Updated News From Kaup

ಉಡುಪಿಯ ಗಿರಿಜಾ ಹೆಲ್ತ್ ಕೇರ್ ಅಂಡ್ ಸರ್ಜಿಕಲ್ಸ್ ಇದೀಗ ಮಂಗಳೂರಿನಲ್ಲಿ ಆರಂಭ

Posted On: 28-05-2021 03:32PM

ಹೆಲ್ತ್ ಕೇರ್ ಮತ್ತು ಸರ್ಜಿಕಲ್ ಪರಿಕರಗಳಿಗೆ ಹೆಸರು ವಾಸಿಯಾಗಿರುವ ಉಡುಪಿಯ ಗಿರಿಜಾ ಹೆಲ್ತ್ ಕೇರ್ ಅಂಡ್ ಸರ್ಜಿಕಲ್ಸ್ ಇದೀಗ ಮಂಗಳೂರಿನಲ್ಲಿ ಈ ನೂತನ ಶಾಖೆಯಲ್ಲಿ ರೀಟೇಲ್ ಹಾಗೂ ಹೊಲ್ ಸೇಲ್ ದರದಲ್ಲಿ ವೀಲ್ ಚೇರ್ , ವಾಕಿಂಗ್ ಸ್ಟಿಕ್ , ಆರ್ಥೋ ಚಪ್ಪಲ್ಸ್ , ಬಿ ಪಿ ಶುಗರ್ ಟೆಸ್ಟಿಂಗ್ ಮಿಷನ್ , ನೆಬ್ಯೂಲೈಸರ್ಸ್ , ಕೋವಿಡ್ ಪ್ರೊಟೆಕ್ಷನ್ ಉಪಕರಣಗಳಾದ ಸ್ಯಾನಿಟೈಸರ್ , ಫೇಸ್ ಮಾಸ್ಕ್ , ಥರ್ಮಾ ಮೀಟರ್ ಇತರ ಹೆಲ್ತ್ ಕೇರ್ & ಸರ್ಜಿಕಲ್ ಉಪಕರಣಗಳ ವಿಫುಲ ಸಂಗ್ರಹಗಳಿವೆ .

ಬಿರುವೆರ್ ಕಾಪು ಸೇವಾ ಟ್ರಸ್ಟ್‌ ವತಿಯಿಂದ ಪಡಿತರ ಕಿಟ್ ವಿತರಣೆ

Posted On: 28-05-2021 12:13PM

ಕಾಪು : ತೌಕ್ತೆ ಚಂಡಮಾರುತದಿಂದ ಹಾನಿಗೊಳಗಾದ ಲೈಟ್ ಹೌಸ್ ಬಳಿಯ ಕಾಪು ಪಡು ಗರಡಿ, ಬೈರುಗುತ್ತು, ಕೋಟೆ ಕೊಪ್ಪಲ ಮತ್ತು ಸುಬ್ಬಯ್ಯ ತೋಟದಲ್ಲಿರುವ 42 ಕುಟುಂಬಗಳಿಗೆ ಗುರುವಾರ ಬಿರುವೆರ್ ಕಾಪು ಸೇವಾ ಟ್ರಸ್ಟ್‌ ಇವರ ವತಿಯಿಂದ ಪಡಿತರ ಕಿಟ್ ಗಳನ್ನು ವಿತರಿಸಲಾಯಿತು.

ಕಾಪು : ಸಾರ್ವಜನಿಕರಿಗೆ ಲಸಿಕಾ ಕಾರ್ಯಕ್ರಮ

Posted On: 28-05-2021 11:47AM

ಕಾಪು : ಕಾಪು ಪುರಸಭೆ, ಪ್ರಾಥಮಿಕ ಆರೋಗ್ಯ ಕೇಂದ್ರದ ಜಂಟಿ ಆಯೋಜನೆಯಲ್ಲಿ ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದ ಆಡಳಿತ ಮಂಡಳಿಯ ಸಹಕಾರದೊಂದಿಗೆ ಕಾಪುವಿನ ಶ್ರೀ ಹಳೇ ಮಾರಿಯಮ್ಮ ಸಭಾಗೃಹದಲ್ಲಿ ಸಾರ್ವಜನಿಕರಿಗೆ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕೊರಗ ಕಾಲನಿ ನಿವಾಸಿಗಳಿಗೆ ಶ್ರೀ ಕೃಷ್ಣ ಮಠದಿಂದ ಊಟದ ವ್ಯವಸ್ಥೆ

Posted On: 27-05-2021 09:10PM

ಉಡುಪಿ : ಕರೋನಾ ಲಾಕ್ ಡೌನ್ ನಿಂದ ಬಹಳಷ್ಟು ತೊಂದರೆಗೆ ಒಳಗಾದ ಮಣಿಪಾಲ ಸರಳೇಬೆಟ್ಟು ವಿಜಯನಗರ ಕೊರಗರ ಕಾಲನಿಯ 60 ಕುಟುಂಬಗಳಿಗೆ ಶ್ರೀ ಕೃಷ್ಣ ಮಠ ಪಯಾ೯ಯ ಶ್ರೀ ಗಳು ಕೊಡಮಾಡಿದ ಊಟದ ವ್ಯವಸ್ಥೆಯನ್ನು ಹೋo ಡಾಕ್ಟರ್ ಫ್oಡೇಶನ್ ವತಿಯಿಂದ ನೀಡಲಾಯಿತು.

ಕರಾವಳಿ ಜನರ ಹೆಮ್ಮೆಯ ಕರ್ನಾಟಕ ಬ್ಯಾಂಕ್ ಗೆ ದಾಖಲೆಯ 483 ಕೋಟಿ ರೂ. ಲಾಭ

Posted On: 27-05-2021 09:01PM

ಮಂಗಳೂರು : ಕೊರೊನ ಸಮಯ ಆರ್ಥಿಕ ಹಿಂಜರಿತದ ನಡುವೆ ಕರಾವಳಿಯ ಬ್ಯಾಂಕಾದ ಕರ್ನಾಟಕ ಬ್ಯಾಂಕ್ ದಾಖಲೆಯ 483 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದೆ.

ಕರ್ನಾಟಕ ರಾಜ್ಯ ಮುದ್ರಣಕಾರರ ಸಂಘದ ಆನ್ಲೈನ್ ಸಭೆ : ಸರಕಾರದ ಸವಲತ್ತುಗಳನ್ನು ಪಡೆಯಲು ಪ್ರಯತ್ನ

Posted On: 26-05-2021 07:12PM

ಉಡುಪಿ : ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳ ಮುದ್ರಣಕಾರರ ಸಂಘದ ಆನ್ಲೈನ್ ಸಭೆಯು ಜರಗಿತು. ಈ ಸಭೆಯಲ್ಲಿ ಸಿ. ಆರ್. ಜನಾರ್ಧನ್‌ರವರು ಮಾತನಾಡಿ ಈ ಸಭೆಗಳನ್ನು ತಿಂಗಳು ತಿಂಗಳು ಮಾಡಬೇಕು ಬರುವ ಎಲ್ಲಾ ಖರ್ಚುಗಳನ್ನು ನಮ್ಮ ರಾಜ್ಯ ಸಂಘಟನೆಯು ಭರಿಸಲಿದೆ ಮತ್ತು ಎಂ.ಎಸ್.ಎಮ್ ಇ.ಯ ಮಾಲಿಕರಿಗೆ ಕೋವಿಡ್-19ನಿಂದ ತುಂಬಾ ಸಂಕಷ್ಟ ಎದುರಾಗಿದೆ. ಕರ್ನಾಟಕದಲ್ಲಿ ಸುಮಾರು 15000ಕ್ಕೂ ಮಿಕ್ಕಿ ಪ್ರಿಂಟಿಂಗ್ ಪ್ರೆಸ್‌ಗಳಿವೆ ಭಾರತದಲ್ಲಿ ಸುಮಾರು 230000 ದವರೆಗೆ ಸಣ್ಣ, ಅತಿ ಸಣ್ಣ, ಮಧ್ಯಮ ವರ್ಗದ ಮುದ್ರಣಾಲಯಗಳಿವೆ. ಸುಮಾರು 2000 ಕೋಟಿಯಷ್ಟು ನಷ್ಟ ಆಗಿರುತ್ತದೆ. ಸರಕಾರ ನಮ್ಮ ಕೈ ಹಿಡಿಯದಿದ್ದರೆ ನಮಗೆ ಉಳಿಗಾಲವಿಲ್ಲ ಎಂಬ ಮಾತನ್ನು ಆಡಿದರು ಮತ್ತು ಎಲ್ಲಾ ಮುದ್ರಕ ಬಾಂಧವರು ಹೆದರುವ ಅಗತ್ಯವಿಲ್ಲ ನಾವೆಲ್ಲ ಒಟ್ಟಾಗಿ ಸರಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಹೆಚ್ಚಿನ ಪ್ರಯತ್ನವನ್ನು ಮಾಡಬಹುದು ಎಂಬ ಮಾತನ್ನು ಹೇಳಿದರು. ಅಶೋಕ್ ಕುಮಾರ್‌ರವರು ಮಾತನಾಡಿ ಎಲ್ಲಾ ಜಿಲ್ಲೆಗಳು ನಮ್ಮ ಮಾತೃ ಸಂಘದಲ್ಲಿ ನೋಂದಾವಣೆಯನ್ನು ಮಾಡಿಕೊಳ್ಳಬೇಕು. ನೋಂದಾವಣೆಗೆ ತಗಲುವ ವೆಚ್ಚ ರೂ.3000 ವನ್ನು ನಮ್ಮ ಮಾತೃ ಸಂಘವೇ ಭರಿಸಲಿದೆ ಎಂಬ ಮಾತನ್ನು ಹೇಳಿದರು. ಈಗಾಗಲೇ ಹಾರೋಹಳ್ಳಿಯಲ್ಲಿ ಪ್ರಿಂಟೆಕ್ ಪಾರ್ಕ್ ಪ್ರಾರಂಭಗೊಂಡಿದ್ದು ಅದರ ಪ್ರಯೋಜನವನ್ನು ಎಲ್ಲಾ ಜಿಲ್ಲೆಗಳ ಸದಸ್ಯರುಗಳು ಪಡೆಯಬೇಕಾಗಿ ಮಾಹಿತಿಯನ್ನು ನೀಡಿದರು. 3 ತಿಂಗಳಿಗೊಮ್ಮೆ ಬೇರೆ ಬೇರೆ ಜಿಲ್ಲೆಗಳಲ್ಲಿ ಸಭೆಯನ್ನು ನಡೆಸುವರೇ ಆ ಸಭೆಯ ಎಲ್ಲಾ ಖರ್ಚನ್ನು ಕರ್ನಾಟಕ ರಾಜ್ಯ ಮುದ್ರಕರ ಸಂಘ ಭರಿಸಲಿದೆ ಹಾಗೂ ಎಲ್ಲಾ ನಮ್ಮ ವೃತ್ತಿ ಬಾಂಧವರಿಗೆ ನಾವು ಸರಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಹೆಚ್ಚಿನ ಪ್ರಯತ್ನವನ್ನು ಮಾಡುತ್ತೇವೆ ಎಂಬ ಭರವಸೆಯನ್ನು ನೀಡಿದರು.

ಕಟಪಾಡಿ : ಯುವಕರು ಜತೆಗೂಡಿ ಮಾಡಿದ ಕಿರುಚಿತ್ರ ಲಂಡನ್ ನ ಫಿಲ್ಮ್ ಫೆಸ್ಟಿವಲ್ ಗೆ ಆಯ್ಕೆ

Posted On: 25-05-2021 04:32PM

ಕಾಪು : ಯುವ ಪ್ರತಿಭೆ ವಿಜಿತ್ ಅಂಚನ್ ನಿರ್ದೇಶನ ದ MGM GROUND ಎಂಬ ತುಳು ಕಿರುಚಿತ್ರ ಲಿಫ್ಟ್ ಆಫ್ ಗ್ಲೋಬಲ್ ನೆಟ್ವರ್ಕ್ ಸೆಷನ್ಸ್ 2021 ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲು ಆಯ್ಕೆಯಾಗಿದೆ.

ಸಾಮಾಜಿಕ ಕಾರ್ಯಕರ್ತೆ ನೀತಾ ಪ್ರಭುರವರ ಜನ್ಮ ದಿನಾಚರಣೆಯ ಪ್ರಯುಕ್ತ ದಿನಸಿ ಸಾಮಾಗ್ರಿ ವಿತರಣೆ

Posted On: 25-05-2021 03:55PM

ಕಾಪು : ಸಾಮಾಜಿಕ ಕಾರ್ಯಕರ್ತೆ ಕಾಪುವಿನ ನೀತಾ ಪ್ರಭುರವರ ಜನ್ಮ ದಿನಾಚರಣೆಯ ಪ್ರಯುಕ್ತ ಆಶಾ ಕಾರ್ಯಕರ್ತೆಯರಿಗೆ 10 ಕೆ.ಜಿ‌ ಅಕ್ಕಿ ಸೇರಿದಂತೆ ದಿನಸಿ ಸಾಮಾಗ್ರಿಗಳನ್ನು ನೀಡಲಾಯಿತು.

ವಿಶ್ವ ಹಿಂದು ಪರಿಷತ್ ಕಾಪು ವತಿಯಿಂದ ಕಾಪು ಭಾಗದ ಆಶಾ ಕಾರ್ಯಕರ್ತರಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಣೆ

Posted On: 25-05-2021 03:36PM

ಕಾಪು : ವಿಶ್ವ ಹಿಂದು ಪರಿಷತ್ ಕಾಪು ಇದರ ವತಿಯಿಂದ ಇಂದು ಕಾಪು ಭಾಗದ ಎಲ್ಲ ಆಶಾ ಕಾರ್ಯಕರ್ತರಿಗೆ N 95 ಮಾಸ್ಕ್, ಕೈ ಗವಚ ಮತ್ತು ಸ್ಯಾನಿಟೈಸರ್ ನ್ನು ಕಾಪು ಪುರಸಭಾ ಅಧ್ಯಕ್ಷ ಅನಿಲ್ ಕುಮಾರ್ ರವರ ನೇತೃತ್ವದಲ್ಲಿ ವಿತರಿಸಲಾಯಿತು.

ಸ್ವಚ್ಛ ಭಾರತ್ ಫ್ರೆಂಡ್ಸ್ ವತಿಯಿಂದ ಆಹಾರ ಪ್ಯಾಕೆಟ್ ವಿತರಣೆ

Posted On: 24-05-2021 09:53PM

ಉಡುಪಿ : ಸ್ವಚ್ಛ ಭಾರತ್ ಫ್ರೆಂಡ್ಸ್ ವತಿಯಿಂದ ಸಣ್ಣ ಕ್ಯಾಂಟೀನ್ ನಡೆಸುತ್ತಿರುವ ಓರ್ವ ವ್ಯಕ್ತಿಗೆ ಏನಾದರೂ ವ್ಯಾಪಾರ ಆಗಲಿ ಅದೇ ರೀತಿ ಅಗತ್ಯ ವಸ್ತುಗಳನ್ನು ಸಾಗಾಟ ಮಾಡುವ ಟ್ರಕ್, ಲಾರಿ ಇತರೆ ವಾಹನಗಳ ಚಾಲಕರಿಗೆ ಸುಲಭವಾಗಿ ಉಚಿತವಾಗಿ ಆಹಾರ ಸಿಗಲಿ ಎಂಬ ಉದ್ದೇಶದಿಂದ ಆರಂಭಿಸಿರುವ ಅಗತ್ಯ ವಸ್ತುಗಳ ಸಾಗಾಟ ಮಾಡುವ ಲಾರಿ ಚಾಲಕರಿಗೆ ಆಹಾರ ಪ್ಯಾಕೆಟ್ ನ್ನು ವಿತರಿಸಲಾಯಿತು.