Updated News From Kaup

ಅಭಿವೃದ್ಧಿಗಾಗಿ ಕಾಯುತ್ತಿರುವ ಟ್ಯಾಪ್ ಮೀ ಹಿರೇಬೆಟ್ಟು ಸಂಪಕ೯ ರಸ್ತೆ

Posted On: 09-02-2021 02:49PM

ಕಾಪು ವಿಧಾನ ಸಭಾ 80 ಬಡಗಬೆಟ್ಟು ಪಂಚಾಯತ್ ವ್ಯಾಪ್ತಿಯ ಪ್ರಮುಖ ರಸ್ತೆ ಟ್ಯಾಪ್ಮೀ - ಹಿರೇಬೆಟ್ಟು ಸಂಪಕಿ ೯ಸುವ ಈ ರಸ್ತೆಯು ಸಂಪೂಣ೯ ನಾ ದುರಸ್ತಿಯಲ್ಲಿದೆ.ಕಳೆದ ಒಂದು ವಷ೯ದಿಂದ ಈ ರಸ್ತೆಯು ಸಂಪೂಣ೯ ಹಾಳಾಗಿದ್ದು ಡಾಮರ್ ರಸ್ತೆ ಇದೀಗ ಮಣ್ಣಿನ ರಸ್ತೆಯಾಗಿ ಪರಿವತ೯ನೆಯಾಗಿದೆ.

ಟೆಕ್ ನ್ಯೂಸ್ ಲೋಗೋ ಲೋಕಾರ್ಪಣೆ

Posted On: 07-02-2021 08:19PM

ಯೂಟ್ಯೂಬ್ ನಲ್ಲಿ ಹೊಸ Tech channel ಬರುತ್ತಿದ್ದು ಇದರ ಹೊಸ ಲೋಗೊವನ್ನು ಇಂದು ಸಂಸ್ಕೃತ ಸಿರಿ ಪೇಜ್ ನಲ್ಲಿ ಬಿಡುಗಡೆ ಮಾಡಲಾಯಿತು. ಉದ್ಘಾಟನೆಯನ್ನು ಅಂತರಾಷ್ಟೀಯ ಸೈಮಾ ಪ್ರಶಸ್ತಿ ಪುರಸ್ಕೃತೆ ಶ್ಲಾಘ ಸಾಲಿಗ್ರಾಮ ರವರು ಮಾಡಿದ್ದು ವಿಶೇಷವಾಗಿತ್ತು.

ಕಾಪು : ಶ್ರೀರಾಮ ಜನ್ಮಭೂಮಿ ನಿಧಿ ಸಮರ್ಪಣೆ

Posted On: 07-02-2021 04:03PM

ಶ್ರೀರಾಮ ಜನ್ಮ ಭೂಮಿ ನಿಧಿ ಸಮರ್ಪಣಾ ಅಭಿಯಾನ ದ ಕಾಪು ಕೋತಲ್ ಕಟ್ಟೆ ವಾರ್ಡ್ ನ ಎಲ್ಲಾ ಮನೆ ಮನೆಗಳಿಗೆ ಭೇಟಿ ನೀಡಿ ಶ್ರೀರಾಮ ಜನ್ಮ ಭೂಮಿಗೆ ಭಕ್ತಿಯಿಂದ ನೀಡಿದ ದೇಣಿಗೆಯನ್ನು ಇಂದು ಕಾಪು ವಲಯದ ರಾಮಜನ್ಮಭೂಮಿ ನಿಧಿ ಸಮರ್ಪಣಾ ಸಂಘಟಕರಿಗೆ ಇಂದು ಹಸ್ತಾಂತರಿಸಲಾಯಿತು.

ಯುವವಾಹಿನಿ (ರಿ.) ಪಡುಬಿದ್ರಿ ಘಟಕ : ವಿದ್ಯಾರ್ಥಿ ವೇತನ ವಿತರಣೆ

Posted On: 07-02-2021 01:34PM

ಮಕ್ಕಳಿಗೆ ಹೆತ್ತವರು ಅಂಕದ ಜೊತೆಗೆ ಮೌಲ್ಯಾಧಾರಿತ ಶಿಕ್ಷಣ ನೀಡಿ ಜೊತೆಗೆ ಸಂಸ್ಕೃತಿಯನ್ನು ತಿಳಿಸಿ, ಬೆಳೆಸಬೇಕಾದ ಅನಿವಾರ್ಯತೆಯಿದೆ. ಯುವವಾಹಿನಿ ಪಡುಬಿದ್ರಿ ಘಟಕವು ಯುವವಾಹಿನಿಯ ಧ್ಯೇಯವಾದ ವಿದ್ಯೆಗೆ ಮಹತ್ವ ನೀಡುವ ಕಾರ್ಯಕ್ರಮವನ್ನು ಆಯೋಜಿಸಿರುವುದು ಅಭಿನಂದನೀಯ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಒಂದನೆಯ ಉಪಾಧ್ಯಕ್ಷರಾದ ಉದಯ ಅಮೀನ್ ಮಟ್ಟು ಹೇಳಿದರು. ಅವರು ಪಡುಬಿದ್ರಿ ಬಿಲ್ಲವ ಸಂಘದಲ್ಲಿ ಜರಗಿದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ಆಶ್ರಯದಲ್ಲಿ ನಡೆದ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.

ಕೆ.ಎಲ್.ಕುಂಡಂತಾಯರ ಯಕ್ಷಗಾನದ ಅಂತರಂಗ - ಬಹಿರಂಗ : ಪುಸ್ತಕಕ್ಕೆ ವಿದ್ವಾಂಸರ ಪ್ರತಿಕ್ರಿಯೆಗಳು

Posted On: 07-02-2021 01:04PM

ಕರಾವಳಿ ಕನ್ನಡ ಜಿಲ್ಲೆಯವರಿಗೆ ಅತ್ಯಂತ ಇಷ್ಟವಾದ ರಂಗಕಲೆ ಯಕ್ಷಗಾನದ ಬಗೆಗೆ ಹೊಸಹೊಸ ಬರಹಗಳು ಬರುತ್ತಲೇ ಇರಬೇಕು.ಹೊಸಕಾಲಕ್ಕೆ ಅರ್ಥವಾಗುವ ಮಾತು ಬರುವುದು ಅವಶ್ಯ.ನಮ್ಮ ಕಾಲಕ್ಕೆ ನಮ್ಮ ನುಡಿ ಅನೇಕರಿಗೆ ಪ್ರೇರಣೆ ನೀಡಿದೆ ಎಂಬುದಕ್ಕೆ ಮಿತ್ರರಾದ ಕೆ.ಎಲ್.ಕುಂಡಂತಾಯರಂಥ ಅನೇಕ ಕಲಾಸಕ್ತರು ಅಧ್ಯಯನಶೀಲರಾಗಿ ರಂಗದ ಒಳ - ಹೊರಗನ್ನು ಆಳವಾಗಿ ತಿಳಿದು ಪ್ರವರ್ತಿಸಿದರೆಂಬುದೇ ಪುರಾವೆ , ಇದಕ್ಕೆ ಇನ್ನಷ್ಟು ಬಲವಾದ ಸಾಕ್ಷ್ಯ ಈ ಹೊತ್ತಿಗೆ - ಕುಂಡಂತಾಯರ ಯಕ್ಷಗಾನದ ಅಂತರಂಗ - ಬಹಿರಂಗ. ಪ್ರಸ್ತುತ ಪುಸ್ತಕ - ಆರು ಸಂದರ್ಶನಾಧಾರಿತ ಲೇಖನಗಳು ,ರಂಗ ಸಮೀಕ್ಷೆಗೆ ಸಂಬಧಿಸಿದ ಹನ್ನೊಂದು ಲೇಖನಗಳು ಮತ್ತು ಮುಂಬಯಿಯ ಯಕ್ಷಗಾನ ಸಾಹಿತ್ಯ ಸಮ್ಮೇಳನದಲ್ಲಿ ಕುಂಡಂತಾಯರು ಮಾಡಿದ ಅಧ್ಯಕ್ಷ ಭಾಷಣ ಹೀಗೆ ಹದಿನೆಂಟು ಲೇಖನಗಳ ಸಮಾಹಾರವಿದೆ. ಯಕ್ಷಗಾನದ ಸಮಕಾಲೀನ ಸ್ಥಿತಿಗತಿಯ ಕುರಿತ ಒಂದು ಕಿರಿದಾದರೂ ಮಹತ್ವದ ದಾಖಲಾತಿ ಇದು. ಬಾಯಾರಿದವನಿಗೆ ಎಳನೀರಿನ ಹಾಗೆ ಅರಿವಿನಿಂದ ತೃಪ್ತಿಕೊಡುವ ಕೃತಿಯಿದು.ಇದನ್ನು ಜನತೆ ಭಾವನಾತ್ಮಕವಾಗಿ ಓದಿ ಅರ್ಥಮಾಡಿಕೊಂಡು ತಮ್ಮ ಪಾಲಿನ ಕೊಡುಗೆ ನೀಡಲಿ .ಆ ಮೂಲಕ ಯಕ್ಷಗಾನ ಇನ್ನಷ್ಟು ಕೀರ್ತಿಶಾಲಿ ಆಗಬೇಕೆಂದು ಹಾರಯಿಸುತ್ತೇನೆ. ( ಮುನ್ನುಡಿಯಲ್ಲಿ) ಡಾ.ಕೆ.ಎಂ. ರಾಘವ ನಂಬಿಯಾರ್ (ಯಕ್ಷಗಾನ ವಿದ್ವಾಂಸರು - ಸಂಶೋಧಕರು)

ಮೇರಮಜಲು ಗ್ರಾಮದಲ್ಲಿ ಜೆ.ಜೆ.ಎಂ ಕಾರ್ಯಚಟುವಟಿಕೆ

Posted On: 06-02-2021 11:13PM

ಬಂಟ್ವಾಳ ತಾಲೂಕಿನ ಮೇರಮಜಲು ಗ್ರಾಮ ಪಂಚಾಯತ್ ನಲ್ಲಿ ಶನಿವಾರದಂದು ಜೀವನ್ ಮಿಷನ್ ಕಾರ್ಯಚಟುವಟಿಕೆಯಾದ ಗ್ರಾಮೀಣ ಸಹಭಾಗಿತ್ವ ಕಾರ್ಯಕ್ರಮಗಳನ್ನು ನಡೆಸಲಾಯಿತು. ಈ ಚಟುವಟಿಕೆಯನ್ನು ದ.ಕ ಜಿಲ್ಲಾ ಪಂಚಾಯತ್ , ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮತ್ತು ಸಮುದಾಯ ಸಂಸ್ಥೆ ತುಮಕೂರು ಇದರ ಜಂಟಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು.

ತುಳು ಹಾಸ್ಯಮಯ ನಾಟಕ ಪರಕೆ ಪೂವಕ್ಕೆಗೆ ಅದ್ದೂರಿ ಮುಹೂರ್ತ

Posted On: 06-02-2021 11:08PM

ಶಿವಾನಂದ ಶೆಟ್ಟಿ ಮಂಗಲ್ಪಾಡಿ ನಿರ್ಮಾಣದ ಅಮ್ಮ ಕಲಾವಿದರು ಕುಡ್ಲ ಅಭಿನಯದ ಸೋಮನಾಥ್ ಶೆಟ್ಟಿ ಮಂಗಲ್ಪಾಡಿ ರಚನೆಯ, ರಂಗ್ ದ ರಾಜೆ ಸುಂದರ್ ರೈ ಮಂದಾರ ನಿರ್ದೇಶಿಸಿ ಅಭಿನಯಿಸುವ ತುಳು ಹಾಸ್ಯಮಯ ನಾಟಕ ಪರಕೆ ಪೂವಕ್ಕೆಯ ಮುಹೂರ್ತ ಕಾರ್ಯಕ್ರಮ ಇಂದು ಬೆಳಿಗ್ಗೆ 10.30 ಕ್ಕೆ ಐಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಉಪ್ಪಳ ದಲ್ಲಿ ಅದ್ದೂರಿಯಾಗಿ ನೆರವೇರಿತು.

ಸಂತ ಮೇರಿ ಕಾಲೇಜು, ಶಿರ್ವ: ಫೆಬ್ರವರಿ 11 ರಂದು ಕ್ಯಾಂಪಸ್ ಸಂದರ್ಶನ

Posted On: 06-02-2021 02:25PM

ಸಂತ ಮೇರಿ ಕಾಲೇಜು, ಶಿರ್ವ ಇಲ್ಲಿ ಫೆಬ್ರವರಿ 11 ರಂದು ಮಂಗಳೂರಿನ ಪ್ರತಿಷ್ಟಿತ ದಿಯಾ ಸಿಸ್ಟಮ್ ಸಂಸ್ಥೆ (ಗ್ಲೋ ಟಚ್ ಟೆಕ್ನಾಲಾಜಿಸ್)ಯು ನೇರ ನೇಮಕಾತಿ ಕ್ಯಾಂಪಸ್ ಸಂದರ್ಶನವನ್ನು ನಡೆಸಲು ಉದ್ದೇಶಿಸಿದೆ.

ಬಬ್ಬು ಸ್ವಾಮಿ ದೈವಸ್ಥಾನ ಜೋಡುಕಟ್ಟೆ ಉಡುಪಿ ಹರಕೆಯ ನೇಮೋತ್ಸವ

Posted On: 05-02-2021 05:37PM

ನಾಳೆ ಶನಿವಾರ 6 ರಂದು ಮತ್ತು ಭಾನುವಾರ 7ನೇ ತಾರೀಖಿನಂದು ಬೆಳಿಗ್ಗೆ 10:00 ಗಂಟೆಗೆ ದೈವ ದರ್ಶನ ಮಧ್ಯಾಹ್ನ 12. 30ರಿಂದ ಮಹಾ ಅನ್ನಸಂತರ್ಪಣೆ 6:00 ಗಂಟೆಗೆ ಸರಿಯಾಗಿ ದೈವಸ್ಥಾನದಿಂದ ಭಂಡಾರ ಇಳಿಯುವುದು, ರಾತ್ರಿ 9 ರಿಂದ ಬಬ್ಬು ಸ್ವಾಮಿ ದೈವದ ನೇಮೋತ್ಸವ ಬೆಳಿಗ್ಗೆ ಮೂರು ಗಂಟೆಗೆ ತನ್ನಿಮಾನಿಗ ನೇಮೋತ್ಸವ ನಡೆಯಲಿದೆ.

ಶ್ರೇಯಸ್ ಮೂಲ್ಯರ ಚಿಕಿತ್ಸೆಗಾಗಿ ಸಹಾಯದ ನಿರೀಕ್ಷೆಯಲ್ಲಿದೆ‌ ಈ ಕುಟುಂಬ

Posted On: 05-02-2021 04:06PM

ಸಂಧ್ಯಾ ಮೂಲ್ಯರ ಮಗ ಶ್ರೇಯಸ್ ಮೂಲ್ಯ ಅಕ್ಯುಟ್ ಮೈಲೊಯ್ಡ್ ಲುಕೆಮಿಯ ರೋಗದಿಂದ ಬಳಲುತ್ತಿದ್ದು ಪುಣೆಯ ಸಹ್ಯಾದ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಸಂಪೂರ್ಣ ಚಿಕಿತ್ಸೆಗಾಗಿ 15 ಲಕ್ಷಕ್ಕಿಂತ ಅಧಿಕ ಹಣದ ಅವಶ್ಯಕತೆ ಇದೆ. ಇದೀಗ ಈ ಕುಟುಂಬ ಮಗನ ಚಿಕಿತ್ಸೆಗಾಗಿ‌‌ ಹಣದ ನಿರೀಕ್ಷೆಯಲ್ಲಿದೆ.