Updated News From Kaup
ಹೋಂ ಡಾಕ್ಟರ್ ಫೌಂಡೇಶನ್ : ಸೇವಾ ಕಾರ್ಯದೊಂದಿಗೆ ಕ್ರಿಸ್ಮಸ್ ಆಚರಣೆ.
Posted On: 29 Dec 2020, 11:01 AM
ಉಡುಪಿ : ಹೋಂ ಡಾಕ್ಟರ್ ಫೌಂಡೇಶನ್ ವತಿಯಿಂದ ಸೇವಾ ಕಾಯ೯ಗಳ ಮೂಲಕ ಮಾದರಿ ಕ್ರಿಸ್ಮಸ್ ಆಚರಣೆ ಮಣಿಪಾಲದ ವಿಜಯನಗರ ಸ್ಲಂ ಬಡಾವಣೆಯಲ್ಲಿ ಡಿ.27ರಂದು ಆದಿತ್ಯವಾರ ನಡೆಯಿತು. ಈ ಸಂದರ್ಭದಲ್ಲಿ ಬಡ ವಿಧವೆ ಮಹಿಳೆ ಕುಕ್ಕಿಹಳ್ಳಿಯ ಸುಜಾತ ಕುಟುಂಬಕ್ಕೆ ಮೂವತ್ತು ಸಾವಿರ ರೂಪಾಯಿ, ಉದರ ಸಂಬಂದಿ ವ್ಯಾಧಿಯಿಂದ ಬಳಲುತ್ತಿರುವ ಹೂಡೆಯ ಉಲ್ಲಾಸ್ ಅರುಣ್ ರವರಿಗೆ ಹದಿನೆಂಟು ಸಾವಿರ ರೂಪಾಯಿ, ಕ್ಯಾನ್ಸರ್ ಪೀಡಿತ ಮಗು ತ್ರಿಷಾ ಚಿಕಿತ್ಸೆಗೆ ಇಪ್ಪತ್ತು ಸಾವಿರ ರೂಪಾಯಿ ಕುಕ್ಕಿಹಳ್ಳಿಯ ಬಡ ವೃದ್ಧ ದಂಪತಿವಿಶಾಲಾಕ್ಷಿರವರಿಗೆ ಔಷದಕ್ಕಾಗಿ ಆರು ಸಾವಿರ ರೂಪಾಯಿ,ಸ್ಪಂದನ ಉಪ್ಪುರು ಮಾನಸಿಕ ವಿಕಲ ಚೇತನ ರಿಗೆ ಏಳು ಸಾವಿರ ರೂಪಾಯಿ,ಬೆಳ್ಳಂಪಳ್ಳಿಯ ಸುಜಾತ ಕುಟುಂಬಕ್ಕೆ ಸೇವ್ ಲೈಫ್ ವತಿಯಿಂದ 60 ಸಾವಿರ ರೂಪಾಯಿ ನೆರವು ನೀಡಲಾಯಿತು. ಈ ಕಾಯ೯ಕ್ರಮದಲ್ಲಿ ಸೇವ್ ಲೈಫ್ ಫೌಂಡೇಶನ್ ನ ಸಂಸ್ಥಾಪಕ ಅರ್ಜುನ್ ಭಂಡಾರ್ಕರ್ ರವರನ್ನು ಗೌರವಿಸಲಾಯಿತು.ವೇದಿಕೆಯಲ್ಲಿ ಆದಾಯ ತೆರಿಗೆ ನಿವೃತ್ತ ಅಧಿಕಾರಿ ಕರುಣಾಕರ, ಡಾII ಶಶಿಕಿರಣ್ ಶೆಟ್ಟಿ, ಡಾII ಸುಮಾ ಶೆಟ್ಟಿ, ಬಂಗಾರಪ್ಪ, ರಾಘವೇಂದ್ರ ಪೂಜಾರಿ, ಸ್ಪಂದನ ವಿಶೇಷ ಶಾಲೆಯ ಪ್ರಮುಖ ಜನಾಧ೯ನ್ ಮುಂತಾದವರಿದ್ದರು. ಸಭಾ ಕಾಯ೯ಕ್ರಮದ ಬಳಿಕ ಸ್ಪಂದನ ವಿಶೇಷ ಶಾಲೆಯ ನಿವಾಸಿಗಳಿಂದ ಅದೇ ರೀತಿ ಸ್ಲo ನಿವಾಸಿ ಮಕ್ಕಳಿಂದ ವಿವಿಧ ವಿನೋದಾವಳಿ ಕಾಯ೯ಕ್ರಮ ನಡೆಯಿತು. ಡಾII ಶಶಿಕಿರಣ್ ಶೆಟ್ಟಿ ಪ್ರಸ್ತಾವನೆಗೈದರು. ರಾಘವೇಂದ್ರ ಪ್ರಭು,ಕವಾ೯ಲು ನಿರೂಪಿಸಿದರು.
ಇನ್ನಂಜೆ : ಕುಟುಂಬವೊಂದಕ್ಕೆ ರೋಟರಿ, ಯುವಕ ಮಂಡಲ, ದಾನಿಗಳ ನೆರವಿನಿಂದ ಸ್ನಾನಗೃಹ, ಶೌಚಾಲಯ ನಿರ್ಮಾಣ
Posted On: 28 Dec 2020, 12:31 PM
ಇನ್ನಂಜೆ ಗ್ರಾಮದ ಕಲ್ಯಾಲುವಿನಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬವೊಂದಕ್ಕೆ ಸ್ನಾನಗೃಹ ಮತ್ತು ಶೌಚಾಲಯ ಅವಶ್ಯಕತೆಯಿದ್ದು ರೋಟರಿ ಸಮುದಾಯ ದಳ ಇನ್ನಂಜೆ ಇದರ ವತಿಯಿಂದ ದಾನಿಗಳ ಸಹಕಾರದಿಂದ ಶೌಚಾಲಯ ನಿರ್ಮಾಣವಾಗಿದ್ದು, ಅದನ್ನು ರೋಟರಿ ಸಮುದಾಯ ದಳ (Rcc) ಇನ್ನಂಜೆ ಮತ್ತು ಯುವಕ ಮಂಡಲ (ರಿ.) ಇನ್ನಂಜೆ ಹಾಗೂ ದಾನಿಗಳ ಸಹಕಾರದಿಂದ ಇಂದು ಬೆಳಿಗ್ಗೆ 8 ಗಂಟೆಗೆ ಉದ್ಘಾಟನೆ ಮಾಡುವುದರ ಮೂಲಕ ಮನೆಯವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಉದ್ಘಾಟಕರಾಗಿ ರೋಟರಿ ಡಿಸ್ಟ್ರಿಕ್ ಗವರ್ನರ್ ನವೀನ್ ಅಮೀನ್ ಶಂಕರಪುರ ಆಗಮಿಸಿದ್ದರು, ಅಧ್ಯಕ್ಷರಾದ Rcc ಪ್ರಶಾಂತ್ ಶೆಟ್ಟಿ ಮಂಡೇಡಿ, ರೋಟರಿಯನ್ ಮಾಲಿನಿ ಶೆಟ್ಟಿ ಇನ್ನಂಜೆ, ಯುವಕ ಮಂಡಲದ ಅಧ್ಯಕ್ಷರಾದ ದಿವೇಶ್ ಶೆಟ್ಟಿ ಕಲ್ಯಾಲು, Rcc ಗಣೇಶ್ ಆಚಾರ್ಯ, Rcc.ಜೇಸುದಾಸ್, Rcc.ಸಂದೀಪ್, Rcc.ವಜ್ರೇಶ್, Rcc. ವಿಕ್ಕಿ ಪೂಜಾರಿ ಮಡುಂಬು ಮತ್ತು ಮನೆಯವರು ಉಪಸ್ಥಿತರಿದ್ದರು.
ಎರ್ಮಾಳ್ : ಕಾರು ಡಿಕ್ಕಿಯಾಗಿ ಬಸ್ ಗಾಗಿ ಕಾಯುತ್ತಿದ್ದ ಇಬ್ಬರು ಮೃತ್ಯು
Posted On: 25 Dec 2020, 08:40 PM
ಕಾಪು: ರಸ್ತೆ ಪಕ್ಕದಲ್ಲಿ ನಿಂತಿದ್ದ ಇಬ್ಬರಿಗೆ ಕಾರು ಡಿಕ್ಕಿಯಾಗಿ ಇಬ್ಬರೂ ಸಾವನ್ನಪ್ಪಿದ ಘಟನೆ ಪಡುಬಿದ್ರಿ ಸಮೀಪದ ಎರ್ಮಾಳಿನಲ್ಲಿ ನಡೆದಿದೆ. ಮೃತರನ್ನು ಎರ್ಮಾಳ್ ನಿವಾಸಿ ಸಂಜೀವ ದೇವಾಡಿಗ (45) ಮತ್ತು ಉತ್ತರ ಪ್ರದೇಶ ಮೂಲದ ಅರವಿಂದ್ (22) ಎಂದು ಗುರುತಿಸಲಾಗಿದೆ. ಉಡುಪಿ ಕಡೆಯಿಂದ ಮಂಗಳೂರಿನತ್ತ ಚಲಿಸುತ್ತಿದ್ದ ಮಾರುತಿ ಅಲ್ಟೋ ಕಾರು ರಾಷ್ಟ್ರೀಯ ಹೆದ್ದಾರಿ 66ರ ತೆಂಕ ಎರ್ಮಾಳ್ ಸರಕಾರಿ ಶಾಲೆ ಮುಂಭಾಗದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಇಬ್ಬರಿಗೆ ಡಿಕ್ಕಿ ಹೊಡೆದಿದ್ದು, ಅಪಘಾತದ ತೀವ್ರತೆಗೆ ಇಬ್ಬರೂ ರಸ್ತೆಗೆಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಪಡುಬಿದ್ರಿ ಪೊಲೀಸರು ಧಾವಿಸಿ ತನಿಖೆ ನಡೆಸುತ್ತಿದ್ದಾರೆ.
ಪಾಂಗಾಳ : ಮೂರು ಹೆಬ್ಬಾವುಗಳ ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ ಯುವಕರ ತಂಡ
Posted On: 25 Dec 2020, 01:46 PM
ಕಾಪು : ಪಾಂಗಾಳದ ಮನೆಯ ಕೊಟ್ಟಿಗೆಯಲ್ಲಿ ಅವಿತುಕೊಂಡಿದ್ದ ಮೂರು ಹೆಬ್ಬಾವುಗಳನ್ನು ಶಿವಾನಂದ ಪೂಜಾರಿ ಯಾನೆ ಮುನ್ನ ಕಾಪು ನೇತೃತ್ವದ ತಂಡ ಗುರುವಾರ ಸಂಜೆ ಸೆರೆ ಹಿಡಿದು, ರಕ್ಷಿಸಿದೆ. ಪಾಂಗಾಳ ಗುಡ್ಡೆ ನಿವಾಸಿ ಆಲ್ವಿನ್ ಪ್ರಕಾಶ್ ಎಂಬವರ ಮನೆಯ ದನದ ಹಟ್ಟಿಯಲ್ಲಿ ಹೆಬ್ಬಾವು ಇರುವುದನ್ನು ಗಮನಿಸಿದ ಮನೆಯವರು ಈ ಬಗ್ಗೆ ಹಾವು ಹಿಡಿಯುವುದರಲ್ಲಿ ನಿಸ್ಸೀಮರಾಗಿರುವ ಶಿವಾನಂದ್ ಕಾಪು ಅವರಿಗೆ ಮಾಹಿತಿ ನೀಡಿದ್ದರು. ಹೆಬ್ಬಾವು ಇರುವ ಬಗ್ಗೆ ಮಾಹಿತಿ ಪಡೆದ ಶಿವಾನಂದ್ ಯಾನೆ ಮುನ್ನ ಕಾಪು, ಮಾಧವ ಪೂಜಾರಿ, ಸತೀಶ್, ಸಂದೀಪ್, ಉಮೇಶ್, ಪ್ರಕಾಶ್ ಅಲ್ವಿನ್, ಜಾರ್ಜ್ ಮತ್ತು ರವಿ ಬಿಂದಾಸ್ ಜೊತೆ ಸೇರಿ ಅಲ್ವಿನ್ ಅವರ ಮನೆಗೆ ಭೇಟಿ ನೀಡಿ ಮೂರೂ ಹೆಬ್ಬಾವುಗಳನ್ನು ರಕ್ಷಿಸಿದ್ದಾರೆ. ಹೆಬ್ಬಾವುಗಳನ್ನು ಸುರಕ್ಷಿತವಾಗಿ ಸೆರೆ ಹಿಡಿದ ಬಳಿಕ ಅರಣ್ಯ ಇಲಾಖೆಯ ಸಿಬಂದಿಗಳ ಸುಪರ್ದಿಗೆ ಒಪ್ಪಿಸಲಾಗಿದೆ.
ಕಟಪಾಡಿಯ ಬಾಲಕನಿಂದ ಪೇಪರ್ ಕಪ್ ಕ್ರಿಸ್ಮಸ್ ನಕ್ಷತ್ರ
Posted On: 23 Dec 2020, 10:26 PM
ವಿಶೇಷ ಸಂದರ್ಭಗಳಲ್ಲಿ ಜಾದೂ, ಕ್ರಾಫ್ಟ್, ಚಿತ್ರಕಲೆಯ ಮೂಲಕ ಏನಾದರೊಂದು ರಚಿಸುವ ಹೊಯ್ಸಳ ಪ್ರಶಸ್ತಿ ವಿಜೇತ ಬಾಲ ಜಾದೂಗಾರ ಕಟಪಾಡಿಯ ಪ್ರಥಮ್ ಕಾಮತ್ ಈ ಬಾರಿಯ ಕ್ರಿಸ್ಮಸ್ ಗೆ 3 ಅಡಿ ಎತ್ತರದ ಸುಮಾರು 400 ಪೇಪರ್ ಕಪ್ ಬಳಸಿ ವಿಶೇಷವಾದ ಕ್ರಿಸ್ಮಸ್ ನಕ್ಷತ್ರವೊಂದನ್ನು ತಯಾರಿಸಿದ್ದಾರೆ.
ಸಮಾಜಕ್ಕೆ ಮಾದರಿಯಾಗಿರುವ ಮಾಧವರಿಗೆ ಗೌರವ
Posted On: 23 Dec 2020, 10:20 PM
ಉಡುಪಿ : ಪೋಲಿಯೋ ಪಿಡಿತರಾಗಿ ಎರಡೂ ಕಾಲಿನ ಸ್ವಾಧೀನ ಕಳೆದುಕೊಂಡರೂ ಎದೆಗುಂದದೆ ಕಳೆದ 34 ವಷ೯ಗಳಿಂದ ಕೊರಂಗ್ರಪಾಡಿಯಲ್ಲಿ ಸೈಕಲ್ ರಿಪೇರಿ ಅಂಗಡಿ ನಡೆಸಿಕೊಂಡು ಮಾದರಿಯಾಗಿ ಜೀವನ ಸಾಗಿಸುತ್ತಿರುವ ಮಾಧವ ಕಾಂಚನ್ ರವರಿಗೆ ಸಕ್ಷಮ ಉಡುಪಿ ವತಿಯಿಂದ ವಿಶ್ವ ವಿಶೇಷ ಚೇತನರ ದಿನದ ಗೌರವ ಸಲ್ಲಿಸಲಾಯಿತು. ಡಿ.23ರಂದು ಅವರ ಸೈಕಲ್ ಅಂಗಡಿಯಲ್ಲಿ ನಡೆದ ಕಾಯ೯ಕ್ರಮದಲ್ಲಿ ಮಾತನಾಡಿದ ಸಮಾಜ ಸೇವಕ ವಿಶ್ವ ಸಂಸ್ಕೃತಿ ಪ್ರತಿಷ್ಟಾನದ ಗೌರವ ಅಧ್ಯಕ್ಷ ವಿಶ್ವನಾಥ್ ಶೆಣ್ಯ್ ಶ್ರೀಯುತರು ಪೋಲಿಯೋ ಪಿಡಿತರಾಗಿ ಕಾಲಿನ ಸ್ವಾಧೀನ ಕಳೆದುಕೊಂಡರೂ ಯಾರಿಗೂ ಭಾರವಾಗದೆ ಮಾದರಿಯಾದ ಜೀವನ ಸಾಗಿಸುತ್ತಿದ್ದಾರೆ.ಸಮಾಜದಲ್ಲಿ ಎಲ್ಲವೂ ಇದ್ದು ಕೆಲಸ ಮಾಡಿದೆ ಜೀವನ ದೂಡುವ ಜನರು ಇವರ ಬಗ್ಗೆ ತಿಳಿದುಕೊಳ್ಳಬೇಕಾಗಿದೆ ಎಂದರು. ಕಾಯ೯ಕ್ರಮದಲ್ಲಿ ನಿವೃತ್ತ ಬ್ಯಾಂಕ್ ಅಧಿಕಾರಿ ಪಾಂಡುರಂಗ ಶ್ಯಾನುಭಾಗ್, ಸ್ಪಂದನ ವಿಶೇಷ ಶಾಲೆಯ ಪ್ರಾಂಶುಪಾಲ ಜನಾಧ೯ನ್, ಸಕ್ಷಮಾ ಅಧ್ಯಕ್ಷೆ ಲತಾ ಭಟ್, ಕಾಯ೯ದಶಿ೯ ರಾಘವೇಂದ್ರ ಪ್ರಭು ಕವಾ೯ಲು, ಸ್ಥಳೀಯರು ಉಪಸ್ಥಿತರಿದ್ದರು.
ಕಂದನ ಸಹಾಯಕ್ಕಾಗಿ ವೇಷಧರಿಸಿದ ಮಹಾಗಣಪತಿ ಸೇವಾ ಟ್ರಸ್ಟ್ ಸದಸ್ಯರು
Posted On: 22 Dec 2020, 02:43 PM
ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿರುವ ಅಡ್ಯಾರ್ ಪದವಿನ ಸುರೇಶ್ ಹಾಗೂ ಅಂಬಿಕಾ ದಂಪತಿಯ 4 ವರ್ಷದ ಪುಟ್ಟ ಕಂದ ದರ್ಶನ್ ನ ಚಿಕಿತ್ಸೆಗೆ ಸರಿಸುಮಾರು ಹದಿನೈದು ಲಕ್ಷ ರೂಪಾಯಿಯ ಅಗತ್ಯವಿದ್ದು ದಂಪತಿಯ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿರುವುದು. ಸಂತ್ರಸ್ತರ ಅಳಲನ್ನು ಮನಗಂಡು ಮಹಾಗಣಪತಿ ಸೇವಾ ಟ್ರಸ್ಟ್ ನ ಸದಸ್ಯರು ಶಿಬರೂರು ಜಾತ್ರೆಯಲ್ಲಿ ಉರಿ ಬಿಸಿಲಿನ ಬೇಗೆಯ ನಡುವೆಯೂ ಮಹಿಷಾಸುರನ ವೇಷಧರಿಸಿ ದಾನಿಗಳಿಂದ ಸಹಾಯಹಸ್ತವನ್ನು ಚಾಚಿದರು. ಇವರ ಈ ಸೇವಾ ಕಾರ್ಯ ಇತರರಿಗೂ ಮಾದರಿ.
ಕೆ.ಎಲ್.ಕುಂಡಂತಾಯರ ಯಕ್ಷಗಾನದ ಅಂತರಂಗ - ಬಹಿರಂಗ ಪುಸ್ತಕ ಬಿಡುಗಡೆ
Posted On: 21 Dec 2020, 12:11 PM
ಉಚ್ಚಿಲ : ಯಕ್ಷಗಾನ ಗುರು ,ನಿವೃತ್ತ ಶಿಕ್ಷಕ ಎರ್ಮಾಳು ವಾಸುದೇವ ರಾಯರು ಉಚ್ಚಿಲದ ಹೋಟೆಲ್ ರಾಧಾದ ರಾಧಾ ಸಭಾಭವನದಲ್ಲಿ ಕೆ.ಎಲ್. ಕುಂಡಂತಾಯರ ಯಕ್ಷಗಾನದ ಅಂತರಂಗ - ಬಹಿರಂಗ ಪುಸ್ತಕವನ್ನು ಬಿಡುಗಡೆ ಗೊಳಿಸಿ ಶುಭಹಾರೈಸಿದರು .ನಿರಂತರ ಅಭ್ಯಾಸ , ಅಧ್ಯಯನ , ಓದು,ಸಾಧನೆ ಇವು ಯಕ್ಷಗಾನ ಕಲಾವಿದನಾಗ ಬೇಕಾದವರಿಗೆ ಅಗತ್ಯ ಎಂದು ವಾಸುದೇವರಾಯರು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಪ್ರಾಂಶುಪಾಲ ಸುದರ್ಶನ ವೈ .ಎಸ್. ಅವರು ವಹಿಸಿದ್ದರು . ಎಲ್ಲೂರುಗುತ್ತು ವೈ.ಪ್ರಫುಲ್ಲ ಶೆಟ್ಟಿ, ಪುಣೆ ಉದ್ಯಮಿ ಎರ್ಮಾಳು ನೈಮಾಡಿ ನಾರಾಯಣ ಕೆ.ಶೆಟ್ಟಿ, ಅದಮಾರು ಆದರ್ಶ ಸಂಘಗಳ ಒಕ್ಕೂಟದ ಅಧ್ಯಕ್ಷ ಎರ್ಮಾಳು ಉದಯ ಕೆ. ಶೆಟ್ಟಿ , ಎಲ್ಲೂರಿನ ಪಂಚಾಕ್ಷರೀ ಯಕ್ಷಗಾನ ಮಂಡಳಿಯ ಸಂಸ್ಥಾಪಕ ಶ್ರೀನಿವಾಸ ಉಪಾಧ್ಯಾಯ , ಕುಂಜೂರಿನ ಕೃಷಿಕ ಗುರುರಾಜ ಮಂಜಿತ್ತಾಯ ಉಪಸ್ಥಿತರಿದ್ದರು . ಈ ಸಂದರ್ಭದಲ್ಲಿ ಯಕ್ಷಗಾನ ಗುರು ಎರ್ಮಾಳು ವಾಸುದೇವರಾಯರಿಗೆ ಗುರು ವಂದನೆ ಸಮರ್ಪಿಸಲಾಯಿತು . ನೈಮಾಡಿ ನಾರಾಯಣ ಕೆ.ಶೆಟ್ಟಿ ಅವರನ್ನು ಗೌರವಿಸಲಾಯಿತು . ಗಣೇಶ ರಾವ್ ಎಲ್ಲೂರು ಸ್ವಾಗತಿಸಿ - ಪುಸ್ತಕ ಪರಿಚಯಿಸಿದರು ,ಸ್ನೇಹಾ ಎಸ್.ಕೆ. ಮತ್ತು ಸನ್ನಿಧಿಯವರ ಪ್ರಾರ್ಥನೆ ಯೊಂದಿಗೆ, ಗಣೇಶ ಸಾಲ್ಯಾನ್ ಕಾರ್ಯಕ್ರಮ ನಿರ್ವಹಿಸಿ, ನಾಗರಾಜ ಉಡುಪ ವಂದಿಸಿದರು.
ಕರಾವಳಿ ಮಿತ್ರ ವೃಂದ : ಸಾಮೂಹಿಕ ಸತ್ಯನಾರಾಯಣ, ಶನೀಶ್ವರ ಪೂಜೆ
Posted On: 20 Dec 2020, 07:27 PM
ಕಾಪು ಪಡು ಗ್ರಾಮದ ಕರಾವಳಿ ಮಿತ್ರ ವೃಂದದ ಆಶ್ರಯದಲ್ಲಿ 28ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಶ್ರೀ ಶನೀಶ್ವರ ಪೂಜೆಯು ಕಾಪು ಪಡು ಬೈರುಗುತ್ತು ತೋಟದ ವೇದಿಕೆಯಲ್ಲಿ ಡಿಸೆಂಬರ್ 26 ನೇ ತಾರೀಖು ಶನಿವಾರ ಬೆಳಿಗ್ಗೆ 8 ಕ್ಕೆ ಗಣಹೋಮದೊಂದಿಗೆ ಪ್ರಾರಂಭಗೊಂಡು ಸಾಮೂಹಿಕ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ, 2:30 ರಿಂದ ಶ್ರೀ ಶನೀಶ್ವರ ಪೂಜೆ ಸಂಜೆ 6 ಕ್ಕೆ ಮಂಗಲದೊಂದಿಗೆ ಪ್ರಸಾದ ವಿತರಣೆ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸ್ವರ್ಣಾರಾಧನಾ ಅಭಿಯಾನ: ಸ್ವಣಾ೯ರತಿ ಚಾಲನೆ
Posted On: 18 Dec 2020, 11:05 PM
ಉಡುಪಿ : ಎಣ್ಣೆಹೊಳೆ ದೇವಾಲಯದ ಸ್ವಣಾ೯ ನದಿಯ ತಟದಲ್ಲಿ ವೈಭವದ ಸ್ವಣಾ೯ರತಿ ಕಾಯ೯ಕ್ರಮ ಡಿ.18 ಶುಕ್ರವಾರ ನಡೆಯಿತು. ಗೋವಾ ಕೈವಲ್ಯ ಮಠಾಧೀಶರಾದ ಶ್ರೀ ಶಿವಾನಂದ ಸರಸ್ವತಿ ಸ್ವಾಮಿ ಮಹಾರಾಜ್ ರವರು ದೇವಾಲಯದ ಎದುರು ಬಿಲ್ವ ಗಿಡಗಳನ್ನು ನೆಡುವುದರ ಮೂಲಕ ಚಾಲನೆ ನೀಡಿದರು.ನಂತರ ನದಿ ತೀರದಲ್ಲಿ ವೈಭವದ ಸ್ವಣಾ೯ರತಿ ಕಾಯ೯ ನಡೆಯಿತು. ಈ ಸಂದಭ೯ ಸ್ವಾಮೀಜಿಯವರು ಯೋಜನೆಯು ಅತ್ಯಂತ ಯಶಸ್ವಿಯಾಗಲೆಂದು ಆಶೀವ೯ಚನ ನೀಡಿದರು. ಕಾಯ೯ಕ್ರಮದಲ್ಲಿ ಅಭಿಯಾನದ ಪ್ರಮುಖರಾದ ಡಾII ನಾರಾಯಣ ಶೆಣ್ಯ್ , ಪ್ರಭಾಕರ ಭಟ್ ದೇವಾಲಯದ ಆಡಳಿತ ಮಂಡಳಿಯ ಸದಸ್ಯರು ಭಾಗವಹಿಸಿದ್ದರು. ರಾಘವೇಂದ್ರ ಪ್ರಭು,ಕವಾ೯ಲು ನಿರೂಪಿಸಿದರು. ಸ್ವಣಾ೯ ನದಿಯ ಪಾವಿತ್ರ್ಯ ಮತ್ತು ಸ್ವಚ್ಚತೆಯನ್ನು ಕಾಪಾಡಲು ಈ ನದಿಯ ದಡದಲ್ಲಿ ಬದುಕುತ್ತಿರುವ , ಈ ನದಿಯ ನೀರನ್ನು ಉಪಯೋಗಿಸುತ್ತಿರುವ ಜನರನ್ನು ಪ್ರೇರೇಪಿಸಿ ಅವರಲ್ಲಿ ಈ ಬಗ್ಗೆ ಜಾಗೃತಿ ಮಾಡುವುದು ಈ ಅಭಿಯಾನದ ಧ್ಯೇಯ. ಅ. 2 ರಿಂದ ಪ್ರಾರಂಭವಾದ ಈ ಅಭಿಯಾನ ಎಪ್ರಿಲ್ 13 ರ ಸೌರಯುಗಾದಿಯಂದು ಸಮಾರೋಪ ನಡೆಯುವುದು. ಅಭಿಯಾನದ ಪ್ರಮುಖ ಆಯಾಮಗಳಾದ ಸ್ವಚ್ಚತೆ, ನದೀತಟ ಪ್ರದೇಶದ ಹಸಿರೀಕರಣ, ವೃಕ್ಶಾರೋಪಣ, ಶಾಲಾಮಕ್ಕಳಿಗೆ ನದಿಯ ಬಗ್ಗೆ ರಸಪ್ರಶ್ನೆ , ಇಕೊಬ್ರಿಕ್ ತಯಾರಿಸಲು ತರಬೇತಿ , ಉಡುಪಿ ನಗರದಲ್ಲಿ ವಾರ್ಡ್ ಸ್ತರದಲ್ಲಿ ಹಸಿರೀಕರಣ, ಜಲ ಸಂರಕ್ಶಣೆ, ಸ್ವಚ್ಚತಾ ಕಾರ್ಯಕ್ರಮಗಳು , ಸಾಮಾಜಿಕ ಜಾಲತಾಣಗಳಲ್ಲಿ ಸ್ವರ್ಣಾ ನದಿಯ ಮಹತ್ವ ಸಾರುವ ಪೊಸ್ಟರ್, ವೀಡಿಯೋಗಳಿಂದ ಜನಜಾಗ್ರತಿ. ಮಾಡುದಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
