Updated News From Kaup

ಬಹ್ಮಾವರ : ಮಿಯಾವಾಕಿ ದೇವರ ಕಾಡು ಯೋಜನೆಗೆ ಚಾಲನೆ

Posted On: 06-06-2021 10:53PM

ಉಡುಪಿ : ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ, ಸುವಣ೯ ಎಂಟರ್ಪ್ರೆಸಸ್ ಮತ್ತು ಶ್ರೀರಾಮ ಫ್ರೆಂಡ್ಸ್ ಹೇರೂರು ಆಶ್ರಯದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ 24 ಸೆನ್ಸ್ ಗದ್ದೆಯಲ್ಲಿ ಮಿಯಾವಾಕಿ ದೇವರ ಕಾಡು ವನ ಮಾಡುವ ಸಲುವಾಗಿ ವಿವಿಧ ಜಾತಿಯ ಗಿಡ ನೆಡುವ ಕಾಯ೯ಕ್ರಮ ಹೇರೂರುನಲ್ಲಿ ನಡೆಯಿತು.

ಜಯಂಟ್ಸ್ ಮಾಜಿ ಫೆಡರೇಶನ್ ಅಧ್ಯಕ್ಷ ಮಧುಸೂದನ್ ಹೇರೂರು ರವರ ಮುತುವಜಿ೯ ಯಲ್ಲಿ ನಡೆದ ಈ ಕಾಯ೯ಕ್ರಮದ ಉದ್ಘಾಟನೆಯನ್ನು ಮಡಿಕೇರಿ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕ ಡಾII ರಾಮಚಂದ್ರ ಕಾಮತ್ ನೆರವೇರಿಸಿ ಶುಭ ಹಾರೈಸಿದರು.

ಈ ಸಂದಭ೯ದಲ್ಲಿ ಡಾ|| ವಿಜಯೀoದ್ರ ವಸಂತ್, ವೇಣುಗೋಪಾಲ್ ಹೆಬ್ಬಾರ್, ಸುನಿತಾ ಮಧುಸೂದನ್, ಜಯಂಟ್ಸ್ ನ ಸುಂದರ ಪೂಜಾರಿ ಮೂಡುಕುಕ್ಕುಡೆ, ಮಿಲ್ಟನ್ ಒಲಿವರ್, ವಿವೇಕ್, ಸುರೇಶ್, ರವಿರಾಜ್ ಹೆಚ್.ಪಿ ,ರಾಘವೇಂದ್ರ ಪ್ರಭು,ಕವಾ೯ಲು ಮತ್ತಿತರರು ಉಪಸ್ಥಿತರಿದ್ದರು.

ಪೌರ ಕಾರ್ಮಿಕರಿಗೆ ಡೈನಾಮಿಕ್ ಇನ್ಫ್ರಾಟೆಕ್ ವತಿಯಿಂದ ಕಿಟ್ ವಿತರಣೆ

Posted On: 06-06-2021 10:28PM

ಕುಂದಾಪುರ : ಪರಿಸರ ಸ್ವಚ್ಛತೆಯ ಜೊತೆಗೆ ಜನರ ಮನೋಭಾವವನ್ನು ಬದಲಾಯಿಸುವುದು ಸ್ವಚ್ಛ ಭಾರತದ ಪರಿಕಲ್ಪನೆ ಯಾಗಿದ್ದು, ಸ್ವಚ್ಛತೆಯ ಕುರಿತು ಕಾನೂನು ಜಾರಿಗೆ ಬಂದರೆ ಸಾಲದು, ಜನರ ಮನಸ್ಥಿತಿ ಪರಿವರ್ತನೆ ಆಗಬೇಕು, ಪರಿಸರವನ್ನು ಸ್ವಚ್ಛವಾಗಿರಿಸುವಲ್ಲಿ ಪೌರ ಕಾರ್ಮಿಕರ ಕೊಡುಗೆ ಅಪಾರವಾದದು, ಸಾರ್ವಜನಿಕ ಸ್ಥಳದಲ್ಲಿ ಸ್ವಚ್ಚತೆಯ ಕುರಿತು ಬಿಡುವಿಲ್ಲದೆ ನಿರಂತರ ಸೇವೆ ಸಲ್ಲಿಸುವ ಪೌರ ಕಾರ್ಮಿಕರ ಸೇವೆಯನ್ನು ಗುರುತಿಸಿ ಉಡುಪಿ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹಾಗೂ ಪುರಸಭೆ ಸದಸ್ಯರಾದ ಪ್ರಭಾಕರ್ ವಿ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶೇಖರ್ ಪೂಜಾರಿಯವರು, ಡೈನಾಮಿಕ್ ಇನ್ಫ್ರಾಟೆಕ್ ಸಂಸ್ಥೆಯ ಸಹಭಾಗಿತ್ವದಲ್ಲಿ ಇಂದು ಕುಂದಾಪುರ ಪುರಸಭೆ 60 ಪೌರಕಾರ್ಮಿಕರಿಗೆ ಫುಡ್ ಕಿಟ್ ವಿತರಣೆ ಮಾಡಲಾಯಿತು.

ಫುಡ್ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಬಿಜೆಪಿ ಕುಂದಾಪುರ ಮಂಡಲ ಕ್ಷೇತ್ರ ಅಧ್ಯಕ್ಷರಾದ ಶಂಕರ್ ಅಂಕದಕಟ್ಟೆಯವರು ಪೌರ ಕಾರ್ಮಿಕರ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಪೌರಕಾರ್ಮಿಕರು ಕರೋನಾ ವಾರಿಯರ್ಸ್ ಗಳು ಜೀವದ ಹಂಗನ್ನು ತೊರೆದು ದುಡಿದವರು, ಪೌರಕಾರ್ಮಿಕರನ್ನು ಗುರುತಿಸಿ ಫುಡ್ ಕಿಟ್ ನೀಡಿದ ದಾನಿಗಳನ್ನು ಅಭಿನಂದಿಸಿದರು. ಪೌರಕಾರ್ಮಿಕರು ಕೇವಲ ಕೋರೋನಾ ಸಂದರ್ಭದಲ್ಲಿ ಮಾತ್ರ ಕೋರೋನಾ ವಾರಿಯರ್ಸ್ ಅಲ್ಲ, ಅವರು ಸಮಾಜದ ಡಾಕ್ಟರ್ ಗಳು ಮಾತ್ರವಲ್ಲದೆ ಇಡೀ ಸಮಾಜದ ಸ್ವಸ್ಥವನ್ನು ಕಾಪಾಡುವ ಡಾಕ್ಟರ್ ಗಳು ಎಂದು ಕುಂದಾಪುರ ಪುರಸಭೆ ಮಾಜಿ ಅಧ್ಯಕ್ಷರಾದ ಮೋಹನ್ ದಾಸ ಶೈಣೆಯವರು ಮುಕ್ತಕಂಠದಿಂದ ಹೊಗಳಿದರು. ಉಡುಪಿ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹಾಗೂ ಪುರಸಭೆ ಸದಸ್ಯರಾದ ಪ್ರಭಾಕರ್ ವಿ. ಯವರು ಡೈನಾಮಿಕ್ ಇನ್ಫ್ರಾಟೆಕ್ ಸಂಸ್ಥೆಯವರಿಗೆ ಅಭಿನಂದನೆ ತಿಳಿಸಿದರು.

ಈ ಸಂದರ್ಭದಲ್ಲಿ ಕುಂದಾಪುರ ಮಾಜಿ ಅಧ್ಯಕ್ಷರಾದ ಮೋಹನ್ ದಾಸ ಶೈಣೆ, ದೇವಕಿ ಸಣ್ಣಯ್ಯ, ಬಿಜೆಪಿ ಕುಂದಾಪುರ ಮಂಡಲ ಕ್ಷೇತ್ರ ಅಧ್ಯಕ್ಷರಾದ ಶಂಕರ್ ಅಂಕದಕಟ್ಟೆ, ಉಪಾಧ್ಯಕ್ಷರಾದ ಸಂದೀಪ್ ಖಾರ್ವಿ, ಉಡುಪಿ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹಾಗೂ ಪುರಸಭೆ ಸದಸ್ಯರಾದ ಪ್ರಭಾಕರ್ .ವಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶೇಖರ್ ಪೂಜಾರಿ, ಪುರಸಭೆ ಸದಸ್ಯರಾದ ಅಶ್ವಿನಿ ಪ್ರದೀಪ್, ಸಂತೋಷ್ ಶೆಟ್ಟಿ ಹಾಗೂ ಡೈನಾಮಿಕ್ ಇನ್ಫ್ರಾಟೆಕ್ ಸಂಸ್ಥೆಯ ದಿನೇಶ್ ಅಮೀನ್, ಧೀರಜ್ ಹೆಜಮಾಡಿ, ಗಣೇಶ್ ಅಮೀನ್, ಭಾಸ್ಕರ್ ಬಿಲ್ಲವ, ಕಮಲಾಕ್ಷ ಯು, ಭಾಸ್ಕರ ವಿಠಲವಾಡಿ, ಹರೀಶ್ ಕುಂದರ್, ದಿವಾಕರ್ ಕಡ್ಗಿಮನೆ, ಅಬ್ದುಲ್ ಅಜೀಜ್, ಹರೀಶ್ ಪುತ್ರನ್, ಅಂತರಾಷ್ಟ್ರೀಯ ಕ್ರೀಡಾಪಟು ಸತೀಶ್ ಖಾರ್ವಿ ಉಪಸ್ಥಿತರಿದ್ದರು.

ಕೊಲ್ಲೂರು : ಕಲ್ಯಾಣಿಗುಡ್ಡೆ ಬಡ ಪರಿಶಿಷ್ಟ ಪಂಗಡ ಬುಡಕಟ್ಟು ಜನಾಂಗದವರಿಗೆ ಕಿಟ್ ವಿತರಣೆ ಮತ್ತು ಶಾಶ್ವತ ಸೂರಿಗಾಗಿ ಮನವಿ

Posted On: 05-06-2021 10:29PM

ಉಡುಪಿ : ಕೋರೋನಾ ಮಹಾಮಾರಿ 2ನೇ ಅಲೆಗೆ ಕಲ್ಯಾಣಿಗುಡ್ಡೆ ಭಾಗದ ಪರಿಶಿಷ್ಟ ಪಂಗಡ ಬುಡಕಟ್ಟು ಜನರ ಸಂಕಷ್ಟವನ್ನು ಅರಿತು ಉಡುಪಿ ಜಿಲ್ಲೆ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹಾಗೂ ಕುಂದಾಪುರ ಪುರಸಭೆ ಸದಸ್ಯರಾದ ಪ್ರಭಾಕರ ವಿ ರವರು ಹಿಂದೆ ಕುಂದಾಪುರದ ಎಸಿಪಿ, ಪ್ರಸುತ್ತ ಮಂಗಳೂರಿನ ಡಿಸಿಪಿ ಆಗಿ ಕಾರ್ಯ ನಿರ್ವಹಿಸುತ್ತಿರುವ ಹರಿರಾಮ್ ಶಂಕರ್ ರವರಿಗೆ ಪ್ರಸ್ತುತ ಪರಿಶಿಷ್ಟ ಪಂಗಡ ಬುಡಕಟ್ಟು ಜನಾಂಗದ ಸ್ಥಿತಿಗತಿಗಳ ಮನವರಿಕೆ ಮಾಡಿ ಸಹಾಯ ಹಸ್ತ ಕೇಳಿದಾಗ ಡಿಸಿಪಿ ಹರಿರಾಮ್ ಶಂಕರ್ ಸ್ಪಂದಿಸುವುದರ ಜೊತೆಗೆ ಮತ್ತೊಮ್ಮೆ ಮಾನವೀಯತೆಯಿಂದ ಮೆರೆದಿದ್ದಾರೆ.

ಹರೆರಾಮ ಶಂಕರ್, ಮಂಗಳೂರು ಡಿಸಿಪಿ ಡಿಸಿಪಿ ಹರೇರಾಮ್ ಶಂಕರ್ ರವರ ಮನವಿಗೆ ಒಗೊಟ್ಟ ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಕೊಲ್ಲೂರು ಸಮೀಪದ ಕಲ್ಯಾಣಿಗುಡ್ಡೆಯ ಬಡ ಪರಿಶಿಷ್ಟ ಪಂಗಡ ಬುಡಕಟ್ಟು ಜನಾಂಗದ ಸುಮಾರು ಮೂವತ್ತು ಕುಟುಂಬಗಳಿಗೆ ಕುಂದಾಪುರದ ನ್ಯೂ ಮೆಡಿಕಲ್ ಸೆಂಟರ್ ನ ಡಾಕ್ಟರ್ ರಂಜನ್ ಶೆಟ್ಟಿ ಅವರ ಸೂಚನೆಯ ಮೇರೆಗೆ ಇಂದು ಕೊಲ್ಲೂರು ಸರಕಾರಿ ಶಾಲೆಯ ವಠಾರದಲ್ಲಿ ಪರಿಶಿಷ್ಟ ಪಂಗಡ ಬುಡಕಟ್ಟು ಜನಾಂಗದ ಕುಟುಂಬಗಳಿಗೆ ಆಹಾರ ಕಿಟ್ ಗಳನ್ನು ವಿತರಿಸಲಾಯಿತು.

ಈ ಹಿಂದೆ ಕುಂದಾಪುರದ ಎಸಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಹರೇರಾಮ್ ಶಂಕರ್ ರವರು ಕಲ್ಯಾಣಿಗುಡ್ಡೆಯ ಬಡ ಪರಿಶಿಷ್ಟ ಪಂಗಡ ಬುಡಕಟ್ಟು ಜನಾಂಗದ ಗುಡಿಸಲಲ್ಲಿ ವಾಸಿಸುವ ಪರಿವಾರದವರನ್ನು ಖುದ್ದಾಗಿ ಭೇಟಿ ನೀಡಿ ಅವರ ಸುಖದುಃಖಗಳನ್ನು ವಿಚಾರಿಸಿದ್ದರು, ಮಾತ್ರವಲ್ಲದೆ ಇವರುಗಳಿಗೆ ಶಾಶ್ವತ ಸೂರು ಕಲ್ಪಿಸಬೇಕೆಂದು ಸ್ಥಳೀಯ ಜನಪ್ರತಿನಿಧಿಗಳು ಮತ್ತು ಶಾಸಕರ ಗಮನಕ್ಕೂ ತಂದಿದ್ದರು. ಇಂದು ಪರಿಶಿಷ್ಟ ಪಂಗಡ ಬುಡಕಟ್ಟು ಜನಾಂಗದ ಅಧ್ಯಕ್ಷರಾದ ಕುಶಾಲ್, ಉಪಾಧ್ಯಕ್ಷರಾದ ಶಿವರವರು ನೆರೆದಿರುವ ಮುಖಂಡರುಗಳ ಸಮ್ಮುಖದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ 21 ಪರಿವಾರದವರಿಗೆ ಶಾಶ್ವತ ಸೂರು ಕಲ್ಪಿಸಬೇಕೆಂದು ಮನವಿ ನೀಡಿದರು.

ಈ ಸಂದರ್ಭದಲ್ಲಿ ಕುಂದಾಪುರ ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷರಾದ ಸುನಿಲ್ ಕುಮಾರ್ ಶೆಟ್ಟಿ ಹೇರಿಕುದ್ರು ಹಾಗೂ ಕೊಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂದೇಶ್ ಭಟ್, ಉಪಾಧ್ಯಕ್ಷರಾದಂತ ಹರೀಶ್ ಶೆಟ್ಟಿ ಕೊಲ್ಲೂರು ಹಾಗೂ ಯುವ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಉದಯ ಶೆಟ್ಟಿ ಮಚ್ಚಟ್ಟು, ಕೋಶಾಧಿಕಾರಿ ನಿತಿನ್ ಕುಮಾರ್ ಶೆಟ್ಟಿ ಹುಂಚನಿ, ಸಚಿನ್ ಶೆಟ್ಟಿ ವಕ್ವಾಡಿ, ಉಡುಪಿ ಜಿಲ್ಲೆ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹಾಗೂ ಕುಂದಾಪುರ ಪುರಸಭಾ ಸದಸ್ಯ ಪ್ರಭಾಕರ.ವಿ, ಅಂತರಾಷ್ಟ್ರೀಯ ಕ್ರೀಡಾಪಟು ಸತೀಶ್ ಖಾರ್ವಿ, ಪಂಚಾಯತ್ ಅಭಿವೃದ್ದಿ ಅಧಿಕಾರಿ ರುಕ್ಕನ್ ಗೌಡ, ಕರುಣ್ ಶೆಟ್ಟಿ ಕಾನಕಿ ಮತ್ತು ಅರುಣ್ ಕುಮಾರ್ ಶೆಟ್ಟಿ , ಸ್ಥಳೀಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪಡುಬಿದ್ರಿ ರೋಟರಿ ಕ್ಲಬ್ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ

Posted On: 05-06-2021 10:17PM

ಪಡುಬಿದ್ರಿ : ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪಡುಬಿದ್ರಿ ರೋಟರಿ ಕ್ಲಬ್ ವತಿಯಿಂದ ಪಡುಬಿದ್ರಿ ಗ್ರಾಮ ಪಂಚಾಯತಿಯ ವಠಾರದಲ್ಲಿ ಗಿಡಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಪಡುಬಿದ್ರಿ ರೋಟರಿ ಕ್ಲಬ್ ನ ಅಧ್ಯಕ್ಷ ರೊ. ಕೇಶವ ಸಿ ಸಾಲಿಯಾನ್, ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರವಿ ಶೆಟ್ಟಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ರೋ.ಯಶೋದ, ರೋಟರಿ ಕಾರ್ಯದರ್ಶಿ ರೋ. ನಿಯಾಜ್, ರೋಟರಿ ಝೋನಲ್ ಕೋ ಆರ್ಡಿನೇಟರ್ ರೋ.ರಮೀಜ್ ಹುಸೈನ್, ಪಂಚಾಯತ್ ಕಾರ್ಯದರ್ಶಿಯಾದ ರೂಪಾಲತಾ, ಸದಸ್ಯರಾದ ಜ್ಯೋತಿ ಮೆನನ್ ಮತ್ತಿತರು ಉಪಸ್ಥಿತರಿದ್ದರು.

ಉಡುಪಿ : ಲಾಕ್‌ಡೌನ್‌ನ್ನು ಮುಂದುವರೆಸುವುದೇ ಅಥವಾ ಬೇಡವೇ ? - ಮಂಗಳವಾರ ನಿರ್ಧಾರ

Posted On: 05-06-2021 09:58PM

ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಜಿಲ್ಲೆಯಲ್ಲಿ 50 ಕ್ಕಿಂತ ಹೆಚ್ಚು ಕೋವಿಡ್ ಪ್ರಕರಣಗಳಿರುವ ಗ್ರಾಮ ಹಾಗೂ ಅಂತಹ ಪಂಚಾಯತ್‌ಗಳ ಲಗತ್ತಾಗಿರುವ ಸುಮಾರು 40 ಗ್ರಾಮ ಪಂಚಾಯತ್‌ಗಳನ್ನು ಈಗಾಗಲೇ ಸಂಪೂರ್ಣವಾಗಿ ಲಾಕ್‌ಡೌನ್ ಆದೇಶ ಮಾಡಲಾಗಿದೆ.

ಇಂತಹ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿರುವ ಸಾರ್ವಜನಿಕರು ಸೋಮವಾರ (07-06-2021) ಮತ್ತು ಮಂಗಳವಾರ (08-06-2021) ದಂದು ಪೂರ್ವಾಹ್ನ 6 ಗಂಟೆಯಿಂದ ಪೂರ್ವಾಹ್ನ 10 ಗಂಟೆವರೆಗೆ ತಮಗೆ ಅಗತ್ಯವಾಗಿ ಬೇಕಾಗಿರುವ ಆಹಾರ ಸಾಮಾಗ್ರಿಗಳನ್ನು ಖರೀದಿ ಮಾಡಲು ಅನುಕೂಲವಾಗುವಂತೆ ವಿನಾಯಿತಿ ನೀಡಲಾಗಿರುತ್ತದೆ.

ಸದ್ರಿ ಗ್ರಾಮ ಪಂಚಾಯತ್‌ಗಳಲ್ಲಿ ಲಾಕ್‌ಡೌನ್‌ನ್ನು ಮುಂದುವರೆಸುವುದೇ ಅಥವಾ ಬೇಡವೇ ಎಂಬ ಬಗ್ಗೆ ದಿನಾಂಕ ಮಂಗಳವಾರ (08-06-2021) ದಂದು ನಿರ್ಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಬಲಿಷ್ಠ ಬಿಲ್ಲವೆರ್ ವಾಟ್ಸಾಪ್ ತಂಡದಿಂದ 22 ನೇ ಸೇವಾ ಯೋಜನೆ

Posted On: 05-06-2021 09:37PM

ಮಂಗಳೂರು : ಬೆಳ್ತಂಗಡಿಯ ಓಡಿಲ್ನಾಳ ಗ್ರಾಮದ ಮೈರಲ್ಕೆ ನಿವಾಸಿ ಸುರೇಶ್ ಪೂಜಾರಿ (44 ವರ್ಷ) ಇವರು ವೃತ್ತಿಯಲ್ಲಿ ಅಟೋಚಾಲಕರಾಗಿದ್ದು, ತೀರಾ ಕಷ್ಟದ ಜೀವನವನ್ನು ನಡೆಸುತ್ತಿದ್ದಾರೆ.

ಮನೆಯಲ್ಲಿ ಪತ್ನಿ ಮತ್ತು ಎರಡು ಹೆಣ್ಣು ಮಕ್ಕಳೊಂದಿಗೆ ವಾಸ ಮಾಡುತ್ತಿದ್ದ ಇವರಿಗೆ ಈ ಕೊರೊನ ಎನ್ನುವ ಮಹಾ ಮಾರಿಯ ಲಾಕ್ ಡೌನ್ ಸಂದರ್ಭದಲ್ಲಿ ಅನಾರೋಗ್ಯಕ್ಕೆ (ಮಿದುಳಿನ ರಕ್ತಸ್ರಾವ) ಒಳಗಾಗಿದ್ದು "ಬಲಿಷ್ಠ ಬಿಲ್ಲವೆರ್" ವಾಟ್ಸಾಪ್ ತಂಡದ ದಾನಿಗಳ ಸಹಕಾರದಿಂದ ಇವರ ಚಿಕಿತ್ಸೆಗಾಗಿ 10,000₹ ರೂಪಾಯಿಗಳನ್ನು ಬೆಳ್ತಂಗಡಿಯ ಮಾಜಿ ಶಾಸಕರಾದ ವಸಂತ ಬಂಗೇರರವರ ಮೂಲಕ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಬಲಿಷ್ಠ ಬಿಲ್ಲವೆರ್ ತಂಡದ ಮುಖ್ಯಸ್ಥರುಗಳಾದ ಸನತ್ ಅಂಚನ್, ಸಂಪತ್ ಅಂಚನ್ ಹಾಗೂ ಸದಸ್ಯರುಗಳಾದ ಸಂತೋಷ್ ಅಂಚನ್, ಹೇಮಂತ್ ಕೋಟ್ಯಾನ್, ರಾಜೇಶ್ ಪೂಜಾರಿ ಮದ್ದಡ್ಕ, ಸಂದೀಪ್ ಸುವರ್ಣ ಕುಕ್ಕೇಡಿ, ತಿಲಕ್ ಕೋಟ್ಯಾನ್ ಮತ್ತು ಪ್ರಜ್ಞಾ ಓಡಿಲ್ನಾಳ ಉಪಸ್ಥಿತರಿದ್ದರು.

ಬಳಕುಂಜೆ : ಪರಿಸರ ದಿನಾಚರಣೆ

Posted On: 05-06-2021 09:28PM

ಕಾಪು : ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಬಳಕುಂಜೆ ಗ್ರಾಮದಲ್ಲಿ ಗಿಡನೆಡುವ ಕಾರ್ಯಕ್ರಮ ಜರುಗಿತು.

ಬಳಕುಂಜೆ ಗ್ರಾಮ ಪಂಚಾಯತ್ ಬಳಿಯ ಅಂಗನವಾಡಿ ಕೇಂದ್ರದ ಆವರಣದಲ್ಲಿ ಪಂಚಾಯತ್ ಅಧ್ಯಕ್ಷೆ ಮಮತಾ ಡಿ.ಪೂಂಜ ಅವರು ಗಿಡ ನೆಡುವ ಮೂಲಕ ಚಾಲನೆ ನೀಡಿದರು.

ಜಲಜೀವನ್ ಮಿಷನ್ ಯೋಜನೆಯ ಜಿಲ್ಲಾ ವ್ಯವಸ್ಥಾಪಕ ಪ್ರಸಾದ್ ಕುಮಾರ್, ಜೆಜೆಎಂ ತಂಡದ ನಾಯಕ ಶಿವರಾಮ್ ಸಹಕರಿಸಿದರು. ತಂಡದ ಸಿಬ್ಬಂದಿಗಳಾದ ದಯಾನಂದ, ಫಲಹಾರೇಶ್, ಚರಣ್, ಅಶ್ವಿನ್, ಮಹಾಂತೇಶ್ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್.ಬಿ, ಕಾರ್ಯದರ್ಶಿ ಮಂಜುನಾಥ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕಾಪು : ಶ್ರೀ ದೇವಿ ಸ್ಪೋರ್ಟ್ಸ್ ಅಂಡ್ ಕಲ್ಚರ್ ಕ್ಲಬ್ ಮತ್ತು ಅರಣ್ಯ ಇಲಾಖೆಯ ಸಹಯೋಗದಲ್ಲಿ ಗಿಡ ನೆಡುವ ಕಾರ್ಯಕ್ರಮ

Posted On: 05-06-2021 09:22PM

ಕಾಪು : ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಇಂದು ಕಾಪು ಶ್ರೀ ಕಲ್ಕುಡ ದೈವಸ್ಥಾನ ವಠಾರದಲ್ಲಿ ಶ್ರೀ ದೇವಿ ಸ್ಪೋರ್ಟ್ಸ್ ಅಂಡ್ ಕಲ್ಚರ್ ಕ್ಲಬ್ ಕಾಪು ಮತ್ತು ಕಾಪು ಅರಣ್ಯ ಇಲಾಖೆಯ ಸಹಯೋಗದಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಸಲಾಯಿತು .

ಈ ಸಂದರ್ಭದಲ್ಲಿ ಕಾಪು ಶ್ರೀ ದೇವಿ ಸ್ಪೋರ್ಟ್ಸ್ ಅಂಡ್ ಕಲ್ಚರ್ ಕ್ಲಬ್ನ ಅಧ್ಯಕ್ಷರು ಅನಿಲ್ ಕುಮಾರ್ ರವರು ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಶುಭಕೋರಿದರು.

ಅರಣ್ಯ ಅಧಿಕಾರಿ ಶ್ರೀ ಜೀವನ್ ದಾಸ್ ಶೆಟ್ಟಿ. ಮಂಜುನಾಥ್ ಮತ್ತು ಶ್ರೀದೇವಿ ಕ್ಲಬ್ ನ ಕಾರ್ಯದರ್ಶಿ ಶ್ರೀನಾಥ್ ಆಚಾರ್ಯ, ಕೋಶಾಧಿಕಾರಿ ಅನಿಲ್ ಪಾಡಿಮನೆ, ಶ್ರೀ ಧೂಮಾವತಿ ಯುವ ಸಮಿತಿಯ ಅಧ್ಯಕ್ಷರು ಶ್ರೀ ರಮಾನಾಥ್ ಶೆಟ್ಟಿ ಮತ್ತು ಶ್ರೀ ದೇವಿ ಕ್ಲಬ್ ನ ಸದಸ್ಯರು ಉಪಸ್ಥಿತರಿದ್ದರು.

ಉಡುಪಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಸಂಸ್ಥೆಯ ವತಿಯಿಂದ ಲಾಕ್ಡೌನ್ ಸಂದರ್ಭದಲ್ಲಿ ವಿವಿಧೆಡೆ ರೇಷನ್ ಕಿಟ್ ವಿತರಣೆ

Posted On: 05-06-2021 09:16PM

ಕಾಪು : ಹನೆಹಳ್ಳಿ, ಲಕ್ಷ್ಮೀ ನಗರ, ಮಿಷನ್ ಚರ್ಚ್, ಕಾಪು ಪುರಸಭೆ, ಟೀಮ್ ಸಮಗ್ರ ಉಡುಪಿ, ಚಿತ್ಪಾಡಿ ಅರ್ಹ ಫಲಾನುಭವಿ 162 ಕುಟುಂಬಕ್ಕೆ ಉಡುಪಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಸಂಸ್ಥೆಯ ವತಿಯಿಂದ ಪರಿಸರದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಲಾಕ್ಡೌನ್ ಸಂದರ್ಭದಲ್ಲಿ ರೇಷನ್ ಕಿಟ್ ವಿತರಿಸಲಾಯಿತು. ಜಿಲ್ಲಾದ್ಯಂತ 3600 ವರೆಗೆ ಕಿಟ್ ಗಳನ್ನು ನೀಡಲಾಗಿದೆ.

ಈ ಸಂದರ್ಭದಲ್ಲಿ ಹನೆಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಸಿಂ ಬಾರ್ಕೂರು ಇವರ ಮನವಿ ಮೇರೆಗೆ ಪಂಚಾಯತ್ ಅಧ್ಯಕ್ಷರಾದ ಚಂದ್ರಶೇಖರ್ ಶೆಟ್ಟಿರವರಿಗೆ ಕಿಟ್ ಹಸ್ತಾಂತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ರಮಾನಂದ ಶೆಟ್ಟಿ,ಪಿ.ಡಿ.ಓ ಅರುಂಧತಿ ಸದಸ್ಯರು ಉಪಸ್ಥಿತರಿದ್ದರು. ಯು.ಬಿ.ಎಂ ಚರ್ಚ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಡ್ನ ಜತ್ತನ್ನರವರ ಮನವಿ ಮೇರೆಗೆ ಕಿಟ್ ಹಸ್ತಾಂತರಿಸಲಾಯಿತು.ಈ ಸಂದರ್ಭದಲ್ಲಿ ಫಾ.ರೇ ಸಂತೋಷ್, ಫಾ.ರೇ.ಸ್ಟಿಫನ್ ಮಂದಿ, ಫಾ.ರೇ.ಮನೋಜ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಟೀಮ್ ಸಮಗ್ರ ತಂಡ ಉಡುಪಿ ಜಿಲ್ಲೆ ಇದರ ಮನವಿಯ ಮೇರೆಗೆ ಅಗತ್ಯವಿರುವ ಕೆಲವು ಕುಟುಂಬಗಳಿಗೆ ರೇಶನ್ ಕಿಟ್ ಗಳನ್ನು ಶನಿವಾರ ವಿತರಿಸಲಾಯಿತು. ಟೀಮ್ ಸಮಗ್ರ ತಂಡ ಉಡುಪಿ ಜಿಲ್ಲೆ ಪರವಾಗಿ ಮೈಕಲ್ ರೊಡ್ರಿಗಸ್ ಮತ್ತು ಅಂಕಿತ್ ಶೆಟ್ಟಿ ಅವರು ಕಿಟ್ ಗಳನ್ನು ಪಡೆದು ಅಗತ್ಯ ಕುಟುಂಬಗಳಿಗೆ ತಲುಪಿಸುವ ವ್ಯವಸ್ಥೆ ಮಾಡಿದರು. ತೆಂಕನಿಡಿಯೂರು ಪಂಚಾಯತ್ ಲಕ್ಷೀನಗರ ವಾರ್ಡ್ ನ ಸದಸ್ಯರಾದ ಶರತ್ ಶೆಟ್ಟಿ ಬೆಲ್ಕಳೆ ಮನವಿ ಮೇರೆಗೆ ಕಿಟ್ ಹಸ್ತಾಂತರಿಸಲಾಯಿತು,ಈ ಸಂದರ್ಭದಲ್ಲಿ ವೆಂಕಟೇಶ್ ಕುಲಾಲ್, ರವಿರಾಜ್, ಸತೀಶ್ ಕುಲಾಲ್ ಉಪಸ್ಥಿತರಿದ್ದರು.

ಕಾಪು ಪುರಸಭಾ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷರಾದ ಅನಿಲ್ ಕುಮಾರ್ ಮನವಿ ಮೇರೆಗೆ ಮತ್ತು ಸ್ಪಂದನ ವಾಹಿನಿಯ ಪ್ರಶಾಂತ್ ಸುವರ್ಣ ಮನವಿ ಮೇರೆಗೆ ಸಿಬ್ಬಂದಿ ವರ್ಗದವರಿಗೆ,ಚಿತ್ಪಾಡಿಯಲ್ಲಿ ಶೋಭಾ ಶೆಟ್ಟಿ ಮನವಿ ಮೇರೆಗೆ ಕಿಟ್ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಉಡುಪಿ ಮಲಬಾರ್ ಚಾರಿಟಿ ಉಸ್ತುವಾರಿ ತಂಝೀಮ್ ಶಿರ್ವ, ರಾಘವೇಂದ್ರ ಭಟ್, ತಸ್ಲಿಮ್, ಉಪಸ್ಥಿತರಿದ್ದರು.

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ಜಾರ್ಜ್ ಫೆರ್ನಾಂಡಿಸ್ ರ 91 ನೇ ಹುಟ್ಟು ಹಬ್ಬದ ಸಂಸ್ಮರಣೆ

Posted On: 05-06-2021 03:27PM

ಮುಂಬಯಿ : ಮುಂಬಯಿ ಮಹಾನಗರದಲ್ಲಿ ನಾಡಿನ ಅವಿಭಜಿತ ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಯ ವಿವಿಧ ಜಾತಿ ಬಾಂಧವರು ಶತಮಾನದ ಹಿಂದೆಯೇ ತಮ್ಮ ತಮ್ಮ ಜಾತೀಯ ಸಂಘಟನೆಯನ್ನು ಕಟ್ಟಿ ಮುಂಬಯಿಯಲ್ಲಿ ಮಾತ್ರವಲ್ಲ ನಾಡಿನಲ್ಲಿಯೂ ಸಮಾಜ ಸೇವೆ ಮಾಡುತ್ತಾ ಬರುವುದರೊಂದಿಗೆ ನಾಡಿನ ಹಾಗೂ ಅವರವರ ಜಾತೀಯ ಸಂಸ್ಕೃತಿಯನ್ನು ಹೊರನಾಡಿನಲ್ಲಿಯೂ ಉಳಿಸಿ ಬೆಳೆಸುತ್ತಾ ಬಂದಿರುವರು. ಮಹಾನಗರದ ವಿವಿಧ ಜಾತೀಯ ಸಂಘಟನೆಗಳ ಮುಖಂಡರು, ರಾಜಕಾರಣಿಗಳು, ಧಾರ್ಮಿಕ ನೇತಾರರು ಹಾಗೂ ವಿವಿಧ ಗಣ್ಯರ ಬೆಂಬಲದೊಂದಿಗೆ, ಕರಾವಳಿಯ ಜಿಲ್ಲೆಗಳ ಪ್ರಗತಿಗಾಗಿ ಕಳೆದ ಇಪ್ಪತ್ತು ವರ್ಷಗಳಿಂದ ಯಶಸ್ವಿ ಹೋರಾಟ ನಡೆಸುತ್ತಾ ಬಂದಿರುವ, ಏಕೈಕ ಸರಕಾರೇತರ ಸಂಘಟನೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಗೆ ಆರಂಭದಿಂದ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದ, ಕೊಂಕಣ ರೈಲ್ವೆಯ ಶಿಲ್ಪಿ ಎಂದೇ ಗುರುತಿಸಿಕೊಂಡಿರುವ , ಮಾಜಿ ಕೇಂದ್ರ ಸಚಿವ ದಿ. ಜಾರ್ಜ್ ಫೆರ್ನಾಂಡೀಸ್ ಅವರ ಜನ್ಮ ದಿನವನ್ನು ಪ್ರತೀ ವರ್ಷ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯು ಸಾರ್ವಜನಿಕ ಜೀವನದಲ್ಲಿನ ಸಾಧಕರೊಬ್ಬರನ್ನು ಗುರುತಿಸಿ ಪ್ರಶಸ್ತಿ ನೀಡಿ ಆಚರಿಸುತ್ತಾ ಬಂದಿದ್ದು ಇದೀಗ ಜಗತ್ತಿಗೇ ಆತಂಕವನ್ನುಂಟುಮಾಡಿದ ಮಹಾಮಾರಿ ಕೊರೋನಾದ ಬಗೆಗಿನ ಸರಕಾರದ ಲಾಕ್ ಡೌನ್ ನಿರ್ಬಂಧಗಳಿಂದಾಗಿ ಈ ವರ್ಷವೂ ದಿ. ಶ್ರೀ ಜಾರ್ಜ್ ಫೆರ್ನಾಂಡಿಸ್ ರ 91 ನೇ ಹುಟ್ಟುಹಬ್ಬದ ಸಂಸ್ಮರಣೆ ಸಮಾರಂಭವನ್ನು ವೆಬಿನಾರ್ ಮೂಲಕ ಆಚರಿಸಲಾಯಿತು.

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಮಾರ್ಗದರ್ಶಕರೂ, ದೇಶದ ಅಪ್ರತಿಮ ಜನ ಮೆಚ್ಚಿದ ನಾಯಕರೂ, ಕಾರ್ಮಿಕ ಮುಖಂಡರೂ ಮತ್ತು ಮಾಜಿ ರಕ್ಷಣಾ ಮಂತ್ರಿಯಾಗಿದ್ದ ಶ್ರೀ ಜಾರ್ಜ್ ಫೆರ್ನಾಂಡಿಸ್ ಅವರು 2 ವರ್ಷಗಳ ಹಿಂದೆ ಧೈವಾಧೀನರಾಗಿದ್ದು ಅವರ 91 ನೇ ಹುಟ್ಟುಹಬ್ಬದ ಸಂಸ್ಮರಣೆಯನ್ನು ಜೂ. 3 ರಂದು ಜಾಲತಾಣದಲ್ಲಿ ನಡೆಸಿದ ಸಭೆಯಲ್ಲಿ ಆಚರಿಸಲಾಗಿದ್ದು ಪ್ರಾರಂಭದಲ್ಲಿ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಹಿರಿಯಡ್ಕ ಮೋಹನದಾಸ್ ಅವರು ಸರ್ವರನ್ನೂ ಸ್ವಾಗತಿಸಿ ಸಮಿತಿಯ ದಿವ್ಯ ಚೇತನರಾಗಿದ್ದ ದಿವಂಗತ ಜಾರ್ಜ್ ಫೆರ್ನಾಂಡಿಸ್ ಅವರ ಹುಟ್ಟುಹಬ್ಬದ ಸಾಂಕೇತಿಕ ಆಚರಣೆಯ ಬಗ್ಗೆ ತಿಳಿಸಿದರು. ಅಲ್ಲದೆ ಜಾರ್ಜ್ ಅವರು ಸಮಿತಿ ಸಮಿತಿಯೊಂದಿಗೆ ಇದ್ದ ಒಡನಾಟವನ್ನು ಅವರು ನೀಡಿದ ಬೆಂಬಲದಿಂದ ಸಮಿತಿ ಮಾಡಿದ ಸಾಧನೆಗಳನ್ನು ತಿಳಿಸಿದರು.

ಜಾರ್ಜ್ ಫೆರ್ನಾಂಡಿಸ್ ರ ನಿಕಟವರ್ತಿಗಳೂ, ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕರೂ ಮತ್ತು ಅಧ್ಯಕ್ಷರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿ ಯವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಜಾರ್ಜ್ ಫೆರ್ನಾಂಡಿಸ್ ರಂತಹ ವ್ಯಕ್ತಿ ನಮ್ಮ ದೇಶಕ್ಕೆ ಸದ್ಯಕ್ಕೆ ಸಿಗಲು ಅಸಾಧ್ಯ. ಇವರು ನಮ್ಮ ಜಿಲ್ಲೆಯವರಾಗಿದ್ದು ಇವರ ನೆನಪು ನಮ್ಮ ಜಿಲ್ಲೆಯಲ್ಲಿ ಶಾಶ್ವತವಾಗಿ ಇರಬೇಕಾಗಿದೆ . ಇಂದು ನಡೆದ ಸಭೆಯಲ್ಲಿ ಮಾತನಾಡಿದ ಜಾತೀಯ ಸಂಘಟನೆಗಳ ಎಲ್ಲಾ ಅಧ್ಯಕ್ಷರುಗಳು /ಪ್ರತಿನಿಧಿಗಳು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪುನಃರ್ನಾಮಕರಣಕ್ಕೆ ಬೆಂಬಲ ನೀಡಿದ್ದು ಮಾತ್ರವಲ್ಲದೆ ಮಂಗಳೂರು ವಿಮಾನ ನಿಲ್ಧಾಣಕ್ಕೆ ”ಜಾರ್ಜ್ ಫೆರ್ನಾಂಡಿಸ್ ಅಂತರಾಷ್ಟ್ರೀಯ ವಿಮಾನ ನಿಲ್ಧಾಣ” ಎಂಬುದಾಗಿ ನಾಮಕರಣ ಮಾಡಲು ಅನೇಕ ಗಣ್ಯರು, ರಾಜಕಾರಿಣಿಗಳು ಪಕ್ಷಬೇಧವಿಲ್ಲದೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. ಈ ಬಗ್ಗೆ ಸಮಿತಿಯು ಸೂಕ್ತ ಠರಾವು ವನ್ನು ಮಾಡಿದೆ. ಈಗಾಗಲೇ ಮಂಗಳೂರು ವಿಮಾನ ನಿಲ್ಧಾಣದ ಹೆಸರನ್ನು ”ಜಾರ್ಜ್ ಫೆರ್ನಾಂಡಿಸ್ ಅಂತರಾಷ್ಟ್ರೀಯ ವಿಮಾನ ನಿಲ್ಧಾಣ” ಎಂಬುದಾಗಿ ಪುನರ್ ನಾಮಕರಣ ಮಾಡಲು ಜಯಶ್ರಿಕೃಷ್ಣ ಪರಿಸರ ಪ್ರೇಮಿ ಸಮಿತಿಯ ಪರವಾಗಿ ಕೇಂದ್ರ ಸರಕಾರವನ್ನು ಸಂಪರ್ಕಿಸಲಾಗಿದೆ. ಈ ಬಗ್ಗೆ ಕಳೆದ ತಿಂಗಳ ಹಿಂದೆ ಪ್ರಧಾನ ಮಂತ್ರಿಯವರ ಕಾರ್ಯಾಲಯವು ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ವ್ಯವಹಾರ ನಡೆಸಿದ್ದು ಅದರ ಪ್ರತಿಯನ್ನು ನಮಗೆ ಕಳುಹಿಸಿದ್ದಾರೆ. ಪ್ರಧಾನ ಮಂತ್ರಿಯವರ ಕಾರ್ಯಾಲಯದಿಂದ ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಒಂದೂವರೆ ತಿಂಗಳ ಮೊದಲೇ ಪತ್ರ ಬರೆಯಲಾಗಿದ್ದು ಇದುವರೆಗೆ ಯಾವುದೇ ಕ್ರಮ ಕೈಕೊಳ್ಳದ ಕಾರಣ ನಾವು ಕರ್ನಾಟಕದ ಮುಖ್ಯ ಮಂತ್ರಿಗಳಾದ ಮಾನ್ಯ ಬಿ. ಎಸ್. ಯಡಿಯೂರಪ್ಪ ಮತ್ತು ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದು, ಪ್ರಧಾನ ಮಂತ್ರಿಯವರ ಕಾರ್ಯಾಲಯದ ಪತ್ರದಂತೆ ಮಾನ್ಯ ಮುಖ್ಯಮಂತ್ರಿಯವರಲ್ಲಿ ಚರ್ಚಿಸಿ ಮಂಗಳೂರು ವಿಮಾನ ನಿಲ್ಧಾಣದ ಹೆಸರನ್ನು ”ಜಾರ್ಜ್ ಫೆರ್ನಾಂಡಿಸ್ ಅಂತರಾಷ್ಟ್ರೀಯ ವಿಮಾನ ನಿಲ್ಧಾಣ” ಎಂಬುದಾಗಿ ನಾಮಕರಣ ಮಾಡಲು ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಯವರಲ್ಲಿ ವಿನಂತಿಸಲಾಗಿದ್ದು ಕೊರೋನಾ ಮುಗಿದಂತೆ ಮತ್ತೆ ಈ ಕಾರ್ಯವನ್ನು ಅಭಿಮಾನಿಗಳ ಸಹಕಾರದಿಂದ ನಾವು ಸ್ವತ: ಸರಕಾರವನ್ನು ಸಂಪರ್ಕಿಸಿಕೊಂಡು ಮುಂದುವರಿಸಲಿದ್ದೇವೆ ಎಂದು ಜಯಕೃಷ್ಣ ಶೆಟ್ಟಿ ಯವರು ತಿಳಿಸಿದರು. ಸಮಿತಿಯ ಮಾಜಿ ಅಧ್ಯಕ್ಷರುಗಳಾದ ನ್ಯಾ. ಪ್ರಕಾಶ್ ಎಲ್. ಶೆಟ್ಟಿ, ವಿಶ್ವನಾಥ ಮಾಡಾ, ಹರೀಶ್ ಕುಮಾರ್ ಶೆಟ್ಟಿ, ಧರ್ಮಪಾಲ್ ಯು. ದೇವಾಡಿಗ, ಉಪಾಧ್ಯಕ್ಷರುಗಳಾದ ಎಲ್. ವಿ. ಅಮೀನ್, ಸಿ. ಎ. ಐ. ಆರ್. ಶೆಟ್ಟಿ, ಪಿ .ಡಿ. ಶೆಟ್ಟಿ, ಜಿ. ಟಿ. ಆಚಾರ್ಯ, ಬಂಟ್ಸ್ ಸಂಘ ಮುಂಬೈಯ ಗೌರವ ಪ್ರಧಾನ ಕಾರ್ಯದರ್ಶಿ ಡಾ. ಆರ್. ಕೆ ಶೆಟ್ಟಿ, ಬಂಟ್ಸ್ ಚೇಂಬರ್ ಆಪ್ ಕಾಮರ್ಸ್ ನ ಕಾರ್ಯಾಧ್ಯಕ್ಷ, ಕೆ ಸಿ. ಶೆಟ್ಟಿ, ಬಿಲ್ಲವರ ಅಸೋಸಿಯೇಷನ್ ಮುಂಬಯಿ ನ ಅಧ್ಯಕ್ಷರಾದ ಹರೀಶ್ ಅಮೀನ್, ವಿದ್ಯಾದಾಯಿನಿ ಸಭಾದ ಗೌರವ ಪ್ರಧಾನ ಕಾರ್ಯದರ್ಶಿ ಚಿತ್ರಾಪು ಕೆ. ಎಮ್. ಕೋಟ್ಯಾನ್, ಕುಲಾಲ ಸಂಘ ಮುಂಬಯಿಯ ಅಧ್ಯಕ್ಷರಾದ ದೇವದಾಸ್ ಕುಲಾಲ್, ಭಂಡಾರಿ ಸೇವಾ ಸಂಘ ಮುಂಬಯಿಯ ಅಧ್ಯಕ್ಷರಾದ ಅಡ್ವೋಕೇಟ್ ಆರ್. ಎಮ್. ಭಂಡಾರಿ, ದೇವಾಡಿಗ ಸಂಘ ಮುಂಬಯಿಯ ಅಧ್ಯಕ್ಷರಾದ ರವಿ ಎಸ್. ದೇವಾಡಿಗ, ಕನ್ನಡಿಗರ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಇದರ ಅಧ್ಯಕ್ಷರಾದ ಡಾ. ಸುರೇಂದ್ರಕುಮಾರ್ ಹೆಗ್ಡೆ, ಸಮಿತಿಯ ಗೌರವ ಕಾರ್ಯದರ್ಶಿ ಪ್ರೊಫೆಸರ್ ಶಂಕರ್ ಉಡುಪಿ, ಸಮಿತಿಯ ವಕ್ತಾರ ಹಿರಿಯ ಪತ್ರಕರ್ತರಾದ ದಯಾಸಾಗರ ಚೌಟ, ಮಾಲತಿ ಮೊಯ್ಲಿ, ಸುರೇಖಾ ದೇವಾಡಿಗ, ಕೇಶವ ಆಳ್ವ, ದುಬೈಯ ಹಿರಿಯ ಉದ್ಯಮಿ ಫ್ರಾಂಕ್ ಫೆರ್ನಾಂಡಿಸ್ , ತೋನ್ಸೆ ಶೇಖರ ಗುಜ್ಜರಬೆಟ್ಟು, ಸಮಿತಿಯ ಗೌರವ ಕೋಶಾಧಿಕಾರಿ ಸುರೇಂದ್ರ ಸಾಲಿಯಾನ್. ಗೌರವ ಕಾರ್ಯದರ್ಶಿ ಹ್ಯಾರಿ ಸಿಕ್ವೆರ. ಮಾಜಿ ಗೌರವ ಕೋಶಾಧಿಕಾರಿ ಜಯಂತ್ ಕೆ. ಶೆಟ್ಟಿ, ರಂಜನಿ ಆರ್. ಮೊಯಿಲಿ, ವಿಠ್ಠಲ್ ಆಳ್ವ, ಈಶ್ವರ್ ಐಲ್, ಮನೋರಂಜನ ಶೆಟ್ಟಿ, ಫ್ರೆಡ್ ಡಿಸೋಜಾ, ಎಂ. ಎನ್. ಕರ್ಕೇರಾರವರು ವೆಬಿನಾರ್ ಸಭೆಯಲ್ಲಿ ಉಪಸ್ಥಿತರಿದ್ದು ಸಮಿತಿಯ ನಿರ್ಧಾರಕ್ಕೆ ಬೆಂಬಲ ವ್ಯಕ್ತ ಪಡಿಸಿದರು .

ಸಮಿತಿಯ ಉಪಾಧ್ಯಕ್ಷರೂ ಆದ ನಿತ್ಯಾನಂದ ಡಿ. ಕೋಟ್ಯಾನ್ ರವರು ಪ್ರಾರಂಭದಲ್ಲಿ ಮಾತನಾಡುತ್ತ ಸಮಿತಿಯ ಕಳೆದ ಎರಡು ಧಶಕಗಳಿಗೂ ಅಧಿಕ ಕಾಲದ ಕಾರ್ಯ ಸಾಧನೆಗಳಲ್ಲಿ ಜಾರ್ಜ್ ಫೆರ್ನಾಂಡಿಸ್ ರ ಮಾರ್ಗದರ್ಶನ ಮತ್ತು ಬೆಂಬಲದ ಬಗ್ಗೆ ಸವಿಸ್ತಾರವಾಗಿ ಮಾತನಾಡುತ್ತಾ ನಮ್ಮ ಜಿಲ್ಲೆಯಲ್ಲಿ ಹುಟ್ಟಿ ದೇಶದ ಒಬ್ಬ ಬಲಿಷ್ಠ ರಾಜಕಾರಣಿಯಾಗಿ. ಆದರ್ಶ ರಾಜಕೀಯ ಜೀವನವನ್ನು ಮಾಡಿದವರು ಅವರ ಹೆಸರು ದೇಶದಲ್ಲಿ ಶಾಶ್ವತವಾಗಿ ಉಳಿಯಬೇಕಾಗಿದೆ ಎಂದು ಅವರಿಗೆ ಗೌರವಾರ್ಪಣೆಗೈದರು. ಸಭೆಯಲ್ಲಿ ಉಪಸ್ಥಿತರಿದ್ದ ಸರ್ವ ಮುಖಂಡರು ಶ್ರೀ ಜಾರ್ಜ್ ಫೆರ್ನಾಂಡಿಸ್ ರ ಜೀವನ ಚರಿತ್ರೆ, ಕಾರ್ಯಸಾಧನೆ, ನಾಯಕತ್ವದ ಗುಣಗಳು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಸುಪುತ್ರ, ದೇಶ ಕಂಡ ಮಹಾನ್ ರಾಜಕಾರಿಣಿ, ಹಾಗೂ ಮರೆಯಲಾಗದ ದಿವ್ಯ ಚೇತನದ ಬಗ್ಗೆ ಮಾತನಾಡಿ ಗೌರವ ಸಲ್ಲಿಸಿದರು ಜಾಲತಾಣದಲ್ಲಿ ಸಭೆ ಯಶಸ್ವಿಯಾಗುವಲ್ಲಿ ಉಡುಪಿಯ ತೇಜಸ್ವಿ ಶಂಕರ್ ಸಹಕರಿಸಿದ್ದರು.