Updated News From Kaup

ಕಟಪಾಡಿ : ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರೈತ ಬಂಧು ಅಭಿಯಾನದ ಅಂಗವಾಗಿ ಪ್ರಪ್ರಥಮ ಎರೆಹುಳು ಗೊಬ್ಬರ ತೊಟ್ಟಿ ಘಟಕ ರಚನೆ

Posted On: 15-08-2021 03:14PM

ಕಾಪು : ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರೈತ ಬಂಧು ಅಭಿಯಾನದ ಅಂಗವಾಗಿ ನಾಗೇಶ ಕಾಮತ್ ಕಟಪಾಡಿ ಇವರ ಸ್ಥಳದಲ್ಲಿ ಪ್ರಪ್ರಥಮ ಎರೆಹುಳು ಗೊಬ್ಬರ ತೊಟ್ಟಿ ಘಟಕ ರಚನೆಗೆ ಕಟಪಾಡಿ ಗ್ರಾಮ ಪಂಚಾಯತ್ ವತಿಯಿಂದ ಚಾಲನೆ ನೀಡಲಾಯಿತು.

ಕುತ್ಯಾರು ಗ್ರಾಮಪಂಚಾಯತ್ನಲ್ಲಿ ಸ್ವಾತಂತ್ರ್ಯ ದಿನಾಚರಣೆ, ನಿವೃತ್ತ ಯೋಧರಿಗೆ ಸನ್ಮಾನ

Posted On: 15-08-2021 03:04PM

ಕಾಪು : ಕುತ್ಯಾರು ಗ್ರಾಮಪಂಚಾಯತ್ ನಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಧ್ವಜಾರೋಹಣವನ್ನು ಕುತ್ಯಾರು ಗ್ರಾಮದ ನಿವೃತ್ತ ಯೋಧ ಶ್ರೀಧರ ಕುಲಾಲ್ ನೆರವೇರಿಸಿದರು.

ಇನ್ನಂಜೆ : ಸಾರ್ವಜನಿಕ ಶೌಚಾಲಯ ಉದ್ಘಾಟನೆ ಮತ್ತು ಆರ್ಥಿಕ ನೆರವು

Posted On: 15-08-2021 02:46PM

ಕಾಪು : ಯುವಕ ಮಂಡಲ (ರಿ.) ಇನ್ನಂಜೆ ಇವರ ವತಿಯಿಂದ ಇನ್ನಂಜೆ ದಾಸಭವನ ವಠಾರದಲ್ಲಿ ಸಾರ್ವಜನಿಕರಿಗೆ ಉಪಯೋಗಿಸಲು ಸುಸಜ್ಜಿತ ಶೌಚಾಲಯವನ್ನು ಯುವಕ ಮಂಡಲದ ಸದಸ್ಯರೇ ನಿರ್ಮಾಣ ಮಾಡಿ ಇಂದು 75ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಇನ್ನಂಜೆ ಎಸ್.ವಿ. ಎಚ್ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ರತ್ನಕುಮಾರ್ ಉದ್ಘಾಟಿಸಿದರು ಮತ್ತು ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಕುಂಜಾರಿನ ಯುವತಿಗೆ ಯುವಕ ಮಂಡಲದ ವತಿಯಿಂದ 10,000 ರೂಪಾಯಿ ಆರ್ಥಿಕ ನೆರವನ್ನು ನೀಡಲಾಯಿತು.

'ಸೊತಂತ್ರ' ಬಾರತದ ಇನಿತ ಪಾಡ್

Posted On: 15-08-2021 02:00PM

ಸಾರತ್ತ ಒಂರ್ಬನೂತ್ತ ನಲ್ಪತ್ತೇಲ್ನೇ ಇಸವಿದ ಅಗೋಸ್ಟು ತಿಂಗೊಲ್ದ ಪದಿನೈನನೆ ತಾರೀಕ್ ಆನಿದ ಪಗೆಲ್ ದೇವೆರ್ನ ಪುಲ್ಯಕಾಂಡೆದ ಕದಿರ್ ದ ಒಟ್ಟಿಗೆ ಕೇಂಡಿನ‌ ಸೊರ , ಸೊತಂತ್ರ....ಸೊತಂತ್ರ...ಸೊತಂತ್ರ.. ಇಂಚ ನಾಲ್ ಮೈಡ್ದ್ ಲಾ........., ಊರೊರ್ಮೆಲಾ ಸೊತಂತ್ರದ ಗೌಜಿ .ಹೆಚ್ಚಿಕಡಮೆ ಮುನ್ನೂದು ವರ್ಸ ನಮ್ಮ ನೆಲಟ್ , ನಮ್ಮ ದೇಶೊಡು ನಮ ಸೊತಂತ್ರ ದಾಂತೆ ಬದುಕೊಂದು ಇತ್ತ . ಇಜ್ಜಾಂದಿನ ಸೊತಂತ್ರ ಒದಗಿನ ಎಡ್ಡೆ ದಿನ . ನಾಲೀಸ್ ದ ,ನಾಕುಸಿದ ಬಾಳ್ ಬಾಳಿನ ಅಪ್ಪೆ ಬಾರತಿನ ಜೋಕುಲೆಗ್ ಮರತ್ ದೇ ಪೋದಿತ್ತಿ 'ಸೊತಂತ್ರ' ಆನಿ ಒದಗ್ ದ್ ಬತ್ತಂಡ್. ದೇಶದ ಪ್ರತಿ ಕುಟುಮೊಡು ನಾಲ್ ಐನ್ ತರೆ ಮಾಜ್ ದ್ ಪೋದುಪ್ಪು‌ ,ಅಂಚಾದ್ ಸೊತಂತ್ರ ಇಜ್ಜಾಂದೆ ಬದುಕುನನೇ ಅಬ್ಯಾಸ್ ಆದ್ ,ಉಂದುವೆ ಬದ್ ಕ್ ಪನ್ಪಿನ ಗೇನ ಅಜ್ಜ ಪಿಜ್ಜ ಕಾಲೊಡ್ದು ನೆತ್ತೆರ್ಡೆ ಬತ್ತಿದಿಪ್ಪು. ಪಂಡ ಆತ್ ವರ್ಸೊಡ್ದು ನಮ ಬೊಲ್ದು ಮೋರೆದಾಯನ ಆಲ್ತನೊಟು ಬದುಕೊಡಾಂಡ್. ಸರಿ ಆಲೋಚನೆ ಮಲ್ಪುಗ... ದೇಸೊಗು ಸೊತಂತ್ರ ಬತ್ತ್ ದ್ ಎಲ್ಪತ್ತನಾಲ್ ವರ್ಸ ಕರಿಂಡಲಾ ನಮ ದೇಸೊಡು ಏತ್ ಇಚ್ಚಾನುಸಾರೊಡು ಬದ್ ಕೊಂದುಲ್ಲ. ಏತ್ ಜನೊಕು ನಮ ಸೊತಂತ್ರೆರ್ ಪನ್ಪಿನ ಗೇನ ಉಂಡು ?

ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಆದಿ ಉಡುಪಿಯಲ್ಲಿ 75 ನೇ ಸ್ವಾತಂತ್ರೋತ್ಸವ

Posted On: 15-08-2021 01:14PM

ಉಡುಪಿ : ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಆದಿ ಉಡುಪಿ ಇಲ್ಲಿ 75 ನೇ ಸ್ವಾತಂತ್ರೋತ್ಸವ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ವನ್ನು ಹಿರಿಯ ವಿಶ್ವಸ್ತರಾದ ತೇಜಪ್ಪ ಬಂಗೇರ ನೆರವೇರಿಸಿದರು.

ಕಾಪು : ಯುವವಾಹಿನಿ, ಬಿರುವೆರ್ ಕಾಪು ಸೇವಾ ಟ್ರಸ್ಟ್, ಲೈಟ್ ಹೌಸ್ ಬೀಚ್ ರೆಸಾರ್ಟ್ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆ

Posted On: 15-08-2021 11:52AM

ಕಾಪು : ಯುವವಾಹಿನಿ ಕಾಪುಘಟಕ , ಬಿರುವೆರ್ ಕಾಪು ಸೇವಾ ಟ್ರಸ್ಟ್ ಮತ್ತು ಲೈಟ್ ಹೌಸ್ ಬೀಚ್ ರೆಸಾರ್ಟ್ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆಯು ಕಾಪುವಿನ ಲೈಟ್ ಬೀಚ್ ರೆಸಾರ್ಟ್ ಇಲ್ಲಿ ನಡೆಯಿತು.

ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ 75ನೇ ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮ

Posted On: 15-08-2021 10:26AM

ಕಾಪು : ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಇಂದು 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಣೆಯನ್ನು ವಾರಾಂತ್ಯ ಕರ್ಪ್ಯೂ ಮತ್ತು ಕೋವಿಡ್ 19 ಮಾರ್ಗಸೂಚಿಯಂತೆ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾಲೇಜಿನ ಆಡಳಿತಾತ್ಮಕ ಸಹಾಯಕ ಸಿಬ್ಬಂದಿ ಶ್ರೀರಂಗ ರವರು ಧ್ವಜಾರೋಹಣವನ್ನು ನೆರವೇರಿಸಿದರು.

ಇನ್ನಂಜೆ : ನೂತನ ಭಗವಧ್ವಜ ಕಟ್ಟೆ ಲೋಕಾರ್ಪಣೆ

Posted On: 13-08-2021 08:48PM

ಕಾಪು : ಇನ್ನಂಜೆ ಗ್ರಾಮ ಹಾಗು ಮಜೂರು ಗ್ರಾಮದ ಗಡಿ ಭಾಗವಾಗಿರುವ ರೆಂಜಾಲ ಪಾದೆಯಲ್ಲಿ ಇಂದು ಯುವಸೇನೆ ಮಡುಂಬು ತಂಡದ ಸದಸ್ಯರ ಸಹಕಾರದಿಂದ ನಿರ್ಮಿಸಲಾದ ನೂತನ ಧ್ವಜ ಕಟ್ಟೆಯನ್ನು ಲೋಕಾರ್ಪಣೆ ಮಾಡಲಾಯಿತು.

ಕಟಪಾಡಿಯ ಪ್ರಥಮ್ ಕಾಮತ್ ಕೈ ಚಳಕದಿ ಮೂಡಿದೆ ತರಕಾರಿಯ ತ್ರಿವರ್ಣ ಕಲಾಕೃತಿ

Posted On: 13-08-2021 08:13PM

ಕಾಪು : ನಮ್ಮ ರಾಷ್ಟ್ರದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಚಿತ್ರಕಲೆ, ಕ್ರಾಫ್ಟ್, ಕ್ಲೇ ಮಾಡೆಲಿಂಗ್, ಮ್ಯಾಜಿಕ್ ಕಲೆಯಲ್ಲಿ ತನ್ನದೇ ಛಾಪನ್ನೊತ್ತಿದ ಬಾಲ ಪ್ರತಿಭೆ ಕಟಪಾಡಿಯ ಪ್ರಥಮ್ ಕಾಮತ್ ಇವರು ತರಕಾರಿಯಲ್ಲಿ ತ್ರಿವರ್ಣ ಕಲಾಕೃತಿ ರಚಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಕಲ್ಯಾಣಪುರ ರೋಟರಿ ವತಿಯಿಂದ ಕೆಳಾರ್ಕಳಬೆಟ್ಟು ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೆ ದೇಣಿಗೆ

Posted On: 13-08-2021 06:41PM

ಉಡುಪಿ : ಕಲ್ಯಾಣಪುರ ರೋಟರಿ ವತಿಯಿಂದ ಕಲ್ಯಾಣಪುರ ಸಮೀಪದ ಕೆಳಾರ್ಕಳಬೆಟ್ಟು ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೆ ರೋಟರಿ ಸದಸ್ಯ, ದಾನಿ, ಶಾಲೆಯ ಹಿತೈಷಿ ಸಮಿತಿಯ ಅಧ್ಯಕ್ಷ ಸಂಜೀವ ಟಿ. ಅವರು ನೀಡಿದ ₹ 25,000 ದೇಣಿಗೆಯನ್ನು ಕಲ್ಯಾಣಪುರ ರೋಟರಿಯ ಅಧ್ಯಕ್ಷ ಶಂಭು ಶಂಕರ್ ಶಾಲಾ ಮುಖ್ಯೋಪಾಧ್ಯಾಯಿನಿ ಸವಿತಾ ಇವರಿಗೆ ಹಸ್ತಾಂತರಿಸಿದರು.