Updated News From Kaup

ಉಡುಪಿಯ ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ ತಂಡದಿಂದ ಕುಂದಾಪುರ ಮೊಳಹಳ್ಳಿ ಗ್ರಾಮದ ಸರಕಾರಿ ಶಾಲೆಯ ಮಕ್ಕಳ ಪೋಷಕರಿಗೆ ದಿನಸಿ ಕಿಟ್ ವಿತರಣೆ

Posted On: 12-06-2021 08:05PM

ಉಡುಪಿ, ಜೂ.12 : ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ (ರಿ.) ಉಡುಪಿ ತಂಡವು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೋಣಿಹಾರ, ಮೊಳಹಳ್ಳಿ ಗ್ರಾಮ, ಕುಂದಾಪುರ ತಾಲೂಕು ಇಲ್ಲಿಗೆ ಭೇಟಿನೀಡಿ ಅಲ್ಲಿನ ವಿದ್ಯಾರ್ಥಿಗಳ ಯೋಗಕ್ಷೇಮವನ್ನು ವಿಚಾರಿಸಿ ಎಲ್ಲಾ ವಿದ್ಯಾರ್ಥಿಗಳಿಗೆ (25 ವಿದ್ಯಾರ್ಥಿಗಳು)ದಿನಸಿ ಸಾಮಗ್ರಿಗಳ ಕಿಟ್ ಗಳನ್ನು ವಿದ್ಯಾರ್ಥಿಗಳ ಪೋಷಕರಿಗೆ ಹಸ್ತಾಂತರಿಸಿದರು.

ರಾಜ್ಯ ಸರ್ಕಾರದಿಂದ ಅಧಿಕೃತ ಮಾನ್ಯತೆ ಸಿಗಲು ನಾಳೆ ತುಳುನಾಡಿನಾದ್ಯಂತ "ಟ್ವಿಟ್ ತುಳುನಾಡ್" ಅಭಿಯಾನ

Posted On: 12-06-2021 06:00PM

ತುಳು ಭಾಷೆಗೆ ರಾಜ್ಯ ಭಾಷೆಯ ಮಾನ್ಯತೆ ದೊರಕಬೇಕೆಂಬ ನೆಲೆಯಲ್ಲಿ ಹಲವಾರು ದಿನಗಳ ಬೇಡಿಕೆಯಾಗಿತ್ತು. ತುಳು ಭಾಷೆಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿಯೆತ್ತುವ ನಿಟ್ಟಿನಲ್ಲಿ ಜೈ ತುಳುನಾಡ್ ಸಂಘಟನೆ ಟ್ವೀಟ್ ತುಳುನಾಡ್ ಟ್ವಿಟ್ಟರ್ ಅಭಿಯಾನವನ್ನು ಹಮ್ಮಿಕೊಂಡಿದೆ. ನಾಳೆ (ಜೂನ್ 13) ಬೆಳಿಗ್ಗೆ 6ರಿಂದ ರಾತ್ರಿ 11.59 ರವರೆಗೆ ನಡೆಯಲಿದೆ. #TuluOfficialinKA_KL ಹ್ಯಾಶ್ ಟ್ಯಾಗ್ ಮಾಡುವ ಮೂಲಕ ತುಳುನಾಡಿನ ಸಮಸ್ತರು ಟ್ವೀಟ್ ಅಭಿಯಾನದಲ್ಲಿ ಪಾಲ್ಗೊಳ್ಳಲು ಮನವಿ ಮಾಡಿದ್ದಾರೆ.

ಹಿಂದೂ ಧರ್ಮದ ಅವಹೇಳನ Instagram ಮೇಲೆ ದೂರು ದಾಖಲು

Posted On: 11-06-2021 07:53PM

ಗೂಗಲ್ ಕನ್ನಡವನ್ನು ಪ್ರಪಂಚದ ಕೆಟ್ಟ ಭಾಷೆ ಎಂದು ತೋರಿಸಿತ್ತು , ಅಮೆಜಾನ್ ಕನ್ನಡದ ಹಳದಿ-ಕೆಂಪು ಬಣ್ಣದ ಬಾವುಟ ಹಾಗೂ ಸರ್ಕಾರದ ಲಾಂಛನಗಳನ್ನು ಕೆಟ್ಟ ರೀತಿಯಲ್ಲಿ ಉಪಯೋಗಿಸಿತ್ತು. ಇದೀಗ Instagram ನ ಸರದಿ , Instagram ಮಾಡಿದ್ದೇನು ? ಹೌದು ದೆಹಲಿಯ ಮನೀಷ್ ಸಿಂಗ್ ರವರು Instagram ಮೇಲೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಇದಕ್ಕೆ ಕಾರಣ Instagram ತನ್ನ ಅಪ್ಲಿಕೇಶನ್ ನಲ್ಲಿ ಭಾರತೀಯರಿಗೆ ಅವಮಾನ ಮಾಡಿದೆ.

ವಿಶೇಷ ಆರ್ಥಿಕ ಪ್ಯಾಕೇಜ್ ಗಾಗಿ ಅಖಿಲ ಭಾರತ ತುಳುನಾಡ ದೈವಾರಾಧಕರ ಒಕ್ಕೂಟದಿಂದ ಜಿಲ್ಲಾಧಿಕಾರಿಗೆ ಮನವಿ

Posted On: 10-06-2021 09:24PM

ಉಡುಪಿ : ಕೊರೊನ ಲಾಕ್ ಡೌನ್ ಸಂದರ್ಭದಲ್ಲಿ ದೈವ ಚಾಕ್ರಿ ವರ್ಗವು ಜೀವನ ನಡೆಸಲು ತುಂಬಾ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಇವರಿಗೆ ಯಾವುದೇ ಸಂಪಾದನೆ ಇಲ್ಲ. ದೈವಾರಾಧನೆ ಮೂಲ ಕುಲಕಸುಬಾಗಿ ಅವಲಂಬಿಸಿದ್ದಾರೆ. ಇದರಿಂದ ಬರುವ ಸಂಭಾವನೆಯಲ್ಲಿ ಕುಟುಂಬವನ್ನು ನೀಗಿಸಬೇಕಾಗಿದೆ. ಈ ನಿಟ್ಟಿನಲ್ಲಿ ಅಖಿಲ ಭಾರತ ತುಳುನಾಡ ದೈವಾರಾಧಕರ ಒಕ್ಕೂಟ (ರಿ. ) ಉಡುಪಿ ಜಿಲ್ಲೆಯ ಪದಾಧಿಕಾರಿಗಳು ಸರ್ವ ಸದಸ್ಯರ ಪರವಾಗಿ ಉಡುಪಿ ಜಿಲ್ಲಾಧಿಕಾರಿಯಾದ ಜಿ. ಜಗದೀಶ್ ಅವರನ್ನು ಭೇಟಿ ಮಾಡಿ ಮನವಿ ನೀಡಿದರು.

ಕೊರೊನಾ ಕಷ್ಟಕಾಲದಲ್ಲಿ ಅಸಹಾಯಕರ ಪಾಲಿಗೆ ನೆರವಾಗುತ್ತಿರುವ ಮೇಕ್ ಸಂಒನ್ ಸ್ಮೈಲ್ ಹೆಲ್ಪಿಂಗ್ ಹ್ಯಾಂಡ್ ತಂಡ

Posted On: 10-06-2021 08:56PM

ಕಾಪು : ಕೊರೋನದಿಂದಾಗಿ ನಮಗೆಲ್ಲ ತಿಳಿದಿರುವ ಹಾಗೆ ಬಹಳಷ್ಟು ಜನರ ಜೀವನದ ದಿಕ್ಕೇ ಬದಲಾಗಿದೆ, ಬದುಕಿಗೆ ಆಸರೆಯಾಗ ಬೇಕಿದ್ದವರೇ ಕೆಲಸವಿಲ್ಲದೇ ಮನೆಯಲ್ಲೇ ಇರಬೇಕಾದ ಪರಿಸ್ಥಿತಿ, ಈ ಕಷ್ಟ ಕಾಲದಲ್ಲಿ ನಾವೆಲ್ಲರೂ ಒಂದಾಗಿ ಒಬ್ಬರಿಗೊಬ್ಬರು ನೆರವಾಗುವುದೇ ಜೀವನ. ಮೇಕ್ ಸಂಒನ್ ಸ್ಮೈಲ್ ಹೆಲ್ಪಿಂಗ್ ಹ್ಯಾಂಡ್ ತಂಡ ನಮ್ಮ ಕೈಯಲ್ಲಾದ ಕಿಂಚಿತು ಸಹಾಯವನ್ನು ಈ ಕೊರೋನದಿಂದ ತೊಂದರೆಯಾದ ಕುಟುಂಬಗಳಿಗೆ ನೀಡುತ್ತಾ ಬಂದಿರುತ್ತದೆ. ಹಾಗೇ ಈ ವರುಷ ಕೊರೋನ ಎರಡನೇ ಅಲೆಯ ಲಾಕ್ಡೌನ್ ಅವಧಿಯಲ್ಲಿ ಈ ತಂಡವು ಉಡುಪಿ ಜಿಲ್ಲೆಯಾದ್ಯಂತ ಸಂಕಷ್ಟದಲ್ಲಿರುವ ಬಡ ಕುಟುಂಬಗಳಿಗೆ ಕಿಟ್ ವಿತರಿಸುವ ಕಾರ್ಯವನ್ನು ಕೈಗೆತ್ತಿಗೊಂಡಿದೆ. ಸುಮಾರು 5ಲಕ್ಷ ರೂಪಾಯಿ ವೆಚ್ಚದಲ್ಲಿ 500 ಕ್ಕಿಂತ ಹೆಚ್ಚು ಕುಟುಂಬಗಳಿಗೆ ಜಿಲ್ಲೆಯಾದ್ಯಂತ, ಹಳ್ಳಿ ಹಳ್ಳಿಗಳಲ್ಲಿ ಸಂಚರಿಸಿ, ತೀರಾ ಬಡವರಿಗೆ ಕಿಟ್ ವಿತರಿಸುವ ಕೆಲಸವನ್ನು ಕಳೆದ 10 ದಿನಗಳಿಂದ ಯಶಸ್ವಿಯಾಗಿ ಮಾಡುತ್ತ ಬಂದಿದೆ.

ತಲ್ಮಕ್ಕಿ ಪರಿಶಿಷ್ಟ ಪಂಗಡದ ಸಮುದಾಯ ಭವನವೋ! ಇಲ್ಲ ಸಿಮೆಂಟ್ ಗೋದಾಮೋ?

Posted On: 10-06-2021 07:26PM

ಕುಂದಾಪುರ ಜೂ.9: ಹೊಂಬಾಡಿ-ಮಂಡಾಡಿ ಗ್ರಾಮ ಪಂಚಾಯತ್ ತಲ್ಮಕ್ಕಿ ವ್ಯಾಪ್ತಿಯಲ್ಲಿ ಬರುವ ಪರಿಶಿಷ್ಟ ಪಂಗಡ ಸಮುದಾಯ ಭವನ ನಿರ್ಮಾಣಕ್ಕೆ ಕರ್ನಾಟಕ ಸರಕಾರ ಸರಿಸುಮಾರು ಅಂದಾಜು ವೆಚ್ಚ 12 ಲಕ್ಷ ವ್ಯಯಿಸಿ ಕೆ. ಆರ್.ಐ.ಡಿ. ಎಲ್., ಉಡುಪಿ ಅಡಿಯಲ್ಲಿ 2014-15ರಲ್ಲಿ ನಿರ್ಮಾಣ ಮಾಡಿತ್ತು.

ಕುಂದಾಪುರ : ಲಾರಿ ಚಾಲಕರಿಗೆ ಊಟ ನೀಡಿದ ಶ್ರೀನಾರಾಯಣಗುರು ಯುವಕ ಮಂಡಲ ಕುಂದಾಪುರ

Posted On: 08-06-2021 08:37PM

ಕುಂದಾಪುರ ಜೂ.7 : ಕೋವಿಡ್ ಎರಡನೇ ಅಲೆಯಿಂದ ಜನ ಜೀವನ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಈ ಕೊರೋನ ಲಾಕ್ಡೌನ್ ಹಲವರ ತುತ್ತಿನ ಅನ್ನ ಕುಸಿದಿದೆ. ಅದರಲ್ಲೂ ಲಾರಿ ಚಾಲಕರ ಸ್ಥಿತಿಯಂತೂ ಅತೀ ದಾರುಣವಾಗಿದೆ. ಕೋವಿಡ್ ಕರ್ಫ್ಯೂ ಘೋಷಣೆ ಆದ ಬಳಿಕ ಹೆದ್ದಾರಿಯಲ್ಲಿ ಕೈ ಬೆರಳೆಣಿಕೆಯಷ್ಟೇ ಹೋಟೆಲ್ ತೆರೆಯದೇ ಇರುವುದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂದು ಶ್ರೀನಾರಾಯಣ ಗುರು ಯುವಕ ಮಂಡಲ (ರಿ.) ಕುಂದಾಪುರ ವತಿಯಿಂದ ಲಾರಿ ಚಾಲಕರಿಗೆ ಸರಿಸುಮಾರು 250 ಊಟವನ್ನು ಕುಂದಾಪುರ ಮಾಜಿ ಪುರಸಭಾಧ್ಯಕ್ಷ ಅಧ್ಯಕ್ಷೆ ಶ್ರೀಮತಿ ಗುಣರತ್ನರವರ ನೆರವಿನಿಂದ ನೀಡಲಾಯಿತು.

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ವತಿಯಿಂದ ಕಾಪು ತಾಲೂಕಿನ ಸಿ ಪ್ರವರ್ಗದ ದೈವ - ದೇವಸ್ಥಾನಗಳ ಅರ್ಚಕ, ಸಿಬ್ಬಂದಿಗಳಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ

Posted On: 08-06-2021 12:32PM

ಕಾಪು : ಸರಕಾರದ ಆದೇಶದಂತೆ ಕಾಪು ತಾಲೂಕಿನ ಸಿ ಪ್ರವರ್ಗದ 30 ಅಧಿಸೂಚಿತ ಸಂಸ್ಥೆ ದೈವ - ದೇವಸ್ಥಾನಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು ಮತ್ತು ಸಿಬ್ಬಂದಿಗಳಿಗೆ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ವತಿಯಿಂದ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ವಿತರಿಸಲಾಯಿತು.

ಖಾಸಗಿ ಶಿಕ್ಷಕರಿಗೆ ಸಹಾಯ ಹಸ್ತ ನೀಡಿದ ನಟ ಲಿಖಿತ್ ಶೆಟ್ಟಿ

Posted On: 08-06-2021 11:26AM

ಕಾಪು : ಕೋವಿಡ್ ನಿಂದ ಅನೇಕ ಶಾಲಾ ಶಿಕ್ಷಕರಿಗೆ ಸಂಬಳ ಇಲ್ಲದಂತಹ ದಿನಗಳು ನಿರ್ಮಾಣವಾಗಿವೆ. ಕೆಲವರಿಗೆ ಅರ್ಧ ಸಂಬಳ, ಇನ್ನು ಕೆಲವರಿಗೆ ಸಮಯಕ್ಕೆ ಸರಿಯಾಗಿ ಸಂಬಳವೇ ತಲುಪುತ್ತಿಲ್ಲ. ತಮ್ಮವರನ್ನು ಕಳೆದುಕೊಂಡಿರುವ ಹಾಗೂ ಕೋವಿಡ್ ನಿಂದ ಅತಿಥಿ ಶಿಕ್ಷಕರಿಗೆ ಪರ್ಮನೆಂಟ್ ಕೆಲಸ ಆಗಲು ಇನ್ನೂ ಕಾಯಬೇಕಾದಂತಹ ಪರಿಸ್ಥಿತಿ.

ಕುಂದಾಪುರ ಅಂಬೇಡ್ಕರ್ ಕಾಲೋನಿ ನಿವಾಸಿಗಳಿಗೆ ಡೈನಾಮಿಕ್ ಇನ್ಫ್ರಾಟೆಕ್ ವತಿಯಿಂದ ಕಿಟ್ ವಿತರಣೆ

Posted On: 07-06-2021 03:19PM

ಕುಂದಾಪುರ, ಜೂ.7 : ಕೋವಿಡ್ ಮಹಾಮಾರಿ 2ನೇ ಅಲೆಗೆ ಜನಸಾಮಾನ್ಯರ ಬವಣೆ ಹೇಳತೀರದು, ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಅಂಬೇಡ್ಕರ್ ಕಾಲೋನಿ ಜನರ ಸಂಕಷ್ಟವನ್ನು ಅರಿತು ಉಡುಪಿ ಎಸ್ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಹಾಗೂ ಪುರಸಭೆ ಸದಸ್ಯರಾದ ಪ್ರಭಾಕರ್ ವಿ. ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶೇಖರ್ ಪೂಜಾರಿಯವರು, ಡೈನಾಮಿಕ್ ಇನ್ಫ್ರಾಟೆಕ್ ಸಂಸ್ಥೆಯ ಪಾಲುದಾರರಾದ ದಿನೇಶ್ ಅಮೀನ್, ಗಣೇಶ್ ಅಮೀನ್, ಧೀರಜ್ ಹೆಜ್ಮಾಡಿಯವರ ಸಹಭಾಗಿತ್ವದಲ್ಲಿ ನಿನ್ನೆ ಅಂಬೇಡ್ಕರ್ ಕಾಲೋನಿ ನಿವಾಸಿಗಳಿಗೆ ಸರಿಸುಮಾರು 25 ಫುಡ್ ಕಿಟ್ ವಿತರಣೆ ಮಾಡಲಾಯಿತು.