Updated News From Kaup
ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಸಿಬ್ಬಂದಿಗಳಿಗೆ ಆದ್ಯತೆಯ ಮೇರೆಗೆ ಕೋವಿಡ್ ವ್ಯಾಕ್ಸಿನ್ ನೀಡಲು ಜಿಲ್ಲಾಧಿಕಾರಿಗೆ ಮನವಿ

Posted On: 21-05-2021 10:09AM
ಉಡುಪಿ : ಜಿಲ್ಲೆಯಲ್ಲಿ 130ಕ್ಕಿಂತ ಜಾಸ್ತಿ ಸೌಹಾರ್ದ ಸಹಕಾರಿಗಳು ಕಾರ್ಯನಿರ್ವಹಿಸುತ್ತಿದ್ದು ಸುಮಾರು 200ಕ್ಕಿಂತ ಜಾಸ್ತಿ ಸಿಬ್ಬಂದಿಗಳು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗಾಗಲೇ 2 ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಕರೋನಾ ಮಹಾಮಾರಿಗೆ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ . ಬಹುತೇಕ ಎಲ್ಲಾ ಸೌಹಾರ್ದ ಸಹಕಾರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳು 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು ಇವರಿಗೆ ಯಾವುದೇ ವ್ಯಾಕ್ಸಿನ್ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಸೌಹಾರ್ದ ಒಕ್ಕೂಟ ತಿಳಿಸಿದೆ.
ಇಂಥ ಕರೋನಾ ಸಂಕಷ್ಟ ಕಾಲದಲ್ಲಿ ಕೂಡ ಸೌಹಾರ್ದ ಸಹಕಾರಿಗಳು ಉಡುಪಿ ಜಿಲ್ಲಾದ್ಯಂತ ತಮ್ಮ ಸದಸ್ಯರ ಅನುಕೂಲಕ್ಕಾಗಿ ನಗದು, ಈ ಸ್ಟಾಂಪಿಂಗ್ ಮತ್ತು ಆರ್ ಟಿ ಸಿ ಯಂತಹ ಸೇವೆ ನೀಡುತ್ತಿದೆ. ಸೇವೆ ನೀಡುವಾಗ ಕರೋನಾ ಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಸಹಕಾರಿ ರಂಗದ ಆದ್ಯತೆಯ ಮೇರೆಗೆ ಎಲ್ಲಾ ಸಿಬ್ಬಂದಿಗಳಿಗೂ ಕೋವಿಡ್ ವ್ಯಾಕ್ಸಿನ್ ನೀಡಬೇಕೆಂದು ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದೆ ಎಂದು ಉಡುಪಿ ಜಿಲ್ಲಾ ಸೌಹಾರ್ದ ಸಂಯೋಜಕರಾದ ವಿಜಯ ಬಿ. ಎಸ್. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಪು : 4 ಅಂಬುಲೆನ್ಸ್ ಲೋಕಾರ್ಪಣೆ.

Posted On: 20-05-2021 02:47PM
ಕಾಪು : ಕೋವಿಡ್ 19 ತುರ್ತು ಸಂದರ್ಭದಲ್ಲಿ ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ ಇವರು ತಮ್ಮ ಗುರ್ಮೆ ಫೌಂಡೆಶನ್ ಸಂಸ್ಥೆಯ ವತಿಯಿಂದ ಸಾರ್ವಜನಿಕ ಸೇವೆಗೆ 2 ಅಂಬುಲೆನ್ಸ್ ಹಾಗೂ ಅವರ ಕೋರಿಕೆಯ ಮೇರೆಗೆ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಂದ 2 ಅಂಬುಲೆನ್ಸ್ ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲೋಕಾರ್ಪಣೆ ಮಾಡಲಾಯಿತು.

ಉಡುಪಿ ಪುತ್ತಿಗೆ ಮಠದ ಡಾ. ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಲಾಲಾಜಿ ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಮಟ್ಟಾರ್ ರತ್ನಾಕರ ಹೆಗ್ಡೆ, ಉಡುಪಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ದಿನಕರ್ ಬಾಬು, ಯಶ್ ಪಾಲ್ ಸುವರ್ಣ, ಬೆಳಪು ದೇವಿಪ್ರಸಾದ್ ಶೆಟ್ಟಿ, ಯೋಗೀಶ್ ಶೆಟ್ಟಿ ಬಾಲಾಜಿ, ಶ್ರೀಕಾಂತ ನಾಯಕ್, ಕಾಪು ಪುರಸಭೆ ಅಧ್ಯಕ್ಷರಾದ ಅನಿಲ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಅಂಬುಲೆನ್ಸ್ ವಿವರಗಳು ಹಾಗೂ ಸಂಪರ್ಕ ಸಂಖ್ಯೆಗಳು ಈ ಕೆಳಗಿನಂತಿವೆ (ಈ ಅಂಬುಲೆನ್ಸ್ ಗಳು ಕಾರ್ಯನಿರ್ವಹಿಸುತ್ತಿದ್ದರೂ ಕರಾವಳಿ ಭಾಗದಲ್ಲಿ ತುರ್ತು ಕರೆಗೆ ಎಲ್ಲಿಯೂ ಆಗಮಿಸಲು ಸಿಧ್ಧರಿರುವರು) 1) ಕಾಪು ವ್ಯಾಪ್ತಿ: ಸಂಪರ್ಕ ಸಂಖ್ಯೆಗಳು: A) ಅನಿಲ್ ಕುಮಾರ್, mob: 9880914875. B) ಸಂದೀಪ್ ಶೆಟ್ಟಿ ಕಲ್ಯ: mob: 98802914875. C) ಅಂಬುಲೆನ್ಸ್ ಡ್ರೈವರ್ ಕಾರ್ತಿಕ್: 7483931229. 2) ಶಿರ್ವ ವ್ಯಾಪ್ತಿ. ಸಂಪರ್ಕ ಸಂಖ್ಯೆಗಳು: A) ರಾಜೇಶ್ ನಾಯ್ಕ್, Mob: 9448723341. B) ಜಯಪ್ರಕಾಶ್ ಪ್ರಭು: Mob: 9964897382 C) ಅಂಬುಲೆನ್ಸ್ ಚಾಲಕರು, ಅಕ್ಷಯ್, Mob: 9380586998. 3) ಪಡುಬಿದ್ರೆ ವ್ಯಾಪ್ತಿ. ಸಂಪರ್ಕ ಸಂಖ್ಯೆಗಳು, A) ನಯೇಶ್ ಶೆಟ್ಟಿ, Mob: 6360201817. B) ಶಶಿಕಾಂತ ಪಡುಬಿದ್ರೆ. Mob: 9945383543. C) ಅಂಬುಲೆನ್ಸ್ ಡ್ರೈವರ್, ಪ್ರಶಾಂತ್ , Mob: 8296247139. 4) ಹಿರಿಯಡ್ಕ ವ್ಯಾಪ್ತಿ: ಸಂಪರ್ಕ ಸಂಖ್ಯೆಗಳು, A) ಜಿಯಾನಂದ ಹೆಗ್ಡೆ, Mob: 9880688023. B) ಸಂದೀಪ್ ಶೆಟ್ಟಿ, Mob: 8310580714. C) ಅಂಬುಲೆನ್ಸ್ ಡ್ರೈವರ್, ಸಚಿನ್, Mob: 6363047409.
ಹೋಂ ಡಾಕ್ಟರ್ ಫೌಂಡೇಶನ್ ಪಲ್ಸ್ ಆಕ್ಸಿಮೀಟರ್ ಅಭಿಯಾನ

Posted On: 20-05-2021 02:32PM
ಉಡುಪಿ : ಹೋಂ ಡಾಕ್ಟರ್ ಫೌಂಡೇಶನ್ ಉಡುಪಿ ಇದರ ವತಿಯಿಂದ ಬಡ ಕರೋನಾ ರೋಗಿಗಳಿಗೆ ನೆರವಾಗುವ ಉದ್ದೇಶದಿಂದ ಪಲ್ಸ್ ಆಕ್ಸಿಮೀಟರ್ ಅಭಿಯಾನ ಕಾಯ೯ಕ್ರಮದ ಅಂಗವಾಗಿ ಉಪ್ಪುರು ಗ್ರಾಮ ಪಂಚಾಯತ್ ಗೆ ಪಲ್ಸ್ ಆಕ್ಸಿಮೀಟರ್ ಯಂತ್ರಗಳನ್ನು ಹಸ್ತಾಂತರಿಸಲಾಯಿತು.
ಸದಸ್ಯರಾದ ಡಾ.ಶಶಿಕಿರಣ್ ಶೆಟ್ಟಿ ,ರಾಘವೇಂದ್ರ ಪೂಜಾರಿ ,ಸುನಿಲ್ ಶೆಟ್ಟಿ ,ರಾಘವೇಂದ್ರ ಪ್ರಭು ಕರ್ವಾಲುರವರು ಪಂಚಾಯತ್ ಅಧ್ಯಕ್ಷ,ಉಪಾಧ್ಯಕ್ಷರಿಗೆ ಹಸ್ತಾಂತರಿಸಿದರು.
ಈ ಸಂದಭ೯ ಸದಸ್ಯರು, ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರು ,ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯ ಸಚಿವರು-ಶಾಸಕರ ಮುಖ್ಯಮಂತ್ರಿಗಳ ಭೇಟಿ, ವಿವಿಧ ವಿಷಯಗಳ ಚರ್ಚೆ

Posted On: 20-05-2021 02:28PM
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಸಚಿವರು ಶಾಸಕರ ಜೊತೆಗೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿಎಸ್ ಯಡಿಯೂರಪ್ಪರವರ ಅಧಿಕೃತ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಸುಧೀರ್ಘ ಚರ್ಚೆ ನಡೆಸಿದರು.
ಈ ಸಂದರ್ಭ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೀಸಿದ ಚಂಡಮಾರುತದ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ,ಪಂಚಾಯತ್ ರಾಜ್,ಕಡಲ್ಕೊರೆತವೂ ಸೇರಿದಂತೆ ಸುಮಾರು 126 ಕೋಟಿಯಷ್ಟು ನಷ್ಟವಾಗಿದ್ದು; ಪ್ರಾಕೃತಿಕ ವಿಕೋಪದಡಿ ಈ ನಷ್ಟ ಭರಿಸಿ ವಿಶೇಷ ಅನುದಾನ ಬಿಡುಗಡೆ ಮಾಡಬೇಕೆಂದು ಸಚಿವ ಕೋಟ ನೇತೃತ್ವದ ನಿಯೋಗ ಮನವಿ ಸಲ್ಲಿಸಲಾಯಿತು. ಜಿಲ್ಲೆಯ ಕೋವಿಡ್ ಸಮಸ್ಯೆ ಹಾಗೂ ಅದರ ನಿಯಂತ್ರಣದ ಬಗ್ಗೆ ವಿವರವಾದ ಮಾಹಿತಿಯನ್ನು ಮುಖ್ಯಮಂತ್ರಿಗಳಿಗೆ ನೀಡಲಾಯಿತು. ಜಿಲ್ಲೆಗೆ ತುರ್ತಾಗಿ ವೈದ್ಯರು, ದಾದಿಯರು ಹಾಗೂ ಆರೋಗ್ಯ ಮಿತ್ರ ಹುದ್ದೆಗಳನ್ನು ಮಂಜೂರಾತಿ ಮಾಡಬೇಕೆಂದು ಮನವಿ.
ಸುಳ್ಯ ಹಾಗೂ ಪುತ್ತೂರು ತಾಲೂಕಿನ ಜನರ ಕೋವಿಡ್ ಸ್ವಾಬ್ ಟೆಸ್ಟ್ ನ್ನು ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜಿನಲ್ಲಿ ಮಾಡಲು ಅನುಮತಿ ಕೋರಲಾಯಿತು. ಹೀಗಾದಲ್ಲಿ 24 ಗಂಟೆಯೊಳಗೆ ರಿಪೋರ್ಟ್ ನೀಡಲು ಅನುಕೂಲವಾಗುತ್ತದೆ. ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜಿನಲ್ಲಿ ಆಯುಷ್ಮಾನ್ ಭಾರತ್ ಯೋಜನೆಯನ್ನು ಅಳವಡಿಸಲು ಅವಕಾಶ ನೀಡುವಂತೆ ಮನವಿ ಸಲ್ಲಿಸಲಾಯಿತು. ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಸೇರಿದಂತೆ ಜಿಲ್ಲೆಯ 11 ವಿವಿಧ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಘಟಕ ಆರಂಭವಾಗುತ್ತಿದ್ದು; ಅಲ್ಲಿಯವರೆಗೆ ಆಕ್ಸಿಜನ್ ಕೊರತೆ ನೀಗಿಸಲು ಜಿಲ್ಲೆಗೆ ತುರ್ತಾಗಿ ಆಕ್ಸಿಜನ್ ಟ್ಯಾಂಕ್ ನ್ನು ಒದಗಿಸಲು ಮನವಿ ಸಲ್ಲಿಸಲಾಯಿತು. ವಿವಿಧ ರೂಪದಲ್ಲಿ ತೊಂದರೆಗೆ ಸಿಲುಕಿದ ಬಡವರಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ಈಗಾಗಲೇ ಬೇಡಿಕೆ ಸಲ್ಲಿಸಿರುವ ಅರ್ಚಕರು, ಬಸ್, ಟೆಂಪೋ ಚಾಲಕರು, ಮೀನುಗಾರರು, ಹೋಟೆಲ್ ಕಾರ್ಮಿಕರಿಗೆ ಕೂಡಾ ಈ ಪ್ಯಾಕೇಜ್ ವಿಸ್ತರಿಸಲು ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಶಾಸಕರಾದ ರಾಜೇಶ್ ನಾಯ್ಕ್ ಹಾಗೂ ಸಂಜೀವ ಮಠಂದೂರು, ಸಚಿವರಾದ ಅಂಗಾರ ಮತ್ತು ಕೋಟ ಶ್ರೀನಿವಾಸ ಪೂಜಾರಿ, ಮುಖ್ಯಮಂತ್ರಿಗಳ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
ಪಿ. ಜಿ. ನಾರಾಯಣ ರಾವ್ ನಿಧನ

Posted On: 20-05-2021 02:18PM
ಪಡುಬಿದ್ರಿ : ದ್ವೈವಾರ್ಷಿಕ ಢಕ್ಕೆಬಲಿ ಖ್ಯಾತಿಯ ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನದಲ್ಲಿ ಸುಮಾರು 50 ವರ್ಷಗಳ ಕಾಲ ಪಾತ್ರಿಯಾಗಿ ಸೇವೆ ಸಲ್ಲಿಸಿದ ಪಿ. ಜಿ. ನಾರಾಯಣ ರಾವ್ ಇವರು ಇಂದು ಇಹಲೋಕ ತ್ಯಜಿಸಿದ್ದಾರೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದಿಲ್ಲದೆ ಮಿಂಚುತ್ತಿರುವ ಕರಾವಳಿಯ ಬಾಲನಟ ವಿ ಜೆ ಅಮನ್ ಎಸ್ ಕರ್ಕೇರ

Posted On: 20-05-2021 11:12AM
ದಿ ನ್ಯೂಯಾರ್ಕ್ ನಲ್ಲಿ ನಡೆಯುವ ಫಿಲಂ ಫೆಸ್ಟಿವಲ್ ಗೆ ಇಂಡಿಯನ್ ವತಿಯಿಂದ ಆಯ್ಕೆಯಾದ ಎಲ್ಲಾ ಭಾಷೆಗಳ ಚಲನಚಿತ್ರಗಳ ನಡುವೆ ನೀಲಿಹಕ್ಕಿ ಶಿರಸಿ ಭಾಷೆ ಚಿತ್ರ ಕೂಡ ಆಯ್ಕೆಯಾಗಿರುತ್ತದೆ.ನೀಲಿಹಕ್ಕಿಚಿತ್ರದಲ್ಲಿ ಸಿದ್ದ ಎಂಬ ಹೆಸರಿನ ಪಾತ್ರದಾರಿಯಾಗಿ ಮಂಗಳೂರಿನ ಅಮನ್ ಎಸ್. ಕರ್ಕೇರ ಅವರು ಬಾಲನಟನಾಗಿ ಬಣ್ಣಹಚ್ಚಿ ಅದರಲ್ಲೂ ಬೆಸ್ಟ್ ಚೈಲ್ಡ್ ಆರ್ಟಿಸ್ಟ್ ಗೆ ನೊಮಿನೇಟ್ ಆಗಿರುವುದು ಭಾರತ ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದಿಲ್ಲದೆ ಮಿಂಚುತ್ತಿದ್ದರೂ ಇನ್ನೂ ತೆರಮರೆಯಲ್ಲಿರುವ ಕರಾವಳಿಯ ನವಿರಾದ ಕೇಶ ರಾಶಿಯ ಹಾಲುಗೆನ್ನೆ ಸವಿ ಅಕ್ಕರೆಯ ಮುದ್ದುಮುಖದ ಸೌಂದರ್ಯಗಣಿ,ತುಳುನಾಡಿನ ಬಹುಮುಖ ಬಾಲಪ್ರತಿಭೆ,ಬಾಲನಟ, V.J ಅಮನ್.ಎಸ್.ಕರ್ಕೇರ ಅವರ ಸಾಧನೆಯ ಯಶೋಗಾಥೆ.

ನೀರಿಗಿಂತ ತಿಳಿಯಾದದ್ದು-ಜ್ಞಾನ ಪ್ರತಿಭೆ ಎನ್ನುವುದು ದೇವರು ಕೊಟ್ಟ ವರ,ದೇವರ ಅಪ್ಪಣೆ ವಿನಹಃ ಹುಲ್ಲು ಕಡ್ಡಿಯೂ ಅಲುಗಾಡದು. ಸಾಧನೆ ಎಂಬುವುದು ಸಾಗರವಿದ್ದಂತೆ,ಬಗೆದಷ್ಟು ಮುಗಿಯದು.ಮನಸ್ಸಿದ್ದರೆ ಮಾರ್ಗವೆಂಬಂತೆ ಸಾಧನೆ ಫಲಪ್ರದವಾಗಲು ಗುರು, ನಿರ್ದಿಷ್ಟ ಗುರಿ,ಕಠಿಣ ಪರಿಶ್ರಮ,ಧ್ಯೇಯ,ಮಾರ್ಗದರ್ಶನ ಅತ್ಯಗತ್ಯ. ಬೆಳೆಯುವ ಸಿರಿಮೊಳಕೆಯಲ್ಲಿ ಎಂಬಂತೆ ಎಳೆ ವಯಸ್ಸಿನಲ್ಲೇ ಜನಮಾನಸದ ಹೃದಯದೀ ಮನಸೂರೆಗೊಂಡ ಪ್ರತಿಭೆಗೆ ಸರಿಸಾಟಿಯೇ ಇಲ್ಲವೆಂಬಂತೆ ವಿಭಿನ್ನ ಶೈಲಿಯಲ್ಲಿ ಛಾಪು ಮೂಡಿಸಿಹ ಕಿನ್ನರಲೋಕದ ಕಿನ್ನರಿ,ಚೈತನ್ಯದ ಚಿಲುಮೆ, ಯಶಸ್ವಿ ನಿರೂಪಕ,ತ್ರಿಭಾಷಾ ಬಾಲನಟ, ನೃತ್ಯಗಾರ, ಸಂಗೀತಗಾರ, ಚಿತ್ರಕಲೆಗಾರ, ರೂಪದರ್ಶಿ, ಈಜುಪಟು, ಭಾಷಣಗಾರ, ಸ್ವರ ಹಿನ್ನಲೆಗಾರ, ಕ್ರೀಡಾಪಟು, ಸಂಗೀತವಾದಕ,ಅಂತರ್ರಾಷ್ಟ್ರೀಯ ಮಕ್ಕಳ ಚಲನಚಿತ್ರದ ಬಾಲನಟನೆ ಪ್ರಶಸ್ತಿಗೆ ಭಾಜನರಾದ ಸ್ಪರ್ಧಾಳು,ತುಳುನಾಡ ಹೆಮ್ಮೆಯ ಸಾಧಕ, ಬಹುಮುಖ ಅರಳು ಪ್ರತಿಭೆ ವಿ ಜೆ ಅಮನ್.ಎಸ್.ಕರ್ಕೇರ. ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಮೂಡುಶೆಡ್ಡೆ ನಿವಾಸಿಗಳಾದ ಶ್ರೀ ಶ್ರೀನಿವಾಸ ಅಮೀನ್ ಮತ್ತು ಶ್ರೀಮತಿ ಬಬಿತಾ.ಎಸ್.ಕರ್ಕೇರ ದಂಪತಿಗಳ ಜೇಷ್ಠ ಸುಪುತ್ರರಾದ ಮಾಸ್ಟರ್ ಅಮನ್ ಎಸ್. ಕರ್ಕೇರರು 2008 ಮೇ 24ರಂದು ಜನಿಸಿದ್ದು,ಇದೀಗ ಹದಿಮೂರರ ಹರೆಯ.ಇವರು ಪ್ರಸ್ತುತ ಪ್ರಿಸ್ಟೀಜ್ ಇಂಟರ್ ನ್ಯಾಷನಲ್ ಸ್ಕೂಲ್ ಜಪ್ಪಿನಮೊಗರಿನಲ್ಲಿ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು,ಅಮನ್ ಕಲಿಕೆ,, ಆಟ, ಪಾಠದಲ್ಲೂ ಸದಾ ಮುಂದಿದ್ದು ,2019-2020ರಲ್ಲಿ ಸ್ಟೂಡೆಂಟ್ ಆಫ್ ದಿ ಇಯರ್ ಪ್ರಶಸ್ತಿಯ ಜೊತೆಗೆ ನಗದನ್ನು ತನ್ನ ಮುಡಿಗೇರಿಸಿಕೊಳ್ಳುವುದರ ಜೊತೆಗೆ ಎರಡನೇ ತರಗತಿಯಿಂದ ಹಿಡಿದು ಸತತವಾಗಿ ಪ್ರತಿ ಆರು ವರ್ಷಗಳಿಂದ ಜನರಲ್ ಪ್ರೋಪೆಕೆಸ್ಸಿ ಅಂದರೆ ನಾಲ್ಕು ವಿಭಾಗದಲ್ಲೂ ಪ್ರಥಮ ಸ್ಥಾನ ಪಡೆದರೆ ಮಾತ್ರ ಆ ಸ್ಥಾನಕ್ಕೆ ಅರ್ಹರಾಗುತ್ತಾರೆ. ಇವರ ಇಂತಹ ಅಪೂರ್ವ ಸಾಧನೆಯನ್ನು ಗಮನಿಸಿ ಸನ್ಮಾರ್ಗ ಟಿವಿ ಚಾನೆಲ್ ನವರು ಪ್ರಿಸ್ಟೀಜ್ ಶಾಲೆಗೆ ಬಂದು ಇವರನ್ನು ಸಂದರ್ಶಿಸಿರುವುದು ಶ್ಲಾಘನೀಯ. ವಿ. ಜೆ. ಅಮನ್. ಎಸ್. ಕರ್ಕೇರ ನಿರೂಪಣೆಯಲ್ಲಿ ಖ್ಯಾತ ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿ ಅಧ್ಯಕ್ಷರು ಸನ್ಮಾನ್ಯ ಶ್ರೀ ದಯಾನಂದ್ ಕತ್ತಲ್ ಸಾರ್ ಅವರ ಮುದ್ದಿನ ಶಿಷ್ಯನಾಗಿದ್ದು, ಇವರ ಪ್ರಜ್ವಲ ಭವಿಷ್ಯಕ್ಕೆ ಬೆನ್ನಲುಬಾಗಿ ದಾರಿದೀಪವಾಗಿರುತ್ತಾರೆ. ಅಮನ್ ನಿರೂಪಣೆ ಮಾಡುತ್ತಿದ್ದರೆ ಹರಳು ಹುರಿದಂತೆ ನೆರೆದ ಜನಸ್ತೋಮವನ್ನು ಕ್ಷಣಾರ್ಧದಲ್ಲಿ ತನ್ನೆಡೆಗೆ ಸೆಳೆದುಕೊಂಡು ಮೂಕವಿಸ್ಮಿತರನ್ನಾಗಿಸುವ ಉದಯ್ಯೋನ್ಮುಖ ಅನನ್ಯ ಪ್ರತಿಭೆ.ಇವರು ಮೊಂಟೆಸ್ಸೆರಿ ತರಗತಿಯಿಂದಲೇ ಸರಾಗವಾಗಿ ನಿರೂಪಣೆಗೈದ ಅಧ್ಭುತ ಕಲೆಗಾರ. ನಮ್ಮ ಟಿವಿ ಸ್ಥಳೀಯ ವಾಹಿನಿಯಲ್ಲಿ ನಮ್ಮಶುಭಾಶಯ ನೇರಪ್ರಸಾರ ಕಾರ್ಯಕ್ರಮ ಬೆಳಿಗ್ಗೆ 9 ರಿಂದ 10 ಘಂಟೆವರೆಗೆ ನಡೆಸಿಕೊಡುವ ಪೋರ.ಮಾತಿನ ಮೋಡಿಯಲ್ಲಿ ಮಂತ್ರ ಮುಗ್ದರನ್ನಾಗಿಸಿ ತನ್ನೆಡೆಗೆ ಅವೆಷ್ಟೋ ಅಭಿಮಾನಿಗಳನ್ನು ಸೆಳೆದುಕೊಂಡ ಪ್ರತಿಭಾನ್ವಿತ.ಇವರು ಗುರುಹಿರಿಯರಿಗೆ ಗೌರವ ಕೊಟ್ಟು ಮಾತನಾಡಿಸುವುದರ ಜೊತೆಗೆ ಉತ್ತಮ ಸಂಸ್ಕಾರ, ಸದ್ಗುಣ, ಸದಾಚಾರ ಪಾಲಿಸುವ ಬಾಲಕ.ಬೆಂಗಳೂರಿನ ಅರಳು ಟಿವಿ ವಾಹಿನಿಯಲ್ಲಿ ಮುಖ್ಯ ನಿರೂಪಣೆಗೆ ಆಯ್ಕೆ ಆದ ಚಿತ್ತಚೋರ. ದಯಾನಂದ್ ಕತ್ತಲ್ ಸಾರ್ ಅವರು ಗುರುವಾಗಿ ಸದಾ ಶಿಷ್ಯನ ಏಳಿಗೆಗೆ ಪೂರಕವಾಗಿ,ನಿತ್ಯವೂ ಸುಜ್ಞಾನದ ಹಾದಿಗೆ ಆಧಾರಸ್ತಂಭವೆಂಬಂತೆ,ಶಿಷ್ಯನ ಅದೆಷ್ಟೋ ನಿರೂಪಣೆಗೆ,ಭಾಷಣಕ್ಕೆ ವಿಷಯವನ್ನು ಬರೆದುಕೊಟ್ಟು ಬಹುಮಾನ ಪಡೆಯುವಲ್ಲಿ ಶ್ರಮವಹಿಸಿದವರು. ಅದರಲ್ಲೂ ಇವರು ಭಾರತದ ಪ್ರಧಾನಿ ಮಂತ್ರಿ ಸನ್ಮಾನ್ಯ ನರೇಂದ್ರ ಮೋದಿ ಹಾಗೇ ತುಳುನಾಡು ವಿಷಯದ ಕುರಿತು ಮಾಡಿದ ಸಂಭಾಷಣೆ ವಿಡಿಯೋ ಬಲು ದೊಡ್ಡ ಮಟ್ಟಕ್ಕೆ ವೈರಲ್ ಮತ್ತು ಶೇರ್ ಆಗಿರುವ ಸಾರ್ಥಕತೆ ಇವರದು. ಮುಗ್ದ ಮನಸ್ಸುಗಳ ಮಾತು ಹೀಗೆ ನೂರಕ್ಕಿಂತಲೂ ಹೆಚ್ಚು ವಿಭಿನ್ನ ಪರಿಕಲ್ಪನೆಗಳ ವಿಡಿಯೋವನ್ನು ಮಾಡಿರುತ್ತಾರೆ. ಅದಲ್ಲದೆ ಇವರದೇ ಹೆಸರಿನ ಯೂಟ್ಯೂಬ್ ಚಾನೆಲ್ ಮುಖಾಂತರವೂ ತನ್ನ ವಾಕ್ ಚಾತುರ್ಯತೆಯಿಂದ ಅಪಾರ ಅಭಿಮಾನಿಗಳನ್ನು ಹೊಂದಿ ಮೆಚ್ಚುಗೆ ಗಳಿಸಿರುತ್ತಾರೆ. ಇಂಡಿಯಾ ಗಾಟ್ ಟ್ಯಾಲೆಂಟ್ ಎಂಬ ಮುಂಬೈನ ಕಲರ್ಸ್ ಟಿವಿ ಚಾನೆಲ್ ನವರು ಆಯೋಜಿಸಿರುವ ಕಾರ್ಯಕ್ರಮದಲ್ಲಿ ನೃತ್ಯ ಮಾಡಿದ ಅಮೋಘ ನೃತ್ಯಗಾರ, ಡಾನ್ಸ್ ಕರ್ನಾಟಕ ಡಾನ್ಸ್ ಕನ್ನಡ ಚಾನೆಲ್ ನ ಆಯ್ಕೆ ಸುತ್ತಿನಲ್ಲಿ ಭಾಗವಹಿಸಿರುವರು.ಹಾಗೇ ಭರತನಾಟ್ಯ ನೃತ್ಯವನ್ನು ಕರಗತಗೊಳಿಸಿಹರು. ರಾಜ್ಯ ಮತ್ತು ರಾಷ್ಟ್ರಮಟ್ಟದ ಕರಾಟೆ ಟೂರ್ನ್ ಮೆಂಟ್ ನಲ್ಲಿ ಭಾಗವಹಿಸಿ ಕಂಚು ಗೆದ್ದಿರುವ ಹೆಮ್ಮೆಯ ಕರಾಟೆಪಟು.ಇವರು ಚಿತ್ರಕಲೆಗಾರನಾಗಿದ್ದು, ಚಿತ್ರ ಪರೀಕ್ಷೆಯಲ್ಲೂ ಬಹುಮಾನ ಗಳಿಸಿದ ಹೆಗ್ಗಳಿಕೆ ಇವರದು. ಸಂಗೀತದ ಸುಸ್ವರ ಪ್ರತಿಭೆಯಾಗಿದ್ದು,ತರಬೇತಿಯಿಲ್ಲದೇ ಸಂಗೀತ ಸಾಧನವಾದ ಕೀಬೋರ್ಡ್ ಹಾಗೇ ಡ್ರಮ್ಸ್ ನುಡಿಸುವುದರಲ್ಲೂ ಚತುರರು. ನಂತೂರಿನ ಸಂದೇಶ ರೇಡಿಯೋವೊಂದರಲ್ಲಿ ಅಮ್ಮನಕಥೆ ಮತ್ತು ಶಿಕ್ಷಣ ಎಂಬ ಕಾರ್ಯಕ್ರಮಕ್ಕೆ ಸ್ವರ ಸಂಯೋಜಕರಾಗಿದ್ದು ಹೀಗೆ ಪರಿಚಿತರಾಗಿ ಮಗನ ಕ್ರಿಯಾಶೀಲ ಚಟುವಟಿಕೆ ಮುಖಾಂತರ ಅಮ್ಮನಿಗೆ ಸ್ಥಳೀಯ ಟಿವಿ ವಾಹಿನಿಯೊಂದರಲ್ಲಿ ನ್ಯೂಸ್ ರಿಪೋರ್ಟರ್ ಆಗಿ ಅವಕಾಶ ದೊರಕಿಸಿಕೊಟ್ಟ ಪುಣ್ಯವಂತ ಮಗ. ಇಂತಹ ಪುತ್ರನನ್ನು ಪಡೆಯಲು ನಾವು ಪುಣ್ಯ ಮಾಡಿದ್ದೇವೆ ಎಂಬುವುದು ಇವರ ಅಮ್ಮನ ಮನದ ಮಾತಾಗಿದೆ.ಹೆತ್ತವರು ಮಗನ ಸಾಧನೆಗೆ ಸದಾ ಶ್ರಮಿಸುತ್ತಿದ್ದು,ಇವರ ಏಳಿಗೆಗೆ ವರದಹಸ್ತರಾಗಿರುತ್ತಾರೆ.ಹಾಗೇ ಅಮನ್ ನ ಸಾಧನೆಯ ಬೆನ್ನ ಹಿಂದೆ ಅನೇಕ ಕಾಣದ ಕೈಗಳ ಪರಿಶ್ರಮ ಮತ್ತು ಸಹಕಾರದಿಂದ ಇಂದಿನ ಯಶಸ್ವಿಗೆ ಕಾರಣಿಕರ್ತವಾಗಿರುತ್ತದೆ ಎಂದು ಹೆತ್ತವರು ಬಾವುಕರಾಗಿ ಸ್ಮರಣೆ ಮಾಡುತ್ತಿರುತ್ತಾರೆ.

V-4 ಚಾನೆಲ್ ನಲ್ಲಿ ಕಾಮಿಡಿ ಪ್ರೀಮಿಯರ್ ಲೀಗ್ 3ನೇ ಸಂಚಿಕೆವರೆಗೆ ಪಾತ್ರವಹಿಸಿರುವರು ಹಾಗೇನಮ್ಮಟಿವಿ ಚಾನೆಲ್ ನ-ಕುಸಲ್ದ್ ಒಸರ್ -ಸ್ಟಾಂಡ್ ಆಫ್ ಕಾಮಿಡಿ ದೊಡ್ಡ ಕಲಾವಿದರ ಜೊತೆ ಪೈನಲ್ ಗೂ ಆಯ್ಕೆಯಾಗಿರುತ್ತಾರೆ. ಸಾಮಾಜಿಕ ಜಾಲತಾಣದ ಟಿಕ್ ಟಾಕ್ ನಲ್ಲೂ ಬಲು ಜೋರಾಗಿ ಸದ್ದು ಮಾಡಿರುವ ಇವರು ಪ್ರಸ್ತುತ ಕೋಡಿಂಗ್ ಕೋರ್ಸ್ ನ್ನು ಆನ್ಲೈನ್ ಕ್ಲಾಸ್ ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.ಇವರು ರೂಪದರ್ಶಿಯಾಗಿರುವ ನಂದಿನಿ ಕಷಾಯ,ಮಹೇಂದ್ರ ಕಾರ್ ಬೋಲೆರೋ ಹಾಗೇ ಇಮುನೋ ಆಯುರ್ವೇದಿಕ್ ಜಾಹೀರಾತು ಇಮ್ಯುನಿಟಿ ಪವರ್ ಜಾಸ್ತಿ ಮಾಡುವ ಮದ್ದಿನ ಜಾಹೀರಾತಿನಲ್ಲೂ ಪ್ರಮುಖ ಪಾತ್ರ ನಿರ್ವಹಿಸಿರುತ್ತಾರೆ. ಅಮನ್ ತ್ರಿಭಾಷಾ ಬಾಲನಟನಾಗಿದ್ದು,ಪ್ರಥಮವಾಗಿ ಪಾದಾರ್ಪಣೆ ಮಾಡಿದ ತುಳುಚಿತ್ರರಂಗದ ಪೆಪ್ಪೆರೆರೆ ಪೆರೆರೆರೆ ಎಂಬ ಚಿತ್ರದ ಮುಖಾಂತರ ಚಿಕ್ಕ ಪಾತ್ರದಲ್ಲಿ ಬಣ್ಣ ಹಚ್ಚಿ,ಮುಂದೆ ರೂಪಾಂತರ ಶೀರ್ಷಿಕೆಯ ಕನ್ನಡ ಚಲನಚಿತ್ರದಲ್ಲಿ ಪ್ರಮುಖ ಬಾಲನಟನಾಗಿ ಅಭಿನಯಿಸಿರುವರು. ಅನಂತರದ ನೀಲಿಹಕ್ಕಿ ಎಂಬ ಶಿರಸಿ ಭಾಷೆಯ ಚಲನಚಿತ್ರದಲ್ಲಿ ಸಿದ್ಧಾರ್ಥ ಎಂಬ ಪಾತ್ರದಾರಿಯಾಗಿ ಮುಖ್ಯ ಭೂಮಿಕೆಯಲ್ಲಿ ಬಣ್ಣಹಚ್ಚಿರುವರು. ನೀಲಿಹಕ್ಕಿ ಎಂಬ ಶಿರಸಿ ಭಾಷಾ ಚಲನಚಿತ್ರ ದಿ ನ್ಯೂಯಾರ್ಕ್ ನಲ್ಲಿ ನಡೆಯುವ 'ಫಿಲಂ ಫೆಸ್ಟಿವಲ್ 'ಗೆ ಇಂಡಿಯನ್ ಫಿಲಂವತಿಯಿಂದ ಆಯ್ಕೆಯಾದ ಎಲ್ಲಾ ಭಾಷೆಗಳ ಚಲನಚಿತ್ರಗಳ ನಡುವೆ ನೀಲಿಹಕ್ಕಿ ಶಿರಸಿ ಭಾಷೆಯ ಚಲನಚಿತ್ರ ಕೂಡ ಆಯ್ಕೆ ಕಂಡಿತ್ತು.ಇದರಲ್ಲಿ ಅಮನ್.ಎಸ್.ಕರ್ಕೇರಾ ಬೆಸ್ಟ್ ಚೈಲ್ಡ್ ಆರ್ಟಿಸ್ಟ್ ಗೆ ನೊಮಿನೇಟ್ ಆಗಿರುವುದೇ ತುಳುನಾಡಿಗೆ ಹೆಮ್ಮೆಯ ವಿಷಯ.ಹಾಗೇ ಈ ಪ್ರಶಸ್ತಿ ಅವರ ತೆಕ್ಕೆಗೆ ಸೇರಲಿ ಎಂದೂ ನಾವೆಲ್ಲರೂ ಆಶೀರ್ವದಿಸಿ ಪ್ರಾರ್ಥಿಸೋಣ. ಜಿಷ್ಣು ಎಂಬ ಕನ್ನಡ ಚಲನಚಿತ್ರದಲ್ಲಿ ಬಿಕ್ಷುಕನ ಪಾತ್ರ ಸಪ್ತಸಾಗರದಾಚೆ ಎಲ್ಲೊ ಕನ್ನಡ ಚಲನಚಿತ್ರದಲ್ಲಿ ನಾಯಕನಟ ರಕ್ಷಿತ್ ಶೆಟ್ಟಿ ಬ್ಯಾನರ್ ನ ಚಿತ್ರದ ನಾಯಕಿ ನಟಿಯ ತಮ್ಮನಾಗಿ ವಿನೋದ್ ನ ಪಾತ್ರ ನಿರ್ವಹಿಸಿರುತ್ತಾರೆ. ಇವರಿಗೆ ಖ್ಯಾತ ಕನ್ನಡ ಚಲನಚಿತ್ರ ನಟರಾದ ರಕ್ಷಿತ್ ಶೆಟ್ಟಿಯವರ ಸಂಪೂರ್ಣ ಸಹಕಾರದ ಬೆಂಬಲ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರವನ್ನು ನೀಡಿರುತ್ತಾರೆ.ಅಂದರೆ ಅಮನ್ ನಲ್ಲಿ ಇಷ್ಟು ಪ್ರತಿಭೆ,ಕಲಾಚಾತುರ್ಯತೆ ಇದ್ದರೂ ಇನ್ನೂ ತೆರೆಮರೆಯಲ್ಲಿರುವ ನವಕಲಾವಿದನ ಪರಿಚಯ ಜಗದಲಿ ಅನಾವರಣ ಗೊಳ್ಳಬೇಕೆಂಬುವುದೇ ಇವರ ಆಶಯ. ಈಗಾಗಲೇ ಸದ್ದಿಲ್ಲದೆ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಬಾಲತಾರೆಗೆ ಎಲ್ಲಾ ಕ್ಷೇತ್ರಗಳಲ್ಲೂ ಆಸಕ್ತಿ ಇದ್ದು ,ರಾಜ್ಯಮಟ್ಟ ಅಷ್ಟೇ ಅಲ್ಲದೆ ರಾಷ್ಟ್ರಮಟ್ಟದ ಪ್ರಶಸ್ತಿಗೂ ಭಾಜನರಾಗಿರುತ್ತಾರೆ.ಬಳ್ಳಾರಿಯಲ್ಲಿ- ಪ್ರತಿಭಾ ರತ್ನ ಪ್ರಶಸ್ತಿ, ಧಾರವಾಡದಲ್ಲಿ-ಕರುನಾಡ ರಾಜ್ಯೋತ್ಸವ ಪ್ರಶಸ್ತಿ, ಮೈಸೂರಿನಲ್ಲಿ- ವಿಶ್ವಮಾನ್ಯ ಕನ್ನಡಿಗರ ಪ್ರಶಸ್ತಿ, ಹಾಗೇ ಬೆಂಗಳೂರಿನಲ್ಲಿ-ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಎಳೆಯ ಹರೆಯದಲ್ಲೇ ಮುಡಿಗೇರಿಸಿಗೊಂಡ ಬಹು ಪ್ರತಿಭಾನ್ವಿತ.ಅಬ್ಬಾಬ್ಬಾ ಈ ಪುಟ್ಟ ಪೋರನ ಇಷ್ಟೊಂದು ಪ್ರತಿಭೆ, ಅಧ್ಭುತ ಸಾಧನೆಗಳನ್ನು ನೋಡುವಾಗ ''ಆಡು ಮುಟ್ಟದ ಸೊಪ್ಪಿಲ್ಲ,ಈ ಬಾಲಕ ಏರದ ಸಭಾವೇದಿಕೆಗಳಿಲ್ಲ ಎಂದೆನಿಸುತ್ತದೆ.
ಕರಾವಳಿಯ ಅಪರೂಪದ ಮಾಣಿಕ್ಯ,ರಾಷ್ಟೀಯ ದ್ಯೋತಕ, ಅಸಾಧಾರಣ ಬಾಲಚತುರ, ಹೆಮ್ಮೆಯ ಬಹುಮುಖ ಸಾಧಕ, ತುಳುನಾಡ ಹೊನ್ನ ಶಿಖರ, ಸಾಧನೆಗರಿಯ ಕೀರ್ತಿ ಪತಾಕೆ ದೇಶ-ವಿದೇಶದಲ್ಲೂ ಪಸರಿಸಲಿ,ಎಲೆಮರೆ ಕಾಯಿಯಂತಿರುವ ಅಪ್ಪಟ ರತ್ನದ ಕಂಪು ಅನಾವರಣವಾಗಲಿ,ಅಮನ್ ನಾಮಧೇಯ ಬಾನಂಗಳದ ಅಷ್ಟದಿಕ್ಕಿನಲ್ಲೂ ರಾರಾಜಿಸಲಿ ಹಾಗೇ ಗುರುಹಿರಿಯರ, ದೈವದೇವರ ಆಶೀರ್ವಾದವಿರಲಿ. ವಿ.ಜೆ.ಅಮನ್.ಎಸ್.ಕರ್ಕೇರನಂತಹ ಅಧ್ಭುತ ಸಾಧಕನಿಗೆ ಬರೆದ ನನ್ನೀ ಕೈ,ಲೇಖನಿಗೂ ಅಭಿಮಾನ,ಗೌರವದ ಧನ್ಯತಾಭಾವ ಮೂಡಿದ್ದು, ಬರಹರೂಪದ ಒಲವಿನ ಸವಿಜೇನ ರಸಧಾರೆಯ ಪದಗಳ ಚಿತ್ತಾರಮಾಲೆ ಅರ್ಪಣೆಯಾಗಲಿ... ಶುಭಾಂಶನಗಳೊಂದಿಗೆ ಲೇಖನ : ಅರ್ಚನಾ. ಎಂ. ಬಂಗೇರ ಕುಂಪಲ
ಪ್ರತಿಭಾನ್ವಿತೆಯ ಚಿಕಿತ್ಸೆಗೆ ನೆರವಾಗಿ

Posted On: 20-05-2021 10:53AM
ಕಾಪು : ಪ್ರತಿಭಾನ್ವಿತ ವಿದ್ಯಾರ್ಥಿನಿಯೊಬ್ಬಳು ಬಡತನದ ಬೇಗೆಯಲ್ಲಿ ಅನೇಕ ಕನಸಿನ ಮೂಟೆಗಳನ್ನು ಹೊರುವ ಸಂದರ್ಭದಲ್ಲಿ ಒಂದು ಭಾರವಾದ ಸಂಕಷ್ಟ ಅವಳಿಗೆ ಎದುರಾಗುತ್ತದೆ. ಈ ಹುಡುಗಿಯ ಹೆಸರು ಶ್ರಾವ್ಯ.ಜೆ.ಎಂ. ಅಂತಿಮ ಪದವಿ ಕಲಿಯುತ್ತಿರುವ ಹುಡುಗಿ. ಇವಳು ಬೆಳ್ತಂಗಡಿ ತಾಲೂಕು ಉರುವಾಲು ಗ್ರಾಮದ ಕಾಯರಡ್ಕ ಜನತಾ ಕಾಲೋನಿ ಮನೆ ಶ್ರೀಮತಿ ರೇವತಿ ಹಾಗು ಜನಾರ್ಧನ ಪೂಜರಿಯವರ ಪ್ರಥಮ ಪುತ್ರಿ.
ಇವಳು 2017 -18 ರಲ್ಲಿ ಶ್ರೀ ಗುರುದೇವ ಕಾಲೇಜುನಲ್ಲಿ Science (PCMC) ಮುಗಿಸಿ ಉಪ್ಪಿನಂಗಡಿಯ ಸರಕಾರಿ ಕಾಲೇಜುನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದಳು. ದೇವರ ವಿಧಿಯಾಟದಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಇವಳ ಚಿಕಿತ್ಸೆಗಾಗಿ 10 ಲಕ್ಷದಿಂದ 15 ಲಕ್ಷದವರೆಗೆ ಬೇಕಾಗುವುದು ಎಂದು ಮಣಿಪಾಲ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಈಗಾಗಲೇ 5 ಲಕ್ಷದವರೆಗೆ ಚಿಕಿತ್ಸೆಗೆ ಖರ್ಚು ಆಗಿದೆ. ಬಲಿಷ್ಠ ಬಿಲ್ಲವರು ವಾಟ್ಸಾಪ್ ತಂಡ ಇದಕ್ಕಾಗಿ ಶ್ರಮಿಸುತ್ತಿದೆ.
ಈ ಬಡ ಕುಟುಂಬಕ್ಕೆ ಸಹಾಯ ಮಾಡುವವರು ಇದ್ದರೆ , ಈ ಕೆಳಗಿನ ಖಾತೆಗೆ ಧನ ಸಹಾಯ ಮಾಡಿ , ಇವಳ ಆರೋಗ್ಯವನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. A/c NO. 01502200102672 IFSC code .CNRB0010150 Gogal pay No.8861337939 Sampath poojary Phone pay No.8861337939 Sampath poojary
ಸರ್ಕಾರದ ವಿಶೇಷ ಪ್ಯಾಕೇಜ್ನಲ್ಲಿ ಸಣ್ಣ ಕೈಗಾರಿಕೆ ಪ್ರಿಂಟಿಂಗ್ ಪ್ರೆಸ್ ಮಾಲಕರಿಗೆ ಅನ್ಯಾಯ : ಎಮ್ ಮಹೇಶ್ ಕುಮಾರ್ ಮಲ್ಪೆ

Posted On: 20-05-2021 10:04AM
ಕಾಪು : ಸಣ್ಣ ಕೈಗಾರಿಕೆಯಾದ ಪ್ರಿಂಟಿಂಗ್ ಪ್ರೆಸ್ ಉದ್ಯಮ ಕೋವಿಡ್ ಎರಡನೇ ಅಲೆ ಪರಿಣಾಮ ಮಾಲೀಕರು, ಸೇರಿ ಸಾವಿರಾರು ಮಂದಿ ನೌಕರರು ಬೀದಿಗೆ ಬೀಳುವ ಪರಿಸ್ಥಿತಿಯಲ್ಲಿರುವಾಗ ಸರ್ಕಾರದ ವಿಶೇಷ ಪ್ಯಾಕೇಜ್ನಲ್ಲಿ ಪ್ರಿಂಟಿಂಗ್ ಪ್ರೆಸ್ ನ ಮಾಲಕರು ನೌಕರರು, ಪರಿಗಣಿಸದೇ ಅನ್ಯಾಯ ಮಾಡಿದೆ ಎಂದು ಉಡುಪಿ ಜಿಲ್ಲಾ ಮುದ್ರಣಾಲಯ ಗಳ ಮಾಲಕರ ಸಂಘದ ಅಧ್ಯಕ್ಷ ಎಮ್. ಮಹೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಸುಮಾರು 180 ಪ್ರಿಂಟಿಂಗ್ ಪ್ರೆಸ್ ಗಳಿದ್ದು 1200 ರ ವರೆಗೆ ನೌಕರರಿದ್ದು ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಉದ್ಯಮ ಮುಂದುವರಿಸುವುದು ಸವಾಲಾಗಿದೆ. ನಿರ್ವಹಣೆ, ಬ್ಯಾಂಕುಗಳ ಸಾಲ, ನೌಕರರ ಸಂಬಳಕ್ಕೆ ಸಂಬಂಧಿಸಿ ತೀವ್ರ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇನ್ನು ಮುಂದೆ ಉದ್ಯಮ ನಡೆಸಲು ಸಾಧ್ಯವಿಲ್ಲ.
ಮಾಲಕರ ಸಂಕಷ್ಟ ಕ್ಕೆ ಸೂಕ್ತವಾಗಿ ಸ್ಪಂದನೆ ನೀಡಿ ಸಾಲದ ಬಡ್ಡಿಯನ್ನು 6 ತಿಂಗಳ ವರೆಗೆ ಮನ್ನಾ ಮಾಡಿ ಸಾಲದ ಕಂತು 6 ತಿಂಗಳು ಮುಂದೂಡಬೇಕು ಸಾವಿರಾರು ನೌಕರರು ಕೆಲಸವಿಲ್ಲದೇ ಅತ್ರಂತ್ರರಾಗಿದ್ದು, ಅವರನ್ನು ಕಾರ್ಮಿಕರಂತೆ ಪರಿಗಣಿಸಿ ಸರ್ಕಾರ ಆರ್ಥಿಕ ಸಹಾಯಧನ ಮಾಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ ಉಡುಪಿ ತಂಡದಿಂದ ಕುಟುಂಬವೊಂದಕ್ಕೆ ತಿಂಗಳ ದಿನಸಿ ವಿತರಣೆ

Posted On: 19-05-2021 03:39PM
ಉಡುಪಿ : ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ (ರಿ.) ಉಡುಪಿ ತಂಡವು ಲಾಕ್ಡೌನ್ ನಿಂದ ತೀರಾ ಸಂಕಷ್ಟದಲ್ಲಿರುವ ಮಲ್ಪೆ ಪಡುಕೆರೆಯ ನಿವಾಸಿ ಭಾರತಿ ಅವರ ಮನೆಗೆ ಭೇಟಿ ನೀಡಿ ಒಂದು ತಿಂಗಳ ದಿನಸಿ ಸಾಮಾಗ್ರಿಗಳನ್ನು ವಿತರಿಸಿದರು.
ಈ ಸಂದರ್ಭ ಆಸರೆ ತಂಡದ ಸ್ಥಾಪಕಾಧ್ಯಕ್ಷರಾದ ಡಾ. ಕೀರ್ತಿ ಪಾಲನ್ ಹಾಗೂ ಕೋಶಾಧಿಕಾರಿ ಜಗದೀಶ್ ಬಂಟಕಲ್ ಉಪಸ್ಥಿತರಿದ್ದರು.
ಸ್ವಚ್ಛ ಭಾರತ್ ಫ್ರೆಂಡ್ಸ್ ವತಿಯಿಂದ ಲಾರಿ ಚಾಲಕರಿಗೆ ಉಚಿತ ಆಹಾರ ವಿತರಣೆ

Posted On: 19-05-2021 03:27PM
ಉಡುಪಿ : ಲಾಕ್ ಡೌನ್ ಅವಧಿಯಲ್ಲಿ ಹೊಟೇಲ್ ಗಳು ಮುಚ್ಚಿದ್ದು ಅದರಲ್ಲೂ ಸಣ್ಣ ಪುಟ್ಟ ಹೊಟೇಲ್, ಕ್ಯಾಂಟೀನ್ ನಡೆಸುವವರು ಮನೆಯಲ್ಲಿಯೇ ಕಾಲ ಕಳೆಯುವಂತೆ ಆಗಿರುವುದು ಒಂದೆಡೆಯಾದರೆ ಮತ್ತೊಂದೆಡೆ ಅಗತ್ಯ ವಸ್ತುಗಳನ್ನು ಸಾಗಾಟ ಮಾಡುವ ಲಾರಿ ಚಾಲಕರ ಉಪಹಾರ ಊಟದ ಸಮಯದಲ್ಲಿ ರಸ್ತೆ ಬದಿಯಲ್ಲಿ ಹೊಟೇಲ್ ಇಲ್ಲದ ಕಾರಣ ಸಮಸ್ಯೆ ಎದುರಿಸುತ್ತಿದ್ದಾರೆ.
ಇದನ್ನು ಮನಗಂಡು ಸಣ್ಣ ಹೆಜ್ಜೆಯನ್ನು ಮುಂದಿಟ್ಟ ಸ್ವಚ್ಛ ಭಾರತ್ ಫ್ರೆಂಡ್ಸ್ ವತಿಯಿಂದ ರಾಷ್ಟ್ರೀಯ ಹೆದ್ದಾರಿ 66 ಸಂತೆಕಟ್ಟೆ ಇಲ್ಲಿ ತರಕಾರಿ, ದಿನಸಿ ಸಾಮಗ್ರಿ, ಅಡುಗೆ ಅನಿಲ, ಪೆಟ್ರೋಲಿಯಂ ಉತ್ಪನ್ನಗಳನ್ನು ಸಾಗಾಟ ಮಾಡುವ ಲಾರಿ ಚಾಲಕರಿಗೆ ಬುಧವಾರ ಆಹಾರ ಪೊಟ್ಟಣಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಗಣೇಶ್ ಪ್ರಸಾದ್, ರಾಘವೇಂದ್ರ ಪ್ರಭು ಕರ್ವಾಲು, ರವೀಂದ್ರ ಹೇರೂರು, ಸಂತೋಷ್ ನಾಯ್ಕ್, ಉದಯ ನಾಯ್ಕ್ ಉಪಸ್ಥಿತರಿದ್ದರು.