Updated News From Kaup

ಕ್ರೀಡೆಯಲ್ಲಿ ಭಾಗವಹಿಸುವುದರಿಂದ ರೋಟರಿ ಸದಸ್ಯರ ಬಾಂಧವ್ಯ ವೃದ್ಧಿಗೆ ಸಹಕಾರಿ: ಡಾ| ಭರತೇಶ್ ಆದಿರಾಜ್

Posted On: 05-02-2021 11:29AM

ರೋಟರಿ ವಲಯ ೫ರ ಕ್ರೀಡಾಕೂಟ ಗೊಬ್ಬು ಗಮ್ಮತ್ತ್ ಬೆಳ್ಮಣ್ ರೋಟರಿಯ ಆತಿಥ್ಯದಲ್ಲಿ ಬೆಳ್ಮಣ್ ಸರ್ಕಾರಿ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಜರುಗಿದ್ದು ಈ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಅವಿಭಜಿತ ರೋಟರಿ ಜಿಲ್ಲೆ ೩೧೮೨ರ ಮಾಜಿ ಜಿಲ್ಲಾ ರಾಜ್ಯಪಾಲರಾದ ಡಾ| ಭರತೇಶ್ ಆದಿರಾಜ್ ಕ್ರೀಡಾಕೂಟ ಉದ್ಘಾಟಿಸಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ರಿಂದ ರೋಟರಿ ಸದಸ್ಯರ ಬಾಂಧವ್ಯ ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದು ನುಡಿಯುತ್ತ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು.

ಮೊದಲ ಬಾರಿಗೆ ಉಡುಪಿಯಲ್ಲಿ ಶುಭಾರಂಭಗೊಂಡಿದೆ ದೊಣ್ಣೆ ಬಿರಿಯಾನಿ ಎಂಪೈರ್

Posted On: 04-02-2021 07:38PM

ಬೆಂಗಳೂರಿನಲ್ಲಿ ಹೆಸರು ವಾಸಿಯಾದ ಶುಚಿರುಚಿಯಾದ ದೊಣ್ಣೆ ಬಿರಿಯಾನಿ ಇದೀಗ ಉಡುಪಿಯ ಕಲ್ಪನಾ ಚಿತ್ರಮಂದಿರ ನಂತರದ ಬಂಧನ್ ಬ್ಯಾಂಕ್ ಹತ್ತಿರದ ದೊಣ್ಣೆ ಬಿರಿಯಾನಿ ಎಂಪೈರ್ ನಲ್ಲಿ ಸಿಗಲಿದೆ.

ಲೇಡಿಹಿಲ್ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ಹೆಸರು: ಮೇಯರ್ ದಿವಾಕರ್ ಅವರಿಗೆ ಅಭಿನಂದನೆ

Posted On: 03-02-2021 05:27PM

ಮಂಗಳೂರು: ಮಂಗಳೂರಿನ ಲೇಡಿಹಿಲ್ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣಗುರು ವೃತ್ತ ಎಂದು ಮರು ನಾಮಕರಣ ಮಾಡಲು ಮಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಲಾಗಿದ್ದು ಈ ಪ್ರಯುಕ್ತ ಈ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣಗುರು ಹೆಸರಿಡಲು ಹೋರಾಟ ನಡೆಸಿದ ಬಿರುವೆರ್ ಕುಡ್ಲ ಫ್ರೆಂಡ್ಸ್ ಬಳ್ಳಾಲ್ ಬಾಗ್ ಇದರ ವತಿಯಿಂದ ಮೇಯರ್ ದಿವಾಕರ ಪಾಂಡೇಶ್ವರ ಅವರನ್ನು ಸನ್ಮಾನಿಸಲಾಯಿತು.

ನಮ್ಮ ಕಾಪು ವರದಿಗೆ ಸ್ಪಂದಿಸಿದ ಅಧಿಕಾರಿಗಳು - 5 ತಿಂಗಳಿಂದ ದುರಸ್ತಿ ಭಾಗ್ಯ ಕಾಣದಾಗಿದ್ದ ಕಾಪು ದೀಪಸ್ತಂಭದ ಮೆಟ್ಟಿಲುಗಳು ಮತ್ತು ಗೋಡೆಗಳು ದುರಸ್ತಿ

Posted On: 02-02-2021 11:40PM

ಅಸಂಖ್ಯಾತ ಪ್ರವಾಸಿಗರನ್ನು ಸೆಳೆಯುತ್ತಿದ್ದ ಪ್ರವಾಸಿ ತಾಣ ಉಡುಪಿ ಜಿಲ್ಲೆಯ ಕಾಪು ಕಡಲ ಕಿನಾರೆಯಲ್ಲಿರುವ ಬ್ರಿಟಿಷ್ ಕಾಲದಲ್ಲಿ ನಿರ್ಮಿಸಲ್ಪಟ್ಟ ಕಾಪು ದೀಪಸ್ತಂಭ.

ಎಲ್ಲೂರು ವಿಶ್ವಕರ್ಮ ಸಮಾಜ ಸೇವಾ ಸಂಘದ ವಾರ್ಷಿಕ ಮಹಾಸಭೆ ಮತ್ತು ವಿಶ್ವಕರ್ಮ ಪೂಜೆ

Posted On: 02-02-2021 07:09PM

ಕಾಪು ತಾಲೂಕಿನ ಎಲ್ಲೂರು ವಿಶ್ವಕರ್ಮ ಸಮಾಜ ಸೇವಾ ಸಂಘವು ಸಾಕಷ್ಟು ಚಟುವಟಿಕೆಯುಕ್ತವಾಗಿದ್ದು, ನಡೆಸುವ ಧಾರ್ಮಿಕ ಚಟುವಟಿಕೆಯು ಸಂಘಟನಾ ಶಕ್ತಿಗೆ ಪೂರಕವಾಗಲಿದೆ ಸ್ವಂತ ನಿವೇಶನದಲ್ಲಿ ಸಮುದಾಯ ಭವನ ನಿರ್ಮಾಣ ಶೀಘ್ರ ಕೈಗೂಡಲಿ ಎಂದು ಬಂಟಕಲ್ಲು ಶ್ರೀ ವಿಶ್ವಕರ್ಮ ಸಂಘದ ಅಧ್ಯಕ್ಷರಾದ ಮುರುಳೀಧರ ಆಚಾರ್ಯ ಇನ್ನಂಜೆ ಹೇಳಿದರು.

ಕಲ್ಲುಗುಡ್ಡೆ ಕಿಂಗ್ಸ್ ವತಿಯಿಂದ ತುಳು ಲಿಪಿಯ ದಾರಿ ಫಲಕದ ಕೊಡುಗೆ

Posted On: 02-02-2021 04:32PM

ಕಾಪು ತಾಲೂಕಿನ 92 ನೇ ಹೇರೂರು ಗ್ರಾಮದ ಕಲ್ಲುಗುಡ್ಡೆ ಶ್ರೀ ಬ್ರಹ್ಮಬೈದರ್ಕಳ ಗರೋಡಿಗೆ ಹೋಗುವ ದಾರಿ ತೋರುವ ತುಳು ಲಿಪಿಯ ಫಲಕವನ್ನು ಕಲ್ಲುಗುಡ್ಡೆ ಕಿಂಗ್ಸ್ ಇಂದು ಕೊಡುಗೆಯಾಗಿ ನೀಡಿದರು.

ಕಿನ್ನಿಗೋಳಿ : ಸಾಹಿತ್ಯಾಸಕ್ತರಿಗೆ ಶುಭಸುದ್ದಿ ಒಕ್ಕಲುಗೊಂಡಿದೆ ಪುಸ್ತಕದ ಮನೆ

Posted On: 02-02-2021 07:47AM

ಕಿನ್ನಿಗೋಳಿ : ಪುಸ್ತಕದ ಮನೆ ಇಲ್ಲಿ ಕಾದಂಬರಿ,ಕಥಾಸಂಕಲನ , ಧಾರ್ಮಿಕ , ಯಕ್ಷಗಾನ, ಪುರಾಣ, ತುಳುಸಾಹಿತ್ಯ ಹೀಗೆ ಪುಸ್ತಕಗಳ ಸಂಗ್ರಹವಿದೆ . ಇಲ್ಲಿ ಪುಸ್ತಕ ಓದಬಹುದು , ಓದಿ ವಾಪಾಸು ತಂದು ಕೊಡಬಹುದು - ಕೊಂಡುಕೊಳ್ಳಲೂ ಬಹುದು , ಓದುಗರ ಬಳಗ ಸೇರಬಹುದು. ಪುಸ್ತಕ - ಸಾಹಿತ್ಯ ಚರ್ಚೆ ನಡೆಸಬಹುದು. ಸಾಹಿತಿಗಳನ್ನು ಭೇಟಿಮಾಡಬಹುದು. ಹೀಗೆ ಸಾಹಿತ್ಯಾಸಕ್ತರಿಗೆ ,ಓದುವ ಮನಸ್ಸುಳ್ಳ ಜ್ಞಾನದಾಹಿಗಳಿಗೆ ಏನಾದರೂ ಮಾಡಬೇಕೆಂಬ ಒತ್ತಾಸೆಯಿಂದ ಕಟ್ಟಿದ ಪುಸ್ತಕದ ಮನೆ ಜ.28 ರಂದು ಕಿನ್ನಿಗೋಳಿಯಲ್ಲಿ ತೆರೆಯಿತು .

ಬಂಟಕಲ್ಲು : ಆರಕ್ಷರ ಠಾಣೆ ಶಿರ್ವ, ನಾಗರಿಕ ಸೇವಾ ಸಮಿತಿ ಬಂಟಕಲ್ಲು ಇವರ ಆಶ್ರಯದಲ್ಲಿ ಬಂಟಕಲ್ಲು ಶ್ರೀ ಮಧ್ವ ವಾದಿರಾಜ ಇಂಜಿನಿಯರಿಂಗ್ ಕಾಲೇಜಿನ ಸಹಯೋಗದೊಂದಿಗೆ ರಸ್ತೆ ಸುರಕ್ಷಾ ಸಪ್ತಾಹ ಕಾರ್ಯಕ್ರಮ

Posted On: 01-02-2021 11:02PM

ಬಂಟಕಲ್ಲು : ಆರಕ್ಷರ ಠಾಣೆ ಶಿರ್ವ, ನಾಗರಿಕ ಸೇವಾ ಸಮಿತಿ (ರಿ.) ಬಂಟಕಲ್ಲು ಇವರ ಆಶ್ರಯದಲ್ಲಿ ಬಂಟಕಲ್ಲು ಶ್ರೀ ಮಧ್ವ ವಾದಿರಾಜ ಇಂಜಿನಿಯರಿಂಗ್ ಕಾಲೇಜಿನ ಸಹಯೋಗದೊಂದಿಗೆ ರಸ್ತೆ ಸುರಕ್ಷಾ ಸಪ್ತಾಹ ಕಾರ್ಯಕ್ರಮವು ಜರುಗಿತು. ಬಂಟಕಲ್ಲು ಮಧ್ವ ವಾದಿರಾಜ ಇಂಜಿನಿಯರಿಂಗ್ ಕಾಲೇಜಿನ ಎನ್.ಎಸ್.ಎಸ್ ವಿದ್ಯಾರ್ಥಿ ಗಳೊಂದಿಗೆ ಜಾಗೃತಿ ಜಾಥವು ಕಾಲೇಜಿನಿಂದ ಬಂಟಕಲ್ಲು ಪೇಟೆಯವರೆಗೆ ನಡೆಯಿತು. ಶಿರ್ವ ಠಾಣಾಧೀಕಾರಿ ಶ್ರೀ ಶ್ರೀಶೈಲ ಮುರಗೋಡುರವರು ಹಸಿರು ನಿಶಾನೆ ತೋರಿಸಿ ಜಾಥಾಕ್ಕೆ ಚಾಲನೆ ನೀಡಿದರು. ಜಾಥದಲ್ಲಿ ವಾಹನ ಜಾಗೃತಿ ಫಲಕಗಳನ್ನು ಪ್ರದರ್ಶಿಸಲಾಯಿತು.

ಯುವ ನಟ, ಬಹುಮುಖ ಪ್ರತಿಭೆ ರಾಜೇಶ್ ಮುಂಡ್ಕೂರು ಇವರಿಗೆ ಸನ್ಮಾನ

Posted On: 01-02-2021 10:29PM

ದ.ಕ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಪದಗ್ರಹಣ ಸಮಾರಂಭ ಮತ್ತು ಕುಲಾಲ ಸಮ್ಮಿಲನ ಕಾರ್ಯಕ್ರಮವು ಭಾನುವಾರ ಮಂಗಳೂರು ಕುಲಶೇಖರದ ಶ್ರೀ ವೀರ ನಾರಾಯಣ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ಪಡುಬಿದ್ರಿ : ರಾಷ್ಟ್ರೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಮತ್ತು ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಆಶ್ರಯದಲ್ಲಿ ಗ್ರಾಮಾಭಿವೃದ್ಧಿಯಲ್ಲಿ ಗ್ರಾ. ಪಂ. ಸದಸ್ಯರ ಜವಾಬ್ದಾರಿಗಳು ಕಾರ್ಯಾಗಾರ

Posted On: 01-02-2021 06:00PM

ಪಡುಬಿದ್ರಿ : ರಾಷ್ಟ್ರೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ (NSCDF) ಮತ್ತು ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಆಶ್ರಯದಲ್ಲಿ ಗ್ರಾಮಾಭಿವೃದ್ಧಿಯಲ್ಲಿ ಗ್ರಾ. ಪಂ. ಸದಸ್ಯರ ಜವಾಬ್ದಾರಿಗಳು ಕುರಿತಾದ ಒಂದು ದಿನದ ಕಾರ್ಯಾಗಾರ ಉಡುಪಿ ಜಿಲ್ಲೆಯ ಪಡುಬಿದ್ರಿ ಸುಜ್ಲೋನ್ ಆರ್ & ಆರ್ ಕೊಲೊನಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ಸಿವಿಲ್ ಹಿರಿಯ ನ್ಯಾಯಾಧೀಶೆ ಶ್ರೀಮತಿ ಕಾವೇರಿ ಮಾತನಾಡಿ ಇದೀಗ ಚುನಾಯಿತರಾದ ನೀವುಗಳು ಕಾನೂನಿನ ಯಾವ ಕಾಯಿದೆ ಅಡಿಯಲ್ಲಿ ಆಯ್ಕೆಯಾಗಿದ್ದೀರಿ, ನಿಮ್ಮ ಜವಾಬ್ದಾರಿಗಳು ಏನು? ಜನ ಯಾಕಾಗಿ ನಿಮ್ಮನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ ನಿಮ್ಮ ಕರ್ತವ್ಯಗಳು ಏನು ? ಗ್ರಾಮದ ಯಾವ ಯಾವ ಕಾರ್ಯಗಳಲ್ಲಿ ತಾವು ತೊಡಗಿಕೊಳ್ಳಬೇಕು ಎಂಬುದರ ಸ್ಪಷ್ಟ ಚಿತ್ರಣ ನಿಮ್ಮಲ್ಲಿ ಇದ್ದಾಗ ಮಾತ್ರ ಒಂದು ಗ್ರಾಮವನ್ನು ಸುಂದರ ಗ್ರಾಮವನ್ನಾಗಿಸ ಬಹುದು ಎಂದು ಹೇಳಿದರು.