Updated News From Kaup
ರಾಜ್ಯ ಖಾಸಗಿ ಶಿಕ್ಷಕರ ಸಂಘ ಕಾಪು ತಾಲೂಕು ಘಟಕದ ಅಧ್ಯಕ್ಷರಾಗಿ ಚಿತ್ರಲೇಖ ಶೆಟ್ಟಿ ಆಯ್ಕೆ
Posted On: 16-11-2020 07:30PM
ರಾಜ್ಯ ಖಾಸಗಿ ಶಾಲಾ- ಕಾಲೇಜು ಶಿಕ್ಷಕ ಹಾಗೂ ಉಪನ್ಯಾಸಕರ ಸಂಘದ ಕಾಪು ತಾಲೂಕು ಘಟಕದ ಅಧ್ಯಕ್ಷರಾಗಿ ಚಿತ್ರಲೇಖ ಶೆಟ್ಟಿ ಮತ್ತು ಕಾರ್ಯದರ್ಶಿಯಾಗಿ ಲಕ್ಷ್ಮಿಕಾಂತ್ ಆಯ್ಕೆಯಾಗಿರುತ್ತಾರೆ. ಘಟಕದ ಗೌರವ ಅಧ್ಯಕ್ಷರಾಗಿ ವಿದ್ಯಾಧರ ಪುರಾಣಿಕ್, ಉಪಾಧ್ಯಕ್ಷರಾಗಿ ಶೋಭಾ, ಜೊತೆ ಕಾರ್ಯದರ್ಶಿ ಲತಾ, ಕೋಶಾಧಿಕಾರಿ ವಿನುತಾ, ನಿರ್ದೇಶಕರಾಗಿ ಸುರಥ್ ಕುಮಾರ್, ಭವಾನಿ ನಾಯಕ್, ದೀಪಕ್ ಕೆ. ಬೀರ, ಸಂಗೀತ ಆಯ್ಕೆಯಾಗಿರುತ್ತಾರೆ ಎಂದು ರಾಜ್ಯ ಸಂಘಟನಾ ಕಾರ್ಯದರ್ಶಿ ಗಣೇಶ್ ಪ್ರಸಾದ್ ಕೆ. ಉಡುಪಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಶಿರ್ವ : ಪ್ರಜ್ವಲ್ ಡಿಜಿಟಲ್ ಸೇವಾ ಕೇಂದ್ರ ಶುಭಾರಂಭ
Posted On: 16-11-2020 07:02PM
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನೇಕ ಸೇವೆಗಳನ್ನು ಒದಗಿಸುವ ಶ್ರೀ ಡಿಜಿಟಲ್ ಸೇವಾ ಸಿಂಧು ಕೇಂದ್ರಗಳು ಪ್ರಮುಖ ಪಾತ್ರವಹಿಸಿರುತ್ತದೆ ಹಾಗೂ ಸಾರ್ವಜನಿಕರಿಗೆ ತಮ್ಮ ಗ್ರಾಮಗಳಲ್ಲೇ ಸರಕಾರಿ ಸೇವೆಗಳು ತಲುಪುವಂತೆ ಡಿಜಿಟಲ್ ಸೇವಾ ಕೇಂದ್ರಗಳಲ್ಲಿ ಇನ್ನೂ ಅನೇಕ ಸೇವೆಗಳಿಗೆ ಉತ್ತೇಜನ ನೀಡಬೇಕಾಗಿದೆ ಎಂದು ಕಾಪು ಶಾಸಕರಾದ ಲಾಲಾಜಿ ಆರ್. ಮೆಂಡನ್ ಹೇಳಿದರು. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶಿರ್ವ ಗ್ರಾಮದಲ್ಲಿ ಮೊದಲ ಅಧಿಕೃತ ಆಧಾರ್ ತಿದ್ದುಪಡಿ ಕೇಂದ್ರದ ಉದ್ಘಾಟನೆ ಮಾಡಿ ಮಾತನಾಡಿದರು.
ಕಟಪಾಡಿ ಏಣಗುಡ್ಡೆಯಲ್ಲಿ ಮುಳ್ಳಮುಟ್ಟೆ ಆಚರಣೆ.
Posted On: 16-11-2020 07:11AM
ಹಿಂದಿನ ಕೃಷಿ ಪ್ರಧಾನವಾದ ತುಳುನಾಡಿನಲ್ಲಿ ಜಾನುವಾರುಗಳನ್ನು ಗುಡ್ಡ-ಲಚ್ಚಿಲ್ ಪ್ರದೇಶಗಳಿಗೆ ಮೇಯಲು ಕೊಂಡೊಯ್ಯುತ್ತಿದ್ದ ಕಾಲ.
ಅನುಮಾನಗಳಿಗೆ ಕಾರಣವಾಗಿದ್ದ ಪರ್ಕಳದ ಗದ್ದೆಯಲ್ಲಿದ್ದ ಕಾರಿನ ವಾರಸುದಾರನನ್ನು ಪತ್ತೆಹಚ್ಚಿದ ಪೊಲೀಸರು
Posted On: 15-11-2020 06:50PM
ಮಣಿಪಾಲ : ಹಲವು ಅನುಮಾನಗಳಿಗೆ ಕಾರಣವಾಗಿದ್ದ ಮಣಿಪಾಲ ಸಮೀಪದ ಕೆಳಪರ್ಕಳದ ಗೋಪಾಲಕೃಷ್ಣ ದೇವಸ್ಥಾನ ಸಮೀಪದ ರಸ್ತೆ ಇಲ್ಲದ ಗದ್ದೆಯಲ್ಲಿ ಎರಡು ದಿನಗಳಿಂದ ನಿಂತಿದ್ದ ಕೇರಳ ತಿರುವನಂತಪುರ ನೋಂದಣಿಯ ಕಾರಿನ ವಾರಸುದಾರರನ್ನು ಮಣಿಪಾಲ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ ಉಡುಪಿ ತಂಡದಿಂದ ಕಾರುಣ್ಯ ವೃದ್ಧಾಶ್ರಮದಲ್ಲಿ ದೀಪಾವಳಿ ಆಚರಣೆ
Posted On: 15-11-2020 06:24PM
ದಿನಾಂಕ:15.11.2020 ರವಿವಾರ ಇಂದು ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ (ರಿ.) ಉಡುಪಿ ತಂಡವು ಕಟಪಾಡಿಯ "ಕಾರುಣ್ಯ" ವೃದ್ಧಾಶ್ರಮಕ್ಕೆ ಭೇಟಿನೀಡಿ ದೀಪಾವಳಿಯನ್ನು ಆಚರಿಸಲಾಯಿತು. ನಿಂಬೆಹಣ್ಣಿನ ಸಿಪ್ಪೆ ಹಾಗೂ ತೆಂಗಿನಕಾಯಿಯ ಗೆರಟೆಯಿಂದ ಮಾಡಿದ ಹಣತೆಯಿಂದ ದೀಪ ಹಚ್ಚಿ ದೀಪಾವಳಿಯನ್ನು ಅಲ್ಲಿಯ ವೃದ್ಧರೊಂದಿಗೆ ಆಚರಿಸಲಾಯಿತು. ತಂಡದ ಸ್ಥಾಪಕಾಧ್ಯಕ್ಷರು ಆದ ಡಾ.ಕೀರ್ತಿ ಪಾಲನ್ ಈ ಕಾರ್ಯಕ್ರಮವನ್ನು ನೆರವೇರಿಸಿದರು. ಬೇಬಿ ಶೆಟ್ಟಿ, ಮೋಕ್ಷ ಪಾಲನ್ ಹಾಗೂ ಜಗದೀಶ್ ಬಂಟಕಲ್ ಉಪಸ್ಥಿತರಿದ್ದರು. ಮೋಕ್ಷ ಪಾಲನ್ ಸಿಹಿತಿಂಡಿ ಹಂಚಿ ಧನ್ಯವಾದ ಸಲ್ಲಿಸಿದರು.
ಮುಂಬೈಯ ಪೇಜಾವರ ಮಠದಲ್ಲಿ ಜಯ ಸುವರ್ಣರಿಗೆ ನುಡಿನಮನ
Posted On: 15-11-2020 05:20PM
ಮುಂಬೈ : ಸಮಾಜವನ್ನು ಪ್ರೀತಿ ಮತ್ತು ವಿಶ್ವಾಸದಿಂದ ಗೆದ್ದ ಜಯ ಸುವರ್ಣರು ದೈವಾಧೀನರಾದ ಸುದ್ದಿ ತುಂಬಾ ವಿಷಾದವನ್ನು ತಂದಿತ್ತು. ಅವರಿಗೆ ನುಡಿನಮನ ನೀಡಬೇಕೆನ್ನುವ ನನ್ನ ಇಚ್ಛೆಗೆ ಭಗವಂತ ಮುಂಬಯಿಯ ಪೇಜಾವರ ಮಠವನ್ನು ಆಯ್ಕೆ ಗೊಳಿಸಿದ್ದೇನೆ. ನಾನು ಈ ನಗರಕ್ಕೆ ಅಪರಿಚಿತ ಆದರೆ ಜಯ ಸುವರ್ಣರು ಅಪಾರ ಸೇವಾಕಾರ್ಯಗಳನ್ನು ಮಾಡಿ ಮುಂಬೈಗೆ ಮಾತ್ರ ಪರಿಚಿತರ ಅಲ್ಲದೇ ಊರಿನಲ್ಲಿ ಅಪಾರ ಪರಿಚಿತರು. ಏಕೆಂದರೆ ಅವರಿಂದ ಊರಿನಲ್ಲಿ ತುಂಬಾ ಕೆಲಸಕಾರ್ಯಗಳು ನಡೆದಿದೆ ಸಮಾಜದ ಬಹಳಷ್ಟು ಅಭಿವೃದ್ಧಿಯಾಗಿದೆ . ಮನುಕುಲವನ್ನು ಪ್ರೀತಿಸಿದ ಜಯ ಸುವರ್ಣರ ಆತ್ಮಕ್ಕೆ ಮೋಕ್ಷ ಪ್ರಾಪ್ತಿಯಾಗಿದೆ ಎಂದು ಉಡುಪಿ ಪೇಜಾವರ ಮಠದ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳು ಸುವರ್ಣರಿಗೆ ನುಡಿನಮನ ಸಲ್ಲಿಸಿದರು ಶ್ರೀಗಳು ನವಂಬರ್ 13 ರಂದು ಸಾಂತಕ್ಲಾಸ್ ಪೂರ್ವದ ಪೇಜಾವರ ಮಠದ ಮದ್ವ ಭವನದ ಶ್ರೀ ವಿಶ್ವೇಶ್ವರ ತೀರ್ಥ ಸಭಾಗೃಹದಲ್ಲಿ ನಡೆದ ಬಿಲ್ಲವ ಸಮಾಜದ ಕುಲರತ್ನ. ಬಿಲ್ಲವರ ಎಸೋಸಿಯೇಶನ್ ನ ಮಾಜಿ ಅಧ್ಯಕ್ಷ ಜಯ ಸುವರ್ಣರ ನುಡಿನಮನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನುಡಿ ನಮನ ಸಲ್ಲಿಸಿದರು ಜಯ ಸುವರ್ಣರು ತನ್ನ ಬದುಕನ್ನು ಮಾತ್ರ ಕಟ್ಟದೆ ಸಮಾಜವನ್ನ ಕಟ್ಟಿ. ಸರ್ವ ಸಮಾಜದ ಬಂಧುಗಳನ್ನು ಪ್ರೀತಿಸಿ ಅವರಿಗೆ ಸದಾ ಸಹಕಾರವನ್ನು ನೀಡುತ್ತಾ ಬಂದವರಾಗಿದ್ದಾರೆ. ನಮ್ಮೆಲ್ಲರ ಬದುಕು ಇನ್ನೊಬ್ಬರ ಶ್ರೇಯಸ್ಸಿಗೆ ಮತ್ತು ಅವರ ಕಷ್ಟ ಸುಖಗಳಿಗೆ ಸ್ಪಂದಿಸುವ ಬದುಕಾಗಬೇಕು ಅದರಲ್ಲಿ ಭಗವಂತನಿರುತ್ತಾನೆ ಅಂತ ಕಾಯಕವನ್ನು ಜಯ ಸುವರ್ಣರ ಬದುಕಿನಲ್ಲಿ ಮಾಡಿದ್ದಾರೆ. ಅವರಿಗೆ ಭಗವಂತ ಸದಾ ಅನುಗ್ರಹ ನೀಡಿರುತ್ತಾನೆ ಜಯ ಸುವರ್ಣರ ಪರಿವಾರಕ್ಕೆ ಶ್ರೀ ದೇವರು ಸದಾ ಆಶೀರ್ವದಿಸಲಿ. ಸತ್ಕಾರ್ಯಗಳನ್ನು ಮಾಡುವ ಬಿಲ್ಲವ ಭವನ . ಬಿಲ್ಲವರ ಭವನವಾಗದೆ ಬಲ್ಲವರ ಭವನವಾಗಲಿ ಎಂದು ನುಡಿದರು.
ಪೇಜಾವರ ವಿಶ್ವ ಪ್ರಸನ್ನ ತೀರ್ಥರಿಂದ ಒಣ ಹುಲ್ಲು ಅಭಿಯಾನಕ್ಕೆ ಚಾಲನೆ
Posted On: 15-11-2020 05:04PM
ಕಾಮದೇನು ಗೋಸೇವಾಸಮಿತಿ ಮಂದಾರ್ತಿ ನೇತ್ರತ್ವದಲ್ಲಿ ಅನಾಥ ಗೋವುಗಳ ಸಂರಕ್ಷಣೆ ಮಾಡುತ್ತಿರುವ ಗೋಶಾಲೆಗಳಿಗೆ ಮೇವನ್ನು ನೀಡುವ ಗೋವಿಗಾಗಿ ಮೇವು ಅಭಿಯಾನ ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಯಶಸ್ವಿಯಾಗಿ ಸಾಗುತ್ತಿದ್ದು ಗೋಪೂಜಾ ದಿನವಾದ ಇಂದು ಪೇಜಾವರ ವಿಶ್ವಪ್ರಸನ್ನ ತೀರ್ಥರುಗೋಪೂಜೆ ಮಾಡಿ ಒಣಹುಲ್ಲು ಅಭಿಯಾನಕ್ಕೆ ಚಾಲನೆ ನೀಡಿದರು.
ರಂಗವಲ್ಲಿಯಲ್ಲಿ ದೇವರ ಚಿತ್ರವ ಮೂಡಿಸುವ ಕಲಾಕಾರ ಹರೀಶ್ ಶಾಂತಿ
Posted On: 15-11-2020 02:40PM
ನಾವು ಒಬ್ಬ ಕಲಾವಿದನ ಬಗ್ಗೆ ತಿಳಿಯುವ ಮುಂಚೆ ಮತ್ತು ಕಲೆಯ ಬಗ್ಗೆ ತಿಳಿದುಕೊಳ್ಳಬೇಕಾದ ಅವಶ್ಯಕತೆ ಖಂಡಿತವಾಗಿ ಇದೆ. ಕಲೆಯ ಬಗ್ಗೆ ಚೊಕ್ಕದಾಗಿ ಹೇಳುವುದಾದರೆ ಮಾನವನ ವಿಶಿಷ್ಟ ಚಟುವಟಿಕೆಯನ್ನು ಕಲೆ ಅಂತ ಹೇಳಬಹುದು. ಕಲಾವಿದನೆಂದರೆ ಕಲೆಯನ್ನು ಸೃಷ್ಟಿಸುವವ, ಅಭ್ಯಾಸ ಮಾಡುವವ ಅಥವಾ ಕಲೆಯನ್ನು ಜೀವನದಲ್ಲಿ ಅಳವಡಿಸಿಕೊಂಡಿರುವ. ಎಲ್ಲಾ ರೀತಿಯಾದಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವವರನ್ನು ಕಲಾವಿದ ಅಂತ ಗುರುತಿಸಬಹುದು. ಮನದಿ ಮೂಡಿದ ಅಸ್ಥಿರ ಬಿಂಬಕ್ಕೆ ಸುಸ್ಥಿರ ರೂಪ ನೀಡುವವ, ಪದ ಮತ್ತು ರಾಗಕ್ಕೆ ನಿಲುಕ್ಕದ್ದನ್ನು ಬಣ್ಣಗಳ ಮೂಲಕ, ಕಂಡದ್ದನ್ನು ಕಂಡ ಹಾಗೆ ಕಾಣದ್ದನ್ನು ಕಾಣುವಹಾಗೆ ಬಿಂಬಿಸುವ, ಎಂತಹ ಮನಸ್ಸನ್ನು ಬೇಕಾದರೂ ಕೇಂದ್ರೀಕೃತ ಮಾಡಬಲ್ಲ, ಮನದಲ್ಲಿ ಭಕ್ತಿಭಾವ ಮೂಡಿಸಬಲ್ಲ ರಂಗೋಲಿ ಚಿತ್ರಕಾರ ಇವರೇ ಹರೀಶ್ ಶಾಂತಿ.
ಕನ್ನಡ ಸಂಘ ಕಾಂತಾವರ : ಡಿಸೆಂಬರ್ 13 ರಂದು ಕನ್ನಡ ಸಂಘದ 2020 ರ ಸಾಲಿನ ದತ್ತಿನಿಧಿಗಳ ಪ್ರಶಸ್ತಿ ಪ್ರದಾನ ಸಮಾರಂಭ
Posted On: 15-11-2020 11:25AM
ಕನ್ನಡ ಸಂಘ ಕಾಂತಾವರ ಕನ್ನಡ ಸಂಘದ 2020 ನೇ ಸಾಲಿನ ದತ್ತಿನಿಧಿಗಳ ಪ್ರಶಸ್ತಿ ಪ್ರದಾನ ಸಮಾರಂಭ ಡಿಸೆಂಬರ್ 13, ಮಧ್ಯಾಹ್ನ 3 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು, ಮಾಜಿ ಅಧ್ಯಕ್ಷರಾದ ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಇವರ ಅಧ್ಯಕ್ಷತೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಮರುಬಳಕೆಗೆ ಉಪಯುಕ್ತವಾದ ಕಡಿಮೆ ಖರ್ಚಿನ ಬಿದಿರಿನ ಗೂಡುದೀಪ
Posted On: 15-11-2020 10:07AM
ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ (ರಿ.) ಉಡುಪಿ ತಂಡದ ಸ್ಥಾಪಕಾಧ್ಯಕ್ಷರು ಆದ ಡಾ.ಕೀರ್ತಿ ಪಾಲನ್ ಅವರು ಬಿದಿರಿನ ಗೂಡುದೀಪವನ್ನು ಮಾಡಿ ಪರಿಸರ ಸ್ನೇಹಕ್ಕೆ ಮಾದರಿಯ ದೀಪಾವಳಿಯನ್ನು ಆಚರಿಸಲು ಮುಂದಾಗಿದ್ದಾರೆ. ಕೇವಲ 250 ರೂಪಾಯಿ ಖರ್ಚು ಮಾಡಿ ತಯಾರಿಸಬಹುದಾದ ಈ ಬಿದಿರಿನ ಗೂಡುದೀಪವು ಮುಂದೆ ದೀಪಾವಳಿಯ ನಂತರ ಬಿದಿರಿನ ಬುಟ್ಟಿಯನ್ನು ಮನೆಯಲ್ಲಿ ಮರುಬಳಕೆ ಮಾಡಬಹುದಾಗಿದೆ, ಹಾಗೂ ನಶಿಸುತ್ತಿರುವ ಬಿದಿರಿನ ಬುಟ್ಟಿ ತಯಾರಿಕರಿಗೆ ಇದರಿಂದ ಪ್ರಯೋಜನ ಸಿಗಲಿದೆ.
