Updated News From Kaup
ಆತ್ಮ ನಿರ್ಭರವಾಗಿ ದುಡಿಯುತ್ತಿರುವ ಮಹಿಳೆಯ ಯಶಸ್ಸಿನ ಕಥೆ
Posted On: 19-06-2021 02:12PM
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ಹುಟ್ಟಿ ಹೊತ್ತು ತನ್ನದೇ ಆದ "ಸೋಲೀಶ್ ವೇರ್" ಎಂಬ ಬ್ರಾಂಡ್ ತಯಾರಿಸಿ ವಸ್ತ್ರ ವಿನ್ಯಾಸದ ಜಗ್ಗತ್ತಿನಲ್ಲಿ ಅಗಾಧವಾದ ಸಾಧನೆ ಮಾಡುವ ಮಹದಾಸೆಯೊಂದಿಗೆ ತನ್ನ ಸ್ವಂತ ಶ್ರಮ, ಹಠ, ಪರಿಶ್ರಮ ಮತ್ತು ಶೃದ್ಧೆಯಿಂದ ತನ್ನ ಕನಸಿನ ಕೂಸಾದ "ಸೋಲಿಶ್" ಅನ್ನು ಕಟ್ಟಿ ದೇಶ ವಿದೇಶಗಳಲ್ಲಿ ಜನಪ್ರಿಯತೆ ಪಡೆದಿರುವ ಅರೀಫಾ ಇದೀಗ ಮಂಗಳೂರು ( ತುಳುನಾಡು ) , ಮಲೆನಾಡು , ರಾಜ್ಯದಾದ್ಯಂತ ತಮ್ಮ ಬ್ರಾಂಡ್ ಅನ್ನು ಪರಿಚಯಿಸುತ್ತಿದ್ದಾಳೆ.
ಯಶಸ್ವಿ ಉದ್ಯಮಿ, ಸಮಾಜ ಸೇವಕ ಹಿದಾಯತ್ ಅಡ್ಡೂರು ಅವರಿಂದ ದುಬೈನಲ್ಲಿ "ದ ಪ್ರೆಶ್" ಈ ಕಾಮರ್ಸ್ ಉದ್ಯಮ ಪ್ರಾರಂಭ
Posted On: 18-06-2021 03:17PM
ಮಂಗಳೂರು ಮೂಲದ ದುಬೈನ ಯಶಸ್ವಿ ಉದ್ಯಮಿ, ಸಮಾಜ ಸೇವಕ ಹಿದಾಯತ್ ಅಡ್ಡೂರು ಅವರು ತಮ್ಮ ಹೊಸ ಯೋಜನೆ 'ದ ಪ್ರೆಶ್' ಮೂಲಕ ದುಬೈ, ಶಾರ್ಜಾ, ಅಬುಧಾಬಿಯಲ್ಲಿ ತಾಜಾ ಮೀನು, ಚಿಕನ್ ಹಾಗು ಮಟನ್ ಮಾಂಸವನ್ನು ಮನೆಗಳಿಗೆ ಪೂರೈಸುವ ಈ ಕಾಮರ್ಸ್ ಉದ್ಯಮವನ್ನು ಗಲ್ಫ್ ರಾಷ್ಟ್ರದ ಅನೇಕ ಉದ್ಯಮಿಗಳು, ದುಬೈಯ ಭಾರತೀಯ ರಾಯಭಾರಿ ಕಛೇರಿಯ ಅಧಿಕಾರಿಗಳು, ಹಾಗೂ ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ಪ್ರಾರಂಭಿಸಿದರು.
ಕುಂದಾಪುರ : ಶಿಥಿಲ ಸ್ಥಿತಿಯಲ್ಲಿರುವ ಟ್ರಾನ್ಸ್ಫಾರ್ಮರ್ (ಟಿಸಿ)
Posted On: 17-06-2021 01:37PM
ಕುಂದಾಪುರ : ಕುಂದಾಪುರ ವಿನಾಯಕದಿಂದ ಕೋಡಿಗೆ ಹೋಗುವ ಸಂಪರ್ಕ ರಸ್ತೆ ಟಿಟಿ ರೋಡ್ ಕ್ರಾಸ್ ನಲ್ಲಿರುವ ಬಾವಿಕಟ್ಟೆ ಎಂಬಲ್ಲಿ ಟ್ರಾನ್ಸ್ಫಾರ್ಮರ್ ಶಿಥಿಲ ಗೊಂಡಿದೆ. ಈ ಶೀತಲಗೊಂಡ ಟ್ರಾನ್ಸ್ಫಾರ್ಮರ್ ಇನ್ನೇನು ಕೆಲವೇ ದಿನಗಳಲ್ಲಿ ರಸ್ತೆಗೆ ಬೀಳುವ ಸಂಭವ ಅತಿ ಹೆಚ್ಚಾಗಿದೆ.
ರೋಶನಿ ಧಾಮ ಪರಿಶಿಷ್ಟ ಪಂಗಡ ಬುಡಕಟ್ಟು ಪರಿವಾರದ ಸಂಕಷ್ಟಕ್ಕೆ ಸ್ಪಂದಿಸಿದ ಡಿವೈಎಸ್ಪಿ ಶ್ರೀಕಾಂತ್
Posted On: 16-06-2021 10:34AM
ಕುಂದಾಪುರ ಜೂ. 16 : ಕೋರೋನಾ ಮಹಾಮಾರಿ 2ನೇ ಅಲೆಗೆ ರೋಶನಿ ಧಾಮ ಪರಿಶಿಷ್ಟ ಪಂಗಡ ಬುಡಕಟ್ಟು ಜನರ ಸಂಕಷ್ಟವನ್ನು ಅರಿತು ಉಡುಪಿ ಜಿಲ್ಲೆ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹಾಗೂ ಕುಂದಾಪುರ ಪುರಸಭೆ ಸದಸ್ಯರಾದ ಪ್ರಭಾಕರ ವಿ.ರವರು ಹಿಂದೆ ಕುಂದಾಪುರದ ಡಿವೈಎಸ್ಪಿ ಶ್ರೀಕಾಂತ್ ಪ್ರಸ್ತುತ ಪರಿಶಿಷ್ಟ ಪಂಗಡ ಬುಡಕಟ್ಟು ಜನಾಂಗದ ಸ್ಥಿತಿಗತಿಗಳ ಮನವರಿಕೆ ಮಾಡಿ ಸಹಾಯ ಹಸ್ತ ಕೇಳಿದಾಗ ಡಿವೈಎಸ್ಪಿ ಶ್ರೀಕಾಂತ್ ರವರು ಸ್ಪಂದಿಸಿ ಫುಡ್ ಕಿಟ್ ನೀಡಿ ಮಾನವೀಯತೆ ಮೆರೆದಿದ್ದಾರೆ.
ದೈವ ಚಾಕ್ರಿ ಮತ್ತು ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ
Posted On: 15-06-2021 03:03PM
ಉಡುಪಿ : ಕೊರಗಜ್ಜ ದೈವಸ್ಥಾನ ಕುಕ್ಕೆಹಳ್ಳಿ ಹಾಗೂ ವಿಶ್ವ ಬಂಟ್ಸ್ ಯೂತ್ ವಿಂಗ್ ವತಿಯಿಂದ ದೈವ ಚಾಕ್ರಿ ಮತ್ತು ಬಡ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಕಾರ್ಯಕ್ರಮವನ್ನು ಬೊಬ್ಬರ್ಯ ದೈವಸ್ಥಾನದ ವಠಾರದಲ್ಲಿ ವಿಶ್ವ ಬಂಟ್ಸ್ ಯೂತ್ ವಿಂಗ್ ಉಡುಪಿ ಮಂಗಳೂರಿನ ಗೌರವ ಅಧ್ಯಕ್ಷರಾದ ಚಂದ್ರಶೇಖರ ಶೆಟ್ಟಿಯವರು ಆಹಾರ ಕಿಟ್ ಹಸ್ತಾಂತರ ಮಾಡುವ ಮೂಲಕ ಉದ್ಘಾಟಿಸಿದರು.
ಕುಲಾಲ ಸಂಘ ನಾನಿಲ್ತಾರ್, ಮುಂಡ್ಕೂರು ವತಿಯಿಂದ ಆಹಾರ ಕಿಟ್ ವಿತರಣೆ
Posted On: 15-06-2021 02:55PM
ಕಾರ್ಕಳ : ಮುಂಡ್ಕೂರು ಭಾಗದ ನಾನಿಲ್ತಾರ್ ಕುಲಾಲ ಸಂಘದ ವತಿಯಿಂದ ತೀರಾ ಆರ್ಥಿಕವಾಗಿ ಹಿಂದುಳಿದ ಕುಟುಂಬವನ್ನ ಗುರುತಿಸಿ ಆಹಾರ ಕಿಟ್ ವಿತರಣೆ ಸಂಘದ ಸಭಾಭವನ ದಲ್ಲಿ ನಡೆಯಿತು.
ಕಾಪು : ಧರೆಗುರುಳಿದ ಬೃಹತ್ ಗಾತ್ರದ ಮರ, ಅರಣ್ಯ ಇಲಾಖೆ, ಪೋಲೀಸ್, ಸ್ಥಳೀಯರಿಂದ ತೆರವು
Posted On: 15-06-2021 08:27AM
ಕಾಪು, ಜೂ.15 : ಇಂದು ಬೆಳಿಗ್ಗೆ ಕಾಪು, ಮಜೂರು ಸಂಪರ್ಕ ರಸ್ತೆಯಲ್ಲಿ ಬೃಹತ್ ಗಾತ್ರದ ಮರವೊಂದು ಧರೆಗುರುಳಿ ಸ್ಥಳೀಯರಿಗೆ ಸಂಚಾರಕ್ಕೆ ಅಡಚಣೆ ಉಂಟಾಯಿತು.
ಶಿರ್ವ : ಆಶಾ ಕಾರ್ಯಕರ್ತೆಯರಿಗೆ ರೇಶನ್ ಕಿಟ್ ವಿತರಣೆ
Posted On: 14-06-2021 08:07PM
ಕಾಪು : ಕೊರೋನಾ ವಾರಿಯರ್ಸ್ ಆಗಿ ಮುಂಚೂಣಿಯಲ್ಲಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಸಮಾಜ ಸೇವಕಿ ನೀತಾ ಪ್ರಭು ಕಾಪು ಮತ್ತು ಹಿಂದು ಜಾಗರಣ ವೇದಿಕೆ ಶಿರ್ವ ವಲಯ ವತಿಯಿಂದ ರೇಶನ್ ಕಿಟ್ ವಿತರಿಸಲಾಯಿತು.
ರಾಮಕುಂಜ : ಬಾವಿಗಳಿಗೆ ಜೀವ ನೀಡಿದ ಕೆರೆ
Posted On: 13-06-2021 02:56PM
ಮಂಗಳೂರು : ದಿನೇ ದಿನೇ ಕುಸಿಯುತ್ತಿರುವ ಅಂತರ್ಜಲ ಮಟ್ಟದಿಂದಾಗಿ ಕೆರೆ, ನದಿ,ಬಾವಿ, ಹಳ್ಳ ಕೊಳ್ಳಗಳು ಮಾಯವಾಗುತ್ತಿರುವ ಸಂದರ್ಭದಲ್ಲಿ ಇಲ್ಲೊಂದು ಕೆರೆ ತನ್ನ ಸುತ್ತಮುತ್ತಲಿನ ಅದೆಷ್ಟೋ ಬಾವಿಗಳಿಗೆ ಮರುಜೀವ ನೀಡಿದೆ.
ಕೊರೋನಾ ಸಂದರ್ಭ ನಿಸ್ವಾರ್ಥ ಸೇವೆಗೈಯುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಗೌರವ, ಆಹಾರ ಕಿಟ್ ವಿತರಣೆ
Posted On: 13-06-2021 10:36AM
ಕುಂದಾಪುರ : ಪ್ರಾಣವನ್ನೇ ಪಣಕ್ಕಿಟ್ಟು ಮಹಾಮಾರಿ ಕೊರೋನಾ 2ನೇ ಅಲೆಯ ವಿರುದ್ಧ ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಕೆಲಸ ಶ್ಲಾಘನೀಯ. ಕೋವಿಡ್ ನಿರ್ವಹಣೆಯ ಸಂದರ್ಭದಲ್ಲಿ ಮೊದಲಿಗೆ ಸಾರ್ವಜನಿಕರು ಭಯ ಭೀತರಾಗಿದ್ದರು. ಪರೀಕ್ಷೆ ಮಾಡಿಸಲು, ಲಸಿಕೆ ಹಾಕಿಸಿಕೊಳ್ಳಲು ಹಿಂಜರಿಯುತ್ತಿದ್ದಾಗ ಅವರ ಮನವೊಲಿಸಿ, ದುರ್ಗಮ, ಅಪಾಯಕಾರಿ ಜಾಗಕ್ಕೆ ತೆರಳಿ ಆಶಾ ಕಾರ್ಯಕರ್ತೆಯರು ಕೊರೋನಾ ಜಾಗೃತಿ ಮೂಡಿಸಿ ನಿಸ್ವಾರ್ಥ ಸೇವೆಯನ್ನು ಮಾಡುವ ಆಶಾ ಕಾರ್ಯಕರ್ತೆಯರನ್ನು ಮುಕ್ತ ಕಂಠದಿಂದ ಹೊಗಳಿ, ಅವರನ್ನು ಶಾಲು ಹೊದಿಸಿ, ಆಹಾರದ ಕಿಟ್ ನೀಡಿ ಗೌರವಿಸಲಾಯಿತು.
