Updated News From Kaup

ಆನ್ ಲೈನ್ ನಲ್ಲಿ ಮಕ್ಕಳು ಹಾದಿ ತಪ್ಪದಿರಲಿ : ಪಾಲಕರೇ ಜೋಪಾನ

Posted On: 15-11-2020 09:17AM

ಆನ್ ಲೈನ್ ತರಗತಿಯ ಮೂಲಕ ಮಕ್ಕಳ ಸಾಮಾಜಿಕ ಜಾಲ ತಾಣಗಳ ಬಳಕೆ ಹೆಚ್ಚಾಗುತ್ತಿದೆ. ಹದಿಹರೆಯದ ವಯಸ್ಸಿನಲ್ಲಿ ಇದರ ಬಳಕೆಯಿಂದ ವಿಭಿನ್ನ ಪರಿಣಾಮಗಳು ಮನಸ್ಸಿನಲ್ಲಿ ಮೂಡುತ್ತವೆ ಇದರಿಂದ ಹದಿಹರೆಯದಲ್ಲಿ ಪಾತಕರು ಮಾಡುವ ಕೆಟ್ಟ ಕೆಲಸ ಈ ಸಮಯದಲ್ಲಿ ನಡೆಯುತ್ತಿದೆ ಇತ್ತಿಚೆಗೆ ಪ್ರೀತಿ ಪ್ರೇಮಕ್ಕೆ ಒಳಗಾಗಿ ಮನೆ ಬಿಟ್ಟು ತೆರಳುವುದು ಹಣಕ್ಕಾಗಿ ಅಪಹರಣದ ಕೇಸ್ ಗಳು ದಾಖಲಾಗುತ್ತಿರುವುದು ದುರಂತದ ವಿಷಯ. ಸೋಷಿಯಲ್ ಮೀಡಿಯಾಗಳ ಆಕಷ೯ಣಿಗೆ ಸಿಕ್ಕ ಮಕ್ಕಳು ಅದರ ಸಾಧಕ ಬಾಧಕಗಳ ಅರಿವಿಲ್ಲದೆ ಸಮಸ್ಯೆಗೆ ಸಿಲುಕುತ್ತಿದ್ದಾರೆ.ಈ ಜಾಲ ತಾಣದಲ್ಲಿ ತಮ್ಮ ವಿಭಿನ್ನ ಮಾದರಿಯ, ತರತರದ ಪೋಟೋವನ್ನು ಅಪಲೋಡ್ ಮಾಡಿ ವಿಡಿಯೋಗಳನ್ನು ಹರಿಬಿಟ್ಟು ಟ್ರೋಲ್ ಗೆ ಒಳಗಾಗುದನ್ನು ನಾವು ನೋಡುತ್ತಿದ್ದೆವೆ. ಇಂತಹ ಮುಗ್ದ ಶಾಲಾ ಮಕ್ಕಳ ಹಿಂದೆ ಕೆಡುಕರ ಗ್ಯಾಂಗ್ ಬಿದ್ದಿವೆ. ಪೋನ್ ಮಾಡಿ ಹೆದರಿಸುವುದು ಲೈಂಗಿಕ ದುಬ೯ಳಕೆ ಮುಂತಾದ ಸಮಾಜ ವಿರೋಧಿ ಕೃತ್ಯಕ್ಕೆ ಒಳಗಾಗಿ ದುಬ೯ಳಕೆ ಯಾಗುತ್ತಿದ್ದಾರೆ ಎಂದು ಅನೇಕ ಮಂದಿ ಶಿಕ್ಷಣ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.ಈ ರೀತಿಯ ಮಾನಸಿಕ ಹಿಂಸೆಯು ಮಕ್ಕಳ ಮೇಲೆ ಗಾಢವಾದ ಪರಿಣಾಮ ಬೀಳಿ ಕೊನೆಗೆ ಆತ್ಮಹತ್ಯೆಗೆ ಒಳಗಾಗುವ ಪ್ರಕರಣ ಹೆಚ್ಚುತ್ತಿವೆ. ಟ್ರೋಲ್ ಗೆ ಒಳಗಾದ ಮಕ್ಕಳ ಮನಸ್ಥಿತಿಯು ಅತ್ಯಂತ ಚಿಂತಾಜನಕ ಸ್ಥಿತಿಯಲ್ಲಿರುತ್ತದೆ. ಭಯಾನಕ ಸನ್ನಿವೇಶಕ್ಕೆ ಹೆದರಿ ಮನೋ ರೋಗಕ್ಕೆ ಒಳಗಾಗಿ ಜೀವನವನ್ನೇ ಬಲಿ ಪಡೆಯುವ ಸ್ಥಿತಿಯಿದೆ ಎಂದು ಮಾನಸಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಶಿರ್ವದ ಕಡಂಬುವಿನಲ್ಲಿ ರಾರಾಜಿಸುತ್ತಿದೆ 12 ಅಡಿ ಎತ್ತರದ ಗೂಡುದೀಪ

Posted On: 14-11-2020 11:55PM

ದೀಪಾವಳಿ ಸಂದರ್ಭದಲ್ಲಿ ಶಿರ್ವ ಸಮೀಪದ ಕಡಂಬುವಿನ ಯುವಕರ ತಂಡವೊಂದು ಬರೋಬ್ಬರಿ 12 ಅಡಿ ಎತ್ತರವುಳ್ಳ ಗೂಡು ದೀಪವೊಂದನ್ನು ತಯಾರು ಮಾಡಿದ್ದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ರೋಟರಿ ಇನ್ನಂಜೆ : ಸಂತೆಕಟ್ಟೆ ಸ್ಪಂದನ ಭಿನ್ನ ಸಾಮರ್ಥ್ಯ ಅನಾಥಾಶ್ರಮ ಭೇಟಿ

Posted On: 14-11-2020 07:11PM

ರೋಟರಿ ಸಮುದಾಯದಳ ಇನ್ನಂಜೆ. ಮಕ್ಕಳ ದಿನಾಚರಣೆಯ ಹಾಗೂ ದೀಪಾವಳಿಯ ಪ್ರಯುಕ್ತ ಇಂದು ಸ್ಪಂದನ ಭಿನ್ನ ಸಾಮರ್ಥ್ಯ ಅನಾಥಶ್ರಮ ಸಂತೆಕಟ್ಟೆ ಇಲ್ಲಿ 45 ಆಶ್ರಮವಾಸಿಗಳಿಗೆ ದಿನಬಳಕೆಯ ಸಾಮಗ್ರಿ ಹಾಗೂ ನಗದು ನೀಡಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.

‌‌‌ಗೋ ಪೂಜೆ : ಇಂದ ಕಬೆತಿಯೇ ಕಿದೆ ದಿಂಜ ಕೂಡುಲ‌

Posted On: 14-11-2020 05:31PM

"ಇಂದ ಕಬೆತಿಯೆ...ದೇವೆರೆನ್ ತೂಲ‌. ಅಂಗಾರ್‌ಡ್ ಲಾಂಬು ಬನ್ನೆಟ್ಟ ,ಕೊಂಬುಡು ನರೆ ಬನ್ನೆಟ್ಟ ಪದ್‌ರಾಡ್ ಪೊಣ್ಣುಕಂಜಿ - ಪದ್‌ರಾಡ್ ಆಣ್‌ ಕಂಜಿ‌ ಪಾಡ್ದ್ ನಿನ ಉಲ್ಲಾಯಗ್ ಪೇರನುಪ್ಪು ಕೊರೊಂದು ,ಈ ಪೇರನುಪ್ಪು ತಿನೊಂದು ಬಹುಕಾಲ ಬಾಲ್ಲ.." ಅಥವಾ "ತುಡಾರ್ ಮಗ ತುಡಾರ್ ,ಕಲ್ಲಡಿತ ನೀರ್‌ಪರ್ಲ,ಮುಲ್ಲಡಿತ ಪಂತಿ ಮೇಲ ,ಬಂಜಿ ದಿಂಜ ಮೇಲ, ಕಿದೆ ದಿಂಜ ಕೂಡುಲ, ತುಡಾರ್ ಮಗ ತುಡಾರ್ ". ಹೀಗನ್ನುತ್ತಾ ( ಹಲವು ಪಾಠಾಂತರಗಳಿವೆ) ಗೋಮಾತೆಗೆ ಗೆರಸೆಯಲ್ಲಿ ಸಿದ್ಧಪಡಿಸಿದ ಸೊಡರನ್ನು ಅಥವಾ ತುಡಾರನ್ನು‌ ತೋರಿಸುವ ,ಕೃತಜ್ಞತಾರ್ಪಣೆ ಸಲ್ಲಿಸುವ ನಮ್ಮ ಮಣ್ಣಿನ ಸಂಪ್ರದಾಯ ದೀಪಾವಳಿ ಹಬ್ಬದ ಒಂದು ಮುಖ್ಯ ಸಂದರ್ಭ. ಗೋಮಾತೆಗೆ ಮಾತ್ರವಲ್ಲ ವಿಶೇಷವಾಗಿ ಕೋಣ - ಎತ್ತುಗಳಿಗೂ‌ ದೀಪ ತೋರಿಸಿ ಹೇಳುವ ಕ್ರಮವಿದೆ, ಇವುಗಳೆ ಪ್ರಧಾನವೂ ಹೌದು .

ಗೂಡುದೀಪದಲ್ಲೂ ಕೊರೋನಾ ಜಾಗೃತಿ ಸಂದೇಶ

Posted On: 14-11-2020 04:38PM

ದೀಪಾವಳಿಯ ಸಂಧರ್ಭದಲ್ಲಿ ತಯಾರಿಸುವ ಗೂಡುದೀಪ( ಆಕಾಶ ಬುಟ್ಟಿ) ದಲ್ಲಿ ಈ ವರ್ಷದಲ್ಲಿ ಜನರನ್ನು ಸಂಕಷ್ಟಕ್ಕೆ ದೂಡಿದ ಕೋರೋನಾ ಸೋಂಕಿನ ಬಗ್ಗೆ ಜಾಗೃತಿ ಸಂದೇಶವನ್ನು ಬಂಟಕಲ್ಲು ಕೆ ಆರ್ ಪಾಟ್ಕರ್ ರವರು ಮನೆಯಲ್ಲಿಯೇ ತಯಾರಿಸಿದ 10 ಅಡಿ ಎತ್ತರವಿರುವ ಆಕಾಶಬುಟ್ಟಿಯಲ್ಲಿ ನೀಡಿದ್ದಾರೆ.

ಕೋವಿಡ್ 19 ನಿರ್ಮೂಲನೆವಾಗುವರೆಗೆ ಜಾಗೃತಿ ವಹಿಸಿ : ದಿನಕರ ಬಾಬು

Posted On: 14-11-2020 08:22AM

ಉಡುಪಿ : ಕೋವಿಡ್ 19 ಗೆ ಪೂರ್ಣ ಪ್ರಮಾಣದಲ್ಲಿ ಲಸಿಕೆ ಲಭ್ಯವಾಗಿ, ಈ ರೋಗ ಜಾಗತಿಕವಾಗಿ ನಿರ್ಮೂಲನೆವಾಗುವವರೆಗೆ ಸಾರ್ವಜನಿಕರು ಕೋವಿಡ್ ನಿಯಂತ್ರಣಾ ಕ್ರಮಗಳನ್ನು ತಪ್ಪದೇ ಪಾಲಿಸಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಹೇಳಿದ್ದಾರೆ. ಅವರು ಶುಕ್ರವಾರ, ಉಡುಪಿಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆವರಣದಲ್ಲಿ, ಕೋವಿಡ್19 ಕುರಿತಂತೆ ಜಿಲ್ಲೆಯಾದ್ಯಂತ ಎಲ್.ಇ.ಡಿ. ವಾಹನದ ಮೂಲಕ ನಡೆಯುವ ವಿಶೇಷ ಜಾಗೃತಿ ಪ್ರಚಾರ ಕಾರ್ಯಕ್ರಮದ ವಾಹನಕ್ಕೆ ಹಸಿರು ನಿಶಾನೆ ತೋರಿಸಿ ಮಾತನಾಡಿದರು.

ತುಡರ ಪರ್ಬ : ಬಲಿಯೇಂದ್ರೆ ಬರ್ಪೆ ಪೊಲಿ ಕೊರ್ಪೆ

Posted On: 13-11-2020 10:57PM

ಹ್ಹೋ || ಭೂಮಿಪುತ್ರೆ ಬಲಿಯೇಂದ್ರೆ ರಾಜ್ಯ ಮಾಡೊಡು ವರ್ಸೊಗು ಮೂಜಿ ಉಚ್ಚಯ , ಕಾಲೊಗು ಆಜಿ ಪರ್ವ , ಕಾಲಾದಿಗೊಂಜಿ ಓಮ , ಓಮೊಗೊಂಜಿ ನೇಮ, ನೇಮೊಡು ದಾನ ,ದಾನೊಡ್ದೆಚ್ಚ ಧರ್ಮ , ಕತ್ತಲೆಗಯ್ಯಸಾರ ,ಬಯ್ಯಗಯ್ಯಸಾರ ಬಂಗಾರ್ದಿರೆಟ್ ಬೆರಣ ಭೋಜನ ಮಲ್ಪಾವೊಂದು ,ಅರತ್ತಾನ ಆಲಿಯೊಂದು ಇತ್ತೆನಾ ಭೂಮಿ ಪುತ್ರೆ ಬಲಿಯೇಂದ್ರೆ || ಇಂಚ ಬಲಿಯೇಂದ್ರನ ಅರಸಾದಿಗೆನ್ ಪುಗರ್ ವೆರ್ ನಂದೊಳ್ಗೆ ಅಮುಣಂಜೆ ಗುತ್ತು ಶೀನಪ್ಪ ಹೆಗ್ಡೆ , ತಾನ್ ಸಂಪೊಲ್ತಿನ ತುಳುವಾಲ ಬಲಿಯೇಂದ್ರೆ ಸಂದಿಡ್. ವಾ ಅರಸು ಸತ್ಯ ಧರ್ಮೊಡು ರಾಜ್ಯ ಆಲಿಯೊಂದುಪ್ಪುವೆನಾ ಆ ರಾಜ್ಯೊಡು ಕಾಲೊಗು ಸರಿಯಾದ್ ಬರ್ಸ ,ಬರ್ಸೋಡ್ದು ಬುಲೆಭಾಗ್ಯ ,ಬುಲೆಭಾಗ್ಯ ಉರ್ಕರ್ದ್ ಪೊಲಿಎಚ್ಚಿಯಾದ್ , ಸಂತಾನ ಸಂತೇಸಿ ನಿಲೆಯಾದ್ ಜನಮಾನಿ ಸಂತೋಸುಡು ಉಪ್ಪೆವೆರ್ . ಅಂಚಾದೇ ಹಿರಿಯೆರ್ ಪಂಡೆರ್ ಅರಸು 'ಕಾಲದ' ಎಡ್ಡೆ ನಡಕೆಗ್ ಕಾರಣ ಆಪೆ .'ಕಾಲ' ನಡತೊಂದು ಬರ್ಪಿ ಸಾದಿಗ್ ಸತ್ಯಧರ್ಮದ ಪೂ ಬಿರ್ಕ್ ದ್ ಎದುಕೊನ್ನ ಅರಸುಗು ಕಾಲೊನು ನಿರ್ದರಿಪುನ ಎಡ್ಡೆ್ದಿಗೆ ಉಂಡೂಂದು ನಂಬೊಂದು ಬತ್ತಿನ ಸತ್ಯದ ಸಂಸಾರ ನಮ. ಅಂಚಿನ ಒರಿ ಅರಸು ನಮ ಭೂಮಿನ್ ಆಲ್ಯೊಂದು ಇತ್ತೆ .ಆಯೆನೆ 'ಬಲಿಯೇಂದ್ರೆ'. "ಪೊಲಿ ಪೊಲ್ಸಾವೊಡು". ಕಟಿ ಇಲ್ಲ್ ಬುಡಂದೆ ಪೊಲ್ಸು ದಿಂಜೊಡು .ಇಂಚಿನ ಬಯಕೆಡ್ 'ಭೂಮಿಪುತ್ರೆ ಬಲಿಯೇಂದ್ರೆ' ಪಂಡ್ ದೆ ಪುದಾರಾಯಿನ ಅರಸು ಬಲಿಯೇಂದ್ರೆ ಮಣ್ಣ್ ದ ಮಗೆನೇ ಆಯೆ. " ಮಣ್ಣ್ ಡ್ ಪೊಂರ್ಬಿನಾಯೆ ನುಪ್ಪು ತಿನುವೆ , ನರಮಾನಿಡ ಪೊಂರ್ಬಿನಾಯೆ ಮಣ್ಣ್ ತಿನುವೆ " . 'ಮಣ್ಣ್ ದ ಸತ್ಯ' . ಮಣ್ಣ್ ಪತ್ ದ್ ಸತ್ಯ ಮಲ್ತೆರ್ . 'ನೆಲಕಾಯಿ ದರ್ತೆರ್' , 'ಭೂಮಿದ ಆಜೆ' ಇಂಚಿನ ಹಿರಿಯೆರ್ನ ಅನುಭವದ ಪಾತೆರೊಗು ತರೆತಗ್ಗಾದ್ ಮಣ್ಣ್ ನ್ ನಂಬಿಯೇ ಅಂಚಾದ್ "ಬುಲೆ ಭಾಗ್ಯ" ದಿಂಜ್ಂಡ್ .ಒರ್ಮೆಲಾ "ಪೊಲಿ" ತಮೆಲೊಂದು ಬತ್ತ್ಂಡ್ .

ಉಡುಪಿಯನ್ನು ಮಕ್ಕಳ ಸ್ನೇಹಿ ಜಿಲ್ಲೆಯಾಗಿಸಿ : ಜಿಲ್ಲಾಧಿಕಾರಿ ಜಿ.ಜಗದೀಶ್

Posted On: 13-11-2020 06:29PM

ಉಡುಪಿ : ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವುದರ ಮೂಲಕ ಉಡುಪಿ ಜಿಲ್ಲೆಯನ್ನು ಮಕ್ಕಳ ಸ್ನೇಹಿ ಜಿಲ್ಲೆಯನ್ನಾಗಿ ರೂಪಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು. ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ, ಜಿಲ್ಲಾ ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ, ಉಡುಪಿ ಜಿಲ್ಲೆ ಇವರ ಜಂಟಿ ಆಶ್ರಯದಲ್ಲಿ, ಮಕ್ಕಳ ದಿನಾಚರಣೆ ಮತ್ತು ಚೈಲ್ಡ್ ಲೈನ್ ಸೇ ದೋಸ್ತೀ ಸಪ್ತಾಹ ಅಂಗವಾಗಿ, ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ, ಭಿಕ್ಷಾಟನೆ ನಿರ್ಮೂಲನೆ ಮತ್ತು ಚೈಲ್ಡ್ ಲೈನ್ ಸೇವೆಗಳ ಬಗೆಗಿನ ಮಾಹಿತಿ ಅಭಿಯಾನ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.

ರಕ್ತದಾನದಲ್ಲಿ ಉಡುಪಿ ಮುಂಚೂಣಿ : ಜಿಲ್ಲಾಧಿಕಾರಿ ಜಿ.ಜಗದೀಶ್

Posted On: 13-11-2020 04:10PM

ಉಡುಪಿ : ಉಡುಪಿ ಜಿಲ್ಲೆಯಲ್ಲಿ ರಕ್ತದಾನಿಗಳು ನಿರಂತರವಾಗಿ ರಕ್ತದಾನ ಮಾಡುತ್ತಿರುವುದರಿಂದ ಜಿಲ್ಲೆಯಲ್ಲಿ ರಕ್ತದ ಕೊರತೆ ಅಷ್ಟಾಗಿ ಕಂಡುಬರುತ್ತಿಲ್ಲ, ಇದರಿಂದಾಗಿ ರಕ್ತದಾನದಲ್ಲಿ ಜಿಲ್ಲೆಯು ರಾಜ್ಯ ಮತ್ತು ರಾಷ್ಟçಮಟ್ಟದಲ್ಲಿ ಮಂಚೂಣಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು.

ವಿಶಿಷ್ಟವಾಗಿ ದೀಪಾವಳಿ ಹಬ್ಬ ಆಚರಣೆ ಸೇವಾ ಚಟುವಟಿಕೆಯ ಮೂಲಕ ಮಾದರಿಯಾದ ಕಾಯ೯

Posted On: 11-11-2020 05:04PM

ಉಡುಪಿ :- ಹೋಂ ಡಾಕ್ಟರ್ ಫೌಂಡೇಶನ್(ರಿ.) ಇದರ ವತಿಯಿಂದ ನ.10 ರಂದು ಕೊಳಲಗಿರಿ ಸಂತೆ ಮಾರುಕಟ್ಟೆ ಆವರಣದಲ್ಲಿ ವಿಶಿಷ್ಟವಾಗಿ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು. ಈ ಕಾಯ೯ಕ್ರಮದಲ್ಲಿ ಸುಮಾರು 10 ರೋಗಿಗಳಿಗೆ ಸಹಾಯಧನ, ವಿದ್ಯಾಥಿ೯ಗಳಿಗೆ ವಿದ್ಯಾಥಿ೯ ವೇತನ 2 ಕುಟುoಬಗಳಿಗೆ ಸಿಲಿಂಗ್‌ ಪ್ಯಾನ್ ಕೊಡುಗೆ, ಸೇರಿದಂತೆ ಅನೇಕ ರೀತಿಯ ಸೇವಾ ಯೋಜನೆ ನೆರವೇರಿಸಲಾಯಿತು. ವಿಶೇಷ ಆಕಷ೯ಣೆಯಾಗಿ ಶ್ರೀ ಶಾರದಾ ಅಂಧರ ಗೀತ ಗಾಯನ ಕಲಾ ಸಂಘ ಮಂಗಳೂರು ವತಿಯಿಂದ ಸುಗಮ ಸಂಗೀತ ಕಾಯ೯ಕ್ರಮ ನಡೆಯಿತು ಈ ಸಂದಭ೯ದಲ್ಲಿ ಕಲಾವಿದರನ್ನು ಧನ ಸಹಾಯದೊಂದಿಗೆ ಗೌರವಿಸಲಾಯಿತು.