Updated News From Kaup
ಪಡುಬಿದ್ರಿಯಲ್ಲಿ ಎವಲ್ಯೂಷನ್ ಜಿಮ್ ಆಂಡ್ ಫಿಟ್ನೆಸ್ 14ರಂದು ಶುಭಾರಂಭ
Posted On: 12 Jan 2021, 02:29 PM
ಎವಲ್ಯೂಷನ್ ಜಿಮ್ ಆಂಡ್ ಫಿಟ್ನೆಸ್ ಇದರ ಎರಡನೇ ಶಾಖೆ ಪಡುಬಿದ್ರಿ ರಾಷ್ಟ್ರೀಯ ಹೆದ್ದಾರಿಯ ಸಾಸ್ ಬಿಲ್ಡಿಂಗ್ ನ 2ನೇ ಮಹಡಿಯಲ್ಲಿ ಇದೇ ಬರುವ ಗುರುವಾರ ಬೆಳಗ್ಗೆ 11 ಗಂಟೆಗೆ ಶುಭಾರಂಭಗೊಳ್ಳಲಿದೆ. ಮುಖ್ಯ ಅತಿಥಿಗಳಾಗಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ, ನೋಟರಿ ವಕೀಲರಾದ ಪದ್ಮರಾಜ್ ಆರ್., ಪಡುಬಿದ್ರಿ ಸಿ.ಎ ಬ್ಯಾಂಕ್ ಅಧ್ಯಕ್ಷರಾದ ವೈ.ಸುಧೀರ್ ಕುಮಾರ್ ಭಾಗವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9535426679
ಗಿರಿಜಾ ಪೂಜಾರ್ತಿ ಕೆಂಚನಕೆರೆ ನಿಧನ
Posted On: 12 Jan 2021, 02:01 PM
ಕಾಪು : ಬಗ್ಗ ತೋಟ ಕುಟುಂಬಸ್ಥರಾದ ಗಿರಿಜಾ ಪೂಜಾರ್ತಿ ಕೆಂಚನಕೆರೆ (ಬಗ್ಗ ತೋಟ) ಇಂದು ಬೆಳಿಗ್ಗೆ ದೈವಾಧೀನರಾಗಿದ್ದಾರೆ.
ಕಾಪುವಿನಲ್ಲಿ ಶುಭಾರಂಭಗೊಳ್ಳಲಿದೆ ವಿನೂತನ ಶೈಲಿಯ ಹೇರ್ ಸ್ಟೂಡಿಯೋ
Posted On: 12 Jan 2021, 01:15 AM
ಕಾಪು ಮುಖ್ಯರಸ್ತೆಯಲ್ಲಿರುವ ಸ್ಮಾಲ್ ವರ್ಲ್ಡ್ ಕಟ್ಟಡದ ಶಾಪ್ ನಂ #126 ರಲ್ಲಿ ಇದೇ ಬರುವ ಜನವರಿ 14 ರಂದು ಯೂನಿಕ್ ಹೇರ್ ಸ್ಟೂಡಿಯೋ ಶುಭಾರಂಭಗೊಳ್ಳಲಿದೆ. ಹೇರ್ ಕಟ್, ಬಿಯರ್ಡ್ ಟ್ರಿಮ್, ಬಾಡಿ ಸ್ಪಾ , ಸ್ಕಿನ್ ಕೇರ್ ಇನ್ನಿತರ ಸೇವೆಗಳು ಲಭ್ಯವಿರುತ್ತವೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಅಮಿತ್ ಸಾಲ್ಯಾನ್ - 9967483666
ಯುವ ಜನರ ಸ್ಫೂರ್ತಿ ಸ್ವಾಮಿ ವಿವೇಕಾನಂದರು
Posted On: 11 Jan 2021, 10:51 PM
ಸ್ವಾಮಿ ವಿವೇಕಾನಂದರ ಸ್ಫೂರ್ತಿದತ್ತವಾದ ನುಡಿಗಳನ್ನು ಕಂಡಾಗ ಅವರೆಷ್ಟು ಭರವಸೆಯನ್ನು ನಮ್ಮ ದೇಶದ ಯುವ ಜನಾಂಗದ ಮೇಲೆ ಹೊಂದಿದ್ದರು ಎಂಬುದು ಅರಿವಾಗುತ್ತದೆ. ನನ್ನ ಭರವಸೆಯೆಲ್ಲ ಇಂದಿನ ಯುವಪೀಳಿಗೆಯ ಮೇಲೆ ನಿಂತಿದೆ. ಯುವಜನರನ್ನು ಒಂದುಗೂಡಿಸಿ ಸಂಘಬದ್ಧರಾಗಿ ದುಡಿಯುವಂತೆ ಮಾಡಲು ನಾನು ಜನ್ಮತಾಳಿದ್ದೇನೆ. ಅವರ ವಾಣಿ ಯುವಜನರ ಮೇಲೆ ಅವರು ಇಟ್ಟ ನಂಬಿಕೆಗೆ ಸಾಕ್ಷಿಯಾಗಿದೆ. ಸ್ವಾಮಿ ವಿವೇಕಾನಂದರ ಸ್ಫೂರ್ತಿದತ್ತವಾದ ನುಡಿಗಳನ್ನು ನೋಡಿದರೆ ಅವರೆಷ್ಟು ಭರವಸೆಯನ್ನು ನಮ್ಮ ದೇಶದ ಯುವ ಜನಾಂಗದ ಮೇಲೆ ಹೊಂದಿದ್ದರು ಎಂಬುದು ಅರಿವಾಗುತ್ತದೆ. ಈ ಪಾಂಚಜನ್ಯ ಸದೃಶ ವಾಣಿಯು ಮೊಳಗಿ 158 ವರ್ಷಗಳೇ ಕಳೆದಿವೆ. ಆದರೆ ಈ ಭರವಸೆಯ ನುಡಿಗಳನ್ನು ಕಾರ್ಯರೂಪಕ್ಕೆ ತರುವುದರಲ್ಲಿ ಅದೆಷ್ಟರ ಮಟ್ಟಿಗೆ ನಾವು ಸಫಲರಾಗಿದ್ದೇವೆ ಎಂಬುದು ಯೋಚಿಸಬೇಕಾದ ಸಂಗತಿ. ನಮ್ಮ ಶಿಕ್ಷಣ ನಿಜವಾದ ಶಿಕ್ಷಣವಲ್ಲ ನಾವು ಯುವಜನಾಂಗಕ್ಕೆ ನೀಡುತ್ತಿರುವ ಶಿಕ್ಷ ಣ ನಿಜವಾದ ಅರ್ಥದಲ್ಲಿ ಶಿಕ್ಷ ಣವೇ ಅಲ್ಲ! ನಿಜವಾದ ವಿದ್ಯಾಭ್ಯಾಸವೇ ಅಲ್ಲ, ಬದಲಾಗಿ ಕೇವಲ ಹೊಟ್ಟೆಪಾಡಿಗೆ ಹಾಗೂ ಸ್ವಾರ್ಥ ಜೀವನಕ್ಕೆ ಸೀಮಿತವಾಗಿರುವ ವಿದ್ಯಾಭ್ಯಾಸ ಎನ್ನಬಹುದು. ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ ನಿಜವಾದ ವಿದ್ಯೆ ಒಬ್ಬನನ್ನು ಸ್ವಾವಲಂಬಿಯಾಗಿ ಮಾಡಬೇಕು. ನಿಮಗೆ ಶಾಲೆ ಕಾಲೇಜುಗಳಲ್ಲಿ ದೊರೆಯುತ್ತಿರುವ ವಿದ್ಯೆಯಿಂದ ಅಜೀರ್ಣ ರೋಗಗ್ರಸ್ಥರ ಗುಂಪಿಗೆ ಸೇರಿರುವಿರಿ. ನೀವು ಕೇವಲ ಯಂತ್ರದಂತೆ ಕೆಲಸ ಮಾಡುತ್ತಾ ಶುದ್ಧ ಸೋಮಾರಿಗಳಾಗುವಿರಿ? ಎನ್ನುವ ಅವರ ಮಾತು ಇಂದಿಗೂ ಪ್ರಸ್ತುತ. ಸ್ವಾಮಿ ವಿವೇಕಾನಂದರ ಪ್ರಕಾರ 'ನಿಜವಾದ ವಿದ್ಯೆ ಎಂದರೆ ಸರ್ವರಲ್ಲಿಯೂ ಅಡಗಿರುವ ಆ ಚೈತನ್ಯವನ್ನು ಅರಿತು ಇಡೀ ವಿಶ್ವವೇ ನಮ್ಮದು' ಎಂಬ ಉದಾತ್ತ ಭಾವನೆಯಿಂದ 'ವಿಶ್ವಮಾನವ ತತ್ತ್ವ'ವನ್ನು ಅಳವಡಿಸಿಕೊಂಡು ಬಾಳುವುದಾಗಿದೆ'. ಸ್ವಾಮೀಜಿ ಅವರು ಶಿಕ್ಷ ಣದ ಬಗ್ಗೆ ಮತ್ತೊಂದು ಸಂದೇಶ ನೀಡುತ್ತಾರೆ......'ಶಿಕ್ಷ ಣವೆಂದರೆ ನಿಮ್ಮ ತಲೆಯಲ್ಲಿ ತುಂಬಿಕೊಂಡ ವಿಷಯ ಸಂಗ್ರಹವಲ್ಲ, ರಕ್ತಗತವಾಗದೆ ಅದು ಜೀವಾವಧಿ ಚೆಲ್ಲಾಡುತ್ತಿರುವುದು. ಜೀವನ ವಿಕಾಸಕ್ಕೆ ಸಹಾಯ ಮಾಡುವ ಪುರುಷ ಸಿಂಹರನ್ನು ಮಾಡುವ, ಶುದ್ಧ ಚಾರಿತ್ರ್ಯ ಸಂಪನ್ನರನ್ನಾಗಿ ಮಾಡುವ, ಶುದ್ಧ ಚಾರಿತ್ರ್ಯ ಸಂಪನ್ನರನ್ನಾಗಿ ಮಾಡುವ ಭಾವಗಳನ್ನು ರಕ್ತಗತ ಮಾಡಿಕೊಳ್ಳುವಂತಹ ಶಿಕ್ಷ ಣವಿರಬೇಕು' 'ಭಾರತದ ಮೇಲೆ ಸ್ವಾಮಿ ವಿವೇಕಾನಂದರಿಗಿದ್ದ ಅನುರಾಗ ಅತ್ಯಪಾರ. ಅವರ ಎದೆಬಡಿತದಲ್ಲಿ ಭಾರತ ಕೇಳಿ ಬರುತ್ತಿತ್ತು. ಅವರ ಧಮನಿ ಧಮನಿಗಳಲ್ಲಿ ಭಾರತ ಮಿಡಿಯುತ್ತಿತ್ತು. ಅವರ ಕನಸು ನನಸುಗಳೆಲ್ಲೆಲ್ಲಾ ಭಾರತವೇ ತುಂಬಿತ್ತು. ಅಷ್ಟೇ ಅಲ್ಲ, ಸ್ವತಃ ಅವರೇ ಭಾರತವಾಗಿ ಬಿಟ್ಟಿದ್ದರು. ಭಾರತದ ಸಾಕಾರ ಮೂರ್ತಿಯೇ ಅವರಾಗಿದ್ದರು. ಭಾರತಾಂಬೆಯ ಆಧ್ಯಾತ್ಮಿಕತೆ, ಪಾವಿತ್ರ್ಯತೆ, ಜ್ಞಾನ, ಶಕ್ತಿ ಮತ್ತು ಧ್ಯೇಯಗಳ ಶ್ರೇಷ್ಠತಮ ಲಾಂಛನವಾಗಿದ್ದರು ಅವರು. ಅವರು ಭಾರತವೇ ಆಗಿದ್ದರು' ಎನ್ನುತ್ತಾರೆ ಸೋದರಿ ನಿವೇದಿತಾ. ನವ ಭಾರತ ನಿಮಿ೯ಸೋಣ ಯುವ ಜನಾಂಗ ಈ ಅಮೃತವಾಣಿಯನ್ನು ಆಲಿಸಿಯಾದರೂ ತಮ್ಮ ದೇಶಪ್ರೇಮ, ದೇಶಭಕ್ತಿಯನ್ನು ವೃದ್ಧಿಪಡಿಸಿಕೊಂಡು ದೇಶೋದ್ಧಾರಕ್ಕೆ ಕಂಕಣಬದ್ಧರಾಗಬೇಕಾದ ಪವಿತ್ರ ಸಂದರ್ಭವೇ ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವ. ಸ್ವಾಮಿ ವಿವೇಕಾನಂದರು ಈ ನಿಟ್ಟಿನಲ್ಲಿ ಯುವ ಜನತೆಗೆ ತಿಳಿಸಿದ ಸಿಂಹವಾಣಿ ಹೀಗಿದೆ; 'ನಮಗೆ ಬೇಕಾಗಿರುವುದು ಎಲ್ಲವನ್ನೂ ತ್ಯಾಗ ಮಾಡಿ ದೇಶಕ್ಕಾಗಿ ತಮ್ಮ ಜೀವನವನ್ನೇ ಅರ್ಪಿಸುವಂತಹ ಕೆಲವು ಮಂದಿ ಯುವಕರು...' ಎಂತಹ ಭರವಸೆಯ ನುಡಿಗಳಿವು. ಆದರೆ ದುರದೃಷ್ಟವಶಾತ್ ಈ ತೆರನಾದ ಯುವಶಕ್ತಿಯನ್ನು ನಾವು ಕಾಣುವುದು ವಿರಳ. ಸ್ವಾಮಿ ವಿವೇಕಾನಂದರು ದೇಶದ ಯುವ ಜನತೆಯ ಮೇಲೆ ಅಪಾರ ವಿಶ್ವಾಸವಿಟ್ಟಿದ್ದರು. ಆದರೆ ಆ ವಿಶ್ವಾಸವೆಲ್ಲಾ ಹುಸಿಯಾದಂತಿದೆ. ಬನ್ನಿ! ಭಾರತೀಯ ಯುವ ಜನತೆ, ಟೊಂಕಕಟ್ಟಿ ನವ ಭಾರತದ ನಿರ್ಮಾಣದ ಹಾದಿಯಲ್ಲಿ ಸಾಗೋಣ, ಈ ದೇಶವೇ ನಮ್ಮ ದೈವವಾಗಿರಲಿ. ಈ ದೇಶಕ್ಕೆ ನಾವು ಏನು ಬೇಕಾದರೂ ತ್ಯಜಿಸೋಣ! ಭಾರತಾಂಬೆಯನ್ನು ಸದೃಢಗೊಳಿಸೋಣ, ಇದೇ ನಮ್ಮ ಉದ್ದೇಶವಾಗಿರಲಿ, ದೇಶವಿರುವುದು ಯುವಕರ ಶಕ್ತಿಯಿಂದ ಎಂಬುದನ್ನು ಮರೆಯದಿರಿ. ನಮ್ಮ ಉದ್ದೇಶ ಸದುದ್ದೇಶವಾಗಿರಲಿ.ಭಾರತ ವನ್ನು ಜಗತ್ತಿನ ಶ್ರೇಷ್ಠ ದೇಶ ವಾಗಿ ಮಾಡೋಣ ಸ್ವಚ್ಚ ಭಾರತಕ್ಕಾಗಿ ಯುವ ಜನಾಂಗ ಒಂದಾಗಬೇಕಾಗಿದೆ. ಬದಲಾಗುವುದು ಈ ದೇಶ ನೀ ಬದಲಾದರೆ ಸರಿಯಾಗುವುದು ಸಮಾಜ ನೀ ಮೊದಲಾದರೆ. ಲೇಖನ :ರಾಘವೇಂದ್ರ ಪ್ರಭು,ಕವಾ೯ಲು ಯುವ ಲೇಖಕ
ನಾಟಕ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿ ಪುರಸ್ಕೃತರಾದ ಭಾಸ್ಕರ್ ಮಣಿಪಾಲ
Posted On: 11 Jan 2021, 06:00 PM
ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ನೀಡುವ 2019 - 20ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಯನ್ನು ರಂಗನಟ, ಹಲವಾರು ಕಿರುಚಿತ್ರ, ಚಲನಚಿತ್ರಗಳಲ್ಲಿ ನಟಿಸಿರುವ ಭಾಸ್ಕರ್ ಮಣಿಪಾಲ ಅವರಿಗೆ ತುಮಕೂರು ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಪ್ರದಾನ ಮಾಡಲಾಯಿತು. ತುಮಕೂರಿನ ಶ್ರೀ ಕ್ಷೇತ್ರ ಸಿದ್ದಗಂಗಾ ಮಠದ ಶ್ರೀ ಮನ್ನಿರಂಜನ ಪ್ರಣವಸ್ವರೂಪಿ ಸಿದ್ದಗಂಗಾ ಸ್ವಾಮಿಗಳು ಪ್ರಶಸ್ತಿ ಪ್ರದಾನ ಮಾಡಿದರು. ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಪ್ರೊ. ಭೀಮಸೇನ ಆರ್, ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಬಿ. ಜ್ಯೋತಿ ಗಣೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎಸ್. ರಂಗಪ್ಪ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಅವರಾಲು : 10ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಶನಿಪೂಜೆ
Posted On: 11 Jan 2021, 10:44 AM
ಕಾಪು ತಾಲೂಕಿನ ಪಲಿಮಾರು ಪಂಚಾಯತ್ ವ್ಯಾಪ್ತಿಯ ಅವರಾಲು, ಅಡ್ಕ ನಾಗ ಬ್ರಹ್ಮಲಿಂಗೇಶ್ವರ ಬ್ರಹ್ಮಸ್ಥಾನದ ಅಶ್ವತ್ಥ ಕಟ್ಟೆಯಲ್ಲಿ ಇದೇ ಬರುವ ಗುರುವಾರದಂದು 10ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಶನಿ ಪೂಜೆಯು ನಡೆಯಲಿದೆ. ಬೆಳಿಗ್ಗೆ ಗಂಟೆ 8:30ಕ್ಕೆ ಶಿವಪ್ರಸಾದ್ ಭಜನಾ ಮಂಡಳಿಯವರಿಂದ ಭಜನೆ, 9ಕ್ಕೆ ಸತ್ಯನಾರಾಯಣ ಪೂಜೆ ಪ್ರಾರಂಭ, 12ಕ್ಕೆ ಪಾಂಡುರಂಗ ಭಜನಾ ಮಂಡಳಿ ಮಟ್ಟುಪಟ್ಣ ಹೆಜಮಾಡಿ ಇವರಿಂದ ಭಜನೆ, 1ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ, ಮಧ್ಯಾಹ್ನ 3ರಿಂದ ಶ್ರೀ ಶನೀಶ್ವರ ಮಹಾತ್ಮೆ ಯಕ್ಷಗಾನ ತಾಳಮದ್ದಳೆ ಪ್ರಾರಂಭವಾಗಲಿದ್ದು, ರಾತ್ರಿ 8ಕ್ಕೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರುದ್ಯೋಗಿಗಳಿಗೆ ಆಶಾಕಿರಣ ರುಡ್ಸೆಟ್ ಸಂಸ್ಥೆ : ಎಮ್ ಮಹೇಶ್ ಕುಮಾರ್ ಮಲ್ಪೆ
Posted On: 10 Jan 2021, 10:59 PM
ನಿರುದ್ಯೋಗಿಗಳಿಗೆ ಆಶಾಕಿರಣ ರುಡ್ಸೆಟ್ ಸಂಸ್ಥೆಯಾಗಿದೆ ಎಂದು ಈ ಸಂಸ್ಥೆ ಯಲ್ಲಿ 30 ವರ್ಷ ಗಳ ಹಿಂದೆ ತರಬೇತಿ ಪಡೆದ ಯಶಸ್ವೀ ಉದ್ಯಮಿ ಎಮ್ ಮಹೇಶ್ ಕುಮಾರ್ ಹೇಳಿದರು. ಅವರು ರುಡ್ಸೆಟ್ ಸಂಸ್ಥೆ ಬ್ರಹ್ಮಾವರ 30 ದಿನ ಗಳ ಕಂಪ್ಯೂಟರ್ ಅಕೌಂಟಿಂಗ್ ತರಬೇತಿ ಶಿಬಿರದ ಸಮಾರೋಪ ಸಮಾರಂಭ ದಲ್ಲಿ ಮುಖ್ಯ ಅತಿಥಿ ಯಾಗಿ ಮಾತನಾಡಿದರು. ಅವರು ಪ್ರಮಾಣ ಪತ್ರ ವನ್ನು ವಿತರಿಸಿ ಶಿಬಿರಾರ್ಥಿ ಗಳಿಗೆ ಮಾರ್ಗದರ್ಶನ ನೀಡಿದರು. ಸಂಸ್ಥೆಯ ನಿರ್ದೇಶಕರಾದ ಶ್ರೀ ಪಾಪ ನಾಯಕ್ ರವರು ಅಧ್ಯಕ್ಷತೆ ವಹಿಸಿದ್ದರು. 31 ಜನ ತರಬೇತಿ ಪಡೆದು ತಮ್ಮ ತಮ್ಮ ಅನಿಸಿಕೆ ಗಳನ್ನು ಹಂಚಿಕೊಂಡರು. ಹಿರಿಯ ಉಪನ್ಯಾಸಕರಾದ ಕರುಣಾಕರ ಜೈನ್ ರವರು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಉಪನ್ಯಾಸಕರಾದ ಸಂತೋಷ ಶೆಟ್ಟಿ ವಂದಿಸಿದರು.
ಇನ್ನ ಬಂಟರ ಸಂಘದ ಅಧ್ಯಕ್ಷರಾಗಿ ಇನ್ನ ಗುತ್ತು ಪ್ರದೀಪ್ ಶೆಟ್ಟಿ ಆಯ್ಕೆ
Posted On: 10 Jan 2021, 08:29 PM
ಇನ್ನ ಬಂಟರ ಸಂಘದ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮವು ಕಾಚೂರು ಪರಾಡಿಯ ಸಭಾಂಗಣದಲ್ಲಿ ಬಂಟ ಸಮಾಜದ ಉಪಸ್ಥಿತಿಯಲ್ಲಿ ನಡೆಯಿತು. ಈ ಸಂದರ್ಭ ಇನ್ನ ಗುತ್ತು ಪ್ರದೀಪ್ ಶೆಟ್ಟಿಯವರನ್ನು ಸರ್ವಾನುಮತದಿಂದ ಅಧ್ಯಕ್ಷರನ್ನಾಗಿ ಆಯ್ಕೆಮಾಡಲಾಯಿತು.
ಜಯಂಟ್ಸ್ ಗ್ರೂಪ್ : ಸಾಧಕರಿಗೆ ಅಭಿನಂದನೆ ಹಾಗೂ ಮಹಾಸಭೆ
Posted On: 10 Jan 2021, 05:48 PM
ಬ್ರಹ್ಮಾವರ: ಜಗತ್ತಿನಲ್ಲಿ ಶಾಶ್ವತವಾಗಿ ಉಳಿಯುವ ವಸ್ತು ನಾವು ಮಾಡುವ ಉತ್ತಮ ಸೇವೆ ಮಾತ್ರ. ಆದರೆ ನಾವೆಲ್ಲರೂ ಹಣ ಅಧಿಕಾರದ ದಾಸರಾಗಲು ಹೋಗುತ್ತಿರುವುದು ತಪ್ಪು ಎಂದು ಎಸ್.ಎಂ.ಎಸ್ ಕೆತಡ್ರಲ್ ವಿಗಾರ್ ಜನರಲ್ ಫಾ|| ಎಂ.ಸಿ ಮಥಾಯಿ ಹೇಳಿದರು. ಅವರು ಬ್ರಹ್ಮಾವರ ಜಯಂಟ್ಸ್ ಗ್ರೂಪ್ ಇದರ ವತಿಯಿಂದ ನಡೆದ ಸಾಧಕರಿಗೆ ಅಭಿನಂದನೆ ಹಾಗೂ ಮಹಾಸಭೆ ಕಾಯ೯ಕ್ರಮದಲ್ಲಿ ಮಾತನಾಡಿದರು. ಜಗತ್ತಿನ ಶ್ರೇಷ್ಠ ಸಂಪತ್ತು ಅದು ಮಾನವ ಸಂಪತ್ತು ಇದನ್ನು ಅರಿತು ಗಳಿಸಿದರಲ್ಲಿ ಸ್ವಲ್ಪ ಅಂಶ ಸಮಾಜಕ್ಕೆ ಅಪ೯ಣಿಯಾಗಲಿ ಎಂದರು. ಜಯಂಟ್ಸ್ ಉಡುಪಿ ಯೂನಿಟ್ ಡೈರೆಕ್ಟರ್ ದೇವದಾಸ್ ಕಾಮತ್ ಯುವಕರನ್ನು ಸಂಸ್ಥೆಗೆ ಸೇರಿಸುವ ಮೂಲಕ ಮತ್ತಷ್ಟು ಉತ್ತಮ ಕಾಯ೯ ಮುಂದುವರೆಯಲಿ ಎಂದರು. ವೇದಿಕೆಯಲ್ಲಿ ಮಾಜಿ ಫೆಡರೇಶನ್ ಅಧ್ಯಕ್ಷ ಮಧುಸೂಧನ್ ಹೇರೂರು, ಮಾಜಿ ಅಧ್ಯಕ್ಷ ಮಂಜುನಾಥ್ ಶೆಟ್ಟಿಗಾರ್, ಕಾಯ೯ದಶಿ೯ ಶ್ರೀನಾಥ್ ಕೋಟ ಮುಂತಾದವರಿದ್ದರು.ಅಧ್ಯಕ್ಷತೆಯನ್ನು ಜಯಂಟ್ಸ್ ಅಧ್ಯಕ್ಷ ಸುಂದರ ಪೂಜಾರಿ ಮೂಡುಕುಕುಡೆ ವಹಿಸಿದ್ದರು.ಕಾಯ೯ಕ್ರಮದಲ್ಲಿ ರೆಡ್ ಕ್ರಾಸ್ ನಲ್ಲಿ ಉತ್ತಮ ಸಾಧನೆ ಮಾಡಿದ ಕುಂದಾಪುರ ರೆಡ್ ಕ್ರಾಸ್ ಸಭಾಪತಿ ಜಯಕರ ಶೆಟ್ಟಿ, ಮುಖ್ಯಮಂತ್ರಿ ಪದಕ ಪುರಸ್ಕೃತ ಸಕ೯ಲ್ ಇನ್ಸ್ಪೆಕ್ಟರ್ ಅನಂತ ಪದ್ಭನಾಭ , ಖ್ಯಾತ ಸಾಹಿತಿ ಡಾII ಕಾತ್ಯಾಯನಿ ಕುಂಜಿಬೆಟ್ಟು, ರೂಬಿಕ್ ಕ್ಯೂಬ್ ಸಾಧಕ ಮಹೇಶ್ ಮಲ್ಪೆರವರನ್ನು ಗೌರವಿಸಲಾಯಿತು.ಈ ಸಂದಭ೯ದಲ್ಲಿ ನೂತನ ಸದಸ್ಯರಾದ ಉಮೇಶ್ ಬಿತಿ೯, ರೊನಾಲ್ಡ್, ಅನಿಲ್ ಶೆಟ್ಟಿ, ನಂದಿನಿರವರನ್ನು ಬರಮಾಡಿಕೊಳ್ಳಲಾಯಿತು. ವಿವೇಕ್ ಕಾಮತ್, ಮಿಲ್ಟನ್ ಒಲಿವರ್ ಪರಿಚಯಿಸಿದರು.ಸುಂದರ ಪೂಜಾರಿ ಸ್ವಾಗತಿಸಿ ವರದಿ ವಾಚಿಸಿದರು.ಮಧುಸೂಧನ್ ಹೇರೂರು ವಂದಿಸಿದರು.ರಾಘವೇಂದ್ರ ಪ್ರಭು,ಕವಾ೯ಲು ನಿರೂಪಿಸಿದರು.
ರಾಜ್ಯ ಮತ್ತು ಕೇಂದ್ರ ಸರಕಾರದ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿಗಾಗಿ ಇದೀಗ ಕಾಪುವಿನಲ್ಲಿ ಕೋಸ್ಟಲ್ ವಿಂಗ್ಸ್ ಅಕಾಡೆಮಿ ಸಂಸ್ಥೆ
Posted On: 10 Jan 2021, 05:36 PM
ಕೇಂದ್ರ ಮತ್ತು ರಾಜ್ಯ ಸರಕಾರಗಳು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಬಯಸುವ ಅಭ್ಯರ್ಥಿಗಳಿಗೆ ಕಾಪುವಿನ ಕೋಸ್ಟಲ್ ವಿಂಗ್ಸ್ ಅಕಾಡೆಮಿಯಲ್ಲಿ ಪರಿಣಿತ ತರಬೇತುದಾರರಿಂದ ಪರೀಕ್ಷಾ ಪೂರ್ವ ತರಬೇತಿ ಸಿಗಲಿದೆ. ಪೊಲೀಸ್ ಕಾನ್ಸ್ಟೇಬಲ್, ಪೊಲೀಸ್ ಸಬ್ ಇನ್ಸ್ಪೆಕ್ಟರ್, ಪಿಡಿಒ, ಎಫ್ ಡಿ ಎ/ ಎಸ್ ಡಿ ಎ, ಕೆಎಎಸ್, ರೈಲ್ವೆ, ಪೋಸ್ಟಲ್, ಶಿಕ್ಷಕರ ಅರ್ಹತಾ ಪರೀಕ್ಷೆ, ಗ್ರೂಪ್ ಸಿ ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಸಿಗಲಿದೆ. ಕಾಪು ಹೊಸ ಮಾರಿಗುಡಿ ಸಮೀಪದ ಹೀರ ಕಾಂಪ್ಲೆಕ್ಸಿನ ಎರಡನೆಯ ಮಹಡಿಯಲ್ಲಿ ಕೋಸ್ಟಲ್ ವಿಂಗ್ಸ್ ಅಕಾಡೆಮಿ ಪ್ರಾರಂಭವಾಗಿದೆ. ಆಸಕ್ತ ಅಭ್ಯರ್ಥಿಗಳು ಸಂಪರ್ಕಿಸಿ : + 91 8073679442 +91 8296589648
