Updated News From Kaup
ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಅಗಲಿದ ಸದಸ್ಯರಿಗೆ ಶ್ರದ್ಧಾಂಜಲಿ ಅರ್ಪಣೆ

Posted On: 06-07-2021 08:42PM
ಉಡುಪಿ : ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಇತ್ತೀಚೆಗೆ ದಿವಂಗತರಾದ ಕ್ಲಬ್ಬಿನ ಉಪಾಧ್ಯಕ್ಷ ಸಾಲ್ವಡೊರ್ ನೊರೊನ್ಹಾ ಹಾಗೂ ಕ್ಲಬ್ಬಿನ ಸದಸ್ಯರಾಗಿದ್ದ ಜಯರಾಜ್ ಶೆಟ್ಟಿ ಅವರ ಆತ್ಮಕ್ಕೆ ಶಾಂತಿ ಕೋರಿ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು.

ಕ್ಲಬ್ಬಿನ ಒಳಾಂಗಣದಲ್ಲಿ ಆಯೋಜಿಸಿದ ಈ ಸಂತಾಪ ಸಭೆಯಲ್ಲಿ ಪ್ರೊಫೆಸರ್ ಕೆ. ನಾರಾಯಣನ್, ಜಿ ಬಾಲಕೃಷ್ಣ ಶೆಟ್ಟಿ , ಬಿರ್ತಿ ರಾಜೇಶ್ ಶೆಟ್ಟಿ ಹಾಗೂ ಚಂದ್ರಶೇಖರ ಶೆಟ್ಟಿಯವರು ಅಗಲಿದ ಮಹನೀಯರನ್ನು ಹಾಗೂ ಅವರ ಸೇವೆಯನ್ನು ನೆನಪಿಸಿಕೊಂಡು ಅವರಿಗೆ ಶ್ರದ್ಧಾಂಜಲಿ ಕೋರಿದರು. ಇದೆ ಸಂದರ್ಭದಲ್ಲಿ ಮಾತನಾಡಿದ, ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರಾದ ಎಂ ಚಂದ್ರಶೇಖರ್ ಹೆಗ್ಡೆಯವರು, ಅವರ ಹಾಗೂ ನೊರೊನ್ಹಾರವರ 50 ವರುಷಗಳ ಸ್ನೇಹವನ್ನು ನೆನಪಿಸಿಕೊಂಡು ಅವರ ಅನುಭವಗಳನ್ನು ಹಂಚಿಕೊಂಡರು. ಉಪಾಧ್ಯಕ್ಷರಾಗಿದ್ದ ನೊರೊನ್ಹಾರವರ ಸರಳ, ಸಜ್ಜನ ಹಾಗೂ ಪರೋಪಕಾರಿ ವ್ಯಕ್ತಿತ್ವವದ ಹಲವು ಉಧಾರಣೆಗಳನ್ನು ನೆನಪಿಸಿ ಈ ಅಜಾತಶತ್ರುವಿಗೆ ಶ್ರದ್ಧಾಂಜಲಿ ಕೋರಿದರು.

ಸಾಲ್ವಡೊರ್ ನೊರೊನ್ಹಾರವರು, ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ಗೆ ನೀಡಿದ ಸೇವೆಯನ್ನು ಗುರುತಿಸಿ , ಕೆಲವೇ ದಿನಗಳಲ್ಲಿ ಕ್ಲಬ್ಬಿನ ಆವರಣದಲ್ಲಿ ಉದ್ಘಾಟನೆ ಹೊಂದಲಿರುವ ಹೊಸ ಈಜು ಕೊಳಕ್ಕೆ 'ಸಾಲ್ವಡೊರ್ ನೊರೊನ್ಹಾ'ರವರ ಸ್ಮಾರಕವಾಗಿ ನಾಮಕರಿಸುವ ಪ್ರಸ್ತಾಪ ಮಂಡಿಸಲಾಯಿತು. ನೆರೆದಿರುವ ಸರ್ವ ಸದಸ್ಯರು ಈ ಸಲಹೆಯನ್ನು ಸ್ವಾಗತಿಸಿ , ಸರ್ವಾನುಮತಿಯಿಂದ ಒಪ್ಪಿಗೆ ನೀಡಿದರು. 1976 ರಿಂದ 2014 ವರೆಗೆ ಸುಮಾರು ನಾಲ್ಕು ದಶಕಗಳ ಕಾಲ ಎಸ ಎಂ ಎಸ ಕಾಲೇಜಿನಲ್ಲಿ ಸೇವೆ ನೀಡಿದ ನೊರೊನ್ಹಾರವರು ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ಸಂಸ್ಥೆಯ ಸ್ಥಾಪಕ ಸದಸ್ಯರಲ್ಲಿ ಒಬ್ಬರು. ಕಳೆದ ಮೇ 19ರಂದು ಕೊರೊನ ರೋಗದಿಂದ ಉಂಟಾಗಿರುವ ಆರೋಗ್ಯ ಸಮಸ್ಯೆಗಳಿಂದ ಅವರು ನಿಧನ ಹೊಂದಿದರು.
ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ಬಿನ ಕಾರ್ಯದರ್ಶಿಗಳಾಗಿದ್ದ ಗ್ರೆಗೊರಿ ಡಿಸಿಲ್ವರವರು ಮಾತನಾಡಿ ಅಗಲಿದ ಸದಸ್ಯರ ಆತ್ಮಕ್ಕೆ ಶಾಂತಿ ಕೋರಿದರು ಹಾಗೂ ಹಾಜರಿದ್ದ ಎಲ್ಲರಿಗೆ ಧನ್ಯವಾದ ಅರ್ಪಣೆ ಮಾಡಿದರು. ಎರಡು ನಿಮಿಷಗಳ ಮೌನ ಪ್ರಾರ್ಥನೆಯೊಂದಿಗೆ ಸಭೆಯು ಮುಕ್ತಾಯಗೊಂಡಿತು.
ಬಂಟಕಲ್ಲು, ಹೇರೂರು : ವನಮಹೋತ್ಸವ ಮತ್ತು ನೇಜಿ ವಿತರಣಾ ಸಮಾರಂಭ

Posted On: 06-07-2021 08:35PM
ಕಾಪು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ 92 ಹೇರೂರು ಒಕ್ಕೂಟ, ಶ್ರೀ ಗುರು ರಾಘವೇಂದ್ರ ಸಮಾಜ ಸೇವಾ ಮಂಡಳಿ 92 ಹೇರೂರು, ಲಯನ್ಸ್ ಕ್ಲಬ್ ಬಿಸಿರೋಡ್ ಬಂಟಕಲ್ಲು, ನಾಗರಿಕ ಸೇವಾ ಸಮಿತಿ ಬಂಟಕಲ್ಲು ಇವರ ಆಶ್ರಯದಲ್ಲಿ ಶ್ರೀ ಗುರು ರಾಘವೇಂದ್ರ ಸಮಾಜ ಸೇವಾ ಮಂಡಳಿಯ ಸಭಾಂಗಣದಲ್ಲಿ ವನಮಹೋತ್ಸವ ಮತ್ತು ನೇಜಿ ವಿತರಣಾ ಸಮಾರಂಭ ನಡೆಯಿತು.

ಹೇರೂರಿನ ಹಿರಿಯ ಕೃಷಿಕರಾದ ವಿಜಯ ಶೆಟ್ಟಿ ಸಾನದ ಮನೆ ಇವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಬಂಟಕಲ್ಲು ನಾಗರಿಕ ಸೇವಾ ಸಮಿತಿಯ ಅಧ್ಯಕ್ಷರಾದ ಕೆ ಆರ್ ಪಾಟ್ಕರ್ ರವರು ಅಧ್ಯಕ್ಷತೆ ವಹಿಸಿದ್ದರು, ತೆನೆ ಕಟ್ಟುವ ಹಬ್ಬದಂದು ತೆನೆ ಕಟ್ಟುವುದಕ್ಕಾಗಿ ತಮ್ಮ ಮನೆಯಲ್ಲಿಯೇ ಭತ್ತದ ಸಸಿಗಳನ್ನು ನಾಟಿ ಮಾಡಲು ಎಲ್ಲರಿಗೂ ಭತ್ತದ ಸಸಿ /ನೇಜಿ/ವಿತರಿಸುತ್ತಿರುವ ಈ ಒಂದು ವಿಶೇಷ ಕಾರ್ಯಕ್ರಮ ಇದಾಗಿದ್ದು ಇಂತಹ ಒಳ್ಳೆಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಕ್ಕಾಗಿ ಎಲ್ಲಾ ಸಂಸ್ಥೆಗಳಿಗೆ ಕೆಆರ್ ಪಾಟ್ಕರ್ ಮೆಚ್ಚುಗೆ ವ್ಯಕ್ತಪಡಿಸಿದರು. ಒಕ್ಕೂಟದ ಅಧ್ಯಕ್ಷರಾದ ದಿನೇಶ್ ದೇವಾಡಿಗ ರವರು ವನಮಹೋತ್ಸವದ ಬಗ್ಗೆ ಮಾಹಿತಿ ನೀಡಿ ಇಂದು ನೇಜಿ ವಿತರಿಸಲು ಸಹಕಾರ ನೀಡಿದ ಕೃಷಿಕರಾದ ವಿಜಯ ಶೆಟ್ಟಿ ಇವರಿಗೆ ಕೃತಜ್ಞತೆ ಸಲ್ಲಿಸಿದರು. 35 ವರ್ಷಗಳಿಂದ ಸಮಾಜಸೇವೆ ಯೊಂದಿಗೆ ಕೃಷಿಯಲ್ಲಿ ತೊಡಗಿಕೊಂಡಿರುವ ವಿಜಯ ಶೆಟ್ಟಿ ಸಾನದ ಮನೆ ಇವರನ್ನು ಎಲ್ಲಾ ಸಂಘಸಂಸ್ಥೆಗಳ ಪರವಾಗಿ ಸನ್ಮಾನಿಸಲಾಯಿತು.
ಶ್ರೀ ಗುರು ರಾಘವೇಂದ್ರ ಸಮಾಜ ಸೇವಾ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ನಾರಾಯಣ ಪೂಜಾರಿ ಬಂಟಕಲ್ಲು, ಬಿಸಿರೋಡು ಲಯನ್ಸ್ ಕ್ಲಬ್ ಅಧ್ಯಕ್ಷರಾದ ವಿಜಯ ದೀರಾಜ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ವಸಂತಿ ಆಚಾರ್ಯ, ಶ್ರೀಧರ್ ಕಾಮತ್, ಅನಿಲ್ ಶೆಟ್ಟಿ, ಮಂಜುಳಾ ಆಚಾರ್ಯ, ಮಹಿಳಾ ಭಜನಾ ಮಂಡಳಿ ಅಧ್ಯಕ್ಷರಾದ ಶಶಿಕಲಾ ದೇವಾಡಿಗ, ಕಾರ್ಯದರ್ಶಿ ಪವಿತ್ರ ರಾವ್, ಉಮೇಶ್ ರಾವ್, ಶಂಕರ ದೇವಾಡಿಗ, ಅಂಗನವಾಡಿ ಟೀಚರ್ ಬಬಿತಾ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು. ಸುಕನ್ಯಾ ಜೋಗಿ ಪ್ರಾರ್ಥಿಸಿ, ವಸಂತಿ ಆಚಾರ್ಯ ಸ್ವಾಗತಿಸಿ, ಮಾಲತಿ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ಪೂರ್ಣಿಮಾ ಆಚಾರ್ಯ ವಂದಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆಯ ಕಾಪು ಒಕ್ಕೂಟದ ಸದಸ್ಯರಿಗೆ ಲಾಭಾಂಶ ವಿತರಣೆ

Posted On: 06-07-2021 08:31PM
ಕಾಪು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆ ಕಾಪು, ಕಾಪು ಒಕ್ಕೂಟ, ಕಾಪು ಎ ಒಕ್ಕೂಟ ಹಾಗು ಕಾಪು ಪಡು ಒಕ್ಕೂಟದ ಸ್ವಸಹಾಯ ಸಂಘದ ಸದಸ್ಯರಿಗೆ ಲಾಭಾಂಶ ನೀಡುವ ಕಾರ್ಯಕ್ರಮವನ್ನು ವೆಂಕಟೇಶ್ ನಾವುಡ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಹಾದೇವಿ ಶಾಲೆಯ ಮುಖ್ಯೋಪಾಧ್ಯಾಯರು, ಪುರಸಭೆಯ ಮಾಜಿ ಅಧ್ಯಕ್ಷ ಅನಿಲ್ ಕುಮಾರ್, ಸುಲೋಚನ ಬಂಗೇರ, ಕಾಪು ಒಕ್ಕೂಟದ ಮೇಲ್ವಿಚಾರಕರಾದ ಮಮತಾ, ಒಕ್ಕೂಟದ ಉಪಾಧ್ಯಕ್ಷರಾದ ರಮಾ ಶೆಟ್ಟಿ, ಪಡು ಒಕ್ಕೂಟದ ಕೋಶಾಧಿಕಾರಿ ಕೃಷ್ಣ ಆಚಾರ್ಯ ಉಪಸ್ಥಿತರಿದ್ದರು.
92ನೇ ಹೇರೂರು : ಕಂಡಡೊಂಜಿ ದಿನ ಕಾರ್ಯಕ್ರಮ

Posted On: 04-07-2021 03:36PM
ಕಾಪು : ವಿಕಾಸ ಸೇವಾ ಸಮಿತಿ ಮತ್ತು ಮಹಿಳಾ ಬಳಗ 92ನೇ ಹೇರೂರು ಹಾಗೂ ಶ್ರೀ ವಿಶ್ವಬ್ರಾಹ್ಮಣ ಯುವ ಸಂಗಮ (ರಿ.) ಮತ್ತು ಮಹಿಳಾ ಬಳಗ, ಶಿರ್ವ ಇದರ ಸಂಯುಕ್ತ ಆಶ್ರಯದಲ್ಲಿ ಕಂಡಡೊಂಜಿ ದಿನ ಕಾರ್ಯಕ್ರಮ 92ನೇ ಹೇರೂರು ಶ್ರೀ ಬಡ್ದು ಶೆಟ್ರ ಕೃಷಿ ಭೂಮಿಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಹೇರೂರುನ ಹಿರಿಯ ಕೃಷಿಕರಾದ ಶ್ರೀ ಬಡ್ದು ಶೆಟ್ಟಿ, ಹಿರಿಯ ನಾಟಿ ವೃತ್ತಿಯನ್ನು ಮಾಡುತಿದ್ದ ಶ್ರೀಮತಿ ಜಯಂತಿ ದಾಮೋದರ ಆಚಾರ್ಯ, ಕಲ್ಲುಗುಡ್ಡೆ ಇವರನ್ನು ಅಭಿನಂದಿಸಲಾಯಿತು.

ಕೃಷಿಕರಾದ ಶ್ರೀ ವಿಜಯ ಶೆಟ್ಟಿ, ಶ್ರೀಮತಿ ರೇಣುಕಾ ಶೆಟ್ಟಿ ಮಾರ್ಗದರ್ಶನ ನೀಡಿದರು. ಯುವ ಸಂಗಮದ ಅಧ್ಯಕ್ಷ ಉಮೇಶ್ ಆಚಾರ್ಯ ಸಂಧರ್ಬೋಚಿತವಾಗಿ ಮಾತನಾಡಿದರು. ಮಹಿಳಾ ಬಳಗದ ಅಧ್ಯಕ್ಷೆ ಸುಮತಿ ಆಚಾರ್ಯ.
ವಿಕಾಸ ಸೇವಾ ಸಮಿತಿ ಮಹಿಳಾ ಬಳಗದ ಅಧ್ಯಕ್ಷೆ ಶ್ರೀಮತಿ ವಿಜಯ ವಿಘ್ನೇಶ್ ಆಚಾರ್ಯ, ಹೇರೂರು ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಮಂಜುಳಾ ಗಣೇಶ್ ಆಚಾರ್ಯ ಉಪಸ್ಥಿತರಿದ್ದರು. ವಿಕಾಸ ಸೇವಾ ಸಮಿತಿ ಅಧ್ಯಕ್ಷ ಮಾಧವ ಆಚಾರ್ಯ ಕಾರ್ಯಕ್ರಮ ಸಂಘಟಿಸಿದ್ದರು.
ಕಾಪು : ಕಲ್ಕುಡ ದೈವಸ್ಥಾನದ ವಠಾರದಲ್ಲಿ ವನಮಹೋತ್ಸವ

Posted On: 04-07-2021 03:27PM
ಕಾಪು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಪು ಒಕ್ಕೂಟ ಮತ್ತು ಶ್ರೀ ದೂಮಾವತಿ ಸ್ವಸಹಾಯ ಸಂಘ ಕಾಪು ಇದರ ಜಂಟಿ ಸಹಯೋಗದಲ್ಲಿ ಶ್ರೀ ಕಲ್ಕುಡ ದೈವಸ್ಥಾನದ ವಠಾರದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಒಕ್ಕೂಟದ ಮೇಲ್ವಿಚಾರಕರಾದ ಶ್ರೀಮತಿ ಮಮತಾ, ಕಾಪು ಪುರಸಭಾ ಮಾಜಿ ಅಧ್ಯಕ್ಷ ಅನಿಲ್ ಕುಮಾರ್, ಒಕ್ಕೂಟದ ಸೇವಾ ಪ್ರತಿನಿಧಿ ಪ್ರೇಮ ಆರ್. ಕೋಟಿಯನ್, ಸುಮನಾ, ಲಕ್ಷ್ಮಿಕಾಂತ್ ದೇವಾಡಿಗ ಒಕ್ಕೂಟದ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.
ಕುಂದಾಪುರ : ಶ್ರೀ ದೇವಿ ಕಂಗನ್ ಸ್ಟೋರ್ ಉದ್ಘಾಟನೆ

Posted On: 03-07-2021 11:35AM
ಉಡುಪಿ : ಒಂದೇ ಸೂರಿನಡಿಯಲ್ಲಿ ಎಲ್ಲಾ ಮಹಿಳೆಯರ ಶೃಂಗಾರದ ಅಲಂಕಾರಿಕ ವಸ್ತುಗಳು ಲಭ್ಯ. ಹೊಸತನದಿಂದ ಕೂಡಿದ ಬಳೆ! ಮೇಕಪ್ ಸಾಧನಗಳು! ಮುದ್ದು ಮಕ್ಕಳಿಗೆ ಬೇಕಾಗುವ ಅಲಂಕಾರಿಕ ವಸ್ತುಗಳು! ನೈಲ್ ಪಾಲೀಶ್! ವಿವಿಧ ಬಗೆಯ ಸರಗಳು! ಶ್ರೀ ದೇವಿ ಕಂಗನ್ ಸ್ಟೋರ್ ನಲ್ಲಿ ಲಭ್ಯ.

ಶ್ರೀ ದೇವಿ ಕಂಗನ್ ಸ್ಟೋರ್ ಇದರ ಉದ್ಘಾಟನೆಯನ್ನು ಶರಶ್ಚಂದ್ರ ಶೆಟ್ಟಿ ನೆರವೇರಿಸಿದರು. ಕುಂದಾಪುರ ಪುರಸಭೆ ಸದಸ್ಯರಾದ ಪ್ರಭಾಕರ ವಿ, ಲಕ್ಷೀ ಬಳೆಗಾರ ದೀಪ ಬೆಳಗಿಸಿದರು. ಉದ್ಯಮಿಗಳಾದ ರತ್ನಾಕರ ಶೆಟ್ಟಿ, ಸಂತೋಷ್ ಪಟೇಲ್ , ಮಾಲಕರಾದ ಗಣೇಶ್ ಜೋಗಿ, ಸತೀಶ್ ಜೋಗಿ ಮತ್ತು ಮಹಾಬಲ ಜೋಗಿ, ಪ್ರಸಾದ್ ಜೋಗಿ, ಸಂಜೀವ ಹಲ್ನಾಡು, ಬಾಬು ಶೆಟ್ಟಿ ಉಪಸ್ಥಿತರಿದ್ದರು.
ಕೊಪ್ಪರಿಗೆ : ತುಳು ಪದಗಳ ಅರ್ಥ, ಪದಗಳನ್ನು ಸೇರಿಸಬಹುದಾದ ಆನ್ ಲೈನ್ ತುಲು ಡಿಕ್ಷನರಿ

Posted On: 03-07-2021 09:30AM
ಕಾಪು : ಒಂದು ಭಾಷೆಯ ಉಳಿಯುವಿಕೆಗೆ ಅದರ ಜ್ಞಾನ ಅತೀ ಅಗತ್ಯ. ಬೇರೆ ಭಾಷೆಗಳಿಂದ ಪದಗಳನ್ನು ಎರವಲು ಪಡೆಯುವುದರ ಜೊತೆಗೆ ಸ್ವಭಾಷೆಯ ಮೂಲ ಪದಗಳನ್ನು ಉಳಿಕೊಳ್ಳುವುದು ಕೂಡ ಅವಶ್ಯಕ. ಹಿಂದೆ ಅಂತರ್ಜಾಲ, ಸಾರಿಗೆ ಸಂಪರ್ಕವಿಲ್ಲದ ಕಾಲದಲ್ಲಿ ಮ್ಯಾನರ್ ಅವರು ತುಳು ನಿಘಂಟುವಿನ ರಚನೆಗೆ ಕಷ್ಟಪಟ್ಟು ಪ್ರತೀ ಮನೆ ಮನೆಗೆ ತೆರಳಿ ನಿಘಂಟನ್ನು ರಚಿಸಿರುತ್ತಾರೆ.
ಆದರೆ ಅಂದಿನಿಂದ ಇಂದಿನವರೆಗೆ 140 ವರ್ಷಗಳಲ್ಲಿ ಹೊಸ ತಂತ್ರಜ್ಞಾನದ ಉಗಮವಾದರೂ ತುಳು ಪದಕೋಶದ ಬೆಳವಣಿಗೆ ಕುಂಟಿತವಾಗಿದೆ. ಇದನ್ನು ಸರಿಪಡಿಸಲು "ಕೊಪ್ಪರಿಗೆ -ಆನ್ ಲೈನ್ ತುಲು ಡಿಕ್ಷನರಿ"ಯನ್ನು ಜೈತುಲುನಾಡ್ ಸಂಘಟನೆಯ ಮುಖೇನ ಸಿದ್ಧಪಡಿಸಿದ್ದೇವೆ.
ಇದರ ವಿಶೇಷವೇನೆಂದರೆ ಜನರೇ ತಮಗೆ ತಿಳಿದಿರುವ ಪದಗಳನ್ನು ಸೇರಿಸಬಹುದಾಗಿದೆ. ಪದಗಳ ಅರ್ಥಗಳನ್ನು ಪಂಚದ್ರಾವಿಡ ಭಾಷೆಗಳಲ್ಲಿ ತಿಳಿಯುವುದರ ಜೊತೆಗೆ ಅವುಗಳ ಭಾವಚಿತ್ರ, ಉಚ್ಚಾರ, ವೈದ್ಯಕೀಯ ಮಹತ್ವ ಹಾಗೂ ಉಪಯೋಗಗಳ ಕುರಿತು ಮಾಹಿತಿ ಲಭ್ಯವಿರುತ್ತದೆ. ಡಿಕ್ಷನರಿ ಕಾರ್ಯಕ್ಕೆ ಧನಸಹಾಯಗೈದು, ಸಲಹೆ ಸೂಚನೆ ನೀಡಿ ಸಹಕರಿಸಿದ ಎಲ್ಲಾ ಸಂಘಟನೆಯ ಸದಸ್ಯರು,ಪ್ರಮುಖರು,ಭಾಷಾಭಿಮಾನಿಗಳು, ಡಿಕ್ಷನರಿ ಅಡ್ಮಿನ್ ತಂಡ ಹಾಗೂ ಡಿಕ್ಷನರಿ ಡೇಟಾ ತಂಡಕ್ಕೆ ಧನ್ಯವಾದಗಳು ಎಂದು ಜೈ ತುಲುನಾಡ್ (ರಿ.) ಬೆಂಗಳೂರು ಘಟಕದ ಉಪಾಧ್ಯಕ್ಷರು ಮತ್ತು ಡಿಕ್ಷನರಿ ಡೆವೆಲಪರ್ ಸುಮಂತ್ ಪೂಜಾರಿ ಹೆಬ್ರಿ ತಿಳಿಸಿದ್ದಾರೆ.
ಕುಂದಾಪುರ : ಯುವ ಬಂಟರ ಸಂಘದ ವತಿಯಿಂದ ನಟ ರಕ್ಷಿತ್ ಶೆಟ್ಟಿ ಬಗ್ಗೆ ಅವಹೇಳನಗೈದ ಖಾಸಗಿ ಚಾನೆಲ್ ವಿರುದ್ಧ ದೂರು

Posted On: 02-07-2021 07:19PM
ಉಡುಪಿ : ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಇಂದು ಕುಂದಾಪುರದಲ್ಲಿ ನಟ ರಕ್ಷಿತ್ ಶೆಟ್ಟಿ ಅವರ ಬಗ್ಗೆ ಕನ್ನಡದ ರಾಜ್ಯ ಮಟ್ಟದ ಖಾಸಗಿ ಟಿವಿಯಲ್ಲಿ ಸಿನಿಮಾ ಸಂಬಂಧಿತ ಕಾರ್ಯ ಕ್ರಮದಲ್ಲಿ ನಟ ರಕ್ಷಿತ್ ಶೆಟ್ಟಿ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಲ್ಲದೆ ನಿಂದಿಸಿದ್ದಾರೆ. ಇದರಿಂದ ರಕ್ಷಿತ್ ಶೆಟ್ಟಿ ಅವರ ಅಭಿಮಾನಿಗಳಲ್ಲಿ ಬಹಳ ಬೇಸರ ಉಂಟಾಗಿದೆ ಎಂದು ಕುಂದಾಪುರದಲ್ಲಿ ಯುವ ಬಂಟರ ಸಂಘದ ವತಿಯಿಂದ ಅಧ್ಯಕ್ಷರಾದ ಸುನಿಲ್ ಶೆಟ್ಟಿ ಹೇರಿಕುದ್ರು ಇವರ ನೇತತ್ವದಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಿದವರ ವಿರುದ್ಧ ಕುಂದಾಪುರ ಪೋಲಿಸ್ ಉಪಾಧೀಕ್ಷಕರ ಕಚೇರಿಯಲ್ಲಿ ದೂರನ್ನು ನೀಡಲಾಗಿದೆ.
ಈ ಸಿನಿಮಾ ಸಂಬಂಧಿತ ಕಾರ್ಯಕ್ರಮವನ್ನು ಆಯೋಜಿಸಿದವರು ಯಾರೇ ಆಗಲಿ ಅವರು ಕೂಡಲೇ ಕ್ಷಮೆ ಯಾಚಿಸಬೇಕೆಂದು ಹಾಗೂ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿಯನ್ನು ಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಕಾರ್ಯದರ್ಶಿಗಳಾದ ಉದಯ್ ಕುಮಾರ್ ಶೆಟ್ಟಿ ಮಚ್ಚಟ್ಟು, ಸಂತೋಷ್ ಶೆಟ್ಟಿ, ಸದಸ್ಯರಾದ ಭರತ್ ಶೆಟ್ಟಿ, ಸಚಿನ್ ಶೆಟ್ಟಿ ವಕ್ವಾಡಿ, ರೋಶನ್ ಶೆಟ್ಟಿ, ಮಹೇಂದರ್ ಶೆಟ್ಟಿ ಉಪಸ್ಥಿತರಿದ್ದರು.
ಶಿರ್ವ : ಹತ್ತು ಸಾವಿರ ಮಾಸ್ಕ್ ವಿತರಣೆ ಅಭಿಯಾನ

Posted On: 02-07-2021 07:02PM
ಶಿರ್ವ : ಸಂತ ಮೇರಿ ಮಹಾವಿದ್ಯಾಲಯದ ವಿವಿಧ ಘಟಕಗಳಾದ ಸ್ನಾತಕೋತ್ತರ ಅಧ್ಯಯನ ಕೇಂದ್ರ ಎಂ ಎಸ್ ಡಬ್ಲ್ಯೂ ,ಎಂಕಾಂ,ಎನ್ ಸಿಸಿ,ಎನ್ ಎಸ್ ಎಸ್ ,ರೋವರ್ಸ-ರೇಂಜರ್ಸ್ ಹಾಗೂ ರಿಲಯನ್ಸ್ ಫೌಂಡೇಶನ್ ಜಂಟಿಯಾಗಿ 10000 ಮಾಸ್ಕಗಳ ವಿತರಣೆ ಅಭಿಯಾನವನ್ನು ಆರೋಗ್ಯ ಸಮುದಾಯ ಕೇಂದ್ರ ,ಶಿರ್ವ, ಪೋಸ್ಟ್ ಆಫೀಸ್, ಆರಕ್ಷಕರ ಠಾಣೆ, ಆಶಾ ಓಲ್ಡ್ ಏಜ್ ಹೋಂ, ಮಸೀದಿ, ದೇವಾಲಯ, ಚರ್ಚ್, ಶಿರ್ವ ಗ್ರಾಮ ಪೇಟೆ , ಕಾಲೇಜಿನ ಸಂತ ಮೇರಿ ಸಮೂಹ ಸಂಸ್ಥೆಗಳ ಪ್ರದೇಶಗಳಲ್ಲಿ ಆಯೋಜಿಸಲಾಯಿತು. ಈ ಅಭಿಯಾನಕ್ಕೆ ಶಿರ್ವ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಕೆ ಆರ್ ಪಾಟ್ಕರ್ ಮಾತನಾಡಿ ಕೋವಿಡ್ ಅಂತಹ ಸಾಂಕ್ರಮಿಕ ಕಾಯಿಲೆಗಳನ್ನು ಎದುರಿಸಬೇಕಾಗಿದ್ದರೆ ಸಾರ್ವಜನಿಕರು ತಪ್ಪದೇ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಮನೆಯಿಂದ ಹೊರಗೆ ಬರುವಾಗ ಮುಖಕ್ಕೆ ಮಾಸ್ಕನ್ನು ಧರಿಸಬೇಕು. ಪ್ರಸ್ತುತ ಲಾಕ್ಡೌನ್ ನಂತರ ಈ ನಿಯಮ ಉಲ್ಲಂಘನೆಯನ್ನು ಮಾಡುವ ನಾಗರಿಕರ ಮೇಲೆ ಸೂಕ್ತ ಕ್ರಮವನ್ನು ತಗೆದುಕೊಳ್ಳುವುದು ಎಂದು ಮಾಸ್ಕ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಅಭಿಯಾನವನ್ನು ಶಿರ್ವ ಆರೋಗ್ಯ ಮಾತ ಇಗರ್ಜಿಯ ಸಹಾಯಕ ಧರ್ಮಗುರುಗಳಾದ ಫಾದರ್ ರೋಲ್ವಿನ್ ಅರಾನ್ಹಾ ಅವರ ಹಾರೈಕೆಗಳೊಂದಿಗೆ ಆರಂಭಿಸಲಾಯಿತು. ಪ್ರಸ್ತುತ ಕೋವಿಡ್ ನಂತಹ ಸಾಂಕ್ರಮಿಕ ಕಾಯಿಲೆಗಳನ್ನು ಎದುರಿಸಬೇಕಾದರೆ ಕೋವಿಡ್ -19 ಲಸಿಕೆ ಪಡೆಯುವುದು ಮಾತ್ರವೇ ಮುಖ್ಯವಲ್ಲ ಮಾಸ್ಕ ಕಡ್ಡಾಯವಾಗಿ ಧರಿಸಬೇಕು ಜೀವವನ್ನು ಕಾಪಾಡಿಕೊಳ್ಳುವುದು ಇಂದಿನ ಅಗತ್ಯವಾಗಿದೆ, ಎಂದು ಹೇಳಿ ಇಂತಹ ಒಳ್ಳೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಕಾಲೇಜಿನ ಪ್ರಾಂಶುಪಾಲರು, ಪದಾಧಿಕಾರಿಗಳು ಹಾಗೂ ಇಂತಹ ಕಾರ್ಯಕ್ರಮಕ್ಕೆ ಸಹಕರಿಸಿದ ಶಿರ್ವ ಗ್ರಾಮ ಪಂಚಾಯತಿನ ಅಧ್ಯಕ್ಷರು ಮತ್ತು ಪಿಡಿಓ ರವರನ್ನು ಶ್ಲಾಘಿಸಿ ಆಶೀರ್ವದಿಸಿದ್ದರು.
ಈ ಕಾರ್ಯಕ್ರಮದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನಂತ ಪದ್ಮನಾಭ ನಾಯಕ್, ಗ್ರಾ.ಪಂ.ಸದಸ್ಯ ಹಸನಬ್ಬ ಶೇಖ್,ವಿದ್ಯಾರ್ಥಿ ಕ್ಷೇಮಾಮಾಭಿವೃದ್ಧಿ ನಿರ್ದೇಶಕಿ ಕು.ಯಶೋದಾ,ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್,ಎನ್ಎಸ್ಎಸ್ ಅಧಿಕಾರಿ ಶ್ರೀ ಪ್ರೇಮನಾಥ್,ಕು. ರಕ್ಷಾ, ರೇಂಜರ್ಸ್ ಲೀಡರ್ ಗಳಾದ ಶ್ರೀ ಪ್ರಕಾಶ್,ಶ್ರೀಮತಿ ಸಂಗೀತ ಪೂಜಾರಿ, ಸ್ನಾತಕೋತ್ತರ ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಶ್ರೀ ಜಗದೀಶ್ ಆಚಾರ್ಯ, ಶ್ರೀಮತಿ ಶರ್ಮಿಳಾ, ಗ್ರಂಥಪಾಲಕ ಶ್ರೀ ಪ್ರಮೋದ್ , ಶ್ರೀ ಕಿರಣ್ ಕುಮಾರ್,ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದು ಸಾವ೯ಜನಿಕರಿಗೆ ಮಾಸ್ಕ್ ವಿತರಿಸುವಲ್ಲಿ ವಿದ್ಯಾರ್ಥಿಗಳ ಜೊತೆ ಕೈಜೋಡಿಸಿದರು.
ಈ ಅಭಿಯಾನಕ್ಕೆ ಸಹಕಾರವನ್ನು ನೀಡಿದ ಶಿರ್ವ ಕಾಲೇಜಿನ ವಿವಿಧ ಘಟಕಗಳ ವಿದ್ಯಾರ್ಥಿ ನಾಯಕರಾದ ಸೀನಿಯರ್ ಅಂಡರ್ ಆಫೀಸರ್ ಭಟ್ ರಾಮದಾಸ ಸತೀಶ್, ಜೂನಿಯರ್ ಅಂಡರ್ ಆಫೀಸರ್ ಪ್ರವಿತ ಆಚಾರ್ಯ, ರಿಯಾನ್ ರಿಷಿ ಅಲ್ಫೋನ್ಸೋ,ಕಂಪೆನಿ ಸಾರ್ಜಂಟ್ ಮೇಜರ್ ಪ್ರತಿಮಾ ಆಚಾರ್ಯ , ಕಂಪನಿ ಕ್ವಾಟರ್ಮಸ್ಟರ್ ರೈನ ಅಂದ್ರಾದೆ,ಸೇರ ಮಾತೆ ಮ್ಯಾಕ್ ವಾನ್ , ಲೀಡರ್ ಗಳಾದ ಅಕ್ಷಯ್, ಸುರೇಖಾ, ಡೆರಿಲ್ ಡೇಸಾ, ಅಪೇಕ್ಷ , ವೈಷ್ಣವಿ, ಫ್ರಾಂಕ್ಲಿನ್ ಮತಾಯಸ್ ಮತ್ತು ಪ್ರತಿಕ್ಷ ಸಾರ್ವಜನಿಕರಿಗೆ ಮಾಸ್ಕನ್ನು ವಿತರಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ಈ ಅಭಿಯಾನದಲ್ಲಿ ಭಾಗವಹಿಸಿ, ವಂದಿಸಿದರು. ಸಮಾಜಕಾರ್ಯದ ವಿಭಾಗದ ಮುಖ್ಯಸ್ಥೆ ಲಕ್ಷ್ಮಿ ಆಚಾರ್ಯರವರು ಸ್ವಾಗತಿಸಿದರು.
ಶಿರ್ವ : 10000 ಮಾಸ್ಕ ವಿತರಣೆ ಅಭಿಯಾನ

Posted On: 02-07-2021 06:59PM
ಶಿರ್ವ : ಸಂತ ಮೇರಿ ಮಹಾವಿದ್ಯಾಲಯದ ವಿವಿಧ ಘಟಕಗಳಾದ ಸ್ನಾತಕೋತ್ತರ ಅಧ್ಯಯನ ಕೇಂದ್ರ ಎಂ ಎಸ್ ಡಬ್ಲ್ಯೂ ,ಎಂಕಾಂ,ಎನ್ ಸಿಸಿ,ಎನ್ ಎಸ್ ಎಸ್ ,ರೋವರ್ಸ-ರೇಂಜರ್ಸ್ ಹಾಗೂ ರಿಲಯನ್ಸ್ ಫೌಂಡೇಶನ್ ಜಂಟಿಯಾಗಿ 10000 ಮಾಸ್ಕಗಳ ವಿತರಣೆ ಅಭಿಯಾನವನ್ನು ಆರೋಗ್ಯ ಸಮುದಾಯ ಕೇಂದ್ರ ,ಶಿರ್ವ, ಪೋಸ್ಟ್ ಆಫೀಸ್, ಆರಕ್ಷಕರ ಠಾಣೆ, ಆಶಾ ಓಲ್ಡ್ ಏಜ್ ಹೋಂ, ಮಸೀದಿ, ದೇವಾಲಯ, ಚರ್ಚ್, ಶಿರ್ವ ಗ್ರಾಮ ಪೇಟೆ , ಕಾಲೇಜಿನ ಸಂತ ಮೇರಿ ಸಮೂಹ ಸಂಸ್ಥೆಗಳ ಪ್ರದೇಶಗಳಲ್ಲಿ ಆಯೋಜಿಸಲಾಯಿತು. ಈ ಅಭಿಯಾನಕ್ಕೆ ಶಿರ್ವ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಕೆ ಆರ್ ಪಾಟ್ಕರ್ ಮಾತನಾಡಿ ಕೋವಿಡ್ ಅಂತಹ ಸಾಂಕ್ರಮಿಕ ಕಾಯಿಲೆಗಳನ್ನು ಎದುರಿಸಬೇಕಾಗಿದ್ದರೆ ಸಾರ್ವಜನಿಕರು ತಪ್ಪದೇ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಮನೆಯಿಂದ ಹೊರಗೆ ಬರುವಾಗ ಮುಖಕ್ಕೆ ಮಾಸ್ಕನ್ನು ಧರಿಸಬೇಕು. ಪ್ರಸ್ತುತ ಲಾಕ್ಡೌನ್ ನಂತರ ಈ ನಿಯಮ ಉಲ್ಲಂಘನೆಯನ್ನು ಮಾಡುವ ನಾಗರಿಕರ ಮೇಲೆ ಸೂಕ್ತ ಕ್ರಮವನ್ನು ತಗೆದುಕೊಳ್ಳುವುದು ಎಂದು ಮಾಸ್ಕ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಅಭಿಯಾನವನ್ನು ಶಿರ್ವ ಆರೋಗ್ಯ ಮಾತ ಇಗರ್ಜಿಯ ಸಹಾಯಕ ಧರ್ಮಗುರುಗಳಾದ ಫಾದರ್ ರೋಲ್ವಿನ್ ಅರಾನ್ಹಾ ಅವರ ಹಾರೈಕೆಗಳೊಂದಿಗೆ ಆರಂಭಿಸಲಾಯಿತು. ಪ್ರಸ್ತುತ ಕೋವಿಡ್ ನಂತಹ ಸಾಂಕ್ರಮಿಕ ಕಾಯಿಲೆಗಳನ್ನು ಎದುರಿಸಬೇಕಾದರೆ ಕೋವಿಡ್ -19 ಲಸಿಕೆ ಪಡೆಯುವುದು ಮಾತ್ರವೇ ಮುಖ್ಯವಲ್ಲ ಮಾಸ್ಕ ಕಡ್ಡಾಯವಾಗಿ ಧರಿಸಬೇಕು ಜೀವವನ್ನು ಕಾಪಾಡಿಕೊಳ್ಳುವುದು ಇಂದಿನ ಅಗತ್ಯವಾಗಿದೆ, ಎಂದು ಹೇಳಿ ಇಂತಹ ಒಳ್ಳೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಕಾಲೇಜಿನ ಪ್ರಾಂಶುಪಾಲರು, ಪದಾಧಿಕಾರಿಗಳು ಹಾಗೂ ಇಂತಹ ಕಾರ್ಯಕ್ರಮಕ್ಕೆ ಸಹಕರಿಸಿದ ಶಿರ್ವ ಗ್ರಾಮ ಪಂಚಾಯತಿನ ಅಧ್ಯಕ್ಷರು ಮತ್ತು ಪಿಡಿಓ ರವರನ್ನು ಶ್ಲಾಘಿಸಿ ಆಶೀರ್ವದಿಸಿದ್ದರು.
ಈ ಕಾರ್ಯಕ್ರಮದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನಂತ ಪದ್ಮನಾಭ ನಾಯಕ್, ಗ್ರಾ.ಪಂ.ಸದಸ್ಯ ಹಸನಬ್ಬ ಶೇಖ್,ವಿದ್ಯಾರ್ಥಿ ಕ್ಷೇಮಾಮಾಭಿವೃದ್ಧಿ ನಿರ್ದೇಶಕಿ ಕು.ಯಶೋದಾ,ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ ಪ್ರವೀಣ್ ಕುಮಾರ್,ಎನ್ಎಸ್ಎಸ್ ಅಧಿಕಾರಿ ಶ್ರೀ ಪ್ರೇಮನಾಥ್,ಕು. ರಕ್ಷಾ, ರೇಂಜರ್ಸ್ ಲೀಡರ್ ಗಳಾದ ಶ್ರೀ ಪ್ರಕಾಶ್,ಶ್ರೀಮತಿ ಸಂಗೀತ ಪೂಜಾರಿ, ಸ್ನಾತಕೋತ್ತರ ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಶ್ರೀ ಜಗದೀಶ್ ಆಚಾರ್ಯ, ಶ್ರೀಮತಿ ಶರ್ಮಿಳಾ, ಗ್ರಂಥಪಾಲಕ ಶ್ರೀ ಪ್ರಮೋದ್ , ಶ್ರೀ ಕಿರಣ್ ಕುಮಾರ್,ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದು ಸಾವ೯ಜನಿಕರಿಗೆ ಮಾಸ್ಕ್ ವಿತರಿಸುವಲ್ಲಿ ವಿದ್ಯಾರ್ಥಿಗಳ ಜೊತೆ ಕೈಜೋಡಿಸಿದರು.
ಈ ಅಭಿಯಾನಕ್ಕೆ ಸಹಕಾರವನ್ನು ನೀಡಿದ ಶಿರ್ವ ಕಾಲೇಜಿನ ವಿವಿಧ ಘಟಕಗಳ ವಿದ್ಯಾರ್ಥಿ ನಾಯಕರಾದ ಸೀನಿಯರ್ ಅಂಡರ್ ಆಫೀಸರ್ ಭಟ್ ರಾಮದಾಸ ಸತೀಶ್, ಜೂನಿಯರ್ ಅಂಡರ್ ಆಫೀಸರ್ ಪ್ರವಿತ ಆಚಾರ್ಯ, ರಿಯಾನ್ ರಿಷಿ ಅಲ್ಫೋನ್ಸೋ,ಕಂಪೆನಿ ಸಾರ್ಜಂಟ್ ಮೇಜರ್ ಪ್ರತಿಮಾ ಆಚಾರ್ಯ , ಕಂಪನಿ ಕ್ವಾಟರ್ಮಸ್ಟರ್ ರೈನ ಅಂದ್ರಾದೆ,ಸೇರ ಮಾತೆ ಮ್ಯಾಕ್ ವಾನ್ , ಲೀಡರ್ ಗಳಾದ ಅಕ್ಷಯ್, ಸುರೇಖಾ, ಡೆರಿಲ್ ಡೇಸಾ, ಅಪೇಕ್ಷ , ವೈಷ್ಣವಿ, ಫ್ರಾಂಕ್ಲಿನ್ ಮತಾಯಸ್ ಮತ್ತು ಪ್ರತಿಕ್ಷ ಸಾರ್ವಜನಿಕರಿಗೆ ಮಾಸ್ಕನ್ನು ವಿತರಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ಈ ಅಭಿಯಾನದಲ್ಲಿ ಭಾಗವಹಿಸಿ, ವಂದಿಸಿದರು. ಸಮಾಜಕಾರ್ಯದ ವಿಭಾಗದ ಮುಖ್ಯಸ್ಥೆ ಲಕ್ಷ್ಮಿ ಆಚಾರ್ಯರವರು ಸ್ವಾಗತಿಸಿದರು.