Updated News From Kaup

ನಂದಳಿಕೆ ಗ್ರಾಮ ಪಂಚಾಯತ್ ಮನವಿಗೆ ಸ್ಪಂದಿಸಿದ ರೋಟರಿ ಕ್ಲಬ್ ಬೆಳ್ಮಣ್ : ಆಹಾರ ಕಿಟ್ ಕೊಡುಗೆ

Thumbnail
Posted On: 30 May 2021, 02:31 PM

ಕಾಪು : ನಂದಳಿಕೆ ಗ್ರಾಮ ಪಂಚಾಯತ್ ಮನವಿಯ ಮೇರೆಗೆ ರೋಟರಿ ಕ್ಲಬ್ ಬೆಳ್ಮಣ್ ವತಿಯಿಂದ ನಂದಳಿಕೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆರ್ಥಿಕ ಸಂಕಷ್ಟದಲ್ಲಿರುವವರಿಗೆ ವಿತರಿಸಲು ಆಹಾರ ಕಿಟ್ ಒದಗಿಸಲಾಯಿತು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷರು ರೊ| ಸುಭಾಷ್‌ಕುಮಾರ್, ಸ್ಥಾಪಕಾಧ್ಯಕ್ಷರು ರೊ|ಸೂರ್ಯಕಾಂತ್ ಶೆಟ್ಟಿ, ಕಾರ್ಯದರ್ಶಿ ರೊ|ರವಿರಾಜ್ ಶೆಟ್ಟಿ, ಸ್ಥಾಪಕ ಸದಸ್ಯರು ರೊ| ಎನ್.ಕೆ. ಶ್ರೀಧರ್, ಸದಸ್ಯರಾದ ರೊ|ರಾಜೇಶ್ ಸಾಲ್ಯಾನ್, ಶ್ರೀ ಪ್ರಕಾಶ್ ಪಂಚಾಯತ್ ಸದಸ್ಯರಾದ ಶ್ರೀಮತಿ ಸುಜಾತ, ಕಾರ್ಯದರ್ಶಿ ಶ್ರೀ ಸಂಜೀವ ಮತ್ತು ಪಂಚಾಯತ್ ಸಿಬ್ಬಂದಿ ಉಪಸ್ಥಿತರಿದ್ದರು.

ಕಾಪು ಪಟ್ಟಣಕ್ಕೆ ಬೊಬ್ಬರ್ಯನ ಆಗಮನ

Thumbnail
Posted On: 29 May 2021, 07:59 PM

ಪೊಡ್ಡಿಕಲ್ಲ ಗರಡಿ ಕೋಟೆ ಕೊಪ್ಪಳ ಬ್ರಹ್ಮಬೈದರ್ಕಳ ಗರಡಿಯು ಕಾಪುವಿನ ಸಮುದ್ರ ಬದಿಯಲ್ಲಿ ಇದೆ. ಹಿಂದೊಮ್ಮೆ ರೋಡಿನ ಬದಿಯಲ್ಲಿ ಸಮುದ್ರಕಿನಾರೆಯಲ್ಲಿ ಒಂದು ಮರದ ಕುದುರೆಯು ಮೇಲೆ ಬಿದ್ದಿತ್ತು. ಆ ಸಮಯದಲ್ಲಿ ಅಲ್ಲಿ ಹತ್ತು ಸಮಸ್ತರು ಸೇರಿ ಮರದ ಕುದುರೆಯನ್ನು ಮೇಲೆತ್ತಲು ಎಷ್ಟು ಪ್ರಯತ್ನಪಟ್ಟರೂ ಮರದ ಕುದುರೆ ಅಲುಗಾಡಲಿಲ್ಲ. ಅಲ್ಲಿ ಸೇರಿದವರು ಮಾರನೇ ದಿನ ನೋಡುವ ಎಂದು ಮನೆಗೆ ಹೋದರು. ಮಾರನೇ ದಿನ ಊರಿನವರು ಬಂದು ನೋಡುವಾಗ ಮರದ ಕುದುರೆ ಪೋಡಿಕಲ್ಲ ಗರಡಿಯ ಎದುರಿನಲ್ಲಿ ಬಂದು ಸ್ಥಿರವಾಗಿ ನಿಂತಿತ್ತು. ಆ ದಿನದಿಂದ ಇಂದಿನವರೆಗೂ ಮರದ ಕುದುರೆ ಬೆಳೆಯುತ್ತಿದೆ. ಅದಕ್ಕೆ ಕಟ್ಟಿದ ಮಾಡು ಎರಡು ಬಾರಿ ವಿಸ್ತರಿಸಲಾಯಿತು. ಈಗ ಬೆಳೆದು ಮಾಡಿಗೆ ತಾಗಿರುವುದರಿಂದ ಇನ್ನು ಕೂಡ ಮೇಲಿನ ಮಾಡನ್ನು ವಿಸ್ತರಿಸುವ ಅಗತ್ಯವಿದೆ. ಈ ಮರದ ಕುದುರೆ ಇನ್ನು ಬೆಳೆಯದಂತೆ ಇಲ್ಲಿಯ ಭಕ್ತಾದಿಗಳು ಒಟ್ಟಾಗಿ ಪ್ರಾರ್ಥನೆಯನ್ನು ಮಾಡಿದ್ದಾರೆ . ಒಟ್ಟಾರೆ ಹೇಳುವುದೇನೆಂದರೆ ಇದೊಂದು ಕ್ಷೇತ್ರದ ಕಲೆ ಕಾರ್ಣಿಕ ಎಂದೆ ಹೇಳಬಹುದು. ಇಲ್ಲಿಯ ಉತ್ಸವಾದಿಗಳು ಕೋಡಿ ತಿಂಗಳ ಹುಣ್ಣಿಮೆಯಂದು ನಡೆಯುತ್ತದೆ. ಕೋಟೆ ಕೊಪ್ಪಳ ಆದಿಸ್ಥಳ, ಬೊಬ್ಬರ್ಯನ ಮೂಲ ಸ್ಥಳ. ಶೆಟ್ರು, ಬಿಲ್ಲವರು, ಮೊಗವೀರರು ಒಟ್ಟು ಮೂರು ಜಾತಿಯವರು ನಂಬಿರುವ ಬೊಬ್ಬರ್ಯ. ಬೊಬ್ಬರ್ಯನನ್ನು ನಂಬಿರುವ ಸುಮಾರು ಜಾತಿಯವರಿಗೆ ಅವರವರಲ್ಲಿ ಮನಸ್ತಾಪ ಬಂದು ಮೊಗವೀರರು ಅಲ್ಲಿಂದ ಇಳಿದುಕೊಂಡು ಬಂದರು. ಆಮೇಲೆ ಪಾಟ್ನಾ ದವರು ಸಭೆ ಸೇರಿ ಬೊಬ್ಬರ್ಯನನ್ನು ತಂದು ಬೇರೆ ಪ್ರತಿಷ್ಠೆ ಮಾಡುವ ಬಗ್ಗೆ ಅಲ್ಲಿ ಸಭೆ ಸೇರಿ ಚರ್ಚಿಸಿ ಸ್ಥಳದ ಬಗ್ಗೆ ಚಿಂತನೆ ನಡೆಯುತ್ತಿರುವಾಗ ಆ ಸಭೆಯಲ್ಲಿದ್ದ ಮುಲ್ಕಿಯ ತಬುರ ಮರಕಾಲ ( ಬೊಬ್ಬರ್ಯ ಪೂಜಾರಿ) ನಿಗೆ ಬೊಬ್ಬರ್ಯನು ಮೈಮೇಲೆ ಬಂದು ಅಲ್ಲಿ ಸಭೆ ಸೇರಿದವರಿಗೆ ಸ್ಥಳದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ನಾನು ಈ ರಾತ್ರಿಯ ಮುಂಬೈಯಲ್ಲಿರುವ ಚೋಳ ಗುರಿಕಾರರಿಗೆ ಸ್ವಪ್ನದ ಮೂಲಕ ಕಾಣಿಸಿಕೊಂಡು ಚೋಳ ಗುರಿಕಾರರ ಕುಟುಂಬಿಕರ ಸ್ಥಳದಲ್ಲಿ ಬೊಬ್ಬರ್ಯ ದೈವಸ್ಥಾನ ಕಟ್ಟಲು ಬೇಕಾಗುವ ಸ್ಥಳವನ್ನು ಕೊಡಿಸುವಂತೆ ತಿಳಿಸುವೆನು. ಎಂದು ಮೈಯಾರೆ ಬಂದ ಬೊಬ್ಬರ್ಯನು ತಿಳಿಸಿದನು. ಅದೇ ಪ್ರಕಾರ ಆ ದಿನ ರಾತ್ರಿಯೇ ಚೋಳ ಗುರಿಕಾರರಿಗೆ ಕನಸಿನಲ್ಲಿ ಕಾಣಿಸಿ ನಾನು ಬೊಬ್ಬರ್ಯ ನಿಮ್ಮ ಕುಟುಂಬಿಕರ ಪಟ್ಟ ಸ್ಥಳದಲ್ಲಿ ನನಗೆ ಗುಡಿ ಮಾಡಿ ಕಟ್ಟಲು ಬೇಕಾಗುವ ಸ್ಥಳವನ್ನು ಒದಗಿಸಿ ಕೊಡಬೇಕಾಗಿ ತಿಳಿಸಿದನು. ಮಾರನೇ ದಿನ ತನ್ನ ಅಳಿಯ ಮುತ್ತಯ್ಯ ಪುತ್ರನನ್ನು ಕರೆದು ಕಾಪು ಮೊಗವೀರ ಗ್ರಾಮ ಸಭೆಗೆ ತಮ್ಮ ಕುಟುಂಬದ ಪಟ್ಟ ಸ್ಥಳವನ್ನು ಕೊಡುವುದಾಗಿ ಪತ್ರ ಬರೆದು ಮುತ್ತಯ್ಯ ಪುತ್ರನ ಕೈಯಲ್ಲಿ ಕೊಟ್ಟು ಕಳಿಸಿದರು. ಹಾಗೂ ಊರಿಗೆ ಬಂದು ಈಗ ಇರುವ ಬೊಬ್ಬರ್ಯ ಸಾನದ ಜಾಗವನ್ನು ಅಂದರೆ ಚೋಳ ಗುರಿಕಾರರ ಕುಟುಂಬಿಕರ ಪಟ್ಟ ಸ್ಥಳದಲ್ಲಿ 12 ಸೆಂಟ್ಸ್ ಸ್ಥಳವನ್ನು 1933 ರಲ್ಲಿ ಕಾಪು ಮೊಗವೀರ ಗ್ರಾಮ ಸಭೆ ಯವರಿಗೆ ರಿಜಿಸ್ಟರ್ ಮಾಡಿಸಿ ವರ್ಗಾಯಿಸಿದರು ಎಂದು ತಿಳಿದುಬರುತ್ತದೆ. ಧರ್ಮಾರ್ಥವಾಗಿ ಸ್ಥಳವನ್ನು ಬಿಟ್ಟುಕೊಟ್ಟಿದ್ದಾರೆ ಎಂದು ತಿಳಿದುಬರುತ್ತದೆ. ಜಾಗದ ಮರ್ಯಾದೆಗಾಗಿ ನೇಮೋತ್ಸವದ ದಿನ ಬದಿಕರ ತೆಂಗಿನಕಾಯನ್ನು ಚೋಳ ಗುರಿಕಾರರ ಕುಟುಂಬದವರಿಗೆ ಕೊಡಬೇಕು ಎಂದು ಜಾಗದ ಕರಾರಿನಲ್ಲಿ ತಿಳಿದುಬರುತ್ತದೆ. ಬೊಬ್ಬರ್ಯನನ್ನು ಅಂದಿನಿಂದ ಇಂದಿನವರೆಗೆ ಕಾಪು ಗ್ರಾಮ ಸಭೆಯವರು, ರಾಂಪನಿಯವರು ಮತ್ತು ಸಮುದ್ರದಲ್ಲಿ ದುಡಿಯುವವರು, ಕಸುಬಿನವರು ತಮ್ಮ ಸಂಪಾದನೆಯ ಒಂದಂಶವನ್ನು ಕೊಟ್ಟು ಇಲ್ಲಿಯ ನೇಮೋತ್ಸವ ಮತ್ತು ಇಲ್ಲಿ ನಡೆಯುವ ಪೂಜಾದಿಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಇಲ್ಲಿ ಚೋಳ ಗುರಿಕಾರ ಮತ್ತು ಕುಟುಂಬಿಕರು ಪೂಜೆಗೆ ಮುಕ್ಕಾಲ್ದಿ ಆಗಿ ನಡೆಸಿಕೊಂಡು ಬರುತ್ತಿದ್ದಾರೆ. ಇಲ್ಲಿ ನಡೆಯುವ ಪೂಜಾದಿಗಳು ಪ್ರತಿ ಸಂಕ್ರಮಣ ಗುರಿಕಾರರು ನಾಲ್ಕು ಜನ ಮತ್ತು ಮುಕ್ಕಾಲ್ದಿ ಬೊಬ್ಬರ್ಯ ಸಾನ ಬಾಗಿಲು ತೆರೆದು ಸ್ಥಾನದ ಒಳಗೆ ಸ್ವಚ್ಛ ಮಾಡಿ ದೀಪ ಆರತಿ ತೋರಿಸುವುದು. ಚೌತಿ ದಿನ ಪೂಜೆ ಮಾಡುವುದು ಸಮುದ್ರದಲ್ಲಿ ದುಡಿಯುವವರಿಂದ ತುಡರ್ ಬಲಿ, ವರ್ಷಕ್ಕೆ ಒಂದು ತಂಬಿಲ ಮತ್ತು ನೇಮೋತ್ಸವ ದಿನ ಚೋಳ ಗುರಿಕಾರರ ಮೂಲ ಮನೆಯಿಂದ ಸಾಯಂಕಾಲ ಹೊತ್ತಿಗೆ ಬಾಲು ಬಂಡಾರ ವಿಜ್ರಂಭಣೆಯಿಂದ ಬರುವುದು. ಅನಂತರ ನೇಮೋತ್ಸವ ವಿಜೃಂಭಣೆಯಿಂದ ನಡೆಯುವುದು. ವಿದ್ಯಾರ್ಥಿ ಹರಕೆ ಪಂಚಗಜ್ಜಾಯ ಪೂಜೆಯು ಇಲ್ಲಿ ಜರಗುವುದು. ಹಾಗೂ ಅಂದಿನಿಂದ ಇಂದಿನವರೆಗೆ ನಾಲ್ಕು ಜನ ಗುರಿಕಾರರು ಮತ್ತು ಮುಕ್ಕಾಲ್ದಿ ಸರ್ವ ಸದಸ್ಯರು ಸೇರಿ ಅತಿ ಉತ್ತಮ ರೀತಿ ಸೇವೆಯನ್ನು ಕೊಡುತ್ತಾ ಪೂಜಿಸಿಕೊಂಡು ಬರುತ್ತಿದ್ದಾರೆ... ಹಲವಾರು ಪವಾಡಗಳು ಹಲವಾರು ಜನರ ಭಕ್ತಾದಿಗಳ ಕಷ್ಟ ಸಮಸ್ಯೆಗಳನ್ನು ಇಲ್ಲಿಯ ದೈವ ಬೊಬ್ಬರ್ಯ ಭಕ್ತಾದಿಗಳ ಸಮಸ್ಯೆಯನ್ನು ಕೊನೆಗೋಳಿಸಿದ್ದಾನೆ.. ಇಲ್ಲಿ ಹರಕೆಯ ನೇಮೋತ್ಸವ ಹರಕೆಯ ಪೂಜೆ ಹಲವಾರು ದೈವಗಳ ಪರಿಕಗಳನ್ನು ಭಕ್ತಾದಿಗಳು ಸೇವೆ ರೂಪದಲ್ಲಿ ದೈವ ಸ್ಥಾನಕ್ಕೆ ಕೊಟ್ಟಿದ್ದಾರೆ. ಮೊಗವೀರರ ಆರಾಧ್ಯ ದೈವವಾಗಿ ತುಳುನಾಡಿನಲ್ಲಿ ಪ್ರಸಿದ್ಧಗೊಂಡಿದೆ.. ಈ ಮಾಹಿತಿಯನ್ನು ಕಾಪು ಗ್ರಾಮದ ಹಿರಿಯರಿಂದ ತಿಳಿದು ಬರೆದಿದ್ದೇನೆ... ಲೇಖನ : ವಿನೋದ್ ಶೆಟ್ಟಿ

ಶಾಸಕ ರಘುಪತಿ ಭಟ್ ಮನವಿಗೆ ಸ್ಪಂದಿಸಿದ ರೋಬೋಸಾಫ್ಟ್ ಸಂಸ್ಥೆ : 20 ಲಕ್ಷ ಮೌಲ್ಯದ ಆಕ್ಸಿಜನ್ ಕಾನ್ಸಂಟ್ರೇಟರ್ ಹಾಗೂ ಫಲ್ಸ್ ಆಕ್ಸಿಮೀಟರ್ ಕೊಡುಗೆ

Thumbnail
Posted On: 28 May 2021, 09:28 PM

ಉಡುಪಿ : ಶಾಸಕ ರಘುಪತಿ ಭಟ್ ಮನವಿ ಮೇರೆಗೆ ಕೊರೋನಾ ಸೋಂಕಿತರ ಚಿಕಿತ್ಸೆಗೆ ರೋಬೋಸಾಫ್ಟ್ ಸಂಸ್ಥೆ ವತಿಯಿಂದ 7 ಆಕ್ಸಿಜನ್ ಕಾನ್ಸಂಟ್ರೇಟರ್ ಹಾಗೂ 1000 ಫಲ್ಸ್ ಆಕ್ಸಿ ಮೀಟರ್ ಕೊಡುಗೆ ನೀಡಲಾಗಿದೆ. ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಆಕ್ಸಿಜನ್ ಕೊರತೆಯಾಗದಂತೆ ಹಾಗೂ ಇನ್ನಿತರ ಸಹಕಾರಕ್ಕಾಗಿ ಶಾಸಕ ಶ್ರೀ ಕೆ. ರಘುಪತಿ ಭಟ್ ಅವರು ದಾನಿಗಳಲ್ಲಿ ಹಾಗೂ ಕೈಗಾರಿಕೋದ್ಯಮಿಗಳಲ್ಲಿ ಮನವಿ ಮಾಡಿದ್ದರು. ಅದರಂತೆ ಉಡುಪಿಯ ರೋಬೋಸಾಫ್ಟ್ ಸಂಸ್ಥೆ ರೂ. 20.00 ಲಕ್ಷ ವೆಚ್ಚದಲ್ಲಿ 10 ಲೀಟರ್ ಸಾಮರ್ಥ್ಯದ 7 ಆಕ್ಸಿಜನ್ ಕಾನ್ಸಂಟ್ರೇಟರ್ ಹಾಗೂ 1000 ಫಲ್ಸ್ ಆಕ್ಸಿ ಮೀಟರ್ ಕೊಡುಗೆಯಾಗಿ ನೀಡಿರುತ್ತಾರೆ. ಸಂಸ್ಥೆಯ ಪ್ರಮುಖರು, ಶಾಸಕ ಶ್ರೀ ಕೆ. ರಘುಪತಿ ಭಟ್ ಅವರ ಸಮ್ಮುಖದಲ್ಲಿ 7 ಆಕ್ಸಿಜನ್ ಕಾನ್ಸಂಟ್ರೇಟರ್ ಹಾಗೂ 1000 ಫಲ್ಸ್ ಆಕ್ಸಿ ಮೀಟರ್ ರನ್ನು ಜಿಲ್ಲಾಧಿಕಾರಿಯವರ ಮುಖಾಂತರ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಯಿತು. ರೂ. 20.00 ಲಕ್ಷ ವೆಚ್ಚದಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್ ಹಾಗೂ ಫಲ್ಸ್ ಆಕ್ಸಿ ಮೀಟರ್ ಕೊಡುಗೆಯಾಗಿ ನೀಡಿದ ರೋಬೋಸಾಫ್ಟ್ ಸಂಸ್ಥೆಗೆ ಹಾಗೂ ಅವರ ಸಾಮಾಜಿಕ ಕಳಕಳಿಗೆ ಶಾಸಕ ಶ್ರೀ ಕೆ. ರಘುಪತಿ ಭಟ್ ಅಭಿನಂದನೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ರೋಬೋಸಾಫ್ಟ್ ಸಂಸ್ಥೆಯ ಆಡಳಿತ ನಿರ್ದೇಶಕರಾದ ರೋಹಿತ್ ಭಟ್, ಆರ್ಥಿಕ ನಿರ್ದೇಶಕರಾದ ಸುಧೀರ್ ಭಟ್, ಜಿಲ್ಲಾ ಆರೋಗ್ಯಾಧಿಕಾರಿಗಳಾದ ಸುಧೀರ್ ಚಂದ್ರ ಸೂಡ, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಮಧುಸೂದನ್ ನಾಯಕ್, ಕೋವಿಡ್ ನೋಡಲ್ ಅಧಿಕಾರಿಗಳಾದ ಪ್ರಶಾಂತ್ ಭಟ್ ಹಾಗೂ ಇತರ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

ಶಿರ್ವ : ಲಸಿಕಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ಜಿ. ಜಗದೀಶ್ ಭೇಟಿ

Thumbnail
Posted On: 28 May 2021, 03:56 PM

ಕಾಪು : ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಶಿರ್ವ ಸೈಂಟ್ ಮೇರೀಸ್ ಪಿಯು ಕಾಲೇಜಿನಲ್ಲಿ ನಡೆಯುತ್ತಿರುವ ಕೋವಿಡ್ ಲಸಿಕಾ ಕೇಂದ್ರಕ್ಕೆ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲಿಸಿದರು. ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ಜಿ. ಜಗದೀಶ್ ಶಿರ್ವ ಲಸಿಕಾ ಕೇಂದ್ರದಲ್ಲಿ ಇಂದು 200 ಜನರಿಗೆ ಲಸಿಕೆಗೆ ಅವಕಾಶವಿದ್ದು ಉಳಿದವರಿಗೆ ಮುಂದಿನ ದಿನಗಳಲ್ಲಿ ಲಸಿಕೆ ಬಂದ ಕೂಡಲೇ ತಿಳಿಸಲಾಗುವುದು ಎಂದರು. ಈ ಸಂದರ್ಭ ಶಿರ್ವ ಪಂಚಾಯತ್ ಅಧ್ಯಕ್ಷರಾದ ಕೆ. ಆರ್. ಪಾಟ್ಕರ್, ಕೋವಿಡ್ ಲಸಿಕಾ ಕೇಂದ್ರದ ಸಿಬ್ಬಂದಿಗಳು, ಅಧಿಕಾರಿ ವರ್ಗ ಉಪಸ್ಥಿತರಿದ್ದರು.

ಉಡುಪಿಯ ಗಿರಿಜಾ ಹೆಲ್ತ್ ಕೇರ್ ಅಂಡ್ ಸರ್ಜಿಕಲ್ಸ್ ಇದೀಗ ಮಂಗಳೂರಿನಲ್ಲಿ ಆರಂಭ

Thumbnail
Posted On: 28 May 2021, 03:32 PM

ಹೆಲ್ತ್ ಕೇರ್ ಮತ್ತು ಸರ್ಜಿಕಲ್ ಪರಿಕರಗಳಿಗೆ ಹೆಸರು ವಾಸಿಯಾಗಿರುವ ಉಡುಪಿಯ ಗಿರಿಜಾ ಹೆಲ್ತ್ ಕೇರ್ ಅಂಡ್ ಸರ್ಜಿಕಲ್ಸ್ ಇದೀಗ ಮಂಗಳೂರಿನಲ್ಲಿ ಈ ನೂತನ ಶಾಖೆಯಲ್ಲಿ ರೀಟೇಲ್ ಹಾಗೂ ಹೊಲ್ ಸೇಲ್ ದರದಲ್ಲಿ ವೀಲ್ ಚೇರ್ , ವಾಕಿಂಗ್ ಸ್ಟಿಕ್ , ಆರ್ಥೋ ಚಪ್ಪಲ್ಸ್ , ಬಿ ಪಿ ಶುಗರ್ ಟೆಸ್ಟಿಂಗ್ ಮಿಷನ್ , ನೆಬ್ಯೂಲೈಸರ್ಸ್ , ಕೋವಿಡ್ ಪ್ರೊಟೆಕ್ಷನ್ ಉಪಕರಣಗಳಾದ ಸ್ಯಾನಿಟೈಸರ್ , ಫೇಸ್ ಮಾಸ್ಕ್ , ಥರ್ಮಾ ಮೀಟರ್ ಇತರ ಹೆಲ್ತ್ ಕೇರ್ & ಸರ್ಜಿಕಲ್ ಉಪಕರಣಗಳ ವಿಫುಲ ಸಂಗ್ರಹಗಳಿವೆ . ಹೆಚ್ಚಿನ ಮಾಹಿತಿಗಾಗಿ ಈಗಲೇ ಕರೆ ಮಾಡಿ ಗಿರಿಜಾ ಹೆಲ್ತ್ ಕೇರ್ ಅಂಡ್ ಸರ್ಜಿಕಲ್ಸ್ ನೆಲ ಅಂತಸ್ತು ಸಿ ಟಿ ಪ್ಲಾಜಾ ಪಿ ವಿ ಎಸ್ ಲಲಿತಾ ಜುವೆಲ್ಲರಿಯ ಹತ್ತಿರ ದುರ್ಗಾಂಬಾ ಟ್ರಾನ್ಸ್ಪೋರ್ಟ್ ಆಫೀಸ್ ಮುಂಬಾಗ ಶೇಡಿಗುಡ್ಡ ಮಂಗಳೂರು ಫೋ ನಂ : 9901424485 , 6360118942 , 9972044485 ಗ್ರೌಂಡ್ ಫ್ಲೋರ್, ವಾದಿರಾಜ ಕಾಂಪ್ಲೆಕ್ಸ್, ಮಿತ್ರ ಹಾಸ್ಪಿಟಲ್ ಹತ್ತಿರ,ಹಳೆ ಪೋಸ್ಟ್ ಆಫೀಸ್ ರೋಡ್, ಉಡುಪಿ 9845544442 / 7204734039

ಬಿರುವೆರ್ ಕಾಪು ಸೇವಾ ಟ್ರಸ್ಟ್‌ ವತಿಯಿಂದ ಪಡಿತರ ಕಿಟ್ ವಿತರಣೆ

Thumbnail
Posted On: 28 May 2021, 12:13 PM

ಕಾಪು : ತೌಕ್ತೆ ಚಂಡಮಾರುತದಿಂದ ಹಾನಿಗೊಳಗಾದ ಲೈಟ್ ಹೌಸ್ ಬಳಿಯ ಕಾಪು ಪಡು ಗರಡಿ, ಬೈರುಗುತ್ತು, ಕೋಟೆ ಕೊಪ್ಪಲ ಮತ್ತು ಸುಬ್ಬಯ್ಯ ತೋಟದಲ್ಲಿರುವ 42 ಕುಟುಂಬಗಳಿಗೆ ಗುರುವಾರ ಬಿರುವೆರ್ ಕಾಪು ಸೇವಾ ಟ್ರಸ್ಟ್‌ ಇವರ ವತಿಯಿಂದ ಪಡಿತರ ಕಿಟ್ ಗಳನ್ನು ವಿತರಿಸಲಾಯಿತು. ಬಿರುವೆರ್ ಕಾಪು ಸೇವಾ ಟ್ರಸ್ಟ್ ನ ಸ್ಥಾಪಕ ಬಾಲಕೃಷ್ಣ ಕೋಟ್ಯಾನ್, ಕಾಪು ಬಿಲ್ಲವರ ಸಹಾಯಕ ಸಂಘದ ಮಾಜಿ ಅಧ್ಯಕ್ಷ ಮಾಧವ ಆರ್. ಪಾಲನ್, ಕಾಪು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಾಕೇಶ್ ಕುಂಜೂರು, ಬಿರುವೆರ್ ಕಾಪು ಸೇವಾ ಟ್ರಸ್ಟ್ ನ ಟ್ರಸ್ಟಿಗಳಾದ ಕಾರ್ತಿಕ್ ಅಮೀನ್, ಸುಧಾಕರ ಸಾಲ್ಯಾನ್, ಸದಸ್ಯರಾದ ಪ್ರಶಾಂತ್ ಪೂಜಾರಿ, ಸುಜನ್ ಎಲ್. ಸುವರ್ಣ, ನಾಗೇಶ್ ಸುವರ್ಣ, ಅನಿಲ್ ಅಮೀನ್ ಮೊದಲಾದವರು ಉಪಸ್ಥಿತರಿದ್ದರು.

ಕಾಪು : ಸಾರ್ವಜನಿಕರಿಗೆ ಲಸಿಕಾ ಕಾರ್ಯಕ್ರಮ

Thumbnail
Posted On: 28 May 2021, 11:47 AM

ಕಾಪು : ಕಾಪು ಪುರಸಭೆ, ಪ್ರಾಥಮಿಕ ಆರೋಗ್ಯ ಕೇಂದ್ರದ ಜಂಟಿ ಆಯೋಜನೆಯಲ್ಲಿ ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದ ಆಡಳಿತ ಮಂಡಳಿಯ ಸಹಕಾರದೊಂದಿಗೆ ಕಾಪುವಿನ ಶ್ರೀ ಹಳೇ ಮಾರಿಯಮ್ಮ ಸಭಾಗೃಹದಲ್ಲಿ ಸಾರ್ವಜನಿಕರಿಗೆ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮ ವನ್ನು ಉದ್ಘಾಟಿಸಿ ಕಾಪು ಪುರಸಭಾ ಅಧ್ಯಕ್ಷರಾದ ಅನಿಲ್ ಕುಮಾರ್ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭ ಹಳೇ ಮಾರಿಯಮ್ಮ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಸಾದ್ ಶೆಣೈಯವರು ಸಾರ್ವಜನಿಕರ ಹಿತಕ್ಕಾಗಿ ಸಭಾಗೃಹವನ್ನು ನೀಡಲು ಸಂತಸವಾಗುತ್ತಿದೆ ಎಂದು ತಿಳಿಸಿದರು. ಇಲ್ಲಿಯವರೆಗೆ ಕಾಪುವಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆಯನ್ನು ನೀಡುತ್ತಿದ್ದು, ಜನಸಂದಣಿ ಜಾಸ್ತಿಯಾಗುತ್ತಿರುವ ಕಾರಣ ಲಸಿಕಾ ಕೇಂದ್ರವನ್ನು ಶ್ರೀ ಹಳೇ ಮಾರಿಯಮ್ಮ ಸಭಾಗೃಹಕ್ಕೆ ಸ್ಥಳಾಂತರಿಸಲಾಗಿದೆ. ಮೊದಲ ದಿನ 200ರಷ್ಟು ಡೋಸ್ ಗಳು ಲಭ್ಯವಿದ್ದು ಮಾಹಿತಿ ಪಡೆದ ಸಾರ್ವಜನಿಕರು ಮುಂಜಾನೆಯಿಂದಲೇ ಧಾವಿಸಿ ಸುಮಾರು 500ರಷ್ಟು ಸಂಖ್ಯೆಯಲ್ಲಿ ನೆರೆದಿದ್ದರು. ಬಂದವರಲ್ಲಿ ಮೊದಲ 200 ಜನರ ನೋಂದಣಿ ಮಾಡಿ ಉಳಿದ ಸಾರ್ವಜನಿಕರನ್ನು ಲಸಿಕೆ ಬಂದ ಮೇಲೆ ಕರೆಸುತ್ತೇವೆ ಎಂದು ತೆರಳಲು ಸೂಚಿಸಲಾಯಿತು. ಕಾಪುವಿನ ಪುರಸಭಾ ಸದಸ್ಯರು, ಆರಕ್ಷಕ ನಿರೀಕ್ಷಕರು ಹಾಗೂ ಸಿಬ್ಬಂದಿ ವರ್ಗ ಮತ್ತು ಆರೋಗ್ಯ ಇಲಾಖೆಯವರು ಉಪಸ್ಥಿತರಿದ್ದರು.

ಕೊರಗ ಕಾಲನಿ ನಿವಾಸಿಗಳಿಗೆ ಶ್ರೀ ಕೃಷ್ಣ ಮಠದಿಂದ ಊಟದ ವ್ಯವಸ್ಥೆ

Thumbnail
Posted On: 27 May 2021, 09:10 PM

ಉಡುಪಿ : ಕರೋನಾ ಲಾಕ್ ಡೌನ್ ನಿಂದ ಬಹಳಷ್ಟು ತೊಂದರೆಗೆ ಒಳಗಾದ ಮಣಿಪಾಲ ಸರಳೇಬೆಟ್ಟು ವಿಜಯನಗರ ಕೊರಗರ ಕಾಲನಿಯ 60 ಕುಟುಂಬಗಳಿಗೆ ಶ್ರೀ ಕೃಷ್ಣ ಮಠ ಪಯಾ೯ಯ ಶ್ರೀ ಗಳು ಕೊಡಮಾಡಿದ ಊಟದ ವ್ಯವಸ್ಥೆಯನ್ನು ಹೋo ಡಾಕ್ಟರ್ ಫ್oಡೇಶನ್ ವತಿಯಿಂದ ನೀಡಲಾಯಿತು. 15 ಕುಟುಂಬದ ಸುಮಾರು 80 ಜನರಿಗೆ ಊಟ ಒದಗಿಸಲಾಗಿದ್ದು , ಲಾಕ್ ಡೌನ್ ಮುಗಿಯುವರೆಗೆ ಇದು ಮುಂದುವರೆಯಲಿದೆ. ಮೇ.27 ರಂದು ನಡೆದ ಈ ಕಾಯ೯ಕ್ರಮದಲ್ಲಿ ಶ್ರೀ ಕೃಷ್ಣ ಮಠದ ವ್ಯವಸ್ಥಾಪಕ ಗೋವಿಂದ ರಾಜ್, ಪ್ರದೀಪ್, ವೈ.ಎನ್ ರಾಮಚಂದ್ರ ರಾವ್,ಹೋo ಡಾಕ್ಟರ್ ಫೌಂಡೇಷನ್ ಸದಸ್ಯರಾದ ಡಾII ಶಶಿಕಿರಣ್ ಶೆಟ್ಟಿ, ರಾಘವೇಂದ್ರ ಪೂಜಾರಿ, ನಗರಸಭಾ ಸದಸ್ಯೆ ವಿಜಯಲಕ್ಷ್ಮಿ, ಸ್ಪಂದನ ವಿಶೇಷ ಶಾಲೆಯ ಪ್ರಾಂಶುಪಾಲ ಜನಾಧ೯ನ್, ಸವಿತಾ ಶೆಟ್ಟಿ, ಗಣೇಶ್, ರಾಘವೇಂದ್ರ ಪ್ರಭು,ಕವಾ೯ಲು ಮುಂತಾದವರಿದ್ದರು.

ಕರಾವಳಿ ಜನರ ಹೆಮ್ಮೆಯ ಕರ್ನಾಟಕ ಬ್ಯಾಂಕ್ ಗೆ ದಾಖಲೆಯ 483 ಕೋಟಿ ರೂ. ಲಾಭ

Thumbnail
Posted On: 27 May 2021, 09:01 PM

ಮಂಗಳೂರು : ಕೊರೊನ ಸಮಯ ಆರ್ಥಿಕ ಹಿಂಜರಿತದ ನಡುವೆ ಕರಾವಳಿಯ ಬ್ಯಾಂಕಾದ ಕರ್ನಾಟಕ ಬ್ಯಾಂಕ್ ದಾಖಲೆಯ 483 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದೆ. ಕರ್ನಾಟಕ ಬ್ಯಾಂಕ್ ಕಳೆದ ಸಾಲಿನಲ್ಲಿ 431.78 ಕೋಟಿ ನಿವ್ವಳ ಲಾಭ ಗಳಿಸಿತ್ತು. ಪ್ರಸಕ್ತ ವರ್ಷ 11.76 ಬೆಳವಣಿಗೆ ಸಾಧಿಸಿದೆ. ಆ ಮೂಲಕ ಅಗ್ರಗಣ್ಯ ಬ್ಯಾಂಕ್ ಗಳಲ್ಲಿ ತನ್ನ ಛಾಪು ಮೂಡಿಸಿದೆ. ಬ್ಯಾಂಕಿನ MD ಮಹಾಬಲೇಶ್ವರ ಎಮ್.ಎಸ್ ರವರು ಮಾತನಾಡಿ ಬ್ಯಾಂಕ್ ನ ಉದ್ಯೋಗಿಗಳು ಕೋವಿಡ್ ಕಾರಣದಿಂದ ಮೃತ ಪಟ್ಟರೆ ಅವರ ಕುಟುಂಬದವರಿಗೆ 20 ಲಕ್ಷ ಹಾಗೂ ಅವರ ಕುಟುಂಬದ ಅರ್ಹ ಅಭ್ಯರ್ಥಿಗಳಿಗೆ ಅನುಕಂಪದ ನೆಲೆಯಲ್ಲಿ ಕರ್ಣಾಟಕ ಬ್ಯಾಂಕ್ ನಲ್ಲಿ ಉದ್ಯೋಗ ಅವಕಾಶ ಮಾಡಿಕೊಡಲಾಗುತ್ತದೆ ಎಂದರು.

ಕರ್ನಾಟಕ ರಾಜ್ಯ ಮುದ್ರಣಕಾರರ ಸಂಘದ ಆನ್ಲೈನ್ ಸಭೆ : ಸರಕಾರದ ಸವಲತ್ತುಗಳನ್ನು ಪಡೆಯಲು ಪ್ರಯತ್ನ

Thumbnail
Posted On: 26 May 2021, 07:12 PM

ಉಡುಪಿ : ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳ ಮುದ್ರಣಕಾರರ ಸಂಘದ ಆನ್ಲೈನ್ ಸಭೆಯು ಜರಗಿತು. ಈ ಸಭೆಯಲ್ಲಿ ಸಿ. ಆರ್. ಜನಾರ್ಧನ್‌ರವರು ಮಾತನಾಡಿ ಈ ಸಭೆಗಳನ್ನು ತಿಂಗಳು ತಿಂಗಳು ಮಾಡಬೇಕು ಬರುವ ಎಲ್ಲಾ ಖರ್ಚುಗಳನ್ನು ನಮ್ಮ ರಾಜ್ಯ ಸಂಘಟನೆಯು ಭರಿಸಲಿದೆ ಮತ್ತು ಎಂ.ಎಸ್.ಎಮ್ ಇ.ಯ ಮಾಲಿಕರಿಗೆ ಕೋವಿಡ್-19ನಿಂದ ತುಂಬಾ ಸಂಕಷ್ಟ ಎದುರಾಗಿದೆ. ಕರ್ನಾಟಕದಲ್ಲಿ ಸುಮಾರು 15000ಕ್ಕೂ ಮಿಕ್ಕಿ ಪ್ರಿಂಟಿಂಗ್ ಪ್ರೆಸ್‌ಗಳಿವೆ ಭಾರತದಲ್ಲಿ ಸುಮಾರು 230000 ದವರೆಗೆ ಸಣ್ಣ, ಅತಿ ಸಣ್ಣ, ಮಧ್ಯಮ ವರ್ಗದ ಮುದ್ರಣಾಲಯಗಳಿವೆ. ಸುಮಾರು 2000 ಕೋಟಿಯಷ್ಟು ನಷ್ಟ ಆಗಿರುತ್ತದೆ. ಸರಕಾರ ನಮ್ಮ ಕೈ ಹಿಡಿಯದಿದ್ದರೆ ನಮಗೆ ಉಳಿಗಾಲವಿಲ್ಲ ಎಂಬ ಮಾತನ್ನು ಆಡಿದರು ಮತ್ತು ಎಲ್ಲಾ ಮುದ್ರಕ ಬಾಂಧವರು ಹೆದರುವ ಅಗತ್ಯವಿಲ್ಲ ನಾವೆಲ್ಲ ಒಟ್ಟಾಗಿ ಸರಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಹೆಚ್ಚಿನ ಪ್ರಯತ್ನವನ್ನು ಮಾಡಬಹುದು ಎಂಬ ಮಾತನ್ನು ಹೇಳಿದರು. ಅಶೋಕ್ ಕುಮಾರ್‌ರವರು ಮಾತನಾಡಿ ಎಲ್ಲಾ ಜಿಲ್ಲೆಗಳು ನಮ್ಮ ಮಾತೃ ಸಂಘದಲ್ಲಿ ನೋಂದಾವಣೆಯನ್ನು ಮಾಡಿಕೊಳ್ಳಬೇಕು. ನೋಂದಾವಣೆಗೆ ತಗಲುವ ವೆಚ್ಚ ರೂ.3000 ವನ್ನು ನಮ್ಮ ಮಾತೃ ಸಂಘವೇ ಭರಿಸಲಿದೆ ಎಂಬ ಮಾತನ್ನು ಹೇಳಿದರು. ಈಗಾಗಲೇ ಹಾರೋಹಳ್ಳಿಯಲ್ಲಿ ಪ್ರಿಂಟೆಕ್ ಪಾರ್ಕ್ ಪ್ರಾರಂಭಗೊಂಡಿದ್ದು ಅದರ ಪ್ರಯೋಜನವನ್ನು ಎಲ್ಲಾ ಜಿಲ್ಲೆಗಳ ಸದಸ್ಯರುಗಳು ಪಡೆಯಬೇಕಾಗಿ ಮಾಹಿತಿಯನ್ನು ನೀಡಿದರು. 3 ತಿಂಗಳಿಗೊಮ್ಮೆ ಬೇರೆ ಬೇರೆ ಜಿಲ್ಲೆಗಳಲ್ಲಿ ಸಭೆಯನ್ನು ನಡೆಸುವರೇ ಆ ಸಭೆಯ ಎಲ್ಲಾ ಖರ್ಚನ್ನು ಕರ್ನಾಟಕ ರಾಜ್ಯ ಮುದ್ರಕರ ಸಂಘ ಭರಿಸಲಿದೆ ಹಾಗೂ ಎಲ್ಲಾ ನಮ್ಮ ವೃತ್ತಿ ಬಾಂಧವರಿಗೆ ನಾವು ಸರಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಹೆಚ್ಚಿನ ಪ್ರಯತ್ನವನ್ನು ಮಾಡುತ್ತೇವೆ ಎಂಬ ಭರವಸೆಯನ್ನು ನೀಡಿದರು. ಹೆಚ್ಚಿನ ಜಿಲ್ಲೆಯ ಅಧ್ಯಕ್ಷರು, ಸದಸ್ಯರುಗಳು ತಮ್ಮ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಜಿ.ಎಸ್.ಟಿ.ಯನ್ನು ಕಟ್ಟುತ್ತಿದ್ದು ನಮಗೆ ಸರಕಾರದಿಂದ ಏನಾದರು ಅನುದಾನ ಸಿಗುವಲ್ಲಿ ಪ್ರಯತ್ನ ಮಾಡಬೇಕು. ಈಗಾಗಲೇ ಹೆಚ್ಚಿನ ಪ್ರಿಂಟಿಂಗ್ ಪ್ರೆಸ್‌ಗಳು ಸಾಪ್ಟ್ವೇರ್ ಲೈಸನ್ಸ್ ಅನ್ನು ಪಡೆದಿದ್ದು ಕೆಲವು ವಿಸಿಟಿಂಗ್ ಕಾರ್ಡ್ ಪ್ರಿಂಟರ್ಸ್ ನಮಗೆ ಬಹಳ ತೊಂದರೆಯಾಗುತ್ತಿದೆ ಎಂಬ ಮಾತನ್ನು ಹೇಳಿದರು. ಅದೇ ರೀತಿ ಕರ್ನಾಟಕ ರಾಜ್ಯ ಮುದ್ರಣ ಸಂಘವು ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಸಹಕಾರವನ್ನು ನೀಡಬೇಕು ಎಂಬ ಮಾತುಗಳು ಬಂತು. ಅದೇ ರೀತಿ ಎಲ್ಲಾ ಜಿಲ್ಲೆಗಳಲ್ಲಿಯೂ ಕೂಡಾ ನಮಗೆ ಬಂದ ಸಂಕಷ್ಟಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸುವ ಬಗ್ಗೆ ನಿರ್ಧಾರವನ್ನು ಕೈಗೊಳ್ಳಲಾಯಿತು. ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಸಿ. ಆರ್. ಜನಾರ್ಧನ್ (ಮಾಜಿ ಅಧ್ಯಕ್ಷರು, ಆಲ್ ಇಂಡಿಯ ಮಾಸ್ಟರ್ ಪ್ರಿಂಟರ್ಸ್ ಫೆಡರೇಶನ್ ನವದೆಹಲಿ ಮತ್ತು ಕರ್ನಾಟಕ ಸ್ಟೇಟ್ ಪ್ರಿಂಟರ್ಸ್ ಅಸೋಶಿಯೇಶನ್, ಬೆಂಗಳೂರು) ಮತ್ತು ಅಶೋಕ್ ಕುಮಾರ್ (ಅಧ್ಯಕ್ಷರು, ಕರ್ನಾಟಕ ಸ್ಟೇಟ್ ಪ್ರಿಂಟರ್ಸ್ ಅಸೋಶಿಯೇಶನ್, ಬೆಂಗಳೂರು) ಉಪಸ್ಥಿತರಿದ್ದರು. ಕು| ಅಕ್ಷರ ಶೆಟ್ಟಿ ಉಡುಪಿ ಇವರ ಪ್ರಾರ್ಥನೆಯೊಂದಿಗೆ ಸಭೆಯು ಪ್ರಾರಂಭವಾಯಿತು. ಸ್ವಾಗತವನ್ನು ಎಂ. ಮಹೇಶ್ ಕುಮಾರು (ಉಡುಪಿ ಜಿಲ್ಲಾ ಮುದ್ರಣಾಲ್ಹಯಗಳ ಮಾಲಕರ ಸಂಘ, ಉಡುಪಿ) ನೆರವೇರಿಸಿದರು. ಸುಮಾರು 18 ಜಿಲ್ಲೆಗಳ ಅಧ್ಯಕ್ಷರು ಹಾಗೂ ಸದಸ್ಯರು ಭಾಗವಹಿಸಿದ್ದರು. ಕು| ಅಕ್ಷರ ಶೆಟ್ಟಿ ಉಡುಪಿ ಇವರ ಪ್ರಾರ್ಥನೆಯೊಂದಿಗೆ, ಉಡುಪಿ ಜಿಲ್ಲಾ ಮುದ್ರಣಾಲ್ಹಯಗಳ ಮಾಲಕರ ಸಂಘ, ಉಡುಪಿಯ ಎಂ. ಮಹೇಶ್ ಕುಮಾರ್ ಸ್ವಾಗತಿಸಿದರು. ಗೌರವ ಸಲಹೆಗಾರರು, ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘ ಉಡುಪಿಯ ಅಶೋಕ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ದಾವಣಗೆರೆ ಜಿಲ್ಲಾ ಮುದ್ರಣಕಾರರ ಸಂಘದ ಕಾರ್ಯದರ್ಶಿ ರುದ್ರೇಶ್ ಎಸ್.ವಂದಿಸಿದರು.