Updated News From Kaup
ಕಾಲೇಜಿನಲ್ಲಿ ಎನ್ಸಿಸಿಯನ್ನು ಚುನಾಯಿತ ವಿಷಯವಾಗಿ ತೆಗೆದುಕೊಳ್ಳಲು ಯುಜಿಸಿಯಿಂದ ವಿದ್ಯಾರ್ಥಿಗಳಿಗೆ ಅವಕಾಶ
Posted On: 24-05-2021 09:46PM
ಉಡುಪಿ: ಎನ್ಸಿಸಿಯನ್ನು ಆಕರ್ಷಕವಾಗಿಸಲು ಮತ್ತು ಉತ್ತಮ ಪ್ರತಿಭೆಗಳನ್ನು ಹೀರಿಕೊಳ್ಳುವಲ್ಲಿ ತ್ವರಿತಗತಿಯಲ್ಲಿ ಸಾಗುತ್ತಿರುವ ಎನ್ಸಿಸಿ (ನ್ಯಾಷನಲ್ ಕ್ಯಾಡೆಟ್ ಕಾರ್ಪ್ಸ್) ಈಗ ತನ್ನ ಕೆಡೆಟ್ಗಳಿಗೆ ಎನ್ಸಿಸಿಯನ್ನು ಚುನಾಯಿತ ವಿಷಯವಾಗಿ ಆಯ್ಕೆ ಮಾಡಲು ದಾರಿಗಳನ್ನು ತೆರೆಯಿತು. ಭವಿಷ್ಯದ ಗಡಿ ಪ್ರದೇಶಗಳ ವಿಸ್ತರಣಾ ಯೋಜನೆಯ ಭಾಗವಾಗಿ ಹೆಚ್ಚುವರಿ ಕೆಡೆಟ್ ಬಲವನ್ನು ಅಧಿಕೃತಗೊಳಿಸಿರುವ ಕರಾವಳಿ ಪ್ರದೇಶಗಳೂ ಸೇರಿದಂತೆ ಕೆಡೆಟ್ಗಳಿಗೆ ಫ್ಯೂಚರಿಸ್ಟಿಕ್ ಎಂದು ಸರ್ವಾನುಮತದಿಂದ ಪ್ರಶಂಸಿಸಲಾಗಿದೆ.
ಪರೀಕ್ಷೆ ನಡೆಸುವ ದಿಟ್ಟ ನಿರ್ಧಾರ ಅಭಿನಂದನೀಯ : ಶಿವಣ್ಣ ಬಾಯರ್
Posted On: 23-05-2021 10:23PM
ಇಂದು ಕೇಂದ್ರ ಸಚಿವರ ನೇತೃತ್ವದಲ್ಲಿ ವಿವಿಧ ರಾಜ್ಯಗಳ ಶಿಕ್ಷಣ ಸಚಿವರೊಂದಿಗೆ ಮಕ್ಕಳಿಗೆ ಪರೀಕ್ಷೆ ನಡೆಸುವ ಕುರಿತು ನಡೆದ ಸಂವಾದದಲ್ಲಿ ದ್ವಿತೀಯ ಪಿಯುಸಿಗೆ ಪರೀಕ್ಷೆ ಅನಿವಾರ್ಯ ಎಂಬ ಅಂಶವು ವ್ಯಕ್ತವಾಗಿರುವುದು ಪ್ರಶಂಸಾರ್ಹ. ನಮ್ಮ ರಾಜ್ಯದ ಮಾನ್ಯ ಸಚಿವರು ಪಬ್ಲಿಕ್ ಪರೀಕ್ಷೆ ನಡೆಸುವ ಬಗ್ಗೆ ದಿಟ್ಟ ನಿರ್ಧಾರ ಕೈಗೊಂಡಿರುವುದು ಅಭಿನಂದನೀಯ.
ಪಾದೆಬೆಟ್ಟು : ಕೊರೋನ ಜಾಗೃತಿ ಸಂದೇಶದೊಂದಿಗೆ 500 ಜನರಿಗೆ ತಲಾ 1ಕೆ.ಜಿಯಂತೆ ಬಾಳೆಹಣ್ಣು ವಿತರಣೆ
Posted On: 23-05-2021 10:18PM
ಪಡುಬಿದ್ರಿ : ಕೊರೊನಾ ಸಂದಿಗ್ಧ ಕಾಲದಲ್ಲಿ ಜಾಗೃತಿ ಮೂಡಿಸುವುದರೊಂದಿಗೆ ವಿಶ್ವ ಹಿಂದೂ ಪರಿಷತ್ ಹಾಗು ಸೇವಾ ಭಾರತಿ ಮತ್ತು ಪಾದೆಬೆಟ್ಟು ಯುವಕರಿಂದ ಪಡುಬಿದ್ರಿ-ಪಾದೆಬೆಟ್ಟು ವಲಯದಲ್ಲಿ ಸುಮಾರು 500 ಜನರಿಗೆ ತಲಾ 1ಕೆ.ಜಿ ಬಾಳೆಹಣ್ಣು ವಿತರಿಸಲಾಯಿತು.
ಪಾಂಗಾಳ : ಸರಿಯಾದ ಸೂರು, ವಿದ್ಯುತ್ ಸಂಪರ್ಕವಿಲ್ಲದೆ ದಿನ ಕಳೆಯುವ ಹಿರಿ ಜೀವಗಳಿಗೆ ನೆರವಾಗಿ
Posted On: 23-05-2021 04:19PM
ಕಾಪು : ಪಾಂಗಾಳ ಆರ್ಯಾಡಿ ನಿವಾಸಿಗಳಾದ ಗಂಗೆ ಪೂಜಾರ್ತಿ ಮತ್ತು ಗಿರಿಜಾ ಪೂಜಾರ್ತಿ ಮನೆ ತೀವ್ರ ದುಸ್ಥಿತಿಯಲ್ಲಿದೆ. ಕಳೆದ ಸೆಪ್ಟೆಂಬರ್ ನಲ್ಲಿ ಮಳೆಗೆ ಬಿದ್ದ ಈ ಮನೆಗೆ ಯಾವುದೇ ರೀತಿಯ ಸೌಲಭ್ಯ ದೊರಕಲಿಲ್ಲ.
ಪಡುಬಿದ್ರಿ : ಟಗ್ ಮೇಲಕ್ಕೆತ್ತಲು 2 ಸಂಸ್ಥೆಗಳ ಜಂಟಿ ಕಾರ್ಯಾಚರಣೆಗೆ ಒಪ್ಪಿದ ಎಂ.ಆರ್.ಪಿ.ಎಲ್
Posted On: 23-05-2021 01:02PM
ಪಡುಬಿದ್ರಿ : ತೌಕ್ತೆ ಚಂಡಮಾರುತದ ಅಬ್ಬರಕ್ಕೆ ಸಿಲುಕಿದ್ದ ಎಂ. ಆರ್. ಪಿ. ಎಲ್ ಗುತ್ತಿಗೆಯ ಗುಜರಾತ್ ನ ಅಲಯನ್ಸ್ ಟಗ್ ಪಡುಬಿದ್ರಿ ಸಮುದ್ರ ತೀರದಲ್ಲಿ ಮಗುಚಿ ಬಿದ್ದಿತ್ತು. ಇದನ್ನು ಮೇಲಕ್ಕೆತ್ತುವ ಜವಾಬ್ದಾರಿಯನ್ನು ಬಿಲಾಲ್ ನೇತೃತ್ವದ ಬದ್ರಿಯ ಸಂಸ್ಥೆಗೆ ನೀಡಲಾಗಿತ್ತು. ಕೆಲವು ದಿನಗಳ ಕಾರ್ಯಾಚರಣೆಯು ವಿಫಲವಾದ ಹಿನ್ನೆಲೆಯಲ್ಲಿ ಪಡುಬಿದ್ರಿಯ ಕಾಡಿಪಟ್ಣ ವಿಷ್ಣು ಭಜನಾ ಮಂದಿರದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚನೆಯಂತೆ ಎಂ. ಆರ್. ಪಿ. ಎಲ್. ನ ಎಂ.ಡಿ ವೆಂಕಟೇಶ್ ಈ ಕಾರ್ಯಾಚರಣೆಯನ್ನು ಬದ್ರಿಯ ಮತ್ತು ಯೋಜಕ ಸಂಸ್ಥೆಗಳಿಗೆ ನೀಡಲು ತೀರ್ಮಾನಿಸಿದ್ದಾರೆ.
ಪಡುಬಿದ್ರಿ : ಟಗ್ ಮೇಲಕ್ಕೆತ್ತಲು 2 ಸಂಸ್ಥೆಗಳ ಜಂಟಿ ಕಾರ್ಯಾಚರಣೆಗೆ ಒಪ್ಪಿದ ಎಂ.ಆರ್.ಪಿ.ಎಲ್
Posted On: 23-05-2021 01:02PM
ಪತ್ತನಾಜೆ : ಒಂದು ಚಿಂತನೆ
Posted On: 23-05-2021 10:02AM
ಪತ್ತನಾಜೆ ಪೂರ್ವೋತ್ತರ : ಪೃಥ್ವೀ ಗಂಧವತೀ 'ಪತ್ತನಾಜೆ' ಎಂದರೆ ಆಟ. ಕೋಲ, ಬಲಿ, ಅಂಕ, ಆಯನಗಳಿಗೆ ಅಲ್ಪವಿರಾಮ ಎಂಬ ನಂಬಿಕೆ ಸರಿಯಾದುದೇ . ಆದರೆ ಸಾಕು ಸಂಭ್ರಮ - ಗೌಜಿ ಗದ್ದಲ , ಉತ್ಸವಗಳ ಗುಂಗಿನಿಂದ ಹೊರಗೆ ಬಾ.....ತೊಡಗು... ಕೃಷಿಗೆ ಎಂಬ ಎಚ್ಚರಿಕೆಯೂ 'ಪತ್ತನಾಜೆ'ಯ ನೆನಪಿನಲ್ಲಿದೆ . ಆಚರಣೆಗಳು ಇಲ್ಲದಿದ್ದರೂ ಜೀವನಾಧಾರವಾದ ಬೇಸಾಯಕ್ಕೆ ಪ್ರವೃತ್ತನಾಗು ಎಂಬ ನಿರ್ದೇಶನ ಪತ್ತನಾಜೆ ಒದಗಿ ಬರುವ ಸಂದರ್ಭದಲ್ಲಿ ನಿಚ್ಚಳ . ತುಳುವರ ಬೇಶ ತಿಂಗಳ ಹತ್ತನೇ ದಿನವೇ ಪತ್ತನಾಜೆ .ಸೌರ ಪದ್ಧತಿಯ ಎರಡನೇ ತಿಂಗಳು ವೃಷಭ .ವೃಷಭ ಎಂದರೆ ಬೇಶ .ಹತ್ತನೇ ದಿನವನ್ನು ತಿಂಗಳು ಸಾಗುವ ಹತ್ತನೇ ಹೆಜ್ಜೆ (ಅಜೆ)ಎಂದು ಗ್ರಹಿಸಿ 'ಪತ್ತನಾಜೆ"ಎಂದಿರ ಬಹುದು.
ವೆನ್ಲೋಕ್ ಆಸ್ಪತ್ರೆಯ ಕೋವಿಡ್ 19 ರ ಮುಖ್ಯ ನೋಡಲ್ ಆಫೀಸರ್ ಆಗಿ ಹಿರಿಯ ವೈದ್ಯ ಡಾ ಎಂ ಅಣ್ಣಯ್ಯ ಕುಲಾಲ್ ನೇಮಕ
Posted On: 22-05-2021 09:26PM
ಮಂಗಳೂರು :ಡಾ. ಎಂ. ಅಣ್ಣಯ್ಯ ಕುಲಾಲ್ ಅವರು ಕೊರೊನ ಆರಂಭವಾದ ದಿನಗಳಿಂದ ಮಂಗಳೂರು ಭಾರತೀಯ ವೈದ್ಯಕೀಯ ಸಂಘ, ಕುಟುಂಬ ವೈದ್ಯರ ಸಂಘಟನೆ, ಶ್ರೀನಿವಾಸ್ ವಿಶ್ವವಿದ್ಯಾಲಯ ಗಳ ಜೊತೆ ಸೇರಿ ಶುಶ್ರೂಷೆ, ಆರೈಕೆ ಮತ್ತು ಜನಜಾಗೃತಿ ಯಲ್ಲಿ ತೊಡಗಿಸಿ ಕೊಂಡಿದ್ದರು.
ಕಾಪು : ತೌಕ್ತೆ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶದ ಜನರಿಗೆ ದಿನಸಿ ಕಿಟ್ ವಿತರಿಸಿದ ದಾನಿ
Posted On: 22-05-2021 04:06PM
(ನಮ್ಮ ಕಾಪು ವರದಿ) : ಸದಾ ಒಂದಿಲ್ಲೊಂದು ಸಾಮಾಜಿಕ ಸೇವೆಯಲ್ಲಿ ಭಾಗಿಯಾಗುತ್ತಾ, ಕಳೆದ ಲಾಕ್ ಡೌನ್ ಸಂದರ್ಭದಲ್ಲಿ ಹಾಗೂ ಪ್ರಸ್ತುತ ಲಾಕ್ಡೌನ್ ನಲ್ಲಿಯೂ ಎಡೆಬಿಡದೆ ನಿತ್ಯ ನಿರಂತರವಾಗಿ ಅನ್ನದಾನ, ದಿನಸಿ ಕಿಟ್ ವಿತರಣೆ ಮಾಡುವ ಇನ್ನಂಜೆ ವಿಶ್ವ ಹಿಂದೂ ಪರಿಷತ್ ನ ಅಧ್ಯಕ್ಷರಾದ ಮಡುಂಬು ಕೆ. ಪಿ ಶ್ರೀನಿವಾಸ ತಂತ್ರಿ ಇವರು ಇಂದು ಪಡು ಕಾಪು ಭಾಗದಲ್ಲಿ ತೌಕ್ತೆ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಪುರಸಭಾ ಅಧ್ಯಕ್ಷ ಅನಿಲ್ ಕುಮಾರ್ ಇವರ ಅಪೇಕ್ಷೆಯ ಮೇರೆಗೆ ಸುಬಯ್ಯ ತೋಟ ಕಾಪು ಪಡು ಇಲ್ಲಿನ 23 ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸಿದರು.
ಕೋವಿಡ್ ಪ್ಯಾಕೇಜ್ ಘೋಷಿಸಲು ಉಡುಪಿ ಜಿಲ್ಲೆಯ ಅಖಿಲ ಭಾರತ ತುಳುನಾಡ ದೈವಾರಾಧಕರ ಒಕ್ಕೂಟದಿಂದ ಮುಖ್ಯಮಂತ್ರಿಗೆ ಮನವಿ
Posted On: 22-05-2021 12:18PM
ಉಡುಪಿ : ದೇಶದಲ್ಲಿ ಹಾಗೂ ನಮ್ಮ ರಾಜ್ಯದಲ್ಲಿ ಲಾಕ್ ಡೌನ್ ಆಗಿರುವ ಕಾರಣ ತುಳುನಾಡ ದೈವ ಚಾಕ್ರಿ ವರ್ಗದವರ ಹಲವಾರು ಸಮಸ್ಯೆಗಳು ಎದುರಿಸುತ್ತಿದ್ದಾರೆ ಯಾವುದೇ ಆದಾಯವಿಲ್ಲ.
