Updated News From Kaup
ಸಿಬಿಐ ವೆಜಿಲೆನ್ಸರ್ ಆಫ಼ೀಸರ್ ಸಮ್ಮುಖದಲ್ಲಿ ಬ್ಯಾಂಕ್ ಆಫ್ ಇಂಡಿಯಾ ಸಿಬ್ಬಂದಿಗಳಿಂದ ಶ್ರೀ ಚಂದ್ರಹಾಸ್ ಗುರುಸ್ವಾಮಿ ಇನ್ನಂಜೆ ಇವರಿಗೆ ಸನ್ಮಾನ
Posted On: 30-10-2020 08:16PM
ಬ್ಯಾಂಕ್ ಆಫ಼್ ಇಂಡಿಯಾದ ಅನ್ನ ಪೂರ್ಣೇಶ್ವರೀ ಕ್ಯಾಟರರ್ಸ್ ನ ಮಾಲಕರಾದ ಆನಂದ್ ಶೇಟ್ ಅವರ ಉಪಹಾರಗ್ರಹದಲ್ಲಿ ಇತ್ತೀಚೆಗೆ ದೇಶದಾದ್ಯಂತ ಕೊರೋನಾ ಮಹಾಮಾರಿ ವಕ್ಕರಿಸಿದ ಹಿನ್ನಲೆ ಲಾಕ್ ಡೌನ್ ಎಂಬ ಅಸ್ರ್ತದಿಂದ ಜನರು ಕಂಗಾಲಾಗಿ ಹೊಟ್ಟೆಗೆ ಹಿಟ್ಟಿಲ್ಲದ ಪರಿಸ್ಥಿತಿಯ ಸಂದರ್ಭ ಮಾರ್ಚ್23ರಿಂದ ಲಾಕ್ ಡೌನ್ ಮುಗಿಯುವವರೆಗೂ ಫ಼ೋರ್ಟ್ ನ ಬ್ಯಾಂಕ್ ಆಫ಼್ ಇಂಡಿಯಾದ ಎಲ್ಲಾ ಸಿಬ್ಬಂಧಿಗಳಿಗೂ ಒಳ್ಳೆಯ ರೀತಿಯ ಊಟ ಉಪಚಾರ ನೀಡಿ ಸಹಕರಿಸಿದ ಶ್ರೀ ಚಂದ್ರಹಾಸ್ ಗುರುಸ್ವಾಮಿ ಇನ್ನಂಜೆ ಇವರನ್ನು ಬ್ಯಾಂಕ್ ಮ್ಯಾನೇಜರ್ ಜಾನ್ಸಲ್ ಹಾಗೂ ಬ್ಯಾಂಕ್ ಸಿಬ್ಬಂದಿಗಳು ಹಾಗೂ ದಿಲ್ಲಿಯಿಂದ ಆಗಮಿಸಿದ ಸಿಬಿಐ ವೆಜಿಲೆನ್ಸರ್ ಆಫ಼ೀಸರ್ ಇವರ ಉಪಸ್ಥಿತಿಯಲ್ಲಿ ಪ್ರೀತಿಪೂರ್ವಕವಾಗಿ ಸನ್ಮಾನಿಸಿದರು. ಹಲವಾರು ವರ್ಷಗಳಿಂದ ಬ್ಯಾಂಕ್ ಆಫ಼್ ಇಂಡಿಯಾದ ಕ್ಯಾಂಟೀನ್ ಉದ್ಯಮವನ್ನು ನಡೆಸುತ್ತಾ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು ,ಶ್ರೀ ಅಯ್ಯಪ್ಪ ಸ್ವಾಮಿಯ ಪರಮ ಭಕ್ತರಾದ ಇನ್ನಂಜೆ ಶ್ರೀ ಚಂದ್ರಹಾಸ್ ಗುರುಸ್ವಾಮಿಯವರು ಹಲವಾರು ಶಿಷ್ಯವೃಂದವನ್ನೂ ಹೊಂದಿದ್ದಾರೆ.ಲಾಕ್ ಡೌನ್ ಸಮಯದಲ್ಲಿ ತನ್ನ ಉದ್ಯಮವಾದ ಬ್ಯಾಂಕ್ ಆಫ಼್ ಇಂಡಿಯಾ ಉಪಹಾರ ಗ್ರಹದಲ್ಲಿ ಸಿಲುಕಿರುವ ಬ್ಯಾಂಕ್ ಸಿಬ್ಬಂದಿಗಳಿಗೆ ಊಟೋಪಚಾರ ನೀಡುವುದರ ಮೂಲಕ ಇವರ ಈ ಸೇವೆಗೆ ಬ್ಯಾಂಕ್ ಮ್ಯಾನೇಜರ್ ಹಾಗೂ ಸಿಬ್ಬಂದಿಗಳು ಇವರನ್ನು ಸನ್ಮಾನಿಸಿದ್ದಾರೆ.ದಿಲ್ಲಿಯಿಂದ ಆಗಮಿಸಿದ ಸಿಬಿಐ ವೆಜಿಲೆನ್ಸರ್ ಆಫ಼ೀಸರ್ ಕೂಡ ಈ ಹೊತ್ತಿನಲ್ಲಿ ಉಪಸ್ಥಿತರಿದ್ದು ಇವರ ಈ ಕಾರ್ಯಕ್ಕೆ ಸನ್ಮಾನಿಸಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
2020ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಪು ತಾಲೂಕಿನ ಸಾಧಕರು
Posted On: 30-10-2020 08:04PM
2020 ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದ್ದು, ಕಾಪು ತಾಲೂಕಿನಲ್ಲಿ ರಂಗಭೂಮಿ ಕ್ಷೇತ್ರದಲ್ಲಿ ಶ್ರೀ ದಿನಕರ ಭಂಡಾರಿ ಕಣಜಾರು, ಸಾಹಿತ್ಯ ಕ್ಷೇತ್ರದಲ್ಲಿ ನವೀನ್ ಸುವರ್ಣ ಪಡ್ರೆ, ನೃತ್ಯ ಕ್ಷೇತ್ರದಲ್ಲಿ ಶ್ರೀಮತಿ ಮಂಗಳ ಕಿಶೋರ್ ದೇವಾಡಿಗ ಉಚ್ಚಿಲ, ಕ್ರೀಡಾ ಕ್ಷೇತ್ರದಲ್ಲಿ ಶರತ್ ಶೆಟ್ಟಿ ಪಡುಬಿದ್ರಿ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಇದನ್ನು ನವೆಂಬರ್ ಒಂದು ಕನ್ನಡ ರಾಜ್ಯೋತ್ಸವದಂದು ಉಡುಪಿಯಲ್ಲಿ ನಡೆಯುವ ಸಮಾರಂಭದಲ್ಲಿ ನೀಡಲಾಗುವುದು.
ಕಾಪು ಪುರಸಭೆಯ ನೂತನ ಅಧ್ಯಕ್ಷರಿಗೆ ಜೆಸಿ ವತಿಯಿಂದ ಗೌರವಾಪ೯ಣೆ
Posted On: 30-10-2020 07:55PM
ಕಾಪು:- ಕಾಪು ಜೇಸಿಐ ನ ಪೂವ೯ ಅಧ್ಯಕ್ಷ ಹಾಗೂ ಪೂವ೯ ವಲಯಾಧಿಕಾರಿ ಯಾಗಿ ಉತ್ತಮ ಸೇವೆ ಸಲ್ಲಿಸಿದ ಕಾಪು ಪುರಸಭೆಯ ನೂತನ ಅಧ್ಯಕ್ಷ ಅನಿಲ್ ಕುಮಾರ್ ರವರನ್ನು ಜೇಸಿ ವತಿಯಿಂದ ಅ.30 ರಂದು ಶುಕ್ರವಾರ ಸನ್ಮಾನಿಸಲಾಯಿತು.
ಹುಟ್ಟು ಹಬ್ಬದಂದು ಬಂಟಕಲ್ಲ್ ಲಯನ್ಸ್ ಅಧ್ಯಕ್ಷರಾದ ವಿಜಯ್ ಧೀರಜ್ ರಿಂದ ಶ್ಲಾಘನೀಯ ಕಾರ್ಯ
Posted On: 30-10-2020 07:45PM
ಸಮಾಜಸೇವೆಯ ಬಗ್ಗೆ ಆಸಕ್ತಿಯಿದ್ದು ಈಗಾಗಲೇ ಹಲವಾರು ಸಮಾಜಮುಖಿ ಸೇವೆಗಳನ್ನು ಮಾಡಿರುವ ಬಂಟಕಲ್ಲ್ ಲಯನ್ಸ್ ಕ್ಲಬ್ ಅಧ್ಯಕ್ಷರಾದ ವಿಜಯ್ ಧೀರಜ್ ಬಂಟಕಲ್ಲ್ ಇಂದು ತಮ್ಮ ಹುಟ್ಟು ಹಬ್ಬದ ಅಂಗವಾಗಿ ಜೀವ ನಿಧಿ ಸಂಘಟನೆಯೊಂದಿಗೆ MY BIRTHDAY BLOOD DONATION ಎಂಬ ಪೋಸ್ಟರ್ ಅನ್ನು ಬಿಡುಗಡೆ ಮಾಡುವುದರೊಂದಿಗೆ ಪ್ರತಿಯೊಬ್ಬರೂ ನಿಮ್ಮ ಜನ್ಮದಿನದ ಸಂದರ್ಭದಲ್ಲಿ ದಯವಿಟ್ಟು ರಕ್ತದಾನ ಮಾಡಿ ಮತ್ತು ನೀವು 3 ಜನರಿಗೆ ಜೀವ ನೀಡುವ ಮೂಲಕ ಅದನ್ನು ಆಚರಿಸಿ ಎಂದು ವಿನಂತಿಸಿದ್ದಾರೆ.
ಪ್ರಾಮಾಣಿಕತೆ ಮೆರೆದ ಕಾಪು ಪುರಸಭೆಯ ಪೌರ ಕಾರ್ಮಿಕರು
Posted On: 30-10-2020 01:21PM
ಕಾಪು ಪುರಸಭಾ ವ್ಯಾಪ್ತಿಯ ಮಲ್ಲಾರು ಕೊಪ್ಪಲಂಗಡಿ ಅನಸೂಯ ಎನ್ ಕ್ಲೇವ್ ನಲ್ಲಿ ಕಸದ ಜತೆ ಕಳೆದು ಹೋಗಿರುವ 16 ಗ್ರಾಂ ತೂಕದ ಚಿನ್ನದ ಬ್ರಾಸ್ ಲೆಟ್ ನ್ನು ಅದರ ವಾರಸುದಾರರಿಗೆ ವಾಪಾಸು ನೀಡುವ ಮೂಲಕ ಕಾಪು ಪುರಸಭಾ ಕಾರ್ಮಿಕರು ಪ್ರಾಮಾಣಿಕತೆ ಮೆರೆದಿದ್ದಾರೆ. ವಾರಸುದಾರರು ನಗದು ಪುರಸ್ಕಾರ ನೀಡಿ ಗೌರವಿಸುವ ಮೂಲಕ ಕೃತಜ್ಞತೆ ಸಲ್ಲಿಸಿದರು.
25ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ವಿಕ್ರಂ ಕಾಪು ಮತ್ತು ಸುಜಯ ವಿಕ್ರಂ ದಂಪತಿ
Posted On: 29-10-2020 11:34PM
ಪ್ರೀತಿಯ ಮಧುರತೆಗೆ ಮದುವೆಯೆಂಬ ಬೆಸುಗೆಯು ಕೂಡಿ ಸುಂದರ ಸಂಸಾರಕ್ಕೆ ದೀವಿಗೆಯ ಜೋಡಿಯಾದ ವಿಕ್ರಂ ಕಾಪು ಮತ್ತು ಸುಜಯ ವಿಕ್ರಂರವರಿಗೆ ಸಂತಸದ ಸಂಭ್ರಮ ಅದುವೇ ಮದುವೆ ವಾರ್ಷಿಕೋತ್ಸವವ ನೆನಪಿಸುವ ದಿನ. ಕಾಪು ಬಿಲ್ಲವ ಸಂಘದ ಅಧ್ಯಕ್ಷರಾಗಿ, ಜನಾನುರಾಗಿಯಾಗಿರುವ ವಿಕ್ರಂ ಕಾಪು ಅವರಿಗೆ ಸಹಧರ್ಮಿಣಿಯಾಗಿ ಸುಜಯ ವಿಕ್ರಂರವರ ಸಂಪೂರ್ಣ ಸಹಕಾರವಿದೆ. ಇವರ ಮದುವೆಯ 25ನೇ ವಾರ್ಷಿಕೋತ್ಸವವನ್ನು ಆಚರಿಸಲಿದ್ದಾರೆ.
ಕೋವಿಡ್ ಲಸಿಕೆ ನೀಡಲು ಡೇಟಾ ಬೇಸ್ ಸಿದ್ದಪಡಿಸಿ: ಜಿಲ್ಲಾಧಿಕಾರಿ ಜಿ.ಜಗದೀಶ್
Posted On: 29-10-2020 06:50PM
ಉಡುಪಿ : ಕೋವಿಡ್19 ಗೆ ಲಸಿಕೆ ತಯಾರಿಕೆಯು ಅಂತಿಮ ಹಂತದಲ್ಲಿದ್ದು, ಕೇಂದ್ರ ಸರ್ಕಾರದ ನಿರ್ದೇಶನದಂತೆ, ಲಸಿಕೆಯನ್ನು ಪ್ರಾಥಮಿಕ ಹಂತದಲ್ಲಿ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿಗಳು, ಮತ್ತು ಸಹಾಯಕ ಸಿಬ್ಬಂದಿಗಳಿಗೆ ನೀಡಬೇಕಿದ್ದು, ಇದಕ್ಕಾಗಿ ಜಿಲ್ಲೆಯಲ್ಲಿರುವ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಕ್ಷೇತ್ರದ ಸಿಬ್ಬಂದಿಗಳ ಮಾಹಿತಿಯ ಡೇಟಾಬೇಸ್ ನ್ನು ಶೀಘ್ರದಲ್ಲಿ ಸಿದ್ದಪಡಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚಿಸಿದರು. ಅವರು ಗುರುವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ , ಕೋವಿಡ್ ಲಸಿಕಾ ಜಿಲ್ಲಾ ಲಸಿಕಾ ಕಾರ್ಯಪಡೆ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾಪು ಪುರಸಭೆಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
Posted On: 29-10-2020 11:07AM
23 ಸದಸ್ಯ ಬಲ ಹೊಂದಿರುವ ಕಾಪು ಪುರಸಭೆಯ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅನಿಲ್ ಕುಮಾರ್ ಹಾಗೂ ಕಾಂಗ್ರೆಸ್ ಬೆಂಬಲಿತ ಮಾಲಿನಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ. ಪುರಸಭಾ ವ್ಯಾಪ್ತಿಯಲ್ಲಿ ಮೂಲ ಸೌಕರ್ಯಕ್ಕೆ ಒತ್ತು ನೀಡುವಲ್ಲಿ ಶ್ರಮಿಸುವುದಾಗಿ ನೂತನ ಅಧ್ಯಕ್ಷರಾದ ಅನಿಲ್ ಕುಮಾರ್ ತಿಳಿಸಿದ್ದಾರೆ.
ಕಾಪುವಿನಲ್ಲಿ ಶಾಸಕರಿಂದ ವಿದ್ಯುತ್ಚಾಲಿತ ಸೈಕಲ್ ಶೋರೂಮ್ ಉದ್ಘಾಟನೆ
Posted On: 29-10-2020 10:36AM
ಕಾಪು ತಾಲೂಕು ಕಚೇರಿ ಹತ್ತಿರದ ಪೊಲಿಪು ಮೀನುಗಾರರ ಸಹಕಾರಿ ಸಂಘ ಕಟ್ಟಡದಲ್ಲಿರುವ ಎಸ್ಸೆಲ್ ಎನರ್ಜಿ ಮುದ್ರೆಯ ಎಲೆಕ್ಟ್ರಿಕಲ್ ಸೈಕಲ್ ಶೋರೂಮ್ ವಿಘ್ನೇಶ್ವರ ಎಂಟರ್ಪ್ರೈಸಸ್ ನ್ನು ಕಾಪು ಶಾಸಕರಾದ ಲಾಲಾಜಿ ಆರ್. ಮೆಂಡನ್ ಉದ್ಘಾಟಿಸಿ ಸಂಸ್ಥೆಗೆ ಶುಭಹಾರೈಸಿದರು.
ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಉಡುಪಿ, ದಕ್ಷಿಣಕನ್ನಡ ಜಿಲ್ಲೆಯ 5 ಮಂದಿ ಹಾಗೂ ಒಂದು ಸಂಸ್ಥೆ ಆಯ್ಕೆ
Posted On: 29-10-2020 10:18AM
ಕರ್ನಾಟಕ ಸರಕಾರದಿಂದ ನೀಡಲ್ಪಡುವ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ರಾಜ್ಯೋತ್ಸವ ಪ್ರಶಸ್ತಿಯಾಗಿದೆ. ಈ ಬಾರಿ 65ನೇ ವರ್ಷಾಚರಣೆಯ ಪ್ರಯುಕ್ತ 65 ಮಂದಿ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗುತ್ತದೆ., ಕಲೆ, ಸಾಹಿತ್ಯ, ರಂಗಭೂಮಿ,ಸಿನಿಮಾ, ಸಂಗೀತ,ನೃತ್ಯ, ಜಾನಪದ, ಯಕ್ಷಗಾನ, ಬಯಲಾಟ, ಶಿಲ್ಪಕಲೆ, ಚಿತ್ರಕಲೆ, ಸಮಾಜಸೇವೆ, ಸಂಕೀರ್ಣ, ಪತ್ರಿಕೋದ್ಯಮ/ ಮಾಧ್ಯಮ, ಕ್ರೀಡೆ, ವೈದ್ಯಕೀಯ, ಶಿಕ್ಷಣ, ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಾಧಕರನ್ನು ಆಯ್ಕೆ ಮಾಡಲಾಗುತ್ತದೆ.
