Updated News From Kaup
ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಆದಿ ಉಡುಪಿಯಲ್ಲಿ 75 ನೇ ಸ್ವಾತಂತ್ರೋತ್ಸವ
Posted On: 15 Aug 2021, 01:14 PM
ಉಡುಪಿ : ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಆದಿ ಉಡುಪಿ ಇಲ್ಲಿ 75 ನೇ ಸ್ವಾತಂತ್ರೋತ್ಸವ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ವನ್ನು ಹಿರಿಯ ವಿಶ್ವಸ್ತರಾದ ತೇಜಪ್ಪ ಬಂಗೇರ ನೆರವೇರಿಸಿದರು. ಅಧ್ಯಕ್ಷರಾದ ದಾಮೋದರ್ ಕಲ್ಮಾಡಿ, ಹಿರಿಯರಾದ ಶಿವರಾಮ ಪೂಜಾರಿ, ಸಂಜೀವ ಪೂಜಾರಿ, ಶೇಖರ್ ಪೂಜಾರಿ, ಚೆಲುವರಾಜ್ ಪೆರಂಪಳ್ಳಿ, ಗಂಗಾಧರ್ ಕಿದಿಯೂರ್, ಕೋಶಾಧಿಕಾರಿ ಮಹೇಶ್ ಎನ್, ಕಾರ್ಯದರ್ಶಿ ಎಮ್. ಮಹೇಶ್ ಕುಮಾರ್ ಉಪಸ್ಥಿತರಿದ್ದರು. ಈ ಸಂದರ್ಭ ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸಲಾಯಿತು.
ಕಾಪು : ಯುವವಾಹಿನಿ, ಬಿರುವೆರ್ ಕಾಪು ಸೇವಾ ಟ್ರಸ್ಟ್, ಲೈಟ್ ಹೌಸ್ ಬೀಚ್ ರೆಸಾರ್ಟ್ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆ
Posted On: 15 Aug 2021, 11:52 AM
ಕಾಪು : ಯುವವಾಹಿನಿ ಕಾಪುಘಟಕ , ಬಿರುವೆರ್ ಕಾಪು ಸೇವಾ ಟ್ರಸ್ಟ್ ಮತ್ತು ಲೈಟ್ ಹೌಸ್ ಬೀಚ್ ರೆಸಾರ್ಟ್ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆಯು ಕಾಪುವಿನ ಲೈಟ್ ಬೀಚ್ ರೆಸಾರ್ಟ್ ಇಲ್ಲಿ ನಡೆಯಿತು. ರೆಸಾಟ್೯ ಮಾಲಕರಾದ ದೀಪಕ್ ಎರ್ಮಾಳ್, ಯುವವಾಹಿನಿ ಕಾಪು ಘಟಕದ ಕಾರ್ಯದರ್ಶಿ ಸುಧಾಕರ್ ಸಾಲ್ಯಾನ್, ಬಿರುವೆರ್ ಕಾಪು ಸೇವಾ ಟ್ರಸ್ಟ್ ಅಧ್ಯಕ್ಷರಾದ ಬಾಲಕೃಷ್ಣ ಆರ್. ಕೋಟ್ಯಾನ್, ಆಮೇಚೂರ್ ರೇಡಿಯೋ ಸೊಸೈಟಿ ಒಫ್ ಇಂಡಿಯಾ ಇದರ ಇಂಟರ್ನ್ಯಾಷನಲ್ ಆಮೇಚೂರ್ ರೇಡಿಯೋ ಯೂನಿಯನ್ ಸದಸ್ಯರಾದ ರಮೇಶ್ ಕುಮಾರ್, ಖಾದರ್ ಉಚ್ಚಿಲ, ಸಂದೇಶ್ ಮತ್ತು ಸದಸ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ 75ನೇ ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮ
Posted On: 15 Aug 2021, 10:26 AM
ಕಾಪು : ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದಲ್ಲಿ ಇಂದು 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಣೆಯನ್ನು ವಾರಾಂತ್ಯ ಕರ್ಪ್ಯೂ ಮತ್ತು ಕೋವಿಡ್ 19 ಮಾರ್ಗಸೂಚಿಯಂತೆ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಾಲೇಜಿನ ಆಡಳಿತಾತ್ಮಕ ಸಹಾಯಕ ಸಿಬ್ಬಂದಿ ಶ್ರೀರಂಗ ರವರು ಧ್ವಜಾರೋಹಣವನ್ನು ನೆರವೇರಿಸಿದರು. ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸರವರು , ದೇಶದ ಬುನಾದಿಯಾದ ಯುವಜನರು ಹಲವಾರು ಕ್ಷೇತ್ರಗಳಲ್ಲಿ ಸರ್ವತೋಮುಖವಾಗಿ ಪ್ರಗತಿ ಸಾಧಿಸಲು ಕಠಿಣ ಪರಿಶ್ರಮ,ಸರಿಯಾದ ಮಾರ್ಗದರ್ಶನವನ್ನು ಪಡೆದುಕೊಂಡು ನವಸಮಾಜ ನಿರ್ಮಾಣ ಜೊತೆಗೆ ದೇಶಾಭಿವೃದ್ಧಿಗಾಗಿ ತಮ್ಮ ಕೈಲಾದ ಸಹಾಯವನ್ನುಮಾಡಬೇಕಿದೆ. ನಿಜವಾದ ಸ್ವಾತಂತ್ರ್ಯ ಸಂಭ್ರಮಾಚರಣೆ ಎಂದರೆ ಮಾನವರಾದ ನಾವು ಮಾನವೀಯತೆ ಮೆರೆದು ಬಂದಿರುವ ಸಂಕಷ್ಟಗಳು ಸಹಾಯ ಹಸ್ತದ ಮೂಲಕ ನಿವಾರಣೆಯಾಗಲೆಂದು ಪ್ರಾರ್ಥಿಸೋಣ,ನಮ್ಮ ಯೋಧರ ತ್ಯಾಗಗಳನ್ನು ಸ್ಮರಿಸೋಣ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಸದಾ ನೆನೆಯೋಣ ಎಂದು ಸ್ವಾತಂತ್ರ್ಯ ಸಂದೇಶವನ್ನು ನೀಡಿದರು. ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಕೆ.ಪ್ರವೀಣ್ಕುಮಾರ್, ಕ್ಯಾಡೆಟ್ ಸೀನಿಯರ್ ಅಂಡರ್ ಆಫೀಸರ್ ಭಟ್ ರಾಮದಾಸ್ ಸತೀಶ್, ಕ್ಯಾಡೆಟ್ ಜೂನಿಯರ್ ಆಫೀಸರ್ ಪ್ರವಿತ ಆಚಾರ್ಯ, ರಿಯಾನ್ ರಿಷಿ ಆಲ್ಫೋನ್ಸೋ, ಕಂಪನಿ ಸಾರ್ಜೆಂಟ್ ಮೇಜರ್ ಪ್ರತಿಮ, ಕ್ವಾರ್ಟರ್ ಮಾಸ್ಟರ್ ರೈನ್ ಅಂದ್ರಾದೆ ಪರೇಡ್ ನ ನೆರವೇರಿಸಿಕೊಟ್ಟರು. ಈ ಸಂದರ್ಭದಲ್ಲಿ ಎನ್.ಸಿ.ಸಿ, ಎನ್.ಎಸ್.ಎಸ್, ರೋವೇರ್ಸ್ ಹಾಗೂ ರೇಂಜರ್ಸ್ ವಿದ್ಯಾಥಿಗಳು ಹಾಗು ಅಧ್ಯಾಪಕರಿಂದ ದೇಶ-ಭಕ್ತಿ ಗೀತೆಗಳನ್ನು ಹಾಡಿದರು. ಎನ್.ಸಿ.ಸಿ ಅಧಿಕಾರಿ ಲೆಫ್ಟಿನೆಂಟ್ ಶ್ರೀ ಕೆ.ಪ್ರವೀಣ್ಕುಮಾರ್,ಕ್ಯಾಡೆಟ್ ಸೀನಿಯರ್ ಅಂಡರ್ ಆಫೀಸರ್ ಭಟ್ ರಾಮದಾಸ್ ಸತೀಶ್, ಕ್ಯಾಡೆಟ್ ಜೂನಿಯರ್ ಆಫೀಸರ್ ಪ್ರವಿತ ಆಚಾರ್ಯ, ರಿಯಾನ್ ರಿಷಿ ಆಲ್ಫೋನ್ಸೋ, ಕಂಪನಿ ಸಾರ್ಜೆಂಟ್ ಮೇಜರ್ ಪ್ರತಿಮ, ಕ್ವಾರ್ಟರ್ ಮಾಸ್ಟರ್ ರೈನ್ ಅಂದ್ರಾದೆ ಪರೇಡ್ ನ ನೆರವೇರಿಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಎನ್ಎಸ್ಎಸ್ ಯೋಜನಾಧಿಕಾರಿ ಶ್ರೀರಕ್ಷಾ, ರೋವರ್ಸ್ ಮತ್ತು ರೇಂಜರ್ಸ್ ಸ್ಕೌಟ್ ಲೀಡರ್ ಗಳಾದ ಪ್ರಕಾಶ್, ಸಂಗೀತ ಪೂಜಾರಿ, ಎನ್ ಎಸ್ ಎಸ್ ಘಟಕದ ವಿದ್ಯಾರ್ಥಿ ನಾಯಕರಾದ ಅಕ್ಷಯ್, ಸುರೇಖಾ, ವೈಷ್ಣವಿ, ಅಪೇಕ್ಷಾ, ರೋವರ್ಸ್ ಮತ್ತು ರೇಂಜರ್ಸ್ ಘಟಕದ ವಿದ್ಯಾರ್ಥಿ ನಾಯಕರಾದ ಫ್ರಾಂಕ್ಲಿನ್ ಮತಾಯಸ್ ಮತ್ತು ಪ್ರತೀಕ್ಷಾ,ಕಾಲೇಜಿನ ಎಲ್ಲಾ ಭೋಧಕ ಹಾಗು ಭೋಧಕೆತರ ವೃಂದದವರು ಉಪಸ್ಥಿತರಿದ್ದರು. ಸ್ಟಾಫ್ ಸೆಕ್ರೆಟರಿ ರೀಮಾ ಲೋಬೊ ಸ್ವಾಗತಿಸಿ, ಕಾಲೇಜಿನ ವಿದ್ಯಾರ್ಥಿ ಕ್ಷೇಮಾಮಾಭಿವೃದ್ಧಿ ನಿರ್ದೇಶಕಿ ಯಶೋದ ಕಾರ್ಯಕ್ರಮ ಸಂಯೋಜಿಸಿ, ಎನ್ಎಸ್ಎಸ್ ಅಧಿಕಾರಿ ಪ್ರೇಮನಾಥ್ ವಂದಿಸಿದರು.
ಇನ್ನಂಜೆ : ನೂತನ ಭಗವಧ್ವಜ ಕಟ್ಟೆ ಲೋಕಾರ್ಪಣೆ
Posted On: 13 Aug 2021, 08:48 PM
ಕಾಪು : ಇನ್ನಂಜೆ ಗ್ರಾಮ ಹಾಗು ಮಜೂರು ಗ್ರಾಮದ ಗಡಿ ಭಾಗವಾಗಿರುವ ರೆಂಜಾಲ ಪಾದೆಯಲ್ಲಿ ಇಂದು ಯುವಸೇನೆ ಮಡುಂಬು ತಂಡದ ಸದಸ್ಯರ ಸಹಕಾರದಿಂದ ನಿರ್ಮಿಸಲಾದ ನೂತನ ಧ್ವಜ ಕಟ್ಟೆಯನ್ನು ಲೋಕಾರ್ಪಣೆ ಮಾಡಲಾಯಿತು. ಭಗವಧ್ವಜ ಆರೋಹಣದ ಮೂಲಕ ವಿದ್ವಾನ್ ಮತ್ತು ಜ್ಯೋತಿಷಿ, ಪೇರ್ಮುಂಡೆ, ಬೆಳ್ಳರ್ಪಾಡಿ,ಮಂಗಿಲ್ಲಾರು ದೇವಸ್ಥಾನದ ಪ್ರಧಾನ ತಂತ್ರಿಗಳಾದ ಇನ್ನಂಜೆ ವಿಶ್ವ ಹಿಂದೂ ಪರಿಷತ್ ವಿಷ್ಣು ಘಟಕದ ಅಧ್ಯಕ್ಷರಾದ ಮಡುಂಬು ಕೆ. ಪಿ. ಶ್ರೀನಿವಾಸ ತಂತ್ರಿಯವರು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಯುವಸೇನೆಯ ಈ ಕಾರ್ಯದಿಂದ ಕುಂಜಾರುಗಿರಿಗೆ ಸಂಬಂಧಪಟ್ಟಿರುವ ಈ ಪವಿತ್ರ ಕ್ಷೇತ್ರ ಮುಂದಿನ ದಿನಗಳಲ್ಲಿ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು. ಧ್ವಜ ಕಟ್ಟೆಗೆ ಪುಷ್ಪ ಸಮರ್ಪಿಸುವುದರೊಂದಿಗೆ ರಾಷ್ಟೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ (ಸ್ವಯಂ ಸೇವಕರಾದ) ವರುಣ್ ಬಂಟಕಲ್ಲ್ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಿದರು. ಮುಖ್ಯ ಅತಿಥಿಯಾಗಿ ಉಡುಪಿ ಚಂದ್ರಮೌಲೀಶ್ವರ ದೇವಸ್ಥಾನದ ತಂತ್ರಿಗಳಾದ ಮನೋಹರ ತಂತ್ರಿ ಉಡುಪಿ, ಉಂಡಾರು ವಿಷ್ಣುಮೂರ್ತಿ ದೇವಸ್ಥಾನದ ಅರ್ಚಕರಾದ ಶ್ರವಣ್ ಭಟ್ ಮತ್ತು ನಾಗಭೂಷಣ್ ಭಟ್ ಕಾಪು, ಯುವಸೇನೆ ಮಡುಂಬು ತಂಡದ ಅಧ್ಯಕ್ಷರಾದ ವರುಣ್ ಶೆಟ್ಟಿ ಮಡುಂಬು, ಸ್ಥಳೀಯ ಗ್ರಾ. ಪಂ ಸದಸ್ಯರು ಹಾಗೂ ಯುವಸೇನೆ ಮಡುಂಬು ತಂಡದ ಸದಸ್ಯರಾದ ನಿತೇಶ್ ಸಾಲ್ಯಾನ್ ಕಲ್ಯಾಲು, ಇನ್ನಂಜೆ ಯುವಕ ಮಂಡಲದ ಅಧ್ಯಕ್ಷರು ಹಾಗೂ ಇನ್ನಂಜೆ ಗ್ರಾ. ಪಂ ಸದಸ್ಯರಾದ ದಿವೇಶ್ ಶೆಟ್ಟಿ ಕಲ್ಯಾಲು, ಇನ್ನಂಜೆ ಗ್ರಾ. ಪಂ ಸದಸ್ಯೆ ಸವಿತಾ ಸುರೇಶ್ ಶೆಟ್ಟಿ, ಇನ್ನಂಜೆ ರೋಟರಿ ಸಮುದಾಯ ದಳದ ಅಧ್ಯಕ್ಷರಾದ ಪ್ರಶಾಂತ್ ಶೆಟ್ಟಿ ಮಂಡೇಡಿ, ಬಾಲಕೃಷ್ಣ ಕೋಟ್ಯಾನ್ ಕಲ್ಯಾಲು, ಸುರೇಶ್ ಶೆಟ್ಟಿ ಮಡುಂಬು, ಪ್ರಶಾಂತ್ ಪೂಜಾರಿ ಕಾಪು, ದೀಕ್ಷಾ ತಂತ್ರಿ, ಲತಾ ಸಾಲ್ಯಾನ್ ಹಾಗೂ ಯುವಸೇನೆ ಮಡುಂಬು ತಂಡದ ಸರ್ವಸದಸ್ಯರು ಉಪಸ್ಥಿತರಿದ್ದರು.
ಕಟಪಾಡಿಯ ಪ್ರಥಮ್ ಕಾಮತ್ ಕೈ ಚಳಕದಿ ಮೂಡಿದೆ ತರಕಾರಿಯ ತ್ರಿವರ್ಣ ಕಲಾಕೃತಿ
Posted On: 13 Aug 2021, 08:13 PM
ಕಾಪು : ನಮ್ಮ ರಾಷ್ಟ್ರದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಚಿತ್ರಕಲೆ, ಕ್ರಾಫ್ಟ್, ಕ್ಲೇ ಮಾಡೆಲಿಂಗ್, ಮ್ಯಾಜಿಕ್ ಕಲೆಯಲ್ಲಿ ತನ್ನದೇ ಛಾಪನ್ನೊತ್ತಿದ ಬಾಲ ಪ್ರತಿಭೆ ಕಟಪಾಡಿಯ ಪ್ರಥಮ್ ಕಾಮತ್ ಇವರು ತರಕಾರಿಯಲ್ಲಿ ತ್ರಿವರ್ಣ ಕಲಾಕೃತಿ ರಚಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಉದಯ ಟಿ.ವಿ.ಯ ಸದಾ ನಿಮ್ಮೊಂದಿಗೆ ಕಾರ್ಯಕ್ರಮದಲ್ಲಿ ಚಲನಚಿತ್ರ ನಟ ಶ್ರೀನಗರ ಕಿಟ್ಟಿಯವರೊಂದಿಗೆ ಮ್ಯಾಜಿಕ್ ಪ್ರದರ್ಶನ ನೀಡಿರುವುದಲ್ಲದೆ, ಕಾರ್ಕಳದಲ್ಲಿ ನಡೆದ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಮ್ಯಾಜಿಕ್ ಪ್ರದರ್ಶನ ನೀಡಿ, 'ಕನಾರ್ಟಕ ಪ್ರತಿಭಾರತ್ನ' ರಾಜ್ಯ ಮಟ್ಟದ ಗೌರವ ಪ್ರಶಸ್ತಿಯನ್ನು ಗಳಿಸಿರುತ್ತಾರೆ. ಈಗಾಗಲೇ ಹಲವು ರಾಷ್ಟ್ರ, ರಾಜ್ಯ, ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಬಹುಮಾನಿತರಾದ ಇವರು ರಮೇಶ್ರಾವ್ ನೇತೃತ್ವದ ಉಡುಪಿ ದೃಶ್ಯ ಸ್ಕೂಲ್ ಆಫ್ ಆರ್ಟ್ನಲ್ಲಿ ಚಿತ್ರಕಲೆ ಹಾಗೂ ಕ್ರಾಫ್ಟ್ ಕಲಿಯುತ್ತಿದ್ದು, ವೆಂಕಿ ಪಲಿಮಾರ್ ಬಳಿ ಕ್ಲೇ ಮಾಡೆಲಿಂಗ್, ಅಂತರಾಷ್ಟ್ರೀಯ ಖ್ಯಾತಿಯ ಮ್ಯಾಜಿಷಿಯನ್ ಸತೀಶ್ ಹೆಮ್ಮಾಡಿ ಬಳಿ ಮ್ಯಾಜಿಕ್ ಕಲೆಯನ್ನು ಕಲಿಯುತ್ತಿದ್ದಾರೆ. ಕಟಪಾಡಿಯ ಕೆ. ನಾಗೇಶ್ ಕಾಮತ್ ಮತ್ತು ಕೆ. ಸುಜಾತ ಕಾಮತ್ ದಂಪತಿಯ ಸುಪುತ್ರನಾಗಿರುವ ಪ್ರಥಮ್ ಕಾಮತ್, ಕಟಪಾಡಿ ಎಸ್.ವಿ.ಕೆ. ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿಯ ವಿದ್ಯಾರ್ಥಿಯಾಗಿದ್ದಾರೆ.
ಕಲ್ಯಾಣಪುರ ರೋಟರಿ ವತಿಯಿಂದ ಕೆಳಾರ್ಕಳಬೆಟ್ಟು ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೆ ದೇಣಿಗೆ
Posted On: 13 Aug 2021, 06:41 PM
ಉಡುಪಿ : ಕಲ್ಯಾಣಪುರ ರೋಟರಿ ವತಿಯಿಂದ ಕಲ್ಯಾಣಪುರ ಸಮೀಪದ ಕೆಳಾರ್ಕಳಬೆಟ್ಟು ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೆ ರೋಟರಿ ಸದಸ್ಯ, ದಾನಿ, ಶಾಲೆಯ ಹಿತೈಷಿ ಸಮಿತಿಯ ಅಧ್ಯಕ್ಷ ಸಂಜೀವ ಟಿ. ಅವರು ನೀಡಿದ ₹ 25,000 ದೇಣಿಗೆಯನ್ನು ಕಲ್ಯಾಣಪುರ ರೋಟರಿಯ ಅಧ್ಯಕ್ಷ ಶಂಭು ಶಂಕರ್ ಶಾಲಾ ಮುಖ್ಯೋಪಾಧ್ಯಾಯಿನಿ ಸವಿತಾ ಇವರಿಗೆ ಹಸ್ತಾಂತರಿಸಿದರು. ವಲಯ ಸೇನಾನಿ ಬ್ರ್ಯಾನ್ ಡಿಸೋಝ, ಚಾರ್ಲೊಟೆ ಲೂಯಿಸ್, ರವಿ ಆಚಾರ್, ಲಿಯೋ ಅಂದ್ರಾದೆ, ಶಂಕರ ಸುವರ್ಣ ಉಪಸ್ಥಿತರಿದ್ದರು. ಸಂಜೀವ ಟಿ. ಶಾಲೆಯ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಸವಿತಾ ಸ್ವಾಗತಿಸಿ, ನಿರೂಪಿಸಿದರು.
ಕಾಲಾದಿದ ತನುಕು ಅನು ಕೊರ್ಲೆ
Posted On: 12 Aug 2021, 01:40 PM
'ಪರಪ್ಪುನವು ತೆಲಾದ್ ಪೋವೊಡು' ಇಂಚ ಪಂಡೊಂದು ಪುಡಾಡ್ದ್ ನಾಗಬನ ಪೊಗ್ಗುದು ಬೊಂಡದ ನೀರ್ ಡ್ ಸುದ್ದ ತೀರ್ತ್ ದ್ ಬನ ಸೊಚ್ಚ ಮಲ್ತ್ ದ್ "ಕಾಲಾದಿದ ತನುಕು ಅನು ಕೊರ್ಲೆ" ಇಂಚ ಕೇನೊಂದು ತೊಡಗುನು . ವಾ ರಾಣಿ ಕಾಲೊಡು ಗಜವೂರ್ದು ನಿಲೆ ಆತರ್ ಪನ್ಪಿನ ತೆರಿಯಂದ್ ,ಕಾಲಾದಿದ ಸೇವೆಗ್ ಕುಟುಮ ಸೇರ್ದ್ಂಡ್. ಮಣ್ಣ್ ದ ಸತ್ಯ , ನಾಗ ಬೆರ್ಮೆರ್ ಕುಟುಮೊನು ಕಾಪೊಡು . "ಅಡಿಪೋಯಿ ನಾಗೆ ಕೊಡಿಪೋಯಿ ಬೆಮ್ಮೆರ್ ನಾಗ - ದುರ್ಗಮ್ಮ" ಇಂಚ ಕೊಂಡಾಡೊಂದು ತನುಕು ಅನು ಕೇನುನು. "ಪಲದಾಂತಿ ಪೊಣ್ಣಗ್ ಪಲ , ಬುಲೆ ದಾಂತಿ ಕಂಡೊಡು ಬುಲೆ ತೋಜಾದ್ ಕೊರ್ಪ" ಈ ಪಾತೆರ ಕೊರ್ದ್ ನಿಲೆ ಆಯಿನ ನಾಗ - ದುರ್ಗಮ್ಮ . ಹಿರಿಯೆರೆ ಕಾಲೊಡ್ದು ನಡಪುಡಾವೊಂದು ಬರೊಂದುಲ್ಲ , ಏರ್ ಮೀರ್ ಇಪ್ಪು ದರ್ಮಕೊರ್ದು ಕಾಪೊಡು . "ಕೈ ಏರ್ದ್ ಒಪ್ಯುನ ಪರಕೆ , ಮಣ್ಣ್ ದ ಪಂತ ಬೆಳಗಾಲೆ , ಕುಟುಮೊನು ಎಡ್ಡೆ ಮಲ್ತ್ ದ್ ಜಾಗ್ ದ ಕೀರ್ತಿ ಬೆಳಗಾಲೆ" ಸೀಕ್ - ಸಂಕಡ , ಕಣ್ಣ್ ದ ದೋಸ ಮಾಜೊಡು .ಸಂತಾನ ಸಂತೇಸಿ ಒದಗ್ ದ್ ಬರೊಡು, ಇಂಚ ಪಂಡೊಂದು ಮುರಿ ಮಯಿಪಾದ್ ದೀಪಾವೆ , ಅಲ್ಲೆ ಮುಲ್ಲೆ ಒಪ್ಪಿವೆ , ಮಣ್ಣ ಮೂಲಿ ಮಲ್ಪಾದ್ ಪರಕೆ ಸಂದಾವೆ (ಮುರಿ,ಮೂಲಿ, ಅಲ್ಲೆಮುಲ್ಲೆ = ಮಣ್ಣ್ ದ ಕರಕೊ ನಾಗನ ರೂಪು ಮಲ್ತ್ ದ್ ಜೋಡಿತ್ ದ್ ತಯಾರ್ ಮಲ್ತಿನ ಕರ ). ಇಂಚ ಬೇತೆ ಬೇತೆ ನಮೂನೆಡ್ ಸುಗಿತೊಂದು, ನಮುನೆವಾರ್ ಪರಕೆ ಸಂದಾವುನ ಏತೋ ಬನೊಕುಲು ನಮ್ಮವುಲು ಇತ್ತ್ಂಡ್ ,ಇಂಚಿನ ಬನೊಕುಲೆ ಲೆಕ್ಕ ಕಡಮೆ ಆವೊಂದುಂಡು . ಸಾರತ್ತ ಒಂರ್ಬನೂತ್ತ ಸೊನ್ಪತ್ತ ಆಜಿ - ರಡ್ಡ್ ಸಾರತ್ತ ಆಜಿನೇ ವರ್ಸದ ನಡುಟು ಮಲ್ತಿನ ಕ್ಷೇತ್ರಕಾರ್ಯೊಗು ಒದಗಿನ ಬನೊಕುಲು ಅತ್ತಡ ಮೂಲತಾನೊಲು : ಕಾಪು ತಾಲೂಕುದ ಕುತ್ಯಾರ್ ಮೂಲ್ದೊಟ್ಟು ನಾಗಬನ , ಒಡಿಪುದ ಬೈಲಕರೆ ಅಗಲಟ್ಟ ಬನ , ಬ್ರಹ್ಮಾವರ ಚಾಂತಾರ್ ದ ದೇವುಬೈಲ್ ಬನ , ಒಡಿಪು ಪಡು ಅಲೆವೂರು ಪೆರುಪಾದೆ ಮಾಬಿಯಾನ್ ಮೂಲಸ್ಥಾನ ,ಒಡಿಪು ಮೂಡುಬೆಳ್ಳೆ ಬರಿತ ಕೊಂಬಾಡಿ ಮೂಲಸ್ಥಾನ , ಒಡಿಪು ಕೊಳಲಗಿರಿ ಅಮ್ಮುಂಜೆ ಸಾಲಿಯಾನ್ ಮೂಲಸ್ಥಾನ , ಕಲ್ಯಾಣಪುರ ಕೆ.ಜಿ.ರೋಡುಡು ಕೊಳಲಗಿರಿಕ್ ಪೋಪಿನ ಮಾರ್ಗದ ಬರಿಟೆ ಇಪ್ಪುನ ತೆಂಕಬೆಟ್ಟುಬನ , ಬ್ರಹ್ಮಾವರ ಆಕಾಶವಾಣಿ ಕೇಂದ್ರದ ಬರಿಟ್ ಇತ್ತಿನ ಬನ ಅತ್ತಾಂದೆ ನನಲಾ ಮೂಜಿನಾಲ್ ಪ್ರಾಕ್ ದ ಬನಕುಲು ಉಲ್ಲ . ಈ ಬನೊಕುಲೆಡ್ ಪಗ್ಗು ಬರ್ಪಿ ಸಂಕ್ರಾಂದಿದಾನಿ ಕುಟುಮ ಸೇರ್ದ್ ತನು - ತಂಬಿಲ ನಡಪುಂಡು , ಕುತ್ಯಾರ್ ಮೂಲ್ದೊಟ್ಟು ಬನೊಟು ಮಾತ್ರ ಬೇಸದ ಸುರುತ ಗುರುವಾರದಾನಿ ಕುಟುಮದ ಗುರ್ಕಾರ್ರೆನ ಮುತಾಲಿಕೆಡ್ ಕಾಲಾದಿದ ತನು -ತಂಬಿಲ ನಡಪುಂಡು. ಕೆಲವು ಬನೊಕುಲೆಡ್ ನಾಗ ದರ್ಸನಲಾ ಉಪ್ಪುಂಡು.ವರ್ಸದ ಒಂಜಿ ದಿನತ ಪೂಜೆ ಕರಿತ್ ದ್ ಬನೊಡ್ದು ಬತ್ತೆರ್ಡ ಬೊಕ್ಕ ಬನೊಕು ಪೊಗ್ಗುನು ಬರ್ಪಿ ವರ್ಸನೆ.ನಡುಟು ಒದಗುನ ನಾಗರ ಪಂಚೆಮಿದ ತನು ಇಜ್ಜಿ. ನಾಗರ ಪಂಚೆಮಿ ಒದಗುನ ಕಾಲ ಮರಿಯಲ , ಬೂಮಿ ತಂಪಾದೇ ಉಪ್ಪುಂಡು,ಕುಡ 'ತನು - ತಂಪು' ಮಯಿಪುನ ಬೋಡಾ ? ಆಂಡ 'ಬೇಶದ ತನು' ಪಂಡ ,ಅದಗ ಬೂಮಿ ದೊಂಬುದ ಬೆಚ್ಚೊಗು ಕಾಯಿದುಪ್ಪುಂಡು.ಬೊಕ್ಕ ಬೆನ್ನಿಗ್ ತೊಡಗುನ ಪೊರ್ತುಲಾ ಅಂದ್ , ಬೆನ್ನಿಗ್ ಪತ್ತೊಡ್ಡ ನಮ ಮೂಲೊಗು ಪೋದ್ ತನು ಮಯಿಪಾದ್ ತಂಬಿಲ ಕಟ್ಟಾವುನ ಸರಿಯಾಯಿನ ಕ್ರಮಾಂದ್ ತೆರಿಯುಂಡು(ಸುಮಾರ್ ಮಾಯಿ - ಸುಗ್ಗಿದ ಪೊರ್ತುಡು ಬನೊಟು ಕಂದೆಲ್ ಡ್ ನೀರ್ ದೀಪುನ ಒಂಜಿ ಕಟ್ಲೆ ಇತ್ತ್ಂಡ್ ಪನ್ಪಿನ ಮಾಹಿತಿ ಈ ಬರವು ಬರೆವೊಂದಿಪ್ಪುನಗ ತೆರಿದ್ ಬತ್ತ್ಂಡ್). ಮಸ್ತ್ ಜನ ವಿದ್ವಾಂಸೆರ್ ಈ ಆಲೋಚನೆನ್ ಒಪ್ಪಿದುಲ್ಲೆರ್. ಆಂಡಲಾ ನಾಗರಪಂಚೆಮಿದ ದಿನತ ಪೂಜೆನ್ ಒಪ್ಪಿಯಂದೆ ಇಪ್ಪರೆ ಆಪುಜಿ . ಉಂದು ಒಂಜಿ ಆಲೋಚನೆ ಮಾತ್ರ. ಸುಮಾರ್ ಬ್ರಹ್ಮಾವರೊರ್ದು ಕುಂದಾಪುರ ಮುಟ್ಟ ಇಪ್ಪುನ ಮಸ್ತ್ ಕಾಡ್ಯನ ಕೊಟ್ಯೊಡುಲಾ ನಾಗರ ಪಂಚಮಿ ತನು - ತಂಬಿಲ ಇಜ್ಜಿ( ಪ್ರೊ.ಎ.ವಿ. ನಾವಡೆರ್ ದಾಕಲ್ ಮಲ್ತೊಂದಿನವು). ಬೆರ್ಮೆರ್ ಮುಕಿಯಾದಿತ್ತ್ ದ್ ನಾಗೆ ಇಂಚ ಐನ್, ಬೊಕ್ಕ ಆ ಮೂಲದ ಇಲ್ಲದ ದೈವ - ಬೂತೊಲೆನ್ ಒಂಜೆ ಜಾಗೆಡ್ ನಂಬುದು ನಡತೊಂದು ಬರ್ಪುನ 'ಸಮೂಹ ಪೂಜೆದ' ತಾನೊಲುಲಾ ಮೂಲನೆ ಪನ್ಪಿನ ಸಂಗತಿನ್ ಡಾ. ಯು.ಪಿ.ಉಪಾಧ್ಯಾಯ ಪನೊಂದಿತ್ತೆರ್. ಉಂದುವೆ ಬೆರ್ಮಸ್ಥಾನ ಅತ್ತಡ ಆಲಡೆಲು ಆದುಲ್ಲ. ಪ್ರತಿ ದಿನಲ ಬನೊಕು ಪೋಪಿನ ಸಂಪ್ರದಾಯ ಇತ್ತಿಜಿ .ನಾಗ ಜಾತಿಗ್ ತೊಂದರೆ ಆವರ ಆಂದ್ ಪನ್ಪಿನ ನಂಬಿಕೆ ಇತ್ತ್ಂಡ್ .ನಿಲ್ಕೆ ಬಲ್ಲೆ , ಕತ್ತಲೆ ಇಂಚಿನ ಬನೊಕುಲು ಇತ್ತ್ಂಡ ಅವು ಪ್ರಾಕ್ ದವು ಪಂಡ್ ದ್ ತೆರಿಯೊಲಿ . ಮೂಲ ಗೊತ್ತಾಂದಿನಕುಲು ಗುವ್ವೆಲ್ ದ ಕಟ್ಟೆ , ಪರಪುನ ಸುದೆತ ಬರಿಟ್ ಸುತ್ತೆ ದೀದ್ ನೀರ್ ಗೆ ತನು ಮಯಿಪುನ ಒಂಜಿ ಕ್ರಮ ಇತ್ತ್ಂಡ್ .ಬೆಳ್ತಂಗಡಿದ ಮುಟ್ಟ ಬಂಡಾಜೆ ಅರ್ಬಿದ ಬರಿಟ್ ಕಾಡ್ ಡ್ ಇಪ್ಪುನ ನೂದು ಮಿತ್ತ್ ನಾಗ ಕಲ್ಲುಲೆಗ್ ಮಲೆಕುಡಿಯೆರ್ ಬತ್ತ್ ದ್ ಪೂಜೆ ಮಲ್ತೊಂದಿತ್ತೆರ್ ಪನ್ಪಿನ ಮಾಹಿತಿಲು ತಿಕ್ಕುವ ಪನ್ಪಿನ ಸಂಗತಿಲೆನ್ ಜಾನಪದ ವಿದ್ವಾಂಸೆ ಪು.ಶ್ರೀನಿವಾಸ ಭಟ್ರ್ ಪನೊಂದಿತ್ತೆರ್. ನಮ್ಮಮೂಲತಾನೊಲೆನ್ ಆಲಡೆ ಪಂಡ್ ದ್ ಲಾ ಪನ್ಪೆರ್. ಪ್ರಾಕ್ ದ ಆಲಡೆ ,ಮೂಲತಾನೊಲು ನೀರ್ ದ ಆಶ್ರಯ ಇತ್ತಿನಲ್ಪನೇ ಉಂಡು ಪನ್ಪಿನ ಅಭಿಪ್ರಾಯ ಡಾ. ಇಂದಿರಾ ಹೆಗ್ಡೆ ತನ್ನ ಸಂಶೋಧನಾ ಗ್ರಂಥೊಡು ದಾಕಲ್ ಮಲ್ದೆರ್. ನಾಗೆ - ನೀರ್ ದ ಸಂಬಂಧ ಪ್ರಾಕ್ ದವು ಪಂಡ್ ದ್ಲಾ ಪನೊಲಿ. ತೆನ್ಕಾಯಿ ರಾಜ್ಯೊಡು ಇಂಚಿನ ಬನೊಕುಲು ಉಲ್ಲ. ಸಂಶೋಧಕೆ ವೆಂಕಟರಾಜ ಪುಣಿಂಚತ್ತಾಯ ಮೇರ್ ಗುರ್ತಪತ್ ದಿನ ಇಚ್ಲಾಡಿಡ್ದ್ ತಲಪಾಡಿ ಮುಟದ ಪದಿನೆಡ್ಮ ಸಾನೊಲೆಡ್ ಸರ್ಪಕೋಲ ಆಪುಂಡು , ಆಂಡ ಅವುಲು ನಾಗರ ಪಂಚೆಮಿದ ತನು ಸೇವೆ ಇಜ್ಜಿ . ಈ ಸಾನೊಲೆಡ್ ಬಾಕುಡೆರ್ ಪನ್ಪಿ ಜನ ಕಾಲಾದಿದ ಸರ್ಪಕೋಲ ಕರಿಪುವೆರ್. ಆಂಡ ಇತ್ತೆ ಕಾಲ ಬದಲಾತ್ಂಡ್ ಈ ಬರವು ಬರೆಯಿನಾಯೆ ಕ್ಷೇತ್ರ ಕಾರ್ಯ ಮಲ್ಪುನಗ ಇತ್ತಿನ ಬನೊಕುಲು ಇತ್ತೆಲಾ ಆನಿದ ಸುರ್ಪೊಡೇ ಉಲ್ಲ ಪಂಡ್ ದ್ ಪನಿಯರೆ ಬಲ್ಲಿ .ಇತ್ತೆ ಪ್ರಶ್ನೆ ದೀಡ್ಡುನು , ಪರಿಯಾರ ಮಲ್ಪನು , ಕಡೆಕ್ ಜೀರ್ಣೋದ್ಧಾರ ಮಲ್ಪನು ಈ ಕೆಲಸ ಒರ್ಮೆಲಾ ನಡತೊಂದು ಉಂಡು .ಅಂಚಾದ್ ಇರುವ - ಇರುವತ್ತೈನ್ ವರ್ಸೊಡ್ದು ದುಂಬು ಇತ್ತಿಲೆಕ್ಕನೆ ಇತ್ತೆಲ ಅವ್ವೆ ಪ್ರಾಕ್ ದ ಕಟ್ಟ್ ಕಟ್ಲೆಲು ಆ ಬನೊಕುಲೆಡ್ ಉಂಡು ಪನ್ಪಿನ ದೈರ ಇಜ್ಜಿ .ಅದಗ ಕ ಕಂಡ ಒಂದು ಜಾಗೆಗ್ ಪೋದ್ ಆ ಜನಮಂದೆದೊಟ್ಟುಡು ಇಡೀ ಪಗೆಲ್ ಅತ್ತಡ ಇಡೀ ರಾತ್ರಿ ಇತ್ತ್ ದ್ ದಾಕ್ಲ್ ಮಲ್ತೊಂದು ಬರೆಯಿನ ಬರವುಲು ಉದಯವಾಣಿ ,ತರಂಗದ ಲೆಕ್ಕಂದಿ ಪೇಪರುಲೆಡ್ ಪ್ರಕಟವಾಯಿನೆಟ್ಟ್ ಇಂಚ ಇತ್ತ್ಂಡ್ ಪಂಡ್ ದ್ ದೈರೊಡು ಬರೆವುಂದುಲ್ಲೆ .ಇತೆ ಉಂಡಾ ಗೊತ್ತಿಜ್ಜಿ . ಬೇತೆ ಏತೋ ಬನೊಕುಲು ಗುರ್ತ ಇಜ್ಜಾಂದಿನಾತ್ ಬದಲಾಯಿನವು ನಮ ಕಣ್ಣ ಎದುರೆ ಉಂಡು . ಯಾನ್ ಕ್ಷೇತ್ರ ಕಾರ್ಯೊ ಮಲ್ತ್ ದ್ ಬರೆವೊಂದಿನ ಬನೊಕುಲು ಪೂರಾ ಪರಿಶಿಷ್ಟ ಜಾತಿ - ವರ್ಗದ ಜನೊಕುಲು ಪೂಜೆ ಮಲ್ಪುನ ಬನೊಕುಲು. ಅಕುಲು ಕುಟುಮ ಸೇರ್ದ್ ಗುರ್ಕಾರ್ರೆನ ಮುತಾಲಿಕೆಡ್ ಕಾಲಾದಿದ ಸೇವೆ ಕರಿಪುವೆರ್. ಅವುಲು ಮೂಲದ ನಾಗ ಪೂಜೆದ ಪಾಡ್ ಒರಿದುಂಡು . ವೈಭವೀಕರಣ ,ವೈದಿಕೀಕರಣ ಕಾರಣವಾದ್ ಹೆಚ್ಚಿನ ಬನೊಕುಲೆನ ಮೂಲದ ಪಾಡ್ ಬದಲಾವೊಂದೇ ಉಂಡು .ನಮ್ಮ ಪೂರ್ವಿಕೆರ್ ನಡತ್ತಿನ ನಂಬಿಕೆ - ನಡವಳಿಕೆದ ಸಾದಿನ್ ನಮ ಬುಡೊಂದುಲ್ಲ. ನಾಗರಪಂಚೆಮಿ ಕಾಲಾದಿದ ತನು - ತಂಬಿಲ : ತನು ಮಯಿಪಾದ್ ತಂಬಿಲ ಕಟ್ಟಾವರೆ ನಾಗ ಮೂಲೊಗು ಪೋಪಿನ ದಿನ ನಾಗರ ಪಂಚೆಮಿ. ಉಂದು ಇತ್ತೆದ ಕಾಲಾದಿದ ತನು ಮಯಿಪುನ ದಿನ ಪನ್ಪಿನ ನಂಬೊಲಿಗೆ ,ಅಂಚೆನೆ ನಡತೊಂದುಲ್ಲ . ಬೇಶದ ತನು ಮಯಿಪಾವರೆ ಮೂಲೊಗು ಪೋಪನಾ ಇಜ್ಜಾ ಗೊತ್ತಿಜ್ಜಿ ,ಆಂಡ ನಾಗರಪಂಚೆಮಿದಾನಿ ಕಜ್ಜೆರಂದೆ ನಮ ಮೂಲೊಗು ಪೋದು ತನು ಮಯಿಪಾದ್ ತಂಬಿಲಕಟ್ಟಾದ್ ಬರ್ಪ. 'ಬನ' ಪನ್ಪಿನ ತಾವು ಬನ ಆದೆ ಒರಿಯೊಂದಿಜ್ಜಿ. ಕಾಂಕ್ರೀಟ್ ಪಾಡ್ದ್ ಕಟಿನ ನಾಗನ ಕಟ್ಟೆನಾ , ನಾಗ ವೇದಿಕೆನಾ , ನಾಗ ಗುಡಿಯಾ, ನಾಗ ಮಂದಿರನಾ , ನಾಗ ದೇವಸ್ಥಾನನಾ ಆವೊಂದುಂಡು. ಮರ ಕಡ್ಪಂದೆ ನಾಗ ಗುಡಿ ಕಟ್ರೆ ಸಾಧ್ಯನಾ .ಮರದಾಂತಿನ ಪುದೆಲ್ ,ಬೂರು ಇಜ್ಜಾಂದಿನ ಒಂಜಿ ಜಾಗೆ ಬನ ಆವೊಂದುಂಡು .ಇಂಚಿನ ಒಂಜಿ ಜಾಗೆನ್ ನಮ ಜೋಕುಲೆಗ್ 'ಬನ'ಪಂಡ್ದ್ ತೋಜಾವುನು . ಜೋಕುಲು , 'ಬನ ಪನ್ಪರ್ ಮರಮಟ್ಟುಲು ಇಜ್ಜಿ , ಬಲ್ಲೆ ಇಜ್ಜಿ , 'ವನ'ತ ಲೆಕ್ಕ ಇಜ್ಜಿ ಎಂಚ ಬನ , ಇಂಚ ' ಕೇಂಡೆರ್ಡ ನಮಡ ಉತ್ತರ ಇಜ್ಜಿ . ಐವ - ಅಜಿಪ ನಮುನೆದ ಮರಮಟ್ಟುಲು , ಪುದೆಲ್, ಬೂರು ಇಪ್ಪನವು ಬನ. ನೆಟ್ಟ್ ಕಡಮೆಡ್ದ್ ಕಡಮೆ ಇರುವ ಮರ್ದ್ ದ ಮರನಾ ,ಪುದೆಲಾ , ಬೂರುಲು ಉಪ್ಪುಂಡು. ಒಂಜಾತ್ ಪಕ್ಕಿ ಪರಣೆಲೆಗ್ ಬನ ಆಸ್ರಯ ಆದಿಪ್ಪುಂಡು . ಇಂಚಿನ ತಂಪಾಯಿನ ಜಾಗೆಡ್ ತಂಪುನು ಬಯಕುನ ನಾಗೆ ಬದುಕುವೆ .ನಾಗನ ತಾವು ಇತ್ತಿನೆಟ್ಟ್ ಬಲ್ಲೆ ಕಡ್ ಪಂದೆ ಬುಡಿಯೆರ್ ಅವು ನೇಲ್ಯ ಬನ ಆದ್ ಉಪ್ಪರೆ ಅವಕಾಶ ಆಂಡ್ .ಉಂದೆನ್ ನಮ ಮುಲಾಜಿ ಇದ್ಯಾಂದೆ ಕಡ್ಪುವ .ನಂಬಿಕೆದ ವಿರುದ್ಧವಾದ್ ಪ್ರಾಕ್ ದ ಮರಕುಲೆನ್ ದೇವೆರೆ ಬುಡ್ದು ಕೊರೊಂದಿತ್ತೆರ್ , ಇತ್ತೆ ಉಂದು ಒಂತೆ ಕಡಮೆ ಆಯಿಲೆಕ್ಕ ಉಂಡು. ನಾಗಗ್ ರಂಕಕಟ್ಲೆಡ್ ಪೇರ್ ಮಯಿತ್ಂಡ , ಪತ್ತ್ ಕಟ್ಲೆಡ್ ಬೊಂಡ ಮಯಿತ್ಂಡ ಒರ ಸಂಪು ಆವು .ಆಂಡ ಏಪೊಲಾ ತಂಪುದ ತಾವು ಬೊಡ್ಡ ಬನ ಬೋಡು. ಅಂಚಾದ್ ನಾಶಾದ್ ಪೋಯಿನವು ಪೋವಡ್ ನನಾಂಡಲಾ ಬನ ಒರಿಪುಗ . ನಾಗರ ಪಂಚೆಮಿದಾನಿ ಮೂಲೊಗು ತನು ಮಯಿಪಾರೆ ಪೋನಗ ಒಂಜಿ ಪೂತನಾ , ಮರತನಾ ,ಬೂರುದನಾ 'ತೈ'( ಗಿಡ) ಪತೊಂದು ಪೋವೊಡು ,ಅವುನಿ ನಮ್ಮ ಬನೊಟು ನಡ್ ದ್ ನಾಶ ಆತ್ಂಡ ಬನ ಉಂಡು ಮಲ್ಪಗ ,ಬನ ಉಂಡಡ ಅವ್ವೆನ್ ಅಂದ್ ಮಲ್ಪುಗ . ಏತ್ ಬದಲ್ ಬೋಡ್ಡಲಾ ಮಲ್ಪೊಲಿ ಆಂಡ 'ನಾಗೆ - ಮರ ಒಂಜಿ ಅಮರ್ ಜೀವೊಲು' ಪನ್ಪಿನೆನ್ ಮದಪರೆಬಲ್ಲಿ .ಬನತ ಮೂಲದ ಗೇನನ್ ತೆರಿದುಪ್ಪೊಡು. ಇಲ್ಲಡ್ ಪೆತ್ತ ಸಯಿತ್ಂಡ ಮಣ್ಣ್ ಮಲ್ಪನ ಬುಡುಂಡ ಬೇತೆ ದಾಲ ಕಿರಿಯೆಲಾ ಮಲ್ಪೂಜ .ಆಂಡ ನಾಗನ ಪುನ ತಿಕ್ಂಡ ಅಯಿಕ್ ನಮ ಹಿರಿಯೆರೆಗ್ ಮಲ್ಪುನ ಉತ್ತರ ಕಿರಿಯದ ಪೂರ ಕೆಲಸನ್ಲಾ ಮಲ್ಪುವ. ಉಂದು ನಾಗೆ - ನರಮಾನಿ ಸಂಬಂಧನ್ ತೆರಿಪಾವುಂಡು.ಈ ಕಿರಿಯೆ್ ಬಹುಶಃ ವೈದಿಕದ ಪ್ರಭಾವ ಇಪ್ಪರೆಲಾ ಯಾವು . ನಾಗಾರಾಧನೆ ಇಡೀಕ್ಲಾ ವೈದಿಕೀಕರಣ ಆತ್ಂಡ್ ನೆಕ್ಕ್ ಕಾರಣ ನಮ್ಮ ವೈಭವೀಕರಣದ ಮರ್ಲ್. ಉಂದುಲಾ ತಪ್ಪತ್ತ್ , ಕಾಲದ ನೇಮನಾ ದಾನ್ನ. ಲೇಖನ : ಕೆ.ಎಲ್.ಕುಂಡಂತಾಯ
ಮಧುರ ಗಾನಗಂಧರ್ವ ಕೋಗಿಲೆಯೆಂದು ಪ್ರೇರಣೆಯಾದ ಶಿವಾನಿ ಕೊಪ್ಪ.
Posted On: 11 Aug 2021, 11:13 PM
“ಸಂಗೀತ ಅನ್ನುವುದು ಯಾರಿಗೆ ಯಾವ ಸಮಯದಲ್ಲಿ ಸಂಗೀತ ಶಾರದಾ ಮಾತೆ ಕೈಹಿಡಿದು ಕರೆದೊಯ್ಯುತ್ತಾಳೆ ಎಂದರೆ! ಯಾರಿಗೂ ಸಹ ತಿಳಿದಾಗೆ, ನಮಗೆ ಏನಾದರೊಂದು ಹೃದಯಕ್ಕೆ ಆತಂಕ ಆದಾಗ ನಾವು ಸಂಗೀತವನ್ನು ಆಲಿಸಿದರೆ ಸ್ಪಲ್ಪ ಮಟ್ಟಿಗೆ ನಮ್ಮಲ್ಲಿರುವ ಸಂಕಷ್ಟಗಳು ದೂರಾಗುತ್ತವೆಂದು ನಾವು ಹೇಳ ಬಹುದು. ಏಕೆಂದರೆ! ಈ ಸಂಗೀತದಲ್ಲಿ ಇರುವ ಅಪಾರವಾದ ಶಕ್ತಿ, ಸಂಗೀತದಲ್ಲಿರುವ ಪ್ರತಿಯೊಂದು ರಾಗ ಸ್ವರಗಳು, ಅದರ ಕಂಪನಗಳು, ಹಾಗೂ ಸಂಗೀತದಲ್ಲಿರುವ ಪತ್ರಿಕಾರ ರೂಪಾಂತರಗಳು, ಅದರಲ್ಲಿರುವ ನಾದ ಬ್ರಹ್ಮಗಳು ನಮ್ಮ ಕಿವಿಗೆ ಅಪ್ಪಳಿದಾಗ ಎಷ್ಟು ಸಂತೋಷ ಆಗುತ್ತದೆ ಅಂದರೆ ಸಂಗೀತವನ್ನು ಕಲಿತವರಿಗೆ ಹಾಗೂ ಅದರ ಬಗ್ಗೆ ತಿಳಿದು ಕೊಳ್ಳುವುದರ ಜೊತೆಗೆ ಅರಿತು ಕೊಂಡವರಿಗೆ, ಹಾಗೂ ಸಂಗೀತವನ್ನು ಆಲಿಸಿದ್ದವರಿಗೆ, ಅದರ ಬಗ್ಗೆ ಆಚಾರ ವಿಚಾರಧಾರೆಗಳನ್ನು ತಿಳಿದು ಕೊಂಡವರಿಗೆ ಸಂಗೀತದ ಮಹಿಮೆ ಮಾತ್ರ ಗೊತ್ತು. ಇನ್ನೂ “ಉದಾಹರಣೆ: ‘ಕಸ್ತೂರಿ ವಾಸನೆಯನ್ನು’ ತೆಗೆದುಕೊಂಡವರಿಗೆ ಮಾತ್ರ ಗೊತ್ತು,”ಕಸ್ತೂರಿವಾಸನೆ”. ನಮ್ಮ ಕರ್ನಾಟಕದಲ್ಲಿ ‘ಶಾಸ್ತ್ರೀಯ ಸಂಗೀತ, ಮರಾಠಿ ಸಂಗೀತ, ಹಿಂದು ಸ್ಥಾನಿ ಸಂಗೀತ. ಸಂಗೀತದಲ್ಲಿ ವಿವಿದ ಬಗ್ಗೆಯ ಸಂಗೀತಗಳು ಇರುತ್ತವೆ. ಒಟ್ಟಾರೆ ಹೇಳಬೇಕಾದರೆ ನಮ್ಮ ಕನ್ನಡ ಜನತೆ ಸಂಗೀತಕ್ಕೆ ತುಂಬಾ ಗೌರವ ಕೊಡುತ್ತಾರೆ. ಇನ್ನೂ ವಿಶ್ವದಾಖಲೆಯಲ್ಲಿ ”ಗೋಲ್ಡನ್ ಆಪ್ ಬುಕ್ ಆಪ್ ರಿಕಾಡಿಂಗ್ ವರ್ಡ್” ಪಡೆದು ”ನಾದಪ್ರಿಯಾ, ಪ್ರಚಂಡ ಗಾನ ಬ್ರಹ್ಮ ಕೋಗಿಲೆ,’ ‘ಮಧರ ಗಾನ ಕೋಗಿಲೆ, ‘ಸಂಗೀತ ಗಾನ ಶಿರೋಮಣಿ, ಸಂಗೀತ ಗಾನ ಸರಸ್ವತಿ, ‘ಸಂಗೀತ ಗಾನ ಶಿರ ಬಾಲೆ, ಸಂಗೀತ ಗಾನ ಶಾರದಾ ಮಾತೆಯ ಮಡಿಲಲ್ಲಿ ಬೆಳೆದು ನಾದ ಪ್ರಚಂಡ ಮಧುರ ಗಾನ ಕೋಗಿಲೆಂದು ಪ್ರಾಮುಖ್ಯತೆ ಪಡೆದ ಈ ಬಾಲಕಿ ಯಾರು ಅಂತಿರಾ, ಇವರ ಬಗ್ಗೆ ಸ್ಪಲ್ಪ ವಿಚಾರಧಾರೆಗಳನ್ನು ತಿಳಿದು ಕೊಳ್ಳಣ, ಬನ್ನಿ ಹಾಗಾದರೆ, ಈ ಬಾಲಕಿಯು ‘ಬೆಳೆಯುವ ಸೀರಿ’, ಮೊಳಕೆಯಲ್ಲಿಯಂತೆ ತನ್ನ ಕಿರು ವಯಸ್ಸಿನಲ್ಲಿ ಸಂಗೀತ ಹಾಗೂ ನಟನೆ ಕಲಿತು ವಿಶ್ವದಾಖಲೆ ಕಂಡ, ಈ ಬಾಲಕಿಯ ಹೆಸರು: ಕು: ‘ಶಿವಾನಿ ನವೀನ್, ಕೊಪ್ಪ. ಇವರ ತಂದೆಯ ಹೆಸರು: ನವೀನ್ ಚಂದ್ರಕೊಪ್ಪ, ತಾಯಿ: ಸಂಜನಾ. ಇವರಿಬ್ಬರ ದಂಪತಿಗಳಿಗೆ ಸುಪುತ್ರಿಯಾಗಿ, ಶಿವಾನಿಯವರು ೧೪ ಎಪ್ರಿಲ್, ೨೦೦೭, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ , ಬಪ್ಪುಂಜಿ ಕೈಮರದಲ್ಲಿ ಜನಿಸಿದ ನಂತರ, ಶಿವಾನಿಯವರು ತಮ್ಮ ಪ್ರಾಥಮಿಕ ಶಾಲೆಯನ್ನು, ಕೊಪ್ಪದ ಸಂತ ಜೋಸೆಫರ ಇಂಗ್ಲೀಷ್ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ 5ನೇ ತರಗತಿಯವರೆಗೂ ವಿಧ್ಯಾಭ್ಯಾಸ ಮಾಡಿದ, ಬಳಿಕ ತಮ್ಮ ಪ್ರೌಢಶಾಲೆಯನ್ನು ಪ್ರಸ್ತುತ ಉಡುಪಿ ಜಿಲ್ಲೆಯ ಉಚ್ಚಿಲದ ಮಹಾಲಕ್ಷ್ಮಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 8ನೇ ತರಗತಿಯನ್ನು ಕಲಿಕೆಯಲ್ಲಿ ಇರುತ್ತಾಳೆ. ಇನ್ನು ಶಿವಾನಿಯವರು ತಮ್ಮ ಶಿಕ್ಷಣ ಜೊತೆಗೆ ಸಂಗೀತವನ್ನು ಕಲಿಯುತ್ತಾಳೆ. ಮತ್ತು ಕು: ಶಿವಾನಿಯವರ ತಂದೆ ತಾಯಿ ಕೂಡ ಸಂಗೀತ ಕಲಾವಿದರು. ಹಿರಿಯರು ಹೇಳುತ್ತಾರೆ ಮನೆಯೆ ಮೊದಲ ಪಾಠಶಾಲೆ , ಮನೆಯಲ್ಲಿ ಮಕ್ಕಳಿಗೆ ಹೇಗೆ ಶಿಕ್ಷಣ ಇರುತ್ತದೆ ಮಕ್ಕಳು ಹಾಗೆ ಬೆಳೆಯುತ್ತಾರೆ. ನಮ್ಮ ತಂದೆ ತಾಯಿಯಂತೆ ನಾನು ಕೂಡ ಸಂಗೀತವನ್ನು ಕಲಿಯಬೇಕೆಂದು ಕೊಂಡು, ಪುಟ್ಟ ಶಿವಾನಿಯವರು ಸಂಗೀತವನ್ನು ಕಲಿಯಲು ಪ್ರಾರಂಭಿಸಿದ ನಂತರ, ಇವರ ತಂದೆ ತಾಯಿ ಕೂಡ ತಮ್ಮ ಮಗಳಿಗೆ ತುಂಬಾ ಪ್ರೋತ್ಸಾಹವನ್ನು ಕೊಟ್ಟರು. ಶಿವಾನಿಯವರು ಉಷಾ ಹೆಬ್ಬಾರ್ ಮಣಿಪಾಲ್ ಇವರಿಂದ ಕರ್ನಾಟಿಕ ಸಂಗೀತ ಅಭ್ಯಾಸ ಮಾಡುತ್ತಿರುತ್ತಾಳೆ. ಇನ್ನೂ ಸಂವೇಧನ ಫೌಂಡೇಶನ್ ಆಯೋಜಿಸಿದ್ದ ಅಂತರಾಷ್ಟ್ರಿಯ ಮಟ್ಟದ ವಂದೇಮಾತರಂ ವಿಡಿಯೋ ಆಲ್ಬಮ್ ಸ್ಪರ್ಧೆಯಲ್ಲಿ ತನ್ನ ಗಾನ ಮಧುರ ಕಂಠದಿಂದ ವಂದೇ ಮಾತರಂ ಗೀತೆಯನ್ನು ಹಾಡಿ ದ್ವಿತೀಯ ಸ್ಥಾನ ಪಡೆದರು, ಹಾಗೂ ಶಿವಾನಿ ಮ್ಯೂಸಿಕಲ್ಸ್ ಎಂಬ, ಐಗಿರಿ ನಂದಿನಿ ವಿಡಿಯೋ ಆಲ್ಬಂ ನಲ್ಲಿ ಅಭಿನಯ ಹಾಗೂ ಗಾಯನ, ಪ್ರಭವ ಎಂಬ ವಿಡಿಯೋ ಆಲ್ಬಮ್ ನಲ್ಲಿ ಹಿನ್ನೆಲೆ ಸುಮಧುರ ಗಾಯನವನ್ನು ಹಾಡಿ ಹೆಗ್ಗಳಿಕೆ ಆಗಿರುವುದಲ್ಲದೇ ಈ ಶಿವಾನಿಯ ‘ಕನ್ನಡ ಚಲನಚಿತ್ರ ಚಿತ್ರಕ್ಕೆ’ ಹಿನ್ನೆಲೆ ಗಾಯನ, ಹಾಗೂ ಹಲವಾರು ತುಳು ನಾಟಕಗಳಿಗೆ ಹಿನ್ನೆಲೆ ಗಾಯನ, ಕರಾವಳಿಯ ಪ್ರಖ್ಯಾತ ಮೀಡಿಯಾದಲ್ಲಿ ಅತಿಥಿ ಕಲಾವಿದೆಯಾಗಿ ಗಾಯನ, ‘ನಾಗತಿಹಳ್ಳಿ ಚಂದ್ರಶೇಖರ್’ ನಿರ್ದೇಶನದ ಇಷ್ಟಕಾಮ್ಯ ಚಲನಚಿತ್ರದಲ್ಲಿ ಸಹ ತನ್ನ ಅತ್ಯುತ್ತಮ ಬಾಲನಟಿಯನ್ನು ಮಾಡಿದ್ದಲ್ಲದೆ, ಕಾದಂಬರಿ ಆಧಾರಿತ ‘ಸೀತಮ್ಮ ಬಂದಳು ಸಿರಿಮಲ್ಲಿಗೆತೊಟ್ಟು’ ಚಿತ್ರದಲ್ಲಿ ಅಭಿನಯಿಸಿದ್ದಾಳೆ. ಹಾಗೂ ಕನ್ನಡ ಚಲನಚಿತ್ರ ರಂಗದ ಅದ್ವಿತೀಯ ‘ನಿರ್ದೇಶಕರಾದ’ ‘ದಿ.ಕಾಶಿನಾಥ್ ರವರ’ ಪುತ್ರ ‘ಅಭಿಮನ್ಯು ಕಾಶಿನಾಥ್’ ನಾಯಕ ನಟನಾಗಿ ಅಭಿನಯಿಸಿರುವ ಹೊಸ ‘ಚಿತ್ರ ಎಲ್ಲಿಗೆ ಪಯಣ’, ಯಾವುದೋದಾರಿ’ ಎಂಬ ಚಿತ್ರದಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದಲ್ಲದೆ ಈ ಶಿವಾನಿಯವರು ಹಲವಾರು ಟಿವಿವಾಹಿನಿಗಳಲ್ಲಿ ಕೂಡ ತಮ್ಮ ಮಧುರ ಕಂಠದಿಂದ ಹಾಡನ್ನು ಹಾಡಿ ಕನ್ನಡ ಜನತೆಯ ಪ್ರೀತಿಗೆ ಪಾತ್ರರಾಗಿದ್ದಾಳೆ. ಈ ಶಿವಾನಿಯವರು ಹಲವಾರು ವೇದಿಕೆಗಳಲ್ಲಿ ತಮ್ಮದೇ ತಂಡವಾದ ಶಿವಾನಿ ಮ್ಯೂಸಿಕಲ್ಸ್ ನಲ್ಲಿ ಗಾಯಕಿಯಾಗಿ ಹಾಗೂ ನೃತ್ಯ ಕಲಾವಿದೆಯಾಗಿ ಅಭಿಮಾನಿಗಳನ್ನು ರಂಜಸುತ್ತಾಳೆ ಹಾಗೂ ಇತ್ತೀಚೆಗೆ ಹಳ್ಳಿಯ ಬಾಲ್ಯಜೀವನದ ಚಿತ್ರಿಕರಣವನ್ನು ಒಳಗೊಂಡ ಹಳ್ಳಿಗೋಗುವಾಗ ಗೀತೆಯ ಜೊತೆಗೆ ಅಭಿನಯ ಜೊತೆಗೆ ಗಾಯನ ನೀಡಿರುತ್ತಾಳೆ. ಮೂರ್ತಿ ಚಿಕ್ಕದಾದರೂ ತನ್ನ ಕಿರು ವಯಸ್ಸಿನಲ್ಲಿ ತನ್ನ ಮಧುರ ನಾಗ ಕಂಠದಿಂದ ಗಾಯನ ಜೊತೆಗೆ ಸಂಗೀತ ಹಾಡಿ ತನ್ನ ತಂದೆ ತಾಯಿಗೆ ಹೆಸರು ತರುವುದಲ್ಲದೆ ಹಾಗೂ ತಾನು ಕಲಿತ ಶಾಲೆಯಲ್ಲಿ ಹೆಸರು ಪಡೆದು ಹಾಗೂ ಕನ್ನಡ ಜನತೆಯ ಪ್ರೇಕ್ಷಕರ ಮನದಲ್ಲಿ ಸದಾಕಾಲವೂ ಉಳಿದ ಶಿವಾನಿಯವರು. ಇವರು ತಂದೆ ತಾಯಿ ಇಬ್ಬರೂ ವೃತ್ತಿ ನಿರಂತರವಾಗಿ ಗಾಯಕರಾಗಿದ್ದು ತಮ್ಮ ಜೊತೆಗೆ ತಮ್ಮ ಮಗಳಿಗೆ ಸಹ ಸಂಪೂರ್ಣವಾಗಿ ಪ್ರೋತ್ಸಾಹ ನೀಡಿದ್ದಾರೆ. ಒಟ್ಟಾರೆ ತಮ್ಮ ಜೊತೆಗೆ ಮಗಳೂ ನಾದ ಪ್ರಚಂಡ ಪ್ರಯೆ, ಗಾನ ಕೋಗಿಲೆ, ಮಧುರ ಗಾನ ಸುದೆ ಎಂದು ಹೆಸರು ಪಡೆದ ಕು: ಶಿವಾನಿ ನವೀನ್ ಕೊಪ್ಪ ರವರು. ಇವರ ಸಾಧನೆ ಇನ್ನೂ ಬಹು ಎತ್ತರದ ಮಟ್ಟಿಗೆ ಹೋಗಲೆಂದು ಸಂಗೀತ ಶಾರದಾ ಮಾತೆ ಹತ್ತಿರ ಬೇಡಿ ಕೊಳ್ಳೋಣ. ಲೇಖನ : ಬಸವರಾಜ ಎಸ್. ಬಾಗೇವಾಡಿಮಠ. ಕರ್ಣಾಟಕ ರಾಜ್ಯೋತ್ಸವ ರತ್ನ ಪ್ರಶಸ್ತಿ ಪುರಸ್ಕೃತರು (ಶೃಂಗಾರ ಕಾವ್ಯ ಪ್ರಕಾಶಕರು ಹಾಗೂ ಕವಿ & ಲೇಖಕರು) ರಾಣೆಬೇನ್ನೂರು. ಜಿಲ್ಲಾ: ಹಾವೇರಿ. ವಾಟ್ಸಪ್: 9611381039
ಅಖಿಲ ಭಾರತ ತುಳುನಾಡ ದೈವಾರಾಧಕರ ಒಕ್ಕೂಟ ಹೆಬ್ರಿ ಘಟಕದ ಮೊದಲನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಸನ್ಮಾನ, ಧನಸಹಾಯ
Posted On: 09 Aug 2021, 10:57 PM
ಉಡುಪಿ : ಅಖಿಲ ಭಾರತ ತುಳುನಾಡ ದೈವಾರಾಧಕರ ಒಕ್ಕೂಟ(ರಿ) ಉಡುಪಿ ಜಿಲ್ಲೆ, ಹೆಬ್ರಿ ಘಟಕದ ಮೊದಲನೇ ವರ್ಷದ ವಾರ್ಷಿಕ ಸಮಾರಂಭ ಹಾಗೂ ಹಿರಿಯ ದೈವ ಚಾಕ್ರಿ ಮಾಡುವವರಿಗೆ ಸನ್ಮಾನ ಕಾರ್ಯಕ್ರಮ ತಾಣ ಅರ್ಧ ನಾರೀಶ್ವರ ದೇವರ ಸನ್ನಿಧಿಯ ಸಭಾಭವನದಲ್ಲಿ ಜರಗಿತು. ಕಾರ್ಯಕ್ರಮವನ್ನು ಇಂಧನ ಹಾಗು ಕನ್ನಡ ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಸುನಿಲ್ ಕುಮಾರ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಸಚಿವನಾದ ನಂತರ ದೈವಾರಾಧನೆ ಒಕ್ಕೂಟದ ಕಾರ್ಯಕ್ರಮ ನನ್ನ ಮೊದಲ ಕಾರ್ಯಕ್ರಮ. ಎಂದು ತುಂಬಾ ಸಂತೋಷದಿಂದ ಹೇಳಿದರು. ಮುಂದಿನ ದಿನಗಳಲ್ಲಿ ದೈವ ಚಾಕ್ರಿ ವರ್ಗದವರಿಗೆ ಸರ್ಕಾರದಿಂದ ಸವಲತ್ತು ಒದಗಿಸುವ ಯೋಜನೆಯನ್ನು ಕಾರ್ಯ ರೂಪಿಸಲು ಪ್ರಯತ್ನ ಮಾಡುತ್ತೇನೆ ಹಾಗೂ ದೈವಾರಾಧನೆ ಕ್ಷೇತ್ರಕ್ಕೆ ಪ್ರತ್ಯೇಕವಾಗಿ ಆಕಾಡೆಮಿ ಮಾಡುವ ಕುರಿತು ಸಂಬಂಧಪಟ್ಟ ಇಲಾಖೆಯೊಂದಿಗೆ ಮಾತನಾಡುತ್ತೇನೆ. ಮುಂದಿನ ದಿನಗಳಲ್ಲಿ ಒಕ್ಕೂಟವನ್ನು ಎಲ್ಲರೂ ಸೇರಿ ಬಲಪಡಿಸಿ ಎಂದು ಶುಭ ಹಾರೈಸಿದರು. ದೈವ ಚಿಂತಕರಾದ ಸುಧಾಕರ್ ಡಿ. ಅಮೀನ್ ಮಾತನಾಡಿ ದೈವಾರಾಧನೆ ಆಚಾರ-ವಿಚಾರ ಉಳಿಸಿ ಹಾಗೂ ಮುಂದಿನ ದಿನಗಳಲ್ಲಿ ನನ್ನಿಂದ ಯಾವುದೇ ಸಮಯದಲ್ಲಿ ಒಕ್ಕೂಟಕ್ಕೆ ಸಹಾಯ ಹಸ್ತ ಬೇಕಿದ್ದರೆ ನಿಮ್ಮೊಂದಿಗೆ ಸದಾ ಬೆಂಬಲವಾಗಿ ನಾನಿರುತ್ತೇನೆ ಎಂದು ಶುಭ ಹಾರೈಸಿದರು. ಪ್ರಸನ್ನಕುಮಾರ್ ರಾಜ್ಯ ಸಂಚಾಲಕರು ಕರ್ನಾಟಕ ರಕ್ಷಣಾ ವೇದಿಕೆ ಮಾತನಾಡಿ ಸದಾ ದೈವ ಚಾಕ್ರಿಯವರಿಗೆ ಬೆಂಬಲವಾಗಿ ನಮ್ಮ ರಕ್ಷಣಾ ವೇದಿಕೆ ನಿಮ್ಮೊಂದಿಗೆ ಇರುತ್ತೇವೆ. ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯಿಂದ ಸರ್ಕಾರಕ್ಕೆ ದೈವ ಚಾಕ್ರಿಯವರ ಪರವಾಗಿ ಮನವಿಯನ್ನು ಸಲ್ಲಿಸುತ್ತೇವೆ ಎಂದು ಒಕ್ಕೂಟದ ಸದಸ್ಯರಿಗೆ ಧೈರ್ಯ ತುಂಬಿದರು. ನಂತರ ಅಖಿಲ ಭಾರತ ತುಳುನಾಡ ದೈವಾರಾಧಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಿನೋದ್ ಶೆಟ್ಟಿ ಮಾತನಾಡಿ ಯಾವುದೇ ದೈವ ಚಾಕ್ರಿಯವರ ತುರ್ತು ಸಂದರ್ಭದಲ್ಲಿ ಆರೋಗ್ಯ ಸಮಸ್ಯೆ ಹಾಗೂ ದೈವಾಧೀನರಾದಾರೆ ಹಾಗೂ ಮಳೆಗಾಲ ಸಂದರ್ಭದಲ್ಲಿ ಅವರ ಮನೆಗೆ ಹಾನಿ ಉಂಟಾದರೆ ಅವರ ಮನೆಗೆ ಒಕ್ಕೂಟ ಸದಸ್ಯರು ಭೇಟಿಕೊಟ್ಟು ಸ್ವಲ್ಪಮಟ್ಟಿಗೆ ಧನ ಸಹಾಯ ಮಾಡಿದ ಒಂದು ಒಕ್ಕೂಟ ಇದ್ದರೆ ಅದು ನಮ್ಮ ದೈವಾರಾಧಕರ ಒಕ್ಕೂಟ ಎಂದು ಹೇಳಲು ನನಗೆ ತುಂಬಾ ಸಂತೋಷವಾಗುತ್ತದೆ. ಇತಿಹಾಸದಲ್ಲಿ ಇಷ್ಟರತನಕ ದೈವ ಚಾಕ್ರಿಯವರ ಪರವಾಗಿ ಎಲ್ಲಾ ತುಳುನಾಡಿನ ಶಾಸಕರಿಗೆ, ಉಸ್ತುವಾರಿ ಸಚಿವರಿಗೆ, ಸಂಸದರಿಗೆ, ಜಿಲ್ಲಾಧಿಕಾರಿಯವರಿಗೆ, ಮುಖ್ಯಮಂತ್ರಿಗಳಿಗೆ ಮನವಿಯನ್ನು ಕೊಟ್ಟಿದ್ದರೆ, ಅದು ನಮ್ಮ ದೈವಾರಾಧಕರ ಒಕ್ಕೂಟ ಎಂದು ಹೇಳಿದರು ಹಾಗೂ ಒಕ್ಕೂಟ ನಡೆದುಬಂದ ದಾರಿ ಹಾಗೂ ಮುಂದಿನ ಯೋಜನೆಗಳ ಬಗ್ಗೆ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಬ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಾಲತಿ ನೆರವೇರಿಸಿದರು. ಈ ಸಂದರ್ಭದಲ್ಲಿ ಅಶೋಕ್ ಶೆಟ್ಟಿ ಮಾಳ, ಶೇಕರ ಬಂಗೇರ, ಶ್ರೀಧರ ಪೂಜಾರಿ ಬೈಕಾಡಿ, ನರಸಿಂಹ ಪರವ ಹಾಗೂ ಪ್ರಮುಖ ಅತಿಥಿಗಳು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪಾಣಾರ ಆರ್ಡಿಯವರನ್ನು ಒಕ್ಕೂಟದ ಪರವಾಗಿ ಸನ್ಮಾನ ಮಾಡಲಾಯಿತು. ಹೆಬ್ರಿ ಘಟಕದ 20 ಮಂದಿ ಹಿರಿಯ ದೈವ ಚಾಕ್ರಿ ವರ್ಗದವರಿಗೆ ಧನ ಸಹಾಯದೊಂದಿಗೆ ಗೌರವಿಸಲಾಯಿತು. ಹೆಬ್ರಿ ಘಟಕದ ಅಧ್ಯಕ್ಷರಾದ ಸುಕುಮಾರ್ ಪೂಜಾರಿ ಸ್ವಾಗತಿಸಿ, ಹೆಬ್ರಿ ಘಟಕದ ಕೋಶಾಧಿಕಾರಿ ಅರುಣ್ ಪೂಜಾರಿಯವರು ವಂದಿಸಿದರು.
ಕುತ್ಯಾರು : ಕೃಷಿ ಮಾಹಿತಿ ರಥಕ್ಕೆ ಗ್ರಾಮ ಪಂಚಾಯತ್ ವತಿಯಿಂದ ಸ್ವಾಗತ
Posted On: 08 Aug 2021, 10:49 PM
ಕಾಪು : ಉಡುಪಿ ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ ಉಡುಪಿ, ರೈತ ಸಂಪರ್ಕ ಕೇಂದ್ರ ಕಾಪು ಹಾಗೂ ಗ್ರಾಮ ಪಂಚಾಯತ್ ಸಹಯೋಗದೊಂದಿಗೆ ಕಾಪು ಹೋಬಳಿ ಮಟ್ಟದ ಸಮಗ್ರ ಕೃಷಿ ಅಭಿಯಾನದ ಅಂಗವಾಗಿ ಕೃಷಿ ಮಾಹಿತಿಯನ್ನು ಒಳಗೊಂಡ ವಾಹನ ರಥವು ರೈತರಿಗೆ ಉಪಯುಕ್ತ ಮಾಹಿತಿ ನೀಡಿ, ಕೃಷಿ ಇಲಾಖೆಯ ಯೋಜನೆಗಳ ಬಗ್ಗೆ ಕರಪತ್ರಗಳನ್ನು ವಿತರಿಸಲಾಯಿತು. ಈ ಸಂದರ್ಭ ಗ್ರಾಮ ಪಂಚಾಯತ್ ಅಧ್ಯಕ್ಷೆ ಲತಾ ಎಸ್. ಆಚಾರ್ಯ, ಉಪಾಧ್ಯಕ್ಷ ದೇವರಾಜ ಬಿ. ಶೆಟ್ಟಿ, ಪಿಡಿಒ ರಜನಿ ಭಟ್, ಗ್ರಾಮ ಪಂಚಾಯತ್ ಸದಸ್ಯರು, ಪಂಚಾಯತ್ ಸಿಬ್ಬಂದಿ ವರ್ಗ, ಕೃಷಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
