Updated News From Kaup

ಶಿರಿಯಾರ : ರೋಟರಿ ಕ್ಲಬ್ ವತಿಯಿಂದ ಸೋಲಾರ್ ಲೈಟ್ ಸೆಟ್ ಕೊಡುಗೆ

Posted On: 13-09-2021 10:33AM

ಉಡುಪಿ : ರೋಟರಿ ಕ್ಲಬ್ ಸೈಬರಕಟ್ಟೆ (RI ಜಿಲ್ಲೆ 3182) ಮತ್ತು ರೋಟರಿ ಕ್ಲಬ್ ಸ್ಮಾರ್ಟ್ ಹೈದರ್ಬಾದ್ (RI Dist 3150) ಜಂಟಿ ಕ್ಲಬ್ ಅಂತರ ಜಿಲ್ಲಾ ಕಾರ್ಯಕ್ರಮದ ಅಡಿಯಲ್ಲಿ ರೋಟರಿ ಯೋಜನೆ "ರೋಶ್ನಿ" 3 ಬಲ್ಬ್ ನ ಸೋಲಾರ್ ಲೈಟ್ ಸೆಟ್ ನ್ನು ಪಡುಮುಂಡ್ ಶಿರಿಯಾರ ಗ್ರಾಮದಲ್ಲಿ ವೇದಾವತಿ ಎನ್ನುವ ಬಡ ಕುಟುಂಬಕ್ಕೆ ಹಸ್ತಾಂತರಿಸಲಾಯಿತು.

ರೋಟರಿ ಕ್ಲಬ್ ಸೈಬರಕಟ್ಟೆಯಿಂದ ಹೌರಾಲ್ ಶ್ರೀ ಮಹಾಲಿಂಗೇಶ್ವರ ದೇವಳದ ಬೀದಿಗೆ ಸೌರವಿದ್ಯುತ್ ದಾರಿ ದೀಪ ಅಳವಡಿಕೆ

Posted On: 12-09-2021 08:13PM

ಉಡುಪಿ : ರೋಟರಿ ಕ್ಲಬ್ ಸೈಬರಕಟ್ಟೆಯಿಂದ ಹೌರಾಲ್ ಶ್ರೀ ಮಹಾಲಿಂಗೇಶ್ವರ ದೇವಳದ ಬೀದಿ ಯಲ್ಲಿ ರಾತ್ರಿ ಭಕ್ತರಿಗೆ ಬೆಳಕಿನ ಅನುಕೂಲತೆ ಮನಗಂಡು ಸೌರವಿದ್ಯುತ್ ದಾರಿ ದೀಪ ಅಳವಡಿಸಲಾಯಿತು.

ಇನ್ನಂಜೆ ಯುವಕ ಮಂಡಲದ ನೂತನ ಅಧ್ಯಕ್ಷರಾಗಿ ಉಮೇಶ್ ಆಚಾರ್ಯ

Posted On: 12-09-2021 10:26AM

ಕಾಪು : ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಇನ್ನಂಜೆ ಯುವಕ ಮಂಡಲ (ರಿ.) ಇನ್ನಂಜೆಯ ನೂತನ ಅಧ್ಯಕ್ಷರಾಗಿ ಉಮೇಶ್ ಆಚಾರ್ಯ ಮತ್ತು ಕಾರ್ಯದರ್ಶಿಯಾಗಿ ಹರೀಶ್ ಪೂಜಾರಿ ಆಯ್ಕೆಯಾಗಿದ್ದಾರೆ.

ಶಿರ್ವ ಸಂತ ಮೇರಿ ಮಹಾವಿದ್ಯಾಲಯ ಫಿಟ್ ಇಂಡಿಯಾ ಫ್ರೀಡಂ ಓಟ - ಅಭಿಯಾನ

Posted On: 11-09-2021 12:27PM

ಶಿರ್ವ: ಸದೃಢ ಭಾರತ ಕಾರ್ಯಕ್ರಮವು ದೇಶದಲ್ಲಿ ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ದೈಹಿಕ ಚಟುವಟಿಕೆ, ಕ್ರೀಡೆಯಲ್ಲಿ ತೊಡಗಿಸಿಕೊಂಡು ಆರೋಗ್ಯವಂತರಾಗಬೇಕು ಎಂಬುದು ಈ ಅಭಿಯಾನದ ಮೂಲ ಉದ್ದೇಶ. ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸಲು, ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ವತಿಯಿಂದ ಫಿಟ್ ಇಂಡಿಯಾ ಫ್ರೀಡಮ್ ರನ್ 2.0 ರ ಅಭಿಯಾನಕ್ಕೆ ರಾಷ್ಟ್ರವ್ಯಾಪಿ ಚಾಲನೆ ನೀಡಿದ್ದಾರೆ.

ಸೆಪ್ಟೆಂಬರ್ 12 : ಇನ್ನಂಜೆ ಯುವಕ ಮಂಡಲದ ನೂತನ ಪದಾಧಿಕಾರಿಗಳ ಪದ ಪ್ರಧಾನ

Posted On: 11-09-2021 12:16PM

ಕಾಪು : ಇನ್ನಂಜೆ ಯುವಕ ಮಂಡಲದ 2021-22ನೇ ಸಾಲಿನ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭವು ಇನ್ನಂಜೆಯ ದಾಸ ಭವನದಲ್ಲಿ ಆದಿತ್ಯವಾರ (ಸೆಪ್ಟೆಂಬರ್ 12) ಬೆಳಿಗ್ಗೆ 10:30ಕ್ಕೆ ನಡೆಯಲಿದೆ.

ಪಡುಬಿದ್ರಿ ರೋಟರಿ ಕ್ಲಬ್ ವತಿಯಿಂದ ಗಣೇಶ ಚತುರ್ಥಿ ಆಚರಣೆ

Posted On: 11-09-2021 10:11AM

ಪಡುಬಿದ್ರಿ : ಧರ್ಮ ಮೀರಿ ಸೌಹಾರ್ದದತೆಯಲ್ಲಿ ಗಣೇಶ ಚತುರ್ಥಿ ಆಚರಣೆ ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಅಂತಹ ಕಾರ್ಯವನ್ನು ಪಡುಬಿದ್ರಿ ರೋಟರಿ ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯ. ಮಾನವೀಯತೆ ಹಾಗೂ ಮನುಷ್ಯತ್ವದ ಸೇವೆಯಲ್ಲಿ ಭಗವಂತನನ್ನು ಕಾಣಬಹುದು. ಶ್ರದ್ಧೆ ಮತ್ತು ಪ್ರಾಮಾಣಿಕವಾಗಿ ಮಾಡಿದ‌ ಕಾರ್ಯ ನಿರ್ವಿಘ್ನ ವಾಗಿ ನಡೆಯುವುದು ಎಂದು ರಾಜ ಪುರೋಹಿತರಾದ ನಂದ‌ ಕುಮಾರ್ ರವರು ಹೇಳಿದರು. ಅವರು ಪಡುಬಿದ್ರಿ ರೋಟರಿ ಕ್ಲಬ್ ಇದರ ವತಿಯಿಂದ ರೋಟರಿ ಕಛೇರಿಯಲ್ಲಿ ನಡೆದ ಗಣೇಶ ಚತುರ್ಥಿ ಆಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಇನ್ನಂಜೆ : ಕಾಪು, ಶಂಕರಪುರ ಸಂಪರ್ಕ ರಸ್ತೆಯ ಸುಗಮ ಸಂಚಾರಕ್ಕೆ ಪೀನ ದರ್ಪಣ ಅಳವಡಿಕೆ

Posted On: 10-09-2021 07:46PM

ಶ್ರೀ ವಿಷ್ಣು ಫ್ರೆಂಡ್ಸ್ ಮಡುಂಬು ಅಜಿಲಕಾಡು ಇವರ ವತಿಯಿಂದ ಮಡುಂಬು ಜಂಕ್ಷನ್ ನಲ್ಲಿ ಕಾಪು - ಶಂಕರಪುರ - ಬಂಟಕಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ತಿರುವಿನಲ್ಲಿ ಸುಗಮ ಸಂಚಾರಕ್ಕೆ ಪೀನ ದರ್ಪಣ ಅಳವಡಿಕೆ ಮಾಡಿ ಲೋಕಾರ್ಪಣೆ ಮಾಡಲಾಯಿತು.

ಅದಮಾರು : ಪ್ರಾಂಶುಪಾಲ ಎ.ಎಸ್. ಭಟ್ ನೆನಪಿನಲ್ಲಿ ಗಿಡ ವಿತರಣೆ

Posted On: 10-09-2021 04:52PM

ಕಾಪು, ಸೆ.10 : ಇಲ್ಲಿಯ ಆದರ್ಶ ಸಂಘಗಳ ಒಕ್ಕೂಟವು ಆದರ್ಶ ಯುವಕ ಸಂಘದ ಸ್ಥಾಪಕ, ನಿವೃತ್ತ ಪ್ರಾಂಶುಪಾಲ ,ಶಿಕ್ಷಣ - ಶಿಷ್ಯ ಪ್ರೀತಿಯ ಕೀರ್ತಿಶೇಷ ಎ.ಎಸ್ .ಭಟ್ ಅವರ 101 ನೇ ಜನ್ಮದಿನಾಚರಣೆಯ ಪ್ರಯುಕ್ತ 101 ಸಂಖ್ಯೆಯ ವಿವಿಧ ಹೂ,ಹಣ್ಣು,ಕಂಗು ,ತೆಂಗು,ಬಾಳೆ ಗಿಡಗಳನ್ನು ವಿತರಿಸಲಾಯಿತು.

ಕಾಪುವಿನ ಹೂವಿನ ಅಂಗಡಿಯ ಹಿಂಗಾರದಲ್ಲಿ ಪ್ರಕೃತಿದತ್ತವಾಗಿ ಮೂಡಿದ ಗಣೇಶ

Posted On: 09-09-2021 11:55PM

ಕಾಪು : ಚೌತಿ ಹಬ್ಬಕ್ಕೂ ಸ್ವಲ್ಪ ದಿನ ಮುಂಚಿತವಾಗಿಯೇ ಅನೇಕ ಕಲಾವಿದರು ತಮ್ಮ ಕೈಚಳಕದಿಂದ ಗಣೇಶನ ಮೂರ್ತಿ ತಯಾರಿಸುವುದು ರೂಢಿಯಾಗಿದೆ, ಬೇಳೆ ಕಾಳು, ದವಸ ಧಾನ್ಯಗಳಲ್ಲಿ ಹಾಗೂ ತರಕಾರಿ, ಹಣ್ಣು ಹಂಪಲು ಸೇರಿದಂತೆ ಇತರೇ ಫಲವಸ್ತುಗಳಲ್ಲಿಯೂ ಗಣೇಶನ ಆಕೃತಿಗೆ ರೂಪು ಕೊಡುವ ಕೆಲಸವನ್ನು ಮಾಡುತ್ತಾರೆ. ಆದರೆ ಕಾಪುವಿನ ಶ್ರೀ ಲಕ್ಷ್ಮೀ ಜನಾರ್ದನ ಫ್ಲವರ್ ಸ್ಟಾಲ್ ನಲ್ಲಿ ಹಿಂಗಾರದಲ್ಲಿ ಪ್ರಕೃತಿದತ್ತವಾಗಿಯೇ ಗಣೇಶನ ಮೂರ್ತಿ ಮೂಡಿ ಬಂದಿದೆ.

ಪಣೋಲಿಬೈಲು ಕಲ್ಲುರ್ಟಿ ದೈವಸ್ಥಾನದಲ್ಲಿ ಒಂದನೇ ಮೂಲ್ಯಣ್ಣ ಅನುವಂಶೀಯ ಅರ್ಚಕರಿಗೆ ಸ್ವರ್ಣ ಬಳೆ ಸಮರ್ಪಣೆ

Posted On: 09-09-2021 05:51PM

ಮಂಗಳೂರು : ಪಣೋಲಿಬೈಲು ಕಲ್ಲುರ್ಟಿ ದೈವಸ್ಥಾನದಲ್ಲಿ ಒಂದನೇ ಮೂಲ್ಯಣ್ಣ ಅನುವಂಶೀಯ ಅರ್ಚಕರಿಗೆ ಸ್ವರ್ಣ ಬಳೆ ಸಮರ್ಪಣೆಯು ಸಂಪ್ರದಾಯದಂತೆ ಪಣೋಲಿಬೈಲ್ ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಅನುವಂಶಿಕ ಪ್ರಧಾನ ಅರ್ಚಕರಾಗಿದ್ದ ದಿ. ಗುಡ್ಡ ಮೂಲ್ಯ ಯಾನೆ ಬಾಬು ಮೂಲ್ಯರ ಉತ್ತರಾಧಿಕಾರಿಯಾದ ದೈವಸ್ಥಾನದ ಸಂಪ್ರದಾಯದಂತೆ ಒಂದನೇ ಅರ್ಚಕ ಗುಡ್ಡ ಮೂಲ್ಯ ಯಾನೆ ವಾಸುದೇವ ಮೂಲ್ಯರಿಗೆ, ಶ್ರೀ ಧಾಮ‌ ಮಾಣಿಲದ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಪೂಜ್ಯ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಎರಡನೆ ಅರ್ಚಕರಾದ ಶ್ರೀ ನಾರಾಯಣ ಮೂಲ್ಯ, ಮೂರನೆ ಅರ್ಚಕ ಮೋನಪ್ಪ ಮೂಲ್ಯ, ಹಾಗೂ ಕುಟುಂಬದ ಹಿರಿಯ ಸದಸ್ಯರಾದ ಪೂವಪ್ಪ ಮೂಲ್ಯ ಕುಂಡಡ್ಕ, ಬೂಬ ಸಾಲ್ಯಾನ್ ಮತ್ತು ಕುಟುಂಬದ ಸದಸ್ಯರು ಹಾಗೂ ಭಂಡಾರದ ಮನೆಯ ನವೀನ್ ಕುಮಾರ್, ಉಮೇಶ್ ಕುಲಾಲ್ ಮಂಚಿ, ಮತ್ತು ಗ್ರಾಮಸ್ಥರು, ಭಕ್ತಾಧಿಗಳ ಸಮ್ಮುಖದಲ್ಲಿ ದೈವ ಕಲ್ಲುರ್ಟಿಯ ಮುಂಭಾಗದಲ್ಲಿ, ಕಟ್ಟು ಕಟ್ಟಳೆಯಂತೆ ದೈವದ ಪ್ರಧಾನ ಅರ್ಚಕರ ಸ್ವರ್ಣ ಬಳೆ ತೊಡಿಸಿ ದೈವ ಚಾಕರಿಗೆ ಜವಾಬ್ದಾರಿ ನೀಡಲಾಯಿತು.