Updated News From Kaup

ಮನೆ ಮನೆಗೆ ಗಂಗೆ ಯೋಜನೆಯ ಜೀವನಾಡಿ ನೀರು ಮತ್ತು ನೈರ್ಮಲ್ಯ ಸಮಿತಿ: ಭವಾನಿಶಂಕರ್

Posted On: 18-07-2021 02:50PM

ಸುಳ್ಯ : ಪ್ರತೀ ಮನೆಗೆ ಶುದ್ಧ ಹಾಗೂ ಸುರಕ್ಷಿತ ಕುಡಿಯುವ ನೀರು ಪೂರೈಕೆ ಮಾಡಲು ಹಾಗೂ ಅದರ ಯಶಸ್ವಿ ಅನುಷ್ಠಾನದಲ್ಲಿ ನೀರು ಮತ್ತು ನೈರ್ಮಲ್ಯ ಸಮಿತಿ ಜೀವನಾಡಿಯಂತೆ ಎಂದು ಸುಳ್ಯ ತಾಲ್ಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ಹೇಳಿದರು. ಸುಳ್ಯ ತಾಲ್ಲೂಕು ಪಂಚಾಯತಿಯಲ್ಲಿ ಸುಳ್ಯ ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳ ನೀರು ಮತ್ತು ನೈರ್ಮಲ್ಯ ಸಮಿತಿ ಸದಸ್ಯರಿಗೆ ನಡೆದ ವಿಶೇಷ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಶಿರ್ವ : ಪಂಚಾಯತ್ ಗ್ರಾಮಸಭೆಗೆ ಇದೇ ಮೊದಲ ಬಾರಿಗೆ ಗ್ರಾಮಸ್ಥರಿಗೆ ಆನ್ ಲೈನ್ ಮೂಲಕ ಭಾಗವಹಿಸುವ ಅವಕಾಶ

Posted On: 18-07-2021 12:31PM

ಕಾಪು : ಪಂಚಾಯತ್ ರಾಜ್ ವ್ಯವಸ್ಥೆಯಡಿ ರಾಜ್ಯದಲ್ಲೆ ಪ್ರಥಮ ಎಂಬಂತೆ ಗ್ರಾಮ ಸಭೆಯ ನೇರ ಪ್ರಸಾರ - ದೇಶ ವಿದೇಶದಲ್ಲಿರುವ ಗ್ರಾಮಸ್ಥರಿಗೆ ಗ್ರಾಮ ಸಭೆಯನ್ನು ವೀಕ್ಷಿಸುವ ಅವಕಾಶವನ್ನು ಕಲ್ಪಿಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶಿರ್ವ ಗ್ರಾಮ ಪಂಚಾಯತ್ ನ 2021-22 ಸಾಲಿನ ಪ್ರಥಮ ಗ್ರಾಮ ಸಭೆಯು ದಿನಾಂಕ 19.07.2021 ರ ಸೋಮವಾರದಂದು ಬೆಳಿಗ್ಗೆ 10.30 ಕ್ಕೆ ಶಿರ್ವ ಸಾರ್ವಜನಿಕ ಗಣೇಶೋತ್ಸವ ವೇದಿಕೆಯ ಸಮೀಪದ ಮಹಿಳಾ ಸೌಧದಲ್ಲಿ ನಡೆಯಲಿದೆ.

ಕೃಷಿ ಸಂಸ್ಕೃತಿ - ಪುನರುಜ್ಜೀವನ ಉಪಕ್ರಮ

Posted On: 17-07-2021 01:47PM

"ಬನ್ನಿ....ಸಮೃದ್ಧಿ , ಸೌಮಾಂಗಲ್ಯಕಾರಕ ಕೃಷಿಯಲ್ಲಿ ತೊಡಗೋಣ" ಎನ್ನುತ್ತಾ ಹಡೀಲು ಭೂಮಿ ಬೇಸಾಯದ ಅಭಿಯಾನ ಹಲವು ವರ್ಷಗಳಿಂದ ಅಲ್ಲಿ- ಇಲ್ಲಿ ಎಂಬಂತೆ ನಡೆಯುತ್ತಿತ್ತು. ಆದರೆ ಈ ವರ್ಷವಂತೂ ಉಭಯ ಜಿಲ್ಲೆಗಳ ಎಲ್ಲೆಡೆ ಪರಿಣಾಮಕಾರಿಯಾಗಿ ಬಹಳ ಉತ್ಸಾಹದಿಂದ ನೆರವೇರುತ್ತಿದೆ . ಬಹುತೇಕ ಹಡೀಲು ಗದ್ದೆಗಳು ಹಸಿರಿನಿಂದ ತುಂಬುತ್ತಿವೆ ; ಕಳೆಗಿಡಗಳಿಂದಲ್ಲ ನೇಜಿ (ಭತ್ತದ ಸಸಿ) ನಾಟಿಯಿಂದ. ಮಳೆಗಾಲ ಆರಂಭವಾಗುತ್ತಿರುವಂತೆ ಎಲ್ಲೆಡೆ ಹಸಿರು ಚಿಗುರುತ್ತವೆ , ಕೃಷಿ ಭೂಮಿಯಲ್ಲೂ ಒಂದಷ್ಟು ಹುಲ್ಲು ಬೆಳೆಯುತ್ತದೆ .ರೈತ ಗದ್ದೆಗಿಳಿದು ಬೇಸಾಯಕ್ಕೆ ತೊಡಗದಿದ್ದರೆ ಕಳೆಗಿಡಗಳು, ಗಿಡಗಂಟಿಗಳು ಬೆಳೆಯುತ್ತವೆ. ವರ್ಷಗಟ್ಟಲೆ ಗದ್ದೆಗಿಳಿಯದಿದ್ದರೆ ಆ ಭೂಮಿ ಹಡೀಲು ಭೂಮಿಯಾಗುತ್ತದೆ . ಇಂತಹ ಗದ್ದೆಗಳಲ್ಲಿ‌ ಮತ್ತೆ ಬೇಸಾಯ ಆರಂಭಿಸುವುದಕ್ಕೆ ಮನಸ್ಸುಬೇಕು, ಪ್ರಯತ್ನಬೇಕು, ಇಚ್ಛಾಶಕ್ತಿ ಬೇಕು. ಈ ಪ್ರಾಮಾಣಿಕ ಸಾಹಸ ಈಗ ನಡೆಯುತ್ತಿವೆ . ಹೇಗೆ ನಡೆಯುತ್ತಿದೆ ,ಯಾರೆಲ್ಲ ಭಾಗವಹಿಸುತ್ತಿದ್ದಾರೆ ಎಂಬುದು ಮುಖ್ಯ. ಇದರಿಂದ ಅಭಿಯಾನದ ಭವಿಷ್ಯವನ್ನು ಕಲ್ಪಿಸಬಹುದು. 'ಹಡೀಲು ಭೂಮಿ ಬೇಸಾಯ' ಈ ಅಭಿಯಾನದ ಸಂಘಟಕರು ಯಾರು ,ಯಾರ ನೇತೃತ್ವದಲ್ಲಿ ಈ ಅಭಿಯಾನ ಹಳ್ಳಿಹಳ್ಳಿಗಳಲ್ಲೂ ನಡಯುತ್ತಿವೆ ಎನ್ನುವಷ್ಟೇ ಗದ್ದೆಗಳಲ್ಲಿ ಯಾರು ಸಕ್ರಿಯರಾಗಿದ್ದಾರೆ ಎಂಬುದನ್ನು ಗಮನಿಸಿದರೆ ಈ ಅಭಿಯಾನದ ಭವಿಷ್ಯವನ್ನು ಸಹಜವಾಗಿ ತರ್ಕಿಸಬಹುದು.

ಶಿರ್ವ : ಬ್ರಹ್ಮಶ್ರೀ ನಾರಾಯಣಗುರು ಮಂದಿರಕ್ಕೆ ಶ್ರೀ ಶ್ರೀ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ ಭೇಟಿ

Posted On: 17-07-2021 01:38PM

ಕಾಪು : ಜಗದ್ಗುರು ಬ್ರಹ್ಮ ಶ್ರೀ ನಾರಾಯಣಗುರುಗಳ ಶಿವಗಿರಿ ಮಠದ ಸನ್ಯಾಸಿಗಳಾದ ಶ್ರೀ ಶ್ರೀ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ ಇಂದು ಶಿರ್ವದ ಚೆಕ್ ಪಾದೆ ಬಳಿ ಇರುವ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಮಂದಿರಕ್ಕೆ ದಿವ್ಯ ದರ್ಶನವಿತ್ತರು.

ಶಂಕರಪುರ : ಸೈಂಟ್ ಜೋನ್ಸ್ ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾಗಿ ನಿವೃತ್ತಿ ಹೊಂದಿದ ಡೊಮಿಯನ್ ಆರ್. ನೊರೊನ್ನರಿಗೆ ಬೀಳ್ಕೊಡುಗೆ, ಸನ್ಮಾನ

Posted On: 16-07-2021 02:25PM

ಶಿರ್ವ : ಸೈಂಟ್ ಜೋನ್ಸ್ ಪ್ರೌಢ ಶಾಲೆ ಶಂಕರಪುರ ಇಲ್ಲಿ 39 ವರ್ಷಗಳ ಕಾಲ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿ 2021, ಎಪ್ರಿಲ್ 30 ರಂದು ವಯೋನಿವೃತ್ತಿ ಹೊಂದಿದ ಡೊಮಿಯನ್ ಆರ್. ನೊರೊನ್ನ ಇವರನ್ನು ಸೈಂಟ್ ಜೋನ್ಸ್ ಶಾಲಾ ಆಡಳಿತ ಮಂಡಳಿ, ಪ್ರೌಢ ಶಾಲಾ ಶಿಕ್ಷಕ ಮತ್ತು ಸಿಬ್ಬಂದಿ ಹಾಗೂ ಸೈಂಟ್ ಜೋನ್ಸ್ ಶಾಲಾ ಹಳೆ ವಿದ್ಯಾರ್ಥಿ ಸಂಘ ಜಂಟಿಯಾಗಿ ಚರ್ಚಿನ ಸಮುದಾಯ ಭವನದಲ್ಲಿ ಸನ್ಮಾನಿಸಲಾಯಿತು.

ನಾರಾಯಣಗುರುಗಳ ತತ್ವದಂತೆ ಹಿಂದು ದೇವಳ ನಿರ್ಮಿಸಿದ ಕ್ರೈಸ್ತ ಉದ್ಯಮಿ : ಶ್ರೀ ಶ್ರೀ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ

Posted On: 16-07-2021 01:59PM

ಕಾಪು : ಕ್ರೈಸ್ತ ಉದ್ಯಮಿ ಗ್ಯಾಬ್ರಿಯಲ್ ಫೇಬಿಯನ್ ನಜರತ್ ರವರ ಹೆತ್ತವರಾದ ಹಳೆಹಿತ್ಲು ದಿ| ಫೇಬಿಯನ್ ಸಬೆಸ್ಟಿಯನ್ ನಜರತ್ ಮತ್ತು ದಿ| ಸಬೀನಾ ನಜರತ್ ನೆನಪಿಗಾಗಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಕಟಪಾಡಿ-ಶಿರ್ವ ಮುಖ್ಯರಸ್ತೆಯ ಮಟ್ಟಾರು - ಅಟ್ಟಿಂಜ ಕ್ರಾಸ್ ಬಳಿ ನಿರ್ಮಿಸಿದ ಶ್ರೀ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಕೇರಳ ಶಿವಗಿರಿ ಮಠದ ಶ್ರೀ ಶ್ರೀ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ ಯವರು ಭೇಟಿ ನೀಡಿದರು.

ನನ್ನ ಸಮುದಾಯದ ಬಗ್ಗೆ ಗೌರವವಿದೆ, ಇಲ್ಲ ಸಲ್ಲದ ಆರೋಪಕ್ಕೆ ಕಾನೂನು ಹೋರಾಟಕ್ಕೂ ಸಿದ್ಧ : ಅಂತರಾಷ್ಟ್ರೀಯ ಕ್ರೀಡಾಪಟು ಸತೀಶ್ ಖಾರ್ವಿ

Posted On: 15-07-2021 10:37PM

ಕುಂದಾಪುರ : ಶ್ರೀಮಹಾಕಾಳಿ ದೇವಸ್ಥಾನ ಮತ್ತು ವಿದ್ಯಾರಂಗ ಮಿತ್ರ ಮಂಡಳಿ (ರಿ) ಕುಂದಾಪುರ ಇದರ ಪತ್ರಿಕಾಗೋಷ್ಠಿಯಲ್ಲಿ ಸತ್ಯವನ್ನು ಮರೆಮಾಚುವ ಪ್ರಯತ್ನ ನಡೆದಿದ್ದು, ಎಲ್ಲವೂ ಸತ್ಯಕ್ಕೆ ದೂರವಾದ ಸಂಗತಿ ಮತ್ತೊಮ್ಮೆ ನನ್ನ ತೇಜೋವಧೆ ಮಾಡುವ ಪ್ರಯತ್ನ ಇದಾಗಿದೆ. ನಾನು ಎಲ್ಲಿಯೂ ನನ್ನ ಸಮುದಾಯದ ವಿರುದ್ದ ಅವಹೇಳನವಾಗಲಿ, ಕೀಳಾಗಿ ಮಾತಾಡಿಲ್ಲ ಯಾವುದೇ ಮಾಧ್ಯಮದಲ್ಲಿ ಸಮೂದಾಯದ ವಿರುದ್ದ ಹೇಳಿಕ ನೀಡಿಲ್ಲ. ಎಂದು ಹರ್ಕ್ಯುಲೆಸ್ ಜಿಮ್ ಕುಂದಾಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಂತರಾಷ್ಟ್ರೀಯ ಕ್ರೀಡಾಪಟು ಸತೀಶ್ ಖಾರ್ವಿ ಹೇಳಿದರು.

ಎರ್ಮಾಳು : ಸುಪ್ರಭಾತ, ಕವನ ಸಂಕಲನ ಬಿಡುಗಡೆ .

Posted On: 15-07-2021 08:58PM

ಕಾಪು : ಎರ್ಮಾಳು ಶ್ರೀ ಜನಾರ್ದನ ದೇವಸ್ಥಾನದಲ್ಲಿ ನಿವೃತ್ತ ಪ.ಪೂ .ಪ್ರಾಧ್ಯಾಪಕ, ಸಾಹಿತಿ ,ಚಿಂತಕ ,ಪ್ರವಚನಕಾರ ವೈ .ರಾಮಕೃಷ್ಣ ರಾವ್ ವಿರಚಿತ ಎರ್ಮಾಳು ಶ್ರೀ ಜನಾರ್ದನ ದೇವರ ಸುಪ್ರಭಾತದ ಪುಸ್ತಕ ಹಾಗೂ ಅಡಕ ಮುದ್ರಿಕೆಯನ್ನು ಪಲಿಮಾರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾದೀಶ ಶ್ರಿಪಾದರು ಬಿಡುಗಡೆಗೊಳಿಸಿದರು. ಕಿರಿಯ ಮಠಾಧೀಶರಾದ ಶ್ರೀ ಶ್ರೀ ವಿದ್ಯಾರಾಜ ಶ್ರೀಪಾದರು ಉಪಸ್ಥಿತರಿದ್ದರು.

ಶಿರ್ವ : ನೇಜಿ ನಾಟಿ ಕೃಷಿ ಕಾಯ೯ಕ್ರಮ

Posted On: 14-07-2021 05:03PM

ಶಿವ೯: ಅನಾದಿ ಕಾಲದಿಂದಲೂ ಕೃಷಿ ಮಾನವನ ಕುಲ ಕಸುಬು. ಆಧುನಿಕತೆ ಬೆಳೆದಂತೆ ಮನುಷ್ಯ ಬೇರೆ ಬೇರೆ ಕೆಲಸಕಾಯ೯ಗಳಲ್ಲಿ ತನ್ನನ್ನು ತೊಡಗಿಸಿಕೊಂಡ ಕಾರಣ ಇಂದು ಕೃಷಿಯು ಹಿಂದುಳಿಯುದಕ್ಕೆ ಕಾರಣವಾಯಿತು.ಆದರೆ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಕೃಷಿ ಕಾಯ೯ ಇಂದು ಸಾಗುತ್ತಿದೆ ಈ ನಿಟ್ಟಿನಲ್ಲಿ ಯುವಜನತೆಯು ಭಾಗಿಯಾಗುವ ಮೂಲಕ ನೆಲ-ಜಲ ಭೂಮಿಯ ಸಂರಕ್ಷಣೆ ಭೂಮಿಯನ್ನು ಹಸಿರಾಗಿಸುವುದರ ಮೂಲಕ ಮಾಡಿದರೆ ಮುಂದಿನ ಜನಾಂಗಕ್ಕೆ ಹೆಚ್ಚು ಅನುಕೂಲವಾಗಲಿದೆ ಎಂದು ಸಂತ ಮೇರಿ ಮಹಾವಿದ್ಯಾಲಯದ ಗ್ರೀನ್ ಟೀಚರ್ ಪೋರಂನ ಸಹಭಾಗಿತ್ವದಲ್ಲಿ ಎನ್ಎಸ್ಎಸ್, ಎನ್ ಸಿಸಿ,ರೋವರ್ಸ್ & ರೇಂಜರ್ಸ್,ರೆಡ್ ಕ್ರಾಸ್, ರೋಟರಿ ಶಿವ೯ ಇವರ ಸಂಯುಕ್ತ ಆಶ್ರಯದಲ್ಲಿ ಕುಂಜಿಗುಡ್ಡೆ ಪಿಲಾರ್ ಫೆಡ್ರಿಕ್ ಕ್ಯಾಸ್ತಲಿನೊ ಮತ್ತು ಹೆಲೆನ ಕ್ಯಾಸ್ತಲಿನೊ ಇವರ ಗದ್ದೆಯಲ್ಲಿ ನೇಜಿ ನಾಟಿ ಕೃಷಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ರಾಜ್ಯ ಪ್ರಶಸ್ತಿ ವಿಜೇತ ರೋಟರಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ರಾಘವೇಂದ್ರ ನಾಯಕ್ ಮಾತನಾಡಿದರು.

ಹೆಜಮಾಡಿ : ಸ್ವಚ್ಛತಾ ಅಭಿಯಾನ

Posted On: 14-07-2021 04:45PM

ಕಾಪು : ಪಡುಬಿದ್ರಿ ರೋಟರಿ ಕ್ಲಬ್ ಮತ್ತು ಹೆಜಮಾಡಿ ಸರಕಾರಿ ಪ್ರೌಢಶಾಲೆಯ ಹಳೆವಿದ್ಯಾರ್ಥಿ ಸಂಘ ಜಂಟಿ ಆಶ್ರಯದಲ್ಲಿ ಹೆಜಮಾಡಿ ಸರಕಾರಿ ಪ್ರೌಢ ಶಾಲಾ ವಠಾರದಲ್ಲಿ ನಡೆದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಕ್ಕೆ ರೋಟರಿ ಅಧ್ಯಕ್ಷ ಮಹಮ್ಮದ್ ನಿಯಾಜ್ ಚಾಲನೆ ನೀಡಿದರು.