Updated News From Kaup
ಫೆಬ್ರವರಿ 25 : ಸಾಂತೂರು ಕೊಡಂಗಲ ಶ್ರೀ ಬ್ರಹ್ಮ ಬೈದರ್ಕಳ ಗರಡಿ ವಾರ್ಷಿಕ ನೇಮೋತ್ಸವ
Posted On: 09 Feb 2021, 05:02 PM
ಸಾಂತೂರು ಕೊಡಂಗಲ ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ವರ್ಷಂಪ್ರತಿ ಜರಗುವ ವಾರ್ಷಿಕ ನೇಮೋತ್ಸವವು ಫೆಬ್ರವರಿ 25, ಗುರುವಾರ ನಡೆಯಲಿದೆ. 23 ರಂದು ರಾತ್ರಿ ಗಂಟೆ 8:30ಕ್ಕೆ ಹಸಿರುವಾಣಿಯೊಂದಿಗೆ ಗರಡಿ ಪ್ರವೇಶ, 24 ರಂದು ಬೆಳಿಗ್ಗೆ 8ಕ್ಕೆ ನವಕ ಪ್ರಧಾನ ಹೋಮ, ರಾತ್ರಿ 6:30 ಕ್ಕೆ ಅಗೆಲು ಸೇವೆ. 25 ರಂದು ರಾತ್ರಿ 7ಕ್ಕೆ ವಾರ್ಷಿಕ ನೇಮೋತ್ಸವ, ರಾತ್ರಿ 8:30ಕ್ಕೆ ಶ್ರೀ ವಿಠಲ ಪೂಜಾರಿ ಮತ್ತು ಕರುಣಾಕರ ಪೂಜಾರಿ ಗರಡಿಮನೆ ಸಾಂತೂರು ಇವರ ವತಿಯಿಂದ ಸಾರ್ವಜನಿಕ ಅನ್ನಸಂತರ್ಪಣೆ, 26ರಂದು ಬೆಳಿಗ್ಗೆ 4ಕ್ಕೆ ಮಾಯಂದಾಲ್ ನೇಮೋತ್ಸವ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕಾಪು : ಮನೆಗೋಡೆ ಕುಸಿತ, ಲಕ್ಷಾಂತರ ರೂಪಾಯಿ ನಷ್ಟ
Posted On: 09 Feb 2021, 04:15 PM
ಕಾಪು ಪಡು ಗ್ರಾಮದ ವನಜಾ ಪೂಜಾರ್ತಿಯವರ ಮನೆಯ ಹಿಂಭಾಗದ ಗೋಡೆ ಸೋಮವಾರ ಮುಂಜಾನೆ ಕುಸಿದಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತು ನಷ್ಟ ಅಂದಾಜಿಸಲಾಗಿದೆ. ಈ ಸಂದರ್ಭ ಮನೆಯೊಡತಿ, ಅವರ ಗಂಡ ಮತ್ತು ಮಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆಶ್ರಯವಾಗಿದ್ದ ಮನೆಯ ಗೋಡೆ ಕುಸಿತಗೊಂಡಿದ್ದರಿಂದ ಈ ಕುಟುಂಬ ತೊಂದರೆಗೊಳಗಾಗಿದೆ.
ಉಡುಪಿಯ ಲಚ್ಚಿಲ್, ಪುತ್ತೂರಿನಲ್ಲಿ 13 ರಂದು ಮಂತ್ರ ದೇವತಾ ಸನ್ನಿಧಿಯಲ್ಲಿ ವಾರ್ಷಿಕ ನೇಮೋತ್ಸವ
Posted On: 09 Feb 2021, 03:58 PM
ಉಡುಪಿಯ ಲಚ್ಚಿಲ್, ಪುತ್ತೂರಿನ ಶ್ರೀ ಮಂತ್ರ ದೇವತಾ ಸನ್ನಿಧಿಯಲ್ಲಿ ಶನಿವಾರ ವಾರ್ಷಿಕ ನೇಮೋತ್ಸವ ಜರಗಲಿದೆ. ರಾತ್ರಿ 8 ಗಂಟೆಗೆ ಅನ್ನಸಂತರ್ಪಣೆ ಮತ್ತು ರಾತ್ರಿ ಗಂಟೆ 9 ರಿಂದ ನೇಮೋತ್ಸವ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ದೊಡ್ಡಣಗುಡ್ಡೆ ಪಂಚ ಜುಮಾದಿ ದೈವಸ್ಥಾನದ ಬಿಲ್ಲವ ಸಮುದಾಯದ ನೂತನ ಗುರಿಕಾರರಾಗಿ ನಿತಿನ್ ಪೂಜಾರಿ ಆಯ್ಕೆ
Posted On: 09 Feb 2021, 03:42 PM
ದೊಡ್ಡಣಗುಡ್ಡೆ ಪಂಚ ಜುಮಾದಿ ದೈವಸ್ಥಾನದ ಮಕರ ತಿಂಗಳ ಮಾರಿ ಪೂಜೆ, ಪಂಚ ಜುಮಾದಿ ದೈವದ ದರ್ಶನ ಸೇವೆ ಬೆಳಗ್ಗಿನಿಂದ ರಾತ್ರಿಯವರೆಗೆ ಊರು ಪರವೂರಿನ ಭಕ್ತಾದಿಗಳು ಗಂಧ ಪ್ರಸಾದವನ್ನು ಸ್ವೀಕರಿಸಿ ದೈವದ ಕೃಪೆಗೆ ಪಾತ್ರರಾಗುವ ಮೂಲಕ ಸಂಪನ್ನಗೊಂಡಿತು. ಈ ಸಂದರ್ಭ ದೊಡ್ಡಣಗುಡ್ಡೆ ಪಂಚ ಜುಮಾದಿ ದೈವಸ್ಥಾನದ ಬಿಲ್ಲವ ಸಮುದಾಯದ ನೂತನ ಗುರಿಕಾರರಾಗಿ ನಿತಿನ್ ಪೂಜಾರಿ ಅವರನ್ನು ಎಲ್ಲರ ಒಪ್ಪಿಗೆಯ ಮೇರೆಗೆ ಆಯ್ಕೆ ಮಾಡಲಾಯಿತು. ದೈವದ ಅನುಗ್ರಹ ಮತ್ತು ಪ್ರಸಾದದೊಂದಿಗೆ ಅಧಿಕಾರ ಸ್ವೀಕಾರ ಮಾಡಿದರು. ಈ ಸಂದರ್ಭದಲ್ಲಿ ಊರಿನ ಹಿರಿಯರು ಹಾಗೂ ಆಡಳಿತ ಮಂಡಳಿಯ ಮುಖ್ಯಸ್ಥರು ಯು. ಬಿ. ಅಜಿತ್ ಕುಮಾರ್, ಸದಸ್ಯರಾದ ಗೋಪಾಲ ಶೆಟ್ಟಿ, ಶಿವ ಪಾಲನ್, ಸುರೇಶ್ ಪೂಜಾರಿ, ಕೆ. ಯಾದವ್, ಯು. ಗಣೇಶ್, ಪ್ರಕಾಶ್ ಶೆಟ್ಟಿ, ನಿತ್ಯಾನಂದ ಜೋಗಿ, ದಿನೇಶ್ ಬಂಗೇರ, ಉದಯ ನಾಯ್ಕ್ ಹಾಗೂ ದೈವಸ್ಥಾನದ ಅರ್ಚಕರಾದ ವಿನೋದ್ ಶೆಟ್ಟಿ, ವಿಜಯ್ ಶೆಟ್ಟಿ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು
ಅಭಿವೃದ್ಧಿಗಾಗಿ ಕಾಯುತ್ತಿರುವ ಟ್ಯಾಪ್ ಮೀ ಹಿರೇಬೆಟ್ಟು ಸಂಪಕ೯ ರಸ್ತೆ
Posted On: 09 Feb 2021, 02:49 PM
ಕಾಪು ವಿಧಾನ ಸಭಾ 80 ಬಡಗಬೆಟ್ಟು ಪಂಚಾಯತ್ ವ್ಯಾಪ್ತಿಯ ಪ್ರಮುಖ ರಸ್ತೆ ಟ್ಯಾಪ್ಮೀ - ಹಿರೇಬೆಟ್ಟು ಸಂಪಕಿ ೯ಸುವ ಈ ರಸ್ತೆಯು ಸಂಪೂಣ೯ ನಾ ದುರಸ್ತಿಯಲ್ಲಿದೆ.ಕಳೆದ ಒಂದು ವಷ೯ದಿಂದ ಈ ರಸ್ತೆಯು ಸಂಪೂಣ೯ ಹಾಳಾಗಿದ್ದು ಡಾಮರ್ ರಸ್ತೆ ಇದೀಗ ಮಣ್ಣಿನ ರಸ್ತೆಯಾಗಿ ಪರಿವತ೯ನೆಯಾಗಿದೆ. ವಿಶ್ವವಿಖ್ಯಾತ ವಿದ್ಯಾಸಂಸ್ಥೆ ಅದೇ ರೀತಿ ಸಾಲು ಮರದ ತಿಮ್ಮಕ್ಕ ಉದ್ಯಾನವನ ಸಂಪಕಿ೯ಸುವ ಈ ರಸ್ತೆಯ ಬಗ್ಗೆ ಜನಪ್ರತಿನಿಧಿಗಳು ಮೌನವಹಿಸಿರುವುದು ಬೇಸರದ ವಿಚಾರ. ರಸ್ತೆಯಲ್ಲಿ ವಾಹನಗಳು ಬಿಡಿ ನಡೆದಾಡಲು ತೊಂದರೆಯಾಗಿದೆ. ಧೂಳಿನಿಂದ ರಸ್ತೆಯಲ್ಲಿ ಸಂಚರಿಸುವುದು ದುಸ್ತರವಾಗಿದೆ. ಈ ರಸ್ತೆಯನ್ನು ಅವಲಂಬಿಸಿರುವವರು ಸಾವಿರಾರು ಮಂದಿ ಹಿಡಿ ಶಾಪ ಹಾಕುವ ಪರಿಸ್ಥಿತಿ ನಿಮಾ೯ಣವಾಗಿದೆ. ಆದಷ್ಟು ಬೇಗ ಸಂಬಂಧಿಸಿದ ಜನಪ್ರತಿನಿಧಿ ಅಧಿಕಾರಿಗಳು ರಸ್ತೆಯ ದುರಸ್ತಿಯ ಬಗ್ಗೆ ಗಮನ ಹರಿಸಬೇಕಾಗಿದೆ ಎಂದು ಗ್ರಾಮಸ್ಥರ ಪರವಾಗಿ ಸಾಮಾಜಿಕ ಚಿಂತಕ ರಾಘವೇಂದ್ರ ಪ್ರಭು, ಕವಾ೯ಲು ತಿಳಿಸಿದ್ದಾರೆ.
ಟೆಕ್ ನ್ಯೂಸ್ ಲೋಗೋ ಲೋಕಾರ್ಪಣೆ
Posted On: 07 Feb 2021, 08:19 PM
ಯೂಟ್ಯೂಬ್ ನಲ್ಲಿ ಹೊಸ Tech channel ಬರುತ್ತಿದ್ದು ಇದರ ಹೊಸ ಲೋಗೊವನ್ನು ಇಂದು ಸಂಸ್ಕೃತ ಸಿರಿ ಪೇಜ್ ನಲ್ಲಿ ಬಿಡುಗಡೆ ಮಾಡಲಾಯಿತು. ಉದ್ಘಾಟನೆಯನ್ನು
ಅಂತರಾಷ್ಟೀಯ ಸೈಮಾ ಪ್ರಶಸ್ತಿ ಪುರಸ್ಕೃತೆ ಶ್ಲಾಘ ಸಾಲಿಗ್ರಾಮ ರವರು ಮಾಡಿದ್ದು ವಿಶೇಷವಾಗಿತ್ತು.
ಇಂದು ಲೋಕಾರ್ಪಣೆಗೊಂಡ ಟೆಕ್ ನ್ಯೂಸ್ ಇನ್ನು ಮುಂದೆ ಪ್ರತೀ ಭಾನುವಾರ ಬೆಳಗ್ಗೆ 9 ಘಂಟೆಗೆ ವಾರದ ಪ್ರಮುಖ ಹತ್ತು ಸುದ್ದಿಗಳನ್ನು ನೀಡಲಿದೆ ಜೊತೆಗೆ ಮುಂದಿನ ದಿನಗಳಲ್ಲಿ ಗೇಮಿಂಗ್ , Unbox , ಹಾಗೂ ಸಮಾಜಕ್ಕೆ ಡಿಜಿಟಲ್ ಮಾಧ್ಯಮದ ಮೂಲಕ ಅವಶ್ಯಕ ಸೇವೆಗಳನ್ನೂ ಒದಗಿಸಲಿದೆ.
ಈ ಹೊಸ ಚಾನೆಲ್ಗೆ ಶುಭಹಾರೈಕೆ ಇರಲಿ
ಚಾನೆಲ್ Subscribe ಮಾಡಲು ಮರೆಯಬೇಡಿ
Youtube Link :-
Click here
Click here
ಕಾಪು : ಶ್ರೀರಾಮ ಜನ್ಮಭೂಮಿ ನಿಧಿ ಸಮರ್ಪಣೆ
Posted On: 07 Feb 2021, 04:03 PM
ಶ್ರೀರಾಮ ಜನ್ಮ ಭೂಮಿ ನಿಧಿ ಸಮರ್ಪಣಾ ಅಭಿಯಾನ ದ ಕಾಪು ಕೋತಲ್ ಕಟ್ಟೆ ವಾರ್ಡ್ ನ ಎಲ್ಲಾ ಮನೆ ಮನೆಗಳಿಗೆ ಭೇಟಿ ನೀಡಿ ಶ್ರೀರಾಮ ಜನ್ಮ ಭೂಮಿಗೆ ಭಕ್ತಿಯಿಂದ ನೀಡಿದ ದೇಣಿಗೆಯನ್ನು ಇಂದು ಕಾಪು ವಲಯದ ರಾಮಜನ್ಮಭೂಮಿ ನಿಧಿ ಸಮರ್ಪಣಾ ಸಂಘಟಕರಿಗೆ ಇಂದು ಹಸ್ತಾಂತರಿಸಲಾಯಿತು.
ಯುವವಾಹಿನಿ (ರಿ.) ಪಡುಬಿದ್ರಿ ಘಟಕ : ವಿದ್ಯಾರ್ಥಿ ವೇತನ ವಿತರಣೆ
Posted On: 07 Feb 2021, 01:34 PM
ಮಕ್ಕಳಿಗೆ ಹೆತ್ತವರು ಅಂಕದ ಜೊತೆಗೆ ಮೌಲ್ಯಾಧಾರಿತ ಶಿಕ್ಷಣ ನೀಡಿ ಜೊತೆಗೆ ಸಂಸ್ಕೃತಿಯನ್ನು ತಿಳಿಸಿ, ಬೆಳೆಸಬೇಕಾದ ಅನಿವಾರ್ಯತೆಯಿದೆ. ಯುವವಾಹಿನಿ ಪಡುಬಿದ್ರಿ ಘಟಕವು ಯುವವಾಹಿನಿಯ ಧ್ಯೇಯವಾದ ವಿದ್ಯೆಗೆ ಮಹತ್ವ ನೀಡುವ ಕಾರ್ಯಕ್ರಮವನ್ನು ಆಯೋಜಿಸಿರುವುದು ಅಭಿನಂದನೀಯ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಒಂದನೆಯ ಉಪಾಧ್ಯಕ್ಷರಾದ ಉದಯ ಅಮೀನ್ ಮಟ್ಟು ಹೇಳಿದರು. ಅವರು ಪಡುಬಿದ್ರಿ ಬಿಲ್ಲವ ಸಂಘದಲ್ಲಿ ಜರಗಿದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ಆಶ್ರಯದಲ್ಲಿ ನಡೆದ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು. ಅತಿಥಿಯಾಗಿ ಆಗಮಿಸಿದ ಲಯನ್ಸ್ ಕ್ಲಬ್ ಪಡುಬಿದ್ರಿಯ ನಿಕಟಪೂರ್ವ ಅಧ್ಯಕ್ಷರಾದ ಲಕ್ಷ್ಮಣ ಡಿ. ಪೂಜಾರಿ ಮಾತನಾಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ಸ್ಪೂರ್ತಿ ನೀಡುವ ಇಂತಹ ಕಾರ್ಯ ಶ್ಲಾಘನೀಯ, ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿದರು. ವಿದ್ಯಾರ್ಥಿ ವೇತನ ವಿತರಣೆ :ಪಿಯುಸಿಯಲ್ಲಿ ವಿಶಿಷ್ಟ ಶ್ರೇಣಿಯನ್ನು ಪಡೆದ ಹಿತಾಕ್ಷಿ, ಎಸ್ಸೆಸ್ಸೆಲ್ಸಿಯಲ್ಲಿ ವಿಶಿಷ್ಟ ಶ್ರೇಣಿ ಪಡೆದ ಶ್ರಾವ್ಯ ಆರ್. ಅಂಚನ್, ಸ್ಫೂರ್ತಿ ವೈ. ಕೋಟ್ಯಾನ್, ಶ್ರೇಯಸ್ ಪೂಜಾರಿ, ಶ್ರವಣ್ ಕುಮಾರ್, ವೃಶಾಲಿ ಎ. ಪೂಜಾರಿ, ಗೌರಿಕಾ ಜಿ. ಕುಕ್ಯಾನ್ ರಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ಅಧ್ಯಕ್ಷರಾದ ಚಿತ್ರಾಕ್ಷಿ ಕೆ. ಕೋಟ್ಯಾನ್ ವಹಿಸಿದ್ದರು. ವಿದ್ಯಾರ್ಥಿವೇತನದ ಮಹಾ ಪೋಷಕರಾದ ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ಸದಸ್ಯರಾದ ರಮೇಶ್ ಪಿ.ಬಿ ಯವರನ್ನು ಅಭಿನಂದಿಸಲಾಯಿತು. ಸಮಾರಂಭದಲ್ಲಿ ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ನಿಕಟಪೂರ್ವ ಅಧ್ಯಕ್ಷರಾದ ಹಾಗೂ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿಯಾದ ಯೋಗೇಶ್ ಪೂಜಾರಿ ಮಾದುಮನೆ, ಘಟಕದ ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ಅಧ್ಯಕ್ಷರಾದ ಚಿತ್ರಾಕ್ಷಿ ಕೆ. ಕೋಟ್ಯಾನ್ ಸ್ವಾಗತಿಸಿ, ಘಟಕದ ವಿದ್ಯಾನಿಧಿ ಸಂಚಾಲಕರಾದ ಡಾ. ಐಶ್ವರ್ಯ ಸಿ. ಅಂಚನ್ ಮತ್ತು ನಿಶ್ಮಿತ ಪಿ.ಎಚ್ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಶಾಶ್ವತ್ ಎಸ್. ವಂದಿಸಿದರು.
ಕೆ.ಎಲ್.ಕುಂಡಂತಾಯರ ಯಕ್ಷಗಾನದ ಅಂತರಂಗ - ಬಹಿರಂಗ : ಪುಸ್ತಕಕ್ಕೆ ವಿದ್ವಾಂಸರ ಪ್ರತಿಕ್ರಿಯೆಗಳು
Posted On: 07 Feb 2021, 01:04 PM
ಕರಾವಳಿ ಕನ್ನಡ ಜಿಲ್ಲೆಯವರಿಗೆ ಅತ್ಯಂತ ಇಷ್ಟವಾದ ರಂಗಕಲೆ ಯಕ್ಷಗಾನದ ಬಗೆಗೆ ಹೊಸಹೊಸ ಬರಹಗಳು ಬರುತ್ತಲೇ ಇರಬೇಕು.ಹೊಸಕಾಲಕ್ಕೆ ಅರ್ಥವಾಗುವ ಮಾತು ಬರುವುದು ಅವಶ್ಯ.ನಮ್ಮ ಕಾಲಕ್ಕೆ ನಮ್ಮ ನುಡಿ ಅನೇಕರಿಗೆ ಪ್ರೇರಣೆ ನೀಡಿದೆ ಎಂಬುದಕ್ಕೆ ಮಿತ್ರರಾದ ಕೆ.ಎಲ್.ಕುಂಡಂತಾಯರಂಥ ಅನೇಕ ಕಲಾಸಕ್ತರು ಅಧ್ಯಯನಶೀಲರಾಗಿ ರಂಗದ ಒಳ - ಹೊರಗನ್ನು ಆಳವಾಗಿ ತಿಳಿದು ಪ್ರವರ್ತಿಸಿದರೆಂಬುದೇ ಪುರಾವೆ , ಇದಕ್ಕೆ ಇನ್ನಷ್ಟು ಬಲವಾದ ಸಾಕ್ಷ್ಯ ಈ ಹೊತ್ತಿಗೆ - ಕುಂಡಂತಾಯರ ಯಕ್ಷಗಾನದ ಅಂತರಂಗ - ಬಹಿರಂಗ. ಪ್ರಸ್ತುತ ಪುಸ್ತಕ - ಆರು ಸಂದರ್ಶನಾಧಾರಿತ ಲೇಖನಗಳು ,ರಂಗ ಸಮೀಕ್ಷೆಗೆ ಸಂಬಧಿಸಿದ ಹನ್ನೊಂದು ಲೇಖನಗಳು ಮತ್ತು ಮುಂಬಯಿಯ ಯಕ್ಷಗಾನ ಸಾಹಿತ್ಯ ಸಮ್ಮೇಳನದಲ್ಲಿ ಕುಂಡಂತಾಯರು ಮಾಡಿದ ಅಧ್ಯಕ್ಷ ಭಾಷಣ ಹೀಗೆ ಹದಿನೆಂಟು ಲೇಖನಗಳ ಸಮಾಹಾರವಿದೆ. ಯಕ್ಷಗಾನದ ಸಮಕಾಲೀನ ಸ್ಥಿತಿಗತಿಯ ಕುರಿತ ಒಂದು ಕಿರಿದಾದರೂ ಮಹತ್ವದ ದಾಖಲಾತಿ ಇದು. ಬಾಯಾರಿದವನಿಗೆ ಎಳನೀರಿನ ಹಾಗೆ ಅರಿವಿನಿಂದ ತೃಪ್ತಿಕೊಡುವ ಕೃತಿಯಿದು.ಇದನ್ನು ಜನತೆ ಭಾವನಾತ್ಮಕವಾಗಿ ಓದಿ ಅರ್ಥಮಾಡಿಕೊಂಡು ತಮ್ಮ ಪಾಲಿನ ಕೊಡುಗೆ ನೀಡಲಿ .ಆ ಮೂಲಕ ಯಕ್ಷಗಾನ ಇನ್ನಷ್ಟು ಕೀರ್ತಿಶಾಲಿ ಆಗಬೇಕೆಂದು ಹಾರಯಿಸುತ್ತೇನೆ. ( ಮುನ್ನುಡಿಯಲ್ಲಿ) ಡಾ.ಕೆ.ಎಂ. ರಾಘವ ನಂಬಿಯಾರ್ (ಯಕ್ಷಗಾನ ವಿದ್ವಾಂಸರು - ಸಂಶೋಧಕರು) •"ಯಕ್ಷಗಾನದ ಅಂತರಂಗ ಬಹಿರಂಗ" ಒಂದು ವಿಶಿಷ್ಟ ಸಂಕಲನ. ಯಕ್ಷಗಾನದ ಕುರಿತು ಹಲವು ಕೃತಿಗಳು ಹೊರಬರುತ್ತಿದ್ದರೂ ಈ ಪುಸ್ತಕಕ್ಕೆ ಪ್ರತ್ಯೇಕತೆ ಇದೆ. ಕಲೆಯ ಇತಿಹಾಸ,ವಿದ್ಯಮಾನ, ವಿಶಿಷ್ಟ ಸಂಗತಿಗಳ ಬಗೆಗೆ ಮಾಹಿತಿ - ಅಭಿಮತ - ವಿಶ್ಲೇಷಣೆಗಳು ಒಟ್ಟಾಗಿದೆ . ಸಂದರ್ಶನಗಳು ಪ್ರಸ್ತಾವಗಳ ದಾಖಲಾತಿಗಳು ಅಪೂರ್ವ.ಇತಿಹಾಸದ ಮಾಹಿತಿ ಸಂಶೋಧನೆಗೆ ದ್ರವ್ಯ ನೀಡಿವೆ . ಪುನಾರಚನೆ ,ಪರಿಷ್ಕಾರ,ವಿಸ್ತಾರ ಕುರಿತಾದ ತೂಕದ ಅಭಿಮತಗಳಿವೆ .ವಿಶಿಷ್ಟರೆನಿಸದ ಮಹಾನ್ ಸಾಧಕ ಎರ್ಮಾಳು ವಾಸುದೇವ ರಾಯರ ಪರಿಚಯ ಪುಣ್ಯದ ಕಾರ್ಯ . ಡಾ.ರಾಘವ ನಂಬಿಯಾರ್ ಅವರ ಮುನ್ನುಡಿ ಪುಸ್ತಕಕ್ಕೆ ನ್ಯಾಯ ಒದಗಿಸಿದೆ. ಚೊಕ್ಕ ,ಸರಳ ನಿರೂಪಣೆ ಇತ್ಯಾತ್ಮಕ ಆಸಕ್ತಿ ಪ್ರೇರಕ ಗ್ರಂಥ.ಮುಖಚಿತ್ರದಲ್ಲೂ ಹೊಸತನದ ದಾರಿ ಇದೆ.ಕೆಲವು ವಿವರಣೆಗಳು ಇನ್ನಷ್ಟು ಬೇಕಿತ್ತು. ಡಾ.ಎಂ.ಪ್ರಭಾಕರ ಜೋಷಿ. (ಯಕ್ಷಗಾನ ವಿದ್ವಾಂಸರು, ಸಂಶೋಧಕರು ) • ಶ್ರೀ ಕೆ.ಎಲ್.ಕುಂಡಂತಾಯರ ಹೊಸಕೃತಿ 'ಯಕ್ಷಗಾನದ ಅಂತರಂಗ- ಬಹಿರಂಗ' ಓದಿ ಆನಂದವಾಯಿತು. ಅದರ ಮೊದಲ ಭಾಗ ಕಲಾಭಿಜ್ಞರ ಸಂದರ್ಶನಕ್ಕೆ ಮೀಸಲು. ಅದರ ಒಟ್ಟು ಸಾರ ಯಕ್ಷಗಾನದ. ಮೂಲಸೌಂದರ್ಯವನ್ನು ಕಾಪಾಡಿಕೊಳ್ಳುವುದು ಹೇಗೆಂಬುದೇ ಆಗಿದೆ. ಎರಡನೆಯ ಭಾಗವಂತೂ ಲೇಖಕರ ಬಹುಕಾಲದ ಚಿಂತನೆಯಾದ 'ಯಕ್ಷಗಾನ ರಂಗದ ಪುನಾರಚನೆ'ಯ ಕುರಿತ ಗಹನ ವಿಚಾರಗಳನ್ನು ಕುರಿತಾಗಿದೆ. ದೀವಟಿಗೆ ಬೆಳಕಿನ ಆಟ, ಪತ್ರಿಕೆಗಳಲ್ಲಿ ಯಕ್ಷಗಾನ, ಶೇಣಿಯವರ ಅರ್ಥಶ್ರೇಣಿ, ಯಕ್ಷಗಾನದಲ್ಲಿ ಪರಿಷ್ಕರಣ, ರಾಗವಿಸ್ತಾರ ಮುಂತಾದ ಶಿರೋನಾಮೆಗಳಲ್ಲಿ ಕಿರಿದಾದರೂ ಹಿರಿದಾದ ವಿಷಯಗಳನ್ನು ಅಡಕಗೊಳಿಸಿದ್ದಾರೆ. ಕಟೀಲು ಮೇಳಗಳು ಹೊರಡುವ ಸಡಗರ ದಾಖಲಾತಿಯ ದೃಷ್ಟಿಯಿಂದ ಮಹತ್ವಪಡೆಯುತ್ತದೆ. ಪ್ರಸಂಗಪಠ್ಯದ ಅವಲಂಬನೆ ಎಷ್ಟು ಮತ್ತು ಹೇಗೆ ಎಂಬುದು ತೀರ್ಮಾನವಾಗದ ಜಟಿಲ ಸಮಸ್ಯೆ. ಆ ಲೇಖನ ನನ್ನನ್ನು ಸದಾ ಕಾಡುತ್ತಿದೆ. ಒಂದು ಒಳ್ಳೆಯ ಕೃತಿಯ ಲಕ್ಷಣ ಇದೇ ತಾನೆ? ಪುಟಗಳು ಮುಗಿದರೂ ವಿಚಾರಗಳು ಪುಟಗೊಳ್ಳುವ ಹಾಗೆ ಮಾಡುವ ಕೃತಿಯೇ ಸತ್ಕೃತಿ. ಕುಂಡಂತಾಯರ ಕೃತಿ ಈ ತೆರನಾದುದು ಎನ್ನಬೇಕು. ಡಾ. ವಸನ್ತ ಭಾರದ್ವಾಜ ,ಕಬ್ಬಿನಾಲೆ. ( ಯಕ್ಷಗಾನ ವಿದ್ವಾಂಸರು , ಸಂಶೋಧಕರು) • ಪುಸ್ತಕ ಓದಲು ಖುಷಿ ಆಗುತ್ತದೆ. ಯಕ್ಷಗಾನ ಕ್ಷೇತ್ರಕ್ಕೆ ಪತ್ರಕರ್ತರು ಬಂದರೆ ಅಪರೂಪದ ಅನುಭವಗಳ ಕ್ರೋಢೀಕರಣ ಆಗುತ್ತದೆ ಎನ್ನುವುದಕ್ಕೆ ನೀವು ಸಾಕ್ಷಿ. ಮತ್ತೊಬ್ಬರು ನಮ್ಮ ರಾ.ನಂ. ನಿಮ್ಮ ಮನೆಯಲ್ಲೇ ಆ ಕಲೆ ಬೆಳೆದುಕೊಂಡು ಬಂದಿತ್ತೆಂದು ಈಗಲೇ ಗೊತ್ತಾದದ್ದು. ನಿಮ್ಮ ಪಿಜ್ಜ ಘೋರಶೂರ್ಪನಖೆಯಾಗಿ ತಾಳಮದ್ದಳೆಗೆ ಬಂದು ಕೂರುವ ದೃಶ್ಯವನ್ನು ಕಲ್ಪಿಸಿ ಮುದಗೊಂಡೆನು.ನಿಮ್ಮ ಸ್ವಂತ ವಿಚಾರಗಳು ಆನುಭಾವಿಕ ನೆಲೆಯಿಂದ ದಾಖಲಾಗಿವೆ. ಅವೂ ಮುಖ್ಯ. ಪುಸ್ತಕಕ್ಕೆ ಶುಭಕೋರುವೆ. ಇದರ ಯೋಗ್ಯತೆ ಗುರುತಿಸಲ್ಪಡಲಿ. - ಡಾ.ಬಿ .ಜನಾರ್ದನ ಭಟ್ (ವಿಮರ್ಶಕ ,ಸಾಹಿತಿ, ಕವಿ)
ಮೇರಮಜಲು ಗ್ರಾಮದಲ್ಲಿ ಜೆ.ಜೆ.ಎಂ ಕಾರ್ಯಚಟುವಟಿಕೆ
Posted On: 06 Feb 2021, 11:13 PM
ಬಂಟ್ವಾಳ ತಾಲೂಕಿನ ಮೇರಮಜಲು ಗ್ರಾಮ ಪಂಚಾಯತ್ ನಲ್ಲಿ ಶನಿವಾರದಂದು ಜೀವನ್ ಮಿಷನ್ ಕಾರ್ಯಚಟುವಟಿಕೆಯಾದ ಗ್ರಾಮೀಣ ಸಹಭಾಗಿತ್ವ ಕಾರ್ಯಕ್ರಮಗಳನ್ನು ನಡೆಸಲಾಯಿತು. ಈ ಚಟುವಟಿಕೆಯನ್ನು ದ.ಕ ಜಿಲ್ಲಾ ಪಂಚಾಯತ್ , ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮತ್ತು ಸಮುದಾಯ ಸಂಸ್ಥೆ ತುಮಕೂರು ಇದರ ಜಂಟಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು. ಮೇರಮಜಲು ಪಂಚಾಯತ್ ನಲ್ಲಿ ಜಲ ಜೀವನ್ ಮಿಷನ್ ನ ಉದ್ದೇಶ, ಗ್ರಾಮದಲ್ಲಿ ಈ ಯೋಜನೆಯ ಅನುಷ್ಠಾನ ಅಂತರ್ಜಲ ಪುನಶ್ಚೇತನ ಹಾಗೂ ಜಲಮೂಲಗಳ ಸಂರಕ್ಷಣೆ ಕುರಿತು ಜನಜೀವನ್ ಮಿಷನ್ ನ ಜಿಲ್ಲಾ ಯೋಜನಾ ಅಧಿಕಾರಿ ಪ್ರಸಾದ್ ರವರು ತಿಳಿಸಲಾಯಿತು. ದ.ಕ. ಜಿಲ್ಲಾ ಐಇಸಿ ಹೆಚ್ಆರ್ ಡಿ ವಿಭಾಗದ ಮುಖ್ಯಸ್ಥರಾದ ಶಿವರಾಮ್ ಪಿ ಬಿ ಜಲ ಜೀವನ ಮಿಷನ್ ಗ್ರಾಮೀಣ ಸಹಭಾಗಿತ್ವ ಸಮೀಕ್ಷೆ ಚಟುವಟಿಕೆಯನ್ನು ನಿರ್ವಹಿಸಿದರು. ಸಮುದಾಯ ಸಹಭಾಗಿತ್ವದ ಮಹತ್ವದೊಂದಿಗೆ ವಂತಿಗೆ ಪಡೆಯುವ ಬಗ್ಗೆ ಮಾಹಿತಿ ನೀಡಿದರು. ಮೇರಮಜಲು ಗ್ರಾಮ ಪಂಚಾಯತ್ ನ ಎರಡು ಗ್ರಾಮಗಳಾದ ಕೊಡ್ಮನು ಹಾಗೂ ಮೇರಮಜಲು ಗ್ರಾಮದ ನಕ್ಷೆ ಬಿಡಿಸಿ ಪ್ರಸುತ್ತ ಮತ್ತು ನೂತನ ಕುಡಿಯುವ ನೀರಿನ ಯೋಜನಾ ಅನುಷ್ಠನಾದ ಬಗ್ಗೆ ವಿವರಿಸಿದರು.ಚರಣ್ ರಾಜ್ ಹಾಗೂ ಮಹಂತೇಶ್ ಕಾರ್ಯಕ್ರಮ ಸಂಯೋಜಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಶ್ಮೀ ಆರ್.ಕಿಲ್ಲೆ ಕಾರ್ಯಕ್ರಮ ನಿರೂಪಿಸಿದರು. ನೂತನವಾಗಿ ಆಯ್ಕೆಯಾದ ಪಂಚಾತ್ ಸದಸ್ಯರು ಹಾಗೂ ಪಂಚಾಯತ್ ಸಿಬ್ಬಂದಿಗಳು, ಆಶಾ ಕಾರ್ಯಕರ್ತರು ಅಂಗನವಾಡಿ,ಇಲಾಖಾ ಸಿಬ್ಬಂದಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.
