗುವುದು. ಅದಮಾರಿನ ಸರ್ವೋದಯ ಸಮುದಾಯ ಭವನದ ಪಾರ್ಶ್ವದಲ್ಲಿ ಕಾಶೀಸಂತಾನ ಟ್ರಸ್ಟ್ ನ ನೂತನ ಕಚೇರಿ ಇದೆ. ನಿವೃತ್ತ ಶಿಕ್ಷಕ ವೈ.ಎಂ.ಶ್ರೀಧರ ರಾವ್ ಕಾಶೀ ಸಂತಾನ ಟ್ರಸ್ಟ್ ನ ಸಂಸ್ಥಾಪಕರು. ಟ್ರಸ್ಟ್ ನ ಕಾರ್ಯಗಳನ್ಮು ನಿಷ್ಠೆ ಹಾಗೂ ಶ್ರದ್ಧೆಯಿಂದ ನಿರ್ವಹಿಸುತ್ತಾ ಬಂದವರು, ಇವರು ಉಪಸ್ಥಿತರಿದ್ದು ವಿದ್ಯಾರ್ಥಿ ವೇತನ ಹಾಗೂ ಸಹಾಯಧನ ವಿತರಿಸಲಿರುವರು. ಆದರ್ಶ ಸಂಘಗಳ ಒಕ್ಕೂಟದ ಅಧ್ಯಕ್ಷ ಎರ್ಮಾಳು ಉದಯ ಕೆ. ಶೆಟ್ಟಿ ,ಪುಣೆ ಉದ್ಯಮಿ ನಾರಾಯಣ ಕೆ.ಶೆಟ್ಟಿ ಹಾಗೂ ಸಮುದಾಯ ಭವನದ ಅಧ್ಯಕ್ಷ ಕೆ.ಎಲ್.ಕುಂಡಂತಾಯ ಅತಿಥಿಗಳಾಗಿರುವರು ಎಂದು ಟ್ರಸ್ಟ್ ನ ಅಧ್ಯಕ್ಷ ವಿಜಯ ಕುಮಾರ ವೈ ಹಾಗೂ ಕಾರ್ಯದರ್ಶಿ ಸುದರ್ಶನ ವೈ.ಎಸ್. ತಿಳಿಸಿದ್ದಾರೆ.
ನೀತಾ ಪ್ರಭು ತಂಡದಿಂದ ಅಪ್ಪ ಅಮ್ಮ ಅನಾಥಾಲಯದ ಆಶ್ರಮವಾಸಿಗಳೊಂದಿಗೆ ದೀಪಾವಳಿ ಆಚರಣೆ
Posted On: 06 Nov 2021, 07:09 PM
ಉಡುಪಿ : ನೀತಾ ಪ್ರಭು ಮತ್ತು ತಂಡದಿಂದ ದೀಪಾವಳಿಯ ಪ್ರಯುಕ್ತ ಬ್ರಹ್ಮಾವರದ ಗಿರಿಜಾ ಕೃಷ್ಣ ಪೂಜಾರಿ ಚಾರಿಟೇಬಲ್ ಟ್ರಸ್ಟ್ (ರಿ.) ಕೂರಾಡಿ ಇವರ ಅಪ್ಪ ಅಮ್ಮಅನಾಥಾಲಯ(ಉಚಿತ ಸೇವೆ)ಕ್ಕೆ ಭೇಟಿ ನೀಡಿದರು. ಈ ಸಂದರ್ಭ ಅನಾಥಾಲಯದ ಆಶ್ರಮವಾಸಿಗಳಿಗೆ ಹೊಸ ಬಟ್ಟೆ, ಸಿಹಿಯನ್ನು ವಿತರಿಸಿ ದೀಪಾವಳಿಯನ್ನು ಆಚರಿಸಲಾಯಿತು.
ಐಡಿಯಲ್ ಐಸ್ ಕ್ರೀಮ್ ಮಾಲಕ ಪ್ರಭಾಕರ್ ಕಾಮತ್ ವಿಧಿವಶ
Posted On: 06 Nov 2021, 01:15 PM
ಮಂಗಳೂರು : ಐಸ್ ಕ್ರೀಮ್ ಕಂಪನಿಗಳಲ್ಲಿ ಅತಿ ಹೆಚ್ಚು ಪ್ರಸಿದ್ಧ ಆದ ಕಂಪನಿ ಆಂದ್ರೆ ಐಡಿಯಲ್. ಇದರ ಸ್ಥಾಪಕರಾದ ಪ್ರಭಾಕರ್ ಕಾಮತ್ ಇವರು ವಿಧಿವಶರಾಗಿದ್ದಾರೆ. ಇವರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಕಡಂಬುವಿನಲ್ಲಿ ರಾರಾಜಿಸಿದ ಕೇಸರಿ ಗೂಡುದೀಪ
Posted On: 06 Nov 2021, 10:33 AM
ಕಾಪು : ಶಿರ್ವದ ಕಡಂಬುವಿನಲ್ಲಿ ಬೃಹತ್ ಗಾತ್ರದ ಗೂಡುದೀಪವೊಂದು ಸಾರ್ವಜನಿಕರ ಗಮನಸೆಳೆದಿದೆ. ಕಳೆದ ಎರಡು ವರ್ಷಗಳಿಂದ ದೀಪಾವಳಿಯ ಸಂದರ್ಭ ಗೂಡುದೀಪವನ್ನು ಅಳವಡಿಸಲಾಗುತ್ತಿದ್ದು ಸಂಪೂರ್ಣ ಕೇಸರಿ ಬಟ್ಟೆಯಿಂದಲೇ ಕಾರ್ಯಕರ್ತರೆ ತಯಾರಿಸಿದ್ದಾಗಿದೆ. ಇದರ ವಿಶೇಷತೆಯೇನೆಂದರೆ 26 ಅಡಿ ಎತ್ತರದಲ್ಲಿದ್ದು 10 ಫಿಟ್ ಗಿಂತ ಉದ್ದವಾಗಿದೆ.
ಪುಳಿಂದ ಮಹರ್ಷಿಗಳು ತಪಸ್ಸುಗೈದ ಮೋಕ್ಷಗಿರಿಯಲ್ಲಿ ನೂತನ ಘಟಕ ಉದ್ಘಾಟನೆ ಮತ್ತು ಸಾರ್ವಜನಿಕ ಗೋ ಪೂಜೆ ಕಾರ್ಯಕ್ರಮ
Posted On: 05 Nov 2021, 09:17 PM
ಕಾಪು : ವಿಶ್ವ ಹಿಂದೂ ಪರಿಷತ್ ಭಜರಂಗದಳ ಉಡುಪಿ ಜಿಲ್ಲೆ ಉಡುಪಿ ಗ್ರಾಮಾಂತರ ಪ್ರಖಂಡ ವತಿಯಿಂದ ಶ್ರೀ ಶ್ರೀ ಶ್ರೀ ಪುಳಿಂದ ಮಹರ್ಷಿಗಳು ತಪಸ್ಸುಗೈದ ಪುಣ್ಯ ಮಣ್ಣು ಕುಂತಳ ನಗರದ ಮೋಕ್ಷಗಿರಿ ಕ್ಷೇತ್ರದಲ್ಲಿ ನೂತನ ಘಟಕ ಉದ್ಘಾಟನೆ ಮತ್ತು ಸಾರ್ವಜನಿಕ ಗೋ ಪೂಜೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಕಾಪು ಬಿಜೆಪಿ ಕ್ಷೇತ್ರ ಅಧ್ಯಕ್ಷರಾದ ಶ್ರೀಕಾಂತ್ ನಾಯಕ್, ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿಗಳಾದ ಉದಯ ಕುಮಾರ್ ಶೆಟ್ಟಿ ಕಿದಿಯೂರು, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯರಾದ ಸುರೇಶ್ ಶೆಟ್ಟಿ ಗುರ್ಮೆ, ಪರಿವಾರ ಪ್ರಮುಖರಾದ ಸುನಿಲ್ ಕೆ ಆರ್, ಸ್ಥಳೀಯ ಪ್ರಮುಖರಾದ ಅಶೋಕ್ ಕುಮಾರ್ ಶೆಟ್ಟಿ, ಪ್ರಸಾದ್ ಶೆಟ್ಟಿ ಸ್ಥಳೀಯ ಪಂಚಾಯತ್ ಸದಸ್ಯರಾದ ಸಂತೋಷ್ ಶೆಟ್ಟಿ, ಪ್ರಜ್ವಲ್ ಹೆಗ್ಡೆ, ಆಶಾ, ಪದ್ಮನಾಭ ನಾಯಕ್ ಹಾಗೂ ವಿಶ್ವ ಹಿಂದೂ ಪರಿಷತ್ ಭಜರಂಗದಳದ ಪ್ರಮುಖರು ಉಪಸ್ಥಿತರಿದ್ದರು.
